UN NETWORKS ಮುಡಿಪು: ಗ್ರಾಮದ ಅಭಿವೃದ್ಧಿಗಾಗಿ ಪಂಚಾಯಿತಿ ಆಡಳಿತ ಮತ್ತು ತಾಲೂಕು ಪಂಚಾಯಿತಿ ಸದಸ್ಯರು ಶ್ರಮಿಸುತ್ತಿದ್ದು, ಇದರ ಒಂದು ಅಂಗವಾಗಿ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಹಾಗೂ ಮಂದಿರಕ್ಕೆ ಬರುವ ಭಕ್ತರಿಗೆ ತೊಂದರೆಯಾಗುತ್ತಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದು ಎಸ್ ಸಿ ಡಿಸಿಸಿ ನಿರ್ದೇಶಕರಾದ ಟಿ.ರಾಜರಾಂ ಭಟ್ ಹೇಳಿದ್ದಾರೆ. ಅವರು ಕುರ್ನಾಡು ಪಂಚಾಯಿತಿನ ರೂ. 2 ಲಕ್ಷ ಅನುದಾನ ಮತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಡಿ ನಿರ್ಮಾಣವಾಗಲಿರುವ ಮುಡಿಪು ಗಣೇಶಮಂದಿರಕ್ಕೆ ಹೋಗುವ ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಹಲವು ವರ್ಷಗಳಿಂದ ಮಂದಿರದಲ್ಲಿ ನಡೆಯುವ ಉತ್ಸವದ ಸಂದರ್ಭಗಳಲ್ಲಿ ಹಾಗೂ ರಸ್ತೆಯನ್ನು ಅವಲಂಬಿಸಿರುವ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಈ ಕುರಿತು ಮಂದಿರದ ಆಡಳಿತ ಪಂಚಾಯಿತಿಗೆ ಸಲ್ಲಿಸಿದ ಮನವಿಗೆ ಶೀಘ್ರವೇ ಸ್ಪಂಧಿಸಿದ ಅಧ್ಯಕ್ಷರು, ನೂತನ ಅಭಿವೃದ್ಧಿ ಅಧಿಕಾರಿ ಹಾಗೂ ಸ್ಥಳೀಯ ಸದಸ್ಯರ ಹಾಗೂ ತಾ.ಪಂ ಸದಸ್ಯರ ಶ್ರಮದಿಂದ ಶಾಶ್ವತ ರಸ್ತೆ ಕಾರ್ಯಗತವಾಗಿದೆ ಎಂದರು. ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ ಮಾತನಾಡಿ ಕುರ್ನಾಡು…
Author: UllalaVani
UN NETWORKS ಉಳ್ಳಾಲ: ಭಾರತದ ಮಣ್ಣನ್ನು ಪ್ರೀತಿಸುವುದು ಮಾತ್ರ ದೇಶ ಪ್ರೇಮವಲ್ಲ ಬದಲು ದೇಶದಲ್ಲಿ ಬದುಕು ಕಟ್ಟಿಕೊಂಡ ಸರ್ವ ಜಾತಿ, ಧರ್ಮ, ಪಂಗಡಗಳ ಜನರನ್ನು ಪ್ರೀತಿಸುವುದೇ ನಿಜವಾದ ದೇಶ ಪ್ರೇಮವಾಗಿದೆ ಎಂದು ಎಸ್ಸೆಸ್ಸೆಪ್ ರಾಷ್ಷೀಯ ಸಮಿತಿ ಪ್ರಧಾನ ಕಾರ್ಯದರ್ಶಿ,ರಾಜ್ಯ ಹಜ್ಜ್ ಸಮಿತಿ ಸದಸ್ಯ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ತಿಳಿಸಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸ್ವಾತಂತ್ರೋತ್ಸವದ ಅಂಗವಾಗಿ “ದೇಶ ಉಳಿಸಿ, ದ್ವೇಷ ಅಳಿಸಿ” ಎಂಬ ಘೋಷಣೆಯೊಂದಿಗೆ ಒಂದು ತಿಂಗಳ ಆಭಿಯಾನದ ಭಾಗವಾಗಿ ನಡೆದ ಅಝಾದಿ ರ್ಯಾಲಿಯ ಸಮಾರೋಪ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು. ದೇಶಾದ್ಯಂತ ಅಸಹಿಷ್ಣುತೆ ಬೆಳೆಯುತ್ತಿದ್ದು, ಇದನ್ನು ನಿಯಂತ್ರಿಸುವುದು ಸ್ವತಂತ್ರ ಭಾರತದ ಅತೀ ದೊಡ್ಡ ಸವಾಲಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ವಿರುವ ವಿವಿಧ ಧರ್ಮಗಳ ಮನುಷ್ಯರನ್ನು ಪ್ರೀತಿಸುವ ಕೆಲಸವಾಗಬೇಕಿದೆ. ದೇಶದ ಮಣ್ಣನ್ನು ಮಾತ್ರ ಪ್ರೀತಿಸಿದಲ್ಲಿ ದೇಶಪ್ರೇಮವಾಗುವುದಿಲ್ಲ, ಅದನ್ನು ಕಟ್ಟಬೇಕಾದ ಜನರನ್ನು ಪ್ರೀತಿಸುವವರು ಬೆಳೆಯಬೇಕಿದೆ ಎಂದರು. ಕರ್ನಾಟಕ ಇಹ್ಸಾನ್ ಚೇರ್ ಮೆನ್ ಎನ್.ಕೆ.ಎಂ ಶಾಫೀ ಸಅದಿ ಬೆಂಗಳೂರು ಮುಖ್ಯ ಪ್ರಭಾಷಣಗ್ಯದರು. ಎಸ್ಸೆಸ್ಸೆಪ್ ಜಿಲ್ಲಾಧ್ಯಕ್ಷ ಕೆ.ಪಿ…
UN NETWORKS ಉಳ್ಳಾಲ: ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಅರಿವಳಿಕಾ ಶಾಸ್ತ್ರದ ಅಂತಿಮ ವರ್ಷದ ವಿದ್ಯಾರ್ಥಿನಿ ಡಾ.ಸಾರಾ ಜೈಸನ್ ಇವರು ಕರ್ನಾಟಕ ರಾಜ್ಯಮಟ್ಟದ ಅರಿವಳಿಕಾ ಶಾಸ್ತ್ರದ ಸಮಾವೇಶದಲ್ಲಿ ಉದಯೋನ್ಮುಖ ಅಧ್ಯಾಪಕ ಶೋಧನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
UN NETWORKS ದೇರಳಕಟ್ಟೆ: ಎಸ್ ಇ ಝೆಡ್ ನಲ್ಲಿರುವ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿ. ನ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ ತರಬೇತಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಹಾಗೂ ಹಿಂದುಸ್ತಾನ್ ಇಮಡಸ್ಟ್ರಿಯಲ್ ಸೇಫ್ಟಿ ಮತ್ತು ಮಲ್ಪೆ ಲರ್ನಿಂಗ್ ಜಂಟಿಯಾಗಿ ಶಿಬಿರವನ್ನು ಹಮ್ಮಿಕೊಂಡಿತ್ತು. ಕೆ.ಎಸ್ ಹೆಗ್ಡೆ ವೈದ್ಯಕೀಯ ವಿಭಾಗದ ಅರ್ಥಶಾಶ್ತ್ರ ಪ್ರಾಧ್ಯಾಪಕ ಶ್ರೀಪಾದ ಜಿ ಮೆಹಂದಳೆ ಅವರು ತರಬೇತಿ ನಡೆಸಿಕೊಟ್ಟರು. ಸೈಟ್ ಪ್ರಬಂಧಕ ಅವನೀಶ್ ಹಾಗೂ ಸೇಫ್ಟಿ ಅಧಿಕಾರಿ ಘನಿ ಮೊಹಮ್ಮದ್ ಉಪಸ್ಥಿತರಿದ್ದರು. 30 ಮಂದಿ ಕಾರ್ಮಿಕರು ಶಿಬಿರದಲ್ಲಿ ಪಾಲ್ಗೊಂಡರು.
