UN NETWORKS ತೊಕ್ಕೊಟ್ಟು : ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರದ ಶತಮನೋತ್ಸವದ ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯ ಅಂಗವಾಗಿ ಪವಿತ್ರ ಮೂರ್ತಿಯ ಮೆರವಣಿಗೆ ವಾಹನ ಜಾಥಾದ ಮೂಲಕ ಸೋಮೆಶ್ವರದಿಂದ ತೊಕ್ಕೊಟ್ಟು ಧರ್ಮಕೇಂದ್ರದ ವರೆಗೆ ಬುಧವಾರ ಸಂಜೆ ನಡೆಯಿತು. ಫೋಟೋ:ಪಚ್ಚು ಪೆರ್ಮನ್ನೂರು ಶತಮಾನೋತ್ಸವದ ಧ್ವಜಾರೋಹಣ ಹಾಗೂ ಶತಮನೋತ್ಸವದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಫಾ. ವಿಕಾರ್ ಜನರಲ್ ಡೆನಿಸ್ ಮೊರಸ್ ಪ್ರಭುನೆರವೇರಿಸಿದರು. ಪೂರ್ವಿ ತಯಾರಿಯಾಗಿ 9 ದಿವಸಗಳ ನೋವೆನ ಪ್ರಾರ್ಥನೆಗಳ ಮೊದಲ ದಿನದ ಪ್ರಾರ್ಥನೆ ನಡೆಯಿತು. ಈ ಸಂದರ್ಭ ಕುಟುಂಬಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಈ ಭಕ್ತಿವಿಧಿಯಲ್ಲಿಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಧರ್ಮಗುರುಗಳಾದ ಫಾ| ಜೆ.ಬಿ. ಸಲ್ಡಾನ್ಹಾ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ , ಸಹಾಯಕ ಧರ್ಮಗುರುಗಳಾದ ಫಾ| ಸ್ಟ್ಯಾನಿ ಪಿಂಟೊ , |ಫಾ| ಲೈಝಿಲ್ ಡಿ’ಸೋಜ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಪ್ರಾಂಶುಪಾಲರಾದ ಫಾ| ಎಡ್ವಿನ್ ಮಸ್ಕರೇನಸ್, ತೊಕ್ಕೊಟ್ಟು ಡಿವೈನ್ ಸೆಂಟರಿನ ಫಾ| ಜೋಸೆಫ್, ನೆಹರುನಗರ ಆಲೋಶಿಯನ್ ಕಾನ್ವೆಂಟಿನ ಮುಖ್ಯಸ್ಥೆ ಸಿ| ಬೆನ್ನಿ ಬರೆಟ್ಟೊ,…
Author: UllalaVani
UN NETWORKS ಮಂಗಳೂರು: ಕ್ರೀಡಾಪಟುಗಳಿಗೆ ಪರೀಕ್ಷೆ ಸಂದರ್ಭ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶವನ್ನು ಮಂಗಳೂರು ವಿಶ್ವವಿದ್ಯಾನಿಲಯ ಪ್ರಥಮ ಬಾರಿ ಕಲ್ಪಿಸಿದ್ದು, ಸ್ಪರ್ಧೆಯಿಂದ ವಾಪಸ್ಸಾದ ಕೂಡಲೇ ಸ್ಪರ್ಧಾಳುಗಳಿಗೆ ವಿಶೇಷ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಒಂದು ವರ್ಷದವರೆಗೆ ಕಾಯಬೇಕಾದ ಅನಿವಾರ್ಯತೆಯಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಬೈರಪ್ಪ ಹೇಳಿದರು. ಅವರು ಮಂಗಳೂರು ರಥಬೀದಿಯ ಡಾ.ಪಿ ದಯಾನಂದ ಪೈ-ಡಾ.ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವತಿಯಿಂದ ಮಂಗಳ ಕ್ರೀಡಾಂಗಣದಲ್ಲಿ ಗುರುವಾರ ಮಹಿಳೆಯರು , ಪುರುಷರು ಹಾಗೂ ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಲಾಗಿದ್ದ 37 ನೇ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಅಥ್ಲೆಟಿಕ್ ಮೀಟ್ , ಪುರಷರ ವಿಭಾಗಕ್ಕೆ ಸಂತ ಫಿಲೋಮಿನ ಕಾಲೇಜು ಅಸೋಷಿಯೇಷನ್ ಟ್ರೋಫಿ ಮತ್ತು ಮಹಿಳೆಯರಿಗಾಗಿ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಟ್ರೋಫಿಗೆ ಚಾಲನೆ ನೀಡಿ ಮಾತನಾಡಿದರು. ಹಿಂದೆ ವಿದ್ಯಾರ್ಥಿ ಕ್ರೀಡಾಪಟುಗಳು ಪರೀಕ್ಷೆ ಸಂದರ್ಭ ಸ್ಪರ್ಧೆಗಳಲ್ಲಿ ಭಾಗವಹಿಸಿದಲ್ಲಿ, ಒಂದು ವರ್ಷದ ನಂತರ ಪರೀಕ್ಷೆಯನ್ನು ಬರೆಯುವ ಅನಿವಾರ್ಯತೆಯಿತ್ತು.…
UN NETWORKS ಮಂಗಳೂರು: ಮೋದಿ ಬಳಿಕ ನಾನು ದೇಶದ ಪ್ರಧಾನಿಯಾಗುತ್ತೇನೆ. ಮುಂಬರುವ ಚುನಾವಣೆಯಲ್ಲಿ ಹುಚ್ಚ ವೆಂಕಟ ಸೇನೆ ಸ್ಪರ್ಧಿಸಲಿದೆ ಎಂದು ಬಿಗ್ಬಾಸ್ ಖ್ಯಾಾತಿಯ ಹುಚ್ಚ ವೆಂಕಟೇಶ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ನಲ್ಲಿ ನಡೆಯುವ ಚುನಾವಣೆಯಲ್ಲಿ ಹೊಸ ಪಕ್ಷ ಸ್ಥಾಪಿಸಬೇಕಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಆಗಿಲ್ಲ. ನನ್ನ ಹುಚ್ಚ ವೆಂಕಟ್ ಸೇನೆ ಸಕ್ರಿಯವಾಗಿದೆ. ಅದನ್ನು ಮುಂದಿನ ಚುನಾವಣೆ ವೇಳೆಯಾದರೂ ರಾಜಕೀಯ ಪಕ್ಷವನ್ನಾಗಿಸಬೇಕು. ಮೋದಿ ಇನ್ನು ಸ್ವಲ್ಪ ವರ್ಷ ದೇಶದ ಪ್ರಧಾನಿಯಾಗಿರುತ್ತಾರೆ. ಅವರ ನಂತರ ನಾನು ದೇಶದ ಪ್ರಧಾನಿಯಾಗುವೆ ಎಂದರು.
UN NETWORKS ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಒಂಭತ್ತನೇಯ ವಾರ್ಡಿನ ಶಾರದಾ ನಗರ ಹೌಸಿಂಗ್ ಕಾಲನಿಯ ಕಾಂಕ್ರೀಟೀಕರಣ ರಸ್ತೆ ಮತ್ತು ಸುಸಜ್ಜಿತವಾದ ಚರಂಡಿಯ ಉದ್ಘಾಟನೆಯನ್ನು ಶಾರದಾ ನಗರ ಅಭಿವೃದ್ಧಿ ಸೊಸೈಟಿಯ ಉಪಾಧ್ಯಕ್ಷ ರಮೇಶ್ ಹೆಬ್ಬಾರ್ ನೆರವೇರಿಸಿದರು. ಶಾರದಾ ನಗರ ಹೌಸಿಂಗ್ ಕಾಲನಿಯ ಒಂದನೇ ಅಡ್ಡ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ,ಕೋಟೆಕಾರ್ ಪಟ್ಟಣ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಊರಿನವರು ರಸ್ತೆ ಅಭಿವೃದ್ಧಿಪಡಿಸಲು ಬೇಡಿಕೆಯನ್ನಿಟ್ಟಿದ್ದರು,ಈ ನಿಟ್ಟಿನಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ಎಸ್.ಎಫ್.ಸಿ.ನಿಧಿಯಿಂದ 3 ಲಕ್ಷ ರೂಪಾಯಿಯ ಅನುದಾನದಲ್ಲಿ ಉತ್ತಮ ವಾದ ಕಾಂಕ್ರೀಟೀಕರಣ ರಸ್ತೆ ಯಾಗಿದೆ ಎಂದು ಒಂಭತ್ತನೇಯ ವಾರ್ಡಿನ ಸದಸ್ಯ ಹಮೀದ್ ಹಸನ್ ಮಾಡೂರು ತಿಳಿಸಿದರು. ಶಾರದಾ ನಗರ ಅಭಿವೃದ್ಧಿ ಸೊಸೈಟಿಯ ಮಾಜಿ ಅಧ್ಯಕ್ಷ ನಾರಾಯಣ, ಸದಸ್ಯರಾದ ರಘುರಾಮ ಶೆಟ್ಟಿ,ಪೂರ್ಣಿಮಾ, ಪಾರ್ವತಿ ಮುರಳಿ,ಜಮೀಳಾ.ಕೆ, ಮುರಳಿ, ರವಿ ಕಿರಣ್, ಸವಿತಾ, ಖುರ್ಷಿದ ಬಾನು,ಹಸೀನಾ, ಶಹನಾಝ್,ಸಯ್ಯದ್ ಸಿಬಿತುಲ್ಲಾ, ಅಬ್ದುರ್ರಹಮಾನ್, ವನಿತಾ ಶೆಟ್ಟಿ, ಗುತ್ತಿಗೆದಾರ ಇಸ್ಮಾಯಿಲ್ ಉಪಸ್ಥಿತರಿದ್ದರು.
UN NETWORKS ತಲಪಾಡಿ: ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕ್ಯಾಂಪಸ್ನ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ `ಸ್ಪಿರಿಟ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ನೃತ್ಯಗಳನ್ನು ಪ್ರಸ್ತುತಪಡಿಸಿದರು.
UN NETWORKS ಉಳ್ಳಾಲ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯ ಅನಾವರಣದೊಂದಿಗೆ ಅವರಲ್ಲಿ ಸಾಮಾಜಿಕ, ಮಾನವೀಯ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಮೌಲ್ಯಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಕೊಡುಗೆ ಅಪಾರ ಎಂದು ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು. ಅವರು ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕ್ಯಾಂಪಸ್ನ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ `ಸ್ಪಿರಿಟ್’ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಕೌನ್ಸಿಲರ್ ಮಮತಾ ಭಂಡಾರಿ ಮಾತನಾಡಿ ಶಾರಾದ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅವರ ಕಾರ್ಯ ಶೈಲಿಯಿಂದ ಒಂದೊಂದು ವಿಶೇಷತಾ ಗುಣವನ್ನು ಹೊಂದಿರುವುದು ಕಾಣುತ್ತದೆ. ಇಲ್ಲಿ ಮಕ್ಕಳಿಗೆ ಸಂಸ್ಕಾರದೊಂದಿಗೆ ಮೌಲ್ಯಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು. ವಿದ್ಯಾರ್ಥಿನಿ ಶೈಲಾಶ್ರೀ ಐತಾಳ್ ಸ್ವಾಗತಿಸಿದರು. ದೃಶ್ಯ ಭಂಡಾರಿ ವಂದಿಸಿದರು. ಝಾಹಿದ್ ಮಹಮ್ಮದ್, ಅಂಕಿತಾ ಹೆಗ್ಡೆ ಸಾತ್ವಿಕ ಹರೀಶ್ ಕುಮಾರ್, ಅನಂತ್…
UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಶ್ರೀ ವಿಠೋಭ ರುಕ್ಮಾಯಿ ಮಂದಿರದ ಎಪ್ಪತ್ತನೇ ವಾರ್ಷಿಕೋತ್ಸವದ ಭಜನಾ ಸಂಕೀರ್ತನಾ ಕಾರ್ಯಕ್ರಮಕ್ಕೆ ಜಪ್ಪಿನಮೊಗರುವಿನ ಉದ್ಯಮಿ ಗಣೇಶ್ ಶೆಟ್ಟಿ, ವನಿತಾ ಶೆ ಜಿ. ಶೆಟ್ಟಿ ದೀಪ ಪ್ರಜ್ವನೆಯ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂದಿರದ ಗೌರವಾಧ್ಯಕ್ಷರಾದ ಟಿ.ಎನ್. ಗಟ್ಟಿ, ಜಯಂತಿ ಭಾಸ್ಕರ್, ಅಧ್ಯಕ್ಷ ಪದ್ಮನಾಭ ಕಾರ್ಪೆಂಟರ್, ಪ್ರ. ಕಾರ್ಯದರ್ಶಿ ಚೇತನ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಮೋಹನ್ ಬಂಗೇರ, ಉಪಾಧ್ಯಕ್ಷರಾದ ಜಯಂತ್ ಕೃಷ್ಣನಗರ, ಕಮಲಾಕ್ಷಿ ದೇವದಾಸ್, ಪದಾಧಿಕಾರಿಗಳಾದ ಭವಾನಿಶಂಕರ ರೈ, ರೂಪಶ್ರೀ, ಕೆ. ರಾಮಚಂದ್ರ, ಉಮೇಶ್ ಬಿ.ಎಂ., ಲೀಲಾ ಜಯಂತ್ ಶೆಟ್ಟಿ, ಸುಕುಮಾರ್ ಸಾಲ್ಯಾನ್, ಅರುಣ್ ಉಳ್ಳಾಲ್, ಮಾಜಿ ಅಧ್ಯಕ್ಷ ಸಚ್ಚೀಂದ್ರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
UN NETWORKS ಹೊಸದಿಲ್ಲಿ : ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ಎಲ್ವಿಸಿ40 ಮೂಲಕ ತನ್ನ 100ನೇ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಶುಕ್ರವಾರ ಬೆಳಗ್ಗೆ 9:28ಕ್ಕೆ ಪಿಎಸ್ಎಲ್ವಿಸಿ40 ಮೂಲಕ 710 ಕೆಜಿ ತೂಕದ ಕಾರ್ಟೊಸೆಟ್-2 ಸಿರೀಸ್ ಹಾಗೂ ಇತರ 30 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು. ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಕೆನಡಾ, ರಿಪಬ್ಲಿಕ್ ಆಫ್ ಕೊರಿಯಾ ಹಾಗೂ ಫಿನ್ಲ್ಯಾಂಡ್ನ 28 ವಿದೇಶಿ ಉಪಗ್ರಹ ಸಹಿತ ಒಟ್ಟು 30 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಯಿತು. ಈ ಮೂಲಕ ಇಸ್ರೋ 100ನೇ ಉಪಗ್ರಹವನ್ನು ಕಕ್ಷೆ ಸೇರಿಸಿದ ಸಾಧನೆ ಮಾಡಿತು. ಪಿಎಸ್ಎಲ್ವಿಸಿ40 ಒಟ್ಟು 1323 ಕೆಜಿ ತೂಕದ ಉಪಗ್ರಹವನ್ನು ಹೊತ್ತೊಯ್ದು ಕಕ್ಷೆಗೆ ಸೇರಿಸಿದೆ. ಈ ಐತಿಹಾಸಿಕ ಕ್ಷಣಕ್ಕೆ ಇಸ್ರೋದ ಉನ್ನತ ಅಧಿಕಾರಿಗಳಾದ ಇಸ್ರೋ ಅಧ್ಯಕ್ಷ ಎಎಸ್ ಕಿರಣ್ ಕುಮಾರ್, ವಿಎಸ್ಎಸ್ಸಿ ನಿರ್ದೇಶಕ ಕೆ. ಶಿವಂ, ಎಲ್ಪಿಎಸ್ಸಿ ನಿರ್ದೇಶಕ ಸೋಮ್ನಾಥ್, ಎಸ್ಡಿಎಸ್ಸಿ ಡೈರೆಕ್ಟರ್ ಕುನ್ಹಿ ಕೃಷ್ಣನ್, ಐಎಸ್ಎಸಿ ನಿರ್ದೇಶಕ ಅಣ್ಣಾದೊರೈ ಸಾಕ್ಷಿಯಾದರು.
