Author: UllalaVani

Kannada News From Coastal Karnataka

UN NETWORKS ತಲಪಾಡಿ: ವಿದ್ಯಾರ್ಥಿಗಳು ಎಳೆವಯಸ್ಸಿನಲ್ಲಿಯೇ ಸಮಾಜ ಸೇವೆಯಂತಹ ಉನ್ನತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ, ಸಮಾಜದ ಬೆಳವಣಿಗೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಮಂಗಳೂರು ರೋಟರಿ ಕ್ಲಬ್‍ನ ಅಧ್ಯಕ್ಷ ಡಾ| ವಸಂತ್ ಪೈ ಅವರು ಅಭಿಪ್ರಾಯಪಟ್ಟರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನಲ್ಲಿ ನಡೆದ ವನಮಹೋತ್ಸವ ಹಾಗೂ ಇಂಟರಾಕ್ಟ್ ಕ್ಲಬ್‍ನ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್‍ನ ಚೇರ್‍ಮ್ಯಾನ್ ಸಿದ್ದಾರ್ಥ ಶೆಟ್ಟಿ ಮಾತನಾಡಿ, ಶೇ 28 ರಷ್ಟು ಯುವ ಜನತೆಯನ್ನು ಹೊಂದಿರುವ ಭಾರತ, 2020 ರಲ್ಲಿ ಅತ್ಯಧಿಕ ಯುವಜನರನ್ನು ಹೊಂದಿರುವ ಮಹಾನ್ ರಾಷ್ಟ್ರವಾಗಿ ಹೊರಹಮ್ಮಲಿದೆ. ಹಾಗಾಗಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಈ ಯುವಜನತೆಯ ಪಾಲ್ಗೊಳ್ಳುವಿಕೆ ದೇಶದಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲಿದೆ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ರೊಟೇರಿಯನ್ ಮಯೂರ್ ಶೇರಿಗಾರ್, ರೋಟರಿ ಕ್ಲಬ್‍ನ ಉಗಮ ಮತ್ತು ಸಮಾಜಕ್ಕೆ ಅದು ನೀಡುತ್ತಿರುವ ಕೊಡಗೆಯ ಬಗ್ಗೆ ವಿಸೃತ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ…

Read More

UN NETWORKS ಮಂಗಳೂರು: ಹಿಂದೂ ಯುವ ಸೇನಾ ಆಶ್ರಯದಲ್ಲಿ ನಡೆಯುವ ಮಂಗಳೂರು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ 25ನೇ ಭಾರಿಗೆ ಕಲ್ಪನಾ ಸ್ವೀಟ್ಸ್ ನ ಪಾಲುದಾರ ಶಶಿಕಾಂತ್ ನಾಗ್ವೇಕರ್ ಆಯ್ಕೆಯಾಗಿದ್ದಾರೆ.ಹಿಂದೂ ಯುವ ಸೇನಾ ಆಶ್ರಯದಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಚರಿಸಲ್ಪಡುವ 26ನೇ ವರ್ಷದ ಮಂಗಳೂರು ಗಣೇಶೋತ್ಸವ ಸಮಿತಿಯ ಮಹಾಸಭೆಯು ಹಿಂದೂ ಯುವ ಸೇನಾ ಅಧ್ಯಕ್ಷ ಯಶೋದರ ಚೌಟ ಇವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಭಾಸ್ಕರಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಚೌಟ ಪದವು, ಕೋಶಾಧಿಕಾರಿಯಾಗಿ ಸುರೇಶ್ ಶೆಟ್ಟಿ ಕೊಟ್ಟಾರ ಕ್ರಾಸ್, ಉಪಾದ್ಯಕ್ಷರುಗಳಾಗಿ ಉಮೇಶ್ ಪೈ, ರಾಜೇಂದ್ರ ಶೆಣೈ, ಧರ್ಮೇಂದ್ರ ಎಂ.ಪಿ, ವಸಂತ್ ಉರ್ವಸ್ಟೋರ್, ಶುಭಕರ ಚೌಟ ಎಕ್ಕೂರು, ಶ್ರೀನಿವಾಸ್ ಎಕ್ಕೂರು, ಕೊರಗಪ್ಪ ಶೆಟ್ಟಿ ಆಕಾಶಭವನ, ಶರತ್ ಮಂಕಿಸ್ಟಾಂಡ್, ಯಾಧವ ಕುಂದರ್ ವಾಮಂಜೂರ್, ಲಕ್ಷ್ಮಣ ಜೋಗಿ ಮೂಡುಶೆಡ್ಡೆ, ಕಿರಣ್ ರೈ ಬಜಾಲ್, ಪಮ್ಮಿ ಕೊಡಿಯಾಲ್ ಬೈಲ್, ಸುರೇಶ್ ಹೊಳ್ಳ ಕುಡುಂಬೂರ್, ಸುರೇಶ್ ಕೆಮ್ಮಟೆ, ಕಾರ್ಯದರ್ಶಿಗಳಾಗಿ ಸುಕುಮಾರ್ ಸುರತ್ಕಲ್, ಲೋಕೇಶ್ ಕುತ್ತಡ್ಕ, ನಾಗೇಶ್…

