Author: UllalaVani

Kannada News From Coastal Karnataka

UN NETWORKS ಮುಡಿಪು: ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದಲ್ಲಿ ವಾಹನ -ಯಂತ್ರೋಪಕರಣ ಪವಿತ್ರೀಕರಣ ಕಾರ್ಯಕ್ರಮವನ್ನು ಸಪ್ಟೆಂಬರ್ 29 ರಂದು ಏರ್ಪಡಿಸಲಾಗಿತ್ತು. ಪವಿತ್ರ ಪರಮ ಪ್ರಸಾದದ ಆರಾಧನೆ ಮತ್ತು ಪವಿತ್ರ ಬಲಿ ಪೂಜೆಯ ಸಮಯದಲ್ಲಿ ವಾಹನ ಚಾಲಕ ಮಾಲೀಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಾಡಂತ್ಯಾರ್ ಚರ್ಚ್ ಸಹಾಯಕ ಧರ್ಮಗುರುಗಳು ವಂ. ಆಲ್ವಿನ್ ಡಿಸೋಜ ರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಮುಡಿಪು ಚರ್ಚ್’ನ ಧರ್ಮಗುರುಗಳಾದ ವಂ. ಬೆಂಜಮಿನ್ ಪಿಂಟೊ ರವರು ಪ್ರಯಾಣಿಕರಿಗೋಸ್ಕರ ಪ್ರಾರ್ಥನೆ ನಡೆಸಿ ನೆರೆದ ಭಕ್ತರನ್ನು ಮತ್ತು ಅಸಂಖ್ಯ ವಾಹನಗಳನ್ನು ಪವಿತ್ರಜಲದಿಂದ ಪವಿತ್ರೀಕರಿಸಿದರು. ಇತರ ಧರ್ಮಗುರುಗಳು ಮತ್ತು ಸಹಸ್ರಾರು ಭಕ್ತರು ಹಾಜರಿದ್ದರು.

Read More

UN NETWORKS ಮಂಜನಾಡಿ: ಯಾವ ಭಾಷೆ ಮೇಲೂ ಅಲ್ಲ, ಕೀಳೂ ಅಲ್ಲ. ತುಳುನಾಡಿನ ಮಣ್ಣಿನಲ್ಲಿ ಹುಟ್ಟಿ ಬೆಳೆದ ಬ್ಯಾರಿ ಭಾಷೆ ಕೂಡ ಇತರ ಯಾವ ಭಾಷೆಗೂ ಕಡಿಮೆ ಏನೂ ಅಲ್ಲ. ಹಾಗಾಗಿ ಕನ್ನಡ ಮತ್ತಿತರ ಭಾಷೆಯ ಜೊತೆಗೆ ಬ್ಯಾರಿ ಭಾಷೆಯಲ್ಲೂ ಸಾಹಿತ್ಯ ಕೃಷಿ ಮಾಡಿ ಎಂದು `ಮೇಲ್ತೆನೆ’ ಸಂಘಟನೆಯ ಅಧ್ಯಕ್ಷ ಆಲಿಕುಂಞ ಪಾರೆ ಹೇಳಿದರು. ಮಂಜನಾಡಿ ಗ್ರಾಮದ ಕಲ್ಕಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ಉಳ್ಳಾಲ ಅಳೇಕಲದ ಸೈಯದ್ ಮದನಿ ಪಿಯು ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ಶಿಬಿರದಲ್ಲಿ `ಮೇಲ್ತೆನೆ’ ಸಂಘಟನೆಯ ವತಿಯಿಂದ ಶನಿವಾರ ನಡೆದ `ಬ್ಯಾರಿ ಕವಿಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಹಿತ್ಯವು ಸುಳ್ಳಿನ ಮೇಲೆ ನಿಲ್ಲದೆ ಸತ್ಯದ ಪರದೆಯ ಮೇಲೆಯೇ ರಚನೆಗೊಳ್ಳಲಿ. ಬರೆಯುವ ತುಡಿತದೊಂದಿಗೆ ಸಾಹಿತ್ಯ ಕೃಷಿ ಮಾಡಿದರೆ ಅದು ಸಾಕಷ್ಟು ಬಲಿಷ್ಠಗೊಳ್ಳಲಿದೆ. ಬ್ಯಾರಿ ಭಾಷೆಯ ಅವನತಿಯಲ್ಲಿಲ್ಲ. ಅದಕ್ಕೂ ಉಜ್ವಲ ಭವಿಷ್ಯವಿದೆ ಎಂಬ ವಿಶ್ವಾಸದೊಂದಿಗೆ ಬ್ಯಾರಿ ಭಾಷೆಯಲ್ಲಿ ಬರೆಯಲು ಮುಂದಾಗಬೇಕು ಎಂದು ಆಲಿಕುಂಞ ಪಾರೆ ನುಡಿದರು. ಯುವ ಲೇಖಕ ಇಸ್ಮತ್ ಪಜೀರ್…

Read More

UN NETWORKS ತೊಕ್ಕೊಟ್ಟು: ತೊಕ್ಕೊಟಿನ ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ವಾರ್ಷಿಕ ಮಹಾಸಭೆಯು ಮತ್ತು ಗುರುಜಯಂತಿ ಆಚರಣೆ ಭಾನುವಾರದಂದು ತೊಕ್ಕೊಟಿನ ವೇದಿಕೆ ಕಛೇರಿಯಲ್ಲಿ ಕೆ.ಟಿ.ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಾಡೂರು ಸಾಯಿ ಮಂದಿರದ ಆಡಳಿತ ಮೋಕ್ತೆಸರರಾದ ಕೆ.ಪಿ.ಸುರೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆ ಮಾಜಿ ಅಧ್ಯಕ್ಷ ರಾದ ಆನಂದ್ ಕೆ.ಅಸೈಗೋಳಿ ಗುರು ಸಂದೇಶ ನೀಡಿದರು. ಬಳಿಕ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಈ ಸಂಧರ್ಬದಲ್ಲಿ ಪಡುಮಲೆ ದೇಯಿ ಬೈದೆದಿ ಪ್ರತಿಮೆ ಅವಮಾನಿಸಿದ ದುರುಳರ ಕೃತ್ಯವನ್ನು ಖಂಡಿಸಿ, ಇತರ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಲಾಯಿತು.ವೇದಿಕೆಯ ಪ್ರಮುಖರಾದ ಸತೀಶ್ ಕರ್ಕೇರ,ಜೀವನ್ ಕುಮಾರ್, ಗೋಪಿನಾಥ್ ಬಗಂಬಿಲ, ಹರೀಶ್ ಅಂಬ್ಲಮೊಗರು, ಲಕ್ಷ್ಮಣ ಪೂಜಾರಿ,ಹರೀಶ್ ಮುಂಡೋಳಿ , ರಾಜೇಶ್ ಕೆರೆಬೈಲ್, ಉಪಸ್ಥಿತರಿದ್ದರು.

Read More

UN NETWORKS ಕೊಲ್ಯ: ಸೋಮೇಶ್ವರ ಕೊಲ್ಯದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಚರಿಸುವ 36 ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಸೆ.28 ರಂದು ವಿಗ್ರಹ ಪ್ರತಿಷ್ಠೆಯಿಂದ ಆರಂಭಗೊಂಡು ಅ.1 ರಂದು ಸಂಜೆ 8 ಕ್ಕೆ ಶೋಭಾಯಾತ್ರೆ ನಡೆದು ಜಲಸ್ಥಂಭನಗೊಳ್ಳಲಿದೆ ಎಂದು ಉತ್ಸವ ಸಮಿತಿಯ ಗೌರವ ಸಲಹೆಗಾರ ತೋನ್ಸೆ ಪುಷ್ಕಳ್ ಕುಮಾರ್ ಹೇಳಿದ್ದಾರೆ. ಕೊಲ್ಯ ಶ್ರೀ ಶಾರದಾ ಸಭಾ ಸದನದಲ್ಲಿ ಮಂಗಳವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸೋಮೇಶ್ವರದ ಮದ್ವೇಶರ್ ಭಟ್ ಇವರ ನೇತೃತ್ವದಲ್ಲಿ ಬೆಳಿಗ್ಗೆ 9.15ಕ್ಕೆ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ನಡೆಯಲಿದೆ.  ಸೆ. 28 ರಂದು 11.00ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಶೆಡ್ಡೆ ಮಂಜುನಾಥ ಭಂಡಾರಿ ವಹಿಸಲಿದ್ದು, ಚಾರ್ಟೆಡ್ ಅಕೌಂಟೆಂಟ್ ಎಸ್ ಎಸ್ ನಾಯಕ್ ಉದ್ಘಾಟಿಸಲಿದ್ದಾರೆ. ವಿಟ್ಲ ಹಿಂದು ಜಾಗರಣ ವೇದಿಕೆ ಸಂಚಾಲಕ ಕೆದಿಲ ಬಾ.ಗಣರಾಜ್ ಭಟ್ ರಿಂದ ಧಾರ್ಮಿಕ ಉಪನ್ಯಾಸ ಹಾಘೂ ಸೋಮನಾಥ ದೇವಸ್ಥಾನದ ವ್ಯವಸ್ಥಾಪನ…

