Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟುವಿನಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗೆ ಮಾದರಿ ರಸ್ತೆಯನ್ನು ರಚಿಸುವ ಮೂಲಕ ಜನರಿಗೆ ನೀಡಿದ ಭಾಷೆಯನ್ನು ಉಳಿಸಲಾಗಿದ್ದು, ಮುಂದೆ ರಸ್ತೆಯನ್ನು ಸಂಪೂರ್ಣ ವಿದ್ಯುದ್ದೀಕರಣ ನಡೆಸಿ ಪಾದಚಾರಿಗಳು ನಡೆದುಕೊಂಡು ಹೋಗಲು ಅನುಕೂಲವಾಗುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿ ನೂತನ ಚತುಷ್ಪತ ರಸ್ತೆ ಕಾಂಕ್ರಟೀಕರಣ ಮತ್ತು ಅಬ್ಬಕ್ಕ ಸರ್ಕಲ್ ವಿಸ್ತರಣಾ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ತೊಕ್ಕೊಟ್ಟು-ಉಳ್ಳಾಲ ರಸ್ತೆಯ ಒಂದು ಭಾಗದ ಕಾಂಕ್ರೀಟಿಕರಣ ಪೂರ್ಣಗೊಂಡಿದ್ದು, ಇನ್ನೊಂದು ಭಾಗದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದೆ.ಆನಂತರ ಪಾದಚಾರಿಗಳಿಗೆ ಅನುಕೂಲವಾಗುವಂತೆ ನಡೆದುಕೊಂಡು ಹೋಗುವ ವ್ಯವಸ್ಥೆ ಮತ್ತು ಸಂಪೂರ್ಣ ವಿದ್ಯುದ್ದೀಕರಣ ನಡೆಸಲು 5 ಕೋಟಿ ರೂ ಅನುದಾನ ಮಂಜೂರಾಗಲಿದೆ. ಸೋಮೇಶ್ವರದಿಂದ ಮುಕ್ಕಚ್ಚೇರಿವರೆಗೆ ಸುಸಜ್ಜಿತ ರಸ್ತೆ, ಉಳ್ಳಾಲದ ನಗರಸಭೆ ಎದುರುಗಡೆಯಿಂದ ತೊಕ್ಕೊಟ್ಟು ಜಂಕ್ಷನ್ನಿನವರೆಗಿನ ರಸ್ತೆಯ ಕಾಂಕ್ರೀಟಿಕರಣ ನಡೆಸುವ ಮೂಲಕ ಅಭಿವೃದ್ಧಿಯ ಉಳ್ಳಾಲವನ್ನು ನಿರ್ಮಿಸಿ 5 ಕೋಟಿ ಅನುದಾನ ಬರುವಲ್ಲಿಗೆ 30…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹಳೆಕೋಟೆ: ಹಳೆಕೋಟೆಯ ಮಸ್ಜಿದ್ ಅಲ್-ಕರೀಂ ಮತ್ತು ಹಳೆ ವಿದ್ಯಾರ್ಥಿ ಸಂಘ ಹಾಗೂ ಮರ್ಖಲ್ ಇಸ್ಲಾಂ ಮದರಸ ಇದರ ಜಂಟಿ ಅಶ್ರಯದಲ್ಲಿ ಮೀಲಾದುನ್ನೆಬಿ ಕಾರ್ಯಕ್ರಮ ಮತ್ತು ಹಳೆ ವಿದ್ಯಾರ್ಥಿ ಸಂಘ 24ನೇ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಸೈಯದ್ ಮದನಿ ಉರ್ದು ಅನುದಾನಿ ಶಾಲಾ ವಠಾರದಲ್ಲಿ ನಡೆಯಿತು. ಸೂಲಗಿತ್ತಿ ಪರಮೇಶ್ವರಿ, ಸುಧೀರ್ಘ 15ವರ್ಷ ಸೇವೆಸಲ್ಲಿಸಿದ ಅದಂ ಮುಸ್ಲಿಯಾರ್, ಪ್ರಮಾಣಿಕ ಸೇವೆಗೈದ ಅಬ್ದುಲ್ ರಹ್ಮಾನ್ ಯು.ಎಚ್, ಗಾಯಕ ಬಾಲ ಪ್ರತಿಭೆ ಮಾಸ್ಟರ್ ಸಲ್ಮಾನ್ ಪಾರಿಶ್ ಈ ಸಂಧರ್ಭ ಸನ್ಮಾನಿಸಲಾಯಿತು. ಮಸ್ಜಿದ್ ಅಲ್-ಕರೀಂ ಖತೀಬ್ ಉಸ್ಮಾನ್ ಸಅದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಸ್ಜಿದ್ ಅಲ್-ಕರೀಂ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮೊಹಮ್ಮದ್ ತ್ವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹಳೆಕೋಟೆಯ ಸೈಯದ್ ಮದನಿ ಉರ್ದು ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ, ಮಸ್ಜಿದ್ ಅಲ್-ಕರೀಂ ಜುಮಾ ಮಸೀದಿಯ ಉಪಾಧ್ಯಕ್ಷ ಯು.ಎಚ್ ಝೈನುದ್ದೀನ್, ಉದ್ಯಮಿ ಹಮೀದ್ ಕಣ್ಣೂರು, ಮರ್ಖಲ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೆಳ್ಮ: ಸಚಿವ ಯು.ಟಿ ಖಾದರ್ ಅನುದಾನದಿಂದ ಬೆಳ್ಮ ಗ್ರಾಮದ ರೆಂಜಾಡಿ ಬಡಕಬೈಲ್‍ನ ರಸ್ತೆ ಶಿಲಾನ್ಯಾಸವನ್ನು ಬೆಳ್ಮ ಗ್ರಾ.ಪ ಅಧ್ಯಕ್ಷ ವಿಜಯ ಕೃಷ್ಣಪ್ಪರವರು ಶುಕ್ರವಾರ ನೆರವೇರಿಸಿದರು. ಜಿ.ಪಂ ಸದಸ್ಯ ಎನ್.ಎಸ್ ಕರೀಂ, ಬೆಳ್ಮ ಗ್ರಾ.ಪ ಉಪಾಧ್ಯಕ್ಷ ಸಿ.ಎಂ ಸತ್ತಾರ್, ಮಾಜಿ ಅಧ್ಯಕ್ಷ ಯಸೂಫ್ ಬಾವ, ಸದಸ್ಯರಾದ ಅಬ್ದುಲ್ ರಝಾಕ್ ಕನೆಕ್ಕೆರೆ, ಸತೀಶ್ ಕುಮಾರ್, ಭವಾನಿ, ಕಬೀರ್.ಡಿ, ಎಂ.ಎಂ ಅಬ್ದುಲ್ಲ, ಮುನ್ನೂರು ಗ್ರಾ.ಪ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ಮಾಜಿ ತಾಲೂಕು ಪ.ಸದಸ್ಯ ಸತ್ತಾರ್, ಸ್ಥಳೀಯರಾದ ಹುಸೈನ್ ಬಡಕಬೈಲ್, ಬಾವ, ರವೂಫ್ ರೆಂಜಾಡಿ, ಅಶ್ರಫ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ:  `ಸತ್ಯ ಮಾತನಾಡುತ್ತೇನೆ, ಅದಕ್ಕಾಗಿ ಯಾರೂ ನನ್ನನ್ನು ಕಾರ್ಯಕ್ರಮಕ್ಕೆ ಕರೆಯುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳುವ ಮೂಲಕ ನೆರೆದ ಕಾಂಗ್ರೆಸ್ ಕಾರ್ಯಕರ್ತರನ್ನು ಮುಜುಗರಕ್ಕೀಡು ಮಾಡಿರುವ ಸನ್ನಿವೇಶ ಅಸೈಗೋಳಿಯ ಅಭಯಾಶ್ರಮದಲ್ಲಿ  ಶುಕ್ರವಾರ ನಡೆಯಿತು. ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಹುಟ್ಟುಹಬ್ಬದ ಪ್ರಯುಕ್ತ ಅಸೈಗೋಳಿಯ ಅಭಯಾಶ್ರಮ ವಾಸಿಗಳಿಗೆ ಹಣ್ಣುಹಂಪಲು ವಿತರಿಸಿ ಮಾತನಾಡಿದ ಅವರು ಸಮಾಜದಲ್ಲಿ ಸತ್ಯ ಮಾತನಾಡಿದರೆ ಒಳಿತಾಗುವುದಿಲ್ಲ ಬದಲು ಅವರು ಮೂಲೆಗುಂಪಾಗುವುದರಲ್ಲಿ ಸಂದೇಹವಿಲ್ಲ ಎಂದರು. ಸೋತು ಸತ್ತಿದ್ದೇನೆ.  ಭಾಷಣದುದ್ದಕ್ಕೂ ಸತ್ಯವನ್ನೇ ಮಾತನಾಡುತ್ತೇನೆ. ಇದು ಪಕ್ಷದ ಕಾರ್ಯಕರ್ತರಿಗೆ ನೋವುಂಟು ಮಾಡುತ್ತದೆ.  ಬಳಿಕ ಅವರು ಹಿಂದೆಯಿಂದ ಬೈಯ್ಯುವುದೂ ಉಂಟು.  ವಿಧಾನಸಭೆಗೆ ಸಲ್ಲದವರು ಕಾರ್ಯಕ್ರಮಗಳಿಗೂ ಸಲ್ಲದಂತಾಗಿದೆ.  ಯಾವುದೇ ಕಾರ್ಯಕ್ರಮಕ್ಕೂ ನನ್ನನ್ನು ಕರೆಯುವುದನ್ನು ಬಿಟ್ಟಿದ್ದಾರೆ ಎಂದು ಹತಾಶೆ ವ್ಯಕ್ತಪಡಿಸಿದರು. ನದಿ ತಿರುವು ಬಗ್ಗೆ ಸ್ವರ ಎತ್ತಬೇಕಿತ್ತು : ಆಶ್ರಮ ವಾಸಿಗಳಿಗೆ ನೀರಿನ ವ್ಯವಸ್ಥೆಯಿಲ್ಲ. ಇದು ಬೇಸರದ ಸಂಗತಿ.  ಕೂಡಲೇ ಶಾಸಕರು ಹಾಗೂ ಸಚಿವರು ಕ್ರಮಕೈಗೊಂಡು ಸೂಕ್ತ ವ್ಯವಸ್ಥೆಯನ್ನು …

Read More

ಉಳ್ಳಾಲ್  ನ್ಯೂಸ್ ನೆಟ್ ವರ್ಕ್ ತಲಪಾಡಿ: ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ತಲಪಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಆಯ್ಕೆಯಾಗಿದ್ದಾರೆ. ಬಿಜೆಪಿಯ ಹಿರಿಯ ಮುಖಂಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನಯ ನಾೈಕ್ ಅವರ ಮನೆಯ ವಠಾರದಲ್ಲಿ ಬಿಜೆಪಿ ತಲಪಾಡಿ ಗ್ರಾಮ ಸಮಿತಿ ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಪ್ರ. ಕಾರ್ಯದರ್ಶಿಯಾಗಿ ರಾಜೀವ ದೇವಾಡಿಗ ದೇವಿಪುರ, ಉಪಾಧ್ಯಕ್ಷರಾಗಿ ಸಂತೋಷ್ ಕಡೇಮುಗೇರು, ಸೌಮ್ಯ ಗುಡ್ಡೆಮನೆ, ಕಾರ್ಯದರ್ಶಿಗಳಾಗಿ ರಾಜೇಶ್ ಗುಡ್ಡೆಮನೆ, ಫಯಾಝ್ ದೇವಿನಗರ, ಹಾಗೂ 10 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಪಕ್ಷ ಸಂಘಟನೆಯ ಕುರಿತು ಮಾಹಿತಿ ನೀಡಿದರು. ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಕ್ಷೇತ್ರ ಪ್ರ. ಕಾರ್ಯದರ್ಶಿ ಸಂಜೀವ ಶೆಟ್ಟಿ ಅಂಬ್ಲಮೊಗರು ಉಪಸ್ಥಿತರಿದ್ದರು. ಕ್ಷೇತ್ರ ಪ್ರ. ಕಾರ್ಯದರ್ಶಿ ಯಶವಂತ್ ಅಮೀನ್ ಹೊಸ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಿಕೊಟ್ಟರು. ಚುನಾವಣಾ ಪ್ರಮುಖರಾಗಿ ಸುರೇಂದ್ರ ಶೆಟ್ಟಿ ಹಾಗೂ ಬಾಲಕೃಷ್ಣ ಭಾಗವಹಿಸಿದ್ದರು.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬಂಟ್ವಾಳ: ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮಂಗಳೂರು ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಯ ವಿದ್ಯಾರ್ಥಿಗಳ ವತಿಯಿಂದ  ಬಂಟ್ವಾಳದ ತೆಂಕಕಜೆಕಾರು  ಕರ್ಲ ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರದಿಂದ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರ 2015-16 ರಲ್ಲಿ ಮಂಗಳವಾರ ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನದಲ್ಲಿ ನಡೆದ ಬೆಳಕಿನ ಹಬ್ಬ-ಆಧ್ಯಾತ್ಮದ ಪರಿಕಲ್ಪನೆ ಕಾರ್ಯಕ್ರಮ ಗಮನ ಸೆಳೆಯಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ:ಗ್ರಾಮಾಂತರ ಪ್ರದೇಶದ ಜನರಿಗೆ ಪ್ರಯಾಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ನರ್ಮ್ ಆಶ್ರಯದಲ್ಲಿ ನಗರದಿಂದ ೨೦ಕಿಮೀ ಪರಿಧಿಯಲ್ಲಿ ಸಂಚರಿಸಲು ೩೫ ಬಸ್ಸುಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು ಇದೀಗ ಈ ಯೋಜನೆಯಡಿಯಲ್ಲಿ ಮುಡಿಪುಗೆ ಹೊಸ ಬಸ್ಸು ಸಂಚಾರ ಶುರುವಾಗುವ ಮೂಲಕ ಮುಡಿಪು ಜನತೆಯ ಕನಸು ನನಸಾಗಿದೆ. ಸ್ಟೇಟ್ ಬ್ಯಾಂಕಿನಿಂದ ತೊಕ್ಕೊಟ್ಟು, ಕುತ್ತಾರು, ದೇರಳಕಟ್ಟೆಯ ಮೂಲಕ ಸಾಗುವ ಈ ಬಸ್ ಗೆ ಸತೀಶ್ ಶೆಟ್ಟಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಜಗದೀಶ್ ಆಳ್ವ, ದೇವದಾಸ್ ಆಳ್ವ, ವಿಠಲ ಶೆಟ್ಟಿ, ಹೆಚ್. ಕೆ. ಮುಡಿಪು ಭಾಗವಹಿಸಿದ್ದರು. ಹೋರಾಟಗಾರರಾದ ಇಸ್ಮಾಯಿಲ್ ಮುಡಿಪು, ಜಗದೀಶ್ ಎಂ, ಅಬ್ಬು ಎಜ್.ಕೆ.ಜೆ.ಉಮ್ಮರ್ ಲೈನ್ ಮೆನ್, ಸಿದ್ದಿಕ್ ಬೋಲೆರೋ,ಮತ್ತು ಮುಡಿಪಿನ ನಾಗರೀಕರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು:ಯುವಕರು ತಮ್ಮ ಬಿಡುವಿನ ಸಮಯದಲ್ಲಿ ಆಧ್ಯಾತ್ಮ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿದಲ್ಲಿ ದುಷ್ಟಟ ಮತ್ತು ಸಮಾಜದ್ರೋಹಿ ಚಟುವಟಿಕೆಗಳಿಂದ ದೂರವಿರಲು ಸಾಧ್ಯ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಅಭಿಪ್ರಾಯ ಪಟ್ಟರು . ತೊಕ್ಕೊಟ್ಟು ಕಾಪಿಕಾಡು ಗಾಂಧಿನಗರದ ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿಯ ನಲ್ವತ್ತೊಂದನೇ ವಾರ್ಷಿಕ ಭಜನಾ ಮಂಗಳೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು .ಭಜನಾ ಮಂಗಳೋತ್ಸವವು ಊರಿನಲ್ಲಿ ಪರಸ್ಪರ ಒಗ್ಗಟ್ಟು ಮತ್ತು ಸಾಮರಸ್ಯತೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ .ಒಬ್ಬರಿಗೊಬ್ಬರು ಮುನಿಸಿಕೊಂಡವರು ಪರಸ್ಪರ ಕ್ಷಮಿಸಿ ಮತ್ತೆ ಸಹಬಾಳ್ವೆ ನಡೆಸಲು ಸೇತುವಾಗುತ್ತದೆ .ಮುಖ್ಯವಾಗಿ ಹದಿಹರೆಯದ ಯುವಕರು ಇಂದಿನ ದಿವಸಗಳಲ್ಲಿ ಕಾಲಹರಣಕ್ಕೆಂದು ದುಷ್ಟಟಗಳಿಗೆ ಬಲಿಯಾಗಿ ,ಕೊನೆಗೆ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಮಾಜಕ್ಕೆ ಮಾರಕವಾಗುತ್ತಿದ್ದಾರೆ.