Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಬಂದ್ ಗಾಳಿಸುದ್ಧಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ನಾಳೆ ಯಾವುದೇ ಸಾರ್ವಜನಿಕ ಸಭೆಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆದೇಶಿಸಿದ್ದಾರೆ. ಸಭೆಗಳಿಗೆ ಈಗಾಗಲೇ ಕೊಟ್ಟಿರುವ ಅನುಮತಿಗಳನ್ನು ಹಿಂಪಡೆಯಲಾಗುವುದು. ಮದ್ಯ ಮಾರಾಟವನ್ನು ನಿಷೇಧಿಸಲಾಗಿದ್ದು, ಬಾರ್ ಹಾಗೂ ವೈನ್ ಶಾಪ್‍ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಎಲ್ಲಾ ಸರಕಾರಿ ನೌಕರರು ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ತಾಲೂಕು ಕಚೇರಿಗಳಲ್ಲಿ ಕಾನೂನು ಕಾಪಾಡುವಂತೆ ಆಯಾಯ ತಹಶೀಲ್ದಾರರಿಗೆ ಆದೇಶಿಸಲಾಗಿದೆ. ಸಭೆಯಲ್ಲಿ ಪೊಲೀಸ್ ಕಮೀಷನರ್ ಎಸ್.ಮುರುಗನ್, ಎಸ್.ಪಿ ಶರಣಪ್ಪ, ಎಡಿಸಿ ಕುಮಾರ್, ಡಿಸಿಪಿ ಶಾಂತರಾಜು, ಎಂ.ಸಿ.ಸಿ ಕಮೀಷನರ್ ಡಾ.ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಮಂಗಳೂರು: ಮಡಿಕೇರಿ ಗಲಭೆಯಲ್ಲಿ ವಿಶ್ವಹಿಂದು ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಹತ್ಯೆ ಮತ್ತು ಟಿಪ್ಪು ಜಯಂತಿ ವಿರೋಧಿಸಿ ಬಜರಂಗದಳ ಕರೆ ನೀಡಿದ್ದ ರಾಜ್ಯ ಬಂದ್‍ನ್ನು ಹಿಂತೆಗೆದುಕೊಂಡಿದ್ದು, ಬದಲಾಗಿ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸುವುದಾಗಿ ಬಜರಂಗದಳ ತಿಳಿಸಿದೆ. ರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕು ಕಚೇರಿಗಳ ಎದುರುಗಡೆ ಪ್ರತಿಭಟನೆ ನಡೆಸಲು ವಿ.ಹಿಂ.ಪ ಮತ್ತು ಬಜರಂಗದಳದ ಮುಖಂಡರಾದ ಜಗದೀಶ್ ಶೇಣವ ಮತ್ತು ಶರಣ್ ಪಂಪ್ ವೆಲ್ ಕರೆ ನೀಡಿದ್ದಾರೆ. ಪ್ರತಿಭಟನಾ ರ್ಯಾಲಿ 11 ರಿಂದ 12ರವರೆಗೆ ನಡೆಯಲಿದ್ದು, ಈ ವೇಳೆ ರಸ್ತೆ ತಡೆಯನ್ನು ಹಮ್ಮಿಕೊಳ್ಳಲಾಗಿದೆ. ಕರಾವಳಿಯ ಎರಡು ಜಿಲ್ಲೆಗಳ ಸಂಘದ ಪ್ರಮುಖರು ಸಂಘ ನಿಕೇತನದಲ್ಲಿ ಸಭೆ ನಡೆಸಿ ಪ್ರತಿಭಟನೆಯ ಪೂರ್ವಸಿದ್ಧತೆಗಳನ್ನು ನಡೆಸಿದ್ದಾರೆ. ಪ್ರಸ್ತುತ ಸ್ಥಿತಿಗೆ ಸರಕಾರವೇ ನೇರ ಹೊಣೆ. ಅಲ್ಪಸಂಖ್ಯಾತರ ಓಲೈಕೆಯಲ್ಲಿರುವ ಮುಖ್ಯಮಂತ್ರಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಅಮಾಯಕ ಪ್ರಶಾಂತ್ ಪೂಜಾರಿ ಮತ್ತು ಕುಟ್ಟಪ್ಪ ಅವರ ಬಲಿದಾನವಾಗಿದೆ. ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಬಜರಂಗದಳ ಮುಖಂಡ ಶರಣ್ ಪಂಪ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ “ಸಂಸ್ಥಾಪನಾ ದಿನಾಚಾರಣೆಯನ್ನು ಸೈಕಲ್ ಜಾಥಾದ ಮುಖಾಂತರ ಶನಿವಾರ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸೈಕಲ್ ಜಾಥಾವನ್ನು ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈಯವರು ಉದ್ಘಾಟಿಸಿ ಸಂಸ್ಥಾಪನಾ ದಿನಾಚರಣೆಯಾದ ಇಂದು ಸ್ಕೌಟ್ಸ್ ಚಳುವಳಿಯ ಮುಖ್ಯ ಧ್ಯೇಯವಾದ ಸೇವೆ, ನಿಷ್ಠೆ, ಒಗ್ಗಟ್ಟು ಮುಂತಾದ ಗಣಗಳನ್ನು ಪ್ರತಿಯೊಬ್ಬರು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಭವ್ಯ ಪ್ರಜೆಯಾಗಿ ಬಾಳಬೇಕು ಎಂದರು. ಸೈಕಲ್ ಜಾಥಾವು ಹರೇಕಳದಿಂದ ಹೊರಟು ನ್ಯೂಪಡ್ಪು, ಗ್ರಾಮಚಾವಡಿ ಮಾರ್ಗವಾಗಿ ಹೊರಟು ಪುನಃ ಹರೇಕಳದಲ್ಲಿ ಪೂರ್ಣಗೊಳಿಸಲಾಯಿತು. ಪ್ರಾಸ್ತಾವಿಕವಾಗಿ ದಿನದ ಮಹತ್ವದ ಬಗ್ಗೆ ಸ್ಕೌಟ್ ಮಾಸ್ಟರ್ ತ್ಯಾಗಂ ಹರೇಕಳ ಅವರು ಮಾಹಿತಿ ನೀಡಿದರು ಹಾಗೂ ಶಿಕ್ಷಕರುಗಳಾದ ಉಷಾಲತ, ರವಿಶಂಕರ್, ಕೃಷ್ಣಶಾಸ್ತ್ರಿ, ವಸಂತ್, ಮೋಹಿನಿ, ಕುಮುದ, ಶಿವಕುಮಾರ್, ನೂತನ, ಮೋಹನ್ ಹಾಗೂ ದುರ್ಗಾಪ್ರಸಾದ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿಗಳಾದ ದಳದ ಲೀಡರ್‍ಳಾದ ನಿತೀಶ್ ಕುಮಾರ್ ಹಾಗೂ ಲಕ್ಷ್ಮೀತ ರವರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆ ಯಲ್ಲಿ ಪರ ವಿರೋಧ ಗುಂಪುಗಳ ನಡುವೆ ನಡೆದಿರುವ ಘರ್ಷಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡನ ಸಹಿತ ಇಬ್ಬರು ಮೃತ ಪಟ್ಟಿದ್ದು, ಈ ಘಟನೆಯನ್ನು ಖಂಡಿಸಿ ಬಜರಂಗದಳ ನವೆಂಬರ್ 13ರಂದು ಶುಕ್ರವಾರ ದಕ್ಷಿಣ ಕರ್ನಾಟಕ ಬಂದ್‍ಗೆ ಕರೆ ನೀಡಿದೆ. ರಾಜ್ಯದ ಬಹು ಸಂಖ್ಯಾತರ ಮತ್ತು ಕ್ರೈಸ್ತರ ವಿರೋಧದ ನಡುವೆಯೂ ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿದ್ದು, ಇದು ಹಿಂದೂ ವಿರೋಧಿ ನೀತಿಯಾಗಿದೆ. ಸರಕಾರದ ಈ ರೀತಿಯ ವರ್ತನೆಯಿಂ ದಲೇ ರಾಜ್ಯದಲ್ಲಿ ಸಾಮಾಜಿಕ ಅಸಮಾನತೆ ಮತ್ತು ಕೋಮುವಾದ ಸೃಷ್ಠಿಯಾಗಿದ್ದು, ಇದನ್ನು ಖಂಡಿಸಿ ಬಂದ್ ನಡೆಯಲಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಶರಣ್ ಪಂಪ್‍ವೆಲ್ ತಿಳಿಸಿದ್ದಾರೆ. ಬುಧವಾರವೇ ಬಂದ್‍ಗೆ ಚಿಂತನೆ ನಡೆಸಲಾಗಿತ್ತಾದರೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮತ್ತು ರಾಜ್ಯದ ಬೇರೆ ಭಾಗದಲ್ಲಿ ಹಬ್ಬದ ವಾತಾವರಣ ಇರುವ ಕಾರಣದಿಂದ ಪ್ರತಿಭಟನೆ ಶುಕ್ರವಾರ ನಡೆಯಲಿದೆ ಎಂದು ಶರಣ್ ತಿಳಿಸಿದ್ದಾರೆ. ಶುಕ್ರವಾರ ತುರ್ತು ಅಗತ್ಯಗಳನ್ನು ಹೊರತು…

