Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಉಚ್ಚಿಲ ಫುಟ್ ಬಾಲ್ ಫ್ಯಾನ್ಸ್ ನೇತೃತ್ವದಲ್ಲಿ ನಡೆಯುವ ಉಚ್ಚಿಲ ಫುಟ್‍ಬಾಲ್ ಲೀಗ್ 2018ರ ಸಮಾರೋಪ ಕಾರ್ಯಕ್ರಮದಲ್ಲಿ ಬ್ರದರ್ಸ್ ಉಚ್ಚಿಲ ಇದರ ಮಾಜಿ ತರಬೇತುದಾರರಾದ ನಾಗೇಶ್ ಉಚ್ಚಿಲ್,ಯುವ ಕ್ರೀಡಾಪಟು ಸಫ್ವಾನ್ ಮತ್ತು ಅನಾನ್ ಅವರನ್ನು ಸನ್ಮಾನಿಸಲಾಯಿತು. ಯು.ಆರ್.ಅಕಾಡೆಮಿ ಆಫ್ ಸೋಕರ್ ಇದರ ಸಂಚಾಲಕ ಉಮೇಶ್ ಉಚ್ಚಿಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆಯಿಂದ ತಂಡ ಶಕ್ತಿ,ಉತ್ತಮ ಆರೋಗ್ಯ,ಮತ್ತು ಶಿಸ್ತನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು. ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಕೋಟೆಕಾರ್,ಮುಹ್ಸಿನ್ ರಹ್ಮಾನ್,ಶಾಬುದ್ದೀನ್,ಝಾಹಿದ್ ಹುಸೈನ್,ಶಾಹುಲ್ ಹಮೀದ್, ಮುಝಪರ್ ಅಹ್ಮದ್, ಅಬ್ಬಾಸ್,ಹಿದಾಯತ್,ನಕೀಬ್,ಇಸ್ಮಾಯಿಲ್ ನಾಗತೋಟ,ಉಚ್ಚಿಲ ಫುಟ್ ಬಾಲ್ ಲೀಗ್ ಇದರ ಸಂಯೋಜಕರಾದ ಆರೀಫ್ ಉಚ್ಚಿಲ್,ಕರೀಮ್ ಉಚ್ಚಿಲ್,ಸಮೀರ್ ಉಚ್ಚಿಲ್,ಸವಾದ್ ಉಚ್ಚಿಲ್ ಉಪಸ್ಥಿತರಿದ್ದರು.ಬಿಬಿ.ಜಿ ಉಚ್ಚಿಲ ಪ್ರಥಮ ಸ್ಥಾನ ಮತ್ತು ಎನ್. ಫ್ಯೂ .ಗೋ .ಎಫ್.ಸಿ ದ್ವಿತೀಯ ಸ್ಥಾನ ಪಡೆಯಿತು.

Read More

UN NETWORKS ಮಂಗಳೂರು : ಕರಾವಳಿಯ ಜನಪದ ಪ್ರತೀಕವಾಗಿರುವ ಯಕ್ಷಗಾನ ಪ್ರದರ್ಶನದ ಪ್ರಸಂಗವೊಂದರಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಲಾಗಿದ್ದು ಅತ್ಯಂತ ಕೀಳಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿದೆ. ಅದರೆ ಸಾಮಾಜಿಕ ಜಾಲತಾಣಗಳಲ್ಲಿ ಯಕ್ಶಗಾನದಲ್ಲಿ ಕೂಡ ಮುಸ್ಲಿಂ ಸಮುದಾಯದ ಬಗ್ಗೆ ಮತ್ತು ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಮುಸ್ಲಿಮರಿಗೆ ಹುಟ್ಟುವ ಮಕ್ಕಳ ಬಗ್ಗೆ ಅವಮಾನಿಸಲಾಗಿದೆ.ಮುಸ್ಲಿಮರಿಗೆ ಹುಟ್ಟುವ ಇಷ್ಟೊಂದು ಮಕ್ಕಳು ನಿಮಗೆ ಹುಟ್ಟಿದ್ದು ಎಂಬ ಗ್ಯಾರಂಟಿ ಇದೆಯೇ ಎಂದು ಅವಹೇಳನ ಮಾಡಿ ಅತೀ ಕೀಳು ಭಾಷೆ ಬಳಸಲಾಗಿದೆ. ಮುಸ್ಲಿಮರು ನೀವು ಎಲ್ಲಿಂದಲೋ ಬಂದವರು ಎಂದು ಉಲ್ಲೇಖಿಸಲಾಗಿದೆ. ಹಿಂದುಗಳ ದಾರ್ಮಿಕ ಕಾರ್ಯಕ್ರಮದಲ್ಲಿ ಕೂಡ ಕೋಮುಪ್ರಚೋದನೆ ಮಾಡಿದ ವಿರುದ್ದ ಮುಸ್ಲಿಂ ಸಮುದಾಯ ಸಂಘಟನೆಗಳು ಗಮನಿಸಬೇಕು .ಇದರ ವಿರುದ್ದ ಕೇಸು ದಾಖಲಿಸಬೇಕು. ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಇನ್ನೊಂದು ಧರ್ಮವನ್ನು ಅವಮಾನಿಸುತ್ತಿರುವುದು.ಹಿಂದು ಧರ್ಮಕ್ಕೆ ಶೋಭೆ ತರುವಂತದಲ್ಲ.ಇಂತಹ ಅವಿವೇಕಿ ಯಕ್ಷಗಾನದ ಆಟವನ್ನು ಕೊನೆಗೊಳಿಸಿ ಇಲ್ಲದಿದ್ದರೆ ಇಂತಹ ಪಾತ್ರದಾರಿಗಳು ಬೀದಿಯಲ್ಲಿ ಹೆಣವಾಗುದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಲ್ಲಾದಕ್ಕೂ ಒಂದು ಮಿತಿ ಎಂಬುವುದು ಇದೆ ನೆನಪಿರಲಿ ಮುಸ್ಲಿಮರು…

Read More

UN NETWORKS ಉಳ್ಳಾಲ: ನಾಟೆಕಲ್‍ನಲ್ಲಿ ಮಸೀದಿ, ಅಂಗಡಿಗಳಿಗೆ ದಾಂಧಲೆ ನಡೆಸಿ ಗಲಭೆಗೆ ಪ್ರಚೋದಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಹಿಂದಿರುವ ಶಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಾಟೆಕಲ್ ವರ್ತಕರ ಸಂಘ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿತು. ಜ.7 ರಂದು ರಕ್ಷೀದಿ ಮಸೀದಿಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಉಸ್ತಾದರನ್ನು ಹುಡುಕಿ ಸಿಗದೇ ಇದ್ದಾಗ ಮಸೀದಿಯ ಪೀಠೋಪಕರಣಗಳನ್ನು ಹಾನಿಗೈದಿದ್ದರು. ಇದೇ ವೇಳೆ ನಾಟೆಕಲ್ ಪರಿಸರದಲ್ಲಿರುವ ಮೂರು ಅಂಗಡಿಗಳ ಸೊತ್ತುಗಳಿಗೂ ಹಾನಿ ನಡೆಸಿದ್ದರು. ಇದಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಇವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಇವರ ಹಿಂದಿರುವ ಶಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ವೇಳೆ ನಾಟೆಕಲ್ ವರ್ತಕರ ಸಂಘದ ಅಧ್ಯಕ್ಷ ಹನೀಫ್, ಉಪಾಧ್ಯಕ್ಷ ಅನಂದ್. ಕಾರ್ಯದರ್ಶಿ ಇಮ್ರಾನ್, ಜೊತೆ ಕಾರ್ಯದರ್ಶಿ ಕೆ ಮೊಹಮ್ಮದ್. ಮಾಧ್ಯಮ ಸಲಹೆಗಾರ ಅಬ್ಬಾಸ್ ಕಿನ್ಯ, ಸದಸ್ಯರಾದ ಇಬ್ರಾಹಿಂ ಸಾಧಿಕ್, ಎ.ಎಸ್ ಮೊಹಮ್ಮದ್,…