UN NETWORKS ಉಳ್ಳಾಲ : ಎಸ್ಸೆಸ್ಸೆಫ್, ಎಸ್ ವೈ ಎಸ್ ಅಝಾದ್ ನಗರ ಶಾಖೆ ಇದರ ಒಂದನೆ ವಾರ್ಷಿಕೋತ್ಸವ ದ ಅಂಗವಾಗಿ ಶೈಖುನಾ ತಾಜುಲ್ ಉಲಮಾ ಅನುಸ್ಮರಣೆಯ ಪ್ರಯುಕ್ತ ಇತ್ತೀಚೆಗೆ ಉಳ್ಳಾಲದ ಮಾಸ್ತಿಕಟ್ಟೆಯ ಜಂಕ್ಷನ್ನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಸುಮಾರು 55 ವರ್ಷ ಉಳ್ಳಾಲದಲ್ಲಿಯೇ ದೀನಿ ಸೇವೆ ಮಾಡಿದ ಶೈಖುನಾ ಅಹ್ಮದ್ ಬಾವ ಉಸ್ತಾದರಿಗೆ ಶೈಖುನಾ ತಾಜುಲ್ ಉಲಮಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಅಧ್ಯಕ್ಷ ಸೈಯದ್ ಜಲಾಲ್ ತಂಙಳ್ ಕಾರ್ಯಕ್ರಮ ಆರಂಭಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ಶಿಹಾಬುದ್ದೀನ್ ಸಖಾಫಿ ಅಲ್ ಕಾಮಿಲಿ ಉದ್ಘಾಟನೆ ಮಾಡಿದರು. ಸುಂದರಿಬಾಗ್ ಜುಮಾ ಮಸೀದಿ ಖತೀಬ್ ಷರೀಫ್ ಸಅದಿ ಉಸ್ತಾದರು ಅನುಸ್ಮರಣಾ ಬಾಷಣ ಮಾಡಿದರು. ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಸಂದೇಶ ಭಾಷಣ ಮಾಡಿದರು. ಯು ಎಸ್ ಹಂಝ ಹಾಜಿ, ಕೌನ್ಸಿಲರ್ ಇಬ್ರಾಹಿಮ್ ಶೌಕತ್…
UN NETWORKS ಮಂಗಳೂರು : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಇಂದಿನಿಂದ ಜನವರಿ 14ರ ವರೆಗೆ ನಡೆಯುವ ಆಳ್ವಾಸ್ ವಿರಾಸತ್-2018 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಸಂಜೆ 5.15 ರಿಂದ ಮೆರವಣಿಗೆ, 5.30ರಿಂದ 6.45ರ ವರೆಗೆ ಸಭೆ ನಡೆಯಲಿದೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ವಿರಾಸತ್ 2018 ನ್ನು ಉದ್ಘಾಟಿಸಲಿದ್ದಾರೆ. ಸುಪ್ರಸಿದ್ಧ ಹಿಂದೂಸ್ಥಾನಿ ಗಾಯಕರಾದ ಪದ್ಮಭೂಷಣ ರಾಜನ್ -ಸಾಜನ್ ಮಿಶ್ರಾ ಸಹೋದರರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. 160 ಅಡಿ ಉದ್ದ, 60 ಅಡಿ ಅಗಲದ ವಿಶಾಲ ವೇದಿಕೆ, 50,000 ಮಂದಿ ಕುಳಿತು ಕಾರ್ಯಕ್ರಮ ಆಸ್ವಾದಿಸಬಹುದಾದ ಗ್ಯಾಲರಿ, ಮೋಹಕ ವಿದ್ಯುದ್ದೀಪಾಲಂಕಾರ, ಅತ್ಯುತ್ತಮ ಬೆಳಕು- ಧ್ವನಿ ವ್ಯವಸ್ಥೆ ವಿರಾಸತ್ ಸಂಭ್ರಮಕ್ಕೆ ಪೂರಕವಾಗಿದೆ.ವ್ಯವಸ್ಥಿತ ಪಾರ್ಕಿಂಗ್, ಖಾದ್ಯಗಳ ಮಳಿಗೆಗಳಿವೆ. ವಿದ್ಯಾರ್ಥಿ ಸ್ವಯಂಸೇವಕರು, ಮಾರ್ಗದರ್ಶಿ ಶಿಕ್ಷಕರು,…

