ಉಳ್ಳಾಲ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಅಕ್ರಮವಾಗಿ ಒಂಭತ್ತು ಜಾನುವಾರುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿ, ಒಂಭತ್ತು ಜಾನುವಾರು, ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಲಾರದ ನಾಸೀರ್ ಬಾಷಾ(32), ಹಾಸನ ಬಾಣಾವರದ ಅಬೂಬಕರ್ ಸಿದ್ದೀಖ್ (28) ಬಂಧಿತರು. ಹೊಸೂರಿನಿಂದ ಕೇರಳ ಕಡೆಗೆ ಟಾಟ-407 ವಾಹನದಲ್ಲಿ ಜಾನುವಾರು ಸಾಗಾಟ ನಡೆಸುತ್ತಿದ್ದರು. ಪೊಲೀಸರಿಗೆ ಬಂದ ಮಾಹಿತಿಯಂತೆ ಕೋಟೆಕಾರು ಬಳಿ ಬೆಳಿಗ್ಗೆ 5.30ರ ಸುಮಾರಿಗೆ ವಾಹನ ತಡೆದು ತಪಾಸಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
Author: UllalaVani
ಉಳ್ಳಾಲ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಶಾಲೆಯ 3.5 ಹರೆಯದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದರೂ ಬೇಜವಾಬ್ದಾರಿಯಾಗಿ ವರ್ತಿಸಿದ ಮಂಗಳೂರು ಒನ್ ಶಾಲಾ ಆಡಳಿತ ಶಾಲೆಯನ್ನು ಜೂ.1 ರ ಒಳಗೆ ಮುಚ್ಚದೇ ಇದ್ದಲ್ಲಿ, ನಾವೇ ಮುಚ್ಚುವ ಮೂಲಕ ಕ್ರಾಂತಿಕಾರಿ ಹೋರಾಟಕ್ಕೆ ಬಾಷ್ಯ ಬರೆಯಲಿದ್ದೇವೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಸದಸ್ಯರು ಆಶೀಕ್ ಮಾಚಾರ್ ಎಚ್ಚರಿಸಿದ್ದಾರೆ. ಅವರು ತೊಕ್ಕೊಟ್ಟು ಚೆಂಬುಗುಡ್ಡೆಯ ಮಂಗಳೂರು ಒನ್ ಶಾಲೆಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಶಾಲಾ ಆಡಳಿತ ಮಂಡಳಿ ಬೇಜವಾಬ್ದಾರಿತನ ನಿಲುವು ತಾಳಿದೆ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಶುಕ್ರವಾರ ಶಾಲೆ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಾಲಕಿ ಮೇಲೆ ನಡೆದ ದೌರ್ಜನ್ಯ ದೃಢಪಟ್ಟರೂ, ಶಾಲಾ ಆಡಳಿತ ಮಂಡಳಿ ಮಾತ್ರ ಕ್ಷುಲ್ಲಕ ಕಾರಣಗಳನ್ನು ಹೇಳುತ್ತಾ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಬೆಂಗಳೂರು, ಬೆಳ್ತಂಗಡಿಯಲ್ಲಿ ಬಾಲಕಿಯರ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿರುವ ಸಿಎಫ್ಐ ವಿರುದ್ಧ ಹಲವು…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ಕೊಣಾಜೆ : ಗರ್ಭಿಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಪತಿಯ ವಿರುದ್ಧ ಆಕೆ ಹೆತ್ತವರು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎ.೯ ರಂದು ಅಂಬ್ಲಮೊಗರು ಗ್ರಾಮದ ಬಾರೆದಡ್ಕದ ಬಾಡಿಗೆ ಮನೆಯಲ್ಲಿ ತಮಿಳುನಾಡು ಮೂಲದ ಪ್ರಿಯಾ (೨೧) ಒಂಭತ್ತು ತಿಂಗಳ ಗರ್ಭಿಣಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈಕೆ ಆತ್ಮಹತ್ಯೆಮಾಡಿಕೊಂಡಿರುವ ಸಮೀಪದಲ್ಲೇ ಇನ್ನೊಂದು ನೇಣಿಗೆ ಯತ್ನಿಸಿದ ಹಗ್ಗವೊಂದು ಕಂಡುಬಂದಿತ್ತು. ಅದರಲ್ಲಿ ಪ್ರಿಯಾ ಪತಿ ವಿಘ್ನೇಶ್(೨೫) ಎಂಬಾತ ಆತ್ಮಹತ್ಯೆಗೆ ಯತ್ನಿಸಿ ವಿಫಲನಾಗಿ ಬಳಿಕ ಮನೆಬಿಟ್ಟು ಪರಾರಿಯಾಗಿದ್ದನೆಂದು ಸಂಶಯಿಸಲಾಗಿತ್ತು. ತಮಿಳುನಾಡು ಪೆರಿಯಲೂರಿನ ಅರಂದಾಗಿ ತಾಲೂಕಿನ ಪುದುಕೋಟೆ ನಿವಾಸಿಯಾಗಿರುವ ದಂಪತಿ ಪ್ರೀತಿಸಿ ವಿವಾಹವಾಗಿದ್ದರು. ಎರಡು ತಿಂಗಳ ಹಿಂದೆ ಮಂಗಳೂರಿಗೆ ಬಂದಿದ್ದರು. ಸೆಲೂನ್ ಸಿಬ್ಬಂದಿ ಗುರುತಿನ ಮೇರೆಗೆ ಬಾರೆದಡ್ಕ ನಿವಾಸಿ ಬಾಡಿಗೆ ಮನೆಯನ್ನು ದಂಪತಿಗೆ ನೀಡಿದ್ದರು. ಕೂಲಿ ಕೆಲಸ ನಡೆಸಿ ವಿಘ್ನೇಶ್ ಕುಟುಂಬ ನಿರ್ವಹಿಸುತ್ತಿದ್ದ. ಮಗಳ ಸಾವಿನ ಸುದ್ಧಿ ತಿಳಿದು ತಂದೆ ಮಡ ಅಳಗನ್ ಕೊಣಾಜೆಗೆ ಬಂದಿದ್ದು, ಪತಿ ವಿಘ್ನೇಶ್ ವಿರುದ್ದ ಸಂಶಯ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಲೋಕದಲ್ಲಿ ಯಾರೂ ಭಯೋತ್ಪಾದಕರಾಗಿ ಹುಟ್ಟಿಲ್ಲ. ಭಯೋತ್ಪಾದಕ ಎಂದರೆ ಏನು ಎಂಬುದನ್ನು ನೀವು ಅಂತರ್ಜಾಲದಲ್ಲಿ ಹುಡುಕಿದರೆ ಸಂಪೂರ್ಣ ಮಾಹಿತಿ ಲಭಿಸುತ್ತದೆ. ಇಸ್ಲಾಂ ಭಯೋತ್ಪಾದೆಯನ್ನು ಬಯಸುವುದಿಲ್ಲ. ಭಯೋತ್ಪಾದನೆಗೆ ಪ್ರೋತ್ಸಾಹ ಕೂಡಾ ನೀಡುತ್ತಿಲ್ಲ. ಆದರೆ ಕೆಲವರು ಇಸ್ಲಾಂ ಧರ್ಮದವರನ್ನು ಭಯೋತ್ಪಕರನ್ನಾಡಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಜರಾತ್ ಹಜ್ ಕಮಿಟಿಯ ಅಧ್ಯಕ್ಷ ಸೂಫಿ ಎಂ.