Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಮಂಗಳೂರಿನ ಪ್ರತಿಷ್ಠಿತ ಫ್ರೈಡ್ ಡೆವಲಪರ್ಸ್‍ನಿಂದ ದೇರಳಕಟ್ಟೆ ನಿತ್ಯಾನಂದ ನಗರದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಎದುರು ನೂತನವಾಗಿ ನಿರ್ಮಾಣಗೊಂಡಿರುವ `ಜಾಸ್ಮಿನ್ ಫ್ರೈಡ್’ ವಸತಿ ಸಮುಚ್ಛಯ ಉದ್ಘಾಟನೆಗೊಂಡಿತು,ನೂತನ ವಸತಿ ಸಮುಚ್ಚಯಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ದಕ್ಷಿಣ ಕನ್ನಡ ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ ಮಾತನಾಡಿ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಮಂಗಳೂರಿನ ಹೊರ ವಲಯಗಳು ವಸತಿ ಸಮುಚ್ಚಯ ನಿರ್ಮಾಣಕ್ಕೆ ಪೂರಕವಾಗಿದ್ದು, ದೇರಳಕಟ್ಟೆಯಂತಹ ಆರೋಗ್ಯ ಶಿಕ್ಷಣ ಕ್ಷೇತ್ರದ ಪಕ್ಕ ನಿರ್ಮಾಣಗೊಂಡಿರುವ ಈ ವಸತಿ ಸಮುಚ್ಚಯಕ್ಕೆ ಉತ್ತಮ ಬೇಡಿಕೆಯಿದೆ. ಮಂಗಳೂರು ಸೇರಿದಂತೆ ನಗರದ ಹೊರವಲಯಗಳು ಪ್ರವಾಸೋಧ್ಯಮ ಕ್ಷೇತ್ರವಾಗಿ ಆಬಿವೃದ್ಧಿ ಹೊಂದುತ್ತಿದ್ದು, ಮೂಲಭೂತ ಸೌಕರ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು. ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ. ರಶೀದ್ ಮಾತನಾಡಿ ಸರಕಾರದ ಹೊಸ ಹೊಸ ಕಾನೂನುಗಳಿಂದ ಮುಂದಿನ ದಿನಗಳಲ್ಲಿ ವಸತಿ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮಂಜೇಶ್ವರ: ಇಲ್ಲಿನ ತಾಲೂಕು ಬಸ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ ನಿನ್ನೆ ಹೊಸಂಗಡಿಯ ಹಿಲ್‍ಸೈಡ್ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಬಿ. ಸುಬ್ಬಣ್ನ ಆಳ್ವ ಮೀಯಪದವು ವಹಿಸಿದ್ದರು. ಸಭೆಯನ್ನು ಕಾಸರಗೋಡು ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಗಿರೀಶ್ ಕೆ. ಉದ್ಘಾಟಿಸಿದರು. ವೇದಿಕೆಯಲ್ಲಿ ಕಾಸರಗೋಡು ಜಿಲ್ಲಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್ ಉಪಾಧ್ಯಕ್ಷ ಪಿ.ಎ. ಮೊಹಮ್ಮದ್ ಕುಂಞï, ಕಾಸರಗೋಡು ತಾಲೂಕು ಬಸ್ ಮಾಲಕರ ಸಂಘದ ಅಧ್ಯಕ್ಷ ಎನ್.ಎಂ. ಹಸೈನಾರ್, ಉಪಾಧ್ಯಕ್ಷ, ಎಂ.ಎ ಅಬ್ದುಲ್ಲ ಕಾಸರಗೋಡು ತಾಲೂಕು ಬಸ್ ಮಾಲಕರ ಸಹಕಾರಿ ಸಂಘದ ಕಾರ್ಯದರ್ಶಿ ತಂಬನ್ ನಾಯರ್ ಕೆ.