Read More

ಅಮೃತಸರ: ಭಾರತದ ಪ್ರಧಾನ ಮಂತ್ರಿ ಮೋದಿಯವರು ಸತತ ಎರಡನೇಯ ಭಾರಿಗೆ ದೀಪಾವಳಿ ಹಬ್ಬವನ್ನು ಭಾರತೀಯ ಯೋಧರ ಜೊತೆಗೆ ಬುಧವಾರ ಆಚರಿಸಿಕೊಂಡರು. ಈ ಸಂಧರ್ಭದಲ್ಲಿ ಮಾತಾನಾಡಿ ಮೋದಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿಕೊಳ್ಳಲು ಅವಕಾಶ ದೊರಕಿರುವುದು ನನಗೆ ನಿಜಕ್ಕೂ ಸಂತಸ ತಂದಿದೆ. ಭಾರತವನ್ನು ವಿಶ್ವ ಇಂದು ಗೌರವಯುತವಾಗಿ ಕಾಣಲು ನಮ್ಮ ಯೋಧರ ತ್ಯಾಗ ಬಲಿದಾನಗಳು ಮುಖ್ಯ ಕಾರಣ ಎಂದು ತಿಳಿಸಿದರು. ಪಂಜಾಬ್‍ನ ಅಮೃತಸರದ ಖಾಸದಲ್ಲಿರುವ ಡೊಗ್ರೈ ಯುದ್ದ ಸ್ಮಾರಕಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ದೀಪಾವಳಿಯನ್ನು ನರೇಂದ್ರಮೋದಿ ಆಚರಿಸಿಕೊಂಡರು.

Read More

ಮಡಿಕೇರಿ: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಫೇಸ್‍ಬುಕ್‍ನಲ್ಲಿ ಅವಹೇಳನಕಾರಿಯಾಗಿ ನಿಂದಿಸಿದ್ದು, ಕೊಲೆ ಬೆದರಿಕೆ ಹಾಕಲಾಗಿದೆ. ಈ ಕುರಿತು ಸಂಸದರು ಮೈಸೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಒಂದು ಸಂಘಟನೆಯ ಫೇಸ್‍ಬುಕ್ ಖಾತೆಯಿಂದ ಜೀವಬೆದರಿಕೆ ಹಾಕಲಾಗಿದೆ. ಮಡಿಕೇರಿಯಲ್ಲಿ ಮಂಗಳವಾರ ಮೃತಪಟ್ಟ ವಿಶ್ವ ಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪ ಅವರ ಮೃತದೇಹದ ಫೋಟೊ ಜೊತೆಗೆ ಪ್ರತಾಪ್ ಸಿಂಹ ಅವರ ಫೋಟೊ ವಿಟ್ಟು ಅವಹೇಳನಕಾರಿಯಾಗಿ ನಿಂದನೆ ಮಾಡಲಾಗಿದೆ. `ಕುಟ್ಟಪ್ಪ ಅವರಂತೆಯೇ ನಿನಗೂ ಸಾವು ಬರುತ್ತದೆ ಎಂದು ಬೆದರಿಕೆ ಹಾಕಲಾಗಿದೆ’ ಎಂದು ಪ್ರತಾಪ್ ಸಿಂಹ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜೀವ ಬೆದರಿಕೆ ಕುರಿತು ವಿಜಯನಗರ ಪೊಲೀಸರಿಗೆ ಅವರು ದೂರು ನೀಡಿದ್ದಾರೆ ಹಾಗೂ ಮೈಸೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರಿಗೂ ಈ ಕುರಿತು ಮಾಹಿತಿ ನೀಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ರಾಜರು ,ಚಕ್ರವರ್ತಿಗಳ ಬಗ್ಗೆ ಕಪೋಲ ಕಲ್ಪಿತ ಚರಿತ್ರೆಗಳನ್ನು ಕಟ್ಟುವ ಕೆಲಸ ಬ್ರಿಟೀಷರ ವಸಾಹತುಷಾಹಿ ಯುಗದಿಂದಲೇ ನಡೆಯುತ್ತಾ ಬಂದಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ಬಿ ಶಿವರಾಂ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಅವರು ಉಳ್ಳಾಲದ ಟಿಪ್ಪು ಸುಲ್ತಾನ್ ಪದವಿಪೂರ್ವಕಾಲೇಜಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ)ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ನಡೆದ “ವಿಚಾರ ಸಂಕೀರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ವಸಾಹತುಷಾಹಿ ಚರಿತ್ರೆಗಾರರು ಯಾವದೇ ಸಮಾಜಮುಖಿ ಕಥೆಗಳನ್ನು ವೈಭವೀಕರಿಸಿಲ್ಲ,ಬದಲಾಗಿ ಕೇವಲ ರಾಜರು ,ಸಾಮ್ರಾಟರ ಬಗ್ಗೆನೆ ಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.ಇಂದಿನ ಯುವ ವಿದ್ಯಾರ್ಥಿಗಳು ಚರಿತ್ರೆಗಾರರು ಬರೀ ರಾಜರು ಸಾಮ್ರಾಟರ ಬಗ್ಗೆನೆ ಯಾಕೆ ಉಲ್ಲೇಖಿಸಿದ್ದಾರೆ ಎಂಬುದರ ಬಗ್ಗೆ ಸೂಕ್ಷ್ಮ ಅಧ್ಯಯನ ನಡೆಸಬೇಕು .ವಿದ್ಯಾರ್ಥಿಗಳು ಯಾರೋ ನೀಡಿದ ವಿಚಾರಧಾರೆಗಳನ್ನು ಅನುಕರಿಸದೆ ಸ್ವತಂತ್ರವಾಗಿ ವಿಮರ್ಶಿಸಿ ತಮ್ಮತನವನ್ನು ಧರಡೀಕರಿಸಬೇಕು ಎಂದು ಕರೆ ನೀಡಿದರು. ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಬ್ರಿಟೀಷರು ವಿರುಧ್ಧ ಹೋರಾಡಿ ದೇಶದ ಐಕ್ಯತೆಗೆ ಕಾರಣನಾದ ಟಿಪ್ಪುವಿನ ಹೆಸರನ್ನು ಇಂದು ಕೋಮುವಾದಿಗಳು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ತನ್ನ ಆಟೋದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋದ ನಗದು ರೂಪಾಯಿ ಮೂವತ್ತು ಸಾವಿರ ವನ್ನು ಆಟೋ ಚಾಲಕರಾದ ಅಬ್ದುಲ್ ರಹ್ಮಾನ್ ಹಳೆಕೋಟೆ ಇವರು ಅದನ್ನು ಸಂಬಂಧಿಸಿದ ಪ್ರಯಾಣಿಕರಿಗೆ ಅವರ ವಿಳಾಸವನ್ನು ಪತ್ತೆ ಹಚ್ಚಿ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿ ತನ್ನ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.   ಈ ಆಟೋ ಚಾಲಕ ಅಬ್ದುಲ್ ರಹ್ಮಾನ್ ಹಳೆಕೋಟೆ ಇವರು ತೊಕ್ಕೋಟು ಒಳಪೇಟೆ ಅಟೋ ಚಾಲಕ ಮತ್ತು ಮಾಲಕ ಸಂಘದ ಗೌರವಾಧ್ಯಕ್ಷರೂ, ಹಳೆಕೋಟೆ ಟೆಸ್ಟ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾಗಿದ್ದಾರೆ. ಇಂಥ ನಿಷ್ಠಾವಂತ ಪ್ರಾಮಾಣಿಕ ಅಟೋ ಚಾಲಕರಾದ ಅಬ್ದುಲ್ ರಹ್ಮಾನ್ ಹಳೆಕೋಟೆ ಇವರಿಗೆ ಹಳೆಕೋಟೆ ಜನತೆ  ಅಭಿನಂದನೆಗಳನ್ನು  ಸಲ್ಲಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಡಿಕೇರಿ : ನ್ಯೂಸ್ ಕನ್ನಡ ನೆಟ್ ವರ್ಕ್: ಟಿಪ್ಪು ಜಯಂತಿ ವಿಷಯದಲ್ಲಿ ನಿನ್ನೆ ಕೊಡಗು ಜಿಲ್ಲೆಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಇಂದು ಕೂಡ ಉದ್ವಿಗ್ನ ವಾತಾವರಣ ಮುಂದುವರಿದಿದೆ. ಗೋಣಿ ಕೊಪ್ಪದಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳು ಕಾರೊಂದಕ್ಕೆ ಬೆಂಕಿ ಹಚ್ಚಿರುವ ಬಗ್ಗೆ ಪ್ರಕರಣ ದಾಖಲಾಗಿದೆ.  