Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಕ್ರೇನ್ ಮೂಲಕ ಕಡಿದ ಮರವೊಂದು ವಿದ್ಯುತ್ ಕಂಬಕ್ಕೆ ಉರುಳಿದ ಪರಿಣಾಮ ಹೈಟೆನ್ಶನ್ ತಂತಿ ರಸ್ತೆಯಲ್ಲೇ ಬಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅನಾಹುತ ತಪ್ಪಿದ ಘಟನೆ ತೊಕ್ಕೊಟ್ಟು ಸಮೀಪ ಬುಧವಾರ ಸಂಜೆ ವೇಳೆ ನಡೆದಿದೆ. ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಮತ್ತು ಅಗಲೀಕರಣ ಕಾಮಗಾರಿ ತ್ವರಿತ ಗತಿಯಿಂದ ಸಾಗುತ್ತಿದ್ದು, ತೆರವು ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆ ಎದುರುಗಡೆಯಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ನೂತನ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿತ್ತು. ಸಂಜೆ ವೇಳೆ ಅಲ್ಲೇ ಇದ್ದ ಬೃಹತ್ ಗಾತ್ರದ ಮರವೊಂದನ್ನು ಕ್ರೇನ್ ಮೂಲಕ ತೆಗೆಯುತ್ತಿದ್ದಂತೆ ಆಕಸ್ಮಿಕವಾಗಿ ಮರಕ್ಕೆ ಕಟ್ಟಲಾಗಿದ್ದ ಹಗ್ಗ ತುಂಡಾಗಿ ನೂತನ ವಿದ್ಯುತ್ ಕಂಬದ ಮೇಲೆ ಉರುಳಿತ್ತು. ಪರಿಣಾಮ ಕಂಬ ತುಂಡಾಗಿ ತಂತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡವಾಗಿ ಬಿದ್ದಿತು. ಈ ವೇಳೆ ಕೇರಳ ಕಡೆಯಿಂದ ಟೂರಿಸ್ಟ್ ಬಸ್ಸೊಂದು ತಂತಿಯ ಮೇಲೆಯೇ ಚಲಿಸಿದಾಗ ಎರಡು ತಂತಿಗಳು ತಾಗಿ…

Read More

ಉಳ್ಳಾಲ್  ನ್ಯೂಸ್ ನೆಟ್ ವರ್ಕ್ ಕೊಣಾಜೆ: ಉತ್ತಮ ಮನಸ್ಸು, ಆರೋಗ್ಯ, ಸಮಾಜದ ಆರೋಗ್ಯದ ಜತೆಗೆ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಯೋಗ ಶಿಕ್ಷಣ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಎಲ್ಲರೂ ಅದನ್ನು ದುರ್ಬಳಕೆ ಮಾಡದೆ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಅಭಿಪ್ರಾಯ ಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ,ಯೋಗ ವಿಜ್ಞಾನ ವಿಭಾಗ ಮತ್ತು ಧರ್ಮನಿಧಿ ಯೋಗಪೀಠದ ಆಶ್ರಯದಲ್ಲಿ ದಕ್ಷಿಣ ಕೊರಿಯಾದ ವಾಂಕ್ವಾಂಗ್ ಡಿಜಿಟಲ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿರುವ ನಾಲ್ಕು ದಿನಗಳ `ಯೋಗ ಥೆರಫಿ’ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಪುರಾತನ ಕಾಲದಿಂದಲೇ ಭಾರತದಲ್ಲಿರುವ ಯೋಗ ವಿದ್ಯೆ ಇಂದು ಜಗತ್ತಿನಾದ್ಯಂತ ಪ್ರಸಿದ್ದಿಯಾಗಿದ್ದು ಯೋಗದ ಮಹತ್ವನ್ನು ಎಲ್ಲರೂ ಅರಿತುಕೊಂಡಿದ್ದಾರೆ. 