Author: UllalaVani

Kannada News From Coastal Karnataka

Un networks ಮಂಗಳೂರು : ಮದುವೆ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸಿ ಡಿ.ಜೆ ಹಾಕಿ ಡ್ಯಾನ್ಸ್ ಮಾಡಿರುವ ಹಿನ್ನೆಲೆಯಲ್ಲಿ ಅಡ್ಯಾರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀಡಿರುವ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ಸರಕಾರದ ಕೋವಿಡ್-19 ನಿಂiÀiಮಾವಳಿಗಳನ್ನು ಉಲ್ಲಂಘಿಸಿರುವ ಕಾಯ್ದೆಗಳಡಿ ಮದುಮಗ ಹಾಗೂ ಆತನ ತಂದೆಯ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಡ್ಯಾರು ಗುಡ್ಡೆಮನೆಯ ರಂಜಿತ್ ಎಂಬವರ ಮದುವೆ ಮೇ. 9ರಂದು ಸಿದ್ದಕಟ್ಟೆಯಲ್ಲಿ ನಡೆದಿತ್ತು.ಅದಕ್ಕಾಗಿ ಅಡ್ಯಾರು ಗ್ರಾಮ ಪಂಚಾಯಿತಿನಿಂದ 25 ಮಂದಿ ಭಾಗವಹಿಸುವ ಕುರಿತು ಅನುಮತಿಯನ್ನು ಪಡೆದಿದ್ದರು. ಮದುವೆಯಿಂದ ವಾಪಸ್ಸಾದ ನಂತರ ಮನೆಯಲ್ಲಿ ರಾತ್ರಿ ಮೈಕ್ ಅಳವಡಿಸಿ ಸಾರ್ವಜನಿಕರನ್ನು ಸೇರಿಸಿಕೊಂಡು ಡಿಜೆ ಆಯೋಜಿಸಿದ್ದರು. ಈ ಕುರಿತ ವೀಡಿಯೋ ಒಂದು ವೈರಲ್ ಆದ ಹಿನ್ನೆಲೆಯಲ್ಲಿ ಅಡ್ಯಾರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ಕೃಷ್ಣ ನಾಯಕ್ ಅವರು ಮದುಮಗ ರಂಜಿತ್ ಮತ್ತವರ ತಂದೆ ದಾಮೋದರ್ ಶೆಟ್ಟಿಗಾರ್ ವಿರುದ್ಧ ದೂರು ದಾಖಲಿಸಿದ್ದರು. ಅದರಂತೆ ವಿಪತ್ತು ನಿರ್ವಹಣಾ ಕಾಯ್ದೆಯಡಿ…

