Author: UllalaVani

Kannada News From Coastal Karnataka

UN NETWORKS ಉಳ್ಳಾಲ: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕುಂಠಿತಕ್ಕೆ ಕಾಂಗ್ರೆಸ್ ಸರಕಾರ ಕಾರಣವಾಗಿದ್ದು ಈ ಸರಕಾರವನ್ನು ಕಿತ್ತೊಗೆದು, ಆ ಮೂಲಕ ನವ ಕರ್ನಾಟಕ ನಿರ್ಮಾಣಕ್ಕೆ ಮುನ್ನುಡಿಯಾಗಬೇಕು ಎಂದು ಬಿ.ಜೆ.ಪಿ. ರಾಜ್ಯ ಹಿಂದುಳಿದ ವರ್ಗ ಮೋರ್ಛಾದ ಕಾರ್ಯದರ್ಶಿ, ನವಕರ್ನಾಟಕ ಪರಿವರ್ತನಾ ಯಾತ್ರೆಯ ಜಿಲ್ಲಾ ಸಂಚಾಲಕ ಸತ್ಯಜಿತ್ ಸುರತ್ಕಲ್ ತಿಳಿಸಿದರು. ಬಿ.ಜೆ.ಪಿ. ರಾಜ್ಯಾಧ್ಯಕ್ಷ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನ.2 ರಂದು ಬೆಂಗಳೂರಿನ ನೆಲಮಂಗಲದಿಂದ ಹೊರಡಲಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಯ ಕುರಿತು ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಛೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು 75 ದಿನಗಳ ಕಾಲ ಸಂಚರಿಸಲಿರುವ ಈ ಯಾತ್ರೆಯು ರಾಜ್ಯದ ಅತೀ ದೊಡ್ಡ ಯಾತ್ರೆಯಾಗಲಿದೆ ಎಂದ ಅವರು ಈ ಬಗ್ಗೆ ಕ್ಷೇತ್ರ ವ್ಯಾಪ್ತಿ ಯಾತ್ರೆ ಯಶಸ್ವಿಗೊಳಿಸುವ ಬಗ್ಗೆ ಶಕ್ತಿಕೇಂದ್ರವಾರು ವಿಶೇಷ ನಡೆಸಲು ಸೂಚಿಸಿದರು. ಕ್ಷೇತ್ರಧ್ಯಾಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ ಕ್ಷೇತ್ರದ197 ಬೂತ್‍ನಿಂದ ತಲಾ ಮೂವರಂತೆ ಸುಮಾರು 600 ಯುವ ಕಾರ್ಯಕರ್ತರು ಬೆಂಗಳೂರಿನಲ್ಲಿ…

Read More

UN NETWORKS ಕೋಟೆಕಾರ್: ಅ.15ರೊಳಗೆ ಮುಗಿಯಬೇಕಿತ್ತಾದರೂ ಕೆಲವೊಂದು ಕಾರಣಗಳಿಂದ ಅಸಾಧ್ಯವಾಗಿದೆ, ಅ.30ರೊಳಗೆ ಮುಗಿಸುವಂತೆ ಕೆಪಿಸಿಸಿ ಸಮಯಾವಕಾಶ ನೀಡಿದ್ದರೂ ನ.10ರೊಳಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು. ಕೋಟೆಕಾರ್ ಗ್ರಾಮ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಚುನಾವಣೆ ಸಂದರ್ಭ ಕಾಂಗ್ರೆಸ್ ನೀಡಿದ್ದ ಭರವಸೆಗಳು, ಈಡೇರಿಕೆ ಹಾಗೂ ಬಾಕಿಯಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ನಿರ್ದೇಶನದಂತೆ ಕಾರ್ಯಕ್ರಮ ನಡೆಯುತ್ತಿದೆ. ದ.ಕ.ಜಿಲ್ಲೆಯಲ್ಲಿ ಹಲವು ಬೂತ್‍ಗಳಲ್ಲಿ ಪೂರ್ತಿಗೊಂಡಿದ್ದು, ಉಳಿದೆಡೆ ಪ್ರಗತಿಯಲ್ಲಿದೆ. ನ.10ರೊಳಗೆ 1766 ಬೂತ್‍ಗಳಲ್ಲೂ ಪ್ರತೀ ಮನೆಗೂ ಕಾರ್ಯಕರ್ತರು ತಲುಪಿ ಮಾಹಿತಿ ಕಾರ್ಯ ಪೂರ್ತಿಗೊಳಿಸಲಿದ್ದಾರೆ ಎಂದು ಹೇಳಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಉಪಾಧ್ಯಕ್ಷ ಮಹಮ್ಮದ್ ಮುಸ್ತಫಾ ಮಲಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಕೊಣಾಜೆ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಖಾದರ್ ಅಡ್ಕರೆ,…

