UN NETWORKS ಕೊಣಾಜೆ: ಆಧುನಿಕತೆ ಪ್ರಭಾವದಿಂದ ಸಂಪರ್ಕ ಬೆಳೆದು ಕಲೆಗಳು ಮಿಶ್ರಣವಾಗುತ್ತಿದೆ. ರಿಯಾಲಿಟಿ ಷೋ, ಸಾಮಾಜಿಕ ಜಾಲತಾಣ, ಮಾಧ್ಯಮಗಳ ಪ್ರಭಾವ ದಿಂದ ಕಲೆಗಳ ಮೂಲವನ್ನು ಕಳೆದುಕೊಳ್ಳುತ್ತಿದ್ದೇವೆ. ಇವೆಲ್ಲದರ ನಡುವೆ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ಕಮ್ಮಟದ ಅದರ ಸೂಕ್ಷ್ಮಗಳನ್ನು ಅರಿತು ಸತ್ವವನ್ನು ವಿಸ್ತರಿಸುವ ಕಾರ್ಯ ಆಗಬೇಕಿದೆ ಎಂದು ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಡಾ.ಪಿ. ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕಲಾಗಂಗೋತ್ರಿ ಯಕ್ಷಗಾನ ಕೇಂದ್ರ ಸೋಮೇಶ್ವರ , ಉಚ್ಚಿಲ ಸಂಯುಕ್ತ ಆಶ್ರಯದಲ್ಲಿ ಕೊಣಾಜೆ ಮಂಗಳೂರು ವಿಶ್ವ ವಿದ್ಯಾನಿಲಯ ಯಕ್ಷಗಾನ ಕಲಾಕೇಂದ್ರದಲ್ಲಿ ಬುಧವಾರ ನಡೆದ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳದ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬೆಳೆದು ನಿಂತ ಪ್ರತಿಯೊಂದು ಕಲೆಯಲ್ಲಿಯೂ ಕಾಲಬಾಧೆಗೊಳಗಾದ ದೋಷಗಳು ಇದ್ದೇ ಇರುತ್ತದೆ. ಸಮರ್ಥ ಕ್ಷೇತ್ರದಲ್ಲಿ ಪ್ರವೃತ್ತಿ ಗೆ ವಿರುದ್ಧವಾದ ಕೃತಿಗಳು ಇರುತ್ತದೆ. ಬ್ಲೈಂಡ್ ಸ್ಪಾಟ್ಗಳನ್ನು ಶಾಸ್ತ್ರೀಯ ಅನ್ನುತ್ತಾ…
Author: UllalaVani
UN NETWORKS ತಲಪಾಡಿ: ತಲಪಾಡಿಯ ಉಚ್ಚಿಲ ಸಸಿಹಿತ್ಲು ಪ್ರದೇಶದ ಸಮುದ್ರ ತೀರದಿಂದ ನಡೆಯುತ್ತಿದ್ದ ಅಕ್ರಮ ಅಡ್ಡೆಗೆ ದಾಳಿ ನಡೆಸಿರುವ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ನೇತೃತ್ವದ ಪೊಲೀಸ್ ತಂಡ 16 ದೋಣಿ ಸಹಿತ ಟನ್ ಗಟ್ಟಲೆ ಮರಳು ವಶಕ್ಕೆ ಪಡೆದಿದೆ. ಕರ್ನಾಟಕ-ಕೇರಳ ಗಡಿಭಾಗ ಉಚ್ಚಿಲ ಸಸಿಹಿತ್ಲು ಸಮುದ್ರ ತೀರದಿಂದ ಮರಳುಗಾರಿಕೆ ನಡೆಸುತ್ತಿದ್ದ ತಂಡ ಹಲವು ದೋಣಿಗಳ ಮೂಲಕ ಸಸಿಹಿತ್ಲು ಸಮೀಪ ದಾಸ್ತಾನಿರಿಸಿ ರಾತ್ರಿ ವೇಳೆ ಕೇರಳ ಕಡೆಗೆ ಮರಳು ಸಾಗಾಟ ನಡೆಸುತ್ತಿತ್ತು. ಖಚಿತ ಮಾಹಿತಿ ಪಡೆದ ಪೊಲೀಸ್ ತಂಡ ಬುಧವಾರ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದಾಗ ಪ್ರಮುಖ ಆರೋಪಿ ದೋಣಿ ಸಹಿತ ಪರಾರಿಯಾಗಿದ್ದು, ಇತರರು ಪರಾರಿಯಾಗಿದ್ದಾರೆ. ನೀರಿನಲ್ಲಿ ನಿಲ್ಲಿಸಲಾಗಿದ್ದ 16 ದೋಣಿಗಳನ್ನು ಉಳ್ಳಾಲ ಠಾಣೆಯ ಹಲವು ಸಿಬ್ಬಂದಿ ನೇತೃತ್ವದಲ್ಲಿ ದೋಣಿಗಳನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಸ್ಥಳಕ್ಕೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಬೇಕಿತ್ತಾದರೂ, ಬೆಳಿಗ್ಗಿನಿಂದ ಸಂಜೆಯವರೆಗೂ ಅಧಿಕಾರಿಗಳು ಭೇಟಿ ನೀಡದೇ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ
UN NETWORKS ತೊಕ್ಕೊಟು: ಬಿ.ಜೆ.ಪಿ. ಮಂಗಳೂರು ಕ್ಷೇತ್ರ ಸಮಿತಿಯ ವತಿಯಿಂದ ತೊಕ್ಕೊಟು ಬಿ.ಜೆ.ಪಿ. ಕಛೇರಿಯಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ವಾಲ್ಮೀಕಿ ದಿನಾಚರಣೆ ಮಾಡಲಾಯಿತು. ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಸಂಜೀವ ಶೆಟ್ಟಿ ಅಂಬ್ಲಮೊಗರು, ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್.,ತಾಲೂಕ್ ಪಂ.ಸದಸ್ಯರಾದ ರವಿಶಂಕರ್, ನಗರ ಸಭಾ ಸದಸ್ಯೆ ಗೀತಾ ಬಾಯಿ, ಪದಾಧಿಕಾರಿಗಳಾದ ಪ್ರಕಾಶ್ ಸಿಂಫೋನಿ, ಹರಿಯಪ್ಪ ಸಾಲ್ಯಾನ್, ಹೇಮಂತ್ ಶೆಟ್ಟಿ ಮತ್ತು ಪ್ರಮುಖರಾದ ರವಿ ಸೋವೂರ್, ರಂಜಿತ್ ಗಟ್ಟಿ,ಉಮೇಶ್ ಇನ್ನಿತರರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಐತಿಹಾಸಿಕ ಹಾಗೂ ಕಾರಣಿಕ ಶ್ರದ್ಧಾ ಭಕ್ತಿಯ ಧಾರ್ಮಿಕ ಕೇಂದ್ರ ವಾಗಿರುವ ಉಳ್ಳಾಲ ಸಯ್ಯಿದ್ ಮದನಿ ದರ್ಗಾದ ಹೆಸರು ಹೇಳಿಕೊಂಡು ಕೆಲವು ಮಂದಿ ಹಣ ಸಂಗ್ರಹಿಸುತ್ತಿರುವ ಕುರಿತಾಗಿ ಕೇಳಿ ಬಂದಿದ್ದು ಉಳ್ಳಾಲ ದರ್ಗಾಕ್ಕೆ ಸಂದಬೇಕಾದ ಹಣ ನೇರವಾಗಿ ದರ್ಗಾಕ್ಕೇ ಸಲ್ಲಬೇಕು. ಹೊರತು ದರ್ಗಾ ಆಡಳಿತ ಹಣ ಸಂಗ್ರಹಕ್ಕೆ ಯಾರಿಗೂ ಅವಕಾಶ ಕೊಟ್ಟಿಲ್ಲ. ಅಂತಹ ಕೃತ್ಯಕ್ಕೆ ಮುಂದಾದರೆ ಅದನ್ನು ಅಪರಾಧವಾಗಿ ಪರಿಗಣಿಸಲಾಗುವುದು ಎಂದು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು. ಉಳ್ಳಾಲ ಸಯ್ಯಿದ್ ಮದನಿ ದರ್ಗಾ ದಲ್ಲಿ ಮಂಗಳವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲ ದರ್ಗಾ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಭಕ್ತರ ಸಂಖ್ಯೆಯಲ್ಲಿ ಹಾಗೂ ಹರಿಕೆ ಪಾವತಿಯಲ್ಲಿ ಕೇರಳಿಗರ ಕೊಡುಗೆ ದೊಡ್ಡದು. ಆದರೆ ಇತ್ತೀಚೆಗೆ ದರ್ಗಾ ಆಡಳಿತಕ್ಕೆ ಸಿಕ್ಕಿದ ಮಾಹಿತಿ ಪ್ರಕಾರ ಸಂಘಟನೆಯೊಂದಕ್ಕೆ ಸೇರಿದ ಕೆಲವು ಯುವಕರ ತಂಡ ಕೊಲ್ಲಂ, ಹಾಸನ, ಕಾಸರಗೋಡು ಪ್ರದೇಶದಲ್ಲಿ ಉಳ್ಳಾಲ ದರ್ಗಾ ಹೆಸರಿನಲ್ಲಿ ಹಣ…
