ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಆಂಧ್ರಪ್ರದೇಶ: ಕಾರು ಮತ್ತು ಬಸ್ಸು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರದ ಚಿತ್ತೂರು ಜಿಲ್ಲೆಯ ಮೆಟ್ಟಪುರ್ವಪಲ್ಲಿ ಗ್ರಾಮದ ಬಳಿ ನಡೆದಿದೆ. ಮೃತ ದುರ್ದೈವಿಗಳನ್ನು ಕಾರು ಚಾಲಕ ವೇಣುಗೋಪಾಲ್(22), ಸುಮಿತ್ರ(25), ಕಾಳಮ್ಮ, ರಮಣಮ್ಮ ಹಾಗೂ 3 ವರ್ಷದ ಮೇನಕ ಎಂದು ತಿಳಿದುಬಂದಿದೆ. ಬೈರೆಡ್ಡಿಪಲ್ಲಿಯಲ್ಲಿನ ವಿವಾಹ ಸಮಾರಂಭಕ್ಕೆಂದು ಕಾರಿನಲ್ಲಿ ಐವರು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬಂಟ್ವಾಳ: ಬಂಟ್ವಾಳದ ಮನಿಹಳ್ಳದಲ್ಲಿ ನಡೆದ ಹರೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಇಂದು ಬಂಟ್ವಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭುವಿತ್ ಶೆಟ್ಟಿ(25) ಮತ್ತು ಅಚ್ಯುತ್(28) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನು ಮೂರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಬಂಧನದ ಬಗ್ಗೆ ಐಜಿಪಿ ಅಮೃತ್ ಪಾಲ್ ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ್ದು, ಆರೋಪಿಗಳು ಕೂಡ ಬಂಟ್ವಾಳ ನಗರ ಠಾಣೆಯ ರೌಡಿಶೇಟರುಗಳು ಎಂದು ತಿಳಿದುಬಂದಿದೆ. ಆರೋಪಿ ಭುವಿತ್ ಶೆಟ್ಟಿ ಎಂಬಾತ ಈ ಹಿಂದೆ ಟ್ವಿಟರ್ನಲ್ಲಿ ಕಲುಬುರ್ಗಿ ಹತ್ಯೆಯನ್ನು ಸಮರ್ಥಿಸಿ ಬಂಟ್ವಾಳ ಪೊಲೀಸರಿಂದ ಬಂಧಿತನಾಗಿದ್ದನು. ನವೆಂಬರ್ 12ರಂದು ಸಂಜೆ ತನ್ನ ಮುಸ್ಲಿಂ ಗೆಳೆಯ ಶಮೀವುಲ್ಲಾ ಎಂಬಾತನ ಜೊತೆ ಮನೆಗೆ ಬರುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದು, ಘಟನೆಯಲ್ಲಿ ಹರೀಶ್ ಸಾವನ್ನಪ್ಪಿದ್ದು, ಶಮೀವುಲ್ಲಾ ಗಂಭೀರಗಾಯಗೊಂಡು ನಗರದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಹತ್ಯೆಯನ್ನು ಖಂಡಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಮಂಗಳೂರು ಬಂದ್ ನಡೆಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು: ತುಳುನಾಡ್ ಫ್ರೆಂಡ್ಸ್ ಕ್ಲಬ್ ಕೋಟೆಕಾರ್ ಇದರ 36ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶೇಷಪ್ಪ ಬೈದ್ಯಮನೆ ಇವರ ಅಧ್ಯಕ್ಷತೆಯಲ್ಲಿ ವಿಷ್ಣಮೂರ್ತಿ ದೇವಸ್ಥಾನದ ರಾಜಗೋಪುರದಲ್ಲಿ ಇತ್ತೀಚೆಗೆ ನಡೆಯಿತು. 