ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮನೆಯೊಂದರ ಕಂಪೌಂಡ್ ಹಾರಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೊಲ್ಯ ಸಮೀಪ ನಡೆದಿದ್ದು, ಇತ್ತೀಚೆಗೆ ಇದೇ ಸ್ಥಳದ ಮನೆಯೊಂದರಿಂದ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಕಳವು ನಡೆದಿತ್ತು. ಮಾಸ್ತಿಕಟ್ಟೆ ನಿವಾಸಿ ಸತ್ತಾರ್ (25) ಗೂಸಾ ತಿಂದಾತ. ಈತ ನಿನ್ನೆ ತಡರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿರುವ ಮನೆಯೊಂದರ ಕಂಪೌಂಡ್ ಹಾರುವುದನ್ನು ಮನೆಮಂದಿ ಗಮನಿಸಿದ್ದರು. ಕೂಡಲೇ ಆತನನ್ನು ಹಿಡಿಯಲು ಮುಂದಾದಾಗ ಅಲ್ಲಿಂದ ತಪ್ಪಿಸಿದಾತ ದೇವಸ್ಥಾನ ಸಮೀಪವಿರುವ ಖಾಲಿ ಕಂಪೌಂಡಿನೊಳಗೆ ಕುಳಿತು ಅವಿತಿದ್ದ. ಅಲ್ಲಿಗೆ ತೆರಳಿದ ಸಾರ್ವಜನಿಕರು ಹಿಡಿದು ಪ್ರಶ್ನಿಸಲು ಆರಂಭಿಸದಾಗ ಸಂಶಯಾಸ್ಪದವಾಗಿ ವರ್ತಿಸಲು ಆರಂಭಿಸಿದ್ದ. ಮತ್ತೆ ಥಳಿಸಲು ಮುಂದಾದಾಗ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಇಡೀ ಅಮಲಿನ ನಶೆಯಲ್ಲಿ ತೇಲುತ್ತಿದ್ದ ಸತ್ತಾರ್ ಗಾಂಜಾ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ…
Author: UllalaVani
ಉಳ್ಳಾಲ್ನ್ಯೂಸ್ ನೆಟ್ವರ್ಕ್ ತಲಪಾಡಿ: ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಂಗಡಿಯೊಂದು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ರೂ. ೪೦ ಲಕ್ಷ ನಷ್ಟ ಸಂಭವಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಂಡಾಣ ಬಳಿ ಸಂಭವಿಸಿದೆ. ಭರತ್ ಎಂಬವರಿಗೆ ಸೇರಿದ ‘ಸಾಯಿರಾಂ’ ಫ್ಯಾನ್ಸಿ ಮತ್ತು ಮೊಬೈಲ್ ಅಂಗಡಿ ಸಂಪೂರ್ಣ ಭಸ್ಮವಾಗಿದ್ದು, ಒಳಗಿದ್ದ ಫ್ಯಾನ್ಸಿ ಸೊತ್ತು, ಮಾರಾಟಕ್ಕೆ ಇರಿಸಲಾಗಿದ್ದ ಹೊಸ ಮೊಬೈಲ್ ಸೆಟ್ ಗಳು ಮತ್ತು ರಿಪೇರಿಗೆಂದು ಬಂದ ಮೊಬೈಲ್ ಸೆಟ್ ಗಳು ಸುಟ್ಟು ಕರಕಲಾಗಿವೆ. ಶನಿವಾರ ತಡರಾತ್ರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಂಗಡಿ ಮಾಲೀಕರಿಗೆ ವಿಷಯ ಮುಟ್ಟಿಸಿದರು. ಅವರು ಸ್ಥಳಕ್ಕಾಗಮಿಸಿ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ಅಂಗಡಿಯೊಳಗಿನ ಸೊತ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಕಳೆದ ಐದು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಭರತ್ ಅವರು ಅಂಗಡಿ ನಡೆಸುತ್ತಿದ್ದರು. ಬ್ಯಾಂಕ್ನಲ್ಲಿ ಸಾಲ ಪಡೆದು ಅಂಗಡಿಯನ್ನು ನಡೆಸುತ್ತಿದ್ದರು. ಸ್ಥಳಕ್ಕೆ ಉಳ್ಳಾಲ ಪೊಲೀಸರು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಖಾಝಿಯಾಗಿದ್ದ ತಾಜುಲ್ ಉಲಮಾ ಅವರ ನೇತೃತ್ವದಲ್ಲಿ ನೂರಾರು ಮಸೀದಿಗಳು ನಿರ್ಮಾಣ ಆಗಿವೆ. ಅವರು ಬರುವ ಮೊದಲು ಮಸೀದಿಗಳ ಕೊರತೆ ಇತ್ತು. ಅವರು ಉಳ್ಳಾಲಕ್ಕೆ ಬಂದ ಬಳಿಕ ನೂರಾರು ಮದ್ರಸ , ಮಸೀದಿಗಳು ನಿರ್ಮಾಣ ಅವರ ನೇತೃತ್ವದಲ್ಲೇ ನಡೆಯಲು ಇಲ್ಲಿ ಅಂತ್ಯವಿಶ್ರಮಿಸುತ್ತಿರುವ ಸೆಯ್ಯದ್ ಮುಹಮ್ಮದ್ ಶರೀಫುಲ್ ಮದನಿಯವರ ಪವಾಢವೇ ಕಾರಣ ಎಂದು ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು. ಅವರು ದಕ್ಷಿಣ ಭಾರತದ ಅಜ್ಮೀರ್ ಎಂದೇ ಹೆಸರುಗಳಿಸಿದ ಉಳ್ಳಾಲ ದರ್ಗಾದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಖುತುಬುಝ್ಜಮಾನ್ ಹಝ್ರತ್ ಅಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್ರ 423ನೆ ವಾರ್ಷಿಕ ಮತ್ತು 20ನೆ ಪಂಚವಾರ್ಷಿಕ ಉರೂಸ್ ಪ್ರಯುಕ್ತ ಮೊದಲನೇ ದಿನ ಗುರುವಾರದ ರಾತ್ರಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. ಪವಾಢ ಪುರುಷರನ್ನು, ಗುರುಗಳನ್ನು ಗೌರವಿಸುವವರಿಗೆ ಅಲ್ಲಾಹನಲ್ಲಿ ವಿಶ್ವಾಸವಿಟ್ಟವರಿಗೆ ರಕ್ಷಣೆ ಇದೆ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಬಲಿಷ್ಠವಾದಲ್ಲಿ ದೇಶ ಬಲಿಷ್ಠವಾಗಬಹುದೇ ಹೊರತು ಸಚಿವರು ಐಎಎಸ್ ಅಧಿಕಾರದ ಆಡಳಿತದಿಂದ ಆಗದು. ಉಳ್ಳಾಲ ದರ್ಗಾ ಸಮಿತಿ ನ್ಯಾಷನಲ್ ಇಂಟರ್ಗ್ರೇಶನ್ ಕಾನ್ಫರೆನ್ಸ್ ಹಮ್ಮಿಕೊಂಡಿರುವುದರಿಂದ ರಾಷ್ಟ್ರೀಯ ಭಾವೈಕ್ಯತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಅವರು ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಶುಕ್ರವಾರ ನಡೆದ ನ್ಯಾಷನಲ್ ಇಂಟೆಗ್ರೇಶನ್ ಕಾನ್ಫರೆನ್ಸ್ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾಜದ ಅಭಿವೃದ್ಧಿ, ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ನಮ್ಮೆಲ್ಲರ ಗುರಿಯಾಗಿದೆ. ಸಂಘರ್ಷಕ್ಕೆ ಆಸ್ಪದ ಕೊಡಲು ಯಾರೂ ಕೂಡಾ ಇಷ್ಟಪಡುವುದಿಲ್ಲ. ಅದಕ್ಕೆ ಪ್ರೋತ್ಸಾಹ ಕೂಡಾ ನೀಡುವುದಿಲ್ಲ. ನಮಗೆ ಅಗತ್ಯವಾಗಿ ಬೇಕಾಗಿರುವುದು ಶಿಕ್ಷಣ. ಶಿಕ್ಷಣ ಬೆಳೆದರೆ ಮಾತ್ರ ಸಮಸ್ಯೆಗಳು ಕಡಿಮೆಯಾಗಬಹುದು. ಶಿಕ್ಷಣ ಅಭಿವೃದ್ಧಿಗೆ ನಾವು ಪ್ರೋತ್ಸಾಹ ನೀಡಬೇಕು. ಯುವಕರು ಉತ್ತಮ ಶಿಕ್ಷಣ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಬೇಕು ಎಂದರು. ನಗರಾಭಿವೃದ್ಧಿ ಪ್ರಾಧಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ನೀತಿಯನ್ನು ಅನುಕರಣೆ ಮಾಡಿರುವುದು ಭಾವೈಕ್ಯತೆಯಿಂದಾಗಿದೆ.