UN NETWORKS ಮಂಗಳೂರು: ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ಬ್ಯಾನರ್ ನಲ್ಲಿ ಕೋಟಿ ಚೆನ್ನಯರ ಫೋಟೋ ಹಾಕಿ ಯಾವುದೇ ಅವಮಾನ ಮಾಡಿಲ್ಲ, ತುಳುನಾಡಿನ ವೀರ ಯೋಧರ ಹುಟ್ಟೂರಿನಲ್ಲಿ ಅವರಿಗೆ ಗೌರವ ಸಲ್ಲಿಸಲಾಗಿದೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು. ಪುತ್ತೂರಿನಲ್ಲಿ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ಕೋಟಿ ಚೆನ್ನಯರ ಫೋಟೋ ಹಾಕಿರುವುದಕ್ಕೆ ಉಸ್ತುವಾರಿ ಸಚಿವ ರಮಾನಾಥ ರೈ ಅವರು ವಿರೋಧ ವ್ಯಕ್ತಪಡಿಸಿದ್ದರು ಮತ್ತು ವೀರ ಯೋಧರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹರಿಕೃಷ್ಣ ಬಂಟ್ವಾಳ, ಬಿಲ್ಲವ ಮುಖಂಡ ಜರ್ನಾದನ ಪೂಜಾರಿ ಅವರನ್ನು ಸಾರ್ವಜನಿಕವಾಗಿ ಅವಮಾನ ಮಾಡಿರುವ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಇದನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬಂಟ್ವಾಳಕ್ಕೆ ಭೇಟಿ ನೀಡಿದ್ದ ವೇಳೆ ಹಲವಾರು ಫ್ಲೆಕ್ಸ್ ಗಳಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಹಾಕಲಾಗಿತ್ತು. ಇದನ್ನು ರಮಾನಾಥ ರೈ…
Author: UllalaVani
UN NETWORKS ಉಡುಪಿ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಅಲಂಕರಿಸುವ ಮೂಲಕ ಪಲಿಮಾರು ಪರ್ಯಾಯ ಬುಧವಾರ ವಿದ್ಯುಕ್ತವಾಗಿ ಆರಂಭವಾಯಿತು. ಪರ್ಯಾಯವನ್ನು ಪ್ರತಿ ಬಾರಿಯೂ ಹಬ್ಬದಂತೆ ಸಂಭ್ರಮಿಸುವುದು ಇಲ್ಲಿನ ರೂಡಿ. ಈ ಭಾರಿಯೂ ಪರ್ಯಾಯ ಅದ್ಧೂರಿಯಾಗಿ, ಭಕ್ತಿ ಭಾವದಿಂದ ನಡೆಯಿತು. ಈ ಅಮೋಘ ಕ್ಷಣಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಜೋಡುಕಟ್ಟೆಗೆ ಬಂದ ಪರಿಮಾರು ಮಠಾಧೀಶರಿಗೆ ಭ್ಯವವಾದ ಸ್ವಾಗತವನ್ನು ಕೋರಲಾಯಿತು. ನಂತರ ಅವರನ್ನು ವೈಭವದ ಮೆರವಣಿಗೆಯಲ್ಲಿ ರಥಬೀದಿಗೆ ಕರೆದೊಯ್ಯಲಾಯಿತು. ನಂತರ ಅವರು ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ನಡೆಯುವ ಅಖಂಡ ಭಜನೋತ್ಸವಕ್ಕೆ ಅವರು ಭವ್ಯವಾಗಿ ಚಾಲನೆ ನೀಡಿದರು. ನಂತರ ಅವರು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರುವ ಮೂಲಕ ದ್ವಿತೀಯ ಪರ್ಯಾಯ ಆರಂಭವಾಯಿತು. ಇನ್ನು ಎರಡು ವರ್ಷಗಳ ಕಾಲ ಕಡೆಗೋಲು ಕೃಷ್ಣನ ಪೂಜಾ ಕೈಂಕರ್ಯವನ್ನು ವಿದ್ಯಾಧೀಶ ಸ್ವಾಮೀಜಿ ನಿಭಾಯಿಸಲಿದ್ದಾರೆ.