UN NETWORKS ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ದರ್ಗಾ ವಠಾರದಲ್ಲಿ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷರಾದ ಅಬ್ದುಲ್ ರಶೀದ್ ಉಳ್ಳಾಲ ಧ್ವಜಾರೋಹಣಗೈದರು. ಈ ಸಂದರ್ಭ ಸಯ್ಯಿದ್ ಮದನಿ ಅರಬಿಕ್ಟ್ರಸ್ಟ್ ಮುಫತ್ತಿಶ್ ಸುಲೈಮಾನ್ ಸಖಾಫಿ, ಕಾಲೇಜು ಪ್ರಾಂಶುಪಾಲ ಇಬ್ರಾಹೀಮ್ ಅಹ್ಸನಿ, ಮಜೀದ್ ಸಖಾಫಿ, ದರ್ಗಾ ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಕೋಶಾಧಿಕಾರಿ ಯು. ಕೆ. ಇಲ್ಯಾಸ್, ಅಡಿಟರ್ ಯು. ಟಿ. ಇಲ್ಯಾಸ್, ಜತೆ ಕಾರ್ಯದರ್ಶಿ ನೌಶಾದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಉಪಾಧ್ಯಕ್ಷರಾದ ಯು. ಎಚ್. ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಮೀರ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಮುಸ್ತಫ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ, ಅಲೀ ಮೋನು, ಕುಂಞ ಅಹ್ಮದ್, ಮೊಯ್ದಿನಬ್ಬ ಪೇಟೆ. ಸೇರಿದಂತೆ ಹಲವು ಸಮಿತಿ ಸದಸ್ಯರು, ಜಮಾತ್ ಸದಸ್ಯರು ಉಪಸ್ಥಿತರಿದ್ದರು. ಖತೀಬರಾದ…
UN NETWORKS ಉಳ್ಳಾಲ: ದೇಶಕ್ಕಾಗಿ ಬದುಕೋಣ, ದೇಶದ ಸತ್ಪ್ರಜೆಯಾಗಿ ಬದುಕಿ ದೇಶ ಸೇವೆ ಮಾಡೋಣ, ಇತಿಹಾಸದಿಂದ ಸ್ಪೂರ್ತಿ ಪಡೆದು, ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳೋಣ, ಕ್ರಾಂತಿಕಾರಿಗಳಲ್ಲಿ ಒಬ್ಬರಾದ ವಾಸುದೇವ ಬಲವಂತ ಪಡ್ಕೆಯಂತಹ ಆದರ್ಶ ವ್ಯಕ್ತಿತ್ವವನ್ನು ನಮ್ಮದಾಗಿಸೋಣ ಎಂದು ಬೆಂಗಳೂರಿನ ಐಬಿಯಂ ಸಾಫ್ಟ್ವೇರ್ ಕಂಪನಿಯ ಉದ್ಯೋಗಿ ರವಿತೇಜ ಶಾಸ್ತ್ರಿ ಹೇಳಿದರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಜರುಗಿದ 71ನೇಯ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಸಾರುವ ವೀರ್ ಸಾವರ್ಕರ್ ರವರ ಜೀವನದ ಕುರಿತಾದ ನಾಟಕ, ದೇಶಭಕ್ತಿಗೀತೆಗಳು ಪ್ರದರ್ಶಿಸಲ್ಪಟ್ಟವು. ವಿದ್ಯಾರ್ಥಿನಿ ಮಾನಸಿ ದೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಶಿಕ್ಷಕಿ ಶ್ರೀಮತಿ ವರ್ಷ ಅಥಿತಿಗಳನ್ನು ಸ್ವಾಗತಿಸಿದರು ಮತ್ತು ವಿದ್ಯಾರ್ಥಿ ರುದ್ರ ಪಾಟೀಲ್ ವಂದಿಸಿದರು.
