UN NETWORKS ಸಜೀಪ : ಕಾರು-ರಿಕ್ಷಾ ಪರಸ್ಪರ ಢಿಕ್ಕಿಯಾಗಿ ರಿಕ್ಷಾದಲ್ಲಿದ್ದ ಮಹಿಳೆಯರಿಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ಸಜೀಪ ಸಮೀಪದ ಚೇಳೂರು ಎಂಬಲ್ಲಿ ನಡೆದಿದೆ.ಮೃತಪಟ್ಟ ಸಹೋದರಿತರಿಬ್ಬರನ್ನು ಮಂಚಿ ನಿವಾಸಿ ಝೈನಬಾ(45) ಹಾಗೂ ಝೊಹರಾ (55) ಎಂದು ಗುರುತಿಸಲಾಗಿದೆ. ಅವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ಝೊಹರಾರಿಗೆ ಅಸೌಖ್ಯದ ಹಿನ್ನೆಲೆಯಲ್ಲಿ ಝೈನಬಾ ಅವರು ಮಂಚಿಯಿಂದ ರಿಕ್ಷಾ ಬಾಡಿಗೆಗೆ ಗೊತ್ತು ಮಾಡಿ ವೈದ್ಯರ ಬಳಿ ತೆರಳುತ್ತಿದ್ದರು. ಸಜೀಪ ಪಡು ಗ್ರಾಮದ ಕಂಚಿಲ ಎಂಬಲ್ಲಿ ಕಾರೊಂದು ಅತೀ ವೇಗವಾಗಿ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಿಂದ ನಿಯಂತ್ರಣ ತಪ್ಪಿ ಸಜೀಪ ಕಡೆಯಿಂದ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಾಗ ರಿಕ್ಷಾ ಪಲ್ಟಿಯಾಗಿದೆ. ಈ ಸಂದರ್ಭ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡುಹೋಗುವ ದಾರಿ ಮಧ್ಯೆ ಇವರು ಮೃತಪಟ್ಟರು ಎಂದು ತಿಳಿದುಬಂದಿದೆ. ರಿಕ್ಷಾ ಚಾಲಕ ಆಶ್ರಫ್ ಹಾಗೂ ಕಾರು ಚಾಲಕ ಮುಹಮ್ಮದ್ ಸಿರಾಜ್ ಗಂಭೀರ ಗಾಯಗೊಂಡು ಮಂಗಳೂರು…
Author: UllalaVani
UN NETWORKS ಉಳ್ಳಾಲ : ಎಲ್ಲಾ ಸಮಯದಲ್ಲೂ ತಾನು ದೇವನ ಮುಂದೆ ಇದ್ದೇನೆ ಎನ್ನುವ ಭಯದಲ್ಲಿ ಜೀವನ ಸಾಗಿಸಿದಾಗ ಭೂಲೋಕದಲ್ಲಿನ ಜೀವನ ಯಶಸ್ವಿಯಾಗಿ ನಿಭಾಯಿಸಲು ಸಾಧ್ಯ ಎಂದು ಸಮಸ್ತ ಕೇರಳ ಜಂಇಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಅಭಿಪ್ರಾಯಪಟ್ಟರು. ಸೋಮೇಶ್ವರ ಉಚ್ಚಿಲ 407 ಜುಮಾ ಮಸೀದಿ ಅಸ್ಸಯ್ಯಿದ್ ಶರೀಫ್ ಅಲ್ ಅರಬಿ ವಲಿಯುಲ್ಲಾಹಿ(ಖ.ಸ) ಉರೂಸ್ ನೇರ್ಚೆ ಹಾಗೂ ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ತನ್ನದೆಲ್ಲವನ್ನೂ ದೇವನಿಗೆ ಅರ್ಪಿಸಿ ಜೀವನ ನಡೆಸಿದ ಮಹಾತ್ಮರ ಹೆಸರಲ್ಲಿ ಎರಡು, ಮೂರು ಅಥವಾ ಐದು ವರ್ಷಗಳ ಬಳಿಕ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆಗಳು, ಅನ್ನದಾನ, ಧಾರ್ಮಿಕ ಪ್ರವಚನಗಳು ನಡೆಯಬೇಕು. ಈ ಮೂಲಕ ನಮ್ಮಲ್ಲಿ ಧಾರ್ಮಿಕ ಭಾವನೆ ಇನ್ನಷ್ಟು ಹೆಚ್ಚಾಗಿ ಅಂತರರಂಗ ಮತ್ತು ಬಹಿರಂಗ ಶುದ್ಧಿಯಾಗಬೇಕಿದೆ ಎಂದು ಹೇಳಿದರು. ಮುಖ್ಯ ಭಾಷಣ ಮಾಡಿದ ಯಾಸೀನ್ ಜೌಹರಿ ಕೊಲ್ಲಂ, ಇಹಲೋಕ ಜೀವನ ಶಾಶ್ವತವಲ್ಲ, ರಾಜಕಾರಣಿಗಳು ಅಧಿಕಾರಕ್ಕಾಗಿ ಪ್ರತಿಸ್ಪರ್ಧಿ ಉತ್ತಮ…
