UN NETWORKS ತಲಪಾಡಿ: ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ರಕ್ಷಕ – ಶಿಕ್ಷಕರ ಸಮ್ಮಿಲನ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಇತ್ತೀಚಿಗೆ ಜರಗಿತು. ಸಂಪನ್ಮೂಲ ವ್ಯಕ್ತಿಯಾದ ಖ್ಯಾತ ಶಿಕ್ಷಣ ತಜ್ಞ ಅಬ್ದುಲ್ ಖಾದರ್ ಕಡಬ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಎನ್ಎಂಎಂಎಸ್ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಸಜಿನಾ ಫರ್ವೀನ್ ಹಾಗೂ ನಸ್ರೀಯಾರನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗಗಳಲ್ಲಿ ಸಾಧನೆಗೈದ 81 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿರುವ ಹಾಜಿ ಯು. ಬಿ ಮೊಹಮ್ಮದ್, ಉಪಾಧ್ಯಕ್ಷರಾದ ಟಿ ಎಂ ಅಬ್ಬಾಸ್, ಕಾರ್ಯದರ್ಶಿ ಟಿ ಎಂ ಬಶೀರ್, ಮಾಜಿ ಅಧ್ಯಕ್ಷ ಹಾಜಿ ಅಬ್ಬಾಸ್ ಮಜಲ್, ಮಾಜಿ ಕಾರ್ಯದರ್ಶಿ ಹಾಜಿ ಅರಬಿಕುಂಞ, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹಮ್ಮದ್ ರಫೀಕ್, ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕಿ ಶ್ರಿಮತಿ ಆಯಿಶಾ ಸಬೀನಾ ಕೈಸೀರನ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿದ್ಯಾ ಡಿ’…
Author: UllalaVani
UN NETWORKS ಬಾಯಾರ್: ಸಹಸ್ರಾರು ಮಂದಿ ಪಾಲ್ಗೊಳ್ಳುವ ಮಾಸಿಕ ಸ್ವಲಾತ್ತ್ ಹಾಗೂ ತಾಜುಲ ಉಲಮಾ , ನೂರುಲ್ ಉಲಮಾ ಅನುಸ್ಮರಣೆ 2018 ಜನುವರಿ 19 ಕ್ಕೆ ಬಾಯಾರ್ ಮುಜಮ್ಮಹ್ ಕಾಂಪಸ್ನಲ್ಲಿನಡೆಯಲಿದೆ. ಮಗ್ರಿಬ್ ನಮಾಝಿನ ನಂತರ ಆರಂಭಿಸಲಿರುವ ಪ್ರಸ್ತುತ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕ್ಕೋಯ ತಂಙಳ್ ಅಲ್-ಬುಖಾರಿ ಸ್ವಲಾತ್ ಮಜ್ಲಿಸ್ ಹಾಗೂ ಸಾಮೂಹಿಕ ಪ್ರಾಥನೆಗೆ ನೇತೃತ್ವ ವಹಿಸುವರು. ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಪ್ರಭಾಷಣೆ ನಡೆಸುವರು. ಅಸಯ್ಯಿದ್ ಮುನೀರುಲ್ ಅಹ್ದಲ್, ಶರಫುಲ್ ಉಲಮ ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನ, ಬಿಎಸ್ ಅಬ್ದುಲ್ಲಕುಂಞ ಪೈಝಿ, ಸಿ ಅಬ್ದುಲ್ಲ ಮುಸ್ಲಿಯಾರ್, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಲತೀಫ್ ಸಅದಿ ಫಯಶ್ವಿ, ಹಸ್ಸನ್ ಮುಸ್ಲಿಯಾರ್ ವಡಶ್ಶೇರಿ, ಬಾಯಾರ್ ಅಬ್ದುಲ್ಲ ಮುಸ್ಲಿಯಾರ್, ಅಬ್ದುಲ್ ಹಮೀದ್ ಮೌಲವಿ ಆಲಂಪಾಡಿ, ಮುಹಮ್ಮದ್ ಸಖಾಫಿ ಪಾತೂರ್, ಜಬ್ಬಾರ್ ಸಖಾಫಿ ಪಾತೂರ್, ಹಕ್ಕೀಂ ಮದನಿ ಕರೋಪಾಡಿ,ಉಮರ್ ಸಖಾಫಿಮುಹಿಮ್ಮಾತ್, ಮೂಸ ಸಖಾಫಿ ಕಳತ್ತೂರ್, ಹಾರಿಸ್ ಹಿಮಮಿ ಪರಪ್ಪ , ಅಝೀಝ್ ಸಖಾಫಿ ಸೂರ್ಯ, ಸಿದ್ದೀಖ್…
