UN NETWORKS ಇರಾ: ಬಂಟ್ವಾಳ ತಾಲೂಕು ಇರಾ ಗ್ರಾಮದ ಪರಪ್ಪು ನಾಗರಿಕರ ಬಹುಕಾಲದ ಬೇಡಿಕೆಯಾದ ಮಂಗಳೂರಿನಿಂದ ಪರಪ್ಪುವಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರದ ಉದ್ಘಾಟನಾ ಸಮಾರಂಭವು ಸೋಮವಾರ ಪರಪ್ಪು ಜಂಕ್ಷನ್ನಲ್ಲಿ ನಡೆಯಿತು. ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ಹಾಗೂ ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆಯವರು ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬೇಡಿಕೆಯನ್ನು ಈಡೇರಿಸಿದ ಸ್ಥಳೀಯ ಶಾಸಕರೂ ರಾಜ್ಯದ ನಗರಾಭಿವೃದ್ಧಿ ವಸತಿ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ರವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಟಿ.ಸಿ ಡಿವಿಜನಲ್ ಟ್ರಾಫಿಕ್ ಆಫೀಸರ್ ಜೈ ಶಾಂತ್ ಕುಮಾರ್, ಡಿಪ್ಪೋ ಮ್ಯಾನೇಜರ್ ರಮ್ಯಾ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಹಾಜಿ ಇಬ್ರಾಹಿಂ ಕಟ್ಟಪುಣಿ, ಹಾಜಿ ಇಬ್ರಾಹಿಂ ಮೂಲೆ, ಹಾಜಿ ಸಿ.ಎಚ್. ಮಹಮ್ಮದ್, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮಸೀದಿ ಅಧ್ಯಕ್ಷರಾದ ಎಮ್.ಎಸ್. ಇಬ್ರಾಹಿಂ, ಧರ್ಮಗುರುಗಳಾದ ಅಬ್ದುಲ್ ರಝಾಕ್ ಸಖಾಫಿ, ಪ್ರಮುಖರಾದ…
Author: UllalaVani
UN NETWORKS ಉಳ್ಳಾಲ: ಒಂದೇ ದಿನ ತಂದೆ ಮತ್ತು ಮಗಳು ಮೃತಪಟ್ಟ ಘಟನೆ ಉಳ್ಳಾಲದ ಹಳೆಕೋಟೆ ಬಳಿ ಸೋಮವಾರ ನಡೆದಿದೆ. ಮೃತರನ್ನು ಹಳೆಕೋಟೆ ನಿವಾಸಿ ಯು.ಕೆ. ಮಹಮ್ಮದ್(80) ಮತ್ತು ಅವರ ಪುತ್ರಿ ಜಮೀಲ(38) ಎಂದು ಗುರುತಿಸಲಾಗಿದೆ. ಜ್ವರದಿಂದ ಬಳಲುತ್ತಿದ್ದ ಜಮೀಲ ನಾಲ್ಕು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಮೃತಪಟ್ಟರು. ಮೃತ ಜಮೀಲ ಅವರ ತಂದೆ ಮಹಮ್ಮದ್ ಅನಾರೋಗ್ಯದಿಂದ ಬಳಲುತ್ತಿದ್ದು, ಸೋಮವಾರ ಬೆಳಗ್ಗೆ 8.30ರವೇಳೆಗೆ ಮೃತರಾಗಿದ್ದಾರೆ. ಮಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ವಿಚಾರ ಮಹಮ್ಮದ್ ಅವರಿಗೆ ತಿಳಿಸಿರಲಿಲ್ಲ. ಮೃತ ಜಮೀಲ ಅವರ ಮನೆ ತವರು ಮನೆಯ ಸಮೀಪದಲ್ಲೇ ಇದ್ದು, ಮಗಳ ಮೃತದೇಹ ಮನೆಗೆ ಬಂದ ವಿಚಾರ ತಿಳಿದ ನಂತರ ತಂದೆ ಯು.ಕೆ. ಮಹಮ್ಮದ್ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. ಮಹಮ್ಮದ್ ಅವರು ಪತ್ನಿ ಐವರು ಪುತ್ರಿಯರು ಮತ್ತು ಆರು ಮಂದಿ ಪುತ್ರರನ್ನು ಅಗಲಿದ್ದಾರೆ. ಮೃತ ಜಮೀಲ ಓರ್ವ ಪುತ್ರನನ್ನು…
UN NETWORKS ಉಳ್ಳಾಲ:` ಆಲಿಕಲ್ಲು ಮಳೆ ಬೀಳುತ್ತಿತ್ತು. ಬಂಡೆಕಲ್ಲು ಜಾರಿದರೂ ಬಿದ್ದು ಎದ್ದು ಮುಂದೆ ನಡೆದಿದ್ದೇವೆ. 10 ದಿನಗಳಲ್ಲಿ 90 ಕಿ.ಮೀ ಚಾರಣ ನಡೆಸುವುದರ ಜೊತೆಗೆ 11,152 ಎತ್ತರದ ಹಾಟು ಬೆಟ್ಟವನ್ನು ಏರಿದ ಕೀರ್ತಿ ನಮ್ಮ ತಂಡದ್ದಾಗಿದೆ’. ಇದು ಸೆ. 21 ರಿಂದ ಅ.1 ರವರೆಗೆ ನಿಟ್ಟೆ ವಿಶ್ವವಿದ್ಯಾಲಯದ 11 ಮಂದಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ಹಿಮಾಚಲ ಪ್ರದೇಶದಲ್ಲಿ ಮೆರೆದ ಸಾಹಸಗಾಥೆಯನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟ ವಿವರ. ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟಿಟ್ಯೂಟ್ ಆಫ್ ಮೌಂಟೆನಿಯರಿಂಗ್ ಮತ್ತು ಅಲೈಡ್ ಸ್ಪೋರ್ಟ್ಸ್ ಆಯೋಜಿಸಿರುವ ಸಾಹಸ ಶಿಬಿರ-2018 ರಲ್ಲಿ ನಿಟ್ಟೆ ವಿಶ್ವವಿದ್ಯಾಲಯದ 10 ಮಂದಿ ವಿದ್ಯಾರ್ಥಿಗಳಿಗೆ ಭಾಗವಹಿಸುವ ಅವಕಾಶ ದೊರೆತಿತ್ತು. ಹಿಮಾಚಲ ಪ್ರದೇಶದ ನಾರಕಂಡದಲ್ಲಿ 10 ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ಪರ್ವತಾರೋಹಣ, ಬಂಡೆಗಳಿಂದ ಇಳಿಯುವುದು (ರ್ಯಾಪ್ಲಿಂಗ್ ) , ಟ್ರೆಕ್ಕಿಂಗ್ ತರಬೇತಿಯನ್ನು ವಿದ್ಯಾರ್ಥಿಗಳು ಪಡೆದುಕೊಂಡರು. ದೇಶದಿಂದ ಸುಮಾರು 50 ಮಂದಿ ವಿದ್ಯಾರ್ಥಿಗಳಿಗೆ ಕಲ್ಪಿಸಲಾದ ಅವಕಾಶದಲ್ಲಿ ರಾಜ್ಯದ ಸುಮಾರು 20 ಮಂದಿಗೆ…
UN NETWORKS ಉಳ್ಳಾಲ: ಆಸ್ಪತ್ರೆಯ ವೈದ್ಯಕೀಯ ವಿಭಾಗದಲ್ಲಿ ಗ್ಯಾಸ್ಟ್ರೋಂಟರಾಲಜಿ ಯುವವಿಭಾಗವಾದರೂ ಕೆಲ ವರ್ಷಗಳಲ್ಲಿ ಹಲವು ಸಾಧನೆಗಳನ್ನು ಪೂರೈಸುತ್ತಾ ಮುಂದುವರಿದಿರುವುದು ಆಸ್ಪತ್ರೆಯ ಹಿರಿಮೆಯಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಸಚಿವ ಡಾ | ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು. ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ವೈದ್ಯಕೀಯ ಮತ್ತು ಗ್ಯಾಸ್ಟ್ರೋಂಟರಾಲಜಿ ವಿಭಾಗ ಆಶ್ರಯದಲ್ಲಿ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಶನಿವಾರ ಜರಗಿದ ‘ ಕ್ಷೇಮ ಗ್ಯಾಸ್ಟ್ರೋ ಅಪ್ಡೇಟ್’ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ವಿ.ವಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ವೈದ್ಯಕೀಯ ಸೇವೆಯಲ್ಲಿ ಯುವ ವಿಭಾಗವಾಗವಾದರೂ ಗ್ಯಾಸ್ಟ್ರೋಂಟರಾಲಜಿ ಗೆ ಪೂರೈಸಲು ಬದ್ಧ. ಅವಕಾಶಗಳು ಎಲ್ಲಾ ವಿಭಾಗಗಳಲ್ಲಿಯೂ ಇದೆ. ಯಂತ್ರದ ಹಿಂದಿನ ಮಾನವನ ಕೆಲಸ ಯಶಸ್ಸಿನ ಹಾದಿ ಹಿಡಿಯುವಲ್ಲಿ ವಿಭಾಗದ ಬೆಳವಣಿಗೆಯೂ ಸಾಧ್ಯ. ಯಕೃತ್ತಿನ ಕಸಿ ಚಿಕಿತ್ಸೆಗೆ ಮುಂದೆ ಆಸ್ಪತ್ರೆ ವಿಭಾಗ ಮುಂದಾಗುವ ಮೂಲಕ ಜನರಿಗೆ ಅನುಕೂಲವಾಗುವ ಚಿಕಿತ್ಸೆಯನ್ನು ನೀಡುವಂತಾಗಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಷೇಮ ಡೀನ್ ಡಾ| ಪಿ.ಯಸ್ ಪ್ರಕಾಶ್…
UN NETWORKS ಕುತ್ತಾರು : ಕಟ್ಟಡ ಕಾರ್ಮಿಕರ ಕಲ್ಯಾಣ ಪರಿಷತ್ ನಲ್ಲಿ 7.5 ಸಾವಿರ ಕೋಟಿ ಇದ್ದರೂ, ಸ್ಥಾಪನೆಯಾಗಿ 12 ವರ್ಷಗಳಲ್ಲಿ ಕಾರ್ಮಿಕರಿಗಾಗಿ ಕೇವಲ 320 ಕೋಟಿ ರೂ.ಗಳನ್ನು ಮಾತ್ರ ವ್ಯಯಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ನ ಜಿಲ್ಲಾ ಅಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಅಭಿಪ್ರಾಯಪಟ್ಟರು. ಕುತ್ತಾರುಪದವು ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ರವಿವಾರ ನಡೆದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಉಳ್ಳಾಲ ವಲಯ ಸಮಿತಿ ತೊಕ್ಕೊಟ್ಟು ಇದರ ಉಳ್ಳಾಲ ವಲಯ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.ಕನಿಷ್ಠ ಕೂಲಿ 18,000 ಆಗಬೇಕು ಅನ್ನುವ ಬೇಡಿಕೆಯಿದ್ದರೂ, ಸರಕಾರ ಕಾರ್ಮಿಕರ ಪರವಾಗಿ ಕೆಲಸ ಮಾಡುವುದನ್ನು ಬಿಟ್ಟು ಮಾಲೀಕರ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಡ ಕಾರ್ಮಿಕರು ಸವಲತ್ತಿಗಾಗಿ 30 ವರ್ಷಗಳಿಂದ ಸತತ ಹೋರಾಟವನ್ನು ನಡೆಸುತ್ತಾ ಬಂದಿದೆ. ಹಿಂದೆ ಹೆಚ್.ಡಿ ದೇವೇಗೌಡ ಕಾರ್ಮಿಕರ ವರ್ಗಕ್ಕಾಗಿ ಕೆಲಸ ಮಾಡುವಂತಹ ಎಡಪಕ್ಷಗಳ ಬೆಂಬಲದಿಂದ ಪ್ರಧಾನಿಯಾಗಿದ್ದರು. ಅದರಂತೆ…
