Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಅಪರಾಧ ಸುದ್ದಿಗಳು

ಮೂರನೇ ದಿನಕ್ಕೆ ಕಾಲಿಟ್ಟ ಅಮರಣಾಂತ ಉಪವಾಸ ಸತ್ಯಾಗ್ರಹ

UllalaVaniBy UllalaVaniApril 4, 2018Updated:April 5, 2018No Comments3 Mins Read
Facebook Twitter Pinterest LinkedIn Tumblr Email WhatsApp
????????????????????????????
Share
Facebook Twitter LinkedIn Pinterest Email WhatsApp

UN NETWORKS

ಕೈರಂಗಳ: ` ಕಳೆದ ಹತ್ತು ವರ್ಷದಲ್ಲಿ ಸುಮಾರು 35 ಗೋವುಗಳನ್ನು ಕಳೆದುಕೊಂಡಿದ್ದೇನೆ. ಮನಸ್ಸಿಗೆ ತುಂಬಾ ನೋವಾಗುತ್ತಿದೆ, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಮೇಯಲು ಯಾಕೆ ಬಿಡುತ್ತೀರಿ ಎಂದು ಬೈಯ್ದು ನಮ್ಮನ್ನು ವಾಪಸ್ಸು ಕಳುಹಿಸುತ್ತಾರೆಯೇ ಹೊರತು ದನಕಳವು ನಡೆಸಿದವರನ್ನು ಹುಡುಕುವ ಪ್ರಯತ್ನ ಮಾಡುತ್ತಿಲ್ಲ ಎಂದು ಕೊಣಾಜೆ ನಡುಪದವು ನಿವಾಸಿ ಸುಮಾರು 65 ರ ಹರೆಯದ ಹೈನುಗಾರಿಕೆ ನಡೆಸುತ್ತಿರುವ ಕಲ್ಯಾಣಿ ಅಲವತ್ತುಕೊಂಡರು.

ಗೋದರೋಡೆಗೈದವರ ಪತ್ತೆಗಾಗಿ ಟಿ.ಜಿ.ರಾಜಾರಾಂ ಭಟ್ ನೇತೃತ್ವದಲ್ಲಿ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಕೈಗೊಳ್ಳಲಾದ ಅಮರಣಾಂತ ಉಪವಾಸ ಸತ್ಯಾಗ್ರಹದ ಮೂರನೇ ದಿನವಾದ ಮಂಗಳವಾರ ನಡೆದ ಗೋ ಸಂತ್ರಸ್ತರ ಸಭೆಯಲ್ಲಿ ನೊಂದವರ ಮಾತು ಕೇಳಿಬಂತು.

ಗೋಕಳ್ಳರ ಅಟ್ಟಹಾಸಕ್ಕೆ ಜಗ್ಗದೆ ಇದೀಗ 6 ಹಸುವನ್ನು ಮನೆಯಲ್ಲಿ ಸಾಕುತ್ತಿದ್ದೇನೆ ಆದರೆ ಅದನ್ನು ಯಾವ ಕಟುಕ ಬಂದು ಕದ್ದುಕೊಂಡು ಹೋಗುತ್ತಾನೆ ಅನ್ನುವ ಭಯವೂ ಮನದಲ್ಲಿದೆ. ರಾತ್ರಿ ಮಲಗಿರುವ ಸಂದರ್ಭದಲ್ಲಿ ಗೋ ಹಂತಕರು ಬಂದು ಸ್ವಂತ ಮಗುವಿನಂತೆ ಸಾಕಿದ ಹಸುಗಳನ್ನು ಕದ್ದು ಕೊಂಡು ಹೋಗಿದ್ದಾರೆ. ಗೋ ಕಳ್ಳರನ್ನು ಆದಷ್ಟು ಬೇಗ ಹುಡುಕಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕಣ್ಣೀರಿಟ್ಟರು.

