Author: UllalaVani

Kannada News From Coastal Karnataka

UN NETWORKS ಕೋಟೆಕಾರು : ಕೆಇಬಿ ಉಪಕಚೇರಿಯ ಎಟಿಪಿ ಯಂತ್ರದಲ್ಲಿ ಗ್ರಾಹಕರಿಂದ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂ.ಗಳನ್ನು ಕಳ್ಳರು ಕಳವುಗೈದಿರುವ ಘಟನೆ ರಾ.ಹೆ.66ರ ಕೋಟೆಕಾರು ಸಮೀಪವಿರುವ ಕಚೇರಿಯಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಎಟಿಪಿ ಯಂತ್ರದಲ್ಲಿದ್ದ ರೂ. 1,93,000 ನಗದು ಕಳವುಗೈಯ್ಯಲಾಗಿದೆ. ಶುಕ್ರವಾರ ಗ್ರಾಹಕರಿಂದ ಸಂಗ್ರಹಿಸಲಾಗಿದ್ದ ಹಣ ಎಟಿಪಿ ಯಂತ್ರದಲ್ಲಿತ್ತು. ಶನಿವಾರ ಬ್ಯಾಂಕ್ ರಜೆಯಿದ್ದ ಹಿನ್ನೆಲೆಯಲ್ಲಿ ನಗದು ಬ್ಯಾಂಕಿಗೆ ವರ್ಗಾವಣೆಗೊಳಿಸಿರಲಾಗಲಿಲ್ಲ. ಈ ನಡುವೆ ಶನಿವಾರ ತಡರಾತ್ರಿ ಶಟರ್ ಒಡೆದು ಒಳನುಗ್ಗಿದ ಕಳ್ಳರು ಎಟಿಪಿ ಯಂತ್ರದೊಳಗೆ ಇದ್ದ ನಗದು ಕಳವು ನಡೆಸಿದ್ದಾರೆ. ಇದೇ ವೇಳೆ ಕಚೇರಿಯಲ್ಲಿರುವ ಅಧಿಕಾರಿಗಳ ಕೊಠಡಿಯಲ್ಲಿಯೂ ಜಾಲಾಡಿದ ಕಳ್ಳರು ಅದರ ಬಾಗಿಲುಗಳನ್ನು ಮುರಿದಿದ್ದಾರೆ. ಭಾನುವಾರ ಬೆಳಿಗ್ಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಬಳಸಿದ ಹತ್ಯಾರುಗಳು ಸ್ಥಳದಲ್ಲಿ ಪತ್ತೆಯಾಗಿದೆ. ಕೆಇಬಿ ಇಂಜಿನಿಯರ್ ಪ್ರವೀಣ್ ಎಂಬವರು ನೀಡಿರುವ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Read More

