Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ:ಇನೋಳಿಯ ಬ್ಯಾರೀಸ್ ಕಾಲೇಜಿನಲ್ಲಿ ನಡೆದ ಬಿಟ್ ಉತ್ಸವ-2015 ಕಾರ್ಯಕ್ರಮದಲ್ಲಿ ಪುಟಾಣಿ ಜಾದೂಗಾರ್ತಿ ಶಮಾ ಪರ್ವಿನ್ ತಾಜ್ ಅವರಿಂದ ಈಜಿಪ್ಟ್-ಮ್ಯಾಜಿಕ್ ಇಲ್ಯೂಶನ್ ಕಾರ್ಯಕ್ರಮವು ಎಲ್ಲರ ಗಮನಸೆಳೆಯಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಧರ್ಮ ಜಾಗೃತಿ ವೇದಿಕೆ ಮುಡಿಪು ಇದರ ಆಶ್ರಯದಲ್ಲಿ ಎ.19ರಂದು ಭಾನುವಾರ ಮುಡಿಪುವಿನ ಮುಡಿಪಿನ್ನಾರ್ ದೈವಸ್ಥಾನದ ವಠಾರದಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆಯು ಮಂಗಳವಾರ ಮುಡಿಪು ಭಾರತಿ ಶಾಲಾ ವಠಾರದಿಂದ ಮುಡಿಪ್ಪಿನ್ನಾರ್ ಕ್ಷೇತ್ರದವರಗೆ ನಡೆಯಿತು. ಮುಡಿಪ್ಪಿನಾರ್ ದೈವಸ್ಥಾನದ ವಠಾರದಲ್ಲಿ ಸಾಮೂಹಿಕ ಕುಂಕುಮಾರ್ಚನೆ, ಗಣಪತಿ ಹವಣ, ಸತ್ಯನಾರಾಯಣ ಪೂಜೆ, ಶಿವ ಪೂಜೆ, ದುರ್ಗಾ ಪೂಜೆ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ, ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮ ಭಾನುವಾರ ಬೆಳಿಗ್ಗೆಯಿಂದ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದ ಧರ್ಮಜಾಗೃತಿ ವೇದಿಕೆಯ ಗೌರವ ಸಲಹೆಗಾರ ಟಿ.ಜಿ.ರಾಜಾರಾಂ ಭಟ್, ಮುಡಿಪು ಪರಿಸರದ 16 ಗ್ರಾಮಗಲ ಜನರು ಸೇರಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪರಿಸರದ ಹಿಂದೂ ಮನೆಗಳಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿ, ಮಹಿಳೆಯರಲ್ಲಿ ಧಾರ್ಮಿ ಭಾವನೆಯನ್ನು ಬೆಳೆಸುವುದರೊಂದಿಗೆ ಸಮಾಜದ ಅಸ್ಪಶ್ಯತೆಯನ್ನು ಕಿತ್ತೊಗೆಯುವ ಸಂಕಲ್ಪದೊಂದಿಗೆ ಈ ಕಾರ್ಯಕ್ರಮವು ನಡೆಯಲಿದೆ. ಸುಮಾರು ಆರು ಸಾವಿರಕ್ಕೂ ಹೆಚ್ಚು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಬಾಲಗಂಗಾಧರ ತಿಲಕ್ ಸ್ಕೌಟ್ ಕಂಪೆನಿ ಮತ್ತು ಸರೋಜಿನಿ ನಾಯ್ಡು ಗೈಡ್ಸ್ ಕಂಪೆನಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜೀವನ ಆದರ್ಶ ನಮಗೆ ಮಾದರಿ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ ಅಭಿಪ್ರಾಯಪಟ್ಟರು. ಈ ಸಂದರ್ಬದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ನಯೀಮ್ ಹಮೀದ್, ಕೆ.