ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ : ಆಕ್ಟಿವಾ ಸ್ಕೂಟರ್ ಅಪಘಾತಕ್ಕೀಡಾಗಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ಕೊಣಾಜೆ ಠಾಣಾ ವ್ಯಾಪ್ತಿಯ ಮೊಂಟೆಪದವು ಬಳಿ ಸಂಭವಿಸಿದೆ. ಮೊಂಟೆಪದವು ನಿವಾಸಿಗಳಾದ ತಮೀಮ್ (14) ಮತ್ತು ಝಾಕೀರ್ (14 ) ಮೃತ ದುರ್ದೈವಿಗಳು. ಮೃತ ಇಬ್ಬರು ಅಲ್- ಮದೀನಾ ಮಂಜನಾಡಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ಮೊಂಟೆಪದವಿನಿಂದ ಮಂಜನಾಡಿಗೆ ತಮೀಮ್ ತನ್ನ ತಂದೆಯ ಆಕ್ಟಿವಾ ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಆಕ್ಖಿವಾ ರಸ್ತೆ ಬದಿಯ ಹೊಂಡಕ್ಕೆ ಬಿದ್ದು ತಮೀಮ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಝಾಕೀರ್ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಜನಾಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಮತ್ತು ಜನ ಶಿಕ್ಷಣ ಟ್ರಸ್ಟ್ ಮುಡಿಪು, ಸ್ತ್ರೀಶಕ್ತಿ ಗುಂಪು ಮತ್ತು ಮಾದರಿ ಗ್ರಾಮ ವಿಕಾಸ ಕೇಂದ್ರ ಕಲ್ಕಟ್ಟ ಮಂಜನಾಡಿ ಇದರ ಸಹಭಾಗಿತ್ವದಲ್ಲಿ ಮಾಹಿಳಾ ದಿನಾಚರಣೆ ಕಾರ್ಯಕ್ರಮವು ಕಲ್ಕಟ್ಟ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು. ಜನ ಶಿಕ್ಷಣ ಟ್ರಸ್ಟ್ ಮುಡಿಪು ಇದರ ನಿರ್ದೇಶಕ ಶಿವ ಶೆಟ್ಟಿ ಆಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷ್ಣ ಮೂಲ್ಯ, ಮಂಜನಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್ ಭಂಡಾರಿ, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಹ್ಮದ್ ಕುಂಞ ನೆಕ್ಕರೆ, ಮಂಜನಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಎಂ ಕುಂಞಬಾವ ಹಾಜಿ, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್, ಚಂಚಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಲ್ಕಟ್ಟ ಅಂಗನವಾಡಿ ಕಾರ್ಯಕರ್ತೆ ಸುಜಾತ ಸ್ವಾಗತಿಸಿ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚರಾಕಿ ಪೂರ್ಣಿಮಾ ವಂದಿಸಿದರು.
