ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿರವುದೇ ಲಿಂಗತಾರತಮ್ಯಕ್ಕೆ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಹಿರಾದಂತಹ ಶಿಕ್ಷಣ ಸಂಸ್ಥೆಗಳು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಶ್ಲಾಘನೀಯ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಹಿರಾ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜು ಹಿರಾ ನಗರ ತೊಕ್ಕೊಟ್ಟು ಇದರ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶತಶತಮಾನಗಳಿಂದ ಹಿಂದೂ ಮತ್ತು ಇಸ್ಲಾಂ ಧರ್ಮದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಮಾಜದಲ್ಲಿ ಹೆಣ್ಣು ಮಕ್ಕಳು ಶಿಕ್ಷಿತರಾಗಿ ಆರ್ಥಿಕ ಸಬಲರಾದರೆ ಮಾತ್ರ ಸಮಾಜದ ಸರ್ವಾಂಗೀನ ಅಭಿವೃದ್ಧಿ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವದೆಹಲಿ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಏಜಾಝ್ ಅಹ್ಮದ್ ಅಸ್ಲಮ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ನಗರಾಭಿವೃದ್ದಿ ಸಚಿವ ವಿನಯ ಕುಮಾರ್ ಸೊರಕೆ, ಮಂಗಳೂರು ಉತ್ತರ ಶಾಸಕ ಮೊೈದಿನ್ ಬಾವ, ದಕ್ಷಿಣ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಮಂಗಳೂರು ಇದರ ವತಿಯಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಇದರ ಅಧ್ಯಕ್ಷ ಕಣಚೂರು ಮೋನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಡಳಿತಾ„ಕಾರಿ ಅಬ್ದುಲ್ ರಹಿಮಾನ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಡೀನ್ ಪೆÇ್ರ. ಡಾ. ಖಾಜಾ ನಾಸಿರುದ್ಧೀನ್, ವೈದ್ಯಕೀಯ ಸುಪರಿಟೆಂಡೆಂಟ್ ಡಾ. ದೇವಿಪ್ರಸಾದ್, ಮುಖ್ಯ ವೈದ್ಯಕೀಯ ಅ„ಕಾರಿ ಡಾ. ರೋಹನ್ ಮೋನಿಸ್ ಮೊದಲಾದವರು ಉಪಸ್ಥಿತರಿದ್ದರು
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ನರಿಂಗಾನ: ಉಚಿತ ವಸತಿಯೊಂದಿಗೆ ಉಚಿತ ಶಿಕ್ಷಣ, ಧಾರ್ಮಿಕ ಕಾರ್ಯದ ಮೂಲಕ ಮಕ್ಕಳಲ್ಲಿ ಜಾತ್ಯಾತೀತ ಮನೋಭಾವನೆ ಬೆಳೆಸುವ ಕಾರ್ಯ ಮಾಡುತ್ತಿರುವ ಅಲ್ಮದೀನಾದ ಕಾರ್ಯ ಶ್ಲಾಘನೀಯವಾಗಿದ್ದು, ಶಿಕ್ಷಣದಿಂದ ವಂಚಿತರಾದ ಅನಾಥರಿಗೆ ಶಿಕ್ಷಣ ನೀಡುವ ಕಾರ್ಯವನ್ನು ಮಾಡುವ ಈ ಸಂಸ್ಥೆಗೆ ಸರಕಾರ ಆರ್ಥಿಕವಾಗಿ ಬೆಂಬಲ ನೀಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು. ಅವರು ಮಂಜನಾಡಿ ನರಿಂಗಾನದ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ನೂತನ ಅನಾಥಾಲಯದ ಕಟ್ಟಡದ ಶಂಕುಸ್ಥಾಪನೆ ಮಾಡಿ ಮಾತನಾಡಿದರು. ಪ್ರತಿಯೊಂದು ಧರ್ಮದ ಮೂಲ ಕರ್ತವ್ಯ ಮನಷ್ಯ ಕಲ್ಯಾಣವಾಗಿದ್ದು, ಮಕ್ಕಳಿಗೆ ಧರ್ಮವನ್ನು ಸರಿಯಾದ ರೀತಿಯಲ್ಲಿ ಕಲಿಸುವ ಕಾರ್ಯ ಮಾಡಬೇಕು ಎಂದ ಅವರು ಸರಕಾರ ಎಲ್ಲಾ ಧರ್ಮದವರಿಗೆ ಸಮಾನ ಅವಕಾಶವನ್ನು ಕೊಡುವ ಜವಾಬ್ದಾರಿಯುತ ಕಾರ್ಯವನ್ನು ಮಾಡುತ್ತಿದ್ದು, . ಸಾಮಾಜಿಕ ತಳಹದಿಯ ಕಾರ್ಯಕ್ಕೆ ಸರಕಾರದ ಬೆಂಬಲವಿದೆ ಎಂದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಶೈಖುನಾ ತಾಜುಶ್ಶರೀಅಃ ಅಲಿಕುಂಇï ಮುಸ್ಲಿಯಾರ್ ಪ್ರಾರ್ಥನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಮತ್ತು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಇಂದು ಉಳ್ಳಾಲ ಉರೂಸು ಸಮಾರಂಭಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿಗಾಗಿ ಮಂಗಳೂರಿನಿಂದ ಉಳ್ಳಾಲದವರೆಗೆ ನಿನ್ನೆ ಪೊಲೀಸ್ ಇಲಾಖೆ ವತಿಯಿಂದ ನಡೆದ ರಿಹರ್ಸಲ್ ಕಾರ್ಯಕ್ರಮ ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಕಂಟಕವಾಗಿ ಪರಿಣಮಿಸಿ ಮಧ್ಯಾಹ್ನದಿಂದ ತಡರಾತ್ರಿವರೆಗೂ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕಾಲಿಕವಾಗಿ ಸುರಿದ ಮಳೆಯ ನಡುವೆ ಉಳಿಯುವಂತಾಯಿತು. ರಸ್ತೆಯುದ್ದಕ್ಕೂ ವಾಹನಗಳ ಸಾಲು. ರಾಷ್ಟ್ರೀಯ ಹೆದ್ದಾರಿಯಲ್ಲಿ ನೇತ್ರಾವತಿ ಸೇತುವೆಯಿಂದ ಕೋಟೆಕಾರು ಬೀರಿ , ಮಂಗಳೂರು ವಿ.ವಿ ರಸ್ತೆಯಲ್ಲಿ ಕುತ್ತಾರಿನವರೆಗೆ, ಉಳ್ಳಾಲ ರಸ್ತೆಯಲ್ಲಿ ಅಬ್ಬಕ್ಕ ಸರ್ಕಲಿನವರೆಗೂ ವಾಹನಗಳು ಸರತಿ ಸಾಲಿನಲ್ಲಿ ನಿಂತಿತ್ತು. ಮಧ್ಯಾಹ್ನ ವೇಳೆ ದಿಢೀರನೆ ಪೊಲೀಸ್ ವಾಹನ, ಆಂಬ್ಯುಲೆನ್ಸ್, ಅಗ್ನಿ ಶಾಮಕ ವಾಹನ ಕೊಣಾಜೆ ಕಡೆಗೆ ತೆರಳಿ ವಾಪಸ್ಸಾದರೆ ಮತ್ತೆ ಸಂಜೆ ಹೊತ್ತಿಗೆ ಮತ್ತೆ ಅದೇ ವಾಹನಗಳ ಸಾಲು ಮಂಗಳೂರಿನಿಂದ ಉಳ್ಳಾಲ ತಲುಪಿತು. ಕಂಡವರೆಲ್ಲರೂ ಮುಖ್ಯಮಂತ್ರಿ ಉಳ್ಳಾಲಕ್ಕೆ ಬಂದರಂತೆ, ಆದಕಾರಣ ವಾಹನಗಳನ್ನು ನಿಲ್ಲಿಸಿದ್ದಾರೆ ಅನ್ನುತ್ತಿದ್ದರೆ, ವಾಸ್ತವವಾಗಿ ಅಲ್ಲಿ ನಡೆಯುತ್ತಿದ್ದುದು ಮುಖ್ಯಮಂತ್ರಿ ಭೇಟಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ರಿಹರ್ಸಲ್. ಇದರಿಂದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಂಗಳೂರು ವೈನ್ ಮರ್ಚಂಟ್ ಅಸೋಸಿಯೇಶನ್ನ ನೂತನ ಅಧ್ಯಕ್ಷರಾಗಿ ಕೆ.ಟಿ.ಸುವರ್ಣ ಆಯ್ಕೆಯಾಗಿದ್ದಾರೆ. ಮಂಗಳೂರಿನ ಕ್ವಾಲಿಟಿಯಲ್ಲಿ ದ.ಕ.ಜಿಲ್ಲಾ ವೈನ್ ಮರ್ಚಂಟ್ ಅಸೋಸಿಯೇಶನ್ನ ಅಧ್ಯಕ್ಷ ಗಣೇಶ್ ಶೆಟ್ಟಿ ಫುಡ್ಲ್ಯಾಂಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಸೋಸಿಯೇಶನ್ನ ಪ್ರ, ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಮನುವೇಂದ್ರ ಆಳ್ವ, ಅಜಿತ್ ಶೆಟ್ಟಿ, ಕೋಶಾಧಿಕಾರಿಯಾಗಿ ನಾಗೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಜೆ.ಎಲ್ ಪಿಂಟೋ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ದ.ಕ.ಜಿಲ್ಲಾ ವೈನ್ ಮರ್ಚಂಟ್ ಅಸೋಸಿಯೇಶನ್ನ ಸಂಚಾಲಕ ರಾಜ್ಗೋಪಾಲ್ ರೈ, ಕೋಶಾಧಿಕಾರಿ ಚಂದ್ರನಾಥ್ ಅತ್ತಾವರ ಉಪಸ್ಥಿತರಿದ್ದರು. ಕೆ.ಟಿ.ಸುವರ್ಣ ಸ್ವಾಗತಿಸಿದರು. ರಾಜೇಶ್ ಶೆಟ್ಟಿ ವಂದಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು : ಶಿರಡಿ ಸಾಯಿ ಬಾಬಾರು ಜಗತ್ತಿಗೆ ಶ್ರೇಷ್ಠರು. ಅವರ ತತ್ವ ನಿಷ್ಠೆ ಆಮೋಘವಾದದು ಜಾತಿ ಮತ ಪಂಥವನ್ನು ಮೀರಿದವರು ಎಲ್ಲರ ಹೃದಯವನ್ನು ಗೆದ್ದವರು ಅಂತಹ ಶ್ರೇಷ್ಠನಿಗೆ ಮಂದಿರ ನಿರ್ಮಾಣ ಮಾಡಿ ಆರಾಧನೆ ಮಾಡುವುದು ನಮ್ಮೆಲ್ಲರ ಪರಮ ಭಾಗ್ಯ ಎಂಬುದಾಗಿ ಕೊಲ್ಯ ಮಠದ ಶ್ರೀ ರಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಕೋಟೆಕಾರು ಬೀರಿ ಬಳಿಯ ಮಾಡೂರು ಸಾಯಿಧಾಮ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶ್ರೀ ಶಿರಡಿ ಸಾಯಿಬಾಬಾ ಗುರುಗಳ ಮಂದಿರದ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಕೋಟೆಕಾರ್ ಬೀರಿ ಶ್ರೀ ಸಿದ್ಧಿವಿನಾಯಕ ಮಂದಿರದಿಂದ ಹೊರಟ ಹಸಿರುಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮಂದಿರ ನಿರ್ಮಾಣದ ರೂವಾರಿ ಕೆ.ಪಿ.