UN NETWORKS ಕೊಣಾಜೆ : ಇಂದಿನ ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದರೊಂದಿಗೆ ಅವರ ಸೃಜನಾತ್ಮಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಪದ್ಮಶ್ರೀ ಡಾ. ಸಯ್ಯದ್ ಎಂ.ಎಚ್.ಕಿರ್ಮಾನಿ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಕ್ರೀಡಾಕೂಟದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ, ಅಂತರ್ ವಿಶ್ವವಿದ್ಯಾಲಯ ಹಾಗೂ ಅಂತರ್ ಕಾಲೇಜು ಮಟ್ಟದಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ಕ್ರೀಡಾ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಂದು ತಂತ್ರಜ್ಞಾನ ಮುಂದುವರಿದಿದ್ದು ತಮ್ಮ ಮಕ್ಕಳ ಬಗ್ಗೆಯೇ ಪೋಷಕರಿಗೆ ಗಮನ ನೀಡಲು ಸಾಧ್ಯವಾಗುತಿಲ್ಲ. ಇದರಿಂದ ಮಕ್ಕಳ ಬೆಳವಣಿಯಲ್ಲೂ ಪರಿಣಾಮ ಬೀರುತ್ತಿದೆ. ಎಷ್ಟೇ ಕಷ್ಟವಾದರೂ ಮಕ್ಕಳ ಕಲೆಗಾರಿಕೆಯನ್ನು ಗುರುತಿಸಿ ಅವರಿಗೆ ನಿರಂತರ ಪ್ರೋತ್ಸಾಹ ನೀಡುವ ಜವಬ್ಧಾರಿ ಪೋಷಕದ್ದಾಗಿದೆ. ಇಂದು ಕ್ರೀಡಾ ಕ್ಷೇತ್ರಕ್ಕೆ ಉತ್ತಮ ಪ್ರೋತ್ಸಾಹ ದೊರಕುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯವು ಕ್ರೀಡಾಕೂಟದ ಸಾಧನೆಯೊಂದಿಗೆ ಗುರುತಿಸಿಕೊಂಡಿದ್ದು, ಕ್ರೀಡಾಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.…
ಉಳ್ಳಾಲ : ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಶನಿವಾರ ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ದೇವಸ್ಥಾನದ ಆಡಳಿತ ಮೊಕ್ತೇಸರ ದೇವು ಮೂಲ್ಯಣ್ಣ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು , ನಗರಸಭೆ ಸದಸ್ಯೆ ವೀಣಾ ಡಿಸೋಜಾ, ನಗರಸಭೆ ಮಾಜಿ ಸದಸ್ಯೆ ಯು.ಕೆ ಗೋಪಾಲ ಕೊಟ್ಟಾರ, ಸ್ಥಳೀಯರಾದ ಸ್ಟೀವನ್ ಕೊಟ್ಟಾರ, ಅವಿನಾಶ್ ಕೊಟ್ಟಾರ, ಆನಂದ ಮೆಂಡನ್ ಉಳಿಯ, ಇಸ್ಮಾಯಿಲ್ ಸೀದಿಯಬ್ಬ, ಪೊಡಿಮೋನು ಇಸ್ಮಾಯಿಲ್, ಜಾನ್ ಡಿಸೋಜ, ನವೀನ್ ಡಿಸೋಜಾ, ಪ್ರೇಮ್ ಪ್ರಕಾಶ್, ಹೆರಾಲ್ಡ್ ಡಿಸೋಜಾ, ಅಫ್ರೀದಿ ಹುಸೈನ್ ಕೊಟ್ಟಾರ, ಅಹಮ್ಮದ್ ಬಾವ ಕೊಟ್ಟಾರ ಉಪಸ್ಥಿತರಿದ್ದರು.