UN NETWORKS ಮಂಚಿ: ಗಾಳದ ಕೊಂಕಣಿ ಸಮಾಜ ಬಾಂಧವರ ನಿಯೋಗ ಮಂಚಿ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಮೊಕ್ಕಾಂ ಹೂಡಿರುವ ಗೋವ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಭಾನುವಾರ ಭೇಟಿ ಮಾಡಿದರು. ಸಮಾಜ ಬಾಂಧವರಿಗೆ ಆಶೀರ್ವಚನಗೈದ ಶ್ರೀಗಳು ಸಂಘದ ಚಟುವಟಿಕೆಯನ್ನು ಶ್ಲಾಘಿಸಿದರು. ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಅವರನ್ನು ಶ್ರೀಗಳು ಶಾಲುಹೊದಿಸಿ ಗೌರವಿಸಿದರು. ಸಮಾಜದ ವತಿಯಿಂದ ಶ್ರೀಗಳ ಪಾದಪೂಜೆ ನೆರೆವೇರಿಸಲಾಯಿತು. ನಿಯೋಗದಲ್ಲಿ ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಹರೇಕಳ,ಪ್ರಧಾನ ಕಾರ್ಯದರ್ಶಿ ಮುರಳೀಧರ ನಾಯ್ಕ್, ಜತೆ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ, ಮಾಜಿ ಕಾರ್ಯದರ್ಶಿ ಕೋಡಿ ಜಯನಾಯ್ಕ್, ಶ್ರೀ ಸೋಮೇಶ್ವರೀ ಸೌ.ಸ. ಸಂಘದ ಅಧ್ಯಕ್ಷ ಉಮಾನಾಥ ನಾಯ್ಕ್ ಉಳ್ಳಾಲ, ಸೋಮನಾಥ ಉಳಿಯ ಶ್ರೀ ಸೋಮೇಶ್ವರೀ ದೇವಿ ದೇವಸ್ಥಾನದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಯು. ದಯಾನಂದ ನಾಯ್ಕ್, ಮಹೇಶ್ ಬಂಟ್ವಾಳ, ಪ್ರವೀಣ ನಾಯ್ಕ್ ಬಂಟ್ವಾಳ, ಕೋಡಿ ಲಕ್ಷ್ಮಣ ನಾಯ್ಕ್, ಆಶೋಕ್ ನಾಯ್ಕ್,ರಾಜೇಂದ್ರ ನಾಯ್ಕ್, ಜಯರಾಮ,…
UN NETWORKS ಮಂಜನಾಡಿ: ಬಡತನದ ನಡುವೆಯೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ, ನೀಟ್ ಪರೀಕ್ಷೆ ಬರೆದು ಅರ್ಹತೆ ಹೊಂದಿದರೂ ಯಾವುದೇ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ದೊರಕದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಸೀಟು ಒದಗಿಸಿಕೊಡುವ ಭರವಸೆ ಪತ್ರ ಕೈಸೇರಿದೆ. ಮಂಜನಾಡಿ ಗ್ರಾಮದ ಕಲ್ಕಟ್ಟ ನಿವಾಸಿ ಸಾಧುಕುಂಞ ಎಂಬವರ ಪುತ್ರ ಅಬ್ದುಲ್ ನಾಸಿರ್ ಎಂಬವರ ಕೈಗೆ ಪತ್ರ ಸೇರಿದೆ. ಕಲ್ಕಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಪೂರೈಸಿದ ಅಬ್ದುಲ್ ನಾಸಿರ್, ಕಲಿಕೆಯಲ್ಲಿ ಮುಂದಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ಪಾಸಾದ ಅವರು ವೈದ್ಯನಾಗಬೇಕೆಂಬ ಕನಸ್ಸು ಹೊಂದಿದ್ದರು. ಸಾಧುಕುಂಞ ದಂಪತಿಗೆ ಇರುವ ಏಳು ಮಕ್ಕಳಲ್ಲಿ ನಾಸಿರ್ ಕಿರಿಯ ಮಗ. ಮನೆಯಲ್ಲಿ ಹೆಚ್ಚಿನ ಶಿಕ್ಷಣ ಹೊಂದಿದವರು ಯಾರೂ ಇಲ್ಲ. ನಾಸೀರ್ ಓರ್ವನೇ ಹೆಚ್ಚಿನ ಶಿಕ್ಷಣ ಪಡೆಯುತ್ತಿದ್ದವರು. ತಂದೆಯ ಕ್ಯಾಂಟೀನ್ ವ್ಯಾಪಾರ ಹಾಗೂ ನಾಸೀರ್ ಸಹೋದರರು ಕೆಲಸ ನಿರ್ವಹಣೆಯಿಂದ…