ಕೊಣಾಜೆ ನಿವಾಸಿ ಅಬೂಬಕರ್ ಎಂಬವರು ಮಾತನಾಡಿ ಎರಡು ಹಸುಗಳು ನೀಡುತ್ತಿದ್ದ ಹಾಲು ಮನೆಮಂದಿಗೆ ಮಾತ್ರವಲ್ಲ, ಮಾರಾಟ ನಡೆಸಿಯೂ ಜೀವನ ನಿರ್ವಹಿಸುತ್ತಿದ್ದೆವು. ಆದರೆ ಮಾ.29 ರಂದು ಹಟ್ಟಿಗೆ ನುಗ್ಗಿದ ಗೋಕಳ್ಳರು ಎರಡು ಹಸುವಿನ ಹಗ್ಗ ತುಂಡರಿಸಿ ಕೊಂಡೊಯ್ದು, ಜೀವನದ ಆಧಾರವನ್ನೇ ಕಸಿದಿದ್ದಾರೆ. ತಮ್ಮ ಮಕ್ಕಳಂತೆ ಸಲಹುತ್ತಿದ್ದ ಹಸುವಿನ ಕಳವಿನ ನಂತರ ಮಡದಿ ರಾತ್ರಿಯಿಡೀ ನಿದ್ರಿಸದೆ ಅಳುತ್ತಲೇ ಇದ್ದಾಳೆ . ಹಸು ಕಳವಿನ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಈವರೆಗೂ ಯಾವುದೇ ಸುಳಿವು ದೊರೆತಿಲ್ಲ ಎಂದು ಕಣ್ಣೀರಿಟ್ಟರು.

ಎಂಟು ವರ್ಷಗಳಲ್ಲಿ ಎಂಟು ದನ ಕಳವು !
ಮುಡಿಪು ಸಂಬಾರುತೋಟದ ಕೃಷಿಕ ಮಾರ್ಷೆಲ್ ಡಿಸೋಜ ಅವರು ಸಾಕುತ್ತಿರುವ ಎಂಟು ಜಾನುವಾರುಗಳನ್ನು ಎಂಟು ವರ್ಷಗಳಿಂದ ಕಳವು ನಡೆಸುತ್ತಲೇ ಬಂದಿದ್ದಾರೆ. 2011 ರಿಂದ 2018ರವರೆಗೆ 8 ಹಸುಗಳನ್ನು ಕಳವು ನಡೆಸಲಾಗಿದೆ. ಕೊನೆಯ ಕಳವು ಹಟ್ಟಿಯಿಂದ ನಡೆಸುವ ಸಂದರ್ಭ ಆರೋಪಿಗಳ ಪೈಕಿ ಮಲಾರ್ ಸತ್ತಾರ್ ಮತ್ತು ಮಲಾರ್ ಮೋನು ಎಂಬವರನ್ನು ಗುರುತಿಸಿದ್ದೇನೆ. ಕೊಣಾಜೆ ಪೊಲೀಸ್ ಠಾಣೆಯಲ್ಲೂ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದೆವು. ಪೊಲೀಸರು ಸ್ಪಂಧಿಸುವಷ್ಟರಲ್ಲಿ ಕಳವುಗೈದ ಜಾನುವಾರು ಮಾಂಸ ಮಾಡಲಾಗಿತ್ತು. ಆದರೂ ಸಂಶಯಿತರಲ್ಲಿ ಓರ್ವ ಗೋರಿ ಮೇಲೆ ಪ್ರಮಾಣ ಮಾಡಿ ಕೃತ್ಯದಲ್ಲಿ ಭಾಗಿಯಾಗಿಲ್ಲ ಅನ್ನುತ್ತಾ ಬಚಾವಾಗಿದ್ದಾನೆ. ಜನಪ್ರತಿನಿಧಿಗಳ ಒತ್ತಡದಿಂದಲೂ ಪೊಲೀಸರು ಸರಿಯಾದ ವಿಚಾರಣೆ ಕೈಗೊಳ್ಳದೆ ಗೋಕಳ್ಳರನ್ನು ಬಿಡುತ್ತಲೇ ಇದ್ದಾರೆ ಎಂದು ಸಂಬಾರುತೋಟದ ಮಾರ್ಷೆಲ್ ಡಿಸೋಜ ಅಲವತ್ತುಕೊಂಡರು.

ಮೋಂಟುಗೋಳಿಯ ಚಂದ್ರಹಾಸ ಶೆಟ್ಟಿಯವರ ಎಂಟು ಜಾನುವಾರುಗಳನ್ನು ಎರಡು ವರ್ಷಗಳಲ್ಲಿ ಕಳವು ನಡೆಸಲಾಗಿದೆ. ಕೃಷಿಕರಾದ ಅವರು ಹೈನುಗಾರಿಕೆಯನ್ನು ನಡೆಸುತ್ತಾ ಬಂದಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಸ್ಪಂಧನೆ ಸಿಕ್ಕಿಲ್ಲ ಎಂದರು.

