Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಹರೇಕಳ ಕಡವಿನ ಬಳಿ ಆಟದ ಮೈದಾನ ನಿರ್ಮಾಣಕ್ಕೆ ಬೇಡಿಕೆಯಿದ್ದು ಯೋಜನೆ ಅನುಷ್ಠಾನಕ್ಕೆ ಬಂದಾಗ ನಿರ್ಧರಿಸಲಾಗುತ್ತದೆ. ಬೈತಾರ್ ರಸ್ತೆ ಕಾಮಗಾರಿಗೆ 10ಲಕ್ಷ ರೂ. ಬಿಡುಗಡೆಗೊಳಿಸಲಾಗಿದ್ದು ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಹಾಗೆಯೇ ಇತರ ಬಾಕಿ ಉಳಿದಿರುವ ಸಣ್ಣ ಪ್ರಮಾಣದ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು. ಹರೇಕಳದಲ್ಲಿ ನಿರ್ಮಿಸಲಾದ ಬೋಟ್ ಜೆಟ್ಟಿ, ಕುತ್ತಿಮೊಗರು ಜಾತ್ರೆ ನಡೆಯುವ ಪ್ರದೇಶ ಸಂಪರ್ಕ ಕಲ್ಪಿಸುವ 45ಲಕ್ಷ ರೂ. ವೆಚ್ಚದ ರಸ್ತೆ, ಹರೇಕಳ ಕಡವಿನ ಬಳಿ 50ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಹಾಗೂ ಕೋಡಿ ಸಂಪರ್ಕ ರಸ್ತೆ ಶನಿವಾರ ಉದ್ಘಾಟಿಸಿ ಮಾತನಾಡಿದರು. ಜನರು ಬೇಡಿಕೆ ಸಲ್ಲಿಸುವ ಮೊದಲು ಜನಪ್ರತಿನಿ„ಗಳು ಕೆಲಸ ಮಾಡಬೇಕು ಎನ್ನುವ ಸಂವಿಧಾನದ ಧ್ಯೇಯದಂತೆ ಹರೇಕಳದಲ್ಲಿ ಕೆಲಸ ಮಾಡಲಾಗಿದೆ. 1999ರ ಬಳಿಕ ಗ್ರಾಮದ ಚಿತ್ರಣವೇ ಬದಲಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಜನ ಮತ ನೀಡಿರುವ ಪರಿಣಾಮ ಇದಾಗಿದೆ. ಇಲ್ಲಿನ ಜನರು ರಸ್ತೆಗೆ ಡಾಂಬಾರು ಹಾಗೂ ತೇಪೆಗೆ ಮಾತ್ರ ಬೇಡಿಕೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ : ಸದಾ ಸರಳತೆಯೊಂದಿಗೆ ಇರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಕುತ್ತಿಮೊಗೆರು ರಸ್ತೆ ಉದ್ಘಾಟನೆಗೆ ತೆರಳಿದ್ದ ಸಂದರ್ಭ ರಸ್ತೆ ಬದಿಯಲ್ಲಿ ವಾಲಿಬಾಲ್ ಆಡುತ್ತಿದ್ದ ಮಕ್ಕಳೊಂದಿಗೆ ಆಟವಾಡಿ ಅವರನ್ನು ಆಶ್ಚರ್ಯಚಕಿತರನ್ನಾಗಿಸಿದರು. ಹರೇಕಳ ಬೋಟ್ ಜೆಟ್ಟಿಯನ್ನು ಉದ್ಘಾಟನೆಗೊಳಿಸಿದ ಸಚಿವ ಯು.ಟಿ.ಖಾದರ್ ಅವರು ಬಳಿಕ ತಮ್ಮ ಸರಕಾರಿ ವಾಹನವನ್ನು ಬಿಟ್ಟು ಬೈಕಿನಲ್ಲಿ ಹಿಂಬದಿ ಸವಾರನಾಗಿ 5 ಕಿ.ಮೀವರೆಗೂ ಪ್ರಯಾಣಿಸಿದರು. ಕುತ್ತಿಮೊಗೆರು ರಸ್ತೆ ಉದ್ಘಾಟನೆಗೆ ತೆರಳುವ ದಾರಿಮಧ್ಯೆ ಮಕ್ಕಳು ವಾಲಿಬಾಲ್ ಆಡುವುದನ್ನು ಗಮನಿಸಿದ ಸಚಿವರು ಬೈಕನ್ನು ನಿಲ್ಲಿಸುವಂತೆ ತಿಳಿಸಿ, ಅವರೊಂದಿಗೆ ಗ್ರೌಂಡಿಗೆ ಇಳಿದರು. 