UN NETWORKS ಉಳ್ಳಾಲ: ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಭಾನುವಾರ ಜರಗಿದ ಮೇಲಂಗಡಿ ಕ್ರಿಕೆಟ್ ಕ್ಲಬ್, ಆಝಾದ್ ಫ್ರೆಂಡ್ಸ್ ಸರ್ಕಲ್ ಹಾಗೂ ಉಳ್ಳಾಲ ವಲಯದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಇದರ ಸಹಯೋಗದೊಂದಿಗೆ ದ್ವಿತೀಯ ಸಂಭ್ರಮ ಮತ್ತು ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಮಹಮ್ಮದ್ ಲಿಬ್ಜತ್ ಇವರನ್ನು ಸನ್ಮಾನಿಸಲಾಯಿತು. ಈ ವೇಳೆ ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಎಸ್ ವೈಎಸ್ ದ.ಕ ಜಿಲ್ಲಾ ಕೋಶಾಧಿಕಾರಿ ಹನೀಫ್ ಬಿ.ಜಿ, ಮೇಲಂಗಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಯಹ್ಯಾ ಬಿಲಾಲ್ ಮುಂತಾದವರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ವಾಟ್ಸ್ಯಾಪ್ ಗ್ರೂಪಿನ ಮೂಲಕ ಸಂಘಟಿಸಿ ಸಮಾಜಕ್ಕೆ ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಯುವಕರ ಕಾರ್ಯ ಶ್ಲಾಘನೀಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಭಾನುವಾರ ಜರಗಿದ ಮೇಲಂಗಡಿ ಕ್ರಿಕೆಟ್ ಕ್ಲಬ್, ಆಝಾದ್ ಫ್ರೆಂಡ್ಸ್ ಸರ್ಕಲ್ ಹಾಗೂ ಉಳ್ಳಾಲ ವಲಯದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಇದರ ಸಹಯೋಗದೊಂದಿಗೆ ದ್ವಿತೀಯ ಸಂಭ್ರಮ ಮತ್ತು ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು. ಆಧುನಿಕ ತಂತ್ರಜ್ಞಾನವನ್ನು ಬಲಪಡಿಸಿಕೊಂಡು ಯುವಕರ ಸಂಘಟನೆಯ ಮನೋಭಾವ, ಉದ್ದೇಶ ಸಮಾಜಕ್ಕೆ ಪೂರಕವಾಗಿದೆ. ತಾಳ್ಮೆ, ಪ್ರೀತಿ ,ವಿಶ್ವಾಸ , ಸಹೋದರತೆಯಿಂದ ಯುವಸಮುದಾಯ ಬಾಳಬೇಕಿದೆ. ಕಷ್ಟಗಳು ಎದುರಾದಲ್ಲಿ ಸಕಾರಾತ್ಮಕ ಸ್ಪಂಧಿಸುತ್ತಾ ಮುಂದುವರಿಯುವುದು ಜಾಣತನ. ರಾಜ್ಯದಲ್ಲೇ ಉಳ್ಳಾಲ ನಗರಸಭೆ ಅತ್ಯುತ್ತಮ ನಗರಸಭೆ ಎಂಬ ಪುರಸ್ಕಾರವನ್ನು ಪಡೆದಿದ್ದು, ಅದಕ್ಕೆ ಅನುಗುಣವಾಗಿ ಆಡಳಿತ ಮಂಡಳಿ ಕಾರ್ಯಾಚರಿಸುತ್ತಿದೆ. ಉಳ್ಳಾಲದಾದ್ಯಂತ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಒದಗಿಸಲಾಗಿದ್ದು,…