Read More

UN NETWORKS ಕೊಣಾಜೆ: ಶ್ರೀ ನಾಗಬ್ರಹ್ಮ ಭಜನಾ ಮಂಡಳಿ(ರಿ) ಪಟ್ಟೋರಿ, ಕೊಣಾಜೆ ಇದರ ಆಶ್ರಯದಲ್ಲಿ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಬಡಾಜೆಬೀಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರ ಮಾರ್ಗದರ್ಶನದಲ್ಲಿ ಫೆ.3ರಿಂದ 10ರವರೆಗೆ ನಡೆಯಲಿರುವ ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬುಧವಾರ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಖಂಡ ಭಜನಾ ಸಮಿತಿಯ ಅಧ್ಯಕ್ಷರಾದ ರಘುರಾಮ ಕಾಜವ ಅವರು, ಪಟ್ಟೋರಿಯ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನವು ಪುರಾತನವಾದ ದೈವಸ್ಥಾನವಾಗಿದ್ದು, ಕಳೆದ ಹಲವಾರು ವರ್ಷದಿಂದ ಇಲ್ಲಿ ಭಜನಾ ಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಾಗೆಯೇ ಈ ಭಾರಿ ಅಖಂಡ ಭಜನಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದ್ದು ಈ ಪುಣ್ಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಪ್ರತಿಯೊಬ್ಬರ ಸಹಕಾರವೂ ಅತ್ಯಗತ್ಯವಾಗಿದ್ದು ಭಕ್ತಿಪೂರ್ವಕವಾಗಿ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳೋಣ ಎಂದರು. ಕಾರ್ಯಾಧ್ಯಕ್ಷರಾದ ಕರುಣಾಕರ ಕಾನ ಅವರು ಮಾತನಾಡಿ ಈಗಾಗಲೇ ಅಖಂಡ ಭಜನಾ ಸಪ್ತಾಹದ ಅಂಗವಾಗಿ ವಿವಿದ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೆ ಈ ಭಜನಾ ಸಪ್ತಾಹಕ್ಕೆ ವಿವಿದ ಕಡೆಯ ಭಜನಾ ಮಂಡಳಿಗಳು ಕೂಡಾ ಸಹಕಾರವನ್ನು…