Read More

UN networks ಉಳ್ಳಾಲ: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೋವಿಡ್ ಟಾಸ್ಕ್ ಫೋರ್ಸ್‍ನಿಂದ ಸೋಂಕಿತರ ಹಾಗೂ ಅವರ ಮನೆಮಂದಿಯನ್ನು ಆದಷ್ಟು ಕೋವಿಡ್ ಸೆಂಟರಿಗೆ ಹಾಗೂ ಆಸ್ಪತ್ರೆಗೆ ದಾಖಲಿಸುವಂತೆ ಮನವೊಲಿಸುವ ಪ್ರಯತ್ನಗಳಾಗಬೇಕು. ಈ ಮೂಲಕ ಕೊರೊನಾ ಸೋಂಕು ತಡೆಗಟ್ಟಲು ಸಾಧ್ಯ ಎಂದು ಶಾಸಕ ಯು.ಟಿ ಖಾದರ್ ಹೇಳಿದರು. ಅವರು ಸೋಮೇಶ್ವರ ಪುರಸಭೆಯಲ್ಲಿ ಸೋಮವಾರ ಅಧಿಕಾರಿಗಳ, ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ, ಪುರಸಭೆ ಸಿಬ್ಬಂದಿಗಳ ಜೊತೆಗೆ ಆಯೋಜಿಸಿದ್ದ ಕೋವಿಡ್ ಪರಿಶೀಲನಾ ಸಭೆ ಹಾಗೂ ಸೇಫ್ಟಿ ಕಿಟ್ ವಿತರಣೆ ನಡೆಸಿ ಮಾತನಾಡಿದರು.ಸೋಮೇಶ್ವರ ಪುರಸಭೆಯ 23 ವಾರ್ಡುಗಳನ್ನು ನಾಲ್ಕು ಝೋನ್ ಆಗಿ ವಿಭಾಗಿಸಿ ಆಯಾಯ ಝೋನ್ ಗಳಿಗೆ ಅಧಿಕಾರಿಯನ್ನು ನೇಮಕಗೊಳಿಸಲಾಗಿದೆ. ಅವರ ಮೂಲಕ ವಾರ್ಡ್ ಸಮಿತಿ ಸಭೆಯನ್ನು ಎರಡು ದಿನಕ್ಕೊಮ್ಮೆ ನಡೆಸಲು ಸೂಚಿಸಲಾಗಿದೆ. ಸೋಂಕಿತರು ಕಂಡುಬಂದಲ್ಲಿ ಮನೆಮಂದಿ ಜೊತೆಗೆ ಟಾಸ್ಕ್ ಫೋರ್ಸ್ ತಂಡ ಮಾತುಕತೆ ನಡೆಸಿ ಅವರನ್ನು ಕೋವಿಡ್ ಕೇರ್ ಸೆಂಟರಿಗೆ ಹೋಗುವಂತೆ ಮನವೊಲಿಸುವ ಪ್ರಯತ್ನಗಳಾಗಬೇಕು. ಅದಕ್ಕಾಗಿ ಬೆಳ್ಮದಲ್ಲಿ ನೋಡೆಲ್ ಸೆಂಟರನ್ನು ಮಾಡಲಾಗಿದೆ. ಕೋವಿಡ್ ಸೆಂಟರಿನಲ್ಲಿ ಔಷಧಿ ಹಾಗೂ…

Read More

UN networksಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 178  ಸೋಂಕಿತರಿದ್ದಾರೆ.  ಇವರಲ್ಲಿ  78 ಮಂದಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಿದ್ಯಾರ್ಥಿಗಳಾಗಿದ್ದಾರೆ. ಬೀರಿ  ಕೆ2 ಕನ್ ಸ್ಟ್ರಕ್ಷನ್ ಅಡಿ ಕಾರ್ಯ ನಿರ್ವಹಿಸುವ  14 ಮಂದಿ ಕಾರ್ಮಿಕರಿಗೆ ಪಾಸಿಟಿವ್  ಆಗಿದೆ. ಎಲ್ಲರನ್ನೂ ಐಸೊಲೇಷನ್ ನಲ್ಲಿಡಲಾಗಿದೆ‌‌ ಎಂದು ಕಿರಿಯ ಆರೋಗ್ಯ ನಿರೀಕ್ಷಕ‌ ವಿಕ್ರಮ್ ತಿಳಿಸಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯಿತಿನಲ್ಲಿ ಅಧಿಕಾರಿಗಳ ಜೊತೆಗೆ ಸೋಮವಾರ ನಡೆದ ಕೋವಿಡ್ ನಿಗ್ರಹ ಕುರಿತ ಪರಿಶೀಲನಾ ಸಭೆಯಲ್ಲಿ ತಿಳಿಸಲಾಗಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ 15 ದಿನಗಳಿಗೆ ಸಭೆ ಸೇರಿದಲ್ಲಿ ಟಾಸ್ಕ್ ಫೋಸ್೯ ಆಗುವುದಿಲ್ಲ, ಎರಡು ದಿನಗಳಿಗೊಮ್ಮೆ ಫೀಲ್ಡಿಗೆ ಹೋಗಲೇಬೇಕು.ಬೀಟ್ ಪೊಲೀಸ್ ಕಡ್ಡಾಯವಾಗಿ ಬರಲೇಬೇಕು ಎಂದು ಹೇಳಿದರು. ಟಾಸ್ಕ್ ಫೋಸ್೯ ಇಷ್ಟೇ ಜನರು ಬೇಕೆಂಬ ವಿಚಾರವಿಲ್ಲ. ತುರ್ತು ಸ್ಥಿತಿ ಸಂದರ್ಭದಲ್ಲಿ ಇರುವಷ್ಟು ಜನರನ್ನು ತಂಡವಾಗಿ ರಚಿಸಿ ಜನರಿಗೆ ನೆರವಾಗಿ. ಸದ್ಯ ಇರುವ ಸಿಬ್ಬಂದಿಯಲ್ಲಿ ಒಬ್ಬರಿಗೆ ನಾಲ್ಕು ವಾಡ್೯ ವಿಂಗಡಿಸಿ ಕಾರ್ಯಾಚರಿಸಿ.ಕೋವಿಡ್ ಪಿಡುಗು ಮೂರು ವರ್ಷಗಳ ಕಾಲ ಮುಂದುವರಿಯುವ ಲಕ್ಷಣಗಳಿದ್ದು, ಲಸಿಕೆ ಮಾತ್ರ…