Read More

UN NETWORKS ತಲಪಾಡಿ: ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಕಾರ್ಯಕ್ರಮಗಳು ಪೂರಕ ಎಂದು ಮಹೇಶ್ ಪದವಿ ಪೂರ್ವ ಕಾಲೇಜಿನ ಸಸ್ಯಶಾಸ್ರ ವಿಭಾಗದ ಉಪನ್ಯಾಸಕಿ ಚೇತನಾ ಅಜಿತ್ ಕುಮಾರ್ ಅಭಿಪ್ರಾಯಪಟ್ಟರು. ’ ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನಲ್ಲಿ ಶಾಲಾ ಪರಿಷತ್ ಉದ್ಘಾಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಸುಷ್ಮಾ ದಿನಕರ್ ಮಾತನಾಡಿ ಶಾಲಾ ವಿದ್ಯಾರ್ಥಿ ನಾಯಕರು ಶಾಲೆಯ ನಿಯಮಗಳನ್ನು ಪಾಲಿಸುವುದರೊಂದಿಗೆ ತಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಮಾರ್ಗದರ್ಶನವನ್ನು ನೀಡುವ ಕಾರ್ಯವನ್ನು ಮಾಡಬೇಕು. ಶಾರಾದಾ ವಿದ್ಯಾನಿಕೇತನ ಡೇ ಸ್ಕೂಲ್ ನ ಪ್ರಾಂಶುಪಾಲೆ ಲತಾಂಜಲಿ ರೈ ವಿದ್ಯಾರ್ಥಿ ಪರಿಷತ್‍ನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವಸತಿ ಶಾಲೆಯ ಉಪ ಪ್ರಾಂಶುಪಾಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ.ಜಿ. ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ವೈಷ್ಣವಿ ಸ್ವಾಗತಿಸಿದರು. ಲಕ್ಷ್ಮಿಬೋಳಾರ್ ಕಾರ್ಯಕ್ರಮ ನಿರೂಪಿಸಿದರು. ಯುಕ್ತಾ ಭಾಗವತ್ ವಂದಿಸಿದರು.

Read More

UN NETWORKS ಉಳ್ಳಾಲ: ಗುಣ ಮಟ್ಟದ ಶಿಕ್ಷಣ ಪಡೆಯುವುದರಿಂದ ಮನೆ ಸಮಾಜ ಎರಡಕ್ಕೂ ವಿದ್ಯಾರ್ಥಿಗಳು ಮಾದರಿಯಾಗಬಹುದು ಎಂದು ಡಾ| ಮುಬೀನ್ ಉಳ್ಳಾಲ್ ಅಭಿಪ್ರಾಯಪಟ್ಟರು. ಬಬ್ಬುಕಟ್ಟೆಯ ಹಿರಾ ನಗರದ ಹಿರಾ ಶಿಕ್ಷಣ ಸಂಸ್ಥೆಯಲ್ಲಿ 2017-18ರ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಅತಿಥಿಯಾಗಿ ಭಾಗವಹಿಸಿದ ಡೆಲ್ಟಾ ಕಂಪೆನಿಯ ವ್ಯವಸ್ಥಾಪಕ ಅಹ್ಮದ್ ಮೊೈದಿನ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಅತೀ ಅಗತ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಂತಿ ಎಜುಕೇಶನ್‍ನ ವ್ಯವಸ್ಥಾಪಕ ಅಧ್ಯಕ್ಷ ಕೆ.ಎಂ ಶರೀಫ್, ಅಧ್ಯಕ್ಷ ಅಬ್ದುಲ್‍ರಹಮಾನ್, ಸಂಚಾಲಕ ರಹಮತ್ತುಲ್ಲ, ಉಪಧ್ಯಾಕ್ಷ ಎ.ಹೆಚ್ ಮಹಮೂದ್, ಕಾರ್ಯದರ್ಶಿ ಅಬ್ದುಲ್‍ಕರೀಂ, ಖಜಾಂಚಿ ಅಬ್ದುಲ್‍ಖಾದರ್ ಹಾಗೂ ಟ್ರಸ್ಟಿನ ಸದಸ್ಯರು, ಹಿರಾ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.ಇಂಗ್ಲೀಷ್ ಉಪನ್ಯಾಸಕಿ ಅನಿತ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Read More

