ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಅಡಗಿರುವ ಪ್ರತಿಭೆಗಳನ್ನು ಬೆಳಕಿಗೆ ತರಲು ನೂತನ ಕೌನ್ಸಿಲ್ ಕಮಿಟಿ ಸದಸ್ಯರು ವಿವಿಧ ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರಯತ್ನಿಸುವ ಮೂಲಕ ಹಿಂದಿನ ಕಮಿಟಿಯವರಿಗೆ ಮಾದರಿಯಾಗಬೇಕು ಎಂದು ರಾಜ್ಯ ಗುಪ್ತಚರ ಇಲಾಖೆಯ ಡಿಎಸ್ ಪಿ ಜಯಂತ್.ವಿ.ಶೆಟ್ಟಿ ಹೇಳಿದರು. ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಸ್ಟೂಡೆಂಟ್ ಕೌನ್ಸಿಲ್-2015-16 ನೇ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದಿನ ಕೌನ್ಸಿಲ್ ಕಮಿಟಿಯವರ ನಡೆಸಿದಂತಹ ಕಾರ್ಯಚಟುವಟಿಕೆಗಳು ಶ್ಲಾಘನೀಯ. ಅದರಂತೆ ಮುಂದೆಯೂ ಕಮಿಟಿ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ಮುಂದುವರಿಸುತ್ತಾ, ಪ್ರತಿಭೆಗಳಿಗೆ ಸುಪ್ತ ಅವಕಾಶವನ್ನು ಒದಗಿಸಿಕೊಡಬೇಕಿದೆ. ವಿದ್ಯಾರ್ಥಿಗಳು ಪರಿಸರ ಪೂರಕವಾಗಿ ಬಾಳುವುದನ್ನು ಅರಿತು ವಾಹನಗಳನ್ನು ಮಿತಿಯಾಗಿ ಬಳಸಬೇಕಿದೆ. ಈ ಮೂಲಕ ಮಂಗಳೂರಿನಂತಹ ಶಿಕ್ಷಣ ಸಂಸ್ಥೆಗಳಿರುವ ನಗರದಲ್ಲಿ ಮಾಲಿನ್ಯ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು ದೊಡ್ಡ ಕೊಡುಗೆಯನ್ನು ಕೊಟ್ಟಂತಾಗುತ್ತದೆ. ಅಲ್ಲದೆ ರಸ್ತೆ ಅಪಘಾತಗಳನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು ಎಂದರು. ಈ ಸಂದರ್ಭ ಪ್ರಾಂಶುಪಾಲ ಹಾಗೂ ಡೀನ್ ಡಾ.ಯು.ಯಸ್.ಕೃಷ್ಣನಾಯಕ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿಯ ಡೀನ್ ಡಾ.ಪ್ರಿಯದರ್ಶಿನಿ ಹೆಗ್ಡೆ, ಡಾ.ಶಿಶೀರ್…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಸ್ಕೂಟರ್ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿದ ಸಚಿವ ಖಾದರ್ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಿ ಮತ್ತೊಮ್ಮೆ ಎಲ್ಲಾ ಜನಪ್ರತಿನಿಧಿಗಳಿಗೆ ಮಾದರಿಯಾದ ಪ್ರಸಂಗ ದೇರಳಕಟ್ಟೆಯಲ್ಲಿ ಗುರುವಾರ ಮಧ್ಯಾಹ್ನದ ವೇಳೆ ನಡೆಯಿತು. ಅಸೈಗೋಳಿ ನಿವಾಸಿಗಳಾದ ಜೇಮ್ಸ್ (50) ಮತ್ತು ಪತ್ನಿ ಸೂಝಾನ್ (45) ದಂಪತಿ ತೊಕ್ಕೊಟ್ಟಿನಿಂದ ಅಸೈಗೋಳಿ ಮನೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ದೇರಳಕಟ್ಟೆ ಸಮೀಪ ಆಯತಪ್ಪಿ ಸ್ಕೂಟರ್ ರಸ್ತೆಗೆ ಉರುಳಿಬಿದ್ದಿತ್ತು., ಪರಿಣಾಮ ಕಾಲಿಗೆ ಮತ್ತು ತಲೆಗೆ ಗಂಭೀರ ಗಾಯಗೊಂಡಿದ್ದ ದಂಪತಿ ರಸ್ತೆಯಲ್ಲೇ ಬಿದ್ದಿದ್ದು, ಸ್ಥಳೀಯರು ಯಾರೂ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನವನ್ನು ಮಾಡಿರಲಿಲ್ಲ. ಅಷ್ಟರಲ್ಲಿ ನರಿಂಗಾನದಲ್ಲಿ ನಡೆಯುವ ಪ್ರಥಮ ವರ್ಷದ ಗಣೇಶೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಂಗಳೂರಿಗೆ ಹಿಂತಿರುಗುತ್ತಿದ್ದ ಸಚಿವ ಖಾದರ್ ಅವರು ಅಪಘಾತ ನಡೆದ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ ಹಿಂದೆ ಮುಂದೆ ನೋಡದೆ ಕಾರಿನಲ್ಲಿದ್ದ ಕಾರ್ಯಕರ್ತರ ಸಹಕಾರದೊಂದಿಗೆ ಗಾಯಾಳು ದಂಪತಿಯನ್ನು ತಮ್ಮ ವಾಹನದೊಳಗೆ ಹಾಕಿ ಕೂಡಲೇ ದೇರಳಕಟ್ಟೆಯ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ…
ಗೌರಿ- ಗಣೇಶನ ಆರಾಧನೆ ಒಂದು ದಿನದ ಆಚರಣೆಯಲ್ಲ. ಅದು ವಾರಗಳ ಕಾಲ ನಡೆಯುವ ಸಂಭ್ರಮ. ಕಬ್ಬು ತಿನ್ನುವ ಹಬ್ಬ, ಸಂಬಂಧಗಳ ನಂಟನ್ನು ಇನ್ನಷ್ಟು ಗಟ್ಟಿ ಮಾಡುವ ಚತುರ್ಥಿ ಹಬ್ಬ ಆಚರಿಸುವ ಸಂಭ್ರಮವೇ ಬೇರೆ. ಮನೆಯಲ್ಲಿಯೂ ಮನದಲ್ಲಿಯೂ ಖುಷಿಯೋ ಖುಷಿ. ಗೌರ-ಗಣೇಶನ ಆರಾಧನೆಯೊಂದಿಗೆ ಜನ ಪುಳಕಿತರಾದರು. ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಸವಿಯನ್ನು ಉಂಡು ಕೆಲವೇ ದಿನಗಳು ಕಳೆಯುವಷ್ಟರಲ್ಲಿ ಗೌರಿ-ಗಣೇಶ ಹಬ್ಬದ ಸಡಗರ. ಅಷ್ಟಮಿಯ ಸಿಹಿ ಮುಗಿಯುತ್ತ ಬರುತ್ತಿದ್ದಂತೆ ಇದೀಗ ಗೌರಿ ಗಣೇಶ ಹಬ್ಬದ ಸಿಹಿ ಉನ್ನಲು ತಯಾರಾಗುತ್ತಿದ್ದೇವೆ. ಹಿಂದೂ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬ ಮಹತ್ತರವಾದ ಹಬ್ಬವಾಗಿದ್ದು. ಹಿರಿಯರು ಕಿರಿಯರಿಗೆ ಬಹುಮಾನವಾಗಿ ಕೊಟ್ಟು ಹೋದ ಹಬ್ಬವೆಂದರೂ ತಪ್ಪಗಲಾರದು. ಹಬ್ಬಗಳ ಆಚರಣೆಯಿಂದ ಐಕ್ಯತೆಯ ಭಾವನೆ ಮೂಡಿ ಭಾಂದವ್ಯ ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ. ಪೌರಾಣಿಕ ಹಿನ್ನೆಲೆ: ಗೌರಿ ಗಣೇಶ ಹಬ್ಬವನ್ನು ಒಟ್ಟಾಗಿ ಮಾಡುವುದು ಈ ಹಬ್ಬದ ವಿಶಿಷ್ಟವಾಗಿದೆ. ಶಾಸ್ತ್ರದ ಪ್ರಕಾರ ಗೌರಿ ಹಬ್ಬದಂದು ಮಹಾಮಾತೆ ಪಾರ್ವತಿ ದೇವಿಯು ತನ್ನ ತವರುಮನೆಗೆ ಹೋಗುತ್ತಾಳೆ. ಚಾಂದ್ರಮಾನ ಪಂಚಾಂಗದ ಪ್ರಕಾರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಪ್ಪಿನಂಗಡಿ: ಜಿಲ್ಲೆಯ ಜೀವನದಿ ನೇತ್ರಾವತಿ ನದಿಯನ್ನು ತಿರುಗಿಸಲು ಹೊರಟ ಸರಕಾರದ ಯೋಜನೆಯನ್ನು ವಿರೋಧಿಸಿ ಸಮಾನ ಮನಸ್ಕ ಸಂಘಟನೆಗಳು ಉಪ್ಪಿನಂಗಡಿಯಲ್ಲಿ ನಡೆಸಿದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಯಶಸ್ವಿಯಾಗಿದೆ. ಪ್ರಾಣ ಬಿಟ್ಟೇವು ಆದರೆ ನೇತ್ರಾವತಿಯ ವಧೆ ಸಲ್ಲದು ಅನ್ನುವ ಘೋಷಣೆಯೊಂದಿಗೆ ಆರಂಭವಾದ ಪ್ರತಿಭಟನಾ ಜಾಥಾದಲ್ಲಿ ಸುಮಾರು 10,000ದಷ್ಟು ಮಂದಿ ಭಾಗವಹಿಸಿದ್ದರು. ಉಪ್ಪಿನಂಗಡಿ ಬೈಪಾಸಿನಲ್ಲಿರುವ ಆದಿತ್ಯ ಹೊಟೇಲಿನಿಂದ ಉಪ್ಪಿನಂಗಡಿ ಜಂಕ್ಷನ್ನಿನವರೆಗೆ ಪ್ರತಿಭಟನಾಕಾರರು ಜಾಥಾ ಮೂಲಕ ಸಾಗಿ ಬಳಿಕ ರಸ್ತೆಗೆ ಅಡ್ಡ ನಿಂತು ವಾಹನಗಳು ತೆರಳದಂತೆ ರಸ್ತೆ ತಡೆ ನಡೆಸಿದರು. ಯೋಜನೆ ವಿರೋಧಿಸಿ ರಚಿಸಿದ ಹಾಡುಗಳು, ವಿದ್ಯಾರ್ಥಿಗಳ ಆಕ್ರೋಶದ ಘೋಷಣೆಗಳು, ಜಿಲ್ಲೆಯ ಹಾಗೂ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರ ನಡೆ ಇಡೀ ರಾ.ಹೆ.ಯನ್ನು ಸ್ತಬ್ಧಗೊಳಿಸಿತ್ತು. ಸರಕಾರಿ ಪದವಿ ಪೂರ್ವ ಶಾಲೆಯ ಬಳಿ ರಸ್ತೆ ತಡೆ ನಡೆಸಿದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರತಿಭಟನಕಾರರನ್ನು ಪೊಲೀಸರು ಬಲವಂತವಾಗಿ ಚದುರಿಸಲು ನೋಡಿದ್ದಾರೆ. ಈ ವೇಳೆ ಪ್ರತಿಭಟಿಸಿದ ಪ್ರಮುಖ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದು, ಬಳಿಕ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ: ಆ ಶಾಲೆಯೊಂದು ಉದ್ಧಾರ ಆಗಬೇಕಾದರೆ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದವರು ಹಾಜಬ್ಬ. ಮನೆಯಲ್ಲಿ ಊಟಕ್ಕೆ ಗತಿಯಿಲ್ಲದೇ ಇದ್ದರೂ ಊರಿನ ಶಾಲೆಯ ಅಭಿವೃದ್ಧಿಯಾಗಬೇಕು, ಮಕ್ಕಳು ವಿದ್ಯಾವಂತರಾಗಬೇಕೆನ್ನುವ ಉದ್ದೇಶದಿಂದ ಕಿತ್ತಳೆ ಹಣ್ಣನ್ನು ಮಾರಿ ಬಂದ ಹಣವನ್ನು ಶಾಲೆಯ ಕೆಲಸಗಳಿಗೆ ಹಾಕಿಕೊಂಡು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ `ಅಕ್ಷರ ಸಂತ’ ಎಂದುಕೊಂಡೇ ಖ್ಯಾತಿಗಳಿಸಿದ್ದಾರೆ. ಆದರೆ ಸರಿಯಾದ ಸ್ವಂತ ಮನೆ ಇರದ ಹಾಜಬ್ಬ ಅವರಿಗೆ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ನೀಡುವ ಮನೆಗೆ ಕೇಮಾರು ಶ್ರೀ ಸಾಂದೀಪನಿ ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಹರೇಕಳದ ನ್ಯೂಪಡ್ಪು ಬಳಿ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಹಳೇಯದಾದ ಮನೆಯಲ್ಲಿ ಪತ್ನಿ , ಇಬ್ಬರು ಹೆಣ್ಮಕ್ಕಳು ಮತ್ತು ಓರ್ವ ಪುತ್ರನೊಂದಿಗೆ ವಾಸಿಸುತ್ತಿರುವ ಹಾಜಬ್ಬ ಅವರ ಶಿಕ್ಷಣ ಕ್ಷೇತ್ರಕ್ಕಾಗಿ ನಡೆಸಿದ ಕಾರ್ಯ ಲೋಕದ ಬೆಳಕಿಗೆ ಬಂದ ನಂತರ ಸಿಕ್ಕ ಪ್ರಶಸ್ತಿಗಳನ್ನು ಇಡಲು ಮನೆಯಲ್ಲಿ ಸರಿಯಾದ ಜಾಗವಿಲ್ಲ. ಇದನ್ನೆಲ್ಲಾ ಮನಗಂಡ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಸಂಘಟನೆಯವರು 850 ಚದರ ಅಡಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಸಮಾಜದ ಕಟ್ಟಕಡೆಯ ಜನರಿಗೆ ಉಪಯುಕ್ತವಾಗುವ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಕಣಚೂರು ಸಂಸ್ಥೆ ಕೈಗೊಂಡಿದ್ದು, ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಹೇಳಿದ್ದಾರೆ. ಅವರು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಸೋಮವಾರ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡ ಕಿವುಡುತನ ಜಾಗೃತಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ಶಾರೀರಿಕವಾಗಿ ಆರೋಗ್ಯವಾಗಿದ್ದರೂ ಕಣ್ಣು ಮತ್ತು ಕಿವಿ ಸರಿಯಿಲ್ಲದೇ ಇದ್ದಲ್ಲಿ ಜೀವನ ನಿರ್ವಹಣೆ ಕಷ್ಟದಾಯಕ.ಅದರ ಜಾಗೃತಿ ಕಾರ್ಯಕ್ರಮ ಅಗತ್ಯ . ಈ ನಿಟ್ಟಿನಲ್ಲಿ ಕಣಚೂರು ಆಸ್ಪತ್ರೆ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ಕಣಚೂರು ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಆಸ್ಪತ್ರೆಯ ಡೀನ್ ಖಾಜಾ ನೆಸಿರುದ್ದೀನ್ ಮುಖ್ಯ ಅತಿಥಿಯಾಗಿದ್ದರು. ಕಣ್ಣು ಕಿವಿ ಮತ್ತು ಮೂಗು ವಿಭಾಗದ ಡಾ.