ಹೋಟೆಲೊಂದರ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ಜಿಲ್ಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಡಿಕೇರಿಯಲ್ಲಿ ಪೆÇಲೀಸರು ಇಂದು ಕೂಡ ಗಸ್ತು ತಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಗರದಲಿಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ನಿನ್ನೆ ಘರ್ಷಣೆಯ ವೇಳೆ ಸಾವನ್ನಪ್ಪಿರುವ ವಿಎಚ್ ಪಿ ಮುಖಂಡ ಕುಟ್ಟಪ್ಪ ಎಂಬವರ ಮನೆಗೆ ಇಂದು ಕೆಲವು ಬಿಜೆಪಿ ಮುಖಂಡರು ಭೇಟಿ ನೀಡುವ ಸಾಧ್ಯತೆಯಿರುವುದರಿಂದ ಮಡಿಕೇರಿಯಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ. ನಗರದಲ್ಲಿ ಇಂದು ಕೂಡ ಸರಕಾರಿ…

Read More

ಬಹರೇನ್, ಗುರುಸೇವ ಸಮಿತಿ ಬಹರೇನ್ ಬಿಲ್ಲವಾಸ್ ತಾ.೨೯.೧೦.೨೦೧೫ ರಂದು ಇಂಡಿಯನ್ ಕ್ಲಬ್ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲ್ಪಟ್ಟಿದ್ದ ” ತೆಲಿಕೆ ನಲಿಕೆ ” ಹಾಸ್ಯ ಕಾರ್ಯಕ್ರಮ ಅದ್ಭುತ ಯಶಸ್ಸು ಕಂಡು ಹೊಸ ದಾಖಲೆಯನ್ನು ನಿರ್ಮಿಸಿತು, ಸುಮಾರು ೨೦೦೦ ಪ್ರೇಕ್ಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಾಯಿನಾಡಿನಿಂದ ಬಂದಂತಹ ಹಾಸ್ಯ ಕಲಾವಿದರುಗಳಾದ ದೇವದಾಸ್ ಕಾಪಿಕಾಡ್, ನವೀನ ಡಿ ಪಡಿಲ್, ಬೋಜರಾಜ ವಾಮಂಜೂರು ಇವರ ಹಾಸ್ಯ ಪ್ರಹಸನಗಳು ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೆಲಾಡಿಸುವಂತೆ ಮಾಡಿತು. ತುಳು ಸೂಪರ್ ಸ್ಟಾರ್ ಅರ್ಜುನ್ ಕಾಪಿಕಾಡ್ ಹಾಗು ಚಂಡಿ ಕೋರಿ ತುಳು ಚಲನ ಚಿತ್ರದ ನಾಯಕಿ ಕರಿಷ್ಮ ಅಮಿನ್ ವೇದಿಕೆಯಲ್ಲಿ ತಮ್ಮ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸ್ಥಳೀಯ ನೃತ್ಯ ಕಲಾವಿದರಿಂದ ಮೂಡಿಬಂದಂತಹ ನೃತ್ಯ ಪ್ರದರ್ಶನ ನೋಡುಗರನ್ನು ಮಂತ್ಹ್ರಮುಗ್ದರನ್ನಗಿಸಿತು. ಈ ನೃತ್ಯ ಸಂಯೋಜನೆಯನ್ನು ನಮಿತ ಸಾಲ್ಯಾನ್ ನಿರ್ವಹಿಸಿದ್ದರು. ಮನೋರಂಜನ ಕಾರ್ಯದರ್ಶಿ ಶ್ರೀ ಶ್ರೀಧರ್ ಅಮಿನ್ ಅವರ ಸ್ವಾಗತ ಭಾಷಣ ದಿಂದ ಪ್ರಾರಂಭಗೊಂಡು ಶ್ರೀಮತಿ ಪ್ರತಿಮರಾಜ್ ಅವರ ಸಂಕ್ಷಿಪ್ತ…

Read More