Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಭೌತಿಕವಾಗಿ, ಲೌಖಿಕವಾಗಿ ನಾವು ಬೆಳೆದು ಸಂಸ್ಕಾರವಂತರಾಗಬೇಕಾದರೆ ಭಜನೆ ಮುಖ್ಯ ಸಾಧನ. ಭಜನೆ ಮಾಡುವುದರಿಂದ ನಾವು ಭಕ್ತಿಯಿಂದ ಭಗವಂತನಲ್ಲಿ ಶರಣಾಗಿ ದೇವರ ದಾಸರಾಗಲು ಒಂದು ಅವಕಾಶ. ಸುಖೀ ಸಮಾಜದ ನಿರ್ಮಾಣದಲ್ಲಿ ಭಜನಾ ಮಂಡಲಿಗಳ ವಿಶೇಷ ಪಾತ್ರವಿದ್ದು ಇದು ನಮ್ಮ ಸಂಸ್ಕ್ರತಿಯನ್ನು ಎತ್ತಿ ತೋರಿಸುತ್ತದೆ ಎಂದು ದ.ಕ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷೆ ಶ್ರೀಮತಿ ಆಶಾ ತಿಮ್ಮಪ್ಪ ಅಭಿಪ್ರಾಯಪಟ್ಟರು. ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಪ್ರತಿಷ್ಟಾ ಮಹೋತ್ಸವ, ಏಕಾಹ ಭಜನೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಘಾಟನೆಯನ್ನು ಉದ್ಯಮಿ ಪ್ರವೀಣ್ ಸುವರ್ಣ ಬಗಂಬಿಲ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಯೇನಪೋಯ ವಿಶ್ವವಿದ್ಯಾಲಯದ ಪ್ರಾಂಶುಪಾಲ ಡಾ. ಸಿ.ಎಚ್. ಮಂಜುನಾಥ್, ಬಜಾಜ್ ಅಲೈನ್ಸ್‍ನ ಪದ್ಮನಾಭ ಸುವರ್ಣ, ಕಿಟೆಲ್ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ವಿಠಲ್.ಎ, ತುಳು ಚಲಚನಚಿತ್ರ ನಟ ಸುರೇಂದ್ರ ಬಂಟ್ವಾಳ, ಮಂದಿರದ ಮಹಾಪೋಷಕ ಕೇಶವದಾಸ್ ಬಗಂಬಿಲ, ಮಹಿಳಾ ಅಧ್ಯಕ್ಷೆ ವಸಂತಿ ಜನಾರ್ಧನ್, ಉಪಸ್ಥಿತರಿದ್ದರು. ಈ ಸಂದರ್ಬದಲ್ಲಿ ತಿರುಮಲೇಶ್ವರ ಭಟ್ (ವೈಧಿಕ), ಶಿಲ್ಪಶ್ರೀ…