Read More

UN networks ತೊಕ್ಕೊಟ್ಟು: ಖಾದರ್ ಅವರ ಕ್ಷೇತ್ರದ ಚೆಂಬುಗುಡ್ಡೆಯ ಸ್ಮಶಾನಕ್ಕೆ ಹೋಗುವ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇತ್ತೀಚೆಗೆ ಹೆಣವೊಂದು ರಸ್ತೆ ಅವ್ಯವಸ್ಥೆಯಿಂದ  ಆಂಬ್ಯುಲೆನ್ಸ್ ನಿಂದ  ಹೊರಬೀಳುವುದರಿಂದ ತಪ್ಪಿತ್ತು.  ನಗರೋತ್ಥಾನದಲ್ಲಿ ಅನುದಾನವಿದ್ದರೂ ರಸ್ತೆ ದುರಸ್ತಿಗೆ ಮುಂದಾಗದಿರುವುದು  ವಿಪರ್ಯಾಸ ಎಂದು ದಿ ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ನಿಗಮದ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು.  ತೊಕ್ಕೊಟ್ಟು ಕಾಪಿಕಾಡಿನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬೋಳಿಯಾರ್,  ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ಹೆಚ್ಚಿದ್ದರೂ, ಶಾಸಕರು  ನಿಯಂತ್ರಿಸಲು ಅವಿರತವಾಗಿ ದುಡಿಯುತ್ತಿದ್ದಾರೆ.  ಜಿಲ್ಲಾಡಳಿತ ಪೊಲೀಸ್ ಇಲಾಖೆ ಸೇರಿದಂತೆ ಕೊರೊನಾ ವಾರಿಯರ್ ಗಳ ಸೇವೆಯೂ  ಬಹಳಷ್ಟಿದೆ. ಜಿಲ್ಲೆಯ  ಮೂಲೆ ಮೂಲೆಗಳಲ್ಲಿ ಕೋವಿಡ್ ವಾರ್ ರೂಂ  ಪರಿಣಾಮಕಾರಿಯಾಗಿ  ಕಾರ್ಯಚರಿಸಿ ಸೋಂಕಿತರಿಗೆ  ಬೇಕಾದ ಆಸ್ಪತ್ರೆ, ಐಸಿಯು ವನ್ನು ಒದಗಿಸುವಲ್ಲಿ  ಬೆಳಿಗ್ಗೆ 6 ರಿಂದ 9ರ ತನಕ ಕಾರ್ಯಾಚರಿಸುತ್ತಿದೆ.   ಕೆಲಸ ಮಾಡುವುದಕ್ಕಿಂತ ಜಾಸ್ತಿ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್  ಸುದ್ಧಿಗೋಷ್ಠಿಗಳನ್ನು ಮಾಡುತ್ತಿದ್ದಾರೆ.  ಮಂಗಳೂರು ಕ್ಷೇತ್ರ ಬಿಟ್ಟು  ಮಂಗಳೂರು ದಕ್ಷಿಣ ಕ್ಷೇತ್ರದ ಬಗ್ಗೆ ಮಾತನಾಡುತ್ತಿದ್ದಾರೆ.…