Read More

UN NETWORKS ಉಳ್ಳಾಲ: ದೀಪಕ್ ರಾವ್ ಮೃತದೇಹವಿದ್ದ ವಾಹನದ ಮೇಲೆ ನಿಂತು ಭಾಷಣ ಮಾಡುವವರು ಹೆಣದ ಮೇಲೆ ರಾಜಕೀಯ ನಡೆಸುತ್ತಿರುವುದು ಸ್ಪಷ್ಟವಾಗಿದ್ದು, ಮಾನವೀಯತೆಯನ್ನು ಕೊಲ್ಲುವ ಕೆಲಸ ಜಿಲ್ಲೆಯಲ್ಲಿ ಆಗುತ್ತಿದ್ದು, ಇದನ್ನು ಗಟ್ಟಿಗೊಳಿಸುವ ಪ್ರಯತ್ನ ಜನತೆಯಿಂದ ಆಗಬೇಕಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹೇಳಿದ್ದಾರೆ. ಅವರು ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ವತಿಯಿಂದ ದೀಪಕ ರಾವ್ ಮತ್ತು ಬಶೀರ್ ಅವರ ಗೌರವಾರ್ಥ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಡೆದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ದೀಪಕ್ ರಾಜ್ ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ರಾಜಕೀಯ ಮಾಡಲು ಹೊರಟವರು , ದೀಪಕ್ ಮೃತದೇಹ ಹೊರುತ್ತಿದ್ದ ಆಂಬ್ಯುಲೆನ್ಸ್ ಮೇಲೆ ನಿಂತೇ ಭಾಷಣ ಬಿಗಿಯಲು ಆರಂಭಿಸಿದ್ದರು. ಇದರಿಂದ ಹೆಣದ ಮೇಲೆ ನಿಂತು ರಾಜಕೀಯ ನಡೆಸುವವರ ಮನೋಭಾವ ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಕೋಮುವಾದ ಮತೀಯವಾದದ ಹೆಸರಿನಲ್ಲಿ ದಾಳಿ ದಬ್ಬಾಳಿಕೆಗಳು ನಿರಂತರವಾಗಿ ನಡೆದು ಜಿಲ್ಲೆಯ ಹೆಸರನ್ನು ಹಾಳು ಮಾಡುತ್ತಿದೆ. ಧರ್ಮಗಳ ನಡುವಿನ ಸಂಬಂಧಗಳಿಗೆ ಹುಳಿ ಹಿಂಡಿ , ಅಧಿಕಾರದ ಖುರ್ಚಿಗೆ ಅಮಾಯಕರ…

Read More

UN NETWORKS ಕೊಣಾಜೆ:ಜಾತಿ ಧರ್ಮಗಳ ನಡುವೆ ಹೊಡೆದಾಟ ಕೊಲೆಯಂತಹ ಕೃತ್ಯಗಳು ಒಂದಡೆಯಾದರೆ. ಇನ್ನೊಂದೆಡೆ ಸಾಮರಸ್ಯ ಸ್ಥಾಪಿಸುವಂತಹ ಕಾರ್ಯಗಳು ನಡೆಯುತ್ತಾ ಇರುತ್ತದೆ. ಇಲ್ಲೊಂದು ಪ್ರದೇಶದಲ್ಲಿ ಶಬರಿಮಲೆ ಯಾತ್ರೆಗೆ ತೆರಳುವ ಮುನ್ನ ಮಸೀದಿಗೆ ಸೌಹಾರ್ಧಯುತ ಭೇಟಿಯನ್ನು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುವ ಕಾರ್ಯ ನಡೆಸುತ್ತಾ ಬಂದಿದೆ. ಕೊಣಾಜೆ ಸಮೀಪದ ಶಾರದಾನಗರದ ಸಪ್ತಸ್ವರ ಕಲಾತಂಡದ ಅಯ್ಯಪ್ಪ ವೃತಧಾರಿಗಳು ಸಾಮರಸ್ಯಕ್ಕಾಗಿ ಮಸೀದಿಗೆ ಸೌಹಾರ್ದ ಭೇಟಿಯನ್ನು ನಡೆಸಿಕೊಂಡು ಬರುವ ಯಾತ್ರಾರ್ಥಿಗಳಾಗಿದ್ದು, ಕಳೆದ ಹಲವು ವರ್ಷಗಳಿಂದ ಕೋಡಿಜಾಲ್‍ನ ರಿಫಾಯಿಯ ಜುಮಾ ಮಸೀದಿಗೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಿ ಸಿಹಿ ಹಂಚುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ವರ್ಷವೂ ಮಸೀದಿಗೆ ಬುಧವಾರ ಭೇಟಿ ನೀಡಿದ ಭಕ್ತಾಧಿಗಳ ತಂಡ ಮಸೀದಿಯ ಮದರಸದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿದರು. ಈ ಸಂದರ್ಭದಲ್ಲಿ ಗುರುಸ್ವಾಮಿ ರಾಮಚಂದ್ರ ಗಟ್ಟಿ ಮೇಲಿನತೋಟ, ಚಿತ್ತರಂಜನ್, ಅನೂಪ್, ಶರತ್ ನೇತೃತ್ವದ ಅಯ್ಯಪ್ಪ ಮಾಲಾಧಾರಿಗಳನ್ನು ಮಸೀದಿಯ ಖತೀಬರಾದ ಅಬೂಬಕ್ಕಾರ್ ಸಖಾಫಿ, ಪ್ರ. ಕಾರ್ಯದರ್ಶಿ ಅಬೂಬಕ್ಕಾರ್ ಕೋಡಿಜಾಲ್, ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್ ಬರಮಾಡಿಕೊಂಡರು.

