Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ವತಿಯಿಂದ ಸ್ವಾತಂತ್ರ್ಯೊತ್ಸವವನ್ನು ಆಚರಿಸಲಾಯಿತು, ಅಡ್ಕರೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಬಹುಮಾನ್ಯ ಹಂಝ ಸಖಾಫಿ ಅಲ್ ಅಝ್ಹರಿ ದುವಾ ನೆರವೇರಿಸಿದರು. ಸಂಘದ ಅದ್ಯಕ್ಷ ರಾದ ಮಹಮ್ಮದ್ ನಿಯಾಝ್ ಧ್ವಜಾರೋಹಣ ಮಾಡಿದರು. ಸಿರಾಜ್ ಅಡ್ಕರೆ ಪ್ರಾಸ್ತಾವಿಕ ಭಾಷಣ ಮಾಡಿ ಮಾತಾನಾಡುತ್ತಾ ಪ್ರಸಕ್ತ ಸನ್ನಿವೇಶದಲ್ಲಿ ನಾವು ನಮ್ಮ ದೇಶಪ್ರೇಮ ದ ಸರ್ಟಿಫಿಕೇಟ್ ಇನ್ನೊಬ್ನರಿಗೆ ತೋರ್ಪಡಿಸುವ ಅನಿವಾರ್ಯತೆ ಬಂದಿದೆ, ದೇಶಕ್ಕಾಗಿ ಹಿಂದು ಮುಸಲ್ಮಾನರು ಒಗ್ಗಟ್ಟಾಗಿ ಹೋರಾಟ ಮಾಡಿ ತ್ಯಾಗ ಬಲಿದಾನದಿಂದ ನಮಗೆ ನಾವು ಸ್ವತಂತ್ರವಾಗಿ ಜೀವಿಸುವಂತೆ ಮಾಡಿರುತ್ತಾರೆ, ಆದರೆ ಇಂದು ನಾವು ಧರ್ಮದ ಹೆಸರಿನಲ್ಲಿ ಕಾದಾಡುತಿದ್ದೇವೆ, ಕೋಮುವಾದಿಗಳಿಗೆ ನಮ್ಮ ದೇಶಪ್ರೇಮ ದ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ, ಅದು ನಮ್ಮ ರಕ್ತದ ಕಣಕಣದಲ್ಲೂ ಇದೆ , ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ನಾವು ಸದಾ ಸಿದ್ದ, ಎಂದರು, ವೇದಿಕೆಯಲ್ಲಿ ಅಡ್ಕರೆ ಪಡ್ಪು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ರಾದ ಕೆ.ಯು. ಮುಹಮ್ಮದ್, ರಹ್ಮಾನಿಯಾ ಮದ್ರಸ ಅಡ್ಕರೆ ಪಡ್ಪು ಇದರ ಮುಖ್ಯೊಪಾದ್ಯಯರಾದ…