Read More

UN networks ಉಳ್ಳಾಲ: ವಾರಾಂತ್ಯದ ಕಫ್ರ್ಯೂ ಹಿನ್ನೆಲೆಯಲ್ಲಿ ಉಳ್ಳಾಲದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಕಮೀಷನರ್ ಆದೇಶದಂತೆ ಒಳರಸ್ತೆಗಳಲ್ಲಿ ಓಡುವ ವಾಹನಗಳ ಮೇಲೆ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಉಳ್ಳಾಲದ ಅಲೇಕಳ ಮಂಚಿಲದಲ್ಲಿ ಉಳ್ಳಾಲ ಎಸ್.ಐ ಪ್ರದೀಪ್ ನೇತೃತ್ವದಲ್ಲಿ ಪೊಲೀಸ್ ರೈಡ್ ಹೊಡೆದಾಗ ತ್ರಿಬಲ್ ರೈಡ್ ಹೊಡೆಯುತ್ತಿದ್ದ ಬೈಕ್ ಸವಾರರು ಸೇರಿದಂತೆ ಮಗುವನ್ನು ಎತ್ತಿಕೊಂಡು ಕುಟುಂಬವೊಂದು ಎದ್ದೂಬಿದ್ದು ಓಡಿದ ವೀಡಿಯೋ ವೈರಲ್ ಆಗಿದೆ. ಉಳ್ಳಾಲದ ಎಸ್.ಐ ಪ್ರದೀಪ್ ಜೀಪ್ ಬರುತ್ತಿದ್ದಂತೆ ಬೈಕಿನಲ್ಲಿದ್ದ ಇಬ್ಬರು ಹಾರಿ ಪರಾರಿಯಾದರೆ, ಬೈಕ್ ಸವಾರನನ್ನು ಪೊಲೀಸರು ಹಿಡಿದು ಬೈಕನ್ನು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ರಸ್ತೆ ಬದಿಯಲ್ಲಿ ಮಕ್ಕಳನ್ನು ಎತ್ತಿಕೊಂಡು ಸುತ್ತಾಡುತ್ತಿದ್ದ ಕುಟುಂಬವೊಂದು ಮನೆಯೊಳಗೆ ಓಡೋಡಿ ಪೊಲೀಸರ ಕಣ್ಣು ತಪ್ಪಿಸಿದ್ದಾರೆ. ಈ ಕುರಿತ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ.

Read More

ಗ್ರಾಮಚಾವಡಿ: ಪಜೀರು ಮರ್ಸಿಯಮ್ಮನವರ ಹಳೇ ಇಗರ್ಜಿ ಕಟ್ಟಡಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಹೊಸ ಇಗರ್ಜಿಯ ಕಟ್ಟಡ ಗ್ರಾಮಚಾವಡಿ ಜಂಕ್ಷನ್ನಿಗೆ ಹತ್ತಿರವಾಗಿದ್ದು, ಪಜೀರು ಪ್ರದೇಶದಲ್ಲಿರುವ ಹಳೇ ಚರ್ಚ್‍ನಲ್ಲಿಯೂ ಪೂಜಾ ವಿಧಾನಗಳು ನಡೆಯುತಿತ್ತು. ಹಳೇಯ ಚರ್ಚ್ ಕಟ್ಟಡ ಗೋಪುರದ ಹೆಂಚುಗಳು ಹಾಗೂ ಶೀಟ್ ಗೆ ಹಾನಿಯಾಗಿದೆ. ಘಟನೆ ವೇಳೆ ಚರ್ಚ್ ಕಟ್ಟಡದಲ್ಲಿ ಯಾರೂ ಇರದಿರುವುದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಪಜೀರು ಗ್ರಾ.ಪಂ ಸದಸ್ಯರು ಭೇಟಿ ನೀಡಿ ಹಾನಿ ವರದಿ ಸಂಗ್ರಹಿಸಿದ್ದಾರೆ.