Read More

UN NETWORKS ಉಳ್ಳಾಲ: ಬೆಳ್ಮ ಗ್ರಾಮದ ದೇರಳಕಟ್ಟೆಯ ರೆಂಜಾಡಿ ಮಖಾಂ ಉರೂಸ್ ಪ್ರಯುಕ್ತ 7ದಿವಸಗಳ ಮತ ಪ್ರವಚನ ಜನವರಿ 28ರಿಂದ ಫೆಬ್ರವರಿ4ರ ತನಕ ಬೆಳ್ಮ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ. ಜ,28ರಂದು ಪೇರೋಡು ಮುಹಮ್ಮದ್ ಅಝ್ಝರಿ,ಜ,29ರಂದು ಪಿ.ಎಂ ಅನ್ಸಾರ್ ಫೈಝಿ ಬುರ್ ಹಾರಿ, ಜ,30ರಂದು ಶಾಕೀರ್ ಬಾಖವಿ ಮಂಬಾಡ್,ಜ,31ರಂದು ಮುಹಮ್ಮದ್ ಅಶ್ರಫ್ ರಹ್ಮಾನಿ ಚೌಕಿ ಕಾಸರಗೋಡು, ಫೆಬ್ರವರಿ 1ರಂದು ಬಿ.ಎಂ ರಶೀದ್ ಸ ಅದಿ ಬೋಳಿಯಾರ್,ಫೆ 2ರಂದು ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಫೆ, 3ರಂದು ಬಿ.ಎಚ್ ಅಬೂಸ್ವಾಲಿಹ್ ಉಸ್ತಾದ್ ಮತ್ತು ಎನ್.ಎಚ್ ಅದಂ ಫೈಝಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಫೆ.4ರಂದು ಸಮಾರೋಪ ಸಮಾರಂಭ ಅಸರ್ ನಮಾಝಿನ ಬಳಿಕ ಕೂಟು ಝಿಯಾರತ್ ಕೆ.ಪಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ನೇತ್ರತ್ವ‌ದಲ್ಲಿ ಮುಹಮ್ಮದ್ ಶರೀಫ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಂಜೆ 5ಗಂಟೆಗೆ ಸೌಹಾರ್ದ ಸಂಗಮ, ಇಶಾ ನಮಾಝಿನ ಬಳಿಕ ಸ್ವಲಾತ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ಹೈ ದ್ರೋಸ್ ತಂಞಳ್ ಕಿಲ್ಲೂರು…