5,000 ವರ್ಷಗಳ ಹಿಂದೆ ಯೋಗವನ್ನು ದೇಶದಲ್ಲಿ ಪ್ರತಿಯೊಬ್ಬರೂ ಮೈಗೂಡಿಸಿಕೊಂಡಿದ್ದರು. ಆ ಬಳಿಕ ಕ್ರಮೇಣ ಜನ ಮರೆತಿದ್ದು, ಇತ್ತೀಚೆಗೆ ಪ್ರಧಾನಿಯವರು ಅಂತಾರಾಷ್ಟ್ರೀಯ ಮನ್ನಣೆಯನ್ನು ನೀಡುವ ಮೂಲಕ ಅಲ್ಲದೆ ಯೋಗ ವಿಜ್ಞಾನ ಇವತ್ತು ಪ್ರಸಿದ್ದಿ ಪಡೆಯುವುದರೊಂದಿಗೆ ಹಲವಾರು ಉದ್ಯೋಗಾವಕಾಶಗಳು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಬರಹಗಾರನೊಬ್ಬ ಸ್ವಲ್ಪ ಪ್ರಸಿದ್ಧಿಗೆ ಬಂದೊಡನೆ ಬರೆಯುವುದಷ್ಟೇ ತನ್ನ ಕೆಲಸ, ಮಿಕ್ಕದ್ದೆಲ್ಲವೂ ಬೇರೆಯವರ ಕೆಲಸ ಎಂಬ ಭಾವನೆಯಲ್ಲಿ ಬದುಕುತ್ತಿದ್ದು ಅಂತಹ ಮನೋಭಾವನೆ ಎಲ್ಲರ ಮನದಿಂದ ದೂರವಾಗಬೇಕು ಎಂದು ದೇಸಿ ಚಿಂತಕರು ಮತ್ತು ಸುಸ್ಥಿರ ಜೀವನ ಪ್ರತಿಪಾದಕರು ಹಾಗೂ ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರ ಮತ್ತು ನಿಟ್ಟೆ ವಿಶ್ವವಿದ್ಯಾಲಯ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಸೋಮವಾರ ನಡೆದ `ಕನಕ ತತ್ವ ಚಿಂತನ’ ಪ್ರಚಾರೋಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ `ಬ್ರೆಡ್ ಲೇಬರ್’ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಮನುಷ್ಯ ತನ್ನ ಕೆಲಸ, ಜಾತಿಗೆ ಅಂಟಿಕೊಂಡಿದ್ದು ಇತರ ಜಾತಿ ಕೆಲಸಗಳನ್ನು ಹಗುರವಾಗಿ ಕಾಣುತ್ತಿದ್ದಾನೆ. ಅದು ಎಲ್ಲರಿಂದ ದೂರ ಸರಿಯಬೇಕು. ಸಮಾಜಕ್ಕೆ ಎಲ್ಲರೂ ಒಳ್ಳೆಯ ಕಾರ್ಯಗಳನ್ನೇ ಮಾಡುತ್ತೇವೆ. ಆದರೆ ಕೆಲವರು ಬುದ್ಧಿ ಕೆಲವರು e್ಞÁನದ ಮೂಲಕ ಕೆಲಸ ಮಾಡುತ್ತಾರೆ ಎಂದು ನಾವು ಅಂದುಕೊಂಡಿದ್ದೇವೆ. ಮನುಷ್ಯ ದೈಹಿಕ ಕೆಲಸವನ್ನು ಮಾಡುತ್ತಾ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ತಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಪಟ್ಟೋರಿ ಎಂಬಲ್ಲಿ ಸೋಮವಾರ ಬಂಧಿಸಿದ್ದಾರೆ. ಮೂಡಬಿದಿರೆ ಅಲಾಂಗರು ನಿವಾಸಿ ರೋಶನ್ ನಿಕೇಶ್ ಮಿನೆಜಸ್(24), ಪಟ್ಟೋರಿ ಮನೆ ನಿವಾಸಿ ಸಿಂಪಲ್ ಕುಮಾರ್ ಹಾಗೂ ಚಿಕ್ಕಮಗಳೂರು ಕೊಪ್ಪದ ಪ್ರಕಾಶ್ ಡಿ’ಸೋಜ ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಬಂಧಿತರಿಂದ ಒಂದು ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮನೆಯಲ್ಲಿ ಗಾಂಜಾವನ್ನು ದಾಸ್ತನಿರಿಸಿದ ಮಾಹಿತಿ ಪಡೆದ ಕೊಣಾಜೆ ಪೊಲೀಸರು ಸಿಂಪಲ್ ಕುಮಾರನ ಮನೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ರಾತ್ರಿಯಿಂದ ಬೆಳಿಗ್ಗಿನವರೆಗೂ ನಡೆದ ನಾಗಮಂಡಲೋತ್ಸವವನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ವೀಕ್ಷಿಸಿ ಎಲ್ಲರ ಗಮನ ಸೆಳೆದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ಸಂಬಂಧಗಳನ್ನು ರೂಪಿಸುವುದು ದೈವ ಶಕ್ತಿ, ಇಂತಹ ಶಕ್ತಿಯನ್ನು ಉಳಿಸಿ ಬೆಳೆಸುವ ಕಾರ್ಯ ಶ್ಲಾಘನೀಯ ಎಂದು ಆರ್ಟ್ ಆಫ್ ಲಿವಿಂಗ್‍ನ ಸಂಸ್ಥಾಪಕ ಹಾಗೂ ಆಧ್ಯಾತ್ಮ ನಾಯಕ ಶ್ರೀ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು. ಅವರು ಸೋಮೇಶ್ವರ ಕೊಲ್ಯದ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಐದನೇ ದಿನ ಶನಿವಾರದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ದೇವ ದೇವತೆಗಳಲ್ಲಿ ನಾಗನ ವೈಶಿಷ್ಟ್ಯ ಇದೆ. ಹಿಂದೂಗಳು ಮಾತ್ರವಲ್ಲ ಜೈನರು, ಬುದ್ಧರು ಎಲ್ಲರೂ ನಾಗದೇವರ ಆರಾಧಕರು. ಜಾಗೃತ ಚೈತನ್ಯ ಶಕ್ತಿ ನಾಗದೇವರಲ್ಲಿ ಮಾತ್ರ ಇದೆ. ಶ್ರದ್ಧೆ , ಭಕ್ತಿಯಿಲ್ಲದಿದ್ದಲ್ಲಿ ಅರ್ಥವಿಲ್ಲದ ಜೀವನ ಆಗುವುದು. ವೈವಿಧ್ಯತೆಗಳನ್ನು ಉಳಿಸುವುದು ಎಲ್ಲರ ಆದ್ಯ ಕರ್ತವ್ಯ . ಈ ನಿಟ್ಟಿನಲ್ಲಿ ಕೊಲ್ಯದ ಕ್ಷೇತ್ರದಲ್ಲಿ ನಡೆದ ನಾಗಮಂಡಲೋತ್ಸವದಿಂದ ನಾಗನ ಆರಾಧನೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದಂತಾಗಿದೆ ಎಂದರು. ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಸ್ವಾಮೀಜಿ ಶ್ರೀ ವಿದ್ಯಾಪ್ರಸನ್ನ ತೀರ್ಥ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಜೀರು ಚರ್ಚ್‍ನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಹರೇಕಳ ಗ್ರಾಮದ ರಾಜಗುಡ್ಡೆಯ ಸಾಹುಲ್ ಹಮೀದ್ ಎಂದು ಗುರುತಿಸಲಾಗಿದೆ. ಪಜೀರುವಿನಲ್ಲಿರುವ ಚರ್ಚ್‍ಗೆ ನುಗ್ಗಿದ್ದ ಕಳ್ಳರ ತಂಡ ಚರ್ಚ್‍ನ ಪರಮ ಪ್ರಸಾದ, ಪಾತ್ರಗಳು ಸೇರಿದಂತೆ ಲ್ಯಾಪ್‍ಟಾಪ್‍ಗಳನ್ನು ಕಳವು ಗೈದು ಪರಾರಿಯಾಗಿತ್ತು. ಕಳ್ಳತನದ ದೃಶ್ಯ ಸಿಸಿ ಕ್ಯಾ,ಮರಾದಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ಕಳ್ಳತನದ ಆರೋಪಿಗಳನ್ನು ಬಂಧಿಸಿ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಪ್ರಕರಣದ ಪ್ರಮುಖ ಆರೋಪಿ ಸಾಹುಲ್ ಹಮೀದ್ ತಲೆಮರೆಸಿಕೊಂಡಿದ್ದ. ಅಲ್ಲದೆ ಈತ ದೇರಳಕಟ್ಟೆ ಮೊಬೈಲ್ ಅಂಗಡಿ ಹಾಗೂ ಫ್ಯಾನ್ಸಿ ಅಂಗಡಿಗಳಿಗೂ ನುಗ್ಗಿ ಕಳ್ಳತನ ನಡೆಸಿದ್ದ. ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಈತನನ್ನು ಗುರುವಾರ ಕೊಣಾಜೆ ಪೊಲೀಸ್ ಇನ್‍ಸ್ಪೆಕ್ಟರ್ ಅಶೋಕ್, ಪಿಎಸ್‍ಐ ಸುಧಾಕರ್. ಸಿಬ್ಬಂದಿಗಳಾದ ಸಂತೋಷ್ ಸಿ.ಜೆ, ಶಿವಪ್ರಸಾದ್, ಚಂದ್ರಶೇಖರ್,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಲ್ಯ: ನಾಗಮಂಡಲೋತ್ಸವಗಳು ವ್ಯವಹಾರಿಕ ನೆಲೆಯಲ್ಲೇ ಮುಂದುವರಿಯಲಿದ್ದು ಈ ಬಗ್ಗೆ ಜಾಗೃತಿ ಅನಿವಾರ್ಯ ಎಂದು ಬಾರಕೂರು ಭಾರ್ಗವಬೀಡು ಮಹಾಸಂಸ್ಥಾನಂನ ಶ್ರೀ ಶ್ರೀ ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತೀ ಶ್ರೀ ಪಾದಂಗಳವರು ಎಚ್ಚರಿಸಿದರು. ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಮೂರನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮುಂಬಯಿಯಲ್ಲಿ ನೆಲೆಸಿರುವವರಲ್ಲಿ ಸಾಕಷ್ಟು ಹಣ ಇದೆ ಎನ್ನುವ ನೆಲೆಯಲ್ಲಿ ನಾಗಮಂಡಲೋತ್ಸವ ನಡೆಸಬೇಕಾದರೆ ಮುಂಬಾಯಿಯ ಹಣವೇ ಆಗಬೇಕು ಎನ್ನುವ ಭಾವನೆ ಇತ್ತೀಚಿನ ದಿನಗಳಲ್ಲಿ ಬೇರೂರಿದೆ. ಒಂದೇ ಕುಟುಂಬ ಎರಡು ಕೋಟಿ ಖರ್ಚು ಮಾಡಿ ಆಡಂಭರದ ನಾಗಮಂಡಲೋತ್ಸವ ಮಾಡಿ ಆರ್ಥಿಕ ನಷ್ಟ ಅನುಭವಿಸಿ ವರ್ಷದಲ್ಲೇ ಕೋರ್ಟಿಗೆ ಅಲೆದಾಡುತ್ತಿರುವುದನ್ನು ಕಾಣಬಹುದಾಗಿದೆ. ಕುಟುಂಬದಲ್ಲಿ ತೊಂದರೆ ಬಂದಾಗ ಒಳ್ಳೆಯ ಜ್ಯೋತಿಷ್ಯರಲ್ಲಿ ಸಲಹೆ ಪಡೆಯದೆ ಸಿಕ್ಕ ಸಿಕ್ಕವರಲ್ಲಿ ಸಲಹೆ ಕೇಳಲು ಹೋದರೆ ಆತ ಸಂಪತ್ತಿನ ಲೆಕ್ಕಾಚಾರ ಹಾಕಿ ಇಂತಹ ಸಲಹೆ ನೀಡುತ್ತಾನೆ. ಇದಕ್ಕೆ ಹೊಟೇಲ್, ಕೈಗಾರಿಕೋದ್ಯಮಿಗಳು ಬಲಿಯಾಗುತ್ತಿದ್ದು ಹೀಗೇ ಮುಂದುವರಿದರೆ ಎಂದು ತಿಳಿಸಿದರು.…