Read More

UN networks ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಸೋಂಕು ತಡೆಗಟ್ಟಲು ಮತ್ತು ಕೋವಿಡ್ ಸೋಂಕಿತರೊಂದಿಗೆ ಸಂಪರ್ಕ ಸಾಧಿಸಲು ಪುರಸಭಾ ಕಚೇರಿಯಲ್ಲಿ ಕೋವಿಡ್ ಸಹಾಯವಾಣಿಯನ್ನು ಆರಂಭಿಸಿದ್ದು, ಸೋಂಕಿತರೊಂದಿಗೆ ವಿಡಿಯೋ ಕಾಲ್ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಾಲೋಚನೆ ನಡೆಯಲಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ವಾಣಿ ವಿ. ಆಳ್ವ ತಿಳಿಸಿದ್ದಾರೆ. ಸೋಮೇಶ್ವರ ಪುರಸಭಾ ಕಚೇರಿಯಲ್ಲಿ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು : ಪುರಸಭೆ ವ್ಯಾಪ್ತಿಯಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ದಿನ ನಿತ್ಯ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಸರಕಾರದ ನಿಯಮದಂತೆ ಜನರಲ್ಲಿ ಅಂತರ ಕಾಯ್ದುಕೊಳ್ಳಲು ಮತ್ತು ಅನವಶ್ಯಕವಾಗಿ ಹೊರಗಡೆ ಓಡಾಡದಂತೆ ಜನತಾ ಕಫ್ರ್ಯೂ ಪುರಸಭಾ ವ್ಯಾಪ್ತಿಯಲ್ಲಿ ವಿಧಿಸಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಅನವಶ್ಯಕವಾಗಿ ಕಛೇರಿಗೆ ಆಗಮಿಸಿ ಕಾಯುವುದನ್ನು ತಪ್ಪಿಸಲು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ವಿಭಾಗವಾರು ಸಿಬ್ಬಂದಿಗಳನ್ನು ನೇಮಕ ಮಾಡಿ ಪುರಸಭೆ ಕಛೇರಿಗೆ ಬಂದು ಅಲೆದಾಟ ಮಾಡುವುದನ್ನು ತಪ್ಪಿಸಲು ನೇರವಾಗಿ ತಮ್ಮ ಕೆಲಸ ಯಾರಿಂದ…

Read More

UN networks ಉಳ್ಳಾಲ: ಗ್ರಾಮೀಣ ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಧಿಕಾರಿಗಳು ಮಾನಸಿಕವಾಗಿ ಸದೃಢತೆಯನ್ನು ಕಾಪಾಡಿಕೊಂಡು ಕರ್ತವ್ಯ ನಿಭಾಯಿಸಬೇಕಿದೆ. ಸೋಂಕಿತರು ಸಾಯುವಂತಹ ಪರಿಸ್ಥಿತಿ ಎದುರಾಗಬಾರದು. ವೈಯಕ್ತಿಕ ನಿರ್ಧಾರಗಳಿಂದಲೇ ಸಾವುಗಳಾಗುತ್ತಿವೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು. ದೇರಳಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜರಗಿದ ಗ್ರಾಮಾಂತರ ಭಾಗಗಳಲ್ಲಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಜಿಲ್ಲೆಯ ಅಧಿಕಾರಿಗಳು , ಮಂಗಳೂರು ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರುಗಳ ಸಮ್ಮುಖದಲ್ಲಿ ಜರಗಿದ ತುರ್ತು ಸಭೆಯಲ್ಲಿ ಮಾತನಾಡಿದರು. ಫಸ್ಟ್ ಡೋಸ್, ಸೆಕೆಂಡ್ ಡೋಸ್ ಜೊತೆಗೆ ಥರ್ಡ್ ಡೋಸ್ ಆಗಿ ಶಾಶ್ವತ ಮಾಸ್ಕನ್ನು ಧರಿಸುವುದೇ ಸೋಂಕಿನಿಂದ ತಪ್ಪಿಸಬಹುದು. ಲಸಿಕೆ ಕೊರತೆ ಕುರಿತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಾತನಾಡುವ ಪ್ರಯತ್ನ ಮಾಡುತ್ತೇನೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಮಟ್ಟದಲ್ಲಿ ಜನಜಾಗೃತಿ ಅಗತ್ಯ ನಿಭಾಯಿಸಬೇಕಿದೆ. ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾಯ್ದೆಯಡಿ ಗ್ರಾಮ ಪಂಚಾಯಿತಿಗೆ ಜನರಿಗೆ ಜಾಗೃತಿ ಮೂಡಿಸುವುದು ಹಾಗೂ ಎಚ್ಚರಿಸಲು ಸಂಪೂರ್ಣ ಅಧಿಕಾರವಿದೆ. ಜಿಲ್ಲಾಡಳಿತದ…