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೇಷಪ್ಪ ಬೈದ್ಯಮನೆ ಕೋಟೆಕಾರು ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಮೋಹನ್ ರಾಜ್ ಕನೀರುತೋಟ, ಉಪಾಧ್ಯಕ್ಷರಾಗಿ ರೇವಾನಂದ ಕೋಟೆಕಾರು, ಬೀರಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸನ್ನ ನೆತ್ತಿಲ ಕೆಳಗಿನ ಹಿತ್ತಿಲು, ಜೊತೆ ಕಾರ್ಯದರ್ಶಿಯಾಗಿ ಸುಜಿತ್ ಮಾಡೂರು, ಕೋಶಾಧಿಕಾರಿಯಾಗಿ ಪ್ರಸಾದ್ ಬೈದ್ಯಮನೆ, ಕ್ರೀಡಾ ಕಾರ್ಯದರ್ಶಿಯಾಗಿ ನಿಖಿಲ್ ಬೈದ್ಯಮನೆ, ಸಂದೀಪ್ ನೆತ್ತಿಲ ಕೆಳಗಿನ ಹಿತ್ತಿಲು, ಸಂಘಟನಾ ಕಾರ್ಯದರ್ಶಿಯಾಗಿ ಸುನಿಲ್ ಮಾಡೂರು, ರಾಧಾಕೃಷ್ಣ ಶೇಡಿಪಳ್ಳ, ಪ್ರದೀಪ್ ಬೈದ್ಯಮನೆ, ನಾಗೇಶ್ ಟೈಲರ್ ಶೇಡಿಪಳ್ಳ, ಮೋಹನ್ ಬೀರಿ ಕೋಟೆಕಾರು, ಸಾಂಸ್ಕøತಿಕ ಸಂಚಾಲಕರಾಗಿ ಪ್ರಭಾಕರ ಕನೀರುತೋಟ, ಪ್ರಕಾಶ್ ಬೈದ್ಯಮನೆ, ಪ್ರಶಾಂತ್ ಅಡ್ಕ, ಉಳಿತಾಯ ನಿಧಿ ಸಂಚಾಲಕರಾಗಿ ಪ್ರಮೋದ್ ಬೈದ್ಯಮನೆ, ಚಂದ್ರಹಾಸ ಮಾಡೂರು, ಲೆಕ್ಕಪರಿಶೋಧಕರಾಗಿ ದೇವದಾಸ್ ಮಾಡೂರು, ತಿಮ್ಮಪ್ಪ ನೆಲ್ಯಾಡಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ರವಿ, ರಾಕೇಶ್…
ಮಾಡೂರು: ವ್ಯಾವಹಾರಿಕ ಅಭಿವೃದ್ಧಿ ಜತೆಗೆ ಸಮಾಜವನ್ನು ಬೆಳೆಸುವ ಕಾರ್ಯ ನಡೆಯಬೇಕಿದ್ದು, ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ತಮ್ಮಲ್ಲಿರುವ ಕೌಶಲ್ಯವನ್ನು ಬೆಳೆಸುವ ತರಬೇತಿ ಅಗತ್ಯ ಬೇಕಿದೆ ಎಂದು ಓಎನ್ ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ನ ನಿರ್ದೇಶಕ ಜೈದೀಪ್ ಘೋಷ್ ಅಭಿಪ್ರಾಯಪಟ್ಟರು. ಅವರು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜು ( ಸ್ವಾಯುತ್ತ), ಸಂತ ಅಲೋಷಿಯಸ್ ನಿರ್ವಹಣೆ ಮತ್ತು ಮಾಹಿತಿ ತಂತ್ರಜ್ಞಾನ, ವ್ಯವಹಾರ ಆಡಳಿತ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಬೀರಿ ಮಾಡೂರಿನ ಅಲೋಷಿಯಸ್ ಕಾಲೇಜಿನ ಅಲೋಷಿಯಸ್ ಅರ್ತೂರ್ ಶೆಣೈ ಆಡಿಟೋರಿಯಂನಲ್ಲಿ ಬುಧವಾರದಂದು