Read More

UN NETWORKS ಮಂಗಳೂರು: ಕಡಲತೀರ ಕರಾವಳಿ ಕೋಮುದಳ್ಳುರಿಗೆ ಸಿಲುಕಿ ನಲುಗಿ ಹೋಗಿವೆ.ಒಂದು ಕಾಲದಲ್ಲಿ ಬುದ್ದಿವಂತರ ಜಿಲ್ಲೆ,ಶಾಂತಿಪ್ರಿಯ ಜಿಲ್ಲೆ ಎಂದು ಕರೆಯಲ್ಪಡುತ್ತಿದ್ದ ದಕ್ಷಿಣ ಕನ್ನಡ ಅಶಾಂತಿಯ ಬೀಡಾಗಿದೆ.ಕರಾವಳಿಯಲ್ಲಿ ಭಯದ ವಾತಾವರಣ ನಿರ್ಮಾಣಗೊಂಡು ಪದೇ ಪದೇ ಶಾಂತಿ ಕದಡುವ ಕೆಲಸ ನಡೆಯುತ್ತಲೇ ಇದೆ.ಕಾರಣವಿಲ್ಲದ ತಪ್ಪಿಗೆ ಕೋಮುಖ ವ್ಯಾಘ್ರಗಳ ಹಟ್ಟಹಾಸಕ್ಕೇ ಅಮಾಯಕರ ಜೀವಗಳು ಬೀಳುತ್ತಲೇ ಇವೆ.ಕರಾವಳಿಯ ಕಣ್ಣೀರಿಗೆ ಕಾರಣರು ಯಾರು ಎಂಬ ಪ್ರಶ್ನೆ ಮೂಡಿದಾಗ ಅದಕ್ಕೆ ಸರಿಯಾದ ಉತ್ತರವೇ ಸಿಗದಂತಾಗಿದೆ. ಮೇಲ್ನೋಟಕ್ಕೆ ಬಂಟಿಗ್ಸ್ ವಿವಾದಕ್ಕಾಗಿ ದೀಪಕ್ ರಾವ್ ನನ್ನ ಕೊಲೆ ನಡೆದಿದೆ ಎನ್ನಲಾಗುತ್ತಿದೆ.ಕೊಲೆಮಾಡಿದವರು ಕೆಲವ ಮುಸ್ಲಿಂ ಹೆಸರನ್ನು ಹೊಂದಿರುವ ಮುಸ್ಲಿಂ ನಾಮದಾರಿಗಳು.ಅದೇ ಕಾರಣಕ್ಕಾಗಿ ಅದೇ ದಿನ ರಾತ್ರಿ ಅಮಾಯಕ ಬಷೀರ್ ಮೇಲೆ ನಾಲ್ವರು ಹಿಂದೂ ಮಂತಾಂದರು ಅತ್ಯಂತ ಕ್ರೋರವಾಗಿ ಹಲ್ಲೆ ನಡೆಸುತ್ತಾರೆ.ಅಲ್ಲೆಗೊಳಗಾದ ಬಷೀರ್ ರಕ್ತದ ಮುಡುವಿನಲ್ಲಿ ಬಿದ್ದು ಹೊದ್ದಾಡುತಿದ್ದ ಸಮಯದಲ್ಲಿ ರೋಹಿತ್ ಹಾಗೂ ಶೇಖರ್ ಎಂಬ ಹಿಂದೂ ಯುವಕರು ಬಷೀರ್ ನನ್ನ ಸಮೀಪದ ಆಸ್ಪತ್ರೆಗೆ ಸೇರಿಸುತ್ತಾರೆ. ದೀಪಕ್ ರಾವ್ ತನ್ನ ಜೀವನಕ್ಕಾಗಿ ಮಜೀದ್ ಎಂಬ ಮುಸ್ಲಿಂ…