Read More

UN NETWORKS ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳೂರು ಝೋನ್ ಮಟ್ಟದ ಅಂತರ್‍ಕಾಲೇಜು ಫುಟ್ ಬಾಲ್ ಪಂದ್ಯಾಟದಲ್ಲಿ ಉಳ್ಳಾಲ ಒಂಭತ್ತುಕೆರೆಯ ಮೆರೇಡಿಯನ್ ಕಾಲೇಜಿನ ತಂಡ ಮಡಿಕೇರಿ ತಂಡವನ್ನು 4-0 ಗೋಲ್ ಸಾಧಿಸುವುದರ ಮೂಲಕ ಚಾಂಪಿಯನ್‍ಶಿಪ್ ಪಡೆದುಕೊಂಡಿದೆ. 

Read More

UN NETWORKS ತಲಪಾಡಿ: ಮೈಸೂರಿನಲ್ಲಿ ನಡೆಯಲಿರುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷರಾಗಿ ಚಿಂತಕ, ಸಾಹಿತಿ ಪ್ರೋ. .ಚಂದ್ರಶೇಖರ್ ಪಾಟೀಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದರು. ಮಂಗಳೂರು ಸಮೀಪದ ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ಸೋಮವಾರ ನಡೆದ ಕನ್ನಡ ಸಾಹಿತ್ಯ ಪರಿಷತ್‍ನ 101ನೇ ವಾರ್ಷಿಕ ಮಹಾಅ„ವೇಶನದಲ್ಲಿ ನಿರ್ಣಯ ಪಡೆದುಕೊಳ್ಳಲಾಗಿದೆ ಎಂದು ನುಡಿದರು. ಮೈಸೂರಿನಲ್ಲಿ ನ. 24,25 ಹಾಗೂ 26 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದ್ದು, ಅಧ್ಯಕ್ಷರಾಗಿ ರಾಜ್ಯ ಹಾಗೂ ಹೊರಭಾಗದಲ್ಲಿ ಕನ್ನಡ ಸಾಹಿತ್ಯದ ಕಂಪನ್ನು ಪಸರಿಸಿದ ಹಾಗೂ ಹೋರಾಟ ನಡೆಸಿದ ಪ್ರೋ .ಚಂದ್ರಶೇಖರ ಪಾಟೀಲ (ಚಂಪ) ಅವರನ್ನು ಆಯ್ಕೆ ಮಂಡಳಿ ನಿರ್ಧರಿಸಿದೆ. ಸಮ್ಮೇಳನ ಅಧ್ಯಕ್ಷರ ಪಟ್ಟಿಯಲ್ಲಿ ಧಾರವಾಡದ ಡಾ. ವೀಣಾ ಶಾಂತೇಶ್ವರ್ , ಮೈಸೂರಿನ ಡಾ. ಲತಾ ರಾಜಶೇಖರ್, ಮಂಗಳೂರಿನ ಸಾರಾ ಅಬೂಬಕರ್ ಮತ್ತು ಉತ್ತರಕನ್ನಡದ ಡಾ.ಎನ್. ಆರ್. ನಾಯಕ್ ಹೆಸರು ಪ್ರಸ್ತಾವನೆಯಲ್ಲಿತ್ತು…