ಆಯೋಜಿಸಲಾದ ಇನ್ಸಿಗ್ನಿಯಾ-2015 ಇನೋವೇಟ್ ಇಂಡಿಯಾ ರಾಷ್ಟ್ರೀಯ ಮಟ್ಟದ ಬಿ- ಸ್ಕೂಲ್ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವ್ಯಾವಹಾರಿಕ ತರಬೇತಿ ವೇಳೆ ಸಮಗ್ರ ನೋಟವನ್ನು ಗಮನಿಸಿ ಸಮಾಜವನ್ನು ಆರ್ಥಿಕವಾಗಿ ಸುಧಾರಿಸುವ ರೀತಿಯಲ್ಲಿ ಕಾರ್ಯಚಟುವಟಿಕೆ ನಡೆಸಬೇಕಿದೆ. ವಿದ್ಯುತ್, ಇನ್ಫ್ರಾಸ್ಟ್ರಕ್ಚರ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿದ್ದು, ಅದಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಸಕಾರತ್ಮಕ ಗುಣಗಳನ್ನು ತಮ್ಮಲ್ಲಿ ವಿದ್ಯಾರ್ಥಿಗಳು ರೂಪಿಸುವ ಅಗತ್ಯ ಇದೆ. ಜಗತ್ತಿನ ಹೂಡಿಕೆದಾರರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಜೀರು: ಗೋಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಸಹಕಾರಿ ಸಂಘಗಳು ಪಶುಸಂಗೋಪನೆಯ ಸೇವಾ ಕಾರ್ಯಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದು ಕ್ಯಾಂಪ್ಲೆಕ್ಸ್ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಭಿಪ್ರಾಯಪಟ್ಟರು. ಅವರು ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ಇದರ ಪಜೀರು ಬೀಜಗುರಿಯ ಗೋಶಾಲಾ ವಠಾರದಲ್ಲಿ ನಡೆದ ಸಾಮೂಹಿಕ ಗೋಪೂಜೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ಎಮ್. ಕವಿತಾ ಎಸ್. ಶಾಸ್ತ್ರಿ ಮಾತನಾಡಿ ನಮ್ಮ ಸಂಸ್ಕøತಿಯ ದ್ಯೂತಕವಾಗಿರುವ ಗೋಸೇವೆಯಲ್ಲಿ ಎಲ್ಲರು ತಮ್ಮನ್ನು ತೊಡಗಿಸಿಕೊಳ್ಳಬೇಕು. ಪಜೀರಿನಲ್ಲಿ ನಡೆಸುತ್ತಿರುವ ಗೋಶಾಲೆ ಸಮಾಜಕ್ಕೆ ಒಂದು ಮಾದರಿಯಾಗಿದ್ದು ಇದಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಗೋಶಾಲೆಗೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅನುದಾನದಿಂದ ಬೇಕಾದ ಕಾಮಗಾರಿ ನಡೆಸಿದ್ದು, ಮುಂದಿನ ದಿನಗಳಲ್ಲಿ ಸಂಸದರ ನಿಧಿಯಿಂದ ಅಭಿವೃದ್ಧಿ ಕಾರ್ಯಕ್ಕೆ ಬೇಕಾದ ಅನುದಾನವನ್ನು ಬಿಡುಗಡೆಮಾಡಲು ಮಾತುಕತೆ ನಡೆಸಿದ್ಧೆನೆ ಎಂದರು. ಪಜೀರು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ಉಳ್ಳಾಲದಲ್ಲಿ ಆಹಿತಕರ ಘಟನೆಗಳು