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಹೆಸರು ಗಳಿಸಿದ ಉಳ್ಳಾಲ ದರ್ಗಾದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಖುತುಬುಝ್ಜಮಾನ್ ಹಝ್ರತ್ ಅಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್ರ 423ನೆ ವಾರ್ಷಿಕ ಮತ್ತು 20ನೆ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಗುರುವಾರ ರಾತ್ರಿ ಅಸೈಯ್ಯದ್ ಮುಹಮ್ಮದ್ ಉಮರುಲ್ ಫಾರೂ ತಂಙಳ್ ಪೊಸೋಟು ಸಂಭ್ರಮದ ಚಾಲನೆ ನೀಡಿದರು. ಉರೂಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಖಾಝಿ ಅಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ದುಆ ಮಾಡಿದರು. ಮುಖ್ಯ ಭಾಷಣ ಮಾಡಿದ ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ರವರು,ಉಳ್ಳಾಲ ಖಾಝಿಯಾಗಿದ್ದ ತಾಜುಲ್ ಉಲಮಾ ಅವರ ನೇತೃತ್ವದಲ್ಲಿ ನೂರಾರು ಮಸೀದಿಗಳು ನಿರ್ಮಾಣ ಆಗಿವೆ. ಅವರು ಬರುವ ಮೊದಲು ಮಸೀದಿಗಳ ಕೊರತೆ ಇತ್ತು. ಅವರು ಉಳ್ಳಾಲಕ್ಕೆ ಬಂದ ಬಳಿಕ ನೂರಾರು ಮದ್ರಸ , ಮಸೀದಿಗಳು ನಿರ್ಮಾಣ ಅವರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ 402, ಉಳ್ಳಾಲ ಬಹುಮಾನ್ಯರಾದ ಖುತ್ಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ) ತಂಙಳ್ರವರ 423ನೆಯ ವಾರ್ಷಿಕ ಹಾಗೂ 20ನೇ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಹಾಗೂ ನವೀಕೃತ ಮಸೀದಿಯ ಉದ್ಘಾಟನೆ ಸಮಾರಂಭ ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್ಬುಖಾರಿ ಅವರ ನೇತೃತ್ವದಲ್ಲಿ ಗುರುವಾರ ನಡೆಯಿತು. ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಅವರು ಮಾತನಾಡಿ ಈಗಾಗಲೇ ನವೀಕೃತ ಜುಮಾ ಮಸೀದಿ ಉದ್ಘಾಟನೆಗೊಂಡಿದೆ. ಉಳ್ಳಾಲ ಉರೂಸ್ ಯಶಸ್ವಿಗೆ ಸುಮಾರು 2500 ಸ್ವಯಂ ಸೇವಕರನ್ನೊಳಗೊಂಡ ಹಲವು ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೂ ಜವಬ್ದಾರಿ ವಹಿಸಲಾಗಿದೆ. ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಮಾಧ್ಯಮ ಸೇರಿದಂತೆ ಎಲ್ಲರ ಸಹಕಾರ ಅಗತ್ಯ ಎಂದರು. ಉಳ್ಳಾಲ ಉರೂಸ್ಗೆ ಸರ್ವಧರ್ಮೀಯರು ಸೇರಲಿದ್ದು ಸುಮಾರು 25 ರಿಂದ 30 ಲಕ್ಷ ಜನರು ಆಗಮಿಸುತ್ತಾರೆ. ಎಲ್ಲರಿಗೂ ಅಲ್ಲಾಹುವಿನ ಅನುಗ್ರಹ…