UN NETWORKS ಮುಡಿಪು: ಮುಡಿಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಮುಡಿಪು ಕಾಲೇಜಿನಲ್ಲಿ ಶನಿವಾರ ನಡೆದ `ತೆಲಿಕೆದ ಐಸಿರಿ-2018′ ಅಂತರ್ ಕಾಲೇಜು ಮಟ್ಟದ ಸ್ಫರ್ಧೆಯಲ್ಲಿ ಕಲ್ಲಡ್ಕದ ಶ್ರೀರಾಮ ಪ್ರಥಮ ದರ್ಜೆ ಕಾಲೇಜು ಪ್ರಥಮ ಹಾಗೂ ವಾಮದಪದವು ಸರಕಾರಿ ಪದವಿ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಕಾರ್ಯಕ್ರಮವನ್ನು ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ಅವರು ಉದ್ಘಾಟಿಸಿ ಮಾತನಾಡಿದರು. ಬಳಿಕ ಮಾತನಾಡಿದ ಅವರು ಶಿಕ್ಷಣದೊಂದಿಗೆ ನಾವು ಇಂತಹ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಮುನ್ನಡೆದರೆ ಜ್ಞಾನದೊಂದಿಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಇಂತಹ ಪ್ರತಿಭೆಗಳನ್ನು ಬಳಸಿಕೊಂಡು ಮುಂದುವರಿಯಿರಿ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಿರಿಧರ್ ರಾವ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂತಹ ಸ್ಫರ್ಧಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆಯಾ ಕ್ಷೇತ್ರದ ಜ್ಞಾನವನ್ನು ವಿಸ್ತರಿಸುತ್ತದೆ. ವಿದ್ಯಾರ್ಥಿಗಳು ಇಂತಹ ಪಠ್ಯೇತರ…
UN NETWORKS ಬೆಳ್ತಂಗಡಿ: ಇಂಡಿಯನ್ ಟೆಕ್ನಿಕಲ್ ಎಜುಕೇಶನ್ ಬೋರ್ಡ್ ಮುಂಬೈ (ಐಟಿಇಎಸ್) ಇದರಿಂದ ಮಾನ್ಯತೆ ಪಡೆದು ಕಳೆದ ಐದು ವರ್ಷಗಳಿಂದ ಬೆಳ್ತಂಗಡಿಯಲ್ಲಿ ತಾಂತ್ರಿಕ ಮತ್ತು ವೃತ್ತಿ ತರಬೇತಿ ನೀಡುತ್ತಿರುವ ತಾಲೂಕಿನ ಮೊಟ್ಟಮೊದಲ ಫ್ಯಾಶನ್ ಡಿಸೈನ್ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿರುವ ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಗೆ ಐಟಿಇಎಸ್ ಮುಂಬೈ ಸಂಸ್ಥೆಯಿಂದ “ಬೆಸ್ಟ್ ಪರ್ಫಾರ್ಮೆನ್ಸ್ ಅವಾರ್ಡ್” ಲಭಿಸಿದೆ. ಜೊತೆಗೆ ಐಟಿಇಎಸ್ ಸಂಸ್ಥೆ 2017-18 ರಲ್ಲಿ ನಡೆಸಿದ “ಆಲ್ ಇಂಡಿಯಾ””ಎಕ್ಸಾಮಿನೇಶನ್” ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಮೂಡಿಬಂದಿರುವ ಇದೇ ಕಾಲೇಜಿನ ವಿದ್ಯಾರ್ಥಿನಿ *ಮೆರಿಟಾ ಪ್ರಿಯಾ* ಅವರಿಗೆ ವಿಶೇಷ ನಗದು ಪುರಸ್ಕಾರವನ್ನೂ ನೀಡಿದೆ. ಅ. 6 ರಂದು ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ *ಐಟಿಇಎಸ್ ಬೋರ್ಡ್ ಮುಂಬೈ ಇದರ ಅದ್ಯಕ್ಷ ಪಾಂಡುರಂಗ ನಾಯಕ್, ಪರಿಸರ ಸ್ನೇಹಿ ಮತ್ತು ಸಾಮಾಜಿಕ ಕಾರ್ಯಕರ್ತ ದಿನೇಶ್ ಹೊಳ್ಳ, ಪ್ರ. ಕಾರ್ಯದರ್ಶಿ ಗೋಯಲ್, ಸಮಿತಿಯ ಹಿರಿಯ ಸದಸ್ಯ ಸದಾನಂದ ಹಾಗೂ ಬೋರ್ಡ್ ಸದಸ್ಯರುಗಳ ಸಮ್ಮುಖ ಅನುಗ್ರಹ ಸಂಸ್ಥೆಯ ಚೇರ್ಮೆನ್ ತಲ್ಹತ್ ಎಂ.ಜಿ,…
UN NETWORKS ಉಳ್ಳಾಲ: 1969 ರಲ್ಲಿ ಸ್ಥಾಪನೆಯಾದ ಮುನ್ನೂರು ಯುವಕ ಮಂಡಲ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಆ ಪ್ರಯುಕ್ತ ಒಂದು ವರ್ಷದ ಕಾಲ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ, ಪ್ರೋ ಕಬ್ಬಡ್ಡಿ ಪಂದ್ಯಾಟ , ಹೈಸ್ಕೂಲ್ ವಿಭಾಗದ ಜಾನಪದ ನೃತ್ಯ ಕಾರ್ಯಕ್ರಮ ಹಾಗೂ ಉಳ್ಳಾಲ ವಲಯ ಹೈಸ್ಕೂಲ್ ಮಟ್ಟದ ಕ್ರೀಡಾಕೂಟಗಳಿಗೆ ತಂಡಗಳನ್ನು ಆಹ್ವಾನಿಸಿದೆ ಎಂದು ಮುನ್ನೂರು ಯುವಕ ಮಂಡಲದ ಅಧ್ಯಕ್ಷ ಶಶೀಂದ್ರ ಕುಕ್ಯಾನ್ ಹೇಳಿದರು. ಕುತ್ತಾರು ಮುನ್ನೂರು ಯುವಕ ಮಂಡಲದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅ.14 ರಂದು ಜಿಲ್ಲಾ ಮಟ್ಟದ ಹೈಸ್ಕೂಲ್ ವಿಭಾಗದ ಜಾನಪದ ನೃತ್ಯ ಸ್ಪರ್ಧೆ , ನ.11 ರಂದು ಚೆಂಬುಗುಡ್ಡೆ ಮಂಗಳೂರು ವನ್ ಶಾಲಾ ಮೈದಾನದಲ್ಲಿ ಉಳ್ಳಾಲ ವಲಯ ಹೈಸ್ಕೂಲ್ ಮಟ್ಟದ ಕ್ರೀಡಾಕೂಟ, ಡಿ.9 ರಿಂದ 15 ರವರೆಗೆ ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆ , 2019ರ ಜನವರಿ ತಿಂಗಳಲ್ಲಿ ಕಬ್ಬಡ್ಡಿ ಪಂದ್ಯಾಟ , ಫೆಬ್ರವರಿಯಲ್ಲಿ ಅನಾಥಾಶ್ರಮ…
UN NETWORKS ಉಳ್ಳಾಲ: ಅಧಿಕಾರ ಇರುವ ಸಂದರ್ಭ ಜನ ಸೇರುವುದು ಮುಖ್ಯವಲ್ಲ, ತೀರಿ ಹೋದ ನಂತರವೂ ಜನ ಸೇರುತ್ತಾರೆಂದರೆ ವ್ಯಕ್ತಿಯ ವ್ಯಕ್ತಿತ್ವದ ಪರಿಚಯ ಆಗುತ್ತದೆ. ಪ್ರೀತಿ, ವಿಶ್ವಾಸ, ಸಹೋದರತೆಯಿಂದ ಬಾಳಿದ ದೇವದಾಸ್ ಶ್ರೀಯಾನ್ ಅವರ ಕುಟುಂಬಸ್ಥರಿಗೆ ದು:ಖವನ್ನು ಸಹಿಸುವ ಶಕ್ತಿ ದೇವರು ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಭಟ್ನಗರದ ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್ ಇದರ ಅಧ್ಯಕ್ಷರಾಗಿದ್ದುಕೊಂಡು, ಕೋಟೆಕಾರು ಪಟ್ಟಣ ಪಂಚಾಯಿತಿನಲ್ಲಿ ಕಂದಾಯ ನಿರೀಕ್ಷಕರಾಗಿ , ಹಲವು ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ದೇವದಾಸ್ ಶ್ರೀಯಾನ್ ಇವರ ಆತ್ಮಕ್ಕೆ ಶಾಂತಿ ಕೋರಿ ತೊಕ್ಕೊಟ್ಟುವಿನಲ್ಲಿ ಭಾನುವಾರ ಜರಗಿದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಮಂಡಲ ಪಂಚಾಯಿತಿ ಅವಧಿಯಲ್ಲಿ ಕೆಲಸಕ್ಕೆ ಸೇರಿದ ದೇವದಾಸ್ ಶ್ರೀಯಾನ್ ನಿಸ್ವಾರ್ಥ ಸೇವಾ ಮನೋಭಾವದವರಾಗಿದ್ದರು. ಪಂಚಾಯಿತಿಗೆ ಬರುವ ಪ್ರತಿಯೊಬ್ಬರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಋಣ, ಪ್ರೀತಿ, ಗೌರವವನ್ನು ಉಳಿಸುವ ಕಾರ್ಯ…
UN NETWORKS ಮದೀನಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಮುನವ್ವರ ಸೆಕ್ಟರ್ ವತಿಯಿಂದ 2018 ಸಾಲಿನ ಹಜ್ 71 ದಿವಸಗಳ ಕಾಲ ಮದೀನದಲ್ಲಿ ಹಜ್ಜ್ ಸ್ವಯಂ ಸೇವಕರಾಗಿ ಕಾರ್ಯಚರಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವು ಮದೀನಾ ಮುನವ್ವರದ ಕೆ.ಸಿ.ಎಫ್ ಭವನದಲ್ಲಿ ನಡೆಸಲಾಯಿತು. ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಉದ್ಘಾಟಕರಾಗಿ ಅಗಮಮಿಸಿದ ಉಮರ್ ಸಖಾಫಿ ಪರಪ್ಪು ಹಜ್ಜ್ ಸೇವೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ ನಾಯಕರನ್ನು ಹಾಗೂ ಕಾರ್ಯಕರ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಾ ಹಾಗೂ ಮದೀನ ಮುನವ್ವರದಲ್ಲಿ ಹಜ್ಜ್ ಸೇವೆಯಲ್ಲಿ ಭಾಗವಹಿಸಿದ ಕಾರ್ಯಕರ್ತರಿಗೆ ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ಫಲಕ ನೀಡಿ ಗೌರವಿಸಲಾಯಿತು.ಮದೀನಾ ಮುನವ್ವರ ಝೋನ್ ಅಧ್ಯಕ್ಷ ಫಾರೂಖ್ ನಯೀಮಿ ಸರಳಿಕಟ್ಟೆ ಪ್ರಸ್ತಾವಿಕ ಭಾಷಣ ಮಾಡಿ. ಸುಲೈಮಾನ್ ಸಖಾಫಿ ಕೊಡಗು ಸಭೆಗೆ ಶುಭಾಶಯ ತಿಳಿಸಿದರು. ಉಮರ್ ಗೇರುಕಟ್ಟೆ ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮಕ್ಕೆ ಅಬೂಬಕ್ಕರ್ ಉದ್ದಬೆಟ್ಟು ದನ್ಯವಾದಗೈದರು.