UN NETWORKS ಯೆನೆಪೋಯ: ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಬಳಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಎಂಟು ಕಾರುಗಳ ಗಾಜುಗಳನ್ನು ದುಷ್ಕರ್ಮಿಗಳ ಗುಂಪೊಂದು ಪುಡಿಗೈದಿರುವ ಘಟನೆ ಶನಿವಾರ ತಡರಾತ್ರಿ ವೇಳೆ ಸಂಭವಿಸಿದ್ದು, ಘಟನೆಯಲ್ಲಿ ಕಾರೊಳಗಡೆ ಕುಳಿತಿದ್ದ ರೋಗಿ ಸಂಬಂಧಿಯೋರ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಾಲಿಬ್ ಹುಸೈನ್ ಎಂಬವರು ಗಾಯಗೊಂಡಿದ್ದಾರೆ. ಯೆನೆಪೋಯ ಆಸ್ಪತ್ರೆ ವಠಾರದಲ್ಲಿ ವಾಹನಗಳು ನಿಲ್ಲಿಸಲು ಸ್ಥಳಾವಕಾಶ ಇಲ್ಲದಿರುವುದರಿಂದ ಸಮೀಪದಲ್ಲೇ ಖಾಸಗಿ ಸ್ಥಳವನ್ನು ಬಾಡಿಗೆಗೆ ಪಡೆಯಲಾಗಿದೆ. ಶನಿವಾರ ತಡರಾತ್ರಿ 2 ರಿಂದ 3 ರವೇಳೆ ಪಾರ್ಕಿಂಗ್ ನಲ್ಲಿ ನಿಲ್ಲಿಸಿಡಲಾಗಿದ್ದ, ಕಾರಿನ ಬಳಿ ಮುಖಕ್ಕೆ ಬಟ್ಟೆ ಕಟ್ಟಿದ್ದ ಸ್ಥಿತಿಯಲ್ಲಿ ಬಂದ ದುಷ್ಕರ್ಮಿಗಳ ತಂಡ ಎಂಟು ಕಾರುಗಳ ಗಾಜುಗಳನ್ನು ಪುಡಿಗೈದಿರುವುದಲ್ಲದೆ, ವಾಹನಗಳಿಗೂ ಹಾನಿ ಮಾಡಿದೆ. ಈ ಸಂದರ್ಭ ಕಾರೊಳಗಡೆ ಮಲಗಿದ್ದ ರೋಗಿಯೋರ್ವರ ಸಂಬಂಧಿಕರು ಗಾಜು ತಗಲಿ ಗಾಯಗೊಂಡಿದ್ದಾರೆ. ಐದು ಕಾರುಗಳು ರೋಗಿಗಳ ಸಂಬಂಧಿಕರಿಗೆ ಸೇರಿದಲ್ಲಿ, ಇನ್ನು ಮೂರು ಕಾರುಗಳು ಆಸ್ಪತ್ರೆ ವೈದ್ಯರುಗಳಿಗೆ ಸೇರಿದ್ದಾಗಿದೆ. ಈ ಕುರಿತು ಅನೆಸ್ತೀಷಿಯಾ ವಿಭಾಗದ ಡಾ.ಶೈನಾ ಹಾಗೂ ಡಾ.ಅನಾ ಜೆಸಿಕಾ ಮರಿಯಂ ಹಾಗೂ…
UN NETWORKS ಬಾಯಾರು: ಸಹಸ್ರಾರು ಜನರು ಸೇರುವ ಬಾಯಾರು ಮುಜಮ್ಮಹ್ ನಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜಲಿಸ್ ಆಗುಸ್ಟ್ 18 ನಾಳೆ ರಾತ್ರಿ ನಡಯಲಿರುದು. ನಾಳೆ ಮಗರಿಬ್ ನಮಾಝಿನ ನಂತರ ನಡೆಯುವ ಅಥ್ಮೀಯ ಸ್ವಲಾತ್ ಮಜಲಿಸಿನಲ್ಲಿ ಖ್ಯಾತ ವಾಗ್ಮಿ ಅಶ್ರಫ್ ಸಅದಿ ಮಲ್ಲೂರು ಪ್ರಭಾಷಣೆ ಗೆಯ್ಯುವರು. ಅಥ್ಮೀಯ ನೇತಾರ,ಮುಜಮ್ಮಹ್ ಸಾರಥಿ ಅಸ್ಸಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿ ಕೋಯಾ ಅಲ್ಬುಖಾರಿ ಬಾಯಾರ ತಂಗಳ್ ಸ್ವಲಾತ್ ಮಜಲಿಸಿಗೂ ಕೋಟೂಪ್ರಾರ್ಥನೆಗೂ ನೇತೃತ್ವ ನೀಡುವರು. ಶರಫುಲ್ ಉಲಮಾ ಮಂಜನಾಡಿ ಅಬ್ಬಾಸ್ ಉಸ್ತಾದ್, ಅಬ್ದುಲ್ ಮದನಿ, ಅಬ್ದುಲ್ ಲತೀಫ್ ಸಅದಿ ಪಯಷಿ, ರಫೀಕ್ ಸಅದಿ ದೇಲಂಪಾಡಿ, ಸಿದ್ದೀಕ್ ಹಾಜಿ ಮಂಗಳೂರು, ಅಬ್ಬಾಸ್ ಮಂಗಳೂರು ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸುವರು.