UN NETWORKS ಕೊಣಾಜೆ: ಇಬ್ಬರನ್ನು ವಿವಾಹವಾಗಿ ಅವರಿಗೆ ಮೂವರು ಮಕ್ಕಳನ್ನು ಕರುಣಿಸಿದ ಭೂಪನೋರ್ವ ಇದೀಗ ಹುಬ್ಬಳ್ಳಿ ಮೂಲದ ಹಿಂದೂ ಯುವತಿಯನ್ನು ಮೂರನೇ ವಿವಾಹವಾಗಿದ್ದು, ಈ ಬಗ್ಗೆ ಇಬ್ಬರು ಮಕ್ಕಳನ್ನು ಸಲಹಲು ಕಷ್ಟಪಡುತ್ತಿರುವ ಬಾಯಿ ಬಾರದ ಮುಸ್ಲಿಂ ಪತ್ನಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೆ, ಮತಾಂತರ ನಡೆಸಿ ಹಿಂದೂ ಯುವತಿಯನ್ನು ವಿವಾಹವಾಗಿರುವುದಾಗಿ ಆರೋಪಿಸಿದ್ದಾರೆ. ಮೂಲತ: ಬೋಳಿಯಾರ್ ರಂತಡ್ಕ ನಿವಾಸಿ ಆಸೀಫ್ (35) ಆರೋಪಿತನಾಗಿದ್ದಾನೆ. 18 ವರ್ಷಗಳ ಹಿಂದೆ ಲಾರಿ ಚಾಲಕನಾಗಿದ್ದ ಆಸೀಫ್, ಇನೋಳಿ ಬಿಸೈಟಿನ ಅಫ್ಸಾ ಎಂಬವರನ್ನು ಪ್ರೀತಿಸಿ ವಿವಾಹವಾಗಿದ್ದನು. ಆದರೆ ವಿವಾಹ ನಂತರ ಆಸೀಫ್ ಅಸಲಿಯತ್ತು ಬೆಳಕಿಗೆ ಬಂದಿದ್ದು, ಆತನಿಗೆ ಅದಾಗಲೇ ವಿವಾಹವಾಗಿ ಒಂದು ಮಗುವಿತ್ತು. ಪಂಡಿತ್ ಹೌಸ್ ಮೂಲದ ಯುವತಿಯನ್ನು ವಿವಾಹವಾಗಿದ್ದು, ಒಬ್ಬ ಪುತ್ರನಿದ್ದನು. ಆದರೆ ಆರ್ಥಿಕವಾಗಿ ಕಂಗೆಟ್ಟ ಮೊದಲ ಪತ್ನಿ ಕಾನೂನಾತ್ಮಕ ಹೋರಾಟಕ್ಕೆ ಇಳಿಯದೆ, ತನ್ನ ಪಾಡಿಗೆ ಬೀಡಿ ಕಟ್ಟಿ ಮಗನನ್ನು ಸಲಹುತ್ತಿದ್ದಾರೆ. ಆದರೆ ಅಫ್ಸಾ ಜತೆಗೆ ಮದುವೆಯಾಗಿದ್ದ ಆಸೀಫ್ ದಂಪತಿಗೆ ಓರ್ವ ಪುತ್ರ ಮತ್ತು ಓರ್ವ…
UN NETWORKS ಉಳ್ಳಾಲ: ವಾಹನ ದಟ್ಟಣೆ ಜತೆಗೆ ಅಪಘಾತಗಳು ಹೆಚ್ಚುತ್ತಿರುವ ರಸ್ತೆಯಲ್ಲಿ, ಸುರಕ್ಷತೆಯನ್ನು ಗಮನದಲ್ಲಿಟ್ಟು ಅಗಲೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ದೇರಳಕಟ್ಟೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ಇನೋಳಿ ಕಂಬ್ಲಪದವು ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ರಸ್ತೆವರೆಗಿನ ಅಗಲೀಕರಣ ಕಾಮಗಾರಿಗೆ ನಿಟ್ಟೆ ಆಸ್ಪತ್ರೆ ಎದುರುಗಡೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ತೊಕ್ಕೊಟ್ಟು ಮೆಲ್ಕಾರ್ ರಸ್ತೆ ಅಭಿವೃದ್ಧಿಗೆ ರಾಜ್ಯ ಸರಕಾರ ಮುಂದಾಗುವ ಸಂದರ್ಭ, ರಸ್ತೆ ಎನ್ಹೆಚ್ಎಐ ಇಲಾಖೆಗೆ ವರ್ಗೀಕರಣಗೊಂಡಿತ್ತು. ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೆಲ ತಿಂಗಳ ಹಿಂದೆ ಮಂಗಳೂರು ಭೇಟಿ ಸಂದರ್ಭ ತೊಕ್ಕೊಟ್ಟು -ಮೆಲ್ಕಾರ್ ರಸ್ತೆ ಚತುಷ್ಪಥ ಕಾಮಗಾರಿಯನ್ನು ತಿಂಗಳೊಳಗೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಅದು ಈಡೇರಿಲ್ಲ. ಅದಕ್ಕಾಗಿ ದೆಹಲಿಗೆ ತೆರಳಿ ಸಚಿವರನ್ನು ಭೇಟಿ ಮಾಡಿ ಹಂತವನ್ನು ಪ್ರಶ್ನಿಸುವುದಾಗಿ ಭರವಸೆ ನೀಡಿದ ಸಚಿವ ಖಾದರ್, ದೇರಳಕಟ್ಟೆ -ಇನೋಳಿ ರಸ್ತೆ 7 ಮೀ ಅಗಲವಿದ್ದು, ಇದರಿಂದ ಅನೇಕ ಅಪಘಾತಗಳು…
UN NETWORKS ಉಳ್ಳಾಲ: ನಗರಪ್ರದೇಶದಲ್ಲಿರುವ ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಪ್ರದೇಶಕ್ಕೂ ಮುಟ್ಟಿಸಬೇಕು ಅನ್ನುವ ಉದ್ದೇಶದಿಂದ ಗ್ರಾಮೀಣ ಭಾಗದ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಕಾಂಕ್ರೀಟಿಕರಣಗೊಂಡ ಮದನಿನಗರ ಮುಖ್ಯರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಮುನ್ನೂರು ಪಂಚಾಯಿತಿ ಸದಸ್ಯರುಗಳಾದ ಮಹಮ್ಮದ್ ಇಝಾಝ್ ಮುನ್ನೂರು , ಇಸ್ಮಾಯಿಲ್, ಹಸೈನಾರ್ ಝೊಹರಾ, ಶಮೀನಾ, ರೆಹಮಾನ್ ಕಾಂಗ್ರೆಸ್ ಮುನ್ನೂರು ವಲಯಾಧ್ಯಕ್ಷ ನವೀನ್ ಡಿಸೋಜ, ತಾ.ಪಂ ಸದಸ್ಯೆ ವಿಲ್ಮಾ ಡಿಸೋಜಾ, ತಾ.ಪಂ ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ ಹರೇಕಳ, ಸ್ಥಳೀಯರಾದ ಹನೀಫ್, ಅಝೀಝ್, ನಿಸಾರ್, ಸಮೀರ್ ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಚರ್ಚ್ ಸೇವೆ ನಡೆಸಲು ವಿಶೇಷ ಪ್ರೀತಿ, ಹಿಂದಿನ ಅವಧಿಯಲ್ಲಿ ನಸುಕಿನ ಜಾವ 4 ಗಂಟೆಯ ತನಕ ಇದ್ದು ರಾಣಿಪುರದ ಚರ್ಚಿನಲ್ಲಿ ಕಾಮಗಾರಿ ನಿರ್ವಹಿಸಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಮುನ್ನೂರು ರಾಣಿಪುರ ಚರ್ಚ್ ವಠಾರಕ್ಕೆ ರೂ. 5 ಲಕ್ಷ ಅನುದಾನದಲ್ಲಿ ಇಂಟರ್ಲಾಕ್ ಅಳವಡಿಕೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ತಂದೆ ದಿ.ಯು.ಟಿ ಫರೀದ್ ಅವರ ಅವರ ಅಸೌಖ್ಯದ ಸಮಯದಲ್ಲಿ ಚರ್ಚ್ ಕಾಮಗಾರಿ ನಿಂತುಹೋಗಿತ್ತು. ತದನಂತರ ಶಾಸಕನಾದ ಸಂದರ್ಭ ಅದನ್ನು ಮುಂದುವರಿಸಿದ್ದೆವು. ಇದೀಗ ಗ್ರಾಮೀಣ ಪ್ರದೇಶದ ಸೌಂದರ್ಯೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು, ಅದಕ್ಕಾಗಿ ಚರ್ಚ್ ಆವರಣ ಅಭಿವೃದ್ಧಿಗೊಳಿಸುವ ಸಲುವಾಗಿ ಚರ್ಚಿನವರ ಬೇಡಿಕೆಯಂತೆ ಅಭಿವೃದ್ಧಿ ಕಾಮಗಾರಿಗೆ ರೂ. 5 ಲಕ್ಷ ಬಿಡುಗಡೆ ಮಾಡಲಾಗಿದೆ. ಮತ್ತೆ ಹೆಚ್ಚಿನ ಕಾಮಗಾರಿ ಕೈಗೊಂಡಲ್ಲಿ ಸರಕಾರದಿಂದ ನೆರವು ಕೊಡುವ ಭರವಸೆಯನ್ನು ನೀಡಿದರು. ಈ ವೇಳೆ ರಾಣಿಪುರ ಚರ್ಚ್ ಧರ್ಮಗುರು ಸಂತೋಷ್ ಡಿಸೋಜಾ, ತಾಲೂಕು ಪಂಚಾಯತ್ ಸದಸ್ಯೆ ವಿಲ್ಮಾ ಡಿಸೋಜ ,…