ಪಿ.ಸುರೇಶ್ ಮಾಡೂರು, ಶೇಖರ್ ಕೊಂಡೆವೂರು, ಸ್ಕೌಟ್ ಶಿಕ್ಷಕ ಭಾಸ್ಕರ್ ರಾವ್, ರವಿ ಕುಮಾರ್ ಕೋಡಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದೇಶಿತಾ ಕಾರ್ಯಕ್ರಮ ನಿರೂಪಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಧುನಿಕ ಜೀವನ ಶೈಲಿಯಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಒಂದು ವಾರದ ಕಾಲ ನಡೆಯಿತು. ಸಾಮಾನ್ಯ ವೈದ್ಯಕೀಯ ವಿಭಾಗದ ಆಶ್ರಯದಲ್ಲಿ ನಡೆದ ಈ ಶಿಬಿರದಲ್ಲಿ ಸುಮಾರು 500 ಮಂದಿ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಂಡರು. ಶಿಬಿರದ ಸಂದರ್ಭದಲ್ಲಿ ವೈದ್ಯರ ಸಂದರ್ಶನ, ಸಿಬಿಸಿ, ರಕ್ತದಲ್ಲಿ ಸಕ್ಕರೆ, ಎಫ್‍ಬಿಎಸ್, ಎಚ್‍ಬಿ, ಇಎಸ್‍ಆರ್, ರಕ್ತದ ಗುಂಪು, ಸೀರಂ ಕ್ರಿಯೇಟಿನ್, ಮೂತ್ರದ ಪರೀಕ್ಷೆ, ಇಸಿಜಿ, ಬಿಎಮ್‍ಐ, ಪಥ್ಯಾಹಾರದ ಸಲಹೆಗಳನ್ನು ಉಚಿತವಾಗಿ ಹಾಗೂ 50% ರಿಯಾಯಿತಿಯಲ್ಲಿ ಕೊಲೆಸ್ಟ್ರಾಲ್ ತಪಾಸಣೆ, ಎಲ್‍ಎಫ್‍ಟಿ(ಲಿವರ್), ಎಚ್‍ಬಿಎ1ಸಿ, ಟಿಎಫ್‍ಟಿ(ಥೈರೋಯ್ಡ್),ಎಕ್ಸ್‍ರೇ(ಎದೆ), ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಇಕೋ, ಟಿಎಂಟಿ(ಹೃದಯ) ಮಾಡಲಾಯಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ನಾವು ನಮ್ಮ ಕುಟುಂಬ ಮತ್ತು ನಮ್ಮ ಕೆಲಸದ ವಿಚಾರದಲ್ಲಿ ಸಂಕುಚಿತ ಮನೋಭಾವನೆ ಇರಬಾರದು.ಸ್ವಾರ್ಥ ಮನೋಭಾವನೆಯ ಜೀವನ ಇಸ್ಲಾಂನಲ್ಲಿ ಯಶಸ್ವಿಯಾಗದು. ಸಂಘಟಿತ ಜೀವನಕ್ಕೆ ನಾವು ಒತ್ತು ಕೊಡಬೇಕೇ ಹೊರತು ವೈಯಕ್ತಿಕ ಜೀವನಕ್ಕಲ್ಲ. ಎಂದು ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಪಿಹೇಳಿದರು. ಅವರು ಉಳ್ಳಾಲ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಒಂಟಿ ಜೀವನಕ್ಕಿಂತ ಸಂಘಟಿತ ಜೀವನಕ್ಕೆ ಇಸ್ಲಾಂ ಶ್ರೇಷ್ಟತೆಯನ್ನು ಕಲ್ಪಿಸಿದೆ.ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಬಹಳಷ್ಟು ಬರಬಹುದು. ಅದನ್ನು ಎದುರಿಸಿಕೊಂಡು ಬರುವ ಶಕ್ತಿ ನಮ್ಮಲ್ಲಿರಬೇಕು.ಸಮಸ್ಯೆ ಇದೆ ಎಂದು ಕೌಟುಂಬಿಕ ಜೀವನವನ್ನು ದೂರಮಾಡಬೇಡಿ. ಪ್ರವಾದಿಯವರು ಇಷ್ಟಪಟ್ಟಿರುವುದು ಕೌಟುಂಬಿಕ ಜೀವನವನ್ನೇ ಹೊರತು ಒಂಟಿ ಜೀವನವನ್ನಲ್ಲ ಇಹಲೋಕ ಮತ್ತು ಪರಲೋಕ ರಕ್ಷಣೆಗೆ ನಮಗೆ ಬೇಕಾಗಿರುವುದು ಸುನ್ನತ್ ಜಮಾಅತ್. ನಾವು ಸುನ್ನತ್‍ಜಮಾಅತ್‍ನ ಸಿದ್ದಾಂತಗಳನ್ನು ಅನುಕರಣೆ ಮಾಡಿಕೊಂಡು ಜೀವಿಸಿದರೆ ಮಾತ್ರ ರಕ್ಷಣೆ ಸಿಗಬಹುದು ಎಂದು ಹೇಳಿದರು. ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಭಾಷಣ ಮಾಡಿದರು.ಉಳ್ಳಾಲ ಖಾಝಿ ಅಸ್ಸಯ್ಯದ್ ಪಝಲ್ ಕೋಯಮ್ಮ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ನಡುಪದವು ಸಮೀಪದ ಪಟ್ಟೋರಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ಉರುಳಿ ಬಿದ್ದ ಘಟನೆ ಸೋಮವಾರ ನಡೆದಿದ್ದು, ಕಾರು ಬಿದ್ದ ರಭಸಕ್ಕೆ ತೋಟದಲ್ಲಿದ್ದ ತೆಂಗಿನ ಮರವೊಂದು ಮುರಿದು ಬಿದ್ದಿದೆ. ಅದೃಷ್ಟವಶಾತ್ ಕಾರು ಚಾಲಕ ಅಲ್ಪಸ್ವಲ್ಪ ಗಾಯದೊಂದಿಗೆ ಪಾರಾಗಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಪ್ರೀತಿ, ಭೀತಿ, ನೀತಿ ಮೂರು `ತಿ’ಗಳು ಇರುವಲ್ಲಿ ದೇವರು ಭಕ್ತರನ್ನು ಸಂರಕ್ಷಣೆ ಮಾಡುತ್ತಾರೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣ ಹೇಳಿದರು. ಅವರು ಪಿಲಾರು ಲಕ್ಷ್ಮೀಗುಡ್ಡೆಯ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ ಭಾನುವಾರ ಜರಗಿದ ಶ್ರೀನಾಗಬ್ರಹ್ಮ ದೇವರ ಮತ್ತು ರಕ್ತೇಶ್ವರಿಯ 6 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ಕೆತ್ತಿದ ಶಿಲೆಗಳಲ್ಲಿ ದೇವರು ಇರುವುದಿಲ್ಲ. ಆದರೆ ಮೂರು`ತಿ’ಗಳನ್ನು ಜೀವನದಲ್ಲಿ ಅಳವಡಿಸಿದಲ್ಲಿ ದೇವರನ್ನು ಕಾಣಲು ಸಾಧ್ಯ. ದೇವರ ಮೇಲೆ ವಿಶ್ವಾಸ ಇಟ್ಟವರೆಂದರೆ ಆ ಊರಿನ ಜನರು ಸಜ್ಜನರೆಂದು ಅರ್ಥ. ನಂಬಿಕೆ, ವಿಶ್ವಾಸಗಳಿರುವ ಕಡೆಗಳಲ್ಲಿ ದೇವರ ಸಾನಿಧ್ಯ ಇರುತ್ತದೆ ಎಂದರು. ಪೆರ್ಮನ್ನೂರು ನಿತ್ಯಾಧರ್ ಚರ್ಚಿನ ಧರ್ಮಗುರುಗಳಾದ ಫಾ. ಎಲಿಯಾಸ್ ಡಿಸೋಜಾ ಮಾತನಾಡಿ ಕರಾವಳಿ ಜಿಲ್ಲೆಯಲ್ಲಿ ನಾಗಾರಾಧನೆಗೆ ಹೆಚ್ಚಿನ ಮಹತ್ವ ಇದೆ. ಇಂತಹ ಧಾರ್ಮಿಕ ಆಚರಣೆಗಳ ಮೂಲಕ ಪ್ರತಿಯೊಬ್ಬರು ಶಾಂತಿ ಸಹಬಾಳ್ವೆಯಿಂದ ಬಾಳಬೇಕಿದೆ ಎಂದರು. ಯೆನೆಪೋಯ ಗ್ರೂಪ್ ಮಂಗಳೂರಿನ ನಿರ್ದೇಶಕ ಎ.