ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಮಂಗಳೂರಿನ ಮರ್ಸಿನ್ ಪಬ್ಲಿಕೇಷನಿನ ಅಭೂತಪೂರ್ವ ಕೊಡುಗೆಯಾಗಿ ಅಂಗ್ಲ ಮಾಧ್ಯಮ ವಿಧ್ಯಾರ್ಥಿಗಳಿ “೩೧೩ ಖಿimeಟಥಿ ಜhiಞಡಿ ಜuಚಿs ” ಹಾಗೂ “ವಿಚಿತ್ರ ಪ್ರಶ್ನೆಗಳಿಗೆ ವಿಸ್ಮಯ ಉತ್ತರ” “ಮಹಾತ್ಮರುಗಳ ಅಂತಿಮ ಕ್ಷಣಗಳು” ಮತ್ತು “ತಬ್ಸೀರುಲ್ ಅನಮ್” ಎಂಬ ನಾಲ್ಕು ಕೃತಿಗಳನ್ನು ಉಳ್ಳಾಲ ಅಸೈಯದ್ ಶರೀಫುಲ್ ಮದನಿ ದರ್ಗಾ ವಠಾರದಲ್ಲಿ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಅಲ್-ಮದನಿರವರು ನಾಲ್ಕು ಕೃತಿಗಳನ್ನು ಅಲ್-ಅನ್ಸಾರ್ ವ್ಯವಸ್ಥಾಪಕ ಎಂ. ಇಬ್ರಾಹಿಂ ಬಾವ ಹಾಜಿರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್. ಹಂಝ, ಆಬ್ದುಲ್ ರವೂಫ್ ಮದನಿ ನಗರ, ಚಾರಿಟೇಬಲ್ ಟ್ರಸ್ಟ್ನ ಉಪಾಧ್ಯಕ್ಷ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಂ ಮುಕ್ಕಚ್ಚೇರಿ, ಅರೆಬಿಕ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಝಿಯಾದ್ ತಂಙಳ್, ಕೋಶಾಧಿಕಾರಿ ತಂಝಿಲ್ ಕೋಟೆಪುರ ಮುಂತಾದವರು ಈ ಸಂದರ್ಭಉಪಸ್ಥಿತರಿದ್ದರು.
Author: UllalaVani
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಇತ್ತೀಚೆಗೆ ನಿಧನರಾದ ಲೋಕನಾಥ ಗಟ್ಟಿಯವರ ಸಂತಾಪ ಸೂಚಕ ಸಭೆಯು ಕೊಲ್ಯ ಸೋಮೇಶ್ವರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು. ಬಿಲ್ಲವ ಸೇವಾ ಸಮಾಜದ ಮಾಜಿ ಅಧ್ಯಕ್ಷ ರಮಾನಾಥ ಕೋಟೆಕಾರ್ ಮಾತನಾಡಿ ಜಾತಿ ಭೇದವಿಲ್ಲದೆ ಎಲ್ಲರೊಂದಿಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲಿ ಭಜನಾ ಸಂಕೀರ್ತನೆಗಳು ನಡೆದರೂ ತಪ್ಪದೇ ಭಾಗವಹಿಸುತ್ತಿದ್ದ ದಿ. ಲೋಕನಾಥ ಗಟ್ಟಿಯವರ ನಿಧನದಿಂದ ಈ ಪ್ರದೇಶದ ಒಬ್ಬ ಭಜನಾ ಸಂಕೀರ್ತನಕಾರರನ್ನು ಕಳೆದುಕೊಂಡಂತಾಗಿದೆ ಎಂದು ಹೇಳಿದರು. ಉಳ್ಳಾಲ ಅವಿನಾಶ್ ಗ್ಯಾಸ್ ಏಜೆನ್ಸೀಸ್ ನ ಮಾಲಕರು ಹಾಗೂ ಸಿಬ್ಬಂದಿವರ್ಗದವರು ೪೮೦೦೦ ರೂ. ಗಳನ್ನು ಮೃತರ ಕುಟುಂಬಕ್ಕೆ ನೀಡಿದರು. ಸಂತಾಪ ಸಭೆಯಲ್ಲಿ ಗುರಿಕಾರ ನಾರಾಯಣ ಗಟ್ಟಿ, ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಾಳಪ್ಪ ಪೂಜಾರಿ, ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಾಯ ಗಟ್ಟಿ, ಉಳ್ಳಾಲ ಜಾಗೃತ ವಿವಿದೋದ್ಧೇಶ ಸಂಘದ ಅಧ್ಯಕ್ಷ ರಘುಚಂದ್ರ ಬಲ್ಲಾಳ್ ಉಪಸ್ಥಿತರಿದ್ದರು.