UN NETWORKS ಉಳ್ಳಾಲ: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇದರ ಮಾನ್ಯತೆ ಯುಜಿಸಿ ರದ್ದುಗೊಳಿಸಿ ಎರಡು ವರ್ಷ ಕಳೆದರೂ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರದಲ್ಲಿರಿಸಿರುವ ಕ್ರಮವು ಖಂಡನೀಯ. ಹಾಗಾಗಿ ಶೀಘ್ರವೇ ಮಾನ್ಯತೆ ದೊರಕಿಸಿ ಕೊಡಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಮುಹಮ್ಮದ್ ತಫ್ಸೀರ್ರವರು ಬೆಂಗಳೂರಿನ ಫ಼್ರೀಡಂ ಪಾರ್ಕ್ ನಲ್ಲಿ ನಡೆದ ಸತ್ಯಾಗ್ರಹದಲ್ಲಿ ಆಗ್ರಹಿಸಿದರು.ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಒಂದು ದಿನದ ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ತಜ್ಞ ನಿರಂಜನ್ ಆರಾದ್ಯ, “ಕೆ.ಎಸ್.ಒ.ಯು ಮಾಡಿದ ತಪ್ಪಿಗಾಗಿ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವುದು ಸರಿಯಲ್ಲ. ರಾಜ್ಯ ಸರಕಾರವು ಉನ್ನತ ನಿಯೋಗವನ್ನು ರಚಿಸಿ ಯು.ಜಿ.ಸಿಯ ಮುಂದೆ ಸಮಸ್ಯೆಯನ್ನು ಸವಿವರವಾಗಿ ತಿಳಿಸಬೇಕು. ಕೇಂದ್ರ ಸರಕಾರವು ಶೀಘ್ರದಲ್ಲಿ ಮಾನ್ಯತೆ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಆಗ್ರಹಿಸಿದರು. ಕೆಎಸ್ಒಯು ಒಟ್ಟು ಬೆಳವಣಿಗೆಯ ಬಗ್ಗೆ ಮಾತನಾಡಿದ ರಾಜ್ಯ ಕಾರ್ಯದರ್ಶಿ ಫಯಾಝ್ ದೊಡ್ಡಮನೆ, ತಾಂತ್ರಿಕ ಕೋರ್ಸುಗಳನ್ನು ಕೆ.ಎಸ್.ಒ.ಯು ಆರಂಭಿಸಿರುವುದು ಯು.ಜಿಸಿಗೆ ಮೊದಲೇ ಅರಿವಿದ್ದರು…
UN NETWORKS ಹಾಸನ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಇಂದು ಮುಂಜಾನೆ ಹಾಸನ ತಾಲೂಕಿನ ಶಾಂತಿಗ್ರಾಮದ ಸಮೀಪ ಭೀಕರ ಅಪಘಾತಕ್ಕೀಡಾಗಿ 8 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಐರಾವತ ಬಸ್ ಇದಾಗಿದ್ದು, ಅಪಘಾತದಲ್ಲಿ ಬಸ್ ಚಾಲಕ ಲಕ್ಷ್ಮಣ್ ಮತ್ತು ಕಂಡಕ್ಟರ್ ಶಿವಪ್ಪ ಛಲವಾದಿ, ವಿದ್ಯಾರ್ಥಿನಿ ಡಯಾನ, ಗಂಗಾಧರ್ ಸಹಿತ ಒಟ್ಟು ಎಂಟು ಮಂದಿ ಮೃತಪಟ್ಟಿದ್ದು, 10 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ ಎಂದು ತಿಳಿದುಬಂದಿದೆ. ಪೊಲೀಸ್ ವರಿಷ್ಠರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

