Author: UllalaVani

Kannada News From Coastal Karnataka

ಉಳ್ಳಾಲ ನ್ಯೂಸ್ ನೆಟ್‍ವರ್ಕ್  ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 40 ಲಕ್ಷ ಅನುದಾನದಡಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಮುಂದಾಗಿದ್ದು, ಮಳೆಗಾಲ ನಂತರ ಕಾಮಗಾರಿ ನಡೆಯಲಿದೆ ಎಂದು ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊಳ್ಳೆಂಜೀರು ಅಭಿಪ್ರಾಯಪಟ್ಟರು. ಅವರು ಕೋಟೆಕಾರು ಪಟ್ಟಣ ಪಂಚಾಯಿತಿಯ 14 ನೇ ಹಣಕಾಸಿನ 2016-17 ನೇ ಯೋಜನೆಯಡಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಯೋಜನೆಯಲ್ಲಿ ಪಾಂಡಿಹಿತ್ಲು ಎಂಬಲ್ಲಿ ನಿರ್ಮಿಸಲಾದ ತೆರೆದ ಬಾವಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಪಾಂಡಿಹಿತ್ಲು ಎಂಬಲ್ಲಿ ವರ್ಷಗಳಿಂದ ಜನರಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತೊಂದರೆಯಿದ್ದು, ಇದನ್ನು ಮನಗಂಡು ಪಂಚಾಯಿತಿ ರೂ. 5 ಲಕ್ಷ ಬಾವಿ ತೆಗೆಯಲು ಮತ್ತು ರೂ. 3 ಲಕ್ಷ ಪೈಪ್ ಅಳವಡಿಸಲು ಒಟ್ಟು ರೂ. 8 ಲಕ್ಷದ ಅನುದಾನವನ್ನು ಬಿಡುಗಡೆಗೊಳಿಸಿ ಸುಸಜ್ಜಿತ ಬಾವಿಯನ್ನು ನಿರ್ಮಿಸಲಾಗಿದೆ. ಇದರಿಂದ ಈ ಭಾಗದ ಜನರಿಗೆ ಕುಡಿಯುವ ನೀರಿಗೆ ಶಾಶ್ವತ ಯೋಜನೆಯನ್ನು ರೂಪಿಸಲಾಗಿದೆ. ಕೋಟೆಕಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಹೆಚ್ಚಿನ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್  ಅಡ್ಕರೆ :ತುಳುನಾಡ ರಕ್ಷಣಾ ವೇದಿಕೆಯಲ್ಲಿ    ಮಂಗಳೂರು ವಿಧಾನ ಸಭಾ ಕ್ಷೇತ್ರಇದರ ನೇತ್ರತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಮಂಗಳೂರು ಸಹಭಾಗಿತ್ವ ದೊಂದಿಗೆ  ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಇಂದು (14-5-2017) ಬೆಳಿಗ್ಗೆ 10 :00 ಘಂಟೆ ಸರಿಯಾಗಿ ಗ್ರೀನ್‌ ವೀವ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಅಡ್ಕರೆ ಪಡ್ಪುವಿನಲ್ಲಿ  ಬೃಹತ್ ರಕ್ತದಾನ ಶಿಭಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ತುರವೇ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು, ತುರವೇ ಮಂಗಳೂರು ವಿಧಾನ ಸಭಾ ಕ್ಷೇತ್ರದ್ಯಕ್ಷರಾದ ಎಂ. ಸಿರಾಜ್ ಅಡ್ಕರೆ ಅಧ್ಯಕ್ಷತೆ ವಹಿಸಿದ್ದರು, ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತುರವೇ ಸ್ಥಾಪಕಾದ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ ಸಾಮಾಜಿಕ ಬದುಕಿನಲ್ಲ ಮಾನವೀಯತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ನಮ್ಮ ಬದುಕುವ ಸಾರ್ಥಕ ವಾಗುತ್ತದೆ, ಬದುಕು ಮತ್ತು ಸಾವಿನ ನಡುವೆ ನಾವು ಮಾಡುವಂಥಹ ಸಾದನೆಯೇ ಅಮರ, ಮರಣದ ನಂತರ ನಮ್ಮ ಹೆಸರು ಯಾರೂ ಕರೆಯುವುದಿಲ್ಲ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್  ಪಾವೂರು: ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರ ಸಮಾಪನ ನಗರ ಪ್ರದೇಶದಲ್ಲಿ ಶ್ರೀವಂತರು ಹೆಚ್ಚಿದ್ದು ಅವರಿಗೆ ಸಮ್ಮರ್ ಕ್ಯಾಂಪ್ ಹೆಸರಲ್ಲಿ ಶಿಬಿರ ನಡೆಯುತ್ತದೆ, ಅದೇ ರೀತಿ ಗ್ರಾಮೀಣ ಭಾಗದಲ್ಲಿರುವ ಬಡಮಕ್ಕಳಿಗೆ ಇಲಾಖೆಯಿಂದ ನಡೆಯುವ ಬೇಸಿಗೆ ಶಿಬಿರ ಅತ್ಯಂಯ ಪ್ರಯೋಜನಕಾರಿ ಎಂದು ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಫಿರೋಜ್ ಅಭಿಪ್ರಾಯಪಟ್ಟರು. ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಹಾಗೂ ಪಾವೂರು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತು ದಿನಗಳ ಮಕ್ಕಳ ಬೇಸಿಗೆ ಶಿಬಿರದ ಶನಿವಾರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬ ಮಕ್ಕಳಲ್ಲೂ ವಿಭಿನ್ನ ಪ್ರತಿಭೆಗಳಿದ್ದು ಪ್ರದರ್ಶನ ಹಾಗೂ ಬೆಳೆಸಲು ಶಿಬಿರ ಉತ್ತಮ ವೇದಿಕೆ, ಇದರಲ್ಲಿ ಭಾಗವಹಿಸುವ ಮಕ್ಕಳು ತಮ್ಮಲ್ಲಿರುವ ಪ್ರತಿಭೆ ಮುಂದೆಯೂ ಉಳಿಸುವ ನಿಟ್ಟಿನಲ್ಲಿ ಮುಂದೆ ನಡೆಯುವ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ಸಾಕಾರಪಡಿಸಿಕೊಳ್ಳಬೇಕು…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್  ಅಳೇಕಲ: “ಸುನ್ನೀ ಸೆಂಟರ್” ಅಳೇಕಲ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್, ಎಸ್ ಎಸ್ ಎಫ್, ಎಸ್ ವಿ ಎಸ್, ಜಂಟಿ ಆಶ್ರಯದಲ್ಲಿ ದಿನಾಂಕ 12/5, ಶುಕ್ರವಾರಂದು ಇಶಾ ನಮಾಝಿನ ಬಳಿಕ “ರಮಝಾನ್ ಕಾರ್ಯಕ್ರಮಗಳ ಪೂರ್ವ ಸಿದ್ಧತಾ ಸಭೆ”ಯು ಅಳೇಕಲದ  “ಬಿಗ್ ಹೌಸ್” ನಲ್ಲಿ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಸಯ್ಯಿದ್ ಜಲಾಲ್ ತಂಗಳ್ ಅಳೇಕಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರತೀ ವರ್ಷವೂ ರಮಝಾನ್ ತಿಂಗಳಲ್ಲಿ ಆಚರಿಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳನ್ನು ಈ ವರ್ಷವೂ ಬಹಳ ವಿಜ್ರಂಭಭಣೆ ಯಿಂದ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಆ ಪೈಕಿ ಅಳೇಕಲ ಅಚ್ಚಿ ಸಾಹಿಬ್ (ಖ.