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಇದರ ಮಹಾಸಭೆಯು ರವಿ ಸುವರ್ಣರವರ ಅಧ್ಯಕ್ಷತೆಯಲ್ಲಿ ಕ್ಲಿಕ್ ಮ್ಯಾರೇಜ್ ಹಾಲ್ನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ರವಿ ಸುವರ್ಣ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗೋಪಾಲ, ಕಾರ್ಯದರ್ಶಿಯಾಗಿ ಪುರುಷೋತ್ತಮ ಪಿ., ಜೊತೆ ಕಾರ್ಯದರ್ಶಿಯಾಗಿ ಸಿದ್ಧಿಕ್, ಕೋಶಾಧಿಕಾರಿಯಾಗಿ ಅಬ್ದುಲ್ ಪತಾಕ್, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಉಚ್ಚಿಲ್ ಆಯ್ಕೆಯಾದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ಉರ್ಬನ್ ಪಿಂಟೋ, ಕಾರ್ಯದರ್ಶಿ ಚೇತನ್ ಮಲ್ಯ, ಕೋಶಾಧಿಕಾರಿ ಶೈಲೇಶ್ ಮಲ್ಯ, ಕಾರ್ಯಕಾರಿ ಸಮಿತಿ ಸದಸ್ಯ ದೇವಪ್ಪ ಕುಂಪಲ ಉಪಸ್ಥಿತರಿದ್ದರು. ಬಾಲಕೃಷ್ಣ ಸರ್ಕಳ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ಪತಾಕ್ ವಂದಿಸಿದರು.
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ನಲ್ಲಿ ಎತ್ತರ ಜಿಗಿತದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಉಳ್ಳಾಲ ಮೂಲದ ಸಹನಾ ಕುಮಾರಿ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರಸ್ ವತಿಯಿಂದ ೨೫ ಸಾವಿರ ಪ್ರೋತ್ಸಾಹ ಧನವನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಗಳ ಅಧ್ಯಕ್ಷ ದಿನೇಶ್ ಕುಂಪಲ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಳ್ಳಾಲ ನಗರಸಭಾ ಅಧ್ಯಕ್ಷೆ ಗಿರಿಜಾ ಬಾ, ಉಪಾಧ್ಯಕ್ಷೆ ರಝೀಯಾ ಇಬ್ರಾಹಿಂ, ಸದಸ್ಯ ಸುಕುಮಾರ್, ತಾ. ಪಂ. ಸದಸ್ಯರಾದ ಸುರೇಖಾ ಚಂದ್ರಹಾಸ್, ಸುರೇಶ್ ಭಟ್ನಗರ, ಪಿಯೂಷ್ ಮೊಂತೇರೋ ಮತ್ತಿತರರು ಉಪಸ್ಥಿತರಿದ್ದರು.
ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಟ್ವಿಟ್ಟರ್ ಮತ್ತು ವಿದೇಶ ಪ್ರಯಾಣದಲ್ಲೇ ಕಾಲಹರಣ ನಡೆಸುತ್ತಿರುವ ಪ್ರಧಾನಿ ಮೋದಿ, ವಿದೇಶಿ ನೀತಿಯನ್ನು ಜಾರಿಗೊಳಿಸಿ ಕಾರ್ಮಿಕರ ಕೆಲಸಗಳಿಗೆ ಕತ್ತರಿ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಜಿಲ್ಲಾ ಸಿಐಟಿಯು ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಹೇಳಿದ್ದಾರೆ. ಅವರು ಸಿಐಟಿಯು ಉಳ್ಳಾಲ ವಲಯ ಸಮಿತಿ ವತಿಯಿಂದ ಮೇ ದಿನಾಚರಣೆ-೨೦೧೫ರ ಪ್ರಯುಕ್ತ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಜರಗಿದ ಕಾರ್ಮಿಕರ ವಿಜಯ ಸಂಗಮದಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಸರಕಾರ ಅಮೆರಿಕಾದ ಬಾಲಂಗೋಚಿಯಾಗಿ ಪರಿವರ್ತನೆಯಾಗಿದೆ. ರಾಷ್ಟ್ರೀಕರಣದ ಹೆಸರಿನಲ್ಲಿ ವಿಜಯಿಗಳಿಸಿರುವ ಪ್ರಧಾನಿ ಅಮೆರಿಕಾದ ನೀತಿಯಂತೆ ಖಾಸಗೀಕರಣ ನಡೆಸಲು ಹೊರಟಿದೆ. ಶೇ.೮೫ ರಷ್ಟು ದುಡಿಯುವ ವರ್ಗ ಇರುವ ದೇಶದಲ್ಲಿ, ಅವರ ವಿರುದ್ಧವಾಗಿ ಕಾರ್ಯಚರಿಸುವ ಸರಕಾರದ ಕ್ರಮ ಸಮಂಜಸವಲ್ಲ. ದೇಶದ ಪ್ರಮುಖ ಸರಕಾರಿ ಭವನಗಳಿಗೆ ಗುತ್ತಿಗೆ ಆಧಾರಿತ ಕೆಲಸದವರನ್ನು ನಿಯೋಜಿಸುವ ಮೂಲಕ, ಸರಿಯಾದ ಭದ್ರತೆಯಿಲ್ಲದೆ ದೇಶ ಅಪಾಯದಲ್ಲಿದೆ ಎಂದ ಅವರು ಸಮಾಜವಾದಿ ವ್ಯವಸ್ಥೆ ವಿಶ್ವಾದ್ಯಂತ ಹಾಳಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಐಟಿಯುನ ಉಳ್ಳಾಲ ವಲಯ ಅಧ್ಯಕ್ಷ ಕೃಷ್ಣಪ್ಪ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಬಸ್ ಬಂದ್ಗೆ ಉಳ್ಳಾಲದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಳಗ್ಗಿನಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಿತ್ತು. ತೊಕ್ಕೊಟ್ಟು ಮಾರ್ಗವಾಗಿ ಬಿ.ಸಿ.