UN NETWORKS ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ಇನ್ನಿಲ್ಲ. ಕಳೆದ ಎರಡು ದಿನಗಳಿಂದ ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಶಿನಾಥ್ ಇಂದು ಕೊನೆಯುಸಿರೆಳೆದಿದ್ದಾರೆ. ಈಚೆಗೆ ಇವರು ಚೌಕ ಸಿನಿಮಾದಲ್ಲಿ ಅಭಿನಯಿಸಿದ್ದರು. ಕಾಶಿನಾಥ್ ಅವರು `ಅಪರೂಪದ ಅತಿಥಿಗಳು’ ಮೂಲಕ ಕನ್ನಡ ಚಿತ್ರಂಗಕ್ಕೆ ಪಾದಾರ್ಪಣೆ ಮಾಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರು. ಇವರು ಉಪೇಂದ್ರ, ವಿ. ಮನೋಹರ್, ಸುನಿಲ್ ಕುಮಾರ್ ದೇಸಾಯಿ ಸೇರಿದಂತೆ ಹಲವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಇವರು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದ್ದರು. ಇವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
UN NETWORKS ಕೋಟೆಕಾರು :ಅಲ್-ಮುಬಾರಕ್ ಜುಮಾ ಮಸೀದಿ ಕೆ.ಸಿ ರೋಡು ಕೋಟೆಕಾರು ಇದರ 26ನೇ ದ್ಸಿಕ್ರ್ ವಾರ್ಷಿಕದ ಪ್ರಯುಕ್ತ 8ದಿವಸಗಳ ಧಾರ್ಮಿಕ ಮತ ಪ್ರವಚನ ಜ ,18ರಿಂದ25ತನಕ ಪ್ರತಿ ದಿನ ರಾತ್ರಿ 7.30ಕ್ಕೆ ಅಲ್-ಮುಬಾರಕ್ ಮಸೀದಿ ವಠಾರದಲ್ಲಿ ನಡೆಯಲಿದೆ. ಜ,18ರಂದು ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ದುಅದೊಂದಿಗೆ ಮಸೀದಿ ಅಧ್ಯಕ್ಷ ಎ.ಎಂ ಅಬ್ಬಾಸ್ ಹಾಜಿ ಅಧ್ಯಕ್ಷತೆಯಲ್ಲಿ ಕೆ.ಪಿ ಹುಸೈನ್ ಸ ಅದಿ ಕೆ.ಸಿ ರೋಡು ಮತ್ತು ಮುದರ್ರಿಸ್ ಮುನೀರ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ,19ರಂದು ಖಾಝಿ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೆಕಲ್, ಜ,20ರಂದು ಅಬ್ದುಲ್ ಮಜೀದ್ ಬಾಖವಿ, ಜ,21ರಂದು ರಫೀಕ್ ಸ ಅದಿ ದೇಲಂಪಾಡಿ, ಜ,22ರಂದು ನೌಫಲ್ ಸಖಾಫಿ ಕಳಸ, ಜ,23ರಂದು ಹಂಝ ಮಿಸ್ಬಾಹಿ ಓಟೆಪದವು, ಜ,24ರಂದು ಹುಸೈನ್ ಸ ಅದಿ ಕೆ.ಸಿ ರೋಡು ಮುಂತಾದವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಜ,25ರಂದು ದ್ಸಿಕ್ರ್ ವಾರ್ಷಿಕ ಸಮಾರೋಪ ಸಮಾರಂಭ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯರ್ ಕೂಟು ಪ್ರಾರ್ಥನೆ…
UN NETWORKS ಉಳ್ಳಾಲ: ಬಿಳಿ ತಲೆ ಹುಳ ಬಾಧೆಯಿಂದ ಉಳ್ಳಾಲ ಭಾಗದಲ್ಲಿ ಸತ್ತುಬಿದ್ದಿರುವ ತೆಂಗಿನಮರ ಹೊಂದಿದ್ದ ರೈತರಿಗೆ ಸಚಿವರಾಗಲಿ, ಸಂಸದರಾಗಲಿ ಪರಿಹಾರವಾಗಿ ವಿಶೇಷ ಪ್ಯಾಕೇಜನ್ನು ನೀಡಲು ವಿಫಲರಾಗಿದ್ದು, ತುರ್ತಾಗಿ ಪರಿಹಾರ ಕ್ರಮಕೈಗೊಳ್ಳದೇ ಇದ್ದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡ ಮನೋಹರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. ಕಳೆದ ಎರಡು ವರ್ಷದಿಂದ ಕಲ್ಲಾಪು, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕುತ್ತಾರುಪದವು, ಹರೇಕಳ ಗಡಿ ಪ್ರದೇಶಗಳಲ್ಲಿ ಬಿಳಿ ತಲೆ ಹುಳದ ಬಾಧೆಗೆ ತುತ್ತಾದ ತೆಂಗಿನಮರಗಳು ಸತ್ತುಹೋಗಿವೆ. ಈ ಬಗ್ಗೆ ಸರಕಾರ ಮಧ್ಯಪ್ರವೇಶಿಸಿ ತೆಂಗು ಬೆಳೆಗಾರರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದರೂ, ಒತ್ತಾಯ ಒತ್ತಾಯವಾಗಿಯೇ ಉಳಿದಿದೆ. ಈವರೆಗೂ ಯಾರ ಸ್ಪಂಧನೆಯೇ ದೊರೆತಿಲ್ಲ.ಆಹಾರ ಸಚಿವರ ವೈಯಕ್ತಿಕವಾಗಿ ಭೇಟಿ ನೀಡಿ ಸರಕಾರದಿಂದ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಲಾಗಿತ್ತು. ರಾ.ಹೆ.66ರಲ್ಲಿ ಸಂಸದರು ಹಲವು ಬಾರಿ ತೆರಳುತ್ತಿದ್ದರೂ ತೆಂಗು ಕುರಿತ ವಿಚಾರವನ್ನು ಗಮನಿಸಿಯೇ ಇಲ್ಲದಂತೆ ಕಾಣುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ , ತೆಂಗು ಅಭಿವೃದ್ಧಿ ಮಂಡಳಿ…
UN NETWORKS ಉಳ್ಳಾಲ: ಕುತ್ತಿಗೆ ಮತ್ತು ಬೆನ್ನು ನೋವು ಇರುವವರು ಭಾರತೀಯ ಫಿಸಿಯೋಥೆಪಿಯೆನ್ನರ ಅನ್ನದಾತರಾಗಿದ್ದು , ಅದನ್ನು ` ಚಮತ್ಕಾರ್ ಕಾ ನಮಸ್ಕಾರ್ ‘ ರೀತಿಯಲ್ಲಿ ಗುಣಪಡಿಸಿದಲ್ಲಿ ರೋಗಿ ಗುಣಮುಖನಾಗಲು ಸಾಧ್ಯ ಎಂದು ಮುಂಬೈ ನಾನಾವತಿ ಆಸ್ಪತ್ರೆ ಮುಖ್ಯಸ್ಥ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ಫಿಸಿಯೋ ಡಾ.