ಕೆ. ಚಿಸ್ತಿ ಹೇಳಿದರು. ಅವರು ಉಳ್ಳಾಲದಲ್ಲಿ ನಡೆಯುತ್ತಿರುವ ಖುತುಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ರವರ 423ನೆಯ ವಾರ್ಷಿಕ ಹಾಗೂ 20ನೆಯ ಪಂಚವಾರ್ಷಿಕ ಉರೂಸ್ ಸಮಾರಂಭದ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ನ್ಯಾಷನಲ್ ಪೀಸ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಉಳ್ಳಾಲ ಖುತುಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದಲ್ಲಿ ಧರ್ಮದ ಜೋಡನೆಯ ಕಾರ್ಯ ನಡೆಯುತ್ತದೆಯೇ ಹೊರತು ವಿಭಜನೆಯ ಕಾರ್ಯ ನಡೆಯುತ್ತಿಲ್ಲ. ಲೋಕದಲ್ಲಿ ನಡೆಯುತ್ತಿರುವ ಕಾರ್ಯಗಳು, ಇನ್ನು ನಡೆಯಬೇಕಾದ ಕಾರ್ಯಗಳ ಬಗ್ಗೆ ಪ್ರವಾದಿಯವರು 1500ವರ್ಷಗಳ ಹಿಂದೆಯೇ ಬರೆದಿಟ್ಟಿದ್ದಾರೆ ಎಂದರು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದೇಶದ ವಿವಿಧ ಭಾಗದಲ್ಲಿರುವ ಎಲ್ಲ ದರ್ಗಾಗಳಲ್ಲಿಯೂ ಶಾಂತಿಯ ಸಂದೇಶವನ್ನು ಬಿತ್ತರಿಸಲಾಗುತ್ತದೆ. ಹಾಗಾಗಿ ದರ್ಗಾಕ್ಕೆ ಬರುವವರಲ್ಲಿ ಶೇ. 20ರಷ್ಟು ಜನರು ಬೇರೆ ಬೇರೆ ಧರ್ಮಕ್ಕೆ ಸೇರಿದ ಮುಸ್ಲಿಂಮೇತರ ಬಂಧುಗಳು. ಧಾರ್ಮಿಕ ನೇತಾರರು ನೀಡಿದ ಶಾಂತಿ ಸಾಮರಸ್ಯದ ಸಂದೇಶಗಳು ಚಿರಸ್ಥಾಯಿಯಾಗಿ ಉಳಿದಿರುವುದಿಂದ ಅಲ್ಲಿನ ಪವಾಡಗಳ ನಂಬಿಕೆಯಿಂದಲೇ ಜನರು ದರ್ಗಾಗಳಿಗೆ ಭೇಟಿಕೊಟ್ಟು ತಮ್ಮ ಸಮಸ್ಯೆ ಕಷ್ಟಕಾರ್ಪಣ್ಯ ನೀಗಿಸುವಂತೆ ಪ್ರಾರ್ಥಿಸುವುದನ್ನು ಕಾಣಬಹುದು ಎಂದು ಅಬು ಸುಫಿಯಾನ್ ಮದನಿ ಅಭಿಪ್ರಾಯಪಟ್ಟರು. ಅವರು ಉಳ್ಳಾಲದಲ್ಲಿ ನಡೆಯುತ್ತಿರುವ ಖುತುಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ರವರ 423ನೆಯ ವಾರ್ಷಿಕ ಹಾಗೂ 20ನೆಯ ಪಂಚವಾರ್ಷಿಕ ಉರೂಸ್ ಸಮಾರಂಭದ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ನ್ಯಾಷನಲ್ ಪೀಸ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಇಲ್ಲಿನ ಧಾರ್ಮಿಕ ಮುಖಂಡರಿಗೆ ಅಧಿಕಾರದ ಉದ್ದೇಶ ಇರಲಿಲ್ಲ. ವಿಶಾಲವಾದ ದೃಷ್ಟಿಯಿಂದ ಎಲ್ಲರನ್ನೂ ಪ್ರೀತಿಸುವ ಅದರ್ಶ ಇತ್ತು. ಆವರು ಬೋಧಿಸಿದಂತೆ ಧರ್ಮ ಎಂಬುದು ವೇಷಭೂಷಣ, ಮಠ ಮಂದಿರಗಳಿಗೆ ಸೀಮಿತವಾಗದೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಒಂಬತ್ತು ತಿಂಗಳ ಗರ್ಭಿಣಿ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಬಾರೆದಡ್ಕ ಎಂಬಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಪ್ರಿಯಾ ಆತ್ಮಹತ್ಯೆಗೈದ ನತದೃಷ್ಟೆ. ಅಂಬ್ಲಮೊಗರು ಗ್ರಾಮದ ಬಾರೆದಡ್ಕ ಬಳಿ ಕಳೆದ ಎರಡು ತಿಂಗಳಿನಿಂದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ತಮಿಳುನಾಡು ಮೂಲದ ಕೂಲಿ ಕಾರ್ಮಿಕ ವಿಘ್ನೇಶ್ ಎಂಬಾತನ ಪತ್ನಿ ಪ್ರಿಯಾ ಆತ್ಮಹತ್ಯೆಗೈದಿದ್ದು ತುಂಬು ಗರ್ಭಿಣಿಯಾಗಿರುವ ಆಕೆ ಇನ್ನು ಕೇವಲ 10ದಿವಸದಲ್ಲಿ ಹೆರುವ ಸಿದ್ಧತೆಯಲ್ಲಿದ್ದಳು. ಮಂಗಳವಾರ ರಾತ್ರಿ ಪ್ರಿಯಾ ತಾನಿರುವ ಬಾಡಿಗೆ ಮನೆಯಲ್ಲಿ ಪಕ್ಕಾಸಿಗೆ ಸೀರೆಯನ್ನು ಬಳಿಸಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದು , ಘಟನೆ ನಡೆದ ಸಂಧರ್ಭ ಗಂಡ ವಿಘ್ನೇಶನೂ ಮನೆಯಲ್ಲಿದ್ದು ಪತ್ನಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದನೇ ಎಂದು ಶಂಕಿಸಲಾಗಿದೆ. ಪ್ರಿಯಾ ಮತ್ತು ವಿಘ್ನೇಶ್ ತಮಿಳುನಾಡಿನ ಪೆರಿಯಲೂರಿನ ಅರಂದಾಗಿ ತಾಲೂಕು ಪುದುಕೋಟೆ ಎಂಬಲ್ಲಿನ ನಿವಾಸಿಗಳು. ಪ್ರೇಮ ವಿವಾಹವಾಗಿದ್ದ ಅವರು 2ತಿಂಗಳ ಹಿಂದೆಯಷ್ಟೆ ಮಂಗಳೂರಿಗೆ ಬಂದಿದ್ದು ಅಂಬ್ಲಮೊಗರುವಿನ ಸೆಲೂನ್…
ಸ್ಯಾಂಡಲ್ವುಡ್ನ ನಾಯಕ ನಟರು ಹಿನ್ನಲೆ ಗಾಯಕರಾಗಿರುವುದು ಹೊಸದೇನಲ್ಲ ಬಿಡಿ. ಇದು ಸದ್ಯಕ್ಕೆ ಗಾಂಧಿನಗರದಲ್ಲಿ ಹುಟ್ಟಿಕೊಂಡಿರುವ ಹೊಸ ಟ್ರೆಂಡ್. ಅಭಿನಯದ ಜೊತೆ ಜೊತೆಗೆ ಸಂಗೀತದಲ್ಲೂ ಆಸಕ್ತಿ ಇರುವ ಅನೇಕ ನಾಯಕ ನಟರು ಚಿತ್ರಗಳಲ್ಲಿ ಹಾಡುವ ಮೂಲಕ ಮನೆ ಮಾತಾಗಿದ್ದಾರೆ. ಇದೀಗ ಈ ಪಂಗಡಕ್ಕೆ `ಉಗ್ರಂ’ ಚಿತ್ರದ ನಟ ಶ್ರೀಮುರಳಿ ಕೂಡ ಸೇರ್ಪಡೆಗೊಂಡಿದ್ದಾರೆ. ಉಗ್ರಂ ಚಿತ್ರದ ಯಶಸ್ವಿನ ನಂತರ ಇದೀಗ `ರಥಾವರ’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿರುವ ಮುರಳಿ ತಮ್ಮದೆ ಚಿತ್ರಕ್ಕೆ ಹಾಡನ್ನು ಹಾಡಲು ಮುಂದಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ, ಯೋಗರಾಜ್ ಭಟ್ ಬರೆದಿರುವ ಹಾಡಿಗೆ ದನಿಯಾಗಲಿದ್ದಾರೆ. ಸಂಗೀತದ ಬಗ್ಗೆ ಹಿಂದಿನಿಂದಲೂ ಆಸಕ್ತಿ ಇದ್ದ ಮುರಳಿಗೆ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಸಂಗೀತದಲ್ಲೂ ಕೂಡ ಸೈ ಎಂಬುವುದನ್ನು ನಿರೂಪಿಸಲಿದ್ದಾರೆ. ಮುರಳಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ `ಬುಲ್ ಬುಲ್’ ಖ್ಯಾತಿಯ ರಚಿತಾ ರಾಮ್ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದು, `ಆನೆಪಟಾಕಿ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಆಕ್ಷನ್ ಕಟ್ ಹೇಳಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ಸೈ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: 1968ರಲ್ಲಿ ಆಕಾಶವಾಣಿಗೆ ತುರ್ತಾಗಿ ಬರೆದ ನಿತ್ಯೋತ್ಸವ ಕವನಕ್ಕೆ ಅನಂತಸ್ವಾಮಿ ರೆಕ್ಕೆ ಪುಕ್ಕ ಕಟ್ಟಿ ತನಗೆ ಕೀರ್ತಿ ತಂದರು. ತಾನು ಬರೆದ ಹಲವು ಕವನಗಳಿಗೆ ಅವರು ಜೀವ ತುಂಬಿದರು. ಆ ಕಾರಣದಿಂದ ನಿತ್ಯೋತ್ಸವದಿಂದ ತನಗೆ ಬಂದ ಕೀರ್ತಿಯಲ್ಲಿ ಶೇ.50 ಅನಂತಸ್ವಾಮಿಗೆ ಸಲ್ಲುತ್ತದೆ. ಇಂದು ನಿತ್ಯೋತ್ಸವ ಎಲ್ಲರ ಮನದಲ್ಲೂ ನೆಲೆ ನಿಂತಿದೆ. ಸಾಹಿತ್ಯಾಭಿಮಾನಿಗಳು ತಾವು ಕಟ್ಟಿಸಿದ ಭವನಗಳಿಗೆ ಇದೇ ಹೆಸರು ಇಟ್ಟಿದ್ದಾರೆ. ಮಂಗಳೂರು ವಿವಿಯಲ್ಲಿ ಆರಂಭಗೊಂಡ ನಿತ್ಯೋತ್ಸವ ಕಾರ್ಯಕ್ರಮದ ಮೂಲಕ ಕನ್ನಡ ನಾಡು ನುಡಿಯನ್ನು ಬೆಳೆಸುವ ಕೆಲಸ ಆಗಬೇಕಿದೆ ಎಂದು ನಾಡೋಜ ಕವಿ ಡಾ.ಕೆ.ಎಸ್.ನಿಸಾರ್ ಅಹಮ್ಮದ್ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಮಂಗಳಗಂಗೋತ್ರಿ ಮಂಗಳಾ ಸಭಾಂಗಣದಲ್ಲಿ ಕನ್ನಡ ನಾಡು, ನುಡಿ, ಚಿಂತನೆಯ ಕಾರ್ಯಕ್ರಮ `ನಿತ್ಯೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ಎಸ್.ವಿ. ಪರಮೇಶ್ವರ ಭಟ್ಟ ಅವರು ಕಷ್ಟ ಕಾಲದಲ್ಲೂ ಕನ್ನಡ ಸಂಸ್ಥೆಯನ್ನು ಕಟ್ಟಿ ಕನ್ನಡದ ಸರ್ವತೋಮುಖ ಅಭಿವೃದ್ಧಿಗಾಗಿ ಬಹಳಷ್ಟು ಪರಿಶ್ರಮವನ್ನು ವಹಿಸಿದವರು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೈನಂದಿನ ಜೀವನದಲ್ಲಿ ಸೇವಿಸುವ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡುವ ಕಾರ್ಯ ಆಗಬೇಕಿದ್ದು, ವೈದ್ಯರು ಈ ನಿಟ್ಟಿನಲ್ಲಿ ಮಾಹಿತಿ ನೀಡುವ ಕಾರ್ಯವನ್ನು