Read More

UN NETWORKS ಮಕ್ಕಾ: ಭಾರತದ 71ನೇ ಸ್ವಾತಂತ್ರೋತ್ಸವನ್ನು ಭಾರತದ ಹಜ್ಜಾಜಿಗಳೊಂದಿಗೆ ಪವಿತ್ರ ಮಕ್ಕಾದ ಮಣ್ಣಿನಲ್ಲಿ ಕರ್ನಾಟಕ ಕಲ್ಚರಲ್ ಪೌoಡೇಷನ್ ವಿಜೃಂಭಣೆಯಿಂದ ಆಚರಿಸಿತು.ಮಂಗಳೂರು ಈದ್ಗಾ ಜುಮಾ ಮಸ್ಜಿದ್ ಖತೀಬ್ ಸ್ವದಕತ್ತುಲ್ಲಾ ಮುಸ್ಲಿಯಾರ್ ಅವರು ಧ್ವಜಾರೋಹಣ ನಿರ್ವಹಿಸಿದರು . ಧ್ವಜಾರೋಹಣ ವೇಳೆ ಕೆಸಿಎಫ್ ಕಾರ್ಯಕರ್ತರು ಭಾರತ ರಾಷ್ಟ್ರ ಗೀತೆ ಹಾಡಿದರು. ಈ ವೇಳೆ ಮಾತನಾಡಿದ ದಾರುಲ್ ಇರ್ಶಾದ್ ಎಜುಕೇಶನ್ ಮಾಣಿ ಇದರ ಆರ್ಗನೈಸರ್ ಉಮ್ಮರ್ ಸಖಾಫೀ ಪರಪ್ಪು ಮಾತನಾಡಿ ಭಾರತ ಸ್ವತಂತ್ರ ಕ್ಕಾಗಿ ಮಡಿದ ಮಹಾತ್ಮ ಗಾಂದೀಜಿ, ಮೌಲಾನ ಸೌಕತ್ ಅಲಿ, ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ (ರ.ಅ) ಹೀಗೇ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ತೆರೆದಿಟ್ಟರು. ಭಾರತೀಯರಾದ ನಾವು ಜಾತಿ, ಮತ, ಬೇಧ ಭಾವವನ್ನು ಮೆರೆತು ಐಕ್ಯತೆಯ ಭಾರತವನ್ನು ಕಟ್ಟುವಂತೆ ಕರೆ ನೀಡಿದರು. ಕೆಸಿಎಫ್ ಮುಖಂಡ ಅಬ್ಬಾಸ್ ಹಾಜಿ ಎಲಿಮಲೆ ಮಾತಾನಾಡಿ ನಾವು ವಿದೇಶದಲ್ಲಿದ್ದರೂ, ಭಾರತದ ಮೇಲಿನ ಪ್ರೀತಿ, ಪ್ರೇಮ ನಮ್ಮ ಮನದಲ್ಲಿ ಎಂದೆಂದಿಗೂ ಅಮರವಾಗಿದೆ ಎಂದರು.ಜಿದ್ದಾ ಝೋನಲ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ…

Read More

UN NETWORKS ಮೊಂಟೆಪದವು: ಶ್ರೀ ಕೃಷ್ಣ ಜನಮಾಷ್ಟಮಿ ಪ್ರಯುಕ್ತ ಮುಡಿಪು ಸಮೀಪದ ಮೊಂಟೆಪದವಿನಲ್ಲಿ ಜರಗಿದ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಗೆ ಮುಸ್ಲಿಮರು ತಂಪು ಪಾನೀಯ ನೀಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು. ಕೋಮುಸೂಕ್ಷ್ಮ ಪ್ರದೇಶ ಉಳ್ಳಾಲ ಹಾಗೂ ಮುಡಿಪುವಿನಲ್ಲಿ  ಇಂತಹ  ಸುಸಂದರ್ಭಗಳು ಮರುಕಳಿಸುತ್ತಿರುವುದರಿಂದ ಜನರಲ್ಲಿ ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕಾರಿಯಾಗುತ್ತಿದೆ.  ಶ್ರೀ ಶಾರದಾಂಬ ಭಜನಾ ಮಂದಿರ ಮೊಂಟೆಪದವು  ಇವರು ಆಚರಿಸಿದಂತಹ ಶ್ರೀ ಕೃಷ್ಣ ಜನಮಾಷ್ಟಮಿ ಉತ್ಸವದ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ಅಂಗವಾಗಿ  ಮೊಂಟೆಪದವಿನ ಮಠದಿಂದ  ಭಜನಾ ಮಂದಿರಕ್ಕೆ ಶೋಭಾಯಾತ್ರೆ ನಡೆದಿತ್ತು. ಇದರಲ್ಲಿ  ಭಾಗವಹಿಸಿದ್ದ  ನೂರಕ್ಕೂ ಅಧಿಕ ಹಿಂದು ಬಾಂಧವರಿಗೆ, ಮೊಂಟೆಪದವು ಜಂಕ್ಷನ್ನಿನಲ್ಲಿ  ಮುಸ್ಲಿಂ ಬಾಂಧವರು ಸಿಹಿತಿಂಡಿ ಜತೆಗೆ  ತಂಪು ಪಾನೀಯ ವಿತರಿಸಿದರು. ಶೋಭಾಯಾತ್ರೆಯಲ್ಲಿ  ಭಾಗವಹಿಸಿ ದನಿದ ಹಿಂದು ಬಾಂಧವರಿಗೆ  ತಂಪು ಪಾನೀಯ ಬಹಳ ಸಹಕಾರಿಯಾಯಿತು. ಈ ಹಿಂದೆ  ಮುಸ್ಲಿಂ ಸಮುದಾಯದ ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ  ಮೋಂಟುಗೋಳಿ ಪ್ರದೇಶದಲ್ಲಿ  ಹಿಂದು ಬಾಂಧವರು ಸಿಹಿತಿಂಡಿಯನ್ನು ಮಿಲಾದ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಮಂದಿಗೆ ವಿತರಿಸಿದ್ದರು.  ಎರಡು ಸಮುದಾಯದ ಅನ್ಯೋನ್ಯತೆಯೂ…

