Author: UllalaVani

Kannada News From Coastal Karnataka

UN NETWORKS ಯೇನೆಪೊಯ: ಯೇನೆಪೊಯ ಸಂಸ್ಥೆಯ ಪ್ರತಿಯೊಂದು ಚಟುವಟಿಕೆ ಭಿನ್ನವಾಗಿದ್ದು ಪಠ್ಯಕ್ರಮದ ಜೊತೆಗೆ ಇತರ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ. ಅಭಿಪ್ರಾಯಪಟ್ಟರು. ಮಂಗಳೂರಿನ ಯೇನೆಪೊಯ ಸ್ಕೂಲ್ ವತಿಯಿಂದ ದೇರಳಕಟ್ಟೆಯ ಯೇನೆಪೊಯ ವಿವಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎಐಸಿಎಸ್ ಫುಟ್ಬಾಲ್ ಟೂನೃಮೆಂಟ್-2018 ಕ್ಕೆ ಚಾಲನೆ ನೀಡಿ ಮಾತನಾಡಿದರು.ಫುಟ್ಬಾಲ್ ಕ್ರೀಡೆ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಪೂರಕ. ಫರ್ಹಾದ್ ಯೇನೆಪೊಯ ಅವರು ಫುಟ್ಬಾಲ್ ಕ್ರೀಡೆಯ ಉತ್ತೇಜನಕ್ಕಾಗಿ ಮಂಗಳೂರು ಫುಟ್ಬಾಲ್ ಕ್ಲಬ್ ಆರಂಭಿಸಿರುವುದು ಈ ಭಾಗದ ಅದೆಷ್ಟೋ ಪ್ರತಿಭಾವಂತರಿಗೆ ವೇದಿಕೆ ಆಗಲಿದೆ ಎಂದರು. ಯೇನೆಪೊಯ ಸ್ಕೂಲ್‍ನ ಆಡಳಿತ ನಿರ್ದೇಶಕ ಫರ್ಹಾದ್ ಯೇನೆಪೊಯ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಯೇನೆಪೊಯ ಗ್ರೂಪ್‍ನ ನಿರ್ದೇಶಕ ಜಾವೆದ್ ಯೇನೆಪೊಯ, ಯೇನೆಪೊಯ ಶಾಲೆಯ ಪ್ರಾಂಶುಪಾಲ ಜೋಸೆಫ್ ಮಖೀರತ್ ಹಾಗೂ ಕಾರ್ಯಕ್ರಮ ವ್ಯವಸ್ಥಾಪಕಿ ರೇಶ್ಮಾ ನಾಯಕ್ ಉಪಸ್ಥಿತರಿದ್ದರು. ವಿಷ್ಣು ಅಲೋಕನ್ ಸ್ವಾಗತಿಸಿದರು. ಸಾರಾ ಝೇವಿಯರ್ ಕಾರ್ಯಕ್ರಮ ನಿರೂಪಿಸಿದರು.…

Read More

UN NETWORKS ಮುಡಿಪು: ಬಂಟ್ವಾಳ ತಾಲೂಕಿನ ಕುರ್ನಾಡು ಮಿತ್ತಕೋಡಿ ಬಳಿ ಟಿಪ್ಪರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದು ಸ್ಕೂಟರ್ ಸಹ ಸವಾರೆ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕನ ಅಜಾರೂಕತೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಆಕ್ರೋಶಿತಗೊಂಡ ಸ್ಥಳೀಯರು ಟಿಪ್ಪರ್ ನ ಗಾಜಿಗೆ ಹಾನಿ ಮಾಡಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಪಾನೆಲ ನಿವಾಸಿ ಜುಬೈದಾ (35) ಮೃತಪಟ್ಟ ದುರ್ದೈವಿಯಾಗಿದ್ದು, ಪತಿ ಇಸ್ಮಾಯಿಲ್ ಅವರೊಂದಿಗೆ ಸ್ಕೂಟರ್ ನಲ್ಲಿ ಮನೆ ಕಡೆ ತೆರಳುತ್ತಿದ್ದಾಗ ಅಜಾಗರೂಕತೆ ಮತ್ತು ಅತೀವೇಗದಲ್ಲಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡಿದ್ದ ಜುಬೈದಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಉಳ್ಳಾಲ ಮತ್ತು ಸಂಚಾರಿ ದಕ್ಷಿಣ ಠಾಣಾ ಪೋಲೀಸರು ಆಗಮಿಸಿದ್ದು, ಪ್ರಕರಣ ದಾಖಲಾಗಿದೆ.