UN NETWORKS ಉಳ್ಳಾಲ: ಪುತ್ರನ ಸಾವಿನಿಂದ ತೀವೃವಾಗಿ ನೊಂದಿದ್ದ ಮಹಿಳೆಯೋರ್ವರು ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮೇಶ್ವರ ಕೊಲ್ಯ ನಿವಾಸಿ ನರಸಿಂಹ ಆಳ್ವ ಎಂಬವರ ಪತ್ನಿ ನೀತಾ ಆಳ್ವ(43) ಆತ್ಮಹತ್ಯೆ ಮಾಡಿಕೊಂಡವರು. ಇವರ ಪುತ್ರ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ನಮನ್ ಆಳ್ವ ಐದು ತಿಂಗಳ ಹಿಂದೆ ಕಾಯಿಲೆಯಿಂದ ಮೃತಪಟ್ಟಿದ್ದ. ಏಕೈಕ ಪುತ್ರನನ್ನು ಕಳೆದುಕೊಂಡು ಖಿನ್ನತೆ ಅನುಭವಿಸುತ್ತಿದ್ದ ನೀತಾ ಅವರು ಸೋಮವಾರ ಪತಿ ಮನೆಯಿಂದ ಹೊರ ಹೋಗಿದ್ದ ಸಂದರ್ಭ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
UN NETWORKS ಉಳ್ಳಾಲ: ಉಳ್ಳಾಲದ ಶಾರದಾ ಉತ್ಸವದ ಪ್ರಯುಕ್ತ ಶಾರದನಿಕೇತನದಲ್ಲಿ ನಡೆದ ದಿ. ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಇವರ ಸ್ಮರಣಾರ್ಥ 18ನೇ ವರ್ಷದ ದ.ಕ. ಜಿಲ್ಲಾ ಮಟ್ಟದ ಬೆಳ್ಳಿಗದೆಯ ಕುಸ್ತಿ ಪಂದ್ಯಾಟದಲ್ಲಿ ದುರ್ಗಾಪರಮೇಶ್ವರೀ ಚಿತ್ರಾಪುರದ ಕುಸ್ತಿಪಟುಗಳಾದ ಪ್ರವೀಣ್ `ಶಾರದಾ ಕಿಶೋರ್’ ಮತ್ತು ರವಿ ಅವರು `ಶಾರದಾ ಕೇಸರಿ’ ಪ್ರಶಸ್ತಿಯನ್ನು ಪಡೆದುಕೊಂಡರೆ, ಬೋಳಾರದ ಶಿವಾಜಿ ಫಿಸಿಕಲ್ನ ಸುಪ್ರಿತ್ `ಶಾರದಾ ಶ್ರೀ’ ಪ್ರಶಸ್ತಿಯೊಂದಿಗೆ ಬೆಳ್ಳಿಗದೆಯನ್ನು ತನ್ನದಾಗಿಸಿಕೊಂಡರೆ ದುರ್ಗಾಪರಮೇಶ್ವರೀ ಚಿತ್ರಾಪುರ `ತಂಡ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ. ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿ.ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘದ ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಮೊಗವೀರಪಟ್ಣ ಇದರ ಸಹಯೋಗದಲ್ಲಿ ನಡೆದ 35 ಕೆ.ಜಿ. ವಿಭಾಗದ `ಶಾರದಾ ಕಿಶೋರ್’ ಟೈಟಲ್ಗೆ ನಡೆದ ಪಂದ್ಯಾಟದಲ್ಲಿ ದುರ್ಗಾಪರಮೇಶ್ವರೀ (ಡಿ.ಪಿ.)ಚಿತ್ರಾಪುರದ ಪ್ರವೀಣ್ ಬೋಳಾರದ ಶಿವಾಜಿ ಫಿಜಿಕಲ್ನ ಅಕ್ಷಯ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, 61ಕೆಜಿ ವಿಭಾಗದ `ಶಾರದಾ ಶ್ರೀ` ಟೈಟಲ್ಗೆ ನಡೆದ ಪಂದ್ಯಾಟದಲ್ಲಿ ಶಿವಾಜಿ ಫಿಸಿಕಲ್ನ ಸುಪ್ರಿತ್ ಅವರು ವೀರಭಾರತಿ…