ಸಿ) ದರ್ಗಾ ಝಿಯಾರತ್, ಮಸೀದಿ ಮತ್ತು ಪರಿಸರ ಸ್ವಚ್ಛತಾ ಕಾರ್ಯಕ್ರಮ, ರಮಝಾನ್ ಕಿಟ್ ವಿತರಣೆ, ಮಹಿಳಾ ತರಗತಿ, ಬದ್ರ್ ಅನುಸ್ಮರಣೆ, ಇಫ್ತಾರ್ ಮೀಟ್, ಇಱ್ತಿಕಾಫ್ ಮತ್ತು ಖತಮುಲ್ ಕುರ್‍ಆನ್, ಈದ್ ಕಿಟ್ ವಿತರಣೆ, ಕುರ್‍ಆನ್ ಸ್ಪರ್ಧೆ, ಝಿಯಾರತ್ ಟೂರ್ ಸಹಿತ ಹಲವಾರು ಕಾರ್ಯಕ್ರಮಗಳ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್  ಉಳ್ಳಾಲ: ಸತ್ವಾಧಾರಿತ ಕೃತಿಗಳು, ಉನ್ನತ ಭಾಷೆಗಳ ರಚನೆಯ ಮೂಲಕ ಹಿಂದು ಧರ್ಮದ ವಿಚಾರಗಳನ್ನು ಎತ್ತಿಹಿಡಿದು, ಧರ್ಮಕ್ಕಾಗಿ ಜೀವನ ತ್ಯಾಗ ಮಾಡಿದ ಗುರು ಶಂಕರಾಚಾರ್ಯರ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಎಲ್ಲರು ಶ್ರಮಿಸಬೇಕಿದೆ ಎಂದು ಮಂಗಳೂರು ಎಸ್ ಡಿಎಂ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಕೆ.ದೇವರಾಜ್ ಅಭಿಪ್ರಾಯಪಟ್ಟರು. ಅವರು ಶ್ರೀ ಶಂಕರ ಪ್ರತಿಷ್ಠಾನ ಮತ್ತು ಶ್ರೀ ಶಾಂಕರ ತತ್ವಪ್ರಸಾರ ಅಭಿಯಾನಂ, ಕೋಟೆಕಾರು ಶ್ರೀ ಶೃಂಗೇರಿ ಮಠದ ಆಶ್ರಯದಲ್ಲಿ ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಜರಗಿದ ಶ್ರೀ ಶಂಕರ ಜಯಂತಿ ಉತ್ಸವ -2017ರ ಸಮಾರೋಪ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗುರುಗಳ ಪ್ರತಿಪಾದನೆ ಶೈಲಿ, ನಿಖರ ಉದ್ದೇಶಗಳು ಅವರ ಸಾಹಿತ್ಯದಲ್ಲಿತ್ತು. ಅವರ ಉದ್ದೇಶಗಳನ್ನು ಕಾರ್ಯಗತಗೊಳಿಸಲು ವೈವಿಧ್ಯತೆಯಲ್ಲಿ ಏಕತೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಸಾಮಾಜಿಕ ಕಳಕಳಿಗಳಾದ ನೊಂದವರ ಕಷ್ಟಗಳಿಗೆ ಸ್ಪಂಧನೆ, ವೃದ್ಧರಿಗೆ ಅನುಕೂಲವಾಗುವ ಸೇವೆಗಳು, ಉಚಿತ ವೈದ್ಯಕೀಯ ಸೇವೆಗಳ ಂತಹ ಕಾರ್ಯ ಉತ್ಸವದ ಮೂಲಕ ಆಗಬೇಕಿದೆ. ವೈವಿಧ್ಯತೆಯಲ್ಲಿ ಏಕತೆಯ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್  ಉಳ್ಳಾಲ: ಉಳ್ಳಾಲದ ಸಮುದ್ರ ತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಕೈಕೋ ರಸ್ತೆ, ಕಿಲೇರಿಯ, ಉಚ್ಚಿಲ ಭಾಗದ ಮನೆಗಳಿಗೆ ಸಮುದ್ರದ ಅಲೆಗಳು ಏರಿಳಿತಿದ ಸಂದರ್ಭದಲ್ಲಿ ಅಪ್ಪಳಿಸಲು