ಸುರೇಶ್ ಮಾಡೂರು ಅವರನ್ನು ಕೊಲ್ಯಶ್ರೀ ಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅರ್ಚಕ ಶ್ರೀಕಾಂತ್ಭಟ್ , ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಗೌರವಾಧ್ಯಕ್ಷ ಚಂದ್ರಹಾಸ್ ಉಳ್ಳಾಲ,ಅಧ್ಯಕ್ಷ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ಸ್ ಉಳ್ಳಾಲ: ಕುರಾನ್ ಮತ್ತು ಹದೀಸ್ನ್ನು ಕಲಿತು ಇಸ್ಲಾಂನ ಸಂದೇಶವನ್ನು ಅನುಕರಣೆ ಮಾಡಿ ಜೀವಿಸುವವರಿಗೆ ಮಾತ್ರ ಸ್ವರ್ಗ ಮೀಸಲಿಟ್ಟಿದೆ. ಇದನ್ನು ವಿರೋಧಿಸಿ ನಡೆಯುವ ಕೂಟ ನಮ್ಮದಲ್ಲ ಎಂದು ಪ್ರವಾದಿಯವರು ಈ ಹಿಂದೆಯೇ ಹೇಳಿದ್ದರು. ಪ್ರಸಕ್ತ ಪ್ರವಾದಿಯವರ ಕುಟುಂಬಕ್ಕೆ ವಿರುದ್ಧವಾಗಿ ನಡೆಯುವವರು ಇದ್ದಾರೆ. ಸಾದಾತ್ಗಳನ್ನು ಪಂಡಿತರನ್ನು ಅವಹೇಳನ ಮಾಡಿಬೇಡಿ ಅವರ ಜೀವದಲ್ಲಿ ವಿಷವಿದೆ, ಅಂತಹ ಕೆಲಸ ಮಾಡುವವರಿಗೆ ಪರಲೋಕದಲ್ಲಿ ರಕ್ಷಣೆ ಸಿಗದು ಎಂದು ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯಾರ್ ಹೇಳಿದರು. ಅವರು ಉಳ್ಳಾಲ ಉರೂಸ್ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ಇಸ್ಲಾಂ ಧರ್ಮದ ಸಂದೇಶ ಸಾರಲು ಲಕ್ಷಾಂತರ ಪ್ರವಾದಿಗಳು ಭೂಲೋಕಕ್ಕೆ ಬಂದಿದ್ದರು. ಅದರಲ್ಲಿ ಕೊನೆಯ ಪ್ರವಾದಿ ಆಗಿದ್ದಾರೆ. ಪ್ರವಾದಿ ಮಹಮ್ಮದ್ರವರಾಗಿದ್ದರು. ಅವರು ಕೊನೆಗಳಿಗೆಯಲ್ಲಿ ಸಾರಿದ ಸಂದೇಶ ಈಗ ವಿಶ್ವಕ್ಕೆ ತಲುಪಿದೆ. ಅದನ್ನು ಅರ್ಥೈಸಿಕೊಂಡು ಅದರ ಪ್ರಕಾರ ಜೀವಿಸುವ ಕರ್ತವ್ಯ ನಮ್ಮದಾಗಿದೆ. ಮುಸ್ಲಿಂ ಮಹಿಳೆಯವರು ಪ್ರವಾದಿಯವರ ಸಂದೇಶವನ್ನು ಮೀರಿ ಪ್ರಸಕ್ತ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಧಾರ್ಮಿಕ ಶಿಕ್ಷಣ ನೀಡುವ ಮುಅಲ್ಲಿಂಗಳು ಧಾರ್ಮಿಕ ವಿಚಾರಗಳ ಜತೆ ಲೌಕಿಕ ಶಿಕ್ಷಣದ ಬಗ್ಗೆ ಪೂರ್ಣರೂಪದಲ್ಲಿ ತಿಳಿದುಕೊಂಡಿರಬೇಕು. ವೈಜ್ಞಾನಿಕವಾಗಿ ಕೂಲಂಕಷ ಅರಿವು ಮುಅಲ್ಲಿಂಗಳಿದ್ದರೆ ಅವರಿಗೆ ವಿದ್ಯಾರ್ಥಿಗಳನ್ನು ಉನ್ನತ ರೂಪದಲ್ಲಿ ಶಿಕ್ಷಣ ನೀಡಲು ಸಾಧ್ಯ. ಎಂದು ಅಬ್ದುಲ್ ಅಝೀಝ್ ಫೈಝಿ ಹೇಳಿದರು. ಅವರು ಉಳ್ಳಾಲ ಉರೂಸ್ ಪ್ರಯುಕ್ತ ಬುಧವಾರ ನಡೆದ ಮುಅಲ್ಲಿಂ ಸಮಾವೇಶ ಮತ್ತು ಎಸ್.ಎಂ.