ಕೆ ಉಪಸ್ಥಿತರಿದ್ದು ಮಾತನಾಡಿದರು. ವಾರ್ಷಿಕ ವರದಿ ಲೆಕ್ಕ ಪತ್ರವನ್ನು ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಭಟ್ ಅರಂತಾಡಿ ವಾಚಿಸಿದರು ಬಳಿಕ 2017 – 2020ರವರೆಗಿನ ಸಾಲಿನ ಮಂಜೇಶ್ವರ ತಾಲೂಕು ಬಸ್ ಮಾಲಕರ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಅಪನಂಬಿಕೆ ಮತ್ತು ವದಂತಿಗಳಿಂದ ನಾಡಿನ ಸ್ವಾಸ್ಥ್ಯ ಕ್ಕೆ ಮಾರಕವಾಗ ಬಹುದಾದ ಪಜೀರ್ ನಿವಾಸಿ ಕಾರ್ತಿಕ್ ರಾಜ್ ಕೊಲೆ ಪ್ರಕರಣವನ್ನು ಜವಾಬ್ದಾರಿ ಹೊತ್ತ ಹದಿನೈದೇ ದಿನಗಳಲ್ಲಿ ಪತ್ತೆ ಮಾಡಿ, ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾದ ಎ.ಸಿ.ಪಿ ವೆಲೆಂಟೀನ್ ನೇತೃತ್ವದ ತನಿಖಾ ತಂಡದ ಕಾರ್ಯ ವೈಖರಿಯು ಪ್ರಶಂಸನೀಯ, ಆದ್ದರಿಂದ ಈ ತಂಡದಿಂದಲೇ ಉಳ್ಳಾಲ , ಕೊಣಾಜೆ ಮತ್ತು ಕಮೀಷನರೇಟ್ ವ್ಯಾಪ್ತಿಯಲ್ಲಿ ಇನ್ನೂ ಪತ್ತೆಯಾಗದೇ ಉಳಿದಿರುವ ಪ್ರಕರಣಗಳನ್ನು ತನಿಖೆಗೊಳಪಡಿಸಿ ನ್ಯಾಯ ಒದಗಿಸಿ ಕೊಡುವಂತೆ ಯುನೈಟೆಡ್ ಸೋಶಿಯಲ್ ಮೂಮೆಂಟ್ ಉಳ್ಳಾಲ ಆಗ್ರಹಿಸಿದೆ. ಸಂಸ್ಥೆಯ ಮುಖ್ಯ ಸಂಘಟಕ ಫಾರೂಕ್ ಉಳ್ಳಾಲ್ ಇವರ ನೇತೃತ್ವದಲ್ಲಿ ಮತ್ತು ಟ್ರಸ್ಟ್ ಸಂಚಾಲಕ ಯು.ಕೆ.ಅಹಮ್ಮದ್ ಬಾವ ಕೊಟ್ಟಾರ ಹಾಗೂ ಟ್ರಸ್ಟ್ ಸದಸ್ಯರ ನಿಯೋಗ ತೆರಳಿ ಉಪ ಅಧೀಕ್ಷಕ ಶಾಂತರಾಜ್ ರವರ ಮೂಲಕ ಮನವಿಯನ್ನು ನೀಡಿತು. ಈ ಸಂದರ್ಭದಲ್ಲಿ ಎ.ಸಿ.ಪಿ. ವೆಲೆಂಟೀನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ನಿಯೋಗದಲ್ಲಿ ಸಂಸ್ಥೆಯ ಟ್ರಸ್ಟಿ ಗಳಾದ ನಗರದ ಚಾರ್ಟೆಡ್ ಅಕೌಂಟೆಂಟ್ ಯು.ಎಚ್ .ಅಹ್ಮದ್ ,…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಇರಾ: ಸಂಘಟನೆಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದಾಗ ಸಮಾಜ ಅಭಿವೃದ್ಧಿಯೊಂದಿಗೆ ಸಂಘಟನೆಗಳು ಬೆಳೆಯಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಜೈ ಶಕ್ತಿ ಮಿತ್ರ ಮಂಡಳಿ ಸಾಮಾಜಿಕವಾಗಿ ತೊಡಗಿಸುತ್ತಿರುವುದು ಶ್ಲಾಘನೀಯ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಭಿಪ್ರಾಯಪಟ್ಟರು. ಅವರು ಇರಾ ಜೈ ಶಕ್ತಿ ಮಿತ್ರ ಮಂಡಳಿ ಇದರ 17ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಜೈಶಕ್ತಿ ಮಾತೃಮಂಡಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಜಪಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು ವಹಿಸಿ ಮಾತನಾಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಸಂಗಟನೆಗಳ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಜೈಶಕ್ತಿ ಮಿತ್ರ ಮಂಡಳಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮಕ್ಕೆ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕøತ ಅಂತರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಮ್ ಇರಾ ಉದ್ಘಾಟಿಸಿದರು. ಮಂಗಳೂರು ಕೋಸ್ಟಲ್ ಫಾರ್ಮ್ ಜನರಲ್ ಮ್ಯಾನೇಜರ್ ವೈ, ಬಿ. ಸುಂದರ್, ಚಲನಚಿತ್ರ ನಟ ಮಂಜು ರೈ,…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಇಂದಿನ ಜಾಗತಿಕ ಮಟ್ಟದಲ್ಲಿ ನಾವೂ ಕೂಡಾ ಸದೃಡವಾಗಿ ಬೆಳೆದು ನಿಲ್ಲಬೇಕಾದರೆ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದ ಸಾಧನೆಗಳೊಂದಿಗೆ ಸಂಶೋಧನೆಗಳು ಹಾಗೂ ನೂತನ ಆವಿಷ್ಕಾರಗಳೊಂದಿಗೆ ಮುನ್ನಡೆಯಬೇಕಾಗಿದೆ ಎಂದು ದೆಹಲಿಯ ಇನ್‍ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆಂಡ್ ಅಲೈಡ್ ಸೈಯನ್ಸಸ್ ಇದರ ನಿರ್ದೇಶಕ ಡಾ.ಎ.ಕೆ.ಸಿಂಗ್ ಅವರು ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾಲಯದ ರೇಡಿಯೇಶನ್ ಆಂಕಾಲಜಿ ವಿಭಾಗ ಮತ್ತು ಸೆಂಟ್ರಲ್ ರಿಸರ್ಚ್ ಲ್ಯಾಬರೋಟರಿ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಇದರ ಆಶ್ರಯದಲ್ಲಿ ದೆಹಲಿಯ ಇನ್‍ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆಂಡ್ ಅಲೈಡ್ ಸೈಯನ್ಸಸ್ ಇದರ ಸಹಯೋಗದೊಂದಿಗೆ `ಬೈಯೋಡೋಸಿಮೆಟ್ರಿ’ ಎಂಬ ವಿಷಯದಲ್ಲಿ ನಡೆಯುವ ಮೂರು ದಿನಗಳ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ವಿಕಿರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬೈಯೋಡೋಸಿಮೆಟ್ರಿಯ ಪಾತ್ರವು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ಅಂದೆ ಯು.