ರಾಮಚಂದ್ರ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಯೋಗ ಭಾರತದ ಕೊಡುಗೆಯಾದರೂ ಅದಕ್ಕೆ ಅಮೇರಿಕಾದಂತಹ ಪ್ರಭಾವಿ ರಾಷ್ಟ್ರಗಳು ಸರ್ಟಿಫಿಕೇಟ್ ಕೊಟ್ಟರೆ ಮಾತ್ರ ಅದು ಶ್ರೇಷ್ಠ ಎಂಬ ಭಾವನೆ ಜನರಲ್ಲಿ ಬಂದು ಬಿಟ್ಟಿದೆ. ಅಷ್ಟಕ್ಕೂ ಅಮೇರಿಕಾದಲ್ಲೂ ಯೋಗ ಕಲಿಸಿಕೊಡುವುದು ಭಾರತೀಯ ಯೋಗಗುರುಗಳು. ಹಿಂದೆ ಹೊಟ್ಟೆ ತುಂಬ ತಿನ್ನಲು ಕಷ್ಟವಿತ್ತು. ಆದರೆ ಜೀರ್ಣಿಸಿಕೊಳ್ಳಲು ಶಕ್ತಿ ಇತ್ತು. ಆದರೆ ಈಗ ತಿಂದದ್ದನ್ನು ಕರಗಿಸಲು ನಾನಾ ಕಸರತ್ತುಗಳಿಗೆ ಮೊರೆ ಹೋಗುತ್ತಿರುವವರು ಯೋಗ ಶಿಕ್ಷಣದ ಮಹತ್ವ ಅರಿತುಕೊಂಡಿಲ್ಲ ಎಂದು ರಾಜ್ಯ ಪ್ರಶಸ್ತಿ ಪುರಸ್ಕ ೃತ, ಕನ್ನಡ ರತ್ನ ಕಲಾವಿದ ರವಿ ಅಲೆವೂರಾಯ ವರ್ಕಾಡಿ ಅಭಿಪ್ರಾಯಪಟ್ಟರು. ವಿಷುಪೂಜೆಯ ಪ್ರಯುಕ್ತ ವರ್ಕಾಡಿ ಗ್ರಾಮದ ತೌಡುಗೋಳಿಯ ಶ್ರೀ ದುರ್ಗಾ ದೇವಿ ಕ್ಷೇತ್ರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಕ್ಷೇತ್ರದ ನವೀಕರಣಕ್ಕಾಗಿ ಜೀರ್ಣೋದ್ಧಾರ ಸಮಿತಿ ರಚನೆ ಹಾಗೂ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. ಧರ್ಮ ಭಾರತದಲ್ಲಿ ಮಾತ್ರ ಇರೋದು. ಬೇರೆ ಕಡೆ ಧರ್ಮ ಇಲ್ಲ.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಇಂದಿನ ಯುವಜನತೆಗೆ ಹೆಚ್ಚಿನ ರೋಗಗಳು ಅವರು ತಿನ್ನುವ ಆಹಾರದಿಂದಲೇ ಬರುತ್ತಿದೆ. ನಾವು ತಿನ್ನುವ ಆಹಾರ ಬಗ್ಗೆ ಯುವಜನತೆಗೆ ಹೆಚ್ಚು ನಿಗಾ ವಹಿಸಿದಲ್ಲಿ ಹೆಚ್ಚಿನ ರೋಗಗಳನ್ನು ತಡೆಗಟ್ಟಬಹುದು. ಕೊಬ್ಬಿನಿಂದ ಕೂಡಿದ ಕರಿದ ಪದಾರ್ಥ ಸರಿಯಾಗಿ ಬೇಯಿಸದೇ ಮಾಂಸಹಾರ ತಿನ್ನುವುದು, ಸರಿಯಾಗಿ ಶುಚಿಗೊಳಿಸದೇ ಆಹಾರ ಪದಾರ್ಥಗಳನ್ನು ಬಳಸುವುದರಿಂದಲೇ ಹೆಚ್ಚಿನ ರೋಗಗಳು ಬರುತ್ತವೆ, ಮತ್ತು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ ಜನರು ಹೆಚ್ಚು ಗಮನಹರಿಸಿ ಪೋಷಕಾಂಶಯುಕ್ತ ಕೊಬ್ಬುರಹಿತ ಆಹಾರವನ್ನು ಮತ್ತು ಹೆಚ್ಚು ಹೆಚ್ಚು ಹಸಿ ತರಕಾರಿ, ಸೊಪ್ಪು,ಪಲ್ಯಗಳಿಂದ ಕೂಡಿದ ಮೂಲಾಹಾರ ಸೇವಿಸದಲ್ಲಿ ಬಹಳಷ್ಟು ರೋಗಗಳನ್ನು ತಡೆಗಟ್ಟಬಹುದು ಮತ್ತು ರೋಗನಿರೋಧಕ ಶಕ್ತಿಯೂ ವ್ರದ್ಧಿಸುತ್ತದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜಕ ಮತ್ತು ಗ್ರಹರಕ್ಷಕದಳದ ಕಮಾಂಟೆಂಟ್ ಡಾ. ಮುರಳೀ ಮೋಹನ್ ಚೂಂತಾರು ತಿಳಿಸಿದರು. ಅವರು ನಿಟ್ಟೆವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯವತಿಯಿಂದ ವಿಶ್ವ ಆರೋಗ್ಯ ವಾರ ಮತ್ತು ವಿಶ್ವ ಆರೋಗ್ಯದಿನ (ಎಪ್ರಿಲ್7)ದ ಅಂಗವಾಗಿ ಇನೋಳಿಯ ಸರಕಾರಿ ಶಾಲೆಯಲ್ಲಿ “ದೈಹಿಕ ಆರೋಗ್ಯದಲ್ಲಿ ಆಹಾರದ ಪಾತ್ರ”…

Read More

ಉಳ್ಳಾಲ: ಪದವಿ ಪಡೆದ ಪಂಡಿತರು ಮುಂದಿನ ದಿನಗಳಲ್ಲಿ ಧರ್ಮಪ್ರಚಾರಕರಾಗಿ ಸುನ್ನತ್ ಜಮಾಅತ್ನ ಆಶಯ ಆದರ್ಶವನ್ನು ಜಗತ್ತಿನೆಲ್ಲಡೆ ಪಸರಿಸುವ ಜವಬ್ದಾರಿಯನ್ನು ನಿಭಾಯಿಸಬೇಕು ಎಂದು ಉದ್ಯಾವರ ಅತ್ತಾವುಲ್ಲ ತಂಙಳ್ ಅಭಿಪ್ರಾಯಪಟ್ಟರು. ಅವರು ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ೪೫ನೆಯ ವಾರ್ಷಿಕ ಮತ್ತು ೩೫ನೆಯ ಸನದು ದಾನ ಮತ್ತು ಸಯ್ಯಿದ್ ಮದನಿ ಹಿಫ್ಲುಲ್ ಖುರ್ಆನ್ ಕಾಲೇಜಿನ ಪ್ರಥಮ ಸನದುದಾನ ಮಹಾ ಸಮ್ಮೇಳನದಲ್ಲಿ ಸನದುದಾನ ಮಾಡಿ ಮಾತನಾಡಿದರು. ಧರ್ಮ ಗುರುಗಳು ಕಲಿಸಿದ ಧಾರ್ಮಿಕ ಶಿಕ್ಷಣಕ್ಕಿರುವ ಶ್ರೇಷ್ಠತೆ ಇತರರು ಕಲಿಸಿದ ಶಿಕ್ಷಣಕ್ಕೆ ಇರಲಾರದು. ಪದವಿ ಪಡೆದಾಕ್ಷಣ ಪಂಡಿತನಾಗಲು ಸಾಧ್ಯವಿಲ್ಲ. ಯಾಕೆಂದರೆ ನಾವು ಪಡೆದ ಪದವಿಯ ಹಿಂದೆ ಗುರುಗಳ ಆಶೀರ್ವಾದ ಅತಿ ಮುಖ್ಯ. ಗುರುಗಳ ಮೂಲಕ ಪಡೆದ ಶಿಕ್ಷಣದ ಮೌಲ್ಯ ಶ್ರೇಷ್ಠವಾದದ್ದು. ಧರ್ಮಗುರುಗಳನ್ನು ಉಲ್ಲಂಘಿಸಿ ಅವರ ಮಾತುಗಳನ್ನು ಧಿಕ್ಕರಿಸಿ ಮುನ್ನಡೆದವರು ಸಮಾಜದಲ್ಲಿ ಎಂದೂ ಗೌರವದ ಬದುಕು ಬಾಳಲು ಸಾಧ್ಯವಾಗಿಲ್ಲ ಎಂದು ಮಹಾ ಸಮ್ಮೇಳನ ಉದ್ಘಾಟಿಸಿದ ಉಡುಪಿ ಸಂಯುಕ್ತ ಖಾಝಿ ಬೇಕಲ ಅಬ್ದುಲ್ ಮುಸ್ಲಿಯಾರ್ ಏನುಡಿದರು. ಪ್ರವಾದಿಯವರು ಧಾರ್ಮಿಕ ಶಿಕ್ಷಣಕ್ಕೆ ಪ್ರತ್ಯೇಕ…

Read More