UN NETWORKS ಕೊಲ್ಯ: ಭಾರತೀಯ ವೇದ, ಶಾಸ್ತ್ರ, ದರ್ಶನ, ಪುರಾಣ ಇತ್ಯಾದಿ ಮಾನವ ಜೀವನದ ಅನೇಕ ಉತ್ಕೃಷ್ಟ ಮೌಲ್ಯಗಳನ್ನು ಅಧಿಕೃತವಾಗಿ ತಿಳಿಸುತ್ತವೆ. ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಅವುಗಳಿಗೆ ಮಾನ್ಯತೆಯಿದೆ. ಆದರೆ ಇಂದಿನ ಶಿಕ್ಷಣ ಕ್ರಮದಲ್ಲಿ ಅವುಗಳ ಸ್ಥಾನ ಲುಪ್ತವಾಗುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆಯಂತಹ ಪುರಾಣ ಕಾವ್ಯಗಳ ಮರು ಓದು ಅಗತ್ಯ’ ಎಂದು ಯಕ್ಷಗಾನ ಅರ್ಥಧಾರಿ, ಪ್ರವಚನಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಕೋಟೆಕಾರ್ ಸಮೀಪ ಕೊಲ್ಯದಲ್ಲಿ ಶ್ರೀ ರಮಾನಂದ ಸ್ವಾಮೀಜಿ ಸಂಸ್ಥಾಪಿತ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಜರಗಿದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹಿಂದೆ ಮನೆ ಮನೆಯಲ್ಲಿ ನಡೆಯುತ್ತಿದ್ದ ಪುರಾಣ ವಾಚನ ಪ್ರಕಾರ ಈಗ ಮರೆಯಾಗುತ್ತಿದೆ. ಇದನ್ನು ಮರಳಿ ಜನಪ್ರಿಯಗೊಳಿಸುವ ಕೆಲಸವನ್ನು ಶಾಲಾ ಕಾಲೇಜು ಮತ್ತು ಮಠ ಮಂದಿರಗಳು ಮಾಡಬೇಕು’ ಎಂದವರು ತಿಳಿಸಿದರು. ಬಳಿಕ ಕುಮಾರವ್ಯಾಸ ಭಾರತದ ‘ಅಕ್ಷಯ ಪಾತ್ರೆ’ ಕಥಾನಕದ ಪುರಾಣ ಪ್ರವಚನ ಜರಗಿತು.…
UN NETWORKS ಮಂಜನಾಡಿ: ಕೊಡಗು ಜಿಲ್ಲೆಯಲ್ಲಿ ನಡೆದ ಭೀಕರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡಿರುವ ನಿರ್ವಸಿತರಿಗೆ ಮನೆಗಳನ್ನು ನಿರ್ಮಿಸಿಕೊಡಲು ಕರ್ನಾಟಕ ರಾಜ್ಯ ಸುನ್ನೀ ಸಂಘಟನೆಗಳು ನಿರ್ಧರಿಸಿದ್ದು, ಕೊಡಗು ಸುನ್ನೀ ಯುವ ನಾಯಕ ಅಬ್ದುಲ್ ಲತೀಫ್ ಶುಂಠಿಕೊಪ್ಪ ಸಂತ್ರಸ್ತರಿಗಾಗಿ ನೀಡಿರುವ ಒಂದು ಎಕ್ರೆ ಜಾಗದಲ್ಲಿ 20 ರಿಂದ 25 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ಸುನ್ನೀ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಹೇಳಿದರು. ಅವರು ಮಂಜನಾಡಿಯ ಅಲ್ ಮದೀನಾ ದಲ್ಲಿ ಶನಿವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು. ಮನೆಗಳ ನಿರ್ಮಾಣಕ್ಕೆ ರೂ.35 ಲಕ್ಷ ಸಂಗ್ರಹವಾಗಿದೆ. ಸರ್ಕಾರ ಹಾಗೂ ದಾನಿಗಳ ನೆರವಿನಿಂದವಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಉಲಮಾ ನಾಯಕರ ಆಶಯದಂತೆ ಎಸ್ ವೈಎಸ್ , ಎಸ್ಸೆಸ್ಸೆಫ್ ಮತ್ತು ಕೆಸಿಎಫ್ ಕಾರ್ಯಕರ್ತರು ಧನ ಸಂಗ್ರಹಕ್ಕೆ ಇಳಿದಿದ್ದಾರಡ. ಮುಅಲ್ಲಿಂ ಮತ್ತು ಮೆನೇಜ್ ಮೆಂಟ್ ನಾಯಕರು ಸಹಕರಿಸಿದ್ದಾರೆ. ಭೂಮಿ ದಾಖಲೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಪೂರ್ಣ ಗೊಂಡ ಬಳಿಕ ಮನೆ ನಿರ್ಮಾಣ…