Read More

UN NETWORKS ಕುಂಪಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 20ನೇ ವರ್ಷದ ಮೊಸರುಕುಡಿಕೆ ಉತ್ಸವವು ಕುಂಪಲ ಶ್ರೀ ಬಾಲಕೃಷ್ಣ ಮಂದಿರದಲ್ಲಿ ಸೋಮವಾರ ನಡೆಯಿತು. ಧಾರ್ಮಿಕ ಕಾರ್ಯಕ್ರಮಕ್ಕೆ ಶಾಲಿನಿ ಗಣೇಶ್ ಅಂಚನ್ ಕುಂಪಲ ದಂಪತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ,ಗೌರವ ಅಧ್ಯಕ್ಷ ಕೇಶವದಾಸ್ ಬಗಂಬಿಲ,ಉತ್ಸವ ಸಮಿತಿ ಅಧ್ಯಕ್ಷ ಶಿವಾನಂದ ಟೈಲರ್,ಮಹಿಳಾ ಸಮಿತಿ ಅಧ್ಯಕ್ಷ ಶ್ಯಾಮಲಾ,ಕಾರ್ಯದರ್ಶಿ ರವೀಂದ್ರ ಕುಂಪಲ,ಹರೀಸ್ ಮೂರುಕಟ್ಟೆ,ಶ್ರೀಮತಿ ಲಕ್ಷ್ಮಿ,ಪ್ರವೀಣ್ ಎಸ್.ಕುಂಪಲ,ಉಮೇಶ್ ಗಾಂಬೀರ್,ಎಸ್.ಎಸ್.ನಾಯಕ್,ಮಾದವ ಬಂಗೇರ, ಆನಂದ ಎನ್. ಕೋಟೆಕಾರ್ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಅನಿಲ್ ಬಗಂಬಿಲ, ಪ್ರಧಾನ ಅರ್ಚಕ ಉಗ್ಗಪ್ಪ ಟೈಲರ್,ಕೃಷ್ಣ ಕುಂಪಲ,ಪುಷ್ಪಲತಾ ಡಿ.ಶೆಟ್ಟಿ ಉಪಸ್ಥಿತರಿದ್ದರು.