Read More

UN NETWORKS ಕಲ್ಲಾಪು: ಮಂಗಳೂರು ವಿದಾನಸಭಾ ಕ್ಷೇತ್ರದ ಆರಂಭ ಕಲ್ಲಾಪುವಿನಿಂದಾಗಿದ್ದು, ಇಲ್ಲಿಂದಲೇ ಕಾಂಗ್ರೆಸ್ ವಿಜಯದ ಯಾತ್ರೆ ಆರಂಭಗೊಳ್ಳಲಿದೆ ಎಂದು ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು ಹೇಳಿದರು. ಗುರುವಾರ ಕಲ್ಲಾಪು ಖಾಸಗಿ ಹೊಟೇಲ್‍ನಲ್ಲಿ ನಡೆದ ಕಲ್ಲಾಪು, ಅಂಬಟ್ಟಾಡಿ ಸಹಿತ ನಾಲ್ಕು ವಾರ್ಡ್‍ಗಳ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮಂಗಳೂರು ಕ್ಷೇತ್ರದಲ್ಲಿ ಎಂದಿಗೂ ಯು.ಟಿ.ಖಾದರ್ ಅವರದ್ದೇ ಗೆಲುವು, ಅವರನ್ನು ಸೋಲಿಸಬೇಕು ಎನ್ನುವ ನಿಟ್ಟಿನಲ್ಲಿ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದು, ಕಾಂಗ್ರೆಸ್ ಸೋಲಿಸಲು ಎಂತಹ ಕುತಂತ್ರದಿಂದಲೂ ಅಸಾಧ್ಯ. ಮುಕಚ್ಚೇರಿಯಲ್ಲಿ ಝುಬೇರ್ ಕೊಲೆಗೀಡಾಗಿರುವುದು ಎಲ್ಲರಿಗೂ ಬೇಸರದ ವಿಚಾರವಾಗಿತ್ತು. ಆದರೆ ಬಿಜೆಪಿ ಸೂತಕದ ಮನೆಯಲ್ಲೂ ರಾಜಕೀಯ ಬೇಳೆ ಬೇಯಿಸಲು ನೋಡಿದ್ದು ದುರದೃಷ್ಟಕರ. ಮುಂದಿನ ಚುನಾವಣೆಯಲ್ಲಿ ಕಲ್ಲಾಪುವಿನಲ್ಲಿ ಇತರ ಪಕ್ಷದ ಬೂತ್‍ಗಳೂ ಇರದಂತೆ ಮತದಾರರು ನೋಡಿಕೊಳ್ಳಲಿದ್ದಾರೆ ಎಂದರು. ಮುಖಂಡ ಅಯೂಬ್ ಮಂಚಿಲ ಮಾತನಾಡಿ, ಕಲ್ಲಾಪು ಎನ್ನುವುದು ಕಾಂಗ್ರೆಸ್ ಭದ್ರಕೋಟೆಯಾಗಿದೆ, ಇಲ್ಲಿನ ಯುವಜನತೆ ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದಾರೆ. ಉಳ್ಳಾಲದ ಇತರ ಭಾಗಗಳಲ್ಲಿ ಗಾಂಜಾ ವ್ಯಸನದ ಬಗ್ಗೆ…