Read More

ಉಳ್ಳಾಲ್‌ನ್ಯೂಸ್ ನೆಟ್‌ವರ್ಕ್ ಸೋಮೇಶ್ವರ: ಸರಣಿ ಕಳವಿಗೆ ಯತ್ನಿಸಿದ ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಸಹಿತ ನಗದು ಕಳವುಗೈದಿರುವ ಘಟನೆ ಕೊಲ್ಯ ಸಮೀಪ ಮಂಗಳವಾರ ತಡರಾತ್ರಿ ವೇಳೆ ನಡೆದಿದೆ. ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಹಿಂಭಾಗದಲ್ಲಿರುವ ಸರಸ್ವತಿ ಎಂಬವರಿಗೆ ಸೇರಿದ ಮನೆಗೆ ನುಗ್ಗಿದ ಕಳ್ಳರು ಎರಡು ಲಕ್ಷ ನಗದು ಮತ್ತು 45 ಪವನ್ ಚಿನ್ನಾಭರಣ ದೋಚಿದ್ದಾರೆ. ಮನೆಮಂದಿ ಮಲಗಿದ್ದ ಸಂದರ್ಭ ಹಿಂಬಾಗಿಲಿನ ಮೂಲಕ ನುಗ್ಗಿರುವ ಕಳ್ಳರು ಕಪಾಟಿನಲ್ಲಿರಿಸಿದ್ದ ಸೊತ್ತುಗಳನ್ನು ಕಳವು ನಡೆಸಿದ್ದಾರೆ. ಪತ್ರಕರ್ತ ಜಯಂತ್ ಉಳ್ಳಾಲ್ ಅವರ ಪತ್ನಿ ಸುನೀತಾ ಸಹಿತ ಅವರ ತಾಯಿ ಸರಸ್ವತಿ ಮತ್ತು ಮಕ್ಕಳು ಮನೆಯಲ್ಲಿದ್ದರು. ನೂತನ ಮನೆಯನ್ನು ನಿರ್ಮಿಸುತ್ತಿರುವ ಜಯಂತ್ ಉಳ್ಳಾಲ್ ಅವರು ಮನೆ ನಿರ್ಮಾಣಕ್ಕೆಂದು ಕರ್ಣಾಟಕ ಬ್ಯಾಂಕಿನಿಂದ ಪಡೆದ ಸಾಲದ ಹಣದಿಂದ ತಾವು ಅಡವಿರಿಸಿದ್ದ ಚಿನ್ನವನ್ನು ಬಿಡಿಸಿ ಪತ್ನಿ ಮನೆಗೆ ತಂದಿದ್ದರು. ಅಲ್ಲಿ ಅವರ ಮಗುವಿನ ನಾಮಕರಣ ಸಮಾರಂಭಕ್ಕಾಗಿ ಅಡವಿರಿಸಿದ ಚಿನ್ನವನ್ನು ಬಿಡಿಸಿ, ಉಳಿದ ರೂ.2 ಲಕ್ಷ ಹಣವನ್ನು ಕಪಾಟಿನಲ್ಲಿರಿಸಿದ್ದರು. ಸ್ಥಳಕ್ಕೆ ಎಸಿಪಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ವಿವಿಧ ಇಲಾಖೆಗಳ ಅಧಿಕಾರಿಗಳು ಕರ್ತವ್ಯಗಳನ್ನು ದುರುಪಯೋಗಪಡಿಸದೇ ಇದ್ದಲ್ಲಿ ಜನರಿಗೆ ಯಾವುದೇ ಅನ್ಯಾಯವಾಗದು ಎಂದು ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಮತ್ತು ಸುನ್ನೀ ಜಮಾಅತಿನ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ಹೇಳಿದ್ದಾರೆ. ಎಸ್ ವೈಎಸ್ ಫಲಾಹ್ ಮದನಿನಗರ ಇದರ ವತಿಯಿಂದ ಪ್ರವಾದಿ ನಿಂದನೆ, ತೊಕ್ಕೊಟ್ಟು ಮಂಗಳೂರು ಒನ್ ಶಾಲೆ ವಿದ್ಯಾರ್ಥಿನಿ ಅತ್ಯಾಚಾರ ಯತ್ನ, ಮಸೀದಿ ಮತ್ತು ಚರ್ಚ್‍ಗಳ ಮೇಲೆ ದಾಳಿ, ಮಸೀದಿ ವಿರುದ್ಧ ಸುಬ್ರಹ್ಮಣ್ಯ ಸ್ವಾಮಿಯಿಂದ ಅಜ್ಞಾನಿ ಹೇಳಿಕೆ ವಿರುದ್ಧ ಕುತ್ತಾರು ಜಂಕ್ಷನ್ನಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಧಿಕಾರಿಗಳು ಶಾಯಿಯನ್ನು ದುರುಪಯೋಗಪಡಿಸಿ ಜನರಿಗೆ ಅನ್ಯಾಯವೆಸಗಿದಲ್ಲಿ, ಮುಂದೆ ಅದು ಅವರಿಗೆ ಮುಳುವಾಗುವುದರಲ್ಲಿ ಸಂಶಯವಿಲ್ಲ. ದೇಶದ ಕೋಟ್ಯಂತರ ಜನರು ನಂಬುವ ಪ್ರವಾದಿಗೆ ನಿಂದನೆ, ಶ್ರೀ ರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರು ಅಜ್ಞಾನಿಗಳು. ಅಂತಹವರ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಿದೆ. ಅನ್ಯಾಯ ಎದುರಾದಾಗ ಎಲ್ಲರೂ ಎಚ್ಚೆತ್ತು ಹೋರಾಟ ನಡೆಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಎಚ್ಚೆತ್ತುಕೊಂಡಲ್ಲಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಖುತುಬುಝ್ಜಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ.)ತಂಙಳ್‍ರವರ 423ನೇ ವಾರ್ಷಿಕ ಮತ್ತು 20ನೇ ಪಂಚವಾರ್ಷಿಕ ಉರೂಸ್ ನೇರ್ಚೆ ಕಾರ್ಯಕ್ರಮ ಎ. 2ರಿಂದ 26ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಉಳ್ಳಾಲ ದರ್ಗಾ ವಠಾರದಲ್ಲಿರುವ ತಾಜುಲ್ ಉಲಮಾ ವೇದಿಕೆಯಲ್ಲಿ ಜರಗಲಿದೆ ಎಂದು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಹೇಳಿದರು. ಮಂಗಳವಾರ ದರ್ಗಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎ. 2ರಂದು ಗುರುವಾರ ಬೆಳಿಗ್ಗೆ 11ಗಂಟೆಗೆ ನವೀಕೃತ ಮಸೀದಿ ಉದ್ಘಾಟನೆಯು ಉಳ್ಳಾಲ ಖಾಝಿ ಅಸ್ಸಯ್ಯದ್ ಪಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ನಡೆಯಲಿರುವ ದರ್ಗಾ ಝಿಯಾರತ್, ತಾಜುಲ್ ಉಲಮಾ ಅನುಸ್ಮರಣೆ, ತಹ್ಲೀಲ್ ಮತ್ತು ಖತಮುಲ್ ಕುರ್‍ಆನ್ ಸಮರ್ಪಣೆ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮದಲ್ಲಿ ಸೆಯ್ಯಿದ್ ಆಟಕೋಯ ತಂಙಳ್ ದುವಾ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ ಏಳು ಗಂಟೆಗೆ ಉರೂಸ್ ಕಾರ್ಯಕ್ರಮದ ಉದ್ಘಾಟನೆ ಮತ್ತು ತಾಜುಲ್ ಉಲಮಾ ಪ್ರಶಸ್ತಿ ಪ್ರದಾನ ಸಮಾರಂಭ ಉಳ್ಳಾಲ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ : ಆಕ್ಟಿವಾ ಸ್ಕೂಟರ್ ಅಪಘಾತಕ್ಕೀಡಾಗಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ಕೊಣಾಜೆ ಠಾಣಾ ವ್ಯಾಪ್ತಿಯ ಮೊಂಟೆಪದವು ಬಳಿ ಸಂಭವಿಸಿದೆ. ಮೊಂಟೆಪದವು ನಿವಾಸಿಗಳಾದ ತಮೀಮ್ (14) ಮತ್ತು ಝಾಕೀರ್ (14 ) ಮೃತ ದುರ್ದೈವಿಗಳು. ಮೃತ ಇಬ್ಬರು ಅಲ್- ಮದೀನಾ ಮಂಜನಾಡಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ. ಮೊಂಟೆಪದವಿನಿಂದ ಮಂಜನಾಡಿಗೆ ತಮೀಮ್ ತನ್ನ ತಂದೆಯ ಆಕ್ಟಿವಾ ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಆಕ್ಖಿವಾ ರಸ್ತೆ ಬದಿಯ ಹೊಂಡಕ್ಕೆ ಬಿದ್ದು ತಮೀಮ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಝಾಕೀರ್ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಜನಾಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಮತ್ತು ಜನ ಶಿಕ್ಷಣ ಟ್ರಸ್ಟ್ ಮುಡಿಪು, ಸ್ತ್ರೀಶಕ್ತಿ ಗುಂಪು ಮತ್ತು ಮಾದರಿ ಗ್ರಾಮ ವಿಕಾಸ ಕೇಂದ್ರ ಕಲ್ಕಟ್ಟ ಮಂಜನಾಡಿ ಇದರ ಸಹಭಾಗಿತ್ವದಲ್ಲಿ ಮಾಹಿಳಾ ದಿನಾಚರಣೆ ಕಾರ್ಯಕ್ರಮವು ಕಲ್ಕಟ್ಟ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು. ಜನ ಶಿಕ್ಷಣ ಟ್ರಸ್ಟ್ ಮುಡಿಪು ಇದರ ನಿರ್ದೇಶಕ ಶಿವ ಶೆಟ್ಟಿ ಆಧ್ಯಕ್ಷತೆ ವಹಿಸಿ ಮಾತನಾಡಿದರು. ಕೃಷ್ಣ ಮೂಲ್ಯ, ಮಂಜನಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪರಮೇಶ್ವರ್ ಭಂಡಾರಿ, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಹ್ಮದ್ ಕುಂಞ ನೆಕ್ಕರೆ, ಮಂಜನಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಎಂ ಕುಂಞಬಾವ ಹಾಜಿ, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್, ಚಂಚಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಲ್ಕಟ್ಟ ಅಂಗನವಾಡಿ ಕಾರ್ಯಕರ್ತೆ ಸುಜಾತ ಸ್ವಾಗತಿಸಿ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚರಾಕಿ ಪೂರ್ಣಿಮಾ ವಂದಿಸಿದರು.