ಸತ್ಯಾಗ್ರಹವನನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ ಗೋವು ಹಂತಕರನ್ನು ಬಂಧಿಸುವವರೆಗೂ ಸತ್ಯಾಗ್ರಹವನ್ನು ನಿಲ್ಲಿಸಬಾರದು. ಅಂತಿಮ ಗೆಲುವು ಸಿಗುವರೆಗೂ ಸರದಿಯಾಗಿ ಸತ್ಯಾಗ್ರಹವನ್ನು ನಡೆಸಬೇಕಾಗಿದೆ. ರಾಜಾರಾಂ ಭಟ್ ಮಾಡುವ ಈ ಸತ್ಯಾಗ್ರಹಕ್ಕೆ ನನ್ನ ಬೆಂಬಲವಿದ್ದು. ಎಲ್ಲರೂ ಒಂದೆ ಸಮಯಕ್ಕೆ ಉಪವಾಸ ಮಾಡುವುದರ ಬದಲು ಪೆÇಲೀಸರು ಹಂತಕರನ್ನು ಇನ್ನು ಹಿಡಿಯದೇ ಇದ್ದಲ್ಲಿ, ಸುದೀರ್ಘ ಉಪವಾಸದಿಂದ ಭಟ್ ಆರೋಗ್ಯದಲ್ಲಿ ಏರುಪೇರಾದಲ್ಲಿ ಉಳಿದವರು ಸತ್ಯಾಗ್ರಹದಲ್ಲಿ ತೊಡಗಿಸಿಕೊಳ್ಳಬೇಕಿದೆ. ಒಟ್ಟಾಗಿ ಜಾನುವಾರು ಕಳ್ಳರು ಸಿಗುವವರೆಗೂ ಹೋರಾಟ ನಿರಂತರವಾಗಿ ಮುಂದುವರಿಯಬೇಕಿದೆ. ಈ ಮೂಲಕ ನ್ಯಾಯ ದೊರಕಿಸಿಕೊಡಬೇಕಿದೆ ಎಂದರು.

ಸಮಾವೇಶದಲ್ಲಿ ಬಾವುಕರಾಗಿ ಕಣ್ಣೀರಿಟ್ಟ ಅಮೃತಧಾರಾ ಗೋಶಾಲೆಯ ಮುಖ್ಯಸ್ಥ ಟಿ.ಜಿ.ರಾಜಾರಾಂ ಭಟ್ ಅವರು ಸರಕಾರ ಪೊಲೀಸರ ಜೊತೆ ಮಾತುಕತೆ ನಡೆಸಿ ಪ್ರತಿಭಟನೆಯನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ. ನಾನು ನಿಜವಾದ ಗೋಹಂತಕರನ್ನು ಹಿಡಿಯುವರೆಗೆ ಯಾವುದೇ ಕಾರಣಕ್ಕೂ ಸತ್ಯಗ್ರಹವನ್ನು ನಿಲ್ಲಿಸುವುದಿಲ್ಲ. ಗೋ ಕಳ್ಳತನ ಅನ್ನುವುದು ಕ್ಯಾನ್ಸರ್ ನಂತೆ ಬೆಳೆಯುತ್ತಿದೆ. ಹಾಲು ಕೊಡುವ ಹಸುಗಳನ್ನು ಕಟುಕರು ಕದ್ದುಕೊಂಡು ಹೋಗಿ ಅದನ್ನು ಕಡಿಯುವ ಹೇಯ ಕೃತ್ಯವನ್ನು ನಡೆಸುತ್ತಿದ್ದಾರೆ. ಗೋವನ್ನು ಸಾಕುವವನಿಗೆ ಮಾತ್ರ ಗೊತ್ತು ಗೋವನ್ನು ಕಳಕೊಂಡ ನೋವು. ಕೊಣಾಜೆ ವ್ಯಾಪ್ತಿಯಲ್ಲಿ ಗೋ ಕಳ್ಳತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಡಿಪು ಪ್ರದೇಶದಲ್ಲಿ ಹೆಣ್ಣು ಮಕ್ಕಳು ನಡೆದಾಡಲು ಹೆದರುವಂತ ಸ್ಥಿತಿ ನಿರ್ಮಾಣವಾಗುತ್ತಿದೆ. ಗಾಂಜಾ, ದರೋಡೆ, ಕಳ್ಳತನದಂತಹ ಕೌರ್ಯಗಳು ಹೆಚ್ಚಾಗಿ ಆರಂಭವಾಗಿದೆ. ಇದಕ್ಕೆ ಅಂತ್ಯವನ್ನು ಹಾಡಬೇಕಿದೆ ಎಂದ ಅವರು ಗೋವು ಹಂತಕನ್ನು ಹಿಡಿಯದೇ ಪಕ್ಷದಲ್ಲಿ ನಾನು ಸಾಯುವವರೆಗೂ ಹೋರಾಟವನ್ನು ನಡೆಸುತ್ತೇನೆ ಎಂದು ಭಾವುಕರಾಗಿ ಕಣ್ಣೀರಿಟ್ಟರು.

ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ ಜಿಲ್ಲೆಯಲ್ಲೇ ಪ್ರಥಮ ಬಾರಿ ಇಂತಹ ಪ್ರತಿಭಟನೆ ನಡೆಯುತ್ತಿದೆ. ಅಕ್ರಮ ಗೋಸಾಗಾಟಕ್ಕೆ ಅಂತ್ಯ ಹಾಡಬೇಕಿದೆ. ಜಿಲ್ಲೆಯ ಪ್ರತಿಯೊಬ್ಬರ ಪರವಾಗಿ ರಾಜಾರಾಂ ಭಟ್ ಪ್ರತಿಭಟನೆ ನಡೆಸುತ್ತಿದ್ದಾರೆ. 19 ಜನರ ನೋವನ್ನು ಸಭೆಯಲ್ಲಿ ಕೇಳಿದ್ದೇವೆ. ಮುಂದೆ ಇಂತಹ ನೋವನ್ನು ಜನ ಅನುಭವಿಸಬಾರದು ಅನ್ನುವ ಉದ್ದೇಶದಿಂದ ಭಟ್ ಅವರ ಸತ್ಯಾಗ್ರಹದಲ್ಲಿ 24 ಮಂದಿ ಪಾಲ್ಗೊಳ್ಳುವ ಬೆಂಬಲ ಸೂಚಿಸಿದ್ದಾರೆ. ಪೊಲೀಸರ ಕಾರ್ಯಪ್ರವೃತ್ತಿ ನೋಡಿದಾಗ ಪ್ರತಿಭಟನೆಯ ಕಾವು ಸರಕಾರಕ್ಕೆ ತಟ್ಟಿದಂತಿದೆ. ಆರೋಪಿಗಳನ್ನು ಹಿಡಿಯದೇ ಇದ್ದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರಕರಣ ಸಿಸಿಬಿಗೆ ಹಸ್ತಾಂತರ
ಮೂರನೇ ದಿನಕ್ಕೆ ಕಾಲಿಟ್ಟ ಅಮರಣಾಂತ ಉಪವಾಸಕ್ಕೆ ಮಣಿದ ಪೊಲೀಸ್ ಇಲಾಖೆ ಪ್ರಕರಣವನ್ನು ಕೊಣಾಜೆ ಪೊಲೀಸರಿಂದ ಸಿಸಿಬಿಗೆ ವಹಿಸಿದೆ. ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರ ತಂಡ ಮಂಗಳವಾರ ಅಮೃತಧಾರಾ ಗೋಶಾಲೆಗೆ ಭೇಟಿ ನೀಡಿ ಗೋ ದರೋಡೆ ನಡೆಸುವ ಸಂದರ್ಭ ಆಶ್ರಮದಲ್ಲಿದ್ದ ವಿಶ್ವನಾಥ್ ಮತ್ತು ಟಿ.ಜಿ.ರಾಜಾರಾಂ ಭಟ್ ಅವರಿಂದ ಮಾಹಿತಿಯನ್ನು ಸಂಗ್ರಹಿಸಿದೆ. ಅಲ್ಲದೆ ದರೋಡೆಕೋರನನ್ನು ನೋಡಿದ್ದ ವಿಶ್ವನಾಥ್ ಅವರ ಜತೆಗೆ ಕೇರಳದ ಮಂಜೇಶ್ವರದಲ್ಲಿರುವ ಸಂಶಯಿತ ಆರೋಪಿಗಳಿಗಾಗಿ ಹುಡುಕಾಟ ನಡೆಸಿದೆ.

ಮನೆಗೆ ದಾಳಿ
ಸಿಸಿಬಿ ತಂಡ ಮಂಜೇಶ್ವರದ ಕಜ್ಜೆಪದವು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದೆ. ಈ ವೇಳೆ ದೊಡ್ಡ ಗಾತ್ರದ ದನದ ರುಂಡವನ್ನು ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿದ್ದ ಮೂವರನ್ನು ಸಿಸಿಬಿ ತಂಡ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

SNEC ಪರೀಕ್ಷೆಯಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಅಕಾಡೆಮಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ

July 1, 2026

ಖಾಸಗಿ ಕಾಂಪೌಂಡ್ ಕುಸಿದು ಮನೆ ನೆಲಸಮ: ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಎಫ್‌ಐಆರ್‌ಗೆ ಆಗ್ರಹ..!