ಮಾಡಬೇಕು ಎಂದು ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಆನಂದ ಸಲ್ದಾನ ಅಭಿಪ್ರಾಯಪಟ್ಟರು. ಅವರು ವಿಶ್ವ ಆರೋಗ್ಯ ದಿನದ ಅಂಗವಾಗಿ ದೇರಳಕಟ್ಟೆಯ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಅಕಾಡೆಮಿಕ್ ಬ್ಲಾಕ್ನ ಲೆಕ್ಚರರ್ ಹಾಲ್ನಲ್ಲಿ ನಡೆದ ‘ಆಹಾರ ಸುರಕ್ಷತೆ’ ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಆರೋಗ್ಯಯುತ ಜೀವನಕ್ಕೆ ನಾವು ಬಳಸುವ ಆಹಾರ ಅತೀ ಪ್ರಾಮುಖ್ಯತೆಯನ್ನು ಪಡೆದಿದೆ. ನಾವು ಕೊಂಡುಕೊಳ್ಳುವ ಆಹಾರದ ಗುಣಮಟ್ಟದ ಕುರಿತು ಅರಿವು ಮುಖ್ಯ. ನಾವು ಸೇವಿಸುವ ಆಹಾರ ಎಷ್ಟು ಸುರಕ್ಷಿತ ಎನ್ನುವ ವಿಚಾರದಲ್ಲಿ ಜನರಿಗೆ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದರು. ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಣಚೂರು ಇನ್ಸ್ಟಿಟ್ಯೂಟ್ ಆಫ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶಿಕ್ಷಣ, ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾ ಅಭಿವೃದ್ಧಿಗೆ ಕೇಂದ್ರ ಸರಕಾರ ಸದಾ ಬದ್ಧ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ೪೦೨, ಉಳ್ಳಾಲ ಬಹುಮಾನ್ಯರಾದ ಖುತ್ಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ) ತಂ ..ಳ್ರವರ ೪೨೩ನೆಯ ವಾರ್ಷಿಕ ಹಾಗೂ ೨೦ನೇ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಸೋಮವಾರ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥಿಸಿ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು. ಪ್ರತಿಯೊಂದು ಕ್ಷೇತ್ರಗಳಲ್ಲಿ ಎಲ್ಲಾ ವರ್ಗದವರ ಬಾಳಿಗೆ ಸೈಯ್ಯದ್ ಮದನಿ ದರ್ಗಾ ಬೆಳಕಾಗುತ್ತಿರುವುದು ಶ್ಲಾಘನೀಯ. ಇಂತಹ ಕ್ಷೇತ್ರದ ಭೇಟಿ ಜೀವನದ ಮಹತ್ವದ ದಿನಗಳಲ್ಲಿ ಒಂದಾಗಿದ್ದು, ದರ್ಗಾ ಮುಹಮ್ಮದ್ ಶರೀಫುಲ್ ಅವರ ಜೀವನದ ಮೌಲ್ಯಗಳು ಮತ್ತು ಕುರ್ಆನ್ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾತ್ಮನ ಕುರಿತು ಕೇಳಿದ್ದೇನೆ.…