Read More

UN NETWORKS ಮಡ್ಯಾರ್ : ಮಡ್ಯಾರ್ ಫ್ರೆಂಡ್ಸ್ ಮಡ್ಯಾರ್ ವತಿಯಿಂದ 71 ನೇ ಸ್ವಾತಂತ್ರೊತ್ಸವ ಮಡ್ಯಾರ್ ಮೈದಾನದಲ್ಲಿ ನಡೆಯಿತು. ಧ್ವಜಾರೋಹಣವನ್ನು ಸುರೇಶ್ ಗುರೂಜಿಯವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹರೀಶ್ ಮಡ್ಯಾರ್,ದೀರಜ್ ಕೊಂಡಾಣ,ಪ್ರವೀಣ್ ಶೆಟ್ಟಿ ನಡಾರ್,ತಾರನಾಥ ಶೆಟ್ಟಿ ಮಡ್ಯಾರ್,ದಿವ್ಯ ಶೆಟ್ಟಿ,ಸಂತೋಷ್ ಶೆಟ್ಟಿ ಬಾಗವಹಿಸಿದ್ದರು.ಚಂದ್ರಹಾಸ ರೈ ಪಿಲಾರ್ ಸ್ವಾಗತಿಸಿದರು.ಸಂಪತ್ ಮಡ್ಯಾರ್ ದನ್ಯವಾದಗೈದರು. ……………………………………………………………………………………………. ಅಂಬಿಕಾರೋಡ್: ಪೊಲದವರ ಯಾನೆ ಗಟ್ಟಿ ಸಮಾಜ ಸೇವಾ ಸಂಘದ ವತಿಯಿಂದ ಅಂಬಿಕಾರೋಡಿನಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು.ಸಮಾಜದ ಅಧ್ಯಕ್ಷ ಪವಿತ್ರ ಕುತ್ತಾರ್ ಗಟ್ಟಿ ಧ್ವಜಾರೋಹಣ ನೆರವೇರಿಸಿದರು. ………………………………. ಉಳ್ಳಾಲ: ಅನುದಾನಿತ ಮೊಗವೀರ ಹಿ.ಪ್ರಾ.ಶಾಲೆಯಲ್ಲಿ 71 ನೇ ಸ್ವಾತಂತ್ರ್ಯ ವರ್ಷದ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಸತೀಶ್ ಪುತ್ರನ್ ಧ್ವಜಾರೋಹಣವನ್ನು ನೆರವೇರಿಸಿದರು. ವ್ಯಾಘ್ರ ಚಾಮುಂಡೇಶ್ವರಿ ಟ್ರಸ್ಟ್‍ನ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಸಮಿತಿ ಸದಸ್ಯ ರೋಹಿದಾಸ್ ಬಂಗೇರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. …………………………………. ತಲಪಾಡಿ: ಫ್ರೆಂಡ್ಸ್ ಪಿಲಿಕೂರು ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಟಿ.ಎಂ ಇಬ್ರಾಹಿಂ ಧ್ವಜಾರೋಹಣವನ್ನು ನೆರವೇರಿಸಿದರು.…

Read More

UN NETWORKS ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಮಹಾತ್ಮರ ತ್ಯಾಗ, ಬಲಿದಾನ ಶ್ರಮ ಮತ್ತು ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುವಂತಾಯಿತು. ಬ್ರಿಟಿಷರ ದಬ್ಬಾಳಿಕೆಯ ಕಾರ್ಗತ್ತಲೆಯಿಂದ ಬೆಳಕಿಗೆ ತಂದ ಆಗಸ್ಟ್ 15 ಭಾರತೀಯರೆಲ್ಲರಿಗೂ ಸಂಭ್ರಮದ ದಿನವಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಸುಮಾರು 40 ಜನ ಗೃಹರಕ್ಷಕರು ಉಪಸ್ಥಿತರಿದ್ದರು.