Read More

UN NETWORKS ಕೊಣಾಜೆ: ರಕ್ತದಾನದಂತಹ ಕಾರ್ಯಕ್ಕೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ಹಲವಾರು ಸಂಘ ಸಂಸ್ಥೆಗಳು ರಕ್ತದಾನ ಶಿಬಿರದ ಮೂಲಕ ಜೀವಗಳನ್ನು ಉಳಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿವೆ. ಇಂತಹ ಮಾದರಿ ಕಾರ್ಯದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲ್ಲಿ ಮಂಗಳಗಂಗೋತ್ರಿ, ಅಶೋಕ್ ನಗರ ಹಾಗೂ ಕುರ್ನಾಡು ಲಯನ್ಸ್ ಕ್ಲಬ್‍ಗಳು, ಬಂಟರ ಸಂಘ ಉಳ್ಳಾಲ ವಲಯ ಹಾಗೂ ಎ.ಜೆ.ಆಸ್ಪತ್ರೆಯ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಮಂಗಳೂರು ವಿವಿಯಲ್ಲಿ ಶುಕ್ರವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಲಯನ್ಸ್‍ನ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕಳೆದ ಹಲವಾರು ವರ್ಷಗಳ ಹಿಂದೆಯೇ ಮಂಗಳೂರು ವಿವಿ ಸಹಯೋಗದೊಂದಿಗೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುತ್ತಿದ್ದೆವು. ರಕ್ತದಾನದಂತಹ ಕಾರ್ಯಕ್ರಮವು ಒಂದು…

Read More

UN NETWORKS ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವ ವಿವಿ ಕ್ಯಾಂಪಸ್‍ನ ಯೆನ್‍ಡ್ಯುರೆನ್ಸ್ ಸಭಾಂಗಣದಲ್ಲಿ ಅ. 27ರಂದು ಬೆಳಗ್ಗೆ 10.15ಗಂಟೆಗೆ ನಡೆಯಲಿದೆ. ಕುಲಾಧಿಪತಿ ವೈ. ಅಬ್ದುಲ್ಲ ಕುಂಞ ಅಧ್ಯಕ್ಷತೆ ವಹಿಸಿ ಪಿಎಚ್‍ಡಿ, ಎಂಸಿಎಚ್, ಡಿಎಂ, ಎಂಡಿ, ಎಂಎಸ್, ಎಂಡಿಎಸ್, ಎಂಎಸ್ಸಿ, (ಶುಶ್ರೂಷೆ), ಎಂಪಿಟಿ. ಸ್ನಾತಕೋತ್ತರ ಡಿಪ್ಲೊಮಾ ಮತ್ತು ಎಂಬಿಬಿಎಸ್, ಬಿಡಿಎಸ್, ಬಿಎಸ್ಸಿ( ಶುಶ್ರೂಷೆ) ಹಾಗೂ ಬಿಪಿಟಿ ಪದವೀಧರರಿಗೆ ಪದವಿ ಪ್ರದಾನ ಮಾಡಲಿರುವರು. ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಜೋಧ್ಪುರ್‍ನ ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ , ಡಾ. ಸಂಜೀವ್ ಮಿಶ್ರ, ಘಟಿಕೋತ್ಸವ ಭಾಷಣ ಮಾಡುವರು. ಮಹಾರಾಷ್ಟ್ರದ ಕರಾಡ್‍ನ ಕೃಷ್ಣ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಕುಲಾಧಿಪತಿ ಡಾ. ವೇದ್‍ಪ್ರಕಾಶ್ ಮಿಶ್ರ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಕೆ. ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