ಆಲಿ ಇರಾನಿ ಹೇಳಿದ್ದಾರೆ. ಅವರು ನಾಟೆಕಲ್ ಕಣಚೂರು ಫಿಸಿಯೋಥೆರಪಿ ಕಾಲೇಜು , ಸೌತ್ ಕೆನರಾ ಫಿಸಿಯೋಥೆರಪಿ ಉಪನ್ಯಾಸಕರ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ನಾಟೆಕಲ್ ಕಣಚೂರು ಆಡಿಟೋರಿಯಂನಲ್ಲಿ ಮಂಗಳವಾರ ಜರಗಿದ ಮಂಗಳೂರು ಫಿಸಿಯೋಕಾನ್ -2018 ಅಂಗವಾಗಿ ಭಾರತದಲ್ಲಿ ಫಿಸಿಯೋಥೆರಪಿ, ದೈಹಿಕ ಬಲಾಢ್ಯತೆ ಮತ್ತು ಕ್ರೀಡೆ ಔಷಧಿ ಹಾಗೂ ಶೀಘ್ರ ಪರಿಹಾರಗಳ ಪ್ರಸ್ತುತ ತಂತ್ರ ವಿಚಾರಗಳ ಕುರಿತ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಭಾರತದಲ್ಲಿ ಹೆಚ್ಚಾಗಿ ಕುತ್ತಿಗೆ ಮತ್ತು ಬೆನ್ನು ನೋವು ಕಾಡುವ ಜನರೇ ಹೆಚ್ಚಿದ್ದಾರೆ. ಫಿಸಿಯೋಥೆರಪಿಗಳನ್ನು ಹೆಚ್ಚಾಗಿ ಭೇಟಿ ಮಾಡುವವರು ಅವರೇ ಆಗಿರುತ್ತಾರೆ. ಆದರೆ ಒಂದೇ ದಿನದಲ್ಲಿ ಗುಣಮುಖರಾಗಬೇಕು ಅನ್ನುವ ಮನಸ್ಥಿತಿಯಿಂದ ಆಸ್ಪತ್ರೆಗೆ…
UN NETWORKS ಉಳ್ಳಾಲ: ಯುವ ವೈದ್ಯರ ಕೌಶಲ್ಯ ವೃದ್ಧಿಯೊಂದಿಗೆ ಭೌತಚಿಕಿತ್ಸೆ ಅಭಿವೃದ್ಧಿಗೆ ಕಾರ್ಯಗಾರ ಪೂರಕವಾಗಿದೆ ಎಂದು ಮಂಗಳೂರು ಕೆಎಂಸಿ ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗ ಮುಖ್ಯಸ್ಥೆ ಡಾ. ಚಾರು ಏಪನ್ ಅಭಿಪ್ರಾಯಪಟ್ಟರು. ಅವರು `ಭೌತಚಿಕಿತ್ಸೆಯಲ್ಲಿ ಉದ್ಯಮಶೀಲತೆ ‘ ವಿಚಾರದ ಕುರಿತ ಪೂರ್ವಭಾವಿ ವೈಜ್ಞಾನಿಕ ಕಾರ್ಯಗಾರವನ್ನು ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನಲ್ಲಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ಕಾಲೇಜುಗಳ ಕಲಿಕೆಯಲ್ಲಿ ಯುವವೈದ್ಯರು ಸಾಕಷ್ಟು ಜ್ಞಾನದ ಕೊರತೆಯನ್ನು ಅನುಭವಿಸುತ್ತಾರೆ. ಇದರಿಂದ ವೃತ್ತಿ ಜೀವನದಲ್ಲಿ ಅನಾನುಕೂಲಗಳು ಆಗುವ ಸಾಧ್ಯತೆಗಳಿರುತ್ತವೆ. ಇತರೆ ವಿಭಾಗಗಳ ಜತೆಗೆ ಸೇರಿಕೊಂಡು ಜ್ಞಾನವನ್ನು ವೃದ್ಧಿಸುವುದರ ಜತೆಗೆ , ಕಾರ್ಯಗಾರದಲ್ಲಿ ಸಿಗುವ ಮಾಹಿತಿಗಳಿಂದ ಕೌಶಲ್ಯ ವೃದ್ಧಿ ಜತೆಗೆ ಚಿಕಿತ್ಸಾ ವಿಧಾನವನ್ನು ಅಭಿವೃದ್ಧಿ ಪಡಿಸಬಹುದು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಸಂಸ್ಥೆಯ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಮಾತನಾಡಿ ಫಿಸಿಯೋಥೆರಪಿಸ್ಟ್ ಗಳು ನಾವೀನ್ಯತೆಯನ್ನು ಹುಡುಕುವುದರ ಜತೆಗೆ ವಿಭಿನ್ನವಾಗಿ ಯೋಚಿಸುವ ಮನಸ್ಥಿತಿಯನ್ನು ಬೆಳೆಸಬೇಕಿದೆ. ವಿಫಲತೆಗಳನ್ನು ಎದುರಿಸಲು ಸಿದ್ಧರಾದಂತೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ ಎಂದರು. ಡಾ.ಪುರುಷೋತ್ತಮ್ ಚಿಪ್ಪಲ ಉಪಸ್ಥಿತರಿದ್ದರು.…
UN NETWORKS ತೊಕ್ಕೊಟ್ಟು: ಶತಮಾನೋತ್ಸವ ಸಂಭ್ರಮಕ್ಕೆ ನಗರಸಭೆಯಿಂದ ಆಗುವ ಎಲ್ಲಾ ವ್ಯವಸಸ್ಥೆಗಳನ್ನು ಕಲ್ಪಿಸಲಾಗುವುದು, ನಗರಸಭೆಯ ಸರ್ವ ಸದಸ್ಯರು ಹಾಗೂ ಅಧಿಕಾರಿ ವರ್ಗ ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ ಎಂದು ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು ಹೇಳಿದ್ದಾರೆ. ಅವರು ಜ.19 ರಿಂದ 21ರ ವರೆಗೆ ಜರಗಲಿರುವ ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಉಳ್ಳಾಲ ನಗರಸಭೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೂರು ದಿನಗಳ ಕಾಲ ನಡೆಯಲಿರುವ ಸಂಭ್ರಮಕ್ಕೆ ಮೂಲಭೂತ ವ್ಯವಸ್ಥೆಗಳನ್ನು ನಗರಸಭೆಯಿಂದ ಕಲ್ಪಿಸಲಾಗಿದೆ. ಸಭೆಯಲ್ಲಿ ಕೇಳಿಬಂದ ಬೇಡಿಕೆಗಳ ಪರಿಶೀಲನೆ ನಡೆಸಿ ಅದರ ವ್ಯವಸ್ಥೆಗೆ ನಗರಸಭೆ ಮುಂದಾಗುವುದು. ಸಾಮರಸ್ಯಯುತ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯವರು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕಿದೆ. ಆದರೆ ಹೊರಭಾಗದ ಪೊಲೀಸರನ್ನು ನಿಯೋಜಿಸುವುದರಿಂದ ಸ್ಥಳೀಯರ ಜತೆ ಅವರು ಉತ್ತಮವಾಗಿ ಸಂಪರ್ಕಿಸಲು ಸಾಧ್ಯವಾಗದೆ ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ. ಅದಕ್ಕಾಗಿ ಜಿಲ್ಲೆಯ ಪೊಲೀಸರನ್ನೇ ತಾತ್ಕಾಲಿಕವಾಗಿ ನಿಯೋಜಿಸುವುದು ಒಳಿತು ಎಂದು ನಗರಸಭೆ ಅಧ್ಯಕ್ಷರು…
UN NETWORKS ಪಾವೂರು: ಚೂಂತಾರು ಪ್ರತಿಷ್ಠಾನದಿಂದ ಪಾವೂರು ಪ್ರೌಢಶಾಲೆ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ಸಮಯ ಸಿಕ್ಕಾಗ ದಿನ ಕನಿಷ್ಟ ಅರ್ಧ ಗಂಟೆಯಾದರೂ ಪುಸ್ತಕ ಓದುವ ಹವ್ಯಾಸ ವಿದ್ಯಾರ್ಥಿಗಳಲ್ಲಿರಬೇಕು, ಇಂತಹ ಉತ್ಸಾಹ ಇದ್ದಲ್ಲಿ ಅಗತ್ಯ ಪರಿಕರಗಳನ್ನು ಪ್ರತಿಷ್ಠಾನದಿಂದ ನೀಡಲು ಸಿದ್ಧ ಎಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಮುರಳೀ ಮೋಹನ್ ಚೂಂತಾರು ಹೇಳಿದರು. ಪಾವೂರು ಸರ್ಕಾರಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಪುಸ್ತಕಗಳನ್ನು ಕೊಡುಡೆಯಾಗಿ ನೀಡಿ ಅವರು ಮಾತನಾಡಿದರು. ಧಾರ್ಮಿಕ ಕೇಂದ್ರಗಳಲ್ಲಿ ಆಯಾ ಧರ್ಮದವರು ಮಾತ್ರ ಹೋಗುತ್ತಾರೆ, ಆದರೆ ವಿದ್ಯಾ ದೇಗುಲಕ್ಕೆ ಎಲ್ಲಾ ಧರ್ಮದವರೂ ಹೋಗುವುದರಿಂದ ನಿಜಾರ್ಥದಲ್ಲಿ ಶಾಲೆಗಳೇ ನೈಜ ದೇಗುಲಗಳಾಗಿವೆ, ಅದರಲ್ಲೂ ಸರ್ಕಾರಿ ಶಾಲೆಗಳು ಸಮನ್ವಯ ತಾಣಗಳಾಗಿವೆ. ಪಾಠ, ಆಟದ ಜೊತೆ ಪುಸ್ತಕಗಳನ್ನೂ ಓದುವುದರಿಂದ ಜೀವನ ಮೌಲ್ಯ ತಿಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಶಾಲೆಯ ಶಿಕ್ಷಕಿ ಆಶಾ ವೀರಾವಾಸ್ ಮಾತನಾಡಿ, ಆಧುನಿಕತೆ ಎಷ್ಟೇ ಬೆಳೆದರೂ ಪುಸ್ತಕ ಓದುವ ಚಟವಿದ್ದವರಿಗೆ ಅದರ ಮೇಲಿನ ವ್ಯಾಮೋಹ ಕಡಿಯಾಗದು,…
UN NETWORKS ಉಳ್ಳಾಲ: ತಲಪಾಡಿ ಕೆ.ಸಿ.ನಗರದ ಸ್ಕೂಲ್ ಆಫ್ ಕುರಾನಿಕ್ ಸ್ಟಡೀಸ್ ಅರೇಬಿಕ್ ಕಾಲೇಜಿನಲ್ಲಿ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮವು ನಡೆಯಿತು. ಕ್ರೀಡೋತ್ವವನ್ನು ಉಳ್ಳಾಲ ಕ್ರಿಕೆಟ್ ಬೋರ್ಡ್ನ ಕಾರ್ಯದರ್ಶಿ ಫಯಾಝ್ ಪಟ್ಲ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಯು ಶಾಂತಿ ಸೌಹಾರ್ದತೆಯ ಸಂಕೇತವಾಗಿದ್ದು, ಇದು ನಮ್ಮಲ್ಲಿ ಉತ್ತಮ ದೈಹಿಕ ಸಾಮಥ್ರ್ಯವನ್ನು ವೃದ್ದಿಸುವುದಲ್ಲದೆ ನಮ್ಮಲ್ಲಿ ನಾಯಕತ್ವ ಗುಣವನ್ನು ಬೆಳೆಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಇಂತಹ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಗಳಿಗೆ ಇಂದು ಬಹಳಷ್ಟು ಪ್ರೋತ್ಸಾಹಗಳು ಸಿಗುತ್ತಿದ್ದು, ಯುವ ಸಮುದಾಯ ಇಂತಹ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು. ಉಪಪ್ರಾಂಶುಪಾಲ ಸುಲೈಮಾನ್ ಪುರ್ಖಾನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ನಿಸಾರ್ ಕಾರ್ಯಕ್ರಮ ನಿರೂಪಿಸಿದರು. ಮರ್ಝಮ್ ಪಹದಿಯ್ಯ ಕಿರಾಅತ್ ಪಠಿಸಿದರು.