Read More

ಉಳ್ಳಾಲ: ತಡರಾತ್ರಿ ಮನೆಗೆ ಅಕ್ರಮ ಪ್ರವೇಶಗೈದ ಇಬ್ಬರು ಮಹಿಳೆಯೋರ್ವರಿಗೆ ಅವಾಚ್ಯವಾಗಿ ನಿಂದಿಸಿ ಮಾನಭಂಗಕ್ಕೆ ಯತ್ನಿಸಿರುವ ಘಟನೆ ತಲಪಾಡಿಯ ನಾರ್ಲ ಪಡೀಲ್ ಎಂಬಲ್ಲಿ ನಡೆದಿದೆ. ತಲಪಾಡಿ ನಿವಾಸಿಗಳಾದ ಪ್ರಶಾಂತ್ ಶೆಟ್ಟಿ ಮತ್ತು ಅರುಣ್ ಎಂಬಾತ ನಾರ್ಲ ಪಡೀಲಿನಲ್ಲಿರುವ ಮಹಿಳೆ ಮನೆಗೆ ಅಕ್ರಮ ಪ್ರವೇಶಗೈದಿದ್ದರು. ಅಲ್ಲಿ `ನಿಮಗೆ ಚಿಕ್ಕಿ ತಯಾರಿಸಲು ಲೈಸೆನ್ಸ್ ಇದೆಯೇ’ ಎಂದು ಕೇಳಿ ಮಹಿಳೆಯನ್ನು ಹೆದರಿಸಿದ್ದಾರೆ. ಅದನ್ನು ಕಂಡು ಮಹಿಳೆಯ ಮೈದುನ ಇಬ್ಬರೊಂದಿಗೆ ಜಗಳಕ್ಕಿಳಿದಿದ್ದರು. ಇದರಿಂದ ಮಾತಿಗೆ ಮಾತು ಬೆಳೆದು ಪ್ರಶಾಂತ್ ಶಟ್ಟಿ ಎಂಬಾತ ಮಹಿಳೆಯ ಮೈದುನನ ಮುಖಕ್ಕೆ ಹಲ್ಲೆ ನಡೆಸಿದ್ದು, ಇದರಿಂದ ಗೋಡೆಗೆ ತಲೆ ಬಡಿದು ಗಾಯವಾಗಿದೆ. ಬಳಿಕ ಇಬ್ಬರು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿದೂರು : ಪ್ರಶಾಂತ್ .ಕೆ.ಎನ್ , ಅರುಣ್ ಮತ್ತು ದಿನೇಶ್ ಎಂಬವರು ನಾರ್ಲ ಪಡೀಲಿನಲ್ಲಿರುವ ಶಕ್ತಿ ಎಂಬವರ ಮನೆಗೆ ವ್ಯವಹಾರದ ನಿಮಿತ್ತ ಮಾತನಾಡಲು ತೆರಳಿದ್ದರು. ಅಲ್ಲಿ ಶಕ್ತಿ ತನ್ನ 20 ಮಂದಿ ಜನರ ತಂಡದೊಂದಿಗೆ ಮನೆಗೆ ಬಂದಿದ್ದ…