ಉಳ್ಳಾಲ: ತಡರಾತ್ರಿ ಮನೆಗೆ ಅಕ್ರಮ ಪ್ರವೇಶಗೈದ ಇಬ್ಬರು ಮಹಿಳೆಯೋರ್ವರಿಗೆ ಅವಾಚ್ಯವಾಗಿ ನಿಂದಿಸಿ ಮಾನಭಂಗಕ್ಕೆ ಯತ್ನಿಸಿರುವ ಘಟನೆ ತಲಪಾಡಿಯ ನಾರ್ಲ ಪಡೀಲ್ ಎಂಬಲ್ಲಿ ನಡೆದಿದೆ. ತಲಪಾಡಿ ನಿವಾಸಿಗಳಾದ ಪ್ರಶಾಂತ್ ಶೆಟ್ಟಿ ಮತ್ತು ಅರುಣ್ ಎಂಬಾತ ನಾರ್ಲ ಪಡೀಲಿನಲ್ಲಿರುವ ಮಹಿಳೆ ಮನೆಗೆ ಅಕ್ರಮ ಪ್ರವೇಶಗೈದಿದ್ದರು. ಅಲ್ಲಿ `ನಿಮಗೆ ಚಿಕ್ಕಿ ತಯಾರಿಸಲು ಲೈಸೆನ್ಸ್ ಇದೆಯೇ’ ಎಂದು ಕೇಳಿ ಮಹಿಳೆಯನ್ನು ಹೆದರಿಸಿದ್ದಾರೆ. ಅದನ್ನು ಕಂಡು ಮಹಿಳೆಯ ಮೈದುನ ಇಬ್ಬರೊಂದಿಗೆ ಜಗಳಕ್ಕಿಳಿದಿದ್ದರು. ಇದರಿಂದ ಮಾತಿಗೆ ಮಾತು ಬೆಳೆದು ಪ್ರಶಾಂತ್ ಶಟ್ಟಿ ಎಂಬಾತ ಮಹಿಳೆಯ ಮೈದುನನ ಮುಖಕ್ಕೆ ಹಲ್ಲೆ ನಡೆಸಿದ್ದು, ಇದರಿಂದ ಗೋಡೆಗೆ ತಲೆ ಬಡಿದು ಗಾಯವಾಗಿದೆ. ಬಳಿಕ ಇಬ್ಬರು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿದೂರು : ಪ್ರಶಾಂತ್ .ಕೆ.ಎನ್ , ಅರುಣ್ ಮತ್ತು ದಿನೇಶ್ ಎಂಬವರು ನಾರ್ಲ ಪಡೀಲಿನಲ್ಲಿರುವ ಶಕ್ತಿ ಎಂಬವರ ಮನೆಗೆ ವ್ಯವಹಾರದ ನಿಮಿತ್ತ ಮಾತನಾಡಲು ತೆರಳಿದ್ದರು. ಅಲ್ಲಿ ಶಕ್ತಿ ತನ್ನ 20 ಮಂದಿ ಜನರ ತಂಡದೊಂದಿಗೆ ಮನೆಗೆ ಬಂದಿದ್ದ…
ಉಳ್ಳಾಲ: ಉಳ್ಳಾಲದ ಭಗವತಿ ಕ್ಷೇತ್ರಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ತೊಕ್ಕೊಟ್ಟು ಕೃಷ್ಣನಗರದ ನಿವಾಸಿ ಚಂದ್ರಕಾಂತ್ ಎಂಬವರಿಗೆ ಉಳ್ಳಾಲಬೈಲಿನ ಪ್ರೀತೇಶ್ ಎಂಬಾತ ಪಂಚ್ನಿಂದ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಚಂದ್ರಕಾಂತ್ ಅವರು ಕ್ಷೇತ್ರದಿಂದ ವಾಪಸ್ಸಾಗುವಾಗ ತಡೆದ ಪ್ರೀತೇಶ್ ಕೈಗೆ ಸುತ್ತಿದ ಕಬ್ಬಿಣದ ಸಂಕೋಲೆಯಿಂದ ಕೆನ್ನೆ ಮತ್ತು ತಲೆಯ ಭಾಗಕ್ಕೆ ಬಲವಾಗಿಹೊಡೆದಿದ್ದಾನೆ. ಆನಂತರ ಚೂರಿ ತೋರಿಸಿ ಜೀವಬೆದರಿಕೆಯೊಡ್ಡಿದ್ದಾನೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಪ್ರೀತೇಶ್ ಮತ್ತು ಕವಿತ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾಗ, ಅವರ ಬೈಕನ್ನು ಚಂದ್ರಕಾಂತ್ ಅವರಿಗೆ ಸೇರಿದ ಓಮ್ನಿ ಕಾರಿನಲ್ಲಿ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿತ್ತು. ಇದರಿಂದ ಚಂದ್ರಕಾಂತ್ ಅವರೇ ಪೊಲೀಸರಿಗೆ ದೂರು ನೀಡಿ ತಮ್ಮನ್ನು ಬಂಧಿಸಿದ್ದು ಎಂದು ಪೂರ್ವದ್ವೇಷವನ್ನು ತೀರಿಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಉಳ್ಳಾಲ: ಗೋಣಿಚೀಲಗಳಲ್ಲಿ ಇರಿಸಲಾಗಿದ್ದ ಸುಲಿದ ಅಡಿಕೆಯನ್ನು ಕಳ್ಳರು ಕಳವುಗೈದಿರುವ ಘಟನೆ ಪಜೀರು ಗ್ರಾಮದ ಪಾನೇಲ ಬಾಕೀಮಾರ್ ಎಂಬಲ್ಲಿ ನಡೆದಿದೆ. ಅಬ್ದುಲ್ ರವೂಫ್ ಎಂಬವರಿಗೆ ಸೇರಿದ , 8 ಗೋಣಿ ಚೀಲಗಳಲ್ಲಿ ಇರಿಸಲಾಗಿದ್ದ ಅಡಿಕೆ ಕಳವಾಗಿದೆ. ನಾಲ್ಕು ಕ್ವಿಂಟಾಲ್ ತೂಕವುಳ್ಳ ಅಡಿಕೆಯ ಅಂದಾಜು ಮೌಲ್ಯ ರೂ. 80,000 ಆಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕೋಟೆಕಾರು: ರಾಮರಾಜ ಕ್ಷತ್ರಿಯ ಸೇವಾ ಸಂಘ ಕುಂಪಲ ಉಳ್ಳಾಲ ವಲಯದ ವತಿಯಿಂದ ಶ್ರೀ ರಾಮನವಮಿ ಉತ್ಸವ ಕೋಟೆಕಾರು ಶೃಂಗೇರಿ ಮಠದಲ್ಲಿ ಶನಿವಾರ ನಡೆಯಿತು. ರಾಮರಾಜ ಕ್ಷತ್ರೀಯ ಸೇವಾ ಸಂಘದ ಅಧ್ಯಕ್ಷ ಬಿ.ಕೆ.ಮೂರ್ತಿ ಪಾರೆಮನೆ, ಕಾರ್ಯದರ್ಶಿ ಸತ್ಯ ಕುಂಪಲ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ, ಇಂಧುಶ್ರೀ, ಶೃಂಗೇರಿ ಮಠದ ಸತ್ಯಶಂಕರ ಬೊಳ್ಳಾವ ಮೊದಲಾದವರು ಉಪಸ್ಥಿತರಿದ್ದರು.
ಕೊಣಾಜೆ: ಮಂಗಳೂರು ಇಂದು ಶಿಕ್ಷಣ ಕಾಶಿಯೆಂದೇ ಖ್ಯಾತಿಯನ್ನು ಪಡೆದಿದೆ. ಕಾರಣ ಈ ಪ್ರದೇಶದಲ್ಲಿರುವ ವಿಶ್ವವಿದ್ಯಾನಿಲಯ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಹಾಗೂ ಶೈಕ್ಷಣಿಕ ಸಂಸ್ಥೆಗಳು, ಇದರಿಂದ ದೇಶ ವಿದೇಶದ ವಿದ್ಯಾರ್ಥಿಗಳನ್ನು ಮಂಗಳೂರು ಆಕರ್ಷಿಸುವಂತಾಗಿದೆ. ಆದ್ದರಿಂದ ಇಂದಿನ ಆಧುನಿಕ ಕಾಲಕ್ಕನುಸಾರವಾಗಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಆಧುನಿಕ ಸೌಲಭ್ಯಗಳನ್ನು ನಾವು ವಿಸ್ತರಿಸಿಕೊಳ್ಳಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ವೈಫೈ ಸೌಲಭ್ಯವನ್ನು ಶನಿವಾರ ಮಂಗಳಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿ ನಾವಿದ್ದೇವೆ. ಇಂದು ಜಗ್ತತು ಎಷ್ಟು ವೇಗದಲ್ಲಿ ಆಧುನಿಕತೆಯೊಂದಿಗೆ ಬದಲಾವಣೆಯಾಗುತ್ತಿದ್ದೆಯೋ ಹಾಗೆಯೇ ನಮ್ಮ ಜೀವನ ಶೈಲಿಯೂ ವೇಗತೆಯನ್ನು ಪಡೆಯುತ್ತಿದೆ. ಬದಲಾಗುತ್ತಿರುವ ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಅನುಕೂಲವಾಗುವಂತೆ ಮಂಗಳೂರು ವಿ.ವಿ,ಯಲ್ಲಿ ವೈಫೈ ಸೌಲಭ್ಯ ಉದ್ಘಾಟನೆಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಯೋಗ ವಿಜ್ಞಾನವು ಇವತ್ತು ಇಡೀ ಜಗತ್ತಿಗೇ ಮಾದರಿ ವಿಷಯವಾಗಿ ಬಹಳಷ್ಟು ಜನರು ಆಕರ್ಷಿತರಾಗಿದ್ದಾರೆ. ಇಂತಹ ಯೋಗ ವಿಜ್ಞಾನ ವಿಭಾಗ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ನೂತನ ನೇತ್ರಾವತಿ ಸೇತುವೆ ಕಾಮಗಾರಿ ಮುಗಿದು ಮುಂದೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಪಂಪ್ವೆಲ್ ನಡುವಿನ ಬ್ಲಾಕ್ ಸಮಸ್ಯೆ ಬಗೆಹರಿಯಿತು ಎಂದು ಜನತೆ ನಿಟ್ಟುಸಿರು ಬಿಟ್ಟಿದ್ದರೆ, ಇದೀಗ ಮತ್ತೆ ಹಳೇ ಸೇತುವೆ ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದು, ಶನಿವಾರ ದಿನವಿಡೀ ನಡೆದ ರಸ್ತೆ ತಡೆಗೆ ತಾಳ್ಮೆಯಿಲ್ಲದ ವಾಹನ ಸವಾರರೇ ಕಾರಣರಾದರು. ಹಳೆಯ ನೇತ್ರಾವತಿ ಸೇತುವೆಯ ದುರಸ್ತಿ ಕಾರ್ಯ ಕಳೆದ ಕೆಲ ದಿನಗಳಿಂದ ಆರಂಭವಾಗಿದೆ. ಇದರ ಜತೆಗೆ ಸೇತುವೆಯನ್ನು ತಾಗಿಕೊಂಡು ಜೆಪ್ಪಿನಮೊಗರು ಮತ್ತು ಕಲ್ಲಾಪು ಭಾಗದ ಅರ್ಧ ಕಿ.ಮೀಗಳಷ್ಟು ರಸ್ತೆಗಳ ಕಾಮಗಾರಿಯೂ ನಡೆಯುತ್ತಿದೆ. ಅದಕ್ಕಾಗಿ ನೂತನ ನೇತ್ರಾವತಿ ಸೇತುವೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ದ್ವಿಚಕ್ರ ವಾಹನ ಸವಾರರು ಸಹಿತ ಸಣ್ಣ ವಾಹನಗಳು ಎಲ್ಲೆಂದರೆಲ್ಲಿ ತಾಳ್ಮೆಯಿಲ್ಲದೆ ಸೇತುವೆಯಲ್ಲಿ ಸಂಚರಿಸುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ಶನಿವಾರದ ದಿನ ಆಗಿದ್ದರಿಂದ ಮಧ್ಯಾಹ್ನ ಸಮಯದಲ್ಲಿ ವಿದ್ಯಾರ್ಥಿಗಳು, ಕೆಲಸ ಬಿಟ್ಟು ತೆರಳುವವರು…