ಉಳ್ಳಾಲ: ಜಿಲ್ಲಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಶನಿವಾರ ಮಂಗಳೂರು ಕ್ಷೇತ್ರದ ವಿವಿಧೆಡೆ ಧಾರ್ಮಿಕ ಸ್ಥಳ ಹಾಗೂ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು. ಸಚಿವ ಯು.ಟಿ ಖಾದರ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಕುಳಿತು ಪ್ರಚಾರ ಕಾರ್ಯದಲ್ಲಿ ತೊಡಗಿದರು. ಮಂಜನಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸೈಯ್ಯಿದ್ ಇಸ್ಮಾಯಿಲ್ ವಲೀಯುಲ್ಲಾಹಿ ದರ್ಗಾ ಮಂಜನಾಡಿ ಸಹಿತ ಬೋಳಿಯಾರು, ಕೊಣಾಜೆ, ಅಂಬ್ಲಮೊಗರು, ಹರೇಕಳ, ಕಿನ್ಯಾ, ಕೆ.ಸಿ.ರೋಡು, ಉಳ್ಳಾಲ ಭಾಗದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.
ತೊಕ್ಕೊಟ್ಟು : ಅಮೆರಿಕಾದಲ್ಲಿ ಕರ್ತವ್ಯ ನಿರ್ವಹಿಸುವವರು ಮತ ಚಲಾವಣೆಗೆ ಲಕ್ಷಾಂತರ ಖರ್ಚು ಮಾಡಿ ಭಾರತಕ್ಕೆ ಬರುತ್ತಾರೆ ಎಂದರೆ ಅದು ಮೋದಿ ಭಾರತದಿಂದ ಮಾತ್ರ ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬಿಜೆಪಿ ಮಂಗಳೂರು ಕ್ಷೇತ್ರದ ವತಿಯಿಂದ ತೊಕ್ಕೊಟ್ಟುವಿನಿಂದ ಕೋಟೆಕಾರುವರೆಗೆ ನಡೆಸಿದ ರೋಡ್ ಷೋ ನಲ್ಲಿ ಭಾಗವಹಿಸಿ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೋದಿ ಮತ್ತೊಮ್ಮೆ ಪ್ರಧಾನಿಯಾದಲ್ಲಿ ಮಾತ್ರ ದೇಶಕ್ಕೆ ಭವಿಷ್ಯವಿದೆ. ಅಮೆರಿಕಾದ ಇಂಜಿನಿಯರ್ ಆಗಿರುವ ಯುವತಿ ಜಾಲತಾಣದ ಮೂಲಕ ಮೋದಿಗೆ ಮತ ಚಲಾಯಿಸಲು ದೇಶಕ್ಕೆ ಬರುವುದಾಗಿ ಹೇಳಿಕೊಂಡಿದ್ದಾಳೆ. ಇದು ಪ್ರಧಾನಿ ಮೋದಿ ಮೇಲೆ ಇಟ್ಟಿರುವ ಗೌರವ ಹಾಗೂ ಅವರ ಕಾರ್ಯವೈಖರಿ ಇಂತಹ ನಿಲುವಿಗೆ ಕಾರಣವಾಗಿದೆ. ಭಾರತೀಯರೆಂದರೆ ವಿಮಾನ ನಿಲ್ದಾಣಗಳಲ್ಲಿ ತಾತ್ಸಾರ ಭಾವನೆಗಳಿತ್ತು. ಆದರೆ ಕಳೆದ ಐದು ವರ್ಷಗಳಿಂದ ಭಾರತೀಯರಿಗೆ ವಿಶೇಷ ಗೌರವ ಸಿಗುವಂತಹ ಕೆಲಸವಾಗುತ್ತಿದೆ. ಮಹಾಘಟಬಂಧನದಲ್ಲಿ ಪ್ರಧಾನಿ ಆಗುವುದು ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗಾಗದ ಸ್ಥಿತಿ ಘಟಬಂಧನದಲ್ಲಿದೆ.…
ತೊಕ್ಕೊಟ್ಟು: ಪತ್ನಿ, ಮಕ್ಕಳ, ಕುಟುಂಬಿಕರ ಏಳಿಗೆಯನ್ನು ಬಯಸದೆ ಕೇವಲ ದೇಶದ ಹಿತಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿರಿಸಿಕೊಂಡ ಪ್ರಧಾನಿ ಮೋದಿಯವರನ್ನು ಜನತೆ ಬೆಂಬಲಿಸಬೇಕಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ತೊಕ್ಕೊಟ್ಟು ಒಳಪೇಟೆಯ ಶ್ರೀ ಮೂಕಾಂಬಿಕಾ ಕ್ಲೋತ್ ಸ್ಟೋರ್ಸ್ ನಲ್ಲಿ ಶನಿವಾರ ಕಾರ್ಮಿಕರ ಜತೆಗಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಕುಟುಂಬದ ಏಳಿಗೆಗಾಗಿ ಶ್ರಮಿಸುವುದೇ ರಾಜಕಾರಣ ಎಂದು ರಾಜಕಾರಣಿಗಳು ಬಾಳುತ್ತಿದ್ದಾರೆ. ಆದರೆ ದೇಶದ ಏಳಿಗೆಯನ್ನು ಮನದಲ್ಲಿಟ್ಟುಕೊಂಡು ಶ್ರಮಿಸಲು ರಾಜಕೀಯ ಎಂಬುವುದನ್ನು ಪ್ರಧಾನಿ ತೋರಿಸಿಕೊಟ್ಟಿದ್ದಾರೆ. ಸ್ವ ಉದ್ಯೋಗದಿಂದ ಹಿಡಿದು ಪ್ರತಿಯೋರ್ವ ಭಾರತೀಯ ಪ್ರಜೆ ಸ್ವಾಭಿಮಾನದಿಂದ ಬದುಕುವಂತಹ ವಾತಾವರಣವನ್ನು ಕಲ್ಪಿಸುತ್ತಾ ಸಾಗುತ್ತಿರುವ ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕಿದೆ ಎಂದರು. ಈ ಸಂದರ್ಭ ಕಂಪೆನಿ ಮಾಲೀಕ ಚಂದ್ರಹಾಸ್ ಪಂಡಿತ್ ಹೌಸ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್, ಹರಿಯಪ್ಪ ಸಾಲ್ಯಾನ್, ಜೈ ವೀರಮಾರುತಿ ವ್ಯಾಯಾಮ ಶಾಳೆಯ ಅಧ್ಯಕ್ಷ ಸುರೇಶ್ ಶೆಟ್ಟಿ , ನಗರಸಭೆ ಮಾಜಿ ಸದಸ್ಯ ಭಗವಾನ್ ತೊಕ್ಕೊಟ್ಟು ಮುಂತಾದವರು ಉಪಸ್ಥಿತರಿದ್ದರು.
ಉಳ್ಳಾಲ: ಮಂಡ್ಯದಲ್ಲಿ ನಿಖಿಲ್ ನೋಟಿಗೆ ಸುಮಲತಾಗೆ ಓಟು ಪಡೆಯಲಿದ್ದಾರೆ. ಹಣಬಲದ ಮೇಲೆ ಕಾಂಗ್ರೆಸ್-ಜೆಡಿಎಸ್ ಚುನಾವಣೆಯನ್ನು ಎದುರಿಸುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ತೊಕ್ಕೊಟ್ಟು ಕಾಪಿಕಾಡಿನ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಅವರನ್ನು ಸೋಲಿಸಲು ಮುಖ್ಯಮಂತ್ರಿ ವ್ಯಾಪಕವಾಗಿ ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ ಮತದಾರರು ನಿಖಿಲ್ ನೋಟಿನ ರಾಜಕೀಯವನ್ನು ಧಿಕ್ಕರಿಸಿ ಸುಮ¯ತಾ ಓಟು ಹಾಕಿ ಜಯಗಳಿಸಲಿದ್ದಾರೆ. ಶಿವಮೊಗ್ಗದಲ್ಲಿ ದೇವೇಗೌಡ ಕುಟುಂಬದ ಆಪ್ತ ಹಾಗೂ ಸಂಬಂಧಿ ಪರಮೇಶ್ವರ ಎಂಬಾತನ ಮನೆಯಿಂದ 6 ಕೋಟಿ ನಗದು ಹಾಗೂ ಕೋಟ್ಯಂತರ ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ತಪ್ಪಿತಸ್ಥ ಪರಮೇಶ್ವರ ಸರಕಾರಿ ಗುತ್ತಿಗೆದಾರರಿಂದ ಹಣ ಸಂಗ್ರಹಿಸಿರುವುದಾಗಿ ಗೊತ್ತಾಗಿದೆ. ಜನತೆ ಮುಂದೆ ಪ್ರಾಮಾಣಿಕರೆಂದು ನಾಟಕವಾಡುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನತೆ ಮುಂದೆ ಕ್ಷಮೆಯಾಚಿಸಬೇಕು ಎಂದ ಅವರು ರಾಜ್ಯದ ಮೈತ್ರಿ ಸರಕಾರದ ಒಗ್ಗಟ್ಟಿನ ಕೊರತೆಯಿಂದಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿಗೊಂಡಿದೆ. ಕುಡಿಯುವ ನೀರು, ಮೂಲಭೂತ ಸೌಕರ್ಯಗಳು ಸಿಗದೇ ರಾಜ್ಯಾದ್ಯಂತ ಮತದಾನ…