ಮುಂದುವರೆದಿದ್ದು ಭಾನುವಾರ ಮೊಗವೀರಪಟ್ಣದಲ್ಲಿ ದುಷ್ಕಮಿಗಳು ಬಸ್ಸೊಂದಕ್ಕೆ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಸಂಜೆ ವೇಳೆಗೆ ಉಳ್ಳಾಲದಲ್ಲಿ ಬಿಗು ಬಂದೋಬಸ್ತ್ ಮುಂದುವರೆದಿದ್ದು ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಕೆಎಸ್ಆರ್ಪಿ ಪಡೆ ಪಥ ಸಂಚಲನ ನಡೆಸಿತು. ಮಧ್ಯಾಹ್ನದ ವೇಳೆಗೆ ಉಳ್ಳಾಲ ಕೋಟೆಪುರದಿಂದ ಸೀರೋಡ್ ಆಗಿ ಮೊಗವೀರಪಟ್ಣ ಬಳಿ ಬರುತ್ತಿದ್ದ ಶಾಲಿಮಾರ್ ಬಸ್ಸಿನ ಮುಂದಿನ ಗಾಜಿಗೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದು ಬಸ್ಸಿನ ಮುಂದಿನ ಗಾಜು ಸಂಪೂರ್ಣ ಹಾನಿಯಾಗಿದೆ. ಈ ಸಂದರ್ಭದಲ್ಲಿ ಬಸ್ಸಿನಲ್ಲಿ ಪ್ರಯಾಣಿಕರು ಯಾರು ಇರಲಿಲ್ಲ ಎನ್ನಲಾಗಿದೆ. ಬಿಗು ಬಂದೋಬಸ್ತ್ ಪಥ ಸಂಚಲನ : ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಆಹಿತಕರ ಘಟನೆಯಿಂದ ಉಳ್ಳಾಲದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದ್ದು ಭಾನುವಾರ ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆ.ಎಸ್.ಆರ್.ಪಿ. ಮತ್ತು ಸ್ಥಳೀಯ ಪೆÇಲೀಸರು ಪಥ ಸಂಚಲನ ನಡೆಸಿದರು. ಪಥ ಸಂಚಲನವು ಉಳ್ಳಾಲ ಅಬ್ಬಕ್ಕ ಸರ್ಕಲ್, ಮೊಗವೀರಪಟ್ಣ, ಸೀರೋಡ್, ಕೋಟೆಪುರ ಮಾರ್ಗವಾಗಿ ಉಳ್ಳಾಲ ಕೋಡಿ,ಉಳ್ಳಾಲ ಜಂಕ್ಷನ್ನಲ್ಲಿ ಸಮಾಪ್ತಿಯಾಯಿತು. ಪಥ ಸಂಚಲನದಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಒಂಭತ್ತುಕೆರೆ: ಟಿಪ್ಪು ಜಯಂತಿಯ ದಿನದಿಂದ (ನವಂಬರ್ 10) ಆರಂಭವಾದ ಅಹಿತಕರ ಘಟನೆಗಳ ಸರಣಿ ಇತರೆಡೆಗಳಲ್ಲಿ ಕಡಿಮೆಯಾಗುತ್ತಾ ಬಂದಿದ್ದರೂ ಉಳ್ಳಾಲದಲ್ಲಿ ಮಾತ್ರ ಇಂತಹ ಘಟನೆಗಳು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ.ಇದಕ್ಕೆ ವ್ಯತಿರಿಕ್ತ ಎಂಬಂತೆ ಇಲ್ಲಿನ ಒಂಬತ್ತುಕೆರೆಯ ಅಬ್ಬಂಜರ ಶ್ರೀಗೋಪಾಲಕೃಷ್ಣ ಭಜನಾ ಮಂದಿರಕ್ಕೆ ದುಷ್ಕರ್ಮಿಗಳು ಕಲ್ಲೆಸೆದು ಕಿಟಕಿ ಗಾಜುಗಳನ್ನು ಪುಡಿಗೈದ ಘಟನೆ ಸೋಮವಾರ ನಡೆದಿದೆ. ಜೊತೆಗೆ ಮಂದಿರದ ಮುಂದೆ ನಿಲ್ಲಿಸಲಾಗಿದ್ದ ಮಿನಿಬಸ್ಗೆ ಕೂಡಾ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರು ಬಿಗಿಪಹರೆ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆಎಸ್ಆರ್ಪಿ ಜಂಟಿಯಾಗಿ ಪಥಸಂಚಲನ ನಡೆಸಿದ ಬೆನ್ನಿಗೇ ಇಂದು ಮತ್ತೆ ಕಿಡಿಗೇಡಿಗಳು ತಮ್ಮ ಕುತಂತ್ರವನ್ನು ಮುಂದುವರಿಸಿದ್ದಾರೆ. ಯುವಕರಿಗೆ ಚೂರಿಯಿರಿತ, ಬಸ್ಗಳಿಗೆ ಕಲ್ಲು ಹೀಗೆ ಹಲವು ಘಟನೆಗಳ ನಂತರವೂ ಉಳ್ಳಾಲದ ಜನರು ಶಾಂತಿ ಕಾಯ್ದುಕೊಂಡು ಬಂದಿದ್ದು ದುಷ್ಕರ್ಮಿಗಳ ಗಲಭೆಯನ್ನು ಸೃಷ್ಠಿಸುವ ಹುನ್ನಾರವನ್ನು ವಿಫಲ ಮಾಡಿದ್ದಾರೆ. ಈ ಮಧ್ಯೆ ಉಳ್ಳಾಲ ಪರಿಸರದಲ್ಲಿ ಶಾಂತಿ ಕೆಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಈ…
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಕೆಲಸ ಮುಗಿಸಿ ಮನೆಗೆ ಸ್ನೇಹಿತನ ಜತೆಗೆ ಬೈಕಿನಲ್ಲಿ ತೆರಳುತ್ತಿದ್ದ ಯುವಕನಿಗೆ ಬೇರೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಶನಿವಾರ ತಡರಾತ್ರಿ ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆ ಎಂಬಲ್ಲಿ ನಡೆದಿದೆ. ಚೂರಿ ಇರಿತಕ್ಕೊಳಗಾದಾತನನ್ನು ಪಾವೂರು ಇನೋಳಿ ನಿವಾಸಿ ಧೀರಜ್ (25) ಎಂದು ಗುರುತಿಸಲಾಗಿದೆ. ಮಂಗಳೂರಿನ ಡಿಜಿಟಲ್ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮುಗಿಸಿ, ಸ್ನೇಹಿತ ಸೀತೇಶ್ ಎಂಬಾತನ ಬೈಕಿನಲ್ಲಿ ಹಿಂಬದಿ ಸವಾರನಾಗಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಪ್ಪು ಪಲ್ಸಾರ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಇದರಿಂದ ಭುಜದ ಭಾಗಕ್ಕೆ ಗಾಯಗೊಂಡಿರುವ ಧೀರಜ್ ನನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಸಮುದ್ರಕ್ಕೆ ಜಿಗಿದು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು, ಈಜುಗಾರ ಸಂಘದವರು ರಕ್ಷಣೆಗೆ ಮುಂದಾದರೂ ಕಾರ್ಯಾಚರಣೆ ವಿಫಲವಾಗಿ ಆತ ಸಾವನ್ನಪ್ಪಿರುವ ಘಟನೆ ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ಶನಿವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.