ಬಾಲಿವುಡ್ನ ನಂಬರ್ ಒನ್ ಐಟಂ ಗರ್ಲ್ ಸನ್ನಿಲಿಯೋನ್ ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಆದೆಷ್ಟೋ ಯುವಕರ ನಿದ್ದೆ ಕದ್ದ ಈ ಮಾದಕ ಬೆಡಗಿಯ ಮೇಲೆ ಕೇಸು ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಏಕ್ ಪೆಹೇಲಿ ಲೀಲಾ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸುತ್ತಿರುವ ಸನ್ನಿ ವಿರುದ್ಧ ಎಪ್ಐಆರ್ ದಾಖಲಾಗಲು ಕಾರಣ ಈ ಚಿತ್ರದ ಪ್ರಮೋಶನ್ಗಾಗಿ ಆಕೆ ಪೈವ್ ಸ್ಟಾರ್ ಹೋಟೆಲ್ಗೆ ಬಂದಿರುವುದು. ಸನ್ನಿ ಅಭಿನಯದ ಈ ಚಿತ್ರ ಬಿಡುಗಡೆಯ ಹಂತದಲ್ಲಿರುವುದರಿಂದ ಚಿತ್ರದ ಪ್ರಮೋಶನ್ನನ್ನು ಪೈವ್ ಸ್ಟಾರ್ ಹೋಟೆಲ್ನಲ್ಲಿ ಆಯೋಜಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಬೇರೆಡೆ ಸ್ಥಳಾಂತರಿಸಲಾಯಿತು. ಆದರೆ ಸನ್ನಿ ಬೇರೆ ಉದ್ದೇಶಕ್ಕಾಗಿ ಬಂದಿದ್ದಾಳೆಂದು ಎಂದು ತಿಳಿದು ಅಲ್ಲಿನ ಸಾರ್ವಜನಿಕರು ಆಕೆಯ ವಿರುದ್ಧ ಕೇಸು ದಾಖಲಿಸಿದ್ದಾರೆ. ಸನ್ನಿಲಿಯೋನ್ ತಂಡದವರು ಸಿನಿಮಾ ಪ್ರಮೋಷನ್ಗೆ ಬಂದಿದ್ದಾಗಿ ಖಚಿತಪಡಿಸಿದ ಮೇಲೆ ಸಾರ್ಮಜನಿಕರು ಕೇಸು ವಾಪಸ್ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಪಿ.ಸಿ.ಝಹೀರ್ ಸ್ಮರಣಾರ್ಥ 13ನೆಯ ವರುಷದ ಅಂತರ್ ಕಾಲೇಜು ಫುಟ್ಬಾಲ್ ಪಂದ್ಯಾಟ ಯೆನೆಪೋಯ ವಿವಿಯ ಸಾಕರ್ ಕ್ರೀಡಾಂಗಣದಲ್ಲಿ ಬುಧವಾರ ಉದ್ಘಾಟನೆಗೊಂಡಿತು. ಯೆನೆಪೋಯ ವಿವಿಯ ಶೈಕ್ಷಣಿಕ ಹಾಗೂ ಆಡಳಿತ ನಿರ್ದೇಶಕ ಪ್ರೊ.ಪಿ.ಸಿಂ.ಕುಂಞ ಪಂದ್ಯಾವಳಿ ಉದ್ಘಾಟಿಸಿದರು. ಅಂತರಾಷ್ಟಿ ಯ ಫುಟ್ಬಾಲ್ ಆಟಗಾರ, ಭಾರತ ಫುಟ್ಬಾಲ್ ತಂಡದ ಮಾಜಿ ಕಪ್ತಾನ ಐ.ಎಂ.ವಿಜಯನ್ ಕಾಲ್ಚೆಂಡು ಒದೆಯುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು. ಯೆನೆಪೋಯ ವಿವಿ ಉಪ ಕುಲಪತಿ ಡಾ. ಪಿ.ಚಂದ್ರಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿ ಕುಲಸಚಿವ ಡಾ. ಸಿ.ವಿ.ರಘುವೀರ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಪಿ.ಜಯರಾಜನ್, ಹಣಹಾಸು ಅಧಿಕಾರಿ ಅಹ್ಮದ್ ಬಾವ, ಅಲೈಡ್ ಹೆಲ್ತ್ ಆಂಡ್ ಬೇಸಿಕ್ ಸೈನ್ಸ್ನ ಡೀನ್ ಪ್ರೊ. ಪದ್ಮಕುಮಾರ್, ವೈಆರ್ಸಿ ಡೆಪ್ಯುಟಿ ಡೈರೆಕ್ಟರ್ ಡಾ. ಅರುಣ್ ಭಾಗವತ್ ಉಪಸ್ಥಿತರಿದ್ದರು. ಯೆನೆಪೋಯ ವಿವಿ ಜಂಟಿ ಕ್ರೀಡಾ ನಿರ್ದೇಶಕ ಅನುಪ್ ಜೈನ್ ಎಂ.