UN NETWORKS ಮಂಗಳೂರು : ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಅಂತರಾಷ್ಟ್ರೀಯ ಧಾರ್ಮಿಕ ಸಮ್ಮೇಳನದಲ್ಲಿ ಭಾರತ ಸಂಸ್ಕ್ರತಿಯ ಶ್ರೇಷ್ಠತೆಯನ್ನು ಸಾರಿದ ಸವಿನೆನಪಿಗಾಗಿ “ವಿಶ್ವ ವಿಜೇತ” ಕಾರ್ಯಕ್ರಮವನ್ನು ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ ಡಾ.ಪಿ ದಯಾನಂದ ಪೈ-ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ ಇಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ರಾಜಶೇಖರ ಹೆಬ್ಬಾರ್ ಸಿ ಇವರು ಉದ್ಘಾಟಿಸಿದರು. ದೇಶದ ಏಳಿಗೆಗೆ ಯುವಕರೆಲ್ಲ ಜಾಗೃತರಾಗಬೇಕು, ಸುಭದ್ರ ದೇಶವನ್ನು ಕಟ್ಟಲು ಯುವಕರೆಲ್ಲ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು.ಈ ನಿಟ್ಟಿನಲ್ಲಿ ವಿಶ್ವವಿಜೇತ ಕಾರ್ಯಕ್ರಮ ಒಂದು ಉತ್ತಮ ಪ್ರಯತ್ನ ಎಂದು ಶ್ಲಾಘಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಅಕ್ಷಯ ಗೋಖಲೆ, ಉಪನ್ಯಾಸಕರು, ಡಾ ಎನ್.ಎಸ್.ಎ ಎಂ.ಪಿ ಯು ಕಾಲೇಜು ನಿಟ್ಟೆ ಇವರು ವಿವೇಕಾನಂದರ ಜೀವನ ಚಿತ್ರಣ, ಜೀವನ ಸಾಧನೆಗಳನ್ನು ವಿವರಿಸಿದರು.ದೇಶಕ್ಕಾಗಿ ಏನನ್ನಾದರೂ ಸಾಧನೆ ಮಾಡುತ್ತೇನೆ ಎಂಬ ಛಲ ಪ್ರತಿಯೊಬ್ಬ ಯುವಕನಲ್ಲಿ ಮೂಡಿ ಬರಬೇಕು. ಸಿನಿಮಾ ನಟ-ನಟಿಯರನ್ನು ಆದರ್ಶವಾಗಿಟ್ಟುಕೊಳ್ಳದೇ ಯುವಜನತೆ ಪ್ರಬುದ್ಧವಾಗಿ ಯೋಚಿಸಬೇಕು. ವಿವೇಕಾನಂದ, ಭಗತ್‍ಸಿಂಗ್, ಜಾನ್ಸಿ…

Read More

UN NETWORKS ಉಳ್ಳಾಲ : ಕರಾವಳಿ ಬಿಜೆಪಿಯನ್ನು ಎಂದಿಗೂ ಕೈಬಿಟ್ಟಿಲ್ಲ, ಮಂಗಳೂರಿನಲ್ಲಿ ಪೂರ್ಣ ಬಿಜೆಪಿ ಹವಾ ಇದೆ. ಎಲ್ಲಿ ಹೋದರೂ ಮೋದಿ ಯವರ ಗುಣಗಾನ ಕೇಳಿಬರುತ್ತಿದೆ ಎಂದು ವಿಧಾನಪರಿಷತ್ ಸದಸ್ಯೆ ಹಾಗೂ ಚಿತ್ರನಟಿ ತಾರಾ ಹೇಳಿದರು. ಅವರು ಮಂಗಳೂರು ಕ್ಷೇತ್ರದ ಮಾಡೂರು ಸಮೀಪದ ಸೋವೂರು ತಿಂಡಿ ಕಾರ್ಖಾನೆಯ ಕಾರ್ಮಿಕರ ಜತೆಗೆ ಲೋಕಸಭಾ ಚುನಾವಣಾ ಪ್ರಚಾರಾರ್ಥವಾಗಿ ಗುರುವಾರ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಸಂಸದರು ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ತೊಕ್ಕೊಟ್ಟು ಮತ್ತು ಪಂಪ್ ವೆಲ್ ಫ್ಲೈಓವರ್ ಅನುಷ್ಠಾನಗೊಳಿಸುವುದೇ ದೊಡ್ಡ ಸಾಧನೆಯಾಗಿತ್ತು. ಅದನ್ನು ಸಂಸದರು ಮಾಡಿ ತೋರಿಸಿದ್ದಾರೆ. ಆದರೆ ಕೆಲವು ತೊಂದರೆಗಳಿಂದ ಕಾಮಗಾರಿ ವಿಳಂಭಾವಾಗಿದೆ. ಕೈ ಎಂದರೆ ಕೈಕೊಟ್ಟು ಹೋಗುವ ಪಕ್ಷವಾಗಿದೆ. ಕಮಲ ಅಂದರೆ ಲಕ್ಷ್ಮೀ, ಲಕ್ಷ್ಮೀ ಮನೆಗೆ ಬರಬೇಕಾದರೆ ಬಿಜೆಪಿಯನ್ನು ಮತದಾರರು ಬೆಂಬಲಿಸಬೇಕಿದೆ. ಈ ಮೂಲಕ ದೇಶದ ಅಭಿವೃದ್ಧಿಯ ಹರಿಕಾರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕಿದೆ ಎಂದ ಅವರು ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸುವ ವಿಶ್ವಾಸ ಹೆಚ್ಚಿದೆ…