ರೋಡ್, ಮುಡಿಪು, ಕೈರಂಗಳ, ಹೂಹಾಕುವ ಕಲ್ಲು, ಕೊಣಾಜೆ, ಪಾವೂರು, ಇನೋಳಿ, ತಲಪಾಡಿ, ಉಳ್ಳಾಲ, ಕಾಸರಗೋಡು ಸಂಚರಿಸುವ ಎಲ್ಲಾ ಬಸ್ಗಳ ಸಂಚಾರ ಸ್ಥಗಿತದಿಂದ ಬೆಳಗ್ಗಿನ ಜಾವ ಪ್ರಯಾಣಿಕರು ಪರದಾಡುವಂತಾಯಿತು. ಮುಡಿಪು, ಬೋಳಿಯಾರ್, ತೊಕ್ಕೊಟ್ಟು, ಕೊಲ್ಯ ಪ್ರದೇಶದಲ್ಲಿ ಮದುವೆ ಸೇರಿದಂತೆ ಶುಭಕಾರ್ಯಗಳಿಂದ ಜನರು ಕ್ಲಪ್ತ ಸಮಯಕ್ಕೆ ತಲುಪಲು ಪರದಾಡಿದರು. ಖಾಸಗಿ ವಾಹನಗಳಿಗೆ ಉತ್ತಮ ಗಳಿಕೆ : ಬಸ್ ಸಂಚಾರ ಬಂದ್ನಿಂದ ರಿಕ್ಷಾ ಸೇರಿದಂತೆ ಖಾಸಗಿ ವಾಹನಗಳಿಗೆ ಉತ್ತಮ ಗಳಿಕೆಯಿತ್ತು. ಬಸ್ ನಿಲ್ದಾಣದ ಬಳಿ ಇರುವ ರಿಕ್ಷಾ ಚಾಲಕರಿಗೆ ಕಡಿಮೆ ಬಾಡಿಗೆ ದೊರೆತರೆ, ಉಳಿದ ಎಲ್ಲಾ ರಿಕ್ಷಾ ಚಾಲಕರು ಉತ್ತಮ ಸಂಪಾದನೆ ಮಾಡಿದ್ದಾರೆ. ಬಸ್ನಿಂದ ಇಳಿವ ಪ್ರಯಾಣಿಕರು ಇಲ್ಲದ್ದರಿಂದ ರಿಕ್ಷಾಕ್ಕೆ ಬಾಡಿಗೆ ಕಡಿಮೆ ಇತ್ತು ಎನ್ನುತ್ತಾರೆ ತೊಕ್ಕೊಟ್ಟಿನ ಬಸ್ ನಿಲ್ದಾಣ ಬಳಿಯ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರೇಮ್ …
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ಮದರಸ ಕಟ್ಟಡದ ಹಿಂಭಾಗದ ವಸತಿ ಪ್ರದೇಶಕ್ಕೆ ಮುಖಮಾಡಿ ಸಿಸಿಟಿವಿ ಅಳವಡಿಸಿರುವುದರ ವಿರುದ್ಧ ಕೆರಳಿದ ಸ್ಥಳೀಯರು ಪ್ರತಿಭಟಿಸಿದ ಘಟನೆ ಕುತ್ತಾರು ಸಮೀಪದ ಸುಭಾಷನಗರದಲ್ಲಿ ಗುರುವಾರ ಸಂಜೆ ವೇಳೆ ನಡೆದಿದ್ದು, ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಸುಭಾಷನಗರ ವಸತಿ ಪ್ರದೇಶದಲ್ಲಿ ನಿರ್ಮಿಸಲಾದ ಅಂಜುಮನ್ ಮಬ್ಲಗುಲ್ ಫಲಾಹ್ ಮದ್ರಸದ ಕಟ್ಟಡಕ್ಕೆ ನಾಲ್ಕು ಸಿ.ಸಿ.ಟಿವಿಯನ್ನು ಗುರುವಾರ ಸಂಜೆ ವೇಳೆ ಅಳವಡಿಸಲಾಗಿದೆ. ಅದರಲ್ಲಿ ಎರಡು ಕಟ್ಟಡದ ಹಿಂಭಾಗವನ್ನು ಅವಲೋಕಿಸುವಂತೆ ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ಹಲವು ಮನೆಗಳು ಇದ್ದು, ಅವುಗಳ ಶೌಚಾಲಯಗಳಿರುವ ಪ್ರದೇಶ ಸಿಸಿಟಿವಿ ಸರಿಯಾಗಿ ಅವಲೋಕಿಸುವಂತೆ ಅಳವಡಿಸಲಾಗಿದೆ. ಮಹಿಳೆಯರು, ಯುವತಿಯರು ಇರುವ ಮನೆಯೊಳಗಿನ ಚಿತ್ರಣವನ್ನು ಸಿಸಿಟಿವಿ ಸೆರೆ ಮಾಡುತ್ತದೆ. ಇದರಿಂದ ಖಾಸಗೀತನಕ್ಕೆ ತೊಂದರೆ ಉಂಟಾಗುತ್ತದೆ ಎಂದು ಆರೋಪಿಸಿದ ಸ್ಥಳೀಯರು ಅದನ್ನು ಕೂಡಲೇ ತೆಗೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಹಿಂದು ಮತ್ತು ಮುಸ್ಲಿಂ ಮನೆಗಳು ಇರುವುದರಿಂದ ಹೆಚ್ಚಿನ ಜನ ಜಮಾಯಿಸಿದ್ದರಿಂದಾಗಿ ಉದ್ವಿಘ್ನ ವಾತಾವರಣ ನಿರ್ಮಾಣವಾಯಿತು. ಪೊಲೀಸ್ ಸಹಾಯಕ ಉಪನಿರೀಕ್ಷಕ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಸ್ವಾತಂತ್ರ್ಯಪೂರ್ವದಿಂದಲೂ ಸಮಾಜಕ್ಕೆ ಮಹಿಳೆಯರ ಕೊಡುಗೆ ಅಪಾರವಾದದ್ದು. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕನಂತವರೂ ದೇಶಕ್ಕಾಗಿ ಹೋರಾಟ ಮಾಡಿ ಸಮಾಜದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಪಾತ್ರ ವಹಿಸಿದ್ದಾರೆ. ಅಲ್ಲದೆ ಮದರ್ಥೆರೆಸಾgರಂತವರು ಕೂಡಾ ಸಮಾಜ ಸೇವೆಯ ಮೂಲಕ ಉತ್ತಮ ಕೊಡುಗೆ ನೀಡಿದ್ದಾರೆ. ಆದ್ದರಿಂದ ಸಮಾಜಕ್ಕೆ ಮಹಿಳಾ ಶಕ್ತಿಯೂ ನೀಡಿದ ಕೊಡುಗೆಯನ್ನು ನಾವು ಪ್ರೇರಣೆಯಾಗಿಟ್ಟುಕೊಂಡು ಮಹಿಳಾ ಸಶಕ್ತೀಕರಣಕ್ಕಾಗಿ ಮುಂದಿನ ಪೀಳಿಗೆಗೆ ಬೇಕಾದ ಅಡಿಪಾಯವನ್ನು ಹಾಕುವ ಅವಶ್ಯಕತೆವಿದೆ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ಡಾ. ದಿವ್ಯಾ ಪ್ರಭಾ ಗೌಡ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ವಿವಿಯ ಮಂಗಳಾ ಸಭಾಂಗಣದಲ್ಲಿ `ಸಮಾಜದಲ್ಲಿ ಬದಲಾವಣೆ ಸೃಷ್ಟಿಸುವ ಮಹಿಳೆ ಮತ್ತು ¸ಮಾಜಿಕ ಸ್ಥಿತಿಯಲ್ಲಿ ಬದಲಾದ ಮಹಿಳೆಯ ಪಾತ್ರ’ ಎಂಬ ವಿಷಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಇಂದು ಮಹಿಳೆಯರ ಅಭಿವದ್ದಿಗಾಗಿ ಸರಕಾರ ಹಲವಾರು ಯೋಜನೆಗಳು,ಕಾನೂನುಗಳು…
ಮುನ್ನೂರು: ಅಭಿನಂದನೆ ಕೋರಿ ಹಾಕಲಾದ ಬ್ಯಾನರಲ್ಲಿದ್ದ ಮುನ್ನೂರು ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಭಾವಚಿತ್ರಕ್ಕೆ ಕಿಡಿಗೇಡಿಗಳು ಹಾನಿಗೊಳಿಸಿರುವ ಘಟನೆ ಪಂಡಿತ್ಹೌಸಿನಲ್ಲಿ ನಡೆದಿದೆ. ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮತ್ತು ಉಪಾಧ್ಯಕ್ಷೆ ಐರಿನ್ ಡಿಸೋಜಾ ಅವರ ಭಾವಿತ್ರಗಳಿರುವ ಜಾಗವನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ತೊಕ್ಕೊಟ್ಟುವಿನಿಂದ ಮುಡಿಪು ತನಕ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿದ ಕ್ಷೇತ್ರದ ಶಾಸಕ ಹಾಗೂ ಸಚಿವ ಯು.ಟಿ.