UN NETWORKS ಮಂಗಳೂರು: ಅಕ್ಷರ ಇ-ಮ್ಯಾಗಝಿನ್ ಪ್ರಧಾನ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಈಲ್ ಅವರ “ಮಳೆ ಹನಿ” ಪುಸ್ತಕ ಬಿಡುಗಡೆ ಸಮಾರಂಭ ಮಂಗಳೂರಿನ ಸರಕಾರಿ ರಾಜ್ಯ ನೌಕರರ ಭವನದಲ್ಲಿ ನಡೆಯಿತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದಿನ್ ಬಾವಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ದ.ಕ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್. ಎಂ. ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ರಫೀಕ್ ಮಾಸ್ಟರ್, ದಿನೇಶ್ ಹೊಳ್ಳ, ಡಿ.ಐ. ಅಬೂಬಕರ್ ಕೈರಂಗಳ, ಫೈನ್ ಗೋಲ್ಡ್ ಡಿ.ಎಂ.ರಶೀದ್, ಯಂಶ ಬೇಂಗಿಲ, ಆಶಿಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದ ಸಾಧನೆಗೆ ಹನೀಫ್ ಹಾಜಿ ಗೋಳ್ತಮಜಲು ಅವರನ್ನು ಹಾಗೂ ಕಲಾಕ್ಷೇತ್ರದ ಸಾಧನೆಗೆ ತಾರಾನಾಥ್ ಕೈರಂಗಳ ಅವರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿ ಮತ್ತು…
UN NETWORKS ಕುವೈತ್: ಉದ್ಯೋಗವನ್ನು ಅರಸಿ ಕೊಲ್ಲಿ ರಾಷ್ಟ್ರಗಳಲ್ಲಿ ಜೀವಿಸಬೇಕಾದ ಸನ್ನಿವೇಶದಲ್ಲಿ ಕುವೈತ್ ನಲ್ಲಿ ಕೆಸಿಎಫ್ ಆಯೋಜಿಸಿದ ಭಾರತೀಯ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ಪ್ರೇಮದ ಕಾಳಜಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಫಾಹಿಲ್ ನಲ್ಲಿರುವ ಕೆಸಿಎಫ್ ಕೇಂದ್ರ ಕಛೇರಿಯಲ್ಲಿ ಬಹುಮಾನ್ಯ ಉಮರ್ ಫಾರೂಕ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ದುವಾದೊಂದಿಗೆ ಆರಂಭವಾಯಿತು. ಕೇಂದ್ರ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಎಲ್ಲರನ್ನೂ ಸ್ವಾಗತಿಸಿ ಕೆಸಿಎಫ್ ಕುವೈತ್ ನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದು ಕುವೈತ್ ನ ಅನಿವಾಸಿಗರಿಗೆ ಸಂತೋಷದ ಕ್ಷಣವಾಗಿದೆ. ಹೋರಾಟ,ತ್ಯಾಗದಿಂದ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ವನ್ನು ಗಳಿಸಿತು ಎಂದು ತಿಳಿಸಿದರು. ಅಧ್ಯಕ್ಷ ಭಾಷಣದಲ್ಲಿ ಬಹುಮಾನ್ಯ ಉಮರ್ ಫಾರೂಕ್ ಸಖಾಫಿಯವರು ನಮಗೆ ಭಾರತದಲ್ಲಿ ಇದ್ದಂತೆ ಸ್ವಾತಂತ್ರ್ಯ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದು ರಾಷ್ಟ್ರ ಪ್ರೇಮದ ಬಗ್ಗೆ ತಿಳಿಸಿ ದರು.ಜನಾಬ್ ಝಕ್ರಿಯಾ ಆನೆಕಲ್ ಮಾತನಾಡಿ ನಾವು ನಮ್ಮ ರಾಷ್ಟ್ರದ ಬಗ್ಗೆ ಪ್ರೀತಿಯನ್ನು ತೊರಿಸಬೇಕಾಗಿದೆ ಹುಬ್ಬುಲ್ ವತನ್ ಮಿನಲ್ ಈಮಾನ್(ಸ್ವರಾಜ್ಯ ಪ್ರೇಮವು ಈಮಾನಿನ…