ಉಳ್ಳಾಲ: ಎ.18 ರಂದು ತಪ್ಪದೇ ಮತದಾನ ಮಾಡಬನ್ನಿ ಅನ್ನುವ ಘೋಷ ವಾಕ್ಯದಡಿ ಜಿಲ್ಲಾಡಳಿತ ವತಿಯಿಂದ, ಉಳ್ಳಾಲ ನಗರಸಭೆ ನೇತೃತ್ವದಲ್ಲಿ ಉಳ್ಳಾಲದ ಸಮುದ್ರ ತೀರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಳೊಂದಿಗೆ ಮತಾದನ ಜಾಗೃತಿ ಕುರಿತ ಹಬ್ಬ ನಡೆಯಿತು. ಕಿನ್ಯಾ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಲದ ಆಶ್ರಯದಲ್ಲಿ ಮತದಾನ ಜಾಗೃತಿಯ ಯಕ್ಷಗಾನ , ಜಯಪ್ರಸಾದ್ ಆಚಾರ್ಯ ಇವರ ನೇತೃತ್ವದ ಸ್ಪರ್ಶ ಕಲಾವಿದರಿಂದ ಮರಳು ಶಿಲ್ಪಕಲೆ, ಉಳ್ಳಾಲ ಕಡಲ ಕಿನಾರೆಯಲ್ಲಿ ಬಲೆಬೀಸಿ ಮೀನು ಹಿಡಿಯುವ ಸ್ಪರ್ಧೆ , ರೋಷನಿ ನಿಲಯ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತೆ ಜಾಗೃತಿಗಾಗಿ ಬೀದಿ ನಾಟಕ ಹಾಗೂ ಉಳ್ಳಾಲದಿಂದ ಮುಕ್ಕಚ್ಚೇರಿವರೆಗಿನ ಸಮುದ್ರ ತೀರದಲ್ಲಿ ಸಾರ್ವಜನಿಕರಿಂದ ಮಾನವ ಸರಪಳಿ ನಡೆಯಿತು. ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ನಗರಸಭೆ ಆಯುಕ್ತ ಶ್ರೀನಿವಾಸ ಮೂರ್ತಿ, ಮೊಗವೀರ ಮುಖಂಡರುಗಳಾದ ದಯಾನಂದ, ಮನೋಜ್ ಸಾಲ್ಯಾನ್, ವಾಸುದೇವ ರಾವ್ ಉಪಸ್ಥಿತರಿದ್ದರು. ಉಳ್ಳಾಲ ಪೊಲೀಸರು, ಕರಾವಳಿ ಕಾವಲು ಪೊಲೀಸ್ ಹಾಗೂ ಕರಾವಳಿ ನಿಯಂತ್ರಣ…
UN NETWORKS ಹರೇಕಳ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆ, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ ಹಾಗೂ ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಿನೂತನ ಶೈಲಿಯ ಬೇಸಿಗೆ ಶಿಬಿರ “ಚಿಣ್ಣರ ಚಿಲುಮೆ 2019” ಇದರ ಉದ್ಘಾಟನಾ ಸಮಾರಂಭ ನಡೆಯಿತು. ಉದ್ಘಾಟನೆಯನ್ನು ಡ್ರಾಮ ಜೂನಿಯರ್ ಸೀಸನ್ 2 ಇದರ ವಿಜೇತೆ ಜೂನಿಯರ್ ಲಕ್ಷ್ಮೀ ಎಂದೇ ಕೀರ್ತಿ ಪಡೆದಿರುವ ಬಾಲ ನಟಿ ಕುಮಾರಿ ವಂಶಿ ರತ್ನಕುಮಾರ್ ಉದ್ಘಾಟಿಸಿ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅಂತಹ ಪ್ರತಿಭೆಗಳು ಬೆಳಗಬೇಕಾದರೆ ಇಂತಹ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ ಮತ್ತು ಗೈಡ್ಸ್ ಇದರ ಜಿಲ್ಲಾ ಮುಖ್ಯ ಆಯುಕ್ತರಾದ ಎನ್.ಜಿ.ಮೋಹನ್ ಅವರು ವಹಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸ್ಕೌಟ್ಸ್ ಗೈಡ್ಸ್ ಪೂರಕವಾಗಿ…