Read More

UN NETWORKS ಹಳೆಕೋಟೆ: ಮದ್ರಸ ಕಾರ್ಯಕ್ಷೇತ್ರವನ್ನು ಅಭಿವ್ರದ್ಧಿಗೊಳಿಸುವ ನಿಟ್ಟಿನಲ್ಲಿ ಮತ್ತು ಧಾರ್ಮಿಕ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಸಲುವಾಗಿ ಉಳ್ಳಾಲದ ಹಳೆಕೋಟೆಯಲ್ಲಿ ನೂತನ ಮದ್ರಸಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ನೇತ್ರತ್ವದಲ್ಲಿ ಚಾಲನೆ ನೀಡಲಾಯಿತು. ಮದ್ರಸಕ್ಕೆ ತಾಜುಲ್ ಉಲಮಾ ಖ.ಸಿ ಮದ್ರಸ ಎಂಬ ನಾಮಕರಣ ಮಾಡಲಾಯಿತು. ಪ್ರಸ್ತುತ ಮದ್ರಸ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಸಿಲೆಬಸ್ ಹಾಗು ಅಂಗೀಕಾರದೊಂದಿಗೆ ಕಾರ್ಯಾಚರಿಸಲಿದೆ. ಮುಸ್ತಫ ಮದನಿ ಉಳ್ಳಾಲ ಸಮಾರಂಭವನ್ನು ಉದ್ಘಾಟಿಸಿದರು. ಅಬ್ದುಲ್ ಹಮೀದ್ ಮುಸ್ಲಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ತಾಜುಲ್ ಉಲಮಾ ಖ.ಸಿ ಮದ್ರಸ ಇದರ ನೂತನ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಯು ಎಚ್ ಯೂಸುಫ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್, ಕೋಶಾಧಿಕಾರಿಯಾಗಿ ಅಬ್ಬಾಸ್ ರಫೀಖ್, ಸಂಚಾಲಕರಾಗಿ ಅಬ್ದುಲ್ ಸತ್ತಾರ್ ಹಳೆಕೋಟೆ, ಉಪಾಧ್ಯಕ್ಷರಾಗಿ ಅಬೂಸಾಲಿ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಹಾಗು ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಹಮೀದ್, ಬಶೀರ್, ಅಬ್ದುರ್ರಹ್ಮಾನ್, ಹಂಝ, ಇಬ್ರಾಹಿಂ ಹಾಗು ಕಬೀರ್ ಇವರುಗಳನ್ನು…