ಆರಂಭವಾಗಿದೆ. ಮಳೆಗಾಲ ಆರಂಭವಾದರೆ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿದರೆ, ಈ ಭಾರಿ ಮಳೆ ಆರಂಭವಾಗದೆ ಕೆಲ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭವಾಗಿದೆ. ಕೈಕೋ ಭಾಗದಲ್ಲಿ ನಾಲ್ಕು ಮನೆಗಳು, ಕಿಲೇರಿಯಾನಗರ ಮತ್ತು ಉಚ್ಚಿಲ ಭಾಗದಲ್ಲಿ ಮತ್ತೆ ನಾಲ್ಕು ಮನೆಗಳಿಗೆ ಅಲೆಗಳು ಅಪ್ಪಳಿಸುತ್ತಿವೆ. ಮಧ್ಯಾಹ್ನ ವೇಳೆ ಸಮುದ್ರದಲ್ಲಿ ಏರಿಳಿತ ಉಂಟಾಗುವ ಸಂದರ್ಭ ಅಲೆಗಳು ಅಬ್ಬರ ಹೆಚ್ಚುತ್ತಿವೆ. ಭೀತಿಯ ವಾತಾವರಣ: ಮಳೆ ಆರಂಭವಾಗದೆ ಸಮುದ್ರ ಅಪ್ಪಳಿಸಲು ಆರಂಭವಾಗಿರುವುದರಿಂದ ಸ್ಥಳದಲ್ಲಿರುವ ಮನೆಮಂದಿಗೆ ಆತಂಕದ ವಾತಾವರಣ ಮನೆ ಮಾಡಿದೆ. ಇದರಿಂದ ರಾತ್ರಿ ಮತ್ತು ಮಧ್ಯಾಹ್ನದ ವೇಳೆ ಮನೆಯ ಗೋಡೆ ಯಾವಾಗ ಉರುಳಿ ಬೀಳುತ್ತವೆ ಅನ್ನುವ ಭೀತಿಯಲ್ಲಿದ್ದಾರೆ. ಕೂಡಲೇ ತಾತ್ಕಾಲಿಕ ತಡೆಯನ್ನು ಸರಕಾರ ಒದಗಿಸಬೇಕಿದೆ ಅನ್ನುವ ಆಗ್ರಹ ಸ್ಥಳೀಯರದ್ದಾಗಿದೆ. ರೂ. 250 ಕೋಟಿ ಅನುದಾನದಲ್ಲಿ ಸಮುದ್ರಕ್ಕೆ ಶಾಶ್ವತ ತಡೆಗೋಡೆ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್  ದೇರಳಕಟ್ಟೆ : ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಗೆ ಶೇ.93 ಪಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 20 ವಿಶಿಷ್ಟ ಶ್ರೇಣಿಯಲ್ಲಿ 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್  ತೊಕ್ಕೊಟ್ಟು: ಬಿಜೆಪಿ ಕುಂಪಲ ಬೂತ್ ಸಮಿತಿ ವತಿಯಿಂದ ಪಂ|| ದೀನ್ ದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ವರ್ಷ ಪ್ರಯುಕ್ತ ತೊಕ್ಕೊಟ್ಟುವಿನಿಂದ ಕುಂಪಲದವರೆಗೆ ವಿಜಯ ಸಂಕಲ್ಪ ರ್ಯಾಲಿ ಭಾನುವಾರ ನಡೆಯಿತು. ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಧ್ವಜ ಹಸ್ತಾಂತರಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ದಕ್ಷಿಣ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ್ ಅಡ್ಯಂತಾಯ, ಜಿ.ಪಂ ಮಾಜಿ ಸದಸ್ಯ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಮೀತಾ ಶ್ಯಾಮ್, ಬಿಜೆಪಿ ದ.ಕ. ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಜಿ ಡಾ| ಕೆ. ಎ. ಮುನೀರ್ ಬಾವಾ, ಜೀವನ್ ತೊಕ್ಕೊಟ್ಟು, ದಯಾನಂದ ತೊಕ್ಕೊಟ್ಟು ಮುಂತಾದವರು ಉಪಸ್ಥಿತರಿದ್ದರು.