Read More

UN NETWORKS ಕುಂಪಲ‌ : ನಾವು ಮಾಡುವ ಪೂಜೆ , ಕೆಲಸ ಧರ್ಮದ ದಾರಿಯಲ್ಲಿರಬೇಕು. ಮನುಷ್ಯ ತನ್ನ ಇಷ್ಟಾರ್ಥ ಈಡೇರಿಸುವಂತೆ ದೇವರನ್ನು ಮೆಚ್ಚಿಸಲು ನೋಡುತ್ತಾನೆ. ಆದರೆ ನಿಜವಾದ ಭಕ್ತಿಯಲ್ಲಿ ಪ್ರತಿಫಲಾಪೇಕ್ಷೆ ಇರಲೇಬಾರದು ಎಂದು ಉಚ್ಚಿಲ ಬೋವಿ ಶಿಕ್ಷಣ ಸಂಸ್ಥೆಯ ಸಂಚಾಲಕ ದೇವದಾಸ ಉಚ್ಚಿಲ್ ಹೇಳಿದರು.‌ ಕುಂಪಲ‌ ಶ್ರೀ ಬಾಲಕೃಷ್ಣ ಮಂದಿರದ 12ನೇ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ನಾವು ಮಾಡುವ ಎಲ್ಲ ಸೇವೆ ದೇವರು ಕೊಟ್ಟ ಸೇವೆ ಎಂದು ಪರಿಗಣಿಸಿ ಮೋಕ್ಷದ ದಾರಿ ಕಂಡುಕೊಳ್ಳಬೇಕು. ಪ್ರಾಪಂಚಿಕ ಬದುಕಿನಲ್ಲಿ ಮೋಕ್ಷದ ಗುರಿಯನ್ನು‌ ಇಟ್ಟುಕೊಂಡು ಬದುಕಬೇಕಾದುದನ್ನು‌ ಭಗವದ್ಗೀತೆಯಲ್ಲಿ ವಿವರಿಸಿದಂತೆ ಧರ್ಮದಲ್ಲಿ ಬದುಕಿದರೆ ಮಾತ್ರ ಮೋಕ್ಷ ಸಾಧ್ಯ ಎಂದು‌ ನುಡಿದರು. ಮಂಗಳೂರಿನ‌ ಖ್ಯಾತ ನ್ಯಾಯವಾದಿ ಅರುಣ್ ಬಂಗೇರ ಮಾತನಾಡಿ ಭಜನೆ ಮನುಷ್ಯನ‌ಲ್ಲಿ ಶಾಂತಿ ನೆಮ್ಮದಿ ಕರುಣಿಸುತ್ತದೆ. ನಿರಂತರ 22ವರ್ಷ ಭಜನೆ ಸಂಸ್ಕಾರ ಕೊಟ್ಟಿರುವ ಶ್ರೀ ಬಾಲಕೃಷ್ಣ ಮಂದಿರದ ಸೇವಾಕಾರ್ಯ ವೈಖರಿ ಶ್ಲಾಘನೀಯ ಎಂದರು. ಜನರು ದೇವರು ಬಡವ ಎಂದು…