UN NETWORKS ಉಳ್ಳಾಲ: ಪದವಿ ಪೂರ್ವ ಶಿಕ್ಷಣ ಇಲಾಖೆ 2017-2018ರ ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡ 100% ಫಲಿತಾಂಶ ಸಾಧಿಸಿದ ಕೆ.ಸಿ.ರೋಡ್ ವಿದ್ಯಾನಗರದ ಫಲಾಹ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಗೂ ಪ್ರಾಂಶುಪಾಲರಿಗೆ ಮತ್ತು ಉಪನ್ಯಾಸಕರಿಗೆ ಆಡಳಿತ ಮಂಡಳಿ ಫಲಾಹ್ ಎಜ್ಯುಕೇಶನ್ ಸೊಸೈಟಿ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು. ಫಲಾಹ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಯು.ಬಿ.ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಸ್ಥೆಯ ಕೋಶಾಧಿಕಾರಿ ಇಸ್ಮಾಯಿಲ್ ನಾಗತೋಟ, ಸದಸ್ಯ ಅಬ್ಬಾಸ್ ಉಚ್ಚಿಲ್, ಕನ್ನಡ ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮೊಹಮ್ಮದ್ ರಫೀಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಆಯಿಶ ಸಬೀನ ಕೈಸೀರನ್, ಉಪಾಧ್ಯಕ್ಷ ಟಿ.ಎಂ.ಅಬ್ಬಾಸ್, ಕಾರ್ಯದರ್ಶಿ ಟಿ.ಎಂ.ಬಶೀರ್, ಮಾಜಿ ಅಧ್ಯಕ್ಷ ಅಬ್ಬಾಸ್ ಮಜಲ್, ಕಾಲೇಜು ನಾಯಕಿ ಫಮೀಝ, ಉಪನಾಯಕಿ ಝುನೈರ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಚಿತ ಸ್ಪೋಕನ್ ಇಂಗ್ಲೀಷ್ ತರಗತಿಯ ಉದ್ಘಾಟನೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು…

Read More

UN NETWORKS ಉಳ್ಳಾಲ: ಉಳ್ಳಾಲ ವಲಯ ಬಂಟರ ಸಂಘದಿಂದ ನೂತನವಾಗಿ ನಿರ್ಮಾಣಗೊಂಡಿರುವ `ಬಂಟರ ಭವನ’ ಒಂದು ಹೆಮ್ಮೆಯ ಪ್ರತೀಕವಾಗಿದ್ದು ಭವನ ನಿರ್ಮಾಣದಿಂದ ಸಂಘದ ಗರಿಮೆ ಇನ್ನಷ್ಟು ಹೆಚ್ಚಿದಂತಾಗಿದೆ ಎಂದು ಉಳ್ಳಾಲ ವಲಯ ಬಂಟರ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಬೊಳ್ಯಗುತ್ತು ಅಭಿಪ್ರಾಯಪಟ್ಟರು. ಕೊಣಾಜೆ ಅಸೈಗೋಳಿಯ ಬಂಟರ ಭವನದಲ್ಲಿ ಬಂಟರ ಸಂಘ ಉಳ್ಳಾಲ ವಲಯ ಇದರ ಹದಿನೇಳನೆ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಂಟರ ಭವನ ನಿರ್ಮಾಣದಲ್ಲಿ ಎಲ್ಲರ ಪಾತ್ರ ಮಹತ್ವದ್ದು, ಭವನ ನಿರ್ಮಾಣಕ್ಕೆ ಪ್ರಾರಂಬಿಕ ಹಂತದಿಂದ ಉತ್ತಮ ರೀತಿಯಲ್ಲಿ ಸಹಕಾರ ಸಿಕ್ಕಿದ್ದು, ಉಳ್ಳಾಲ ವಲಯದ ಸಮಾಜ ಬಾಂಧವರೊಂದಿಗೆ ಮುಂಬೈ ಅದರಲ್ಲೂ ಪೂನಾದವರ ಸಹಕಾರ ಅತೀ ದೊಡ್ಡದ್ದು. ಬಂಟರ ಸಂಘದ ಅಧ್ಯಕ್ಷತೆಯೊಂದಿಗೆ ಕಟ್ಟಡ ನಿರ್ಮಾಣಕ್ಕೆ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಿದ ಯುವ ನಾಯಕ ಜಿತೇಂದ್ರ ಶೆಟ್ಟಿ ಮತ್ತು ಅವರ ನೇತೃತ್ವದ ತಂಡ ಮತ್ತು ಕಟ್ಟಡ ಸಮಿತಿಯ ಎಲ್ಲಾ ಪದಾ„ಕಾರಿಗಳ ಕಾರ್ಯ ಶ್ಲಾಘನೀಯ ಎಂದ ಭವನ ನಿರ್ಮಾಣದೊಂದಿಗೆ ನಮ್ಮ ಜವಾಬ್ದಾರಿ…