UN NETWORKS ಕೊಣಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು ಇದರ ವತಿಯಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ , ಕೊಣಾಜೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘದ ಒಕ್ಕೂಟ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ,ವಿಜಯ ಗ್ರಾಮೀಣಾಭಿವೃದ್ಧಿ ಸಮಿತಿ, ವಿಜಯ ಬ್ಯಾಂಕ್, ಕೊಣಾಜೆ ಗ್ರಾಮ ಪಂಚಾಯತ್, ವಿಶ್ವಮಂಗಳ ವಿದ್ಯಾಸಂಸ್ಥೆ , ಜನಜಾಗೃತಿ ಕೊಣಾಜೆ ವಲಯ ಸಮಿತಿ ಇದರ ಸಹಕಾರದಲ್ಲಿ ಡಾ ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಟ್ಟಿಗೆ ಮಹಾತ್ಮ ಗಾಂದೀಜಿ ಯವರ 150ನೇ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಕೊಣಾಜೆ ವಿಶ್ವಮಂಗಳದಲ್ಲಿ ಗುರುವಾರ ನಡೆಯಿತು. ವಿಜಯಬ್ಯಾಂಕ್ ಕೇಂದ್ರೀಯ ಮುಖ್ಯ ವ್ಯವಸ್ಥಾಪಕ ರಾಜರಾಜೇಶ್ ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದ ಮೊದಲ ಹಂತ ಸುಂದರವಾಗಿದ್ದರೂ ಕೂಡಾ ವಿದ್ಯಾರ್ಥಿ ಜೀವನ ಭದ್ರಬುನಾದಿ ಆಗಬೇಕು. ವಿದ್ಯಾರ್ಥಿಗಳನ್ನು ಸಮರ್ಪಕವಾದ ಹಾದಿಯಲ್ಲಿ…

Read More

UN NETWORKS ದೇರಳಕಟ್ಟೆ: ಪರಿಸರಕ್ಕೆ ಅನುಗುಣವಾಗಿ ಅಧ್ಯಯನ ನಡೆಸಿ ಪೋಷಕಾಂಶ ಕುರಿತ ನೂತನ ಸಂಶೋಧನೆ ವರದಿ ರಚಿಸಿ ಅದನ್ನು ನೀತಿಯನ್ನಾಗಿ ರಚಿಸುವತ್ತ ಯೇನೆಪೊಯ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಕಾರ್ಯಾಚರಿಸಬೇಕು ಎಂದು ಇಂಡಿಯನ್ ಮೆಡಿಕಲ್ ರಿಸರ್ಚ್ ಕೌನ್ಸಿಲ್‍ನ ನಿವೃತ್ತ ಮಹಾ ನಿರ್ದೇಶಕ ಪ್ರೊ. ವಿಶ್ವ ಮೋಹನ್ ಕಟೋಚ್ ಹೇಳಿದರು. ದೇರಳಕಟ್ಟೆಯ ಯೇನೆಪೊಯ ಪರಿಗಣಿಸಲಾಗಿರುವ ವಿವಿಯ ಕ್ಯಾಂಪಸ್‍ನ ಇಎಂಡಿ ಆಡಿಟೋರಿಂಯನಲ್ಲಿಗುರುವಾರ ನಡೆದ ಯೇನೆಪೊಯ ನ್ಯೂಟ್ರಿಶಿಯನ್ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯೇನೆಪೊಯ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಚಿಂತನೆಗಳ ಮೂಲಕ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಲವು ದಶಕಗಳಿಂದ ನಡೆದುಕೊಂಡು ಬಂದಿರುವಂತೆ ಪಾಶ್ಚಿಮಾತ್ಯ ದೇಶಗಳ ಬರಹಗಾರರು ಬರೆದಿರುವ ಪಠ್ಯಕ್ರಮಗಳ ಆಧಾರದಲ್ಲಿ ಪೋಷಕಾಂಶದ ನಿರ್ಧಾರವಾಗುತ್ತಿದೆ. ಆದರೂ ದೇಶದಲ್ಲಿ ಅಪೌಷ್ಠಿಕತೆ ಕೊರತೆಗಳು ಇದೆ. ಅಪೌಷ್ಠಿಕತೆ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಅಡ್ಡ ಪರಿಣಾಮ , ಮಾನಸಿಕ ಹಾಗೂ ದೈಹಿಕ ನ್ಯೂನ್ಯತೆಗಳು , ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ಉದ್ದೇಶದಿಂದ ಸ್ಥಾಪನೆಗೊಂಡ ಅಧ್ಯಯನ ಕೇಂದ್ರದಲ್ಲಿ ಪೌಷ್ಠಿಕತೆಗೆ…