Read More

ಕನೋ: ನೈಜೀರಿಯಾದ ಈಶಾನ್ಯ ಭಾಗದಲ್ಲಿ ಬುಧವಾರ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 13 ಮಂದಿ ದುರ್ಮರಣ ಹೊಂದಿರುವ ಘಟನೆ ನಡೆಸಿದೆ. ನೈಜೀರಿಯಾದ ಈಶಾನ್ಯ ರಾಜ್ಯ ಚಿಬೋಕ್ ನಲ್ಲಿರುವ ಮಾರುಕಟ್ಟೆಗೆ ಪ್ರವೇಶಿದ್ದ ಐವರು ಉಗ್ರರು ಪೈಕಿ ಮೂವರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರ್ಯಾಚರಣೆ ನಡೆಸಿ 28ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ : ಕೇಂದ್ರ ಸರಕಾರದಿಂದ ಬೀಡಿ ಕಾರ್ಮಿಕರಿಗೆ ಆಪತ್ತು ಬಂದಿದೆ. ಕೂಡಲೇ ಅವರಿಗೆ ಪರ್ಯಾಯ ಕೆಲಸ ಒದಗಿಸದೇ ಇದ್ದಲ್ಲಿ 3,000 ಕೋಟಿ ಮಂದಿ ಬೀದಿಗೆ ಬೀಳಲಿದ್ದಾರೆ ಎಂದು ಬೀಡಿ ಫೆಡರೇಶನ್ನಿನ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಸಿಐಟಿಯು ವತಿಯಿಂದ ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ಆಶ್ರಯದಲ್ಲಿ ಬೀಡಿ ಕೈಗಾರಿಕೆ ಮುಚ್ಚಲ್ಪಟ್ಟರೆ ಬದಲಿ ಪರಿಹಾರ ಒದಗಿಸಿರಿ ಕುರಿತು ಸೋಮೇಶ್ವರ ಗ್ರಾಮ ಪಂಚಾಯತ್‍ನಲ್ಲಿ ನಡೆಸಿದ ಸರಕಾರದ ಸ್ಥಳೀಯ ಸಂಸ್ಥೆಗಳಲ್ಲಿ ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 2003ರಿಂದ ದೇಶದಲ್ಲಿ ತಂಬಾಕು ಉತ್ಪನ್ನಗಳ ನಿಷೇಧ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಇದರಿಂದ ಕಾರ್ಮಿಕರು ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಕಾರ್ಮಿಕರ ಜೀವನವನ್ನು ಆಪತ್ತಿನಲ್ಲಿ ತಂದಿಟ್ಟಿದೆ. ರಾಜ್ಯದ ಅತಿದೊಡ್ಡ ಪಂಚಾಯಿತಿ ಅನಿಸಿಕೊಂಡಿರುವ ಸೋಮೇಶ್ವರ ಪಂ. ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಮಿಕರಿದ್ದಾರೆ. ಅವರ ಗಣತಿಯನ್ನು ನಡೆಸಿ ಪಂಚಾಯಿತಿ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಬೇಕಿದೆ.…

Read More