ಉಳ್ಳಾಲ: ಇಲ್ಲಿನ ದರ್ಗಾದ ಉರೂಸ್ ಸಮಾರಂಭದ ಪ್ರಯುಕ್ತ ಓವರ್ಬ್ರಿಡ್ಜ್ನಿಂದ ಹಿಡಿದು ಅಬ್ಬಕ್ಕ ಸರ್ಕಲ್ನವರೆಗೆ ಆಗುತ್ತಿರುವ ರಸ್ತೆಯ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಮತ್ತು ಹೆಚ್ಚುವರಿ ಸರಕಾರಿ ಬಸ್ಗಳನ್ನು ಉರೂಸ್ ಸಂದರ್ಭದಲ್ಲಿ ಮಂಗಳೂರು ಉಳ್ಳಾಲ ರಸ್ತೆಗೆ ಒದಗಿಸಲು ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಮತ್ತು ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಉಳ್ಳಾಲ ದರ್ಗಾದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು. ಒಂದು ತಿಂಗಳ ಕಾಲ ನಡೆಯಲಿರುವ ಉರೂಸ್ ಸಂದರ್ಭದಲ್ಲಿ ವಿದ್ಯುತ್ ಕಡಿತವನ್ನು ನಿಲ್ಲಿಸುವುದು ಮತ್ತು ನಾದುರಸ್ತಿಯಲ್ಲಿರುವ ವಿದ್ಯುತ್ ತಂತಿಯನ್ನು ಶೀಘ್ರದಲ್ಲಿ ದುರಸ್ತಿಗೊಳಿಸಬೇಕು. ಉರೂಸ್ನ ಸಮಯದಲ್ಲಿ ನಡೆಯುವ ಸಂದಲ್ಮೆರವಣಿಗೆಗೆ ಅಡ್ಡಿ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಕರ್ನಾಟಕದಾದ್ಯಂತ ಸಾರಿಗೆ ವ್ಯವಸ್ಥೆ ಮತ್ತು ತೊಕ್ಕೊಟ್ಟುವಿನಲ್ಲಿ ರೈಲು ನಿಲ್ದಾಣ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಭಕ್ತಾದಿಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಮುಖ ಔಷಧಿ ದಾಸ್ತಾನಿರಿಸಲು ಮತ್ತು 24 ಗಂಟೆ ಕಾರ್ಯನಿರ್ವಹಿಸಲು ಸಚಿವ ಖಾದರ್ ಆರೋಗ್ಯಧಿಕಾರಿಗಳಿಗೆ ಸೂಚಿಸಿದರು. ಜತೆಗೆ ದರ್ಗಾದ ಸಮೀಪ ದರ್ಗಾದ ಕಟ್ಟಡವೊಂದರಲ್ಲಿ…
ಉಪ್ಪಳ: ಕೊಂಡೆವೂರಿನಲ್ಲಿ ನಡೆಯುತ್ತಿರುವ ಮಹಾಯಾಗದ ಸಂದರ್ಭದಲ್ಲಿ ಪ್ರತಿನಿತ್ಯ ಪೂಜಿಸಲ್ಪಡುವ ಗೋಮಾತೆಯ ತುಲಾಭಾರ ಬಹಳ ವಿಜೃಂಭಣೆಯಿಂದ ನಡೆಯಿತು. ಕಟೀಲಿನ ಅನಂತ ಪದ್ಮನಾಭ ಅಸ್ರಣ್ಣರ ಉಪಸ್ಥಿತಿಯಲ್ಲಿ ಕೊಂಡೆವೂರು ಸ್ವಾಮೀಜಿ ಹಾಗೂ ಯಾಗ ಪ್ರಧಾನ ಸಮಿತಿಯ ನಾರಾಯಣ ಬೆಂಗಳೂರು, ಗೋಪಾಲ್ ಬಂದ್ಯೋಡ್, ದಿವಾಕರ ಸಾಮಾನಿ ಮತ್ತು ಶ್ರೀಮತಿ ಆಶಾಜ್ಯೋತಿ ರೈಗಳ ಸಮ್ಮುಖದಲ್ಲಿ ಇ.ಎಸ್. ರಾಮ್ ಭಟ್, ಕಿರಣ್ ಭಟ್ ಹಾಗೂ ಭಕ್ತಾದಿಗಳು ಬೆಲ್ಲ ದಮೂಲಕ “ ಗೋತುಲಾಭಾರ ಸೇವೆ” ನಡೆಸಿದರು.