Read More

UN NETWORKS ಪಾನೀರ್ : ಪಾನೀರ್ ಚರ್ಚ್ ಕೆಥೋಲಿಕ್ ಸಭಾ ವತಿಯಿಂದ ಚರ್ಚ್ ವ್ಯಾಪ್ತಿಯ ವಾರ್ಡ್‍ಗಳ ಗುರಿಕಾರರಿಗೆ ಸನ್ಮಾನ ಹಾಗೂ ಮಾಹಿತಿ ಕಾರ್ಯಕ್ರಮ ಭಾನುವಾರ ಚರ್ಚ್‍ನ ಸಭಾಂಗಣದಲ್ಲಿ ನಡೆಯಿತು. ಎಸ್‍ಸಿಸಿ ಸಂಸ್ಥೆಯ ನಿರ್ದೇಶಕ ರೆ.ಫಾ.ಜೋಕಿಮ್ ಫೆರ್ನಾಂಡಿಸ್, ಚರ್ಚ್‍ನ ಧರ್ಮಗುರು ರೆ.ಫಾ.ಡೆನ್ನಿಸ್ ಸುವಾರಿಸ್, ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕೆಥೋಲಿಕ್ ಸಭಾ ಉಳ್ಳಾಲ ವಲಯಾಧ್ಯಕ್ಷ ಅರುಣ್ ಮೊಂತೆರೋ ಮುಖ್ಯ ಅತಿಥಿಗಳಾಗಿದ್ದರು. ಕೆಥೋಲಿಕ್ ಸಭಾ ಪಾನೀರ್ ಘಟಕಾಧ್ಯಕ್ಷ ಸ್ಟ್ಯಾನಿ ರೋಡ್ರಿಗಸ್, ಕಾರ್ಯದರ್ಶಿ ರುವಿತಾ ಮೆನೇಜಸ್, ನಿಯೋಜಿತ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಉಪಸ್ಥಿತರಿದ್ದರು. ಸಿಒಡಿಪಿ ಕಾರ್ಯಕರ್ತೆ ವಾಣಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

Read More

UN NETWORKS ಕುರ್ನಾಡು: ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕ ಚಿಂತನೆಗಳನ್ನು ದೇಶದ ಸರ್ಕಾರಿ ವ್ಯವಸ್ಥೆ ಉಳಿಸಿ, ಬೆಳೆಸುವ ವಿಶ್ವಾಸವಿಲ್ಲ. ಜನರೇ ಆ ಕೆಲಸ ಮಾಡಬೇಕು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ. ಬಂಟ್ವಾಳ ತಾಲೂಕು ಅಮ್ಮೆಂಬಳದ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕ ಉತ್ಸವ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು. ನಮ್ಮ ನಾಡಿನಲ್ಲಿ ನಾಗರಿಕತೆಯೊಂದಿಗೇ ಶಾಸ್ತ್ರೀಯ, ಜನಪದ ಚಿಂತನೆಗಳು ಬೆಳೆದುವ ಬಂದಿವೆ. ಆದರೂ ಜಾಗತಿಕ ಚಿಂತನೆ ಎದುರು ಪರಂಪರೆಯ ಚಿಂತನೆ, ಭಾಷೆಯ ಚಿಂತನೆ ಮಾಯವಾಗ್ತಾ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಡಾ.ಆಳ್ವ, ಜಪಾನ್‍ನಂತಹ ದೇಶದಲ್ಲೂ ಇಂದು ಧಾರ್ಮಿಕ ಚಿಂತನೆಗಳು ಮರೆಯಾಗುತ್ತಾ ಇವೆ. ಅಮೆರಿಕಾದಂತಹ ದೇಶಗಳಲ್ಲೂ ಆರಾಧನಾ ಕೇಂದ್ರಗಳಿಗೆ ಆಸ್ತಿಕರ ಭೇಟಿಯ ಸಂಖ್ಯೆ ಇಳಿಮುಖವಾಗುತ್ತಿದೆ. ಏನೇ ಆದರೂ ಭಾರತೀಯ ರಕ್ತದಿಂದ ಧಾರ್ಮಿಕ ಚಿಂತನೆಯನ್ನು ತೆಗೆಯಲು ಯಾರಿಗೂ ಸಾಧ್ಯವಿಲ್ಲ ಎಂದರು. ಧಾರ್ಮಿಕ ಉಪನ್ಯಾಸ ನೀಡಿದ ಕಲಾವಿದ, ವಿದ್ವಾಂಸ ಕದ್ರಿ…