ಖಾದರ್ ಅವರಿಗೆ ಅಭಿನಂದನೆ ಕೋರಿ ಪಂಡಿತ್ ಹೌಸ್ ಜಂಕ್ಷನ್ನಿನಲ್ಲಿ ಮುನ್ನೂರು ಪಂಚಾಯಿತಿ ವತಿಯಿಂದ ಬ್ಯಾನರ್ ಅಳವಡಿಸಲಾಗಿತ್ತು. ಬ್ಯಾನರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವ ಯು.ಟಿ.ಖಾದರ್, ಜಿ.ಪಂ ಸದಸ್ಯ ಎನ್.ಎಸ್.ಕರೀಂ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಮುನ್ನೂರು ಪಂಚಾಯಿತಿ ಸದಸ್ಯರಾದ ಪುಷ್ಪಲತಾ ಅಂಚನ್, ಹಸನಬ್ಬ, ವಿಲ್ಫ್ರೆಡ್ ಡಿಸೋಜಾ ಸಹಿತ ಅಧ್ಯಕ್ಷ ಉಪಾಧ್ಯಕ್ಷರ ಭಾವಚಿತ್ರಗಳನ್ನು ಹಾಕಲಾಗಿತ್ತು. ಆದರೆ ಕಿಡಿಗೇಡಿಗಳು ಉಳಿದವರ ಚಿತ್ರಕ್ಕೆ ಹಾನಿಗೊಳಿಸದೇ ಕೇವಲ ಅಧ್ಯಕ್ಷ-ಉಪಾಧ್ಯಕ್ಷೆಯ ಚಿತ್ರಕ್ಕೆ ಹಾನಿಗೊಳಿಸಿರುವುದು ಇಬ್ಬರ ಮೇಲಿನ ದ್ವೇಷದಿಂದ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚಿತ್ರ: ಕಿಶು ಡಿಜಿಟಲ್ಸ್ ಮುಡಿಪು ಮುಡಿಪು: ಪತ್ರಿಕೆ ಮಾರಾಟ, ಸ್ಟೇಷನರಿ, ಮೊಬೈಲ್ ಮಾರಾಟದಲ್ಲಿ ಮುಡಿಪುವಿನಲ್ಲಿ ಖ್ಯಾತಿ ಗಳಿಸಿರುವ ನ್ಯೂಸ್ ಪಾಯಿಂಟ್ ಮಳಿಗೆಗೆ ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಸುಕಿನ ವೇಳೆ ಬೆಳಕಿಗೆ ಬಂದಿದೆ. ಮುಡಿಪು ನಿವಾಸಿ ವೆಂಕಟೇಶ್ ಮತ್ತು ಜಗದೀಶ್ ಮಾಲೀಕತ್ವದ ಮಳಿಗೆ ಇದಾಗಿದೆ. ಘಟನೆಯಿಂದ ರೂ.7 ಲಕ್ಷ ನಷ್ಟ ಸಂಭವಿಸಿದೆ. ಮಂಗಳವಾರ ನಸುಕಿನ 5.00 ಗಂಟೆ ಸುಮಾರಿಗೆ ಸಮೀಪದ ಹೊಟೇಲಿನವರು ಮಳಿಗೆಯೊಳಗೆ ಉರಿಯುತ್ತಿರುವ ಬೆಂಕಿಯನ್ನು ಕಂಡು ವೆಂಕಟೇಶ್ ಅವರಿಗೆ ಸುದ್ಧಿ ಮುಟ್ಟಿಸಿದ್ದರು. ಬಳಿಕ ಸ್ಥಳೀಯರೆಲ್ಲರೂ ಸೇರಿಕೊಂಡು ಬೆಂಕಿ ನಂದಿಸಲು ಯಶಸ್ವಿಯಾದರೂ ಮಳಿಗೆಯೊಳಗಿದ್ದ ಸಾಮಗ್ರಿಗಳೆಲ್ಲವೂ ಭಾಗಶ: ಸುಟ್ಟುಹೋಗಿವೆ. 2008 ರ ನ.29 ರಂದು ಇದೇ ಅಂಗಡಿಯಲ್ಲಿ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು. ಅಂಗಡಿಯೊಳಗಿನಿಂದ ಹೊರಗಿನವರೆಗೂ ಸೀಮೆಎಣ್ಣೆ ಕುರುಹು ಕಂಡುಬಂದಿರುವುದರಿಂದ, ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದು ಖಚಿತವಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಮುಡಿಪು…