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ಉಳ್ಳಾಲ: ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದ್ದು, ಚಿಕಿತ್ಸೆಯ ಪ್ರತೀ ಹಂತದಲ್ಲೂ ದಾದಿಯರ ಸೇವೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ದಾದಿಯರು ಆಸ್ಪತ್ರೆಗೆ ಹೃದಯವಿದ್ದಂತೆ ಎಂದು ಕ್ಷೇಮಾ ಕುಲಸಚಿವ ಡಾ| ಜಯಪ್ರಕಾಶ್ ಶೆಟ್ಟಿ ಅಭಿಪ್ರಾಯಪಟ್ಟರು. ನಿಟ್ಟೆ ವಿಶ್ವವಿದ್ಯಾಲಯದ ಪಾನೀರ್‍ನಲ್ಲಿರುವ ನಿಟ್ಟೆ ಉಷಾ ಇನ್ಸ್‍ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ವತಿಯಿಂದ ನರ್ಸಿಂಗ್ ಕ್ಷೇತ್ರದ ಸಂಸ್ಥಾಪಕರಾದ ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಗ್ಲಾಸ್ ಹೌಸ್‍ನಲ್ಲಿ ಶುಕ್ರವಾರ ಅಂತರಾಷ್ಟ್ರೀಯ ದಾದಿಯರ ದಿನ ಕಾರ್ಯಕ್ರಮ ಉದ್ಘಾಟಿಸಿ ಉತ್ತಮ ಸೇವೆಗೈದ ದಾದಿಯರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಜೊತೆ ನೇರ ಸಂಪರ್ಕ ಇಟ್ಟುಕೊಂಡು ಮಾನವೀಯ ಸೇವೆಯ ಮುಖಾಂತರ ಗುಣಮುಖವನ್ನಾಗಿಸುವಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ವೈದ್ಯೋ ನಾರಾಯಣ ಹರಿ ಎನ್ನುವ ಮಾತಿನಲ್ಲಿ ದಾದಿಯರಿಗೆ ಪ್ರಮುಖ ಸ್ಥಾನ ಸಲ್ಲುತ್ತದೆ ಎಂದು ಹೇಳಿದರು. ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕ ಡಾ| ಮೇಜರ್ ಶಿವಕುಮಾರ್ ಹಿರೇಮಠ್ ಮಾತನಾಡಿ ವೈದ್ಯಕೀಯ ಕ್ಷೇತ್ರದ ಪ್ರಮುಖ…

Read More

ಉಳ್ಳಾಲ ನ್ಯೂಸ್ ನೆಟ್‍ವರ್ಕ್ ನರಿಂಗಾನ: ಹಲವು ವರ್ಷಗಳಿಂದ ಹೂಳೆತ್ತದೆ ಜನರಿಗೆ ಉಪಯೋಗವಾಗದ ರೀತಿಯಲ್ಲಿ ನರಿಂಗಾನ ಗ್ರಾಮದ ಅಗಳ್ದಬೆಟ್ಟುವಿನಲ್ಲಿದ್ದ ಕೆರೆ ಅಭಿವೃದ್ಧಿಗೆ ರೂ. 7 ಲಕ್ಷ ಅನುದಾನ ಕೊಡುವುದಾಗಿ ಕುರ್ನಾಡು ಕ್ಷೇತ್ರ ಜಿಲ್ಲಾ ಪಂಚಾಯಿತಿ ಸದಸ್ಯ ಮಮತಾ.ಡಿ.ಎಸ್ ಗಟ್ಟಿ ಹೇಳಿದ್ದಾರೆ. ನರಿಂಗಾನದ ಅಗಳ್ದಬೆಟ್ಟುವಿನಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಿದ್ದು, ಈ ನಿಟ್ಟಿನಲ್ಲಿ ಸ್ಥಳದಲ್ಲಿರುವ ಕೆರೆಯನ್ನು ಅಭಿವೃದ್ಧಿ ನಡೆಸಿ ಗ್ರಾಮದ ಜನರಿಗೆ ಪೂರೈಕೆ ಮಾಡುವ ಉದ್ದೇಶದಿಂದ ಭೇಟಿ ನೀಡಿ ಅನುದಾನ ಒದಗಿಸುವ ಭರವಸೆ ನೀಡಿದರು. ಅಭಿವೃದ್ಧಿಗೆ ಅನುದಾನ ಸಾಲದೇ ಇದ್ದಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಹೆಚ್ಚುವರಿ ಅನುದಾನ ಪೂರೈಸುವುದಾಗಿ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ತಿಳಿಸಿದರು. ಈ ಸಂದರ್ಭ ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಉಪಾಧ್ಯಕ್ಷ ಮಿನಾಕ್ಷಿ, ಅಭಿವೃದ್ದಿ ಅಧಿಕಾರಿ ನಳಿನಿ ಎ.ಕೆ, ನರಿಂಗಾನ ಪಂ. ಸದಸ್ಯರಾದ ಮುರಳೀಧರ ಶೆಟ್ಟಿ, ಅಬ್ದುಲ್ ರಹಿಮಾನ್ ಚಂದಹಿತ್ಲು, ಫಯಾಝ್, ಬೇಬಿ,ಸಜಾತ, ಅಬ್ದುಲ್ ಲತೀಫ್ ಕಾಫಿಕಾಡ್, ಅಬ್ದುಲ್ ಖಾದರ್ ಸ್ಥಳೀಯರಾದ ಇಬ್ರಾಹೀಂ, ಪಿಯೂಸ್…

Read More