ನಿಷಾ ಕಿವಿಗೆ ಸಂಬಂಧಿಸಿದ ಮಾಹಿತಿ ನೀಡಿದರು. ಆಲ್ಪ್ಸ್ ಸಂಸ್ಥೆಯ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆಯ ರಿಕ್ಷಾ ಪಾರ್ಕಿನ ಸಮೀಪ ಮುಸ್ಲಿಂ ರಿಕ್ಷಾ ಚಾಲಕರು ಗಣೇಶ ಹಬ್ಬದ ಆಚರಣೆಗೆ ಶುಭಕೋರಿ ಬ್ಯಾನರನ್ನು ಹಾಕಿರುವುದು ಸೌಹಾರ್ದ ಸಮಾಜಕ್ಕೆ ಉತ್ತಮ ಸಂದೇಶ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಸಮಾಜದಲ್ಲಿ ಸಂಘಟನೆಗಳಿದ್ದು ಸಮಾಜಮುಖಿಯಾಗಿ ಕೆಲಸ ಮಾಡುವ ಸಂಘಟನೆಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಆ ದಿಸೆಯಲ್ಲಿ ಭಗತ್ಸಿಂಗ್ ಸೇವಾ ಪ್ರತಿಷ್ಠಾನ ಸೇವೆಯ ಮೂಲಕವೇ ಜನಪ್ರಿಯ ಸಂಘನಟಯಾಗಿ ಬೆಳೆದಿರುವುದು ಶ್ಲಾಘನೀಯ ಎಂದು ಸುವರ್ಣ ಅಸೋಸಿಯೇಟ್ಸ್ನ ಕೆ.ಟಿ.ಸುವರ್ಣ ಅಭಿಪ್ರಾಯಪಟ್ಟರು. ಅವರು ಭಗತ್ಸಿಂಗ್ ಸೇವಾ ಪ್ರತಿಷ್ಠಾನ ತೊಕ್ಕೊಟ್ಟು ಹಾಗೂ ಮಾಧ್ಯಮ ಕೇಂದ್ರ ಉಳ್ಳಾಲ ಜಂಟಿ ಆಶ್ರಯದಲ್ಲಿ ತೊಕ್ಕೊಟ್ಟು ಕಾಪಿಕಾಡಿನ ಗಟ್ಟಿ ಸಮಾಜಭವನದಲ್ಲಿ ಭಾನುವಾರ ನಡೆದ ವಿಕಾಸ-2015ರಲ್ಲಿ ವ್ಯಕ್ತಿತ್ವ ವಿಕಸನ-ನಾಯಕತ್ವ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಮಾಜವೊಂದರ ಬೆಳವಣಿಗೆಯಲ್ಲಿ ಇತರರನ್ನು ಸೇರಿಸಿಕೊಂಡಾಗ ಸಂಘಟನೆ ಬಲಿಷ್ಠವಾಗುತ್ತದೆ. ಆ ಮೂಲಕ ಸಮಾಜದ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಸಮಾಜದಲ್ಲಿ ವ್ಯಕ್ತಿತ್ವ ಮುಖ್ಯ ಪಾತ್ರ ವಹಿಸುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಿಕಾಸ-2015ರಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿ ಎಂದರು. ಸರ್ವಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ದಿನಕರ್ ಶೆಟ್ಟಿ ಮಾತನಾಡಿ ಮೂಲವನ್ನು ಯಾವತ್ತೂ ಮರೆಯಬಾರದು. ಜೀವನದಿ ನೇತ್ರಾವತಿ ಕೈ ತಪ್ಪಿ ಹೋಗಬಾರದು. ರಾಜ್ಯದ ಜನತೆಯಿಂದ ಕೋಟ್ಯಾಂತರ ರೂ. ತೆರಿಗೆ ಕೇಳುವ ಸರಕಾರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕøತಿ, ಬೆಳವಣಿಗೆ ಹಾಗೂ ಯುವ ಕಲಾದವಿರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ `ಮೇಲ್ತೆನೆ’ ಸಂಘಟನೆ ಭಾನುವಾರ ದೇರಳಕಟ್ಟೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಹಿರಿಯ ಕವಿ ಆಲಿಕುಂಞ ಪಾರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘಟನೆ ಉದ್ದೇಶದ ಬಗ್ಗೆ ಲೇಖಕ ಇಸ್ಮತ್ ಪಜೀರ್ ಹಾಗೂ ಪತ್ರಕರ್ತ ಹಂಝ ಮಲಾರ್ ವಿವರಿಸಿದರು. ಇದೇ ಸಂದರ್ಭದಲ್ಲಿ 2015-16ನೇ ಸಾಲಿಗೆ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಆಲಿಕುಂಞ ಪಾರೆ, ಉಪಾಧ್ಯಕ್ಷ ಟಿ.