Read More

UN networks ಉಳ್ಳಾಲ: ಉಳ್ಳಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ಎಸ್ ರಾಜೇಂದ್ರ ನೇತೃತ್ವದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುವಿಕೆ ಕುರಿತು ನಡೆಸಿದ ತುರ್ತು ಸಭೆಗೆ ಒಂದು ಗಂಟೆ ತಡವಾಗಿ ಬಂದ ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಉಸ್ತುವಾರಿ ಸಚಿವರು ತರಾಟೆಗೆ ತೆಗೆದುಕೊಂಡು ಅಮಾನತುಗೊಳಿಸುವ ಎಚ್ಚರಿಕೆಯನ್ನು ನೀಡಿದ ಘಟನೆ ಉಳ್ಳಾಲ ನಗರಸಭೆಯಲ್ಲಿ ನಡೆಯಿತು. ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಭಾಕರ್ ಎಂ.ಪಿ ಇವರನ್ನು ತರಾಟೆಗೆ ತೆಗೆದುಕೊಂಡರು. ಸಭೆ ಆರಂಭವಾದ ಬಳಿಕ ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಹಾಗೂ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೋಂಕಿತರ ವಿವರಗಳನ್ನು ಜಿಲ್ಲಾಧಿಕಾರಿಗಳು ಕೇಳಿದ್ದರು. ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿ ಇಬ್ಬರು ತಮ್ಮ ವ್ಯಾಪ್ತಿಯ ಸೋಂಕಿತರ ವರದಿಯನ್ನು ನೀಡಿದ್ದು, ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೈರಾಗಿದ್ದರು. ಈ ವೇಳೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಕೋಟ, ಮುಖ್ಯಾಧಿಕಾರಿಗೆ ಶೀಘ್ರವೇ ನೋಟೀಸು ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಬಳಿಕ ತಕ್ಷಣಕ್ಕೆ ಅಮಾನತುಗೊಳಿಸುವಂತೆ ಆಗ್ರಹಿಸಿದರು. ಸಭೆ ಆರಂಭವಾಗಿ…

Read More

ಉಳ್ಳಾಲ: ಕೊರೊನ ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಜಾರಿಗೊಳಿಸಿದ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದತೊಕ್ಕೊಟ್ಟು ವಿನ ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿದ್ದ ಐದು ಬಟ್ಟೆ ಅಂಗಡಿಗಳ ಮಾಲೀಕರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಟ್ಟೆ ಅಂಗಡಿ ಗಳು ಅರ್ಧ ಶಟರ್ ಹಾಕಿ ಗ್ರಾಹಕರನ್ನು ಸೇರಿಸಿ ವ್ಯಾಪಾರ ಮಾಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೆÇಲೀಸರು ದಾಳಿ ನಡೆಸಿ ಅಂಗಡಿ ಬಂದ್ ಮಾಡುವಂತೆ ಸೂಚಿಸಿದರು. ಪೆÇಲೀಸರ ಸೂಚನೆ ಬಳಿಕ ಮಾಲಕರು ಅಂಗಡಿ ಬಂದ್ ಮಾಡಿದ್ದಾರೆ. ಬಳಿಕ ಲಾಕ್ ಡೌನ್ ಉಲ್ಲಂಘನೆ ಆರೋಪದ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಐದು ಅಂಗಡಿ ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ .ಅಲ್ಲದೇ ಬೇಕಾಬಿಟ್ಟಿ ಓಡಾಡುತ್ತಿದ್ದ ಒಟ್ಟು ಐದು ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಂಡಿದ್ದಾರೆ.

Read More