Read More

UN NETWORKS ಮಂಗಳೂರು: ಬೆಂದೂರ್ ವೆಲ್ ಸಿಟಿ ಆರ್ಕೇಡ್ ಕಟ್ಟಡದಲ್ಲಿ `ಒಲಿವ್’ ಹೋಮ್ ಡೆಕೋರ್ ಮತ್ತು ಡಿಸೈನಿಂಗ್ ಮಳಿಗೆಯ ಉದ್ಘಾಟನೆಯನ್ನು ರಾಜ್ಯ ವಿಧಾನಪರಿಷತ್ ಸದಸ್ಯ , ಜೆಡಿಎಸ್ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ ಫಾರೂಕ್ ಗುರುವಾರ ಉದ್ಘಾಟಿಸಿದರು. ಆಧುನಿಕ ಡಿಸೈನ್ ಗಳನ್ನು ಮಳಿಗೆ ಒಳಗೊಂಡಿದೆ. ಹಲವು ವಿನ್ಯಾಸಗಳಿರುವ ಕಲಾಕೃತಿಗಳು ಇರುವುದು ಮಳಿಗೆಯ ವಿಶೇಷತೆ. ಮಂಗಳೂರಿನಲ್ಲಿ ಇಂತಹ ಮಳಿಗೆಯ ಅಗತ್ಯತೆ ಇದೆ. ಬೆಳವಣಿಗೆ ಹೊಂದುತ್ತಿರುವ ನಗರದಲ್ಲಿ ಆಧುನಿಕ ಶೈಲಿಯ ಮ್ಯಾಟಿಂಗ್, ವಿದೇಶಿ ವಿನ್ಯಾಸದ ಬೆಡ್ ಎಲ್ಲವೂ ಅಗತ್ಯ. ಮಳಿಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಿ ಎಂದು ಹಾರೈಸಿದರು. ಮಂಗಳೂರು ಉತ್ತರ ಕ್ಷೇತ್ರ ಮಾಜಿ ಶಾಸಕ ಮೊಯ್ದೀನ್ ಬಾವಾ ಮಾತನಾಡಿ, ಮಳಿಗೆ ಅಭಿವೃದ್ಧಿ ಹೊಂದಿ ಜಿಲ್ಲೆ ಮತ್ತು ರಾಜ್ಯಾದ್ಯಂತ ಶಾಖೆಗಳ ನಿರ್ಮಾಣವಾಗಲಿ. ಮಳಿಗೆ ಮಾಲೀಕರ ಸಾಧನೆ ನಗರದ ಎಲ್ಲಾ ಜನರಿಗೆ ಕೈಗೂಡಲಿ ಎಂದು ಹಾರೈಸಿದರು. ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಸದಖತುಲ್ಲಾ ಫೈಝಿ ದುಆ ನೆರವೇರಿಸಿದರು. ಸೈಯ್ಯಿದ್ ನೌಷಾದ್, ಅಮೀರ್…

Read More

UN NETWORKS ಹರೇಕಳ: ಬೆಳೆದು ನಿಂತಿರುವ ರಸ್ತೆ ಬದಿಯ ಗಿಡ ಗಂಟಿಗಳು, ಇಳಿಜಾರದ ರಸ್ತೆಯಲ್ಲಿ ಬಿದ್ದಿರುವ ದೊಡ್ಡ-ದೊಡ್ಡ ಹೊಂಡಗಳು. ಇದು ಹರೇಕಳ ಗ್ರಾಮದ ಒಡ್ಡೆದಗುಳಿಯಿಂದ ಫರೀದ್‌ ನಗರವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿ. ಎರಡು ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ಒಡ್ಡೆದಗುಳಿ ರಸ್ತೆ ಅಭಿವೃದ್ಧಿಗಾಗಿ ಈ ಪ್ರದೇಶದ ಜನರು ಕಾಯುತ್ತಿದ್ದಾರೆ. ಅಂಬ್ಲಮೊಗರು ಗ್ರಾಮದ ಎಲಿಯಾರ್‌ ಪದವಿನಿಂದ ರುದ್ರಭೂಮಿ ಬಳಿಯಾಗಿ ಹರೇಕಳ ಸಂಪರ್ಕಿಸುವ ಒಡ್ಡೆದಗುಳಿ ರಸ್ತೆ ಹರೇಕಳ ಗ್ರಾಮದ ಕಿಸಾನ್‌ ನಗರ, ಕಲ್ಲಾಯಿ, ಸೇರಿದಂತೆ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ. ಅತ್ಯಂತ ಇಳಿಜಾರು ಮತ್ತು ಕಿರಿದಾದ ಈ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಈ ಪ್ರದೇಶದ ಜನರು ಹರೇಕಳ ಗ್ರಾಮ ಪಂಚಾಯತ್‌ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಈವರೆಗೆ ಸ್ಪಂದಿಸಿಲ್ಲ ಎನ್ನುವುದು ಸ್ಥಳೀಯರ ಆರೋಪ. ಹೇಗಿದೆ ರಸ್ತೆ ಸುಮಾರು 200ಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಈ ರಸ್ತೆಯ ಎಲಿಯಾರ್‌ ಪದವಿನ ರುದ್ರಭೂಮಿ ಬಳಿಯಿರುವ ಉಮ್ಮರಬ್ಬ ಮನೆಯ ಬಳಿ ಸಂಪೂರ್ಣ…