July 1, 2026

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

June 30, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

SNEC ಪರೀಕ್ಷೆಯಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಅಕಾಡೆಮಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ

By UllalaVaniJuly 1, 20260

ವಾದಿತ್ವೈಬ, ಕಿನ್ಯಾ, ಜು. 1: ಸಮಸ್ತ ನ್ಯಾಷನಲ್ ಎಜುಕೇಶನ್ ಕೌನ್ಸಿಲ್ (SNEC) ವತಿಯಿಂದ 2025-26ನೇ ಶೈಕ್ಷಣಿಕ ಸಾಲಿನ ಸೆಮಿಸ್ಟರ್ ಪರೀಕ್ಷೆಯಲ್ಲಿ…

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಗೋವಾದಲ್ಲಿ ಶವವಾಗಿ ಪತ್ತೆ..!!

July 1, 2026

ಖಾಸಗಿ ಕಾಂಪೌಂಡ್ ಕುಸಿದು ಮನೆ ನೆಲಸಮ: ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಎಫ್‌ಐಆರ್‌ಗೆ ಆಗ್ರಹ..!

July 1, 2026

ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮೂಗಿನ ಅಲರ್ಜಿ ಮತ್ತು ಸೈನಸೈಟಿಸ್ ಚಿಕಿತ್ಸಾ ಶಿಬಿರ

July 1, 2026
1 2 3 … 1,992 Next
Automatic YouTube Gallery

ಕೆರೆಬೈಲ್‌ : ಎಂದಿನಂತೆ ಬೆಳಗ್ಗೆ 8ಗಂಟೆಗೆ ಬಂದಿದ್ದರೆ ಜೀವ ಹೋಗುತ್ತಿತ್ತು..? ಸ್ಥಳೀಯರು ಬಿಚ್ಚಿಟ್ರು ಸತ್ಯಸಂಗತಿ..!!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೆರೆಬೈಲ್‌ : ಎಂದಿನಂತೆ ಬೆಳಗ್ಗೆ 8ಗಂಟೆಗೆ ಬಂದಿದ್ದರೆ ಜೀವ ಹೋಗುತ್ತಿತ್ತು..? ಸ್ಥಳೀಯರು ಬಿಚ್ಚಿಟ್ರು ಸತ್ಯಸಂಗತಿ..!!
Now Playing
ಕೆರೆಬೈಲ್‌ : ಎಂದಿನಂತೆ ಬೆಳಗ್ಗೆ 8ಗಂಟೆಗೆ ಬಂದಿದ್ದರೆ ಜೀವ ಹೋಗುತ್ತಿತ್ತು..? ಸ್ಥಳೀಯರು ಬಿಚ್ಚಿಟ್ರು ಸತ್ಯಸಂಗತಿ..!!
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
| Ullalavani | ಅಶ್ವಿನಿ ಹಾಗೂ ಕುಟುಂಬದ ಬೇಡಿಕೆ ಈಡೇರಿಸಿದ ಬಿಜೆಪಿ, ಮಾಜಿ ಸಂಸದ ನಳೀನ್ ಕಟೀಲ್..!
Now Playing
| Ullalavani | ಅಶ್ವಿನಿ ಹಾಗೂ ಕುಟುಂಬದ ಬೇಡಿಕೆ ಈಡೇರಿಸಿದ ಬಿಜೆಪಿ, ಮಾಜಿ ಸಂಸದ ನಳೀನ್ ಕಟೀಲ್..!
ಅಶ್ವಿನಿಗೆ ಕೃತಕ ಕಾಲು ಜೋಡಣೆಗೆ ರೂ.23 ಲಕ್ಷ; ಬಿಜೆಪಿ, ಮಾಜಿ ಸಂಸದರ ...
ಅಶ್ವಿನಿಗೆ ಕೃತಕ ಕಾಲು ಜೋಡಣೆಗೆ ರೂ.23 ಲಕ್ಷ; ಬಿಜೆಪಿ, ಮಾಜಿ ಸಂಸದರ ಮುತುವರ್ಜಿಯಲ್ಲಿ ಸಹಾಯಹಸ್ತ

ಮಂಜನಾಡಿ ದುರಂತದಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡಿದ್ದ ಅಶ್ವಿನಿ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version