10 ನಿಮಿಷಗಳ ಕಾಲ ವಾಲಿಬಾಲ್ ಆಟದಲ್ಲಿ ಕಾಲ ಕಳೆದ ಸಚಿವರು ನಾಲ್ಕು ಸರ್ವಿಸ್ ಗಳನ್ನು ಉತ್ಸಾಹದಿಂದ ಹಾಕುವುದರಿಂದ ಆಟದಲ್ಲೂ ನಿಸ್ಸೀಮರು ಅನ್ನುವುದನ್ನು ತೋರಿಸಿದರು. ಇವರ ಜತೆಗೆ ಜಿ.ಪಂ ಸದಸ್ಯ ಎನ್.ಎಸ್.ಕರೀಂ, ಸ್ಥಳೀಯ ಮುಖಂಡರುಗಳಾದ ಮಹಾಬಲ ಹೆಗ್ಡೆ, ರವಿರಾಜ್ ಶೆಟ್ಟಿ ಆಟವಾಡಿದರು. ಮಕ್ಕಳು ಉತ್ಸಾಹದಿಂದಲೇ ಆಟವಾಡಿ ಸಚಿವರಿಗೆ ಜೈ ಕಾರ ಹಾಕಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳ ಕಟ್ಟೆ: ವೃತ್ತಿ ಜೀವನದಲ್ಲಿ ಎಲ್ಲ ಕ್ಷೇತ್ರವೂ ಶ್ರೇಷ್ಠವೇ. ಕಲಿತಿರುವ ಎಲ್ಲ ಕೋರ್ಸ್ ಶ್ರೇಷ್ಠವಾದುದೇ. ಅದರಲ್ಲಿ ಮೇಲು ಕೀಳು ನೋಡಬಾರದು. ಯಾವುದೂ ಕೀಳಲ್ಲ. ಅದರದ್ದೇ ಆದ ಸ್ಥಾನಮಾನವಿದೆ ಎಂದು ಮಣಿಪಾಲ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‍ನ ಸ್ಥಾಪಕ ಡೀನ್ ಪ್ರೊ. ಡಾ. ಬಿ. ರಾಜಶೇಖರ್ ಹೇಳಿದರು. ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಅಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ವಿಶ್ವವಿದ್ಯಾಲಯದ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನ ಐದನೆಯ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದರು. ನಿರೀಕ್ಷೆ ಇರಬೇಕು. ಅದು ವಿಪರೀತವಾಗಿರಬಾರದು. ನಮ್ಮತನ ನಾವು ಸಾಧಿಸಿ ತೋರಿಸಬೇಕು. ವೃತ್ತಿ ಬದುಕಿನಲ್ಲಿ ನಾವಿಡುವ ಮೊದಲ ಹೆಜ್ಜೆಯೇ ಬಹಳ ದೊಡ್ಡದಾಗಿರಬೇಕಿಂದಿಲ್ಲ. ಕ್ರಮೇಣ ನಾವು ಬೆಳೆಯುತ್ತೇವೆ. ಹಾಗಾಗಿ ಅಲ್ಲಿ ನಾವು ಏನು ಎಂಬುದನ್ನು ತೋರಿಸಬೇಕಾದರೆ ಪ್ರಾಮಾಣಿಕ ಪ್ರಯತ್ನ ಮುಖ್ಯವಾಗುತ್ತದೆ ಎಂದು ನುಡಿದರು. ವೃತ್ತಿ ಬದುಕಿನಲ್ಲಿ ಒಂದು ಹಂತಕ್ಕೆ ಬಂದ ನಂತರ ಎಲ್ಲವೂ ಮುಗಿಯಿತೆಂದು ಸಮಾಧಾನ ಪಟ್ಟುಕೊಳ್ಳಬಾರದು. ಇನ್ನಷ್ಟು ಕ್ರಿಯಾಶೀಲರಾಗಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ : ಧರ್ಮಯುಕ್ತವಾಗಿ ಬದುಕಿದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಸಾದ್ವಿ ಶ್ರೀ ಮಾತಾನಂದಮಯಿ ಹೇಳಿದ್ದಾರೆ. ಅವರು ಕೊಣಾಜೆ ಅಸೈಗೋಳಿಯ ಶ್ರೀ ಅಯ್ಯಪ್ಪಸ್ವಾಮಿ ಮಂದಿರ ಇದರ ಭಾನುವಾರ ನಡೆದ ನೂತನ ಮಂದಿರದ ಶಿಲಾನ್ಯಾಸ ನೆರವೇರಿಸಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಅಯ್ಯಪ್ಪ ಎಂದರೆ ಶ್ರೇಷ್ಟ ಎಂಬುದು ಅರ್ಥ. ಇಂತಹ ದೇವರ ಕಾರ್ಯದಲ್ಲಿ ತೊಡಗಿರುವ ಇಲ್ಲಿನ ಜನತೆಯ ಕಾರ್ಯ ಶ್ಲಾಘನೀಯ ಎಂದ ಅವರು ಮಂದಿರಗಳ ನಿರ್ಮಾಣದಿಂದ ಸಂಸ್ಕøತಿಯನ್ನು ಉಳಿಸುವ ಕಾರ್ಯ ಆಗಬೇಕಿದೆ. ಬದುಕಿನಲ್ಲಿ ಜೀವನ ಸಾರ್ಥಕವಾಗಬೇಕಾದರೆ ಧರ್ಮ ಪಾಲನೆಯಿಂದ ಮಾತ್ರ ಸಾಧ್ಯ ಎಂದರು. ತಲಪಾಡಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಬಾಲಕೃಷ್ಣ ಭಟ್ ಶಿಲಾನ್ಯಾಸ ನೆರವೇರಿಸಿದರು. ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಯಮಿ ರಮಾನಾಥ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಅಧ್ಯಕ್ಷ ಸೀತಾರಾಮ ಶೆಟ್ಟಿ ದಡಸು ನೆತ್ತಿಲಬಾಳಿಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಐತಿಹಾಸಿಕ  ಪುಣ್ಯ ಕ್ಷೇತ್ರ ಉಳ್ಳಾಲದ ಸಯ್ಯಿದ್ ಮದನಿ ದರ್ಗಾದಲ್ಲಿ ಎ. 2ರಂದು ಆರಂಭಗೊಂಡ 20ನೆಯ ಪಂಚವಾರ್ಷಿಕ ಹಾಗೂ 423ನೆಯ ವಾರ್ಷಿಕ ಉರೂಸ್ ನೇರ್ಚೆಯು ಶನಿವಾರ ಮದನಿ ಮೌಲೂದ್ ಹಾಗೂ ಸಂದಲ್ ಮೆರವಣಿಗೆಯೊಂದಿಗೆ ಶನಿವಾರ ಸಂಪನ್ನಗೊಂಡಿತು. ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್. ಹಂಝ ಅವರ ಅಧ್ಯಕ್ಷತೆಯಲ್ಲಿ ಅರೆಬಿಕ್ ಕಾಲೇಜು, ದಅವಾ ಕಾಲೇಜು ಹಗೂ ಹಿಫುಲ್ ಕಾಲೇಜು ವಿದ್ಯಾರ್ಥಿಗಳ ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಸ್ವಬಾಹುರಿಫಾಯಿ ಬಾಗ್ದಾದಿ ಆವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಅವರ ನೇತೃತ್ವದಲ್ಲಿ ಸಂದಲ್ ಮೆರವಣಿಗೆಯೊಂದಿಗೆ ಜರುಗಿತು. ಉರೂಸ್ ಪ್ರಯುಕ್ತ ಎ. 25ರಂದು ಅರಂಭವಾದ ಅನ್ನದಾನ ಎ. 26ರ ಸಂಜೆ 6ಗಂಟೆ ತನಕ ನಡೆಯಲಿದೆ. ಕಾರ್ಯಕ್ರಮದಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಕಾರ್ಯದರ್ಶಿ ಅಶ್ರಫ್ ಬಳ್ಳಾರಿ, ಫಾರೂಕ್ ಮಾರ್ಗತ್ತಲೆ, ಕೋಶಾಧಿಕಾರಿ ಮಹಮ್ಮದ್ ಹಾಜಿ ಬಿಲಾಲ್, ಲೆಕ್ಕ ಪರಿಶೋಧಕ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಅಲ್ಲಿ ಮನೆಗಳೆಲ್ಲಾ ನೆಲಸಮ ಆಗಿದೆ. ಮೊಬೈಲ್ ಸಂಪರ್ಕ ಸಿಗುತ್ತಿಲ್ಲ. ಆತಂಕಕ್ಕೀಡಾಗಿದ್ದೇವೆ ಹೋಗಲು ರೈಲ್ವೇ ಸಂಪರ್ಕ ಇಲ್ಲ. ಇದು ನೇಪಾಳದ ನಿವಾಸಿ, ತೊಕ್ಕೊಟ್ಟುವಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಅಳಲಾಗಿದೆ. ಶನಿವಾರ ಮತ್ತು ಭಾನುವಾರ ನೇಪಾಳ ಮತ್ತು ದೇಶದ ಕೆಲವೆಡೆ ಸಂಭವಿಸಿದ ಭೂಕಂಪದಲ್ಲಿ 2000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಸುದ್ದಿ ತಿಳಿದು ಊರು ಬಿಟ್ಟು ಕೆಲಸ ನಿರ್ವಹಿಸುತ್ತಿರುವ ನೇಪಾಳ ಮೂಲದವರು ಆತಂಕಕ್ಕೀಡಾಗಿ, ಕಂಗಾಲಾಗಿದ್ದಾರೆ. ತೊಕ್ಕೊಟ್ಟು ಜಂಕ್ಷನ್ನಿನ ಫುಡ್ ಪಾಯಿಂಟ್ ಹೊಟೇಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಮತ್ತು ಅದೇ ಊರಿನ ಮಂಗಳೂರಿನಲ್ಲಿ ನಿರ್ವಹಿಸುತ್ತಿರುವ ಇಬ್ಬರ ಮನೆಗಳಿಗೆ ಹಾನಿ ಸಂಭವಿಸಿ ಮನೆಮಂದಿ ಬೀದಿಪಾಲಾಗಿರುವುದಾಗಿ ಹೇಳಿದ್ದಾರೆ. ಕಳೆದ ಆರು ವರ್ಷಗಳಿಂದ ಮಂಗಳೂರು , ಸದ್ಯ ತೊಕ್ಕೊಟ್ಟುವಿನ ಹೊಟೇಲಿನಲ್ಲಿ ಕಾರ್ಮಿಕನಾಗಿರುವ ನೇಪಾಳದ ದಾರಿಗ್ ಜಿಲ್ಲೆ ನಿವಾಸಿ 50ರ ಹರೆಯದ ನಾರಾಯಣ್ ಮಾತನಾಡಿ ಮಧ್ಯಾಹ್ನ ವೇಳೆ ಟಿ.ವಿ.ಯಲ್ಲಿ ಸುದ್ಧಿ ತಿಳಿದು ಗಾಬರಿಗೊಂಡೆವು. ಮನೆಮಂದಿಗೆ ಫೋನಾಯಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಸಂಜೆ ವೇಳೆ ಮನೆಯಿಂದಲೇ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಸ್ಕೂಟರಿನಿಂದ ಬಿದ್ದ ಮಹಿಳೆ ಮೇಲೆ ಲಾರಿ ಹರಿದು ಆಕೆ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಹಾರಾ ಆಸ್ಪತ್ರೆ ಎದುರುಗಡೆ ಭಾನುವಾರ ೧.೩೦ರ ಸುಮಾರಿಗೆ ಸಂಭವಿಸಿದೆ. ಕೃಷ್ಣಾಪುರ ನಿವಾಸಿ ಮೈಮುನಾ(೫೦) ಮೃತರು. ಕೃಷ್ಣಾಪುರದ ನಿವಾಸದಿಂದ ಮಗ ಶಬೀರ್ ಜತೆಗೆ ಆಕ್ಟಿವಾ ಸ್ಕೂಟರಿನಲ್ಲಿ ಬಂದಿದ್ದ ಮೈಮುನಾ ಅವರು ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ನಡೆದಿದ್ದ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಅದನ್ನು ಮುಗಿಸಿ ಉಳ್ಳಾಲ ದರ್ಗಾ ಉರೂಸಿಗೆ ತೆರಳುವ ಸಂದರ್ಭ ತೊಕ್ಕೊಟ್ಟು ಸಹಾರಾ ಆಸ್ಪತ್ರೆ ಎದುರುಗಡೆ ರಾಷ್ಟ್ರೀಯ ಹೆದ್ದಾರಿ .