Read More

UN NETWORKS ಉಳ್ಳಾಲ:ಎಸ್ಸೆಸ್ಸೆಫ್ ಕಾನೆಕೆರೆ ಶಾಖೆಯ ಯುನಿಟ್ ಕಾನ್ಫರೆನ್ಸ್ ಅ,28ರಂದು ಮಗ್ರಿಬ್ ನಮಾಝಿನ ಬಳಿಕ ದೇರಳಕಟ್ಟೆ ಕಾನೆಕೆರೆ ತರ್ಬಿಯತುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆಯಲಿದೆ. ಎಸ್ಸೆಸ್ಸೆಫ್ ಕಾನೆಕೆರೆ ಶಾಖಾಧ್ಯಕ್ಷ ಮುಹಮ್ಮದ್ ರಫೀಕ್ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಯು.ಎ ಇಸ್ಹಾಕ್ ಝುಹ್ರಿ ಸೂರಿಂಜೆ ಉದ್ಘಾಟಿಸಿಲಿದ್ದು ಬಶೀರ್ ಮದನಿ ಅಲ್-ಕಾಮಿಲ್ ಕೂಳೂರು ಮುಖ್ಯ ಪ್ರಭಾಷಣಗೈಯಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More

UN NETWORKS ಕೊಣಾಜೆ: ಆಧುನಿಕತೆ ಪ್ರಭಾವದಿಂದ ಸಂಪರ್ಕ ಬೆಳೆದು ಕಲೆಗಳು ಮಿಶ್ರಣವಾಗುತ್ತಿದೆ. ರಿಯಾಲಿಟಿ ಷೋ, ಸಾಮಾಜಿಕ ಜಾಲತಾಣ, ಮಾಧ್ಯಮಗಳ ಪ್ರಭಾವ ದಿಂದ ಕಲೆಗಳ ಮೂಲವನ್ನು ಕಳೆದುಕೊಳ್ಳುತ್ತಿದ್ದೇವೆ. ಇವೆಲ್ಲದರ ನಡುವೆ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ಕಮ್ಮಟದ ಅದರ ಸೂಕ್ಷ್ಮಗಳನ್ನು ಅರಿತು ಸತ್ವವನ್ನು ವಿಸ್ತರಿಸುವ ಕಾರ್ಯ ಆಗಬೇಕಿದೆ ಎಂದು ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಡಾ.ಪಿ. ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ಸೋಮೇಶ್ವರ , ಉಚ್ಚಿಲ ಸಂಯುಕ್ತ ಆಶ್ರಯದಲ್ಲಿ ಕೊಣಾಜೆ ಮಂಗಳೂರು ವಿಶ್ವ ವಿದ್ಯಾನಿಲಯ ಯಕ್ಷಗಾನ ಕಲಾಕೇಂದ್ರದಲ್ಲಿ ಬುಧವಾರ ನಡೆದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬೆಳೆದು ನಿಂತ ಪ್ರತಿಯೊಂದು ಕಲೆಯಲ್ಲಿಯೂ ಕಾಲಬಾಧೆಗೊಳಗಾದ ದೋಷಗಳು ಇದ್ದೇ ಇರುತ್ತದೆ. ಸಮರ್ಥ ಕ್ಷೇತ್ರದಲ್ಲಿ ಪ್ರವೃತ್ತಿ ಗೆ ವಿರುದ್ಧವಾದ ಕೃತಿಗಳು ಇರುತ್ತದೆ. ಬ್ಲೈಂಡ್ ಸ್ಪಾಟ್‍ಗಳನ್ನು ಶಾಸ್ತ್ರೀಯ ಅನ್ನುತ್ತಾ…

Read More