Read More

UN NETWORKS ಉಳ್ಳಾಲ: ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿಯೂ ವಿದೇಶದಲ್ಲಿನ ಕಪ್ಪು ಹಣವನ್ನು ತರಿಸಿ ಪ್ರತಿಯೊಬ್ಬ ಭಾರತೀಯನ ಖಾತೆಗೆ ತಲಾ 15 ಲಕ್ಷ ರೂ. ಜಮಾ ಮಾಡುವುದಾಗಿಯೂ ಭರವಸೆ ನೀಡಿದ ನರೇಂದ್ರ ಮೋದಿಯವರು ಒಬ್ಬ ಸುಳ್ಳುಗಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ಸಿಪಿಐಎಂನ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ. ಇತ್ತೀಚೆಗೆ ಸೋಮೇಶ್ವರ ಗ್ರಾಮದ ಪಿಲಾರು ಲಕ್ಷ್ಮಿಗುಡ್ಡೆ ಪ್ರದೇಶದಲ್ಲಿ ಸೇರಿದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೋದಿಯವರು ರೂ. 500, 1000 ದ ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯ ಮಾಡಿದುದರ ಪರಿಣಾಮವಾಗಿ ಜನಸಾಮಾನ್ಯರಿಗೆ ಆದ ತೊಂದರೆ, ಇತ್ತೀಚೆಗೆ ಜಾರಿಗೊಳಿಸಿದ ಜಿ.ಎಸ್.ಟಿಯಿಂದಾಗಿ ಉಂಟಾದ ಸಮಸ್ಯೆ, ನಿರುದ್ಯೋಗದ ಸಮಸ್ಯೆ ಬೆಲೆ ಏರಿಕೆ ಇವೆಲ್ಲದಕ್ಕೂ ಮೋದಿಯವರ ತಲೆಬುಡವಿಲ್ಲದ ಆರ್ಥಿಕ ನೀತಿಯೇ ಕಾರಣವಾಗಿದೆ ಎಂದು ಟೀಕಿಸಿದರು. ರೈತ ಮುಂದಾಳು ಸಂಜೀವ ಪಿಲಾರ್ ಮಾತನಾಡಿ ಭೂ ಚಳುವಳಿ ನಡೆದು ಇದೀಗ 20 ವರ್ಷಗಳು ಸಂದು ಹೋಗಿದ್ದು, ನೂರಕ್ಕೂ ಅ„ಕ ಭೂರಹಿತ ಕುಟುಂಬಗಳಿಗೆ ಭೂಮಿ ಒದಗಿಸಿದ…

Read More

UN NETWORKS ಕೊಣಾಜೆ: ಸಸ್ಯಗಳ ಉಳಿವಿಗಾಗಿ ಮತ್ತು ಮಾನವಾಭಿವೃದ್ಧಿಗಾಗಿ ಬಳಸಿಕೊಳ್ಳಬಹುದಾದ ಸಸ್ಯ ಸಂಪನ್ಮೂಲಗಳ ಬಗ್ಗೆ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇಂದಿನದ್ದಾಗಿದ್ದು, ಸಸ್ಯಗಳಿದ್ದರೆ ಮಾತ್ರ ಜೀವರಾಶಿಗಳು ಉಳಿಯಬಹುದು. ಇಲ್ಲದಿದ್ದರೆ ಆಮ್ಲಜನಕದ ಕೊರೆತಯಿಂದಾಗಿ ಭೂಮಿಯ ಜೀವರಾಶಿಗಳೆಲ್ಲವೂ ನಶಿಸಿ ಹೋಗಬಹುದು ಎಂದು ಕ್ಯಾಲಿಕಟ್‍ನ ಭಾರತೀಯ ಸಂಬಾರ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ನಿರ್ಮಲ್ ಬಾಬು ಅವರು ಅಭಿಪ್ರಾಯ ಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಿಯಿಕ ಸಸ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕರ್ನಾಟಕ ತಂತ್ರಜ್ಞಾನ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಂಗಳೂರು ವಿವಿ ಹಳೆಸೆನೆಟ್ ಸಭಾಂಗಣದಲ್ಲಿ ಗುರುವಾರ ಸಸ್ಯ ವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳು ಎಂಬ ವಿಷಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದಾಗಿ ಸಮಾಜವು ಹಲವಾರು ರೀತಿಯ ಪರಿವರ್ತನೆಗಳಿಗೆ ಕಾರಣವಾಗಿದೆ. ಅದರಲ್ಲೂ ಸಸ್ಯಶಾಸ್ತ್ರ ವಿಜ್ಞಾನ ಕ್ಷೇತ್ರವು ಇಂದಿನ ಆಧುನಿಕತೆಯಲ್ಲಿ ಬಹಳಷ್ಟು ಪರಿಣಾಮವನ್ನು ಬೀರುತ್ತಿದ್ದು ಈ ನಿಟ್ಟಿನಲ್ಲಿ ಯುವ ಸಮುದಾಯ, ವಿದ್ಯಾರ್ಥಿಗಳು ತಮ್ಮ ವಿಶೇಷ ಪರಿಶ್ರಮದೊಂದಿಗೆ ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು…