Read More

UN NETWORKS ಮುಂಬಯಿ: ಸಂಘ ಒಬ್ಬನಿಗಾಗಿ ಅಲ್ಲ. ಎಲ್ಲಾ ಸದಸ್ಯರು ಪ್ರಯೋಜನ ಪಡೆದಾಗಲೇ ಸಂಘದ ಸೇವೆ ಫಲಪ್ರ ದವಾಗುವುದು. ಈ ಸಂಸ್ಥೆಯ ಮೂಲಕ ನಾವು ಸೇವೆಯನ್ನೀಡಲು ಸಾಧ್ಯವಾದಷ್ಟು ಶ್ರಮ ಮಾಡಿದ್ದೇವೆ, ಮಾಡುತ್ತಿದ್ದೇವೆ ಮುಂದೆಯೂ ಮಾಡುತ್ತೇವೆ. ಇವರೆಗೂ ಸಂಘವನ್ನು ಸಂವಿಧಾನ ಬದ್ಧವಾಗಿ ಮುನ್ನಡೆಸಿದ್ದು, ಭವಿಷ್ಯತ್ತಿನಲ್ಲೂ ಪ್ರಾಮಾಣಿಕವಾಗಿ ಸಂಘವನ್ನು ಪ್ರಗತಿಪರತೆಯತ್ತ ಒಯ್ಯುತ್ತೇವೆ. ಸಂಘದ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡಬಾರದು. ಲೋಪದೋಷ ಅಥವಾ ಒಳ್ಳೆದಿದ್ದರೂ ಖುದ್ದಾಗಿ ತಿಳಿಸಿ ಇಲ್ಲವೇ ಸುಮ್ಮಗಿರಿ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ನುಡಿದರು. ಇಂದಿಲ್ಲಿ ಭಾನುವಾರ ಪೂರ್ವಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ಅನೆಕ್ಸ್ ಕಟ್ಟಡದಲ್ಲಿನ ವಿಜಯಲಕ್ಷೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘದ ಒಂಬತ್ತನೇ (9) ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಪಾಲೆತ್ತಾಡಿ ಮಾತನಾಡಿದರು. ಸದಸ್ಯರ ಸಕ್ರೀಯತೆಯಿಂದಲೇ ಸಂಘದ ಸಧೃಡತೆ ಸಾಧ್ಯ. ಆದುದರಿಂದ ಸದಸ್ಯರಲ್ಲಿ ಸದ್ಧರ್ಮತೆ ಅವಶ್ಯಕತೆವಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಒಮ್ಮಸ್ಸಿನಿಂದ ಮುನ್ನಡೆಸೋಣ ಎಂದೂ ಪಾಲೆತ್ತಾಡಿ ಕರೆಯಿತ್ತರು. ವೇದಿಕೆಯಲ್ಲಿ…

Read More

UN NETWORKS ಕೊಣಾಜೆ: ಪರಧರ್ಮಗಳನ್ನು, ಪರಧರ್ಮ ವಿಚಾರಗಳನ್ನು ಗೌರವಿಸುವ ಕೆಲಸ ನಮ್ಮದಾಗಬೇಕು ಎಂಬುದನ್ನು ಕವಿರಾಜಮಾರ್ಗದಲ್ಲಿ ಕವಿ ಅಂದಿನ ಕಾಲದಲ್ಲಿಯೇ ಉಲ್ಲೇಖಿಸಿದ್ದನು. ಆದರೆ ಇಂದು ಪರಧರ್ಮಗಳನ್ನು, ವಿಚಾರಗಳನ್ನು ಗೌರವಿಸುವುದು ಬಿಡಿ ಅದಕ್ಕೆ ವಿರುದ್ದವಾಗಿಯೇ ಇಂದು ನಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಡಾ.ಮನು ಬಳಿಗಾರ್ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಆಶ್ರಯದಲ್ಲಿ `ಕನ್ನಡ ಸಂಶೋಧನೆ: ಕನ್ನಡ ಜಗತ್ತು’ ಎಂಬ ವಿಷಯದಲ್ಲಿ ನಾಲ್ಕು ದಿನಗಳ ರಾಜ್ಯಮಟ್ಟದ ಸಂಶೋಧನಾ ಕಮ್ಮಟವನ್ನು ಸೋಮವಾರದಂದು ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಆರೋಗ್ಯಕರ ಮನಸ್ಸು, ಉತ್ತಮ ವೈಚಾರಿಕ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳುವುದರಿಂದ ಉತ್ತಮ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಖಂಡಿತಾ ಸಾಧ್ಯವಿದೆ. ಸಂಶೋಧನಾ ಕ್ಷೇತ್ರದಲ್ಲಿ ನಾವು ಯಾವತ್ತೂ ನೈಜತೆಯ ವಿಷಯಗಳಿಗೆ ಒತ್ತುಕೊಡಬೇಕಾಗಿದೆ. ಆದರೆ ಇತ್ತೀಚೆಗೆ ಸಂಶೋಧನೆಗಳಲ್ಲಿ ನೈಜ…