ಯುವಕರು ಕಲಿಕೆಯ ಜೊತೆಗೆ ತಮ್ಮನ್ನು ಆಧ್ಯಾತ್ಮದೆಡೆ ತೊಡಗಿಸಿಕೊಂಡಾಗ ಸಮಾಜದಲ್ಲಿ ಅವರು ಉತ್ತಮ ಪ್ರಜೆಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಹೇಳಿದರು . ಅವರು ಧಾರ್ಮಿಕ ಉಪನ್ಯಾಸ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಕಾಪಿಕಾಡು ಗಾಂಧಿನಗರದ ಶ್ರೀ ಸ್ವಾಮೀ ಈಶ್ವರಾನಂದ ಭಜನಾ ಮಂದಿರದ ನಲ್ವತ್ತೊಂದನೇ ವಾರ್ಷಿಕ ಭಜನಾ ಮಂಗಳೋತ್ಸವಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು . ಮಾಡೂರು ಭಗವತಿ ಕ್ಷೇತ್ರದ ಕೋಶಾಧಿಕಾರಿ ಭಾಸ್ಕರ ಟಿ , ಭಜನಾ ಮಂದಿರದ ಅಧ್ಯಕ್ಷ ಯು.ಹರಿಶ್ಚಂದ್ರ ,ಕಾರ್ಯದರ್ಶಿ ವಿಶ್ವೇಶ್ವರಯ್ಯ ಉಳ್ಳಾಲ್ , ಪದಾಧಿಕಾರಿಗಳಾದ ಸುನೀಲ್ ಉಳ್ಳಾಲ್ , ದೇವದಾಸ್ , ಶ್ರೀಧರ್ ಉಳ್ಳಾಲ್ , ಜಯರಾಜ್ ,ಅರ್ಚಕರಾದ ಯು ಶೇಷಪ್ಪ , ಯಾದವ , ಸೀತಾರಾಮ ಮೊದಲಾದವರು ಉಪಸ್ಥಿತರಿದ್ದರು .

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಇನೋವಾ ಮತ್ತು ಬೈಕ್ ಬೆಂಕಿಗೆ ಆಹುತಿಯಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಮದಕ ಎಂಬಲ್ಲಿ ಸೋಮವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಪೆಟ್ರೋಲ್ ಕಳವು ನಡೆಸಲು ಬಂದವರಿಂದ ಕೃತ್ಯ ನಡೆದಿದೆ ಅನ್ನುವ ಸಂಶಯದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮದಕ ನಿವಾಸಿ ಜಬ್ಬಾರ್ ಎಂಬವರಿಗೆ ಸೇರಿದ ಕಾರು ಮತ್ತು ಬೈಕ್ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲೆ ಮನೆಗೂ ಆವರಿಸಿ ಗೋಡೆಯೂ ಬಿರುಕು ಬಿಟ್ಟಿದೆ. ಘಟನೆಯಿಂದ ರೂ.10 ಲಕ್ಷ ನಷ್ಟ ಉಂಟಾಗಿದೆ. ಸೋಮವಾರ ರಾತ್ರಿ ಮನೆಮಂದಿ ಮಲಗಿದ ಬಳಿಕ ಸುಮಾರು 1.30ರ ವೇಳೆ ಕೃತ್ಯ ನಡೆದಿದೆ. ಬೆಂಕಿ ಉರಿಯುತ್ತಿರುವುದನ್ನು ನೆರೆಮನೆಯ ಬಾಲಕನೋರ್ವ ಗಮನಿಸಿ ಬೊಬ್ಬೆ ಹಾಕಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಮನೆಮಂದಿ ಹಾಗೂ ಸ್ಥಳೀಯರು ಸೇರಿ ಮನೆಗೂ ತಗಲುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ. ಪೆಟ್ರೋಲ್ ಕಳ್ಳರ ಕೃತ್ಯ : ಈ ಭಾಗದಲ್ಲಿ ರಾತ್ರಿ ವೇಳೆ ಪೆಟ್ರೋಲ್ ಕಳ್ಳರ ಜಾಲ…

Read More