ಮಾಡೂರು ನಿವಾಸಿ ದಿ| ನಾರಾಯಣ ಎಂಬವರ ಪುತ್ರ ರಂಜಿತ್ (26) ಆತ್ಮಹತ್ಯೆಗೈದವರು ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಸೋಮೇಶ್ವರದ ರುದ್ರಪಾದೆಯಲ್ಲಿ ಕುಳಿತಿದ್ದ ರಂಜಿತ್ ಏಕಾಏಕಿ ಸಮುದ್ರಕ್ಕೆ ಧುಮುಕಿದಾಗ ಸ್ಥಳದಲ್ಲೇ ಇದ್ದ ಈಜುಗಾರರಾದ ಅಶೋಕ್ ಮತ್ತು ಮೋಹನ್ ಎಂಬವರು ಸಮುದ್ರಕ್ಕೆ ರಕ್ಷಣೆಗೆಂದು ತೆರಳಿದ್ದರು. ಆದರೆ ನೀರಿನ ರಭಸಕ್ಕೆ ರಂಜಿತ್ ಮುಳುಗಿದ್ದರಿಂದಾಗಿ ನೀರಿನಲ್ಲಿ ಸಾವನ್ನಪ್ಪಿದ್ದಾರೆ. ಒಂದು ಗಂಟೆ ಕಾಲ ಇಬ್ಬರೂ ಈಜುಗಾರರು ಸಮುದ್ರದಲ್ಲಿ ಹುಡುಕಾಡಿ ಮೃತದೇಹವನ್ನು ಹೊರತೆಗೆದಿದ್ದಾರೆ. ಬೆಂಗಳೂರಿನಲ್ಲಿ ರಿಲಾಯನ್ಸ್ ಸಂಸ್ಥೆಗೆ ಸೇರಿದ ಕಂಪೆನಿಯಲ್ಲಿ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈತ ಇತ್ತೀಚೆಗೆ ಊರಿಗೆ ಬಂದಿದ್ದ. ಮಾನಸಿಕವಾಗಿ ನೊಂದುಕೊಂಡಿದ್ದ ಈತ ಆತ್ಮಹತ್ಯೆಗೈದಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ವಿಚಾರಣೆಗೆಂದು ಕರೆದ ಪೊಲೀಸರನ್ನು ಕಂಡು ಸಮುದ್ರದಲ್ಲಿ ಈಜಿ ಪರಾರಿಯಾಗಲು ಯತ್ನಿಸುತ್ತಿದ್ದ ಮೂರು ಮಂದಿಯ ತಂಡಕ್ಕೆ ದೋಣಿಯಲ್ಲಿ ಇದ್ದ ದುಷ್ಕರ್ಮಿಗಳು ದೊಣ್ಣೆಯಿಂದ ತಲೆಗೆ ಬಡಿದು ಸಮುದ್ರದಲ್ಲೇ ಹಲ್ಲೆ ನಡೆಸಿರುವ ಘಟನೆ ಮೊಗವೀರಪಟ್ನದ ಸಮುದ್ರತೀರದಿಂದ ಕೆಲ ಮೀ ದೂರದಲ್ಲಿ ಶನಿವಾರ ಸಂಜೆ ಸಂಭವಿಸಿದ್ದು, ಘಟನೆಯಿಂದಾಗಿ ಮೊಗವೀರಪಟ್ನದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಉಳ್ಳಾಲಬೈಲು ನಿವಾಸಿ ಇಕ್ಬಾಲ್ ಎಂಬವರಿಗೆ ತಂಡವೊಂದು ಕೋಟೆಪುರ ಡೀರೋಡ್ ಬಳಿ ಮಾರಕಾಸ್ತ್ರದಿಂದ ಶುಕ್ರವಾರ ರಾತ್ರಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣಾ ಉಪನಿರೀಕ್ಷಕಿ ಭಾರತಿ ಅವರ ತಂಡ ಆರೋಪಿಗಳ ಹುಡುಕಾಟದಲ್ಲಿ ನಿರತವಾಗಿತ್ತು. ಈ ಸಂದರ್ಭ ಮೊಗವೀರಪಟ್ನದತ್ತ ತೆರಳಿದ್ದ ಎಸ್.ಐ ಭಾರತಿ ನೇತೃತ್ವದ ಪೊಲೀಸರ ತಂಡ ಮೀನುಗಾರಿಕೆಯಿಂದ ವಾಪಸ್ಸಾಗಿ ಊಟ ಮುಗಿಸಿ ಮೊಗವೀರಪಟ್ನ ಬಳಿ ಸಮುದ್ರ ತೀರದಲ್ಲಿ ಕುಳಿತಿದ್ದ ಐದು ಮಂದಿಯನ್ನು ವಿಚಾರಣೆಗೆಂದು ಕರೆದಿದ್ದರು. ಇದರಿಂದ ಗಾಬರಿಗೊಂಡ ಐದು ಮಂದಿ ಯುವಕರ ಪೈಕಿ ಮೂವರು ಓಡಿ ಪರಾರಿಯಾದರೆ, ಇಬ್ಬರು ಸಮುದ್ರಕ್ಕೆ ಜಿಗಿದು ಈಜುತ್ತಲೇ ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ. ದೊಣ್ಣೆಯಿಂದ…