Read More

UN NETWORKS ಉಳ್ಳಾಲ: ಸಮಾಜದಲ್ಲಿ ಪೈಶಾಚಿಕತೆ ತಾಂಡವವಾಡುತ್ತಿದ್ದು, ದೇವರನ್ನು ವಿಭಜಿಸುವ ಮೂಲಕ ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಿಭಜನೆ ಸಿದ್ಧಾಂತಗಳನ್ನು ಸೋಲಿಸುವ ಕಾರ್ಯ ಆಗಬೇಕಿದೆ ಎಂದು ಮಂಗಳೂರು ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞ ಹೇಳಿದ್ದಾರೆ. ಅವರು ಬೀರಿ ಸಂತ ಅಲೋಷಿಯಸ್ ಕಾಲೇಜು (ಎಐಎಂಐಟಿ) ಹಾಗೂ ಕೋಟೆಕಾರು ಧಾರ್ಮಿಕ ಸೌಹಾರ್ದ ವೇದಿಕೆ ವತಿಯಿಂದ ಬುಧವಾರ ಬೀರಿ ಸಂತ ಅಲೋಷಿಯಸ್ ಕಾಲೇಜು ವಠಾರದಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪೈಶಾಚಿಕತೆಯ ಕೃತ್ಯಗಳಿಂದ ಮನುಷ್ಯನನ್ನು ರಕ್ತಪಾತ ಮಾಡುವುದರ ಜತೆಗೆ ಪರಿಸರವನ್ನು ನಾಶ ಮಾಡುವ ಕೆಲಸ ಸಮಾಜದಲ್ಲಿ ಆಗುತ್ತಿದೆ. ಕುರ್‍ಆನ್‍ನಲ್ಲಿ ಪಿಶಾಚಿ ಅಂದರೆ ಶತ್ರು ಅನ್ನುವ ಉಲ್ಲೇಖ ಇದೆ. ಧಾರ್ಮಿಕ ಚಿಂತನೆಗಳಿಂದ ಪೈಶಾಚಿಕತೆಯನ್ನು ಹೋಗಲಾಡಿಸಲು ಸಾಧ್ಯ. ಇದು ವಿಭಜನೆಯ ಕಾಲವಾಗಿದ್ದು, ದೇವರನ್ನು ವಿಭಜಿಸುವ ಮೂಲಕ ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತಿದೆ. ವಿಭಜನೆ ಅನ್ನುವುದೇ ಅನೈಸರ್ಗಿಕ, ವಿಭಜನೆ ಸಿದ್ಧಾಂತಗಳನ್ನೇ ಸೋಲಿಸುವ ಕಾರ್ಯ ಆಗಬೇಕಿದೆ . ಶಿಕ್ಷಿತರೇ ದೇಶದ್ರೋಹ ಕೆಲಸಗಳೊಂದಿಗೆ…