೬೬ರ ಬದಿಯ ಹೊಂಡಕ್ಕೆ ಸ್ಕೂಟರ್ ಸಿಲುಕಿದ ಪರಿಣಾಮ ಮೈಮುನಾ ಅವರು ರಸ್ತೆಗೆ ಉರುಳಿ ಬಿದ್ದಿದ್ದರು. ಈ ವೇಳೆ ಹಿಂದಿನಿಂದ ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಕಸ ವಿಲೇವಾರಿ ಲಾರಿ ಚಕ್ರದಡಿ ಸಿಲುಕಿ ಮೈಮುನಾ ಅವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆಯುಂಟಾಗಿ, ಉಳ್ಳಾಲ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದುರ್ಬಲ, ಶಿಕ್ಷಣ ವಂಚಿತರ , ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿಯಿಲ್ಲದವರ ಉದ್ಧಾರ ನಡೆಸುತ್ತಿರುವ ರಾಜ್ಯ ಸರಕಾರ ಮೇ.1ರಿಂದ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿಯೇ ಅಕ್ಕಿಯನ್ನು ವಿತರಿಸುವ ಮೂಲಕ ಹಸಿವು ಮುಕ್ತ ರಾಜ್ಯವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಉಳ್ಳಾಲ ಸಯ್ಯಿದ್ ಮದನಿ ದರ್ಗಾದಲ್ಲಿ ನಡೆಯುತ್ತಿರುವ 423ನೇ ವಾರ್ಷಿಕ ಹಾಗೂ 20ನೇ ಪಂಚವಾರ್ಷಿಕ ಉರೂಸ್ ಪ್ರಯಕ್ತ ಶುಕ್ರವಾರ ನಡೆದ ರಾಜಕೀಯ ಹಾಗೂ ಸಾಮಾಜಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಇದ್ದಲ್ಲಿ ಬೆಳವಣಿಗೆ ಸಾಧ್ಯ. ಹಿಂದೆ ನಡೆದ ಪಾದಯಾತ್ರೆ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಪಕ್ಷ ಗೆಲುವನ್ನು ಕಂಡಿದೆ. ಈ ಮೂಲಕ ಶಾಂತಿಗಾಗಿ ನಡೆದ ಪಾದಯಾತ್ರೆಯನ್ನು ಒಪ್ಪಿರುವ ಕರಾವಳಿ ಜನ ಶಾಂತಿ ಪ್ರಿಯರು, ಸಾಮರಸ್ಯವನ್ನು ಬಯಸುವವರೆಂದು ಗೊತ್ತಾಗುತ್ತದೆ. ಜಾತ್ಯಾತೀತ ನಿಲುವು ಹೊಂದಿರುವ ಸರಕಾರದ ಮುಖ್ಯಮಂತ್ರಿಗೆ ರಾಜ್ಯದ ಜನರ ಐಕ್ಯತೆ,ಸಾಮರಸ್ಯ ಕಾಪಾಡುವ ಮಹತ್ತರ ಜವಾಬ್ದಾರಿಯಿದೆ. ಇದಕ್ಕೆ ಜಾತ್ಯಾತೀತ ನಿಲುವು ಹೊಂದಿರುವ ಜನಸಾಮಾನ್ಯರು ಪ್ರಯತ್ನಿಸಬೇಕಿದೆ. ಉಳ್ಳಾಲ ದರ್ಗಾಕ್ಕೆ ಇದು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಜನಾಡಿ : ಮಂಗಳೂರು ವಿಧಾನಸಭಾ ಕ್ಷೇತ್ರಾದ್ಯಂತ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಹಮ್ಮಿಕೊಂಡಿದ್ದ ಸೌಹಾರ್ದ ಭೇಟಿ ಸಂದರ್ಭ ಮಂಜನಾಡಿ ನಿವಾಸಿ ಮೈಸೂರಿನಲ್ಲಿ ಉದ್ಯಮಿಮಿಯಾಗಿರುವ ಅವರ ಆಪ್ತ ಮೈಸೂರು ಬಾವಾ ಅವರ ಮನೆಯಲ್ಲಿ ನಡೆಯುತ್ತಿದ್ದ ಮಗಳ ಮೆಹಂದಿ ಸಮಾರಂಭಕ್ಕೆ ಭೇಟಿ ನೀಡಿ ಕರಾವಳಿಯ ಖಾದ್ಯದೊಂದಿಗೆ ಘಟ್ಟದ ಮೇಲಿನ ಆಹಾರ ರಾಗಿಮುದ್ದೆಯನ್ನು ಸವಿದರು. ಮಂಗಳೂರಿನ ಬಜಪೆ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿ ಬಳಿಕ ನೇರವಾಗಿ ನಾಟೆಕಲ್ ಮಂಜನಾಡಿ ಮೈಸೂರು ಬಾವಾ ಮನೆಗೆ ಭೇಟಿ ನೀಡಿದರು. ಅಲ್ಲಿ ಅವರ ಪುತ್ರಿಯ ಮೆಹಂದಿ ಸಮಾರಂಭ ಮತ್ತು ಅತಿಥಿಯಾಗಿ ಬರಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕರಾವಳಿಯ ವಿಶಿಷ್ಟ ಖಾದ್ಯಗಳನ್ನು ತಯಾರಿಸಲಾಗಿತ್ತು. ನಾಟಿ ಕೋಳಿ ಸಾರು, ಚಿಕನ್ ಕಬಾಬ್, ಮೀನಿನ ಖಾದ್ಯದಲ್ಲಿ ಶಿಗಡಿ, ಅಂಜಲು, ಮಟನ್ ಸಾರು, ಮಾವಿನ ಕಾಯಿ ಸಾರು, ಅಕ್ಕಿ ರೊಟ್ಟಿ, ಚಪಾತಿ, ಪೂರಿ, ಅನ್ನ.. ಹೀಗೆ ವಿವಿಧ ಖಾದ್ಯಗಳನ್ನು ಮುಖ್ಯಮಂತ್ರಿಗಳು ಸವಿದರು. ಕರಾವಳಿಯ ಘಟ್ಟದ ಮೇಲಿನ ಆಹಾರ ರಾಗಿ ಮುದ್ದೆಯನ್ನು ಕಂಡು ಆಶ್ಚರ್ಯಪಟ್ಟ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರಾಜ್ಯದ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸ್ಥಿತಿಯನ್ನು ಅರಿಯುವ ಸಲುವಾಗಿ ಜಾತಿ ಸಮೀಕ್ಷೆಯನ್ನು ರಾಜ್ಯ ಸರಕಾರ ಹಮ್ಮಿಕೊಂಡಿದ್ದು, ಹೊಸ ಯೋಜನೆಗಳನ್ನು ರೂಪಿಸುವ ಸಲುವಾಗಿ ಈ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಅವರು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು ರಾಜ್ಯದ 6.5 ಕೋಟಿ ಜನರು ಸಮಾನತೆ, ಸಾಮಾಜಿಕ ನ್ಯಾಯ, ಸಹೋದರತ್ವದ ಮನೋಭಾವವನ್ನು ಮೈಗೂಡಿಸಿಕೊಂಡು ಪ್ರೀತಿ ವಿಶ್ವಾಸದಿಂದ ಸಂವಿಧಾನಬದ್ಧವಾಗಿ ಬದುಕುವ ರೀತಿಯಲ್ಲಿ ರಾಜ್ಯ ಸರಕಾರ ಕೆಲಸಗಳನ್ನು ನಡೆಸುತ್ತಿದೆ. ಎ.11ರಿಂದ ಎ.30ರವರೆಗೆ ನಡೆಯಲಿರುವ ಜಾತಿ ಸಮೀಕ್ಷೆಯಲ್ಲಿ ಜನರ ಆರ್ಥಿಕ,ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕುರಿತ ವರದಿಯನ್ನು ಸಂಗ್ರಹಿಸಲಿದ್ದೇವೆ. ಇದು ಮುಂದೆ ಜನರಿಗೆ ಬೇಕಾದ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ಜಾತಿಯನ್ನು ಕೂಡಿಸುವ ಸಲುವಾಗಿ ಸಮೀಕ್ಷೆ ನಡೆಯುತ್ತಿದೆ. ಜಾತಿ ವಿಂಗಡಣೆ ಮಾಡಲೆಂದು ಕೆಲವರು ಟೀಕೆ ನಡೆಸುತ್ತಿರುವ ವಿಚಾರಕ್ಕೆ ಕಿವಿಗೊಡಬೇಡಿ ಎಂದರು…

Read More