Read More

UN NETWORKS ಕೋಟೆಕಾರ್ : ಮನೆ ಕಾಯುವ ಮಹಿಳೆ ದೇಶ ಕಾಯ ಬಲ್ಲಳು ಎಂದು ತೋರಿಸಿದ ಪ್ರಧಾನಿ ನರೇಂದ್ರ ಮೋದಿಯವರು ರಕ್ಷಣಾ ಇಲಾಖೆಯಂತಹ ಮಹತ್ವದ ,ಸವಾಲಿನ ಸಚಿವ ಸ್ಥಾನವನ್ನು ಮಹಿಳೆಗೆ ನೀಡಿ ಸ್ತ್ರೀ ಶಕ್ತಿಗೆ ಗೌರವ ನೀಡಿದವರು. ಎಂದು ರಾಜ್ಯ ಬಿ.ಜೆ.ಪಿ. ಸಹ ವಕ್ತಾರೆ ಸುಲೋಚನ ಜಿ.ಕೆ.ಭಟ್ ರವರು ತಿಳಿಸಿದರು. ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರದ ಕೋಟೆಕಾರ್ ಶಕ್ತಿ ಕೇಂದ್ರದ ಮಹಿಳಾ ಮೋರ್ಚಾದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ನರೇಂದ್ರ ಮೋದಿಯವರು ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಮಹಿಳಾ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮ ಮುಖೇನ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಮುದ್ರಾ ಯೋಜನೆ ಮೂಲಕ ಸ್ವ ಉದ್ಯೋಗ, ಉಜ್ವಲಾ ಯೋಜನೆ ಮೂಲಕ ಗ್ಯಾಸ್ ಸ್ಟವ್ ವಿತರಣೆ, ಗರ್ಭಿಣಿ ಮಹಿಳೆಯರಿಗೆ 6000 ರೂ , ಉದ್ಯೋಗಸ್ಥ ಗರ್ಭಿಣಿ ಮಹಳೆಯರ ಬಾಣಂತಿ ರಜೆ ಆರು ತಿಂಗಳಿಗೆ ವಿಸ್ತರಣೆ ಇಂತ ಹತ್ತು ಹಲವು ಯೋಜನೆ ನೀಡಿರುತ್ತಾರೆ ಎಂದರು. ಕ್ಷೇತ್ರಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ರವರು ಮಹಿಳಾ ಮೋರ್ಚಾದ…