Read More

UN NETWORKS ಮಾಡೂರು: ಶತ್ರು ರಾಷ್ಟ್ರವಾದ ಚೀನಾದ ವಸ್ತುಗಳನ್ನು ಮನೆ ಮನೆಯಲ್ಲೂ ಹೆಚ್ಚಾಗಿ ಬಳಕೆ ಮಾಡುವ ಮೂಲಕ ಪರೋಕ್ಷವಾಗಿ ಚೀನಾ ದೇಶಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರು ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ದೇಶಿಯ ಉತ್ಪನ್ನಗಳನ್ನು ಹೆಚ್ಚಾಗಿ ಉಪಯೋಗಿಸಬೇಕಿದೆ ಎಂದು ಡಾ. ಅಣ್ಣಯ್ಯ ಕುಲಾಲ್ ಅಭಿಪ್ರಾಯಪಟ್ಟರು. ಅವರು ಶಬರಿ ಫ್ರೆಂಡ್ಸ್ ಮಾಡೂರು ಇವರ ಆಶ್ರಯದಲ್ಲಿ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮಾಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಮುದ್ದು ಕೃಷ್ಣ-2017 ಪುಟಾಣಿಗಳ ಪ್ರತಿಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಷ್ಟ ಸುಖವನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸುವವರು ಮಾತ್ರ ಜೀವನದಲ್ಲಿ ಏಳಿಗೆಯ ಮೆಟ್ಟಿಲನ್ನು ಏರಲು ಸಾಧ್ಯ. ಸಾಧನೆಗೆ ಬಡವರು ಶ್ರೀಮಂತರು ಎಂಬ ಭೇದವಿಲ್ಲ. ಸಾಧನೆ ಮಾಡುವವರು ಮಾತ್ರ ಸಾಧಕರಾಗಿ ಹೊರ ಬರಲು ಸಾಧ್ಯ. ಸ್ವದೇಶಿ ವಸ್ತುಗಳ ಬದಲಿಗೆ ವಿದೇಶಿ ವಸ್ತುಗಳ ಬಳಕೆ ಹೆಚ್ಚಾಗುತ್ತಿದ್ದು ಆಹಾರ ಪದ್ದತಿ, ಉಡುಗೆ ತೊಡುಗೆ ಎಲ್ಲವನ್ನು…

Read More

UN NETWORKS ಉಳ್ಳಾಲ: ಸ್ವಾತಂತ್ರ್ಯದಿನದಂದು ಉಳ್ಳಾಲದಲ್ಲಿ ಅಬ್ಬಕ್ಕ ರಾಣಿಯನ್ನು ಸ್ಮರಿಸುವ ಉದ್ದೇಶದಿಂದ ಮುಂದಿನ ವರ್ಷ ಅರ್ಥಪೂರ್ಣ ಆಚರಣೆಯನ್ನು ನಡೆಸುವ ಉದ್ದೇಶವನ್ನು ಹೊಂದಿದ್ದು, ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ದೇಶ ಭಕ್ತರನ್ನು ಗೌರವಿಸುವ ಕೆಲಸ ಅದರ ಮೂಲಕ ಆಗಬೇಕಿದೆ ಎಂದು ಕರಾವಳಿ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಅಭಿಪ್ರಾಯಪಟ್ಟರು. ಅವರು ಕರಾವಳಿ ಸಾಂಸ್ಕೃತಿಕ ಪರಿಷತ್ ಹಾಗೂ ವಿದ್ಯಾರಣ್ಯ ಕಲಾವೃಂದ ಉಳ್ಳಾಲದ ವತಿಯಿಂದ ಸ್ವಾತಂತ್ರ್ಯ ದಿನದ ಪ್ರಯುಕ್ತ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಪ್ರತಿಮೆಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿ ಮಾತನಾಡಿದರು. ಉಳ್ಳಾಲದವರಿಗೆ ದೇಶಕ್ಕಾಗಿ ಸೇವೆಗೈದ ಅಬ್ಬಕ್ಕಳನ್ನು ಆರಾಧಿಸುವ ಅವಕಾಶ ದೊರೆತಿರುವುದು ಸಂತಸದ ವಿಚಾರ. ಸ್ವಾತಂತ್ರ್ಯ ದಿನದಂದು ಅಬ್ಬಕ್ಕ ರಾಣಿಯ ಆಚರಣೆ ಜಿಲ್ಲೆಗೆ ಮಾದರಿಯಾಗುವ ರೀತಿಯಲ್ಲಿ ನಡೆಯಬೇಕಿದೆ. ಅದರಲ್ಲಿ ಎಲ್ಲಾ ಸಮುದಾಯದವರು ಪಾಲ್ಗೊಂಡು ದೇಶ ಸೇವೆಯಲ್ಲಿ ಪಾಲ್ಗೊಂಡವರನ್ನು ಗುರುತಿಸುವ ಹಾಗೂ ಗೌರವಿಸುವ ಉದ್ದೇಶವನ್ನು ಹೊಂದಿದ್ದೇವೆ. ಸೈನಿಕರನ್ನೇ ವಿರೋಧಿಸುವ ಪುಸ್ತಕ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ…