Read More

ಉಳ್ಳಾಲ: ಜೈ ಶಕ್ತಿ ಮಿತ್ರಮಂಡಳಿಯ ಅಧ್ಯಕ್ಷರಾಗಿ ಹರೀಶ್ ಇರಾ ಆಯ್ಕೆಯಾಗಿದ್ದಾರೆ.2018-19ರ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ನಾಗೇಶ್ ಪೂಜಾರಿ, ಉಪಾಧ್ಯಕ್ಷರಾಗಿ ಪುಷ್ಪರಾಜ್, ಯತಿರಾಜ್ ಎ, ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಸೈಟ್, ಜೊತೆ ಕಾರ್ಯದರ್ಶಿಯಾಗಿ ಜಯಪ್ರಕಾಶ್, ಕೋಶಾಧಿಕಾರಿಯಾಗಿ ತಾರಾನಾಥ ಆಚೆಬೈಲ್, ಕ್ರೀಡಾ ಕಾರ್ಯದರ್ಶಿಯಾಗಿ ಶಿವರಾಜ್, ರಂಜಿತ್, ಸಂಘಟನಾ ಕಾರ್ಯದರ್ಶಿಯಾಗಿ ಜಯರಾಜ್, ಕೀರ್ತಿ, ಸಾಂಸ್ಕೃತಿಕಾ ಕಾರ್ಯದರ್ಶಿಯಾಗಿ ಹರೀಶ್, ಹರ್ಷಿ ಇವರುಗಳನ್ನು ಆಯ್ಕೆಮಾಡಲಾಯಿತು.

Read More

UN NETWORKS ಉಳ್ಳಾಲ: ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ ಕುಂಪಲ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸೋಮೇಶ್ವರ ಗ್ರಾಮ ಪಂಚಾಯತ್ ಇದರ ಸಹಯೋಗದಲ್ಲಿ ನಮ್ಮ ತ್ಯಾಜ್ಯ ನಮ್ಮ ಹೊಣೆ ಕಾರ್ಯಕ್ರಮದಡಿಯಲ್ಲಿ ಸೋಮೇಶ್ವರ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಮತ್ತು ವನಮಹೋತ್ಸವದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಆದಿತ್ಯವಾರ ನಡೆಯಿತು. ಜಿಲ್ಲಾ ಪಂಚಾಯತ್ ನ “ಸ್ವಚ್ಛಭಾರತ್ ಮಿಷನ್” ನ ಜಿಲ್ಲಾ ಸಂಯೋಜಕಿ ಮಂಜುಳಾ, ಜಿಲ್ಲಾ ಪಂಚಾಯತ್ ಸದಸ್ಯರಾದ ಧನಲಕ್ಷ್ಮೀ ಗಟ್ಟಿ , ಸೋಮೇಶ್ವರ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ರಾಜೇಶ್ ಉಚ್ಚಿಲ ಇವರು ಮಾತಾಡಿ ತ್ಯಾಜ್ಯ ನಿರ್ವಹಣೆಯಲ್ಲಿ ಸರಕಾರದ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದರು ಮತ್ತು ಗಿಡಗಳನ್ನು ನೆಟ್ಟು ಮುಂದೆಯು ಈ ಗಿಡಗಳ ನಿರ್ವಹಣೆ ಮಾಡುವಂತೆ ಕರೆ ನೀಡಿದರು. ಕೇಸರಿ ಸೇವಾ ಟ್ರಸ್ಟ್ ನ ಟ್ರಸ್ಟಿ ಬಿ. ನಾರಾಯಣ ಮಾತಾಡಿ ಸಹಕರಿಸಿದ ಎಲ್ಲಾರಿಗೂ ಧನ್ಯವಾದವನ್ನು ಅರ್ಪಿಸಿದರು ಅದೇ ರೀತಿ ಗಿಡಕ್ಕೆ ರಕ್ಷಣಾ ಬೇಲಿಯನ್ನು ನೀಡುವುದಾಗಿ ಘೋಷಿಸಿದ ನ್ಯಾಯವಾದಿ ರವೀಂದ್ರ ರೈ ಇವರಿಗೂ ಧನ್ಯವಾದವನ್ನು…

Read More

UN NETWORKS ಕೊಲ್ಯ: ಶ್ರೀ ರಮಾನಂದ ಸ್ವಾಮಿ ಸಂಪೂಜ್ಯೆ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕಲ್ಯಾಣ ಪ್ರಾಪ್ತಿ ಹರಿಕಥಾ ಸೇವೆಯ ಪ್ರಯುಕ್ತ ತೋನ್ಸೆ ಪುಷ್ಕಳ ಕುಮಾರ್ ರವರಿಂದ ‘ಗಿರಿಜಾ ಕಲ್ಯಾಣ’ ಹರಿಕಥೆ ಜರಗಿತು. ಪಕ್ಕವಾದ್ಯದಲ್ಲಿ ಗುಣಮತಿ ಟೀಚರ್ , ಸತೀಶ್ ಆಚಾರ್ ಸಹಕರಿಸಿದರು.

Read More

UN NETWORKS ಸೋಮೇಶ್ವರ: ಸಾರ್ವಜನಿಕ ಶಾರದೋತ್ಸವ ಸಮಿತಿಯ ಕೋರಿಕೆಯ ಮೇರೆಗೆ ಕೊಲ್ಯದಲ್ಲಿ ಬಸ್ಸಿಗಾಗಿ ಕಾಯುವ ಸಾರ್ವಜನಿಕ ಪ್ರಯಾಣಿಕರಿಗೆ ಬಿಸಿಲು ಮಳೆಯಿಂದ ಆಗುವ ಸಮಸ್ಯೆಯನ್ನು ಗಮನಿಸಿ, ಸಾಮಾಜಿಕ ಬದ್ಧತೆಯೊಂದಿಗೆ ಬಸ್ಸು ತಂಗುದಾಣ ನಿರ್ಮಿಸುತ್ತಿದ್ದು ಇದರ ಸದುಪಯೋಗ ಎಲ್ಲರೂ ಪಡೆದಯುವಂತಾಗಬೇಕು ಎಂದು ಉದ್ಯಮಿ ಸೌಂದರ್ಯ ರಮೇಶ್ ಅಭಿಪ್ರಾಯಪಟ್ಟರು. ಸೋಮೇಶ್ವರ ಗ್ರಾಮದ ಫ್ರಥಮ ಕೊಲ್ಯ ಹೆದ್ದಾರಿ ಪಕ್ಕದಲ್ಲಿ ಓಂ ಸಾಯಿ ಸೌಂದರ್ಯ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ತಾತ್ಕಾಲಿಕ ಬಸ್ಸು ತಂಗುದಾಣದ ಗುದ್ದಲಿ ಪೂಜೆಯನ್ನು ಉದ್ಯಮಿ ಸೌಂದರ್ಯ ರಮೇಶ್ ನೆರವೇರಿಸಿದರು. ಬಸ್ಸಿಗಾಗಿ ಕಾಯುವ ಸಾರ್ವಜನಿಕ ಪ್ರಯಾಣಿಕರಿಗೆ ಬಿಸಿಲು ಮಳೆಯಿಂದ ಆಗುವ ಸಮಸ್ಯೆಯನ್ನು ಗಮನಿಸಿ, ಸಾರ್ವಜನಿಕ ಶಾರದೋತ್ಸವ ಸಮಿತಿಯ ಕೋರಿಕೆ ಮೇರೆಗೆ ದಾನಿಗಳಿಂದ ಈ ಕೊರತೆ ನೀಗಿಸಲಾಗುತ್ತಿದೆ. ಶಾರದಾ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಬಂಗೇರ, ಅಧ್ಯಕ್ಷ ಯಶೋಧರ ಕೊಲ್ಯ ಭಾಗವಹಿಸಿದ್ದರು. ತೋನ್ಸೆ ಪುಷ್ಕಳ್ ಕುಮಾರ್ ಪ್ರಾಯೋಜಕರನ್ನು ಸ್ವಾಗತಿಸಿ ಅಭಿನಂದಿಸಿದರು. ಪ್ರಕಾಶ್ ಎಚ್. ಧಾರ್ಮಿಕ ಪ್ರಕ್ರಿಯೆ ನಡೆಸಿಕೊಟ್ಟರು. ಮೋಹನ್ ಶೆಟ್ಟಿ, ಉಮೇಶ್ ಕುಲಾಲ್, ರಮೇಶ್ ಕೊಲ್ಯ, ರಾಜೇಶ್ ಉಚ್ಚಿಲ್, ವಿಶ್ವನಾಥ್…

Read More