Read More

UN NETWORKS ಉಳ್ಳಾಲ: ಉತ್ಸಾಹ, ಜ್ಞಾನ, ಸಹಾನುಭೂತಿಯ ಜತೆಗೆ ಜನರೊಂದಿಗಿನ ಒಡನಾಟದ ಗುಣಗಳು ಬೆಳೆಸಿದಲ್ಲಿ ಪ್ರತಿಯೊಬ್ಬರು ಕಾರ್ಯಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯ ಕಣ್ಣು ದಾನಿಗಳ ಉಪಸಮಿತಿಯ ಸಂಚಾಲಕ ಹಾಗೂ ಕಣ್ಣಿನ ಬ್ಯಾಂಕ್ ಅಸೋಸಿಯೇಷನ್ ಸೌತ್ ಝೋನ್ ಇದರ ಮುಖ್ಯಸ್ಥ ಎಂ.ಕೆ.ಕೃಷ್ಣ ಹೇಳಿದರು. ಅವರು ದೇರಳಕಟ್ಟೆ ಪಾನೀರಿನ ನಿಟ್ಟೆ ಉಷಾ ನರ್ಸಿಂಗ್ ವಿದ್ಯಾ ಸಂಸ್ಥೆಯ ಯುವ ರೆಡ್‍ಕ್ರಾಸ್ ಘಟಕದ ವತಿಯಿಂದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಲಾದ ಓರಿಯೆಂಟೇಷನ್ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜನರೊಂದಿಗೆ ಉತ್ಸಾಹ ಹಾಗೂ ಸಹನೆಯಿಂದ ಜ್ಞಾನ ಗಳಿಸಿದಂತಹ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಮದರ್ ತೆರೆಸಾ ಹಾಗೂ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿ ದೇಶದ ರತ್ನ ಆಗಿರುವ ಸರ್ ಎಂ.ವಿಶ್ವೇಶ್ವರೈಯ್ಯ ಯಶಸ್ವಿ ಜೀವನ ನಡೆಸಿದವರು. ಅವರನ್ನೇ ಆದರ್ಶವನ್ನಾಗಿ ತೆಗೆದುಕೊಂಡು ದೇಶದ ಬಹುದೊಡ್ಡ ಯುವಸಮುದಾಯ ಜೀವನದಲ್ಲಿ ಸಾಧಿಸುವ ಛಲ ಹೊಂದಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇಮ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗ ಮುಖ್ಯಸ್ಥ…

Read More

UN NETWORKS ಚೆಂಬುಗುಡ್ಡೆ: `ಗ್ರಾಮ ಪಂಚಾಯಿತಿ ನೀಡಿದ ಡೋರ್ ನಂಬ್ರ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ವಿದ್ಯುತ್ ಸಂಪರ್ಕ ಪಡೆಯಲು ಪಿಡಿಓ ಅವರಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು ಎನ್ನುವುದು ಯಾವ ನಿಯಮ, ರಾಜ್ಯಪಾಲರೂ ಸಹಿ ಹಾಕದ ಇದು ತಲಪಾಡಿಯಲ್ಲಿ ಮಾತ್ರ ಇರುವುದೇಕೆ, ನಾವೂ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ’ ಇದು ವಿದ್ಯುತ್ ಗ್ರಾಹಕ ಅಬ್ಬಾಸ್ ಉಚ್ಚಿಲ್ ಅವರ ಪ್ರಶ್ನೆ. ಉಳ್ಳಾಲ ಉಪವಿಭಾಗ ಮೆಸ್ಕಾಂ ಜನಸಂಪರ್ಕ ಸಭೆ ಬುಧವಾರ ಚೆಂಬುಗುಡ್ಡೆಯಲ್ಲಿರುವ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ದಾಖಲೆಗಳೊಂದಿಗೆ ಭಾಗವಹಿಸಿದ್ದ ಅಬ್ಬಾಸ್ ಉಚ್ಚಿಲ್, ಮೇಲಿನ ಪ್ರಶ್ನೆ ಕೇಳಿ ಆಕ್ರೋಶ ವ್ಯಕ್ತಪಡಿಸಿದರು. ಮೆಸ್ಕಾಂ ಎಂಬುದು ಒಂದು ಕಂಪನಿ, ಇದಕ್ಕೂ ಗ್ರಾಮ ಪಂಚಾಯಿತಿ ಪಿಡಿಓಗೂ ಇರುವ ಸಂಬಂಧವಾದರೂ ಏನು? ವಿದ್ಯುತ್ ಸಂಪರ್ಕ ಪಡೆಯಲು ಡೋರ್ ನಂಬ್ರ ಸಹಿತ ದಾಖಲೆಗಳನ್ನು ಮಾತ್ರವೇ ನೀಡಬೇಕಾಗುತ್ತದೆ, ಆದರೆ ಪಿಡಿಓ ಅವರಿಂದ ನಿರಪೇಕ್ಷಣಾ ಪತ್ರವೂ ಪಡೆಯಬೇಕು ಎನ್ನುವ ನಿಯಮ ಎಲ್ಲೂ ಇಲ್ಲ. ಸುಖಾಸುಮ್ಮನೆ ಬಡವರನ್ನು ಅಲೆದಾಡಿಸುದೇಕೆ, ಈ ಬಗ್ಗೆ ತಿಳಿಯಬೇಕಾದರೆ ನಾಲ್ಕು ದಿನ ಪಂಚಾಯತ್‍ರಾಜ್ ಪುಸ್ತಕ…