Read More

UN NETWORKS ಚೆಂಬುಗುಡ್ಡೆ: ಗಿಡನೆಡುವ ಮೂಲಕ ಪರಿಸರ ಒಳಿತಿಗಾಗಿ ನಡೆಯುವ ಕಾರ್ಯಕ್ರಮವನ್ನು ನಗರಸಭೆ ವ್ಯಾಪ್ತಿಯಲ್ಲಿ ಆಯೋಜಿಸಬೇಕೆಂದು ಎಂದು ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಅವರು ಸ್ವಾತಂತ್ರೋತ್ಸವದ ಪ್ರಯುಕ್ತ ಉಳ್ಳಾಲ ನಗರಸಭೆಯ 27 ನೇ ವಾರ್ಡಿನಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಳಯ ಆಗುವುದೆಂದು ಗೊತ್ತಿದ್ದರೂ, ಮನುಷ್ಯ ಮರಗಳನ್ನು ಕಡಿದು ಕಟ್ಟಡ ನಿರ್ಮಾಣದಲ್ಲೇ ನಿರತನಾಗಿದ್ದಾನೆ. ಈ ನಡುವೆ ಪರಿಸರಕ್ಕೆ ಪೂರಕವಾದ ಕೆಲಸವನ್ನು ಹಮ್ಮಿಕೊಳ್ಳುವುದರ ಮೂಲಕ ಬಿಸಿಲ ತಾಪಮಾನವನ್ನು ಕಡಿಮೆಗೊಳಿಸುವುದರ ಜತೆಗೆ ಪರಿಸರವನ್ನು ಉಳಿಸುವ ಕಾರ್ಯದಲ್ಲಿ ನಿರತರಾಗಬೇಕಿದೆ ಎಂದರು. ಈ ಸಂದರ್ಭ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಪೌರಾಯುಕ್ತೆ ವಾಣಿ.ವಿ.ಆಳ್ವ, ಉಳ್ಳಾಲ ನಗರಸಭೆಯ ಪರಿಸರ ಅಭಿವೃದ್ಧಿ ರಾಯಭಾರಿ ಮಾಧವ ಉಳ್ಳಾಲ್, ಸ್ಥಳೀಯ ಸದಸ್ಯ ಬಾಝಿಲ್ ಡಿಸೋಜ, ದರ್ಗಾ ಉಪಾಧ್ಯಕ್ಷ ಮಹಮ್ಮದ್ ತ್ವಾಹ, ಚೆಂಬುಗುಡ್ಡೆ ಮಸೀದಿ ಅಧ್ಯಕ್ಷ ಮಹಮ್ಮದ್ ಹನೀಫ್, ಅಬ್ಬಾಸ್ ಮುಸ್ಲಿಯಾರ್, ನಗರಸಭೆ ಸದಸ್ಯೆ ಭಾರತಿ , ನಾಮನಿರ್ದೇಶಿತ ಸದಸ್ಯರುಗಳಾದ ರವಿ ಕಾಪಿಕಾಡ್, ರಿಚ್ಚಿ ವೇಗಸ್…

Read More