ಎಸ್ ಮುಂತಾದ ರಾಷ್ಟ್ರಗಳಲ್ಲಿ ಬಹಳಷ್ಟು ಸಂಶೋಧನೆ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಭಾರತವು ಇತ್ತೀಚಿಗೆ ಈ ಕ್ಷೇತ್ರದಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಧನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯುವ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ನವದೆಹಲಿ: ದೇಶಾದ್ಯಂತ ವ್ಯಾಪಕ ಪ್ರತಿಭಟನೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯ ಸಾಮೂಹಿಕ ತ್ಯಾಚಾರ ಹಾಗೂ ಸಾವಿಗೆ ಕಾರಣರಾಗಿದ್ದ 4 ಜನ ಅಪರಾಧಿಗಳಿಗೆ ದೆಹಲಿ ಕೋರ್ಟು ನೀಡಿದ್ದ ಮರಣದಂಡನೆಯನ್ನು ಖಾಯಂಗೊಳಿಸುವ ಮಹತ್ತರವಾದ ತೀರ್ಪನ್ನು ಸುಪ್ರೀಂ ಕೋರ್ಟು ಶುಕ್ರವಾರ ಹೊರಡಿಸಿದೆ. 2012 ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಅಶೋಕ್ ಭೂಷಣ್ ಹಾಗೂ ನ್ಯಾಯಮೂರ್ತಿ ಆರ್ ಭಾನುಮತಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಪ್ರಕರಣವನ್ನು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಉಲ್ಲೇಖಿಸಿದ ನ್ಯಾಯ ಮೂರ್ತಿಗಳು,ಸಂತ್ರಸ್ತೆಯ ಮರಣಪೂರ್ವದ ಹೇಳಿಕೆ ಸತ್ಯಾಂಶದಿಂದ ಕೂಡಿದೆ. ಇದರಲ್ಲಿ ಯಾವುದೇ ಅನುಮಾನಕ್ಕೆ ಆಸ್ಪದ ಇಲ್ಲ ಈ ಆರೋಪಿಗಳು ಯಾವುದೇ ರೀತಿಯಲ್ಲೂ ಸುಧಾರಣೆ ಕಾಣುವ ಅಥವಾ ಇವರ ಮನಸ್ಥಿತಿ ಯಾವುದೇ ರೀತಿಯಲ್ಲೂ ಬದಲಾಗುವ ಸಂಭವವೂ ಇರದ ಕಾರಣ ಈ ತೀರ್ಪು ನೀಡಲಾಗುತ್ತಿದೆ ಎಂದಿದ್ದಾರೆ. 2013ರಲ್ಲಿ ದೆಹಲಿಯ ವಿಚಾರಣಾಧೀನ ನ್ಯಾಯಾಲಯ ಗಲ್ಲುಶಿಕ್ಷೆ ನೀಡಿ ಆದೇಶ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ : ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಮೂಲದ ಆರು ಸದಸ್ಯರನ್ನು ರಕ್ಷಿಸಿದ ಘಟನೆ ಉಳ್ಳಾಲ ಮೊಗವೀರಪಟ್ಣದಲ್ಲಿ ಗುರುವಾರ ಸಂಜೆ ನಡೆದಿದ್ದು, ರಕ್ಷಣೆಯಾದವರು ಅಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ವಿಲ್ಸನ್ ಗಾರ್ಡನ್ ನಿವಾಸಿಗಳ ಒಂದು ತಂಡ ಉಳ್ಳಾಲ ದರ್ಗಾ ವೀಕ್ಷಣೆ ನಡೆಸಿದ ಬಳಿಕ ಉಳ್ಳಾಲ ಬೀಚ್‍ಗೆ ಗರುವಾರ ಸಂಜೆಯ ವೇಳೆಗೆ ಆಗಮಿಸಿದ್ದರು. ಸಮುದ್ರದ ಬದಿಯಲ್ಲಿ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ ದೊಡ್ಡದೊಂದು ಅಲೆಗೆ ಮಗು ತಾಯಿ ಸಹಿತ ಆರು ಮಂದಿ ಕೊಚ್ಚಿ ಹೋಗಿದ್ದು, ಇತರ ಕುಟುಂಬದ ಸದಸ್ಯರು ಬೊಬ್ಬೆ ಹಾಕಿದಾಗ ಸ್ಥಳೀಯ ಜೀವರಕ್ಷಕ ಈಜುಗಾರ ಸದಸ್ಯರು ಆಗಮಿಸಿ ಸಮುದ್ರ ಪಾಲಾಗುತ್ತಿದ್ದವರನ್ನು ರಕ್ಷಿಸಿದರು. ಈ ಸಂದರ್ಭದಲ್ಲಿ ತಾಯಿಯೊಂದಿಗೆ ಸಮುದ್ರಪಾಲಾಗುತ್ತಿದ್ದ ಒಂದು ವರ್ಷದ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಸಮುದ್ರದ ದಡಕ್ಕೆ ತರುತ್ತಿದ್ದಂತೆ ಮಗುವಿನ ಹೊಟ್ಟೆಯಲ್ಲಿದ್ದ ನೀರನ್ನು ಸ್ಥಳೀಯ ಈಜುಗಾರರು ಪ್ರಥಮ ಚಿಕಿತ್ಸೆ ನೀಡಿ ಹೊರ ತೆಗೆದಿದ್ದು, ಬಳಿಕ ಮಗು ಚೇತರಿಸಿಕೊಂಡಿತು. ಸಮುದ್ರಪಾಲಾಗುತ್ತಿದ್ದವರನ್ನು ಮೊಗವೀರಪಟ್ಣದ ಶಿವಾಜಿ ಜೀವರಕ್ಷಕ ಮತ್ತು ಜೀವರಕ್ಷಕ ಈಜುಗಾರರ ಸಂಘದ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ಯುವ ಮಿತ್ರರು ಕುಂಪಲ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ನ ಸಹಯೋಗದಲ್ಲಿ ದ.ಕ, ಉಡುಪಿ, ಕಾಸರಗೋಡ್ ತ್ರಿವಳಿ ಜಿಲ್ಲಾ ಮಟ್ಟದ 70 ಕೆ.ಜಿ ವಿಭಾಗದ ಮ್ಯಾಟ್ ಕುಂಪಲ ಕಬಡ್ಡಿ ಚಾಂಪಿಯನ್‍ಶಿಪ್-2017 ಮೇ.7 ಆದಿತ್ಯವಾರದಂದು ಮಧ್ಯಾಹ್ನ 2 ಗಂಟೆಯಿಂದ ಕುಂಪಲ ಮೂರುಕಟ್ಟೆಯಲ್ಲಿ ನಡೆಯಲಿರುವುದು. ಈ ಕಬಡ್ಡಿ ಪಂದ್ಯಾಟವು ಪ್ರೋ ಮಾದರಿಯ ನಿಯಮದನುಸಾರ ನಡೆಯಲಿದ್ದು ವಿಜೇತರಿಗೆ ಪ್ರಥಮ ರೂ.15000 ನಗದು ಹಾಗೂ ಎ.ಜಯಣ್ಣ ಸ್ಮಾರಕ ಟ್ರೋಫಿ, ದ್ವಿತೀಯ 10000 ನಗದು ಹಾಗೂ ರಿಷಿ ಹಾರ್ಡ್‍ವೇರ್ ಟ್ರೋಪಿ, ತೃತೀಯ 5000 ಹಾಗೂ ಸುವರ್ಣ ಎಸೋಸಿಯೇಟ್ ಟ್ರೋಪಿ, ಚತುರ್ಥ 5000 ಹಾಗೂ ಅನುಗ್ರಹ ಸೊಸೈಟಿ ಟ್ರೋಪಿ ಹಾಗೂ ಉತ್ತಮ ದಾಳಿಗಾರ, ಹಿಡಿತಗಾರ ಸವ್ಯಸಾಚಿ ಪ್ರಶಸ್ತಿ ಹಾಗೂಭಾಗವಹಿಸಿದ ಎಲ್ಲಾ ತಂಡಗಳಿಗೂ ಸ್ಮರಣಿಕೆ ಕಾಣಿಕೆ ನೀಡಲಾಗುವುದು, ಮೊದಲು ನೊಂದಾಯಿತ 24 ತಂಡಗಳಿಗೆ ಮಾತ್ರ ಅವಕಾಶ ಎಂದು ಕಬಡ್ಡಿ ಸಂಘಟಕ ಪ್ರವೀಣ್.ಎಸ್.ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಮುಡಿಪು: ಸ್ವಿಫ್ಟ್ ಕಾರು ಅಪಘಾತಕ್ಕೀಡಾಗಿ ವ್ಯಕ್ತಿಯೋರ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಪಡೀಲು ಸಮೀಪ ಶುಕ್ರವಾರ ನಸುಕಿನ ಜಾವ ಸಂಭವಿಸಿದೆ. ಮಂಜೇಶ್ವರದ ಕಡಂಬಾರು ಇಡಿಯ ನಿವಾಸಿ ಅಬೂಬಕರ್ ಎಂಬವರ ಪುತ್ರ ಯೂಸುಫ್ (38) ಸಾವನ್ನಪ್ಪಿದವರು. ಇವರ ಜತೆಗಿದ್ದ ಖಲೀಲ್ ಎಂಬವರು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೂಸುಫ್ ಮತ್ತು ಖಲೀಲ್ ಸಕಲೇಶಪುರದಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿ ಸಂಜೆ ಮಂಜೇಶ್ವರದ ಮನೆಗೆ ವಾಪಸ್ಸಾಗುತ್ತಿದ್ದರು. ತಡರಾತ್ರಿ ವೇಳೆ ಬೋಳಿಯಾರು ಪಡೀಲು ಸಮೀಪಿಸುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಉರುಳಿ ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಪರಿಣಾಮ ಯೂಸುಫ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಮಂಜೇಶ್ವರದಲ್ಲಿ ಉದ್ಯಮ ನಡೆಸುತ್ತಿದ್ದು, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಕೋಟೆಕಾರು: ಪೂರ್ಣ ರಜಾ ಸವಿ ಅನುಭವಿಸಲೆಂದು ಕಾರ್ಕಳ ಬೋಳದ ಅಜ್ಜಿ ಮನೆಯಲ್ಲಿ ಮಾನಸಿಕ ಅಸ್ವಸ್ಥನಿಂದ ಹಾರೆಯ ಹೊಡೆತಕ್ಕೆ ಸಿಲುಕಿ ಜೀವನ್ಮರಣ ಹೋರಾಟದಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ದೇರಳಕಟ್ಟೆ ನಡಾರ್ ರಮೇಶ್ ಸಾಮನಿ ಹಾಗೂ ಸಪ್ನಾ ದಂಪತಿ ಪುತ್ರಿ ಮಾನ್ವಿ (8) ಮೃತದೇಹವನ್ನು ಗುರುವಾರ ಸಂಜೆ ಸ್ವಗೃಹ ನಡಾರ್‍ಗೆ ತರಲಾಯಿತು. ಎಳೆಯ ಕಂದಮ್ಮನನ್ನು ಕಳೆದುಕೊಂಡ ನೋವಿನಲ್ಲಿ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು, ಆತ್ಮೀಯರು ಅಂತಿಮ ದರ್ಶನ ಪಡೆದರು. ಬಳಿಕ ಮಾಡೂರಿನ ಸ್ಮಶಾನದಲ್ಲಿ ಅಂತಿಮಕ್ರಿಯೆ ನಡೆಸಲಾಯಿತು. ಮಾನ್ವಿ ನಡಾರಿನ ಅಸಿಸಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿಯಿಂದ ಮೂರನೇ ತರಗತಿಗೆ ತೇರ್ಗಡೆ ಹೊಂದಿದ್ದು ರಜಾ ಸವಿಯಲೆಂದು ಕಾರ್ಕಳ ಬೋಳದ ಅಜ್ಜಿ ಮನೆಗೆ ತೆರಳಿದ್ದಳು. ಭಾನುವಾರ ನಡಾರ್ ಮನೆಗೆ ಕರೆತರಲು ತಾಯಿ ಸಪ್ನಾ ಸಿದ್ಧವಾಗಿದ್ದರೂ ಕುಟುಂಬಸ್ಥರು ಬಂಧು ಬಳಗ ಇದ್ದುದರಿಂದ ಇನ್ನೆರಡು ದಿನ ಇದ್ದು ಹೋಗುವ ಆಸೆ ವ್ಯಕ್ತಪಡಿಸಿದ್ದರಿಂದ ತಾಯಿ ಸಪ್ನಾ ಅವರು ಮಗಳ ಆಶೆಯಂತೆ ನಡೆದುಕೊಂಡಿದ್ದರು. ವಿಧಿಯಾಟ…

Read More