Read More

UN NETWORKS ಕುರ್ನಾಡು : ಅಮ್ಮೆಂಬಳ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ ಬುಧವಾರ ಸಂಜೆ ನಡೆಯಿತು.ಬೋಳ್ಯಾರು ಜಂಕ್ಷನ್ ನಲ್ಲಿ ನಾರ್ಯಗುತ್ತು ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ಶೋಭಾಯಾತ್ರೆಗೆ ಚಾಲನೆ ನೀಡಿದರು.ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಹೊರೆಕಾಣಿಕೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಬಳಿಕ ದೇವಸ್ಥಾನದ ರಥಗದ್ದೆಯಲ್ಲಿ ಉಗ್ರಾಣ ಮುಹೂರ್ತವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಕುರ್ನಾಡುಗುತ್ತು ಡಾ.ಎಚ್.ಬಾಲಕೃಷ್ಣ ನಾಯ್ಕ್ ನೆರವೇರಿಸಿದರು.ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಎಚ್.ಬಾಲಕೃಷ್ಣ ನಾಯ್ಕ್, ಹೊರೆಕಾಣಿಕೆ ಸಮಿತಿ ಸಂಚಾಲಕ ಸಂತೋಷ್ ಕುಮಾರ್ ರೈ ಬೋಳ್ಯಾರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಭಟ್ ಕಾಡಿಮಾರು, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಟ.ಜಿ‌.ರಾಜಾರಾಮ ಭಟ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಮಿತ್ತಕೋಡಿ, ಕಾರ್ಯಾಧ್ಯಕ್ಷ ನರಸಿಂಹ ಹೆಗ್ಡೆ ಕುರ್ನಾಡುಗುತ್ತು, ಜೀರ್ಣೋದ್ಧರ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಫಜೀರುಗುತ್ತು ಸಹಿತ ಸಮಿತಿ ಪ್ರಮುಖರು, ಸಹಸ್ರಾರು ಗ್ರಾಮಸ್ಥರು ಪಾಲ್ಗೊಂಡರು. ತಂತ್ರಿಗಳ ಆಗಮನ: ಸಂಜೆ 7 ಗಂಟೆಗೆ ತಂತ್ರಿವರ್ಯರ…

Read More

UN NETWORKS ಕಣಚೂರು: ದಾದಿಯರನ್ನು ವೈದ್ಯರೇ ನಿಯಂತ್ರಿಸುತ್ತಾರೆ ಅನ್ನುವ ತಪ್ಪು ಮಾಹಿತಿಯಿದೆ. ಆದರೇ ಜ್ಞಾನ ಸಂಪಾದನೆಯಿಂದ , ತಮ್ಮ ಕರ್ತವ್ಯದ ಅರಿವು ಇದ್ದಲ್ಲಿ ಯಾರನ್ನೂ ಅನುಸರಿಸುವ ಅಗತ್ಯ ದಾದಿಯರಿಗೆ ಇರುವುದಿಲ್ಲ ಎಂದು ನಿಟ್ಟೆ ಉಷಾ ನರ್ಸಿಂಗ್ ವಿಜ್ಞಾನ ಸಂಸ್ಥೆಗಳ ಪ್ರಾಂಶುಪಾಲೆ ಡಾ. ಫಾತಿಮಾ ಡಿಸಿಲ್ವಾ ಎಂದು ಅಭಿಪ್ರಾಯಪಟ್ಟರು. ಅವರು ಕಣಚೂರು ಕಾಲೇಜು ನರ್ಸಿಂಗ್ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ನಾಟೆಕಲ್ ಕಣಚೂರು ಸಂಸ್ಥೆಯಲ್ಲಿ ಜರಗಿದ ‘ ರಿಸರ್ಚ್ ಮೆಥಡಾಲಜಿ: ಕರೆಂಟ್ ಸಿನಾರಿಯೊ ಆಂಡ್ ಅಪರ್ಚುನಿಟೀಸ್ ‘ ಕುರಿತ ರಾಜ್ಯಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿದರು.ಇತಿಹಾಸದಲ್ಲಿ ಯುದ್ಧ ಸಂದರ್ಭ ಸೈನಿಕರ ಶುಶ್ರೂಷೆಗೆ ಶ್ರಮಿಸಿದ ದೀದಿಯರ ಕಾರ್ಯವೈಖರಿ ಯಿಂದಾಗಿ ಹುದ್ದೆಯೆ ಪ್ರತಿಷ್ಠೆ ಹೆಚ್ಚಿತ್ತು. ಆ ಬಳಿಕ ದೀದಿಯರ ತರಬೇತು ಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಸಾಧನೆಗಳು ಮುಂದುವರಿದಿದೆ. ದೀದಿಯರ ವಿವಿಧ ತರಬೇತಿಗಳಿಗೆ ಸಂಶೋಧನೆಗಳು ಈಗಲೂ ನಡೆಯುತ್ತಿವೆ. ದೀದಿಯರ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿ ಡಿಪ್ಲೋಮಾ ಮಾತ್ರ ಸಾಕಾಗದು, ಇನ್ನಷ್ಟು ಅಭಿವೃದ್ಧಿ ಆಗಬೇಕು ಅನ್ನುವ ಉದ್ದೇಶದಿಂದ ಉನ್ನತ ಶೈಕ್ಷಣಿಕ ವಿಭಾಗಗಳು ಆರಂಭವಾಗಲು ಸಂಶೋಧನೆಗಳು ಸಹಕಾರಿಯಾಯಿತು.…