Read More

UN NETWORKS ಮಂಜೇಶ್ವರ : ಡಾ| ಬಿ.ಆರ್ ಅಂಬೇಡ್ಕರ್ ದಲಿತ ಸಾಹಿತ್ಯ ಅಕಾಡಮೆ ಕೇರಳ ರಾಜ್ಯ ಸಮಿತಿಯ 21ನೇ ರಾಜ್ಯ ಸಮ್ಮೇಳನವು ಕೋಟ್ಟಯಂ ಜಿಲ್ಲೆಯ ಚೆರ್ತಲ ಕಲಾಭಮಣಿ ನಗರದ ಸೈಂಟ್ ಮಿನ್ನಾಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಕಾಸರಗೋಡು ಜಿಲ್ಲೆಯಿಂದ ಪ್ರತಿನಿಧಿಕರಿಸಿದ ಸಾಮಾಜಿಕ ಕಾರ್ಯಕರ್ತ ತುಳಸೀದಾಸ್ ಮಂಜೇಶ್ವರ ಇವರ ಸಮಾಜಸೇವೆಯನ್ನು ಗುರುತಿಸಿ ಡಾ| ಬಿ,ಆರ್ ಅಂಬೇಡ್ಕರ್ ಜ್ಯೋತಿ ಪ್ರಶಸ್ತಿಯನ್ನ ಕೇರಳದ ಸಿವಿಲ್ ಸಪ್ಲೈ ಮಂತ್ರಿಗಳಾದ ತಿಲೋತ್ತಮನ್ ಪ್ರಧಾನಗೈದರು. ಮಂಜೇಶ್ವರ ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾಗಿರುವ ತುಳಸೀದಾಸ್‍ರವರು ಪ್ರಸ್ತುತ ಮಂಗಳೂರಿನಲ್ಲಿ ರೈಲ್ವೇ ಉದ್ಯೋಗಿಯಾಗಿದ್ದು, ಶ್ರೀ ಧೂಮಾವತಿ ದೈವಸ್ಥಾನ ಕುಂಬಳೆಯ ಅಧ್ಯಕ್ಷರಾಗಿಯೂ, ಬ್ರೈಟ್ ಮಂಜೇಶ್ವರದ ಅಧ್ಯಕ್ಷರಾಗಿಯೂ, ಭಾರತೀಯ ಮಜ್ದೂರ್ ಸಂಘ (ಬಿ.ಎಂ.ಎಸ್) ಇದರ ಪ್ರಧಾನ ಕಾರ್ಯದರ್ಶಿಯಾಗಿಯೂ, ಬಾಕುಡ ಸಮಾಜದ ಕೇಂದ್ರೀಯ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವೆಗಾಗಿ ದೊರೆತ ಡಾ| ಬಿ.ಆರ್ ಅಂಬೇಡ್ಕರ್ ಜ್ಯೋತಿ ಪ್ರಶಸ್ತಿ ಭಾಜನರಾದ ತುಳಸೀದಾಸ್‍ರವರನ್ನು ಮಂಜೇಶ್ವರದ ಜನತೆ ಅಭಿನಂದಿಸಿದೆ.

Read More