ತಂಙಳ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವವಹಿಸಿ ಮಾತನಾಡಿದರು. ಇಸ್ಲಾಂನ ಮೂಲ ಸಿದ್ದಾಂತಗಳನ್ನು ಅಭ್ಯಸಿಸಿ ವಿದ್ಯಾರ್ಥಿಗಳಿಗೆ ಬೋದನೆ ನೀಡಲು ಮುಂದಾಗಬೇಕು. ಸಿದ್ದಾಂತಗಳಲ್ಲಿ ಭಿನ್ನ ನಿಲುವು ತಳೆದು ವಿದ್ಯಾರ್ಥಿಗಳನ್ನು ಗೊಂದಲದ ವಾತಾವರಣದಲ್ಲಿ ಬೆಳೆಯುವಂತಹ ಸ್ಥಿತಿ ಆಗಬಾರದು. ಪ್ರಶಕ್ತ ಕಾಲದ ಶಿಕ್ಷಣ ಬೋಧನೆಯಲ್ಲಿ ಏನು ಬದಲಾವಣೆಗಳು ಆಗಿದೆಯೋ ಅದಕ್ಕೆ ಹೊಂದಿಕೊಂಡು ಮುಅಲ್ಲಿಂಗಳು ಶಿಕ್ಷಣ ನೀಡಿದರೆ ಗೊಂದಲದ ಪ್ರಶ್ನೆ ಸೃಷ್ಟಿಯಾಗುವುದಿಲ್ಲ ಎಂದರು. ಕೋಯಮ್ಮ ಮಾಸ್ಟರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ಸಾಮಾಜಿಕ, ದಾರ್ಮಿಕವಾಗಿ ತಿಳುವಳಿಕೆಯನ್ನು ಮೂಡಿಸುವುದೇ ವಿದ್ಯಾಭ್ಯಾಸವಾಗಿದೆ. ವಿದ್ಯಾಬ್ಯಾಸ ಪಡೆದ ವಿದ್ಯಾರ್ಥಿಗಳಿಗೆ ಲೋಕವನ್ನು ಅರ್ಥಮಾಡಿಕೊಳ್ಳುವಂತಹ ಶಕ್ತಿ, ಅರ್ಹತೆ ಬರಬೇಕು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಮನಸ್ಸಿಗೆ ಸಂತೋಷ, ನೆಮ್ಮದಿ ಸಾಂತ್ವಾನ ಕೇಳಲು. ದೇವರ ಬಜೀವಣತವಾದ ವಚನವನ್ನು ಆಲಿಸಲು ಈ ಧ್ಯಾನ ಮಂದಿರ ಆಶ್ರಯತಾಣವಾಗಿದ್ದು ಇದರ ಸದುಪಯೋಗವನ್ನು ಭಕ್ತಾಧಿಗಳು ಪಡೆದುಕೊಳ್ಳಬೇಕು ಎಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಝಿ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟುವಿನಲ್ಲಿ ಡಿವೈನ್ ಪ್ರಾರ್ಥನ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ ಇಂತಹ ಆಧ್ಯಾತ್ಮಿಕ ಕೇಂದ್ರದಿಂದ ಸ್ವಸ್ಥ ಸಮಾಜ ನಿರ್ಮಾಣದ ಕಾರ್ಯವಾಗಬೇಕು ಈ ನಿಟ್ಟಿನಲ್ಲಿ ನೂತನವಾಗಿ ಇದ್ಘಾಟನೆಗೊಂಡಿರುವ ಈ ಪ್ರಾರ್ಥನಾ ಕೇಂದ್ರ ಜನರ ಇಲ್ಲಿನ ಭಕ್ತರ ಆಶೋತ್ತರಗಳನ್ನು ಈಡೇರಿಸಲಿ ಎಂದರು. ಕಾರ್ಯಕ್ರಮಕ್ಕೆ ಮಂಗಳೂರು ಧರ್ಮ ಪ್ರಾಂತ್ಯದ ಪ್ರಧಾನ ಧರ್ಮಗುರು ಮೊ.— ಡೇನಿಸ್ ಮೊರಾಸ್ ಪ್ರಭು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ, ಉದ್ಯಮಿ ರೋಹನ್ ಮೊಂತೇರೋ, ಪ್ರೊವೈನ್ಶಿಯಲ್ ಕೌನ್ಸಿಲರ್ ರೆ. ಫಾದರ್ ಪೌಲ್ ಪಾರೆಕಟ್ಟಿಲ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು : ಕೋಟೆಕಾರು ಮಾಡೂರಿನ ಕೊಂಡಾಣ ರಸ್ತೆಯ ಸಾಯಿಧಾಮ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶಿರಡಿ ಸಾಯಿಬಾಬಾ ಗುರುಗಳ ಮಂದಿರದಲ್ಲಿ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಬೀರಿ ಶ್ರೀ ಸಿದ್ಧಿವಿನಾಯಕ ಮಂದಿರದಿಂದ ಸಾಯಿಧಾಮ ಬಡಾವಣೆವರೆಗೆ ನಡೆಯಿತು.