Read More

UN NETWORKS ಮೋಂಟುಗೋಳಿ: ಹತ್ತು ದಿನಗಳಲ್ಲಿ ಸರಕಾರಿ ಬಸ್ಸು ಬಾರದೇ ಇದ್ದಲ್ಲಿ ಒಂದು ದಿನ ಮೋಂಟುಗೋಳಿ ನಾಟೆಕಲ್ ನಡುವಿನ ಬಸ್ ಬಂದ್ ನಡೆಸಿ ಉಗ್ರ ರೀತಿಯಲ್ಲಿ ಪ್ರತಿಭಟಿಸುವುದಾಗಿ ಡಿವೈಎಫ್ ಐಟಿ ಮೋಂಟುಗೋಳಿ ಘಟಕದ ಅಧ್ಯಕ್ಷ ರಝಾಕ್ ಮೊಂಟೆಪದವು ಎಚ್ಚರಿಸಿದ್ದಾರೆ. ಮೋಂಟುಗೋಳಿ ಸಮೀಪ ಸರಕಾರಿ ಬಸ್ಸಿಗೆ ಒತ್ತಾಯಿಸಿ ಸೋಮವಾರ ಡಿವೈ ಎಫ್ ಐ ಆಯೋಜಿಸಿದ್ದ ಪ್ರತಿಬಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಆರ್ ಟಿ ಓ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂಧನೆಯಿಲ್ಲ. ಅಧಿಕಾರಿಗಳು ಬಸ್ಸು ಮಾಲೀಕರ ಸೂಟ್ ಕೇಸ್ ಪಡೆದುಕೊಂಡು ಬಸ್ಸು ಹಾಕಲು ಮುಂದಾಗುತ್ತಿಲ್ಲ. ಖಾಸಗಿ ಬಸ್ಸಿನಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಸುತ್ತಾರೆ, ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗಿ ಬಿದ್ದು ಜೀವಹಾನಿಯಾಗುತ್ತಿದೆ. ಚಿಲ್ಲರೆ ನೆಪದಲ್ಲಿ ಗಲಾಟೆಗಿಳಿಯುವ ಬಸ್ಸು ಸಿಬ್ಬಂದಿ ವರ್ತನೆಯೂ ಸಹಿಸಲು ಅಸಾಧ್ಯ. ಅಲ್ಲದೆ ಮದುವೆ ಟ್ರಿಪ್ ಗಳಿಗೆ ಬಸ್ಸುಗಳು ತೆರಳುವುದರಿಂದ ಜನ ಪರದಾಡಬೇಕಾದ ಸ್ಥಿತಿಯಿದೆ ಎಂದ ಅವರು 10 ದಿನಗಳಲ್ಲಿ ಬಸ್ಸು ಬಾರದೇ ಇದ್ದಲ್ಲಿ ಬಂದ್ ನಡೆಸಿ ಪ್ರತಿಭಟಿಸುವ ಎಚ್ಚರಿಕೆ…

Read More

UN NETWORKS ಉಳ್ಳಾಲ: ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ದರದೊಂದಿಗೆ ಔಷಧಿ ಸಿಗುವಂತೆ ರಾಜ್ಯ ಮತ್ತು ಕೇಂದ್ರ ಡ್ರಗ್ ಕಂಟ್ರೋಲ್ ಇಲಾಖೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಮಂಗಳೂರು 1 ಇದರ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ರಮಾಕಾಂತ್ ಕುಂಟೆ ಅಭಿಪ್ರಾಯಪಟ್ಟರು. ಅವರು ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್ ವಿಭಾಗ ಸೋಮವಾರ ಪಾನೀರು ವಿನಿಂದ ನಿಟ್ಟೆ ಆಸ್ಪತ್ರೆ ವರೆಗೆ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾ ಹಾಗೂ ಕ್ಷೇಮ ಆಡಿಟೋರಿಯಂನಲ್ಲಿ ಆಯೋಜಿಸಲಾದ ವಿಶ್ವ ಫಾರ್ಮಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಹೆಚ್ಚು ಮೂರು ಡ್ರಗ್ ಟೆಸ್ಟಿಂಗ್ ಲ್ಯಾಬ್ ಗಳನ್ನು ತೆರೆಯಲಾಗಿದ್ದು, ಈ ಮೂಲಕ ನಕಲಿ ಔಷಧಿಗಳ ಪತ್ತೆಹಚ್ಚುವಿಕೆ ಕಾರ್ಯಕ್ಕೆ ಸಹಕಾರಿಯಾಗಿದೆ. ರಕ್ತದ ವಿಚಾರದಲ್ಲೂ ಹಲವು ರೀತಿಯಲ್ಲಿ ಆಗುತ್ತಿರುವ ತೊಂದರೆಗಳನ್ನು ಇಲಾಖೆ ಮೂಲಕ ಪತ್ತೆಹಚ್ಚಲಾಗುತ್ತಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು 2 ರ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಶಂಕರ…

Read More