ಇಸ್ಮಾಯಿಲ್ ಮಾಸ್ಟರ್, ಸಂಚಾಲಕರಾಗಿ ಹಂಝ ಮಲಾರ್, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮತ್ ಪಜೀರ್, ಕಾರ್ಯದರ್ಶಿಯಾಗಿ ಅನ್ಸಾರ್ ಇನೋಳಿ, ಕೋಶಾಧಿಕಾರಿಯಾಗಿ ಅಬ್ಬಾಸ್ ಕಿನ್ಯ, ಸಂಘಟನಾ ಕಾರ್ಯದರ್ಶಿಯಾಗಿ ಆರಿಫ್ ಕಲ್ಕಟ್ಟ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಎನ್.ಇಸ್ಮಾಯಿಲ್, ಬಶೀರ್ ಅಹ್ಮದ್ ಕಿನ್ಯ, ಎಚ್.ಎಂ.ಮಹಮ್ಮದ್, ಎಂ.ಎಚ್.ಮಲಾರ್, ಮಜೀದ್ ಮಾಸ್ಟರ್ ಮಲಾರ್, ಮಹಮ್ಮದ್ ಮಾಸ್ಟರ್ ಕಲ್ಕಟ್ಟ, ಕೆ.ಎಂ.ಕೆ.ಮಂಜನಾಡಿ, ಸೈಫುಲ್ಲಾ ಕುತ್ತಾರ್ ಇವರನ್ನು ಆರಿಸಲಾಯಿತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಪುರಾಣ ಪ್ರಸಿದ್ಧ ಸೋಮೇಶ್ವರದ ಶ್ರೀ ಸೋಮನಾಥ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಅಮವಾಸ್ಯೆಗೆ ನಡೆಯುವ ತೀರ್ಥ ಸ್ನಾನಕ್ಕೆ ಊರು-ಪರವೂರುಗಳಿಂದ ಸಾವಿರಾರು ಭಕ್ತಾಧಿಗಳು ಬಂದು ಬೆಳ್ಳಂಬೆಳಗ್ಗಿನಿಂದಲೇ ಪವಿತ್ರ ಸ್ನಾನಗೈದು ಕೃತಾರ್ಥರಾದರು. ವೀರರಾಣಿ ಅಬ್ಬಕ್ಕ ತನ್ನ ಅಭೀಷ್ಠ ನೆರವೇರಿದಕ್ಕಾಗಿ ಬೆಳ್ಳಿಯ ಜಲದ್ರೋಣಿಯನ್ನು ಸಮರ್ಪಿಸಿದ ಈ ಪುಣ್ಯ ಕ್ಷೇತ್ರದಲ್ಲಿ ಇಂದಿಗೂ ಸೋಮನಾಥ ಸ್ವಾಮಿ ಲಿಂಗದ ಮೇಲೆ ಪರಿಶುದ್ಧ ಜಲದ ಅಭಿಷೇಕವಾಗುತ್ತದೆ. ಇದೇ ರೀತಿ ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ತೀರ್ಥಸ್ನಾನವು ಭಕ್ತರನ್ನು ಪುಳಕಿತಗೊಳಿಸುತ್ತದೆ. ತೀರ್ಥಸ್ನಾನಕ್ಕೆ ತೆರಳುವ ಭಕ್ತರು ಎಲೆ ಅಡಿಕೆಯನ್ನು ಖರೀದಿಸಿ ಕಡಲ ತಡಿಯಲ್ಲಿ ತಲೆಗೆ ಆವಣಿಸಿ ಗಂಗೆಗೆ ಸಮರ್ಪಿಸಿ ಕಡಲ ಸ್ನಾನಗೈಯ್ಯುತ್ತಾರೆ. ರೋಮಾಂಚನಕಾರಿ ಅನುಭವ ನೀಡುವ ರುದ್ರಪಾದೆಗೆ ಸಮುದ್ರದ ಬೆಳ್ನೊರೆಗಳು ಅಪ್ಪಳಿಸುವ ಜಾಗದಲ್ಲಿ ಭಕ್ತಾಧಿಗಳು ಸಮುದ್ರ ಸ್ನಾನಗೈಯ್ಯುತ್ತಾರೆ. ಎರಡು ವರ್ಷದ ಮಗುವಿನಿಂದ ಹಿಡಿದು 80 ವರ್ಷದ ವೃದ್ಧರವರೆಗೆ ಇಲ್ಲಿ ಪವಿತ್ರ ಸ್ನಾನಗೈಯ್ಯುತ್ತಾರೆ. ಭಕ್ತಾಧಿಗಳ ರಕ್ಷಣೆಗಾಗಿ ಬೆಳ್ಳಂಬೆಳಗ್ಗಿನಿಂದಲೇ ಉಳ್ಳಾಲದ ಜೀವರಕ್ಷಕ ಈಜು ತಂಡ ಕಣ್ಣಿಗೆ ಎಣ್ಣೆ ಹಾಕಿದಂತೆ ಕಾಯುವ ದೃಶ್ಯ ಕಂಡುಬರುತ್ತದೆ.…