ಜೆ ಸ್ವಾಗತಿಸಿದರು. ಸಹ ಕ್ರೀಡಾ ನಿರ್ದೇಶಕಿ ಶಿಲ್ಪಶ್ರೀ ವಂದಿಸಿದರು. ಮೊದಲ ಪಂದ್ಯ ಯೆನೆಪೋಯ ವಿವಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಯೆನೆಪೋಯ ದಂತ ಮಹಾವಿದ್ಯಾಲಯದ ಮ್ಯಾಕ್ಸಿಲೋ ಫ಼ೇಶಿಯಲ್ ಹಾಗೂ ಸೆಂಟರ್ ಫ಼ಾರ್ ಕ್ರೇನಿಯೋಫ಼ೇಶಿಯಲ್ ಅನಾಮಲೀಸ್ ವಿಭಾಗ ಯೆನೆಪೋಯ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಪ್ಲಾನಿಂಗ್ ಫಾರ್ ಓರ್ಥೊಗ್ನಾಥಿಕ್ ಸರ್ಜರಿ -ಕಲೆಯೋ ವಿಜ್ಞಾನವೋ ಎಂಬ ವಿಚಾರದಡಿಯಲ್ಲಿ ಒಂದು ದಿನದ ಕಾರ್ಯಗಾರ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಯೆನೆಪೋಯ ವಿವಿ ಉಪ ಕುಲಪತಿ ಪ್ರೊ. ಡಾ. ಪಿ. ಚಂದ್ರಮೋಹನ್ ಉದ್ಘಾಟಿಸಿದರು. ಯೆನೆಪೋಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎಚ್. ಶ್ರಿಪತಿ ರಾವ್ ವಿಷಯ ಕುರಿತು ಮಾತನಾಡಿದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಡಾ. ಪ್ರಮೋದ್ ಸುಭಾಶ್ ಹಾಗೂ ಡಾ. ಅಕ್ಷಯ್ ಶೆಟ್ಟಿ ಪ್ಲಾನಿಂಗ್ ಬಗ್ಗೆ ಉಪನ್ಯಾಸ ನೀಡಿದರು. ದಕ್ಷಿಣ ಕನ್ನಡ ಹಾಗೂ ಪರಿಸರದ ದಂತ ವಿದ್ಯಾಲಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸುಮಾರು ೨೩೦ ಮಂದಿ ಭಾಗವಹಿಸಿದ್ದರು. ಓರಲ್ ಮ್ಯಾಕ್ಸಿಲೋ ಫ಼ೇಶಿಯಲ್ ವಿಭಾಗದ ಪ್ರೊಫೆಸರ್ ಡಾ. ಜೋಯ್ಸ್ ಸಿಕ್ವೇರ ಸ್ವಾಗತಿಸಿದರು. ಡಾ. ಜಗದೀಶ್ ಚಂದ್ರ ವಂದಿಸಿದರು.
ಮಾಜಿ ವಿಶ್ವ ಸುಂದರ, ಬಿಗ್ ಬಿ ಬಹು ಕನ್ನಡ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಒಂದು ವರ್ಷದಿಂದ ಐಶ್ವರ್ಯ ರೈ ಡೇಟ್ಸ್ಗಾಗಿ ಕಾದುಕುಳಿತಿದ್ದ ನಿರ್ದೇಶಕರಿಗೆ ಐಶ್ವರ್ಯ ರೈ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಕರಾವಳಿ ಚೆಲುವೆ ಐಶು ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ `ಮನಮೋಹಕ’ ಎಂಬ ಚಿತ್ರಕ್ಕೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಚಿತ್ರದ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರದಲ್ಲಿ ಐಶು ಮನಮೋಹಕವಾಗಿ ಅಭಿನಯಿಸಲಿದ್ದಾರೆ. ಶಿವ ರಾಜ್ ಕುಮಾರ್ ಅಭಿನಯದ `ಕಬೀರ್’ಚಿತ್ರದಲ್ಲಿ ಬಾಲಿವುಡ್ನ ಬಿಗ್ ಬಿ ಅಮಿತಾಬ್ ಬಚ್ಚನ್ನು ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಅನ್ನೋದು ಸದ್ಯಕ್ಕೆ ಗಾಂಧಿನಗರದಲ್ಲಿ ಹರಿಡಾಡುತ್ತಿರುವ ಸುದ್ದಿ. ಐಶು ಕನ್ನಡ ಚಿತ್ರವೊಂದರಲ್ಲಿ ಶಿವರಾಜ್ ಕುಮಾರ್ ಜೊತೆಯಲ್ಲಿ ಐಶು ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂತೋಷದ ಜೊತೆಗೆ ಚಿತ್ರ ಯಾವಾಗ ಬಿಡುಗಡೆಗೊಳ್ಳುತ್ತದೆ ಅನ್ನೋ ಕಾತರವೇ ಹೆಚ್ಚಾಗುತ್ತಿದೆ ಅನ್ನೋ ಮಾತು ಕೇಳಿಬರುತ್ತಿದೆ. ಐಶು ಹಾಗೂ ಶಿವಣ್ಣ ಜೋಡಿಯ ಮನಮೋಹಕ ಚಿತ್ರ ಶತದಿನ ಆಚರಿಸಲಿ ಅನ್ನೋದು ಇವರ…