Read More

ಉಳ್ಳಾಲ: ಉಳ್ಳಾಲದ ಭಗವತಿ ಕ್ಷೇತ್ರಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ತೊಕ್ಕೊಟ್ಟು ಕೃಷ್ಣನಗರದ ನಿವಾಸಿ ಚಂದ್ರಕಾಂತ್ ಎಂಬವರಿಗೆ ಉಳ್ಳಾಲಬೈಲಿನ ಪ್ರೀತೇಶ್ ಎಂಬಾತ ಪಂಚ್‍ನಿಂದ ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಚಂದ್ರಕಾಂತ್ ಅವರು ಕ್ಷೇತ್ರದಿಂದ ವಾಪಸ್ಸಾಗುವಾಗ ತಡೆದ ಪ್ರೀತೇಶ್ ಕೈಗೆ ಸುತ್ತಿದ ಕಬ್ಬಿಣದ ಸಂಕೋಲೆಯಿಂದ ಕೆನ್ನೆ ಮತ್ತು ತಲೆಯ ಭಾಗಕ್ಕೆ ಬಲವಾಗಿಹೊಡೆದಿದ್ದಾನೆ. ಆನಂತರ ಚೂರಿ ತೋರಿಸಿ ಜೀವಬೆದರಿಕೆಯೊಡ್ಡಿದ್ದಾನೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಪ್ರೀತೇಶ್ ಮತ್ತು ಕವಿತ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾಗ, ಅವರ ಬೈಕನ್ನು ಚಂದ್ರಕಾಂತ್ ಅವರಿಗೆ ಸೇರಿದ ಓಮ್ನಿ ಕಾರಿನಲ್ಲಿ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಗಿತ್ತು. ಇದರಿಂದ ಚಂದ್ರಕಾಂತ್ ಅವರೇ ಪೊಲೀಸರಿಗೆ ದೂರು ನೀಡಿ ತಮ್ಮನ್ನು ಬಂಧಿಸಿದ್ದು ಎಂದು ಪೂರ್ವದ್ವೇಷವನ್ನು ತೀರಿಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Read More

ಉಳ್ಳಾಲ: ಗೋಣಿಚೀಲಗಳಲ್ಲಿ ಇರಿಸಲಾಗಿದ್ದ ಸುಲಿದ ಅಡಿಕೆಯನ್ನು ಕಳ್ಳರು ಕಳವುಗೈದಿರುವ ಘಟನೆ ಪಜೀರು ಗ್ರಾಮದ ಪಾನೇಲ ಬಾಕೀಮಾರ್ ಎಂಬಲ್ಲಿ ನಡೆದಿದೆ. ಅಬ್ದುಲ್ ರವೂಫ್ ಎಂಬವರಿಗೆ ಸೇರಿದ , 8 ಗೋಣಿ ಚೀಲಗಳಲ್ಲಿ ಇರಿಸಲಾಗಿದ್ದ ಅಡಿಕೆ ಕಳವಾಗಿದೆ. ನಾಲ್ಕು ಕ್ವಿಂಟಾಲ್ ತೂಕವುಳ್ಳ ಅಡಿಕೆಯ ಅಂದಾಜು ಮೌಲ್ಯ ರೂ. 80,000 ಆಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Read More

ಕೋಟೆಕಾರು: ರಾಮರಾಜ ಕ್ಷತ್ರಿಯ ಸೇವಾ ಸಂಘ ಕುಂಪಲ ಉಳ್ಳಾಲ ವಲಯದ ವತಿಯಿಂದ ಶ್ರೀ ರಾಮನವಮಿ ಉತ್ಸವ ಕೋಟೆಕಾರು ಶೃಂಗೇರಿ ಮಠದಲ್ಲಿ ಶನಿವಾರ ನಡೆಯಿತು. ರಾಮರಾಜ ಕ್ಷತ್ರೀಯ ಸೇವಾ ಸಂಘದ ಅಧ್ಯಕ್ಷ ಬಿ.ಕೆ.ಮೂರ್ತಿ ಪಾರೆಮನೆ, ಕಾರ್ಯದರ್ಶಿ ಸತ್ಯ ಕುಂಪಲ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ, ಇಂಧುಶ್ರೀ, ಶೃಂಗೇರಿ ಮಠದ ಸತ್ಯಶಂಕರ ಬೊಳ್ಳಾವ ಮೊದಲಾದವರು ಉಪಸ್ಥಿತರಿದ್ದರು.

Read More