Read More

UN NETWORKS ಉಳ್ಳಾಲ: ಕ್ಯಾನ್ಸರ್ ಕುರಿತ ಕ್ಲಿನಿಕಲ್ ಸಂಶೋಧನೆಗಳು ದೇಶದಲ್ಲಿ ಅತ್ಯಂತ ಕಳಪೆ ಮಟ್ಟದಲ್ಲಿವೆ. ಸರಕಾರಗಳು ಈ ಕುರಿತು ಗಂಭೀರ ಚಿಂತನೆಯನ್ನು ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಯೆನೆಪೋಯ ವಿಶ್ವವಿದ್ಯಾಲಯ ದ ಕುಲಪತಿ ಡಾ.ಎಂ ವಿಜಯಕುಮಾರ್ ಅಭಿಪ್ರಾಯಪಟ್ಟರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಫಾರ್ಮಸಿ ಕಾಲೇಜಿನ ಆಶ್ರಯದಲ್ಲಿ ದೇರಳಕಟ್ಟೆ ಪಾನೀರು ಕ್ಯಾಂಪಸ್ ಆಡಿಟೋರಿಯಂ ನಲ್ಲಿ ಗುರುವಾರ ಜರಗಿದ ಇಂಡಿಯನ್ ಫಾರ್ಮಕಾಲೊಜಿಕಲ್ ಸೊಸೈಟಿ ಪ್ರಾಯೋಜಿತ ` ನ್ಯಾಷನಲ್ ಸಿಂಪೋಸಿಯಂ ಆಂಡ್ ವರ್ಕ್ಶಾಪ್ ಆನ್ ಎಮರ್ಜಿಂಗ್ ಪರ್ಸೆಪೆಕ್ಟಿವ್ಸ್ ಇನ್ ಪ್ರಿ ಕ್ಲಿನಿಕಲ್ ಆಂಡ್ ಕ್ಲಿನಿಕಲ್ ರಿಸರ್ಚ್ ‘ ಕುರಿತ ಒಂದು ದಿನದ ರಾಷ್ಟ್ರ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ಕೆಲಸವಿಲ್ಲದವರು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಅನ್ನುವ ಮಾಹಿತಿಯ ಕೊರತೆ ಸರಕಾರಗಳಿಗಿವೆ. ಇದರಿಂದಾಗಿ ಕ್ಲಿನಿಕಲ್ ಸಂಶೋಧನೆಗಳು ಬಹಳಷ್ಟು ಹಿನ್ನೆಡೆಯನ್ನು ಪಡೆದುಕೊಂಡಿದೆ. ನೂತನ ಡ್ರಗ್ ಸಂಶೋಧಿಸಿದರೂ ಅದನ್ನು ಮಾನವ ರಹಿತ ಪ್ರಯೋಗಕ್ಕೆ ಬಳಸಲು ಮುಂದಾದರೂ, ಸರಕಾರದಿಂದ ಬೆಂಬಲ ದೊರೆಯುತ್ತಿಲ್ಲ. ಉತ್ತಮ ವೈದ್ಯಕೀಯ ಅಭ್ಯಾಸ (ಜಿಸಿಪಿ ಗುಡ್…

Read More