Read More

UN NETWORKS ಉಳ್ಳಾಲ: ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಕೊಟ್ಟಾರಚೌಕಿಯಲ್ಲಿ ಆಕಾಶಭವನನಿವಾಸಿ ಬಶೀರ್ ಹತ್ಯೆ ನಡೆಸಿದ ಹಂತಕರು ಕೃತ್ಯ ಬಳಿಕ ಎಸೆದ ಮೊಬೈಲ್ ಮತ್ತು ಮಾರಕಾಸ್ತ್ರಗಳನ್ನು ನೇತ್ರಾವತಿ ಸೇತುವೆಯಿಂದ ನದಿಗೆ ಎಸೆದಿದ್ದು, ಈ ಕುರಿತ ಮಹಜರು ಎಸಿಪಿ ವೆಲಂಟೈನ್ ನೇತೃತ್ವದ ಪೊಲೀಸರ ತಂಡದಿಂದ ಬುಧವಾರ ನಡೆಯಿತು. ಸಂದೇಶ್, ಧನುಷ್, ಸೃಜಿತ್ ಮತ್ತು ಕಿಶನ್ ಎಂಬವರನ್ನು ಪ್ರಕರಣ ಸಂಬಂಧ ಬಂಧಿಸಲಾಗಿತ್ತು. ನಾಲ್ವರು ಬಶೀರ್ ಅವರನ್ನು ಕೊಟ್ಟಾರಚೌಕಿ ಬಳಿ, ಫಾಸ್ಟ್ ಫುಡ್ ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುವ ಸಂದರ್ಭ ತಡೆದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕಡಿದು ಕೊಲೆಗೆ ಯತ್ನಿಸಿದ್ದರು. ನಾಲ್ಕು ದಿನಗಳ ಬಳಿಕ ಎ.ಜೆ. ಆಸ್ಪತ್ರೆಯಲ್ಲಿ ಬಶೀರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಹತ್ಯೆಗೆ ಉಪಯೋಗಿಸಿದ ಮಾರಕಾಸ್ತ್ರ, ಮೊಬೈಲುಗಳನ್ನು ನಾಲ್ವರು ಆರೋಪಿಗಳು ನೇತ್ರಾವತಿ ಸೇತುವೆಯಿಂದ ನದಿಗೆ ಎಸೆದು ಕೇರಳದ ಮಂಜೇಶ್ವರ ಕಡೆಗೆ ಪರಾರಿಯಾಗಿದ್ದರು. ಬಂಧಿತರ ವಿಚಾರಣೆ ಕೈಗೊಂಡಾಗ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ತಣ್ಣೀರುಬಾವಿ ಮುಳುಗುತಜ್ಞರನ್ನು ಉಪಯೋಗಿಸಿಕೊಂಡು ಮಾರಕಾಸ್ತ್ರ ಮತ್ತು ಮೊಬೈಲಿಗೆ ಎಸಿಪಿ ನೇತೃತ್ವದ ಪೊಲೀಸರ…

Read More

UN NETWORKS ಬಂಟ್ವಾಳ : ಎಸ್.ಕೆ.ಎಸ್.ಎಸ್.ಎಫ್ ಕ್ಯಾಂಪಸ್ ವಿಂಗ್ ಕೇಂದ್ರ ಸಮಿತಿ ವತಿಯಿಂದ ಜನವರಿ 11 ರಿಂದ 19 ರ ವರೆಗೆ ನಡೆಯಲಿರುವ ಕ್ಯಾಂಪಸ್ ಯಾತ್ರೆಯ ಭಾಗವಾಗಿ ಸಮಸ್ತ ಕೇರಳ ಜಂಇಯತುಲ್ ಉಲಮಾದ ಅಧ್ಯಕ್ಷರಾದ ಸೈಯದ್ ಜಿಫ್ರಿ ಮುತ್ತುಕೋಯ ತಂಙಳ್ ಪತಾಕೆಯನ್ನು ಕ್ಯಾಂಪಸ್ ವಿಂಗ್ ಪದಾಧಿಕಾರಿಗಳಿಗೆ ನೀಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ಯಾಂಪಸ್ ವಿಂಗ್ ಕೇಂದ್ರ ಸಮಿತಿಯ ಕೊ-ಆರ್ಡಿನೇಟರ್ ಶಬಿನ್ ಮುಹಮ್ಮದ್, ಅಧ್ಯಕ್ಷ ಇಸ್ಹಾಕ್ ತ್ರಿಶ್ಶುರ್, ಉಪಾಧ್ಯಕ್ಷ ಬದ್ರುದ್ದೀನ್ ಕುಕ್ಕಾಜೆ, ದ.ಕ ಜಿಲ್ಲಾ ಕನ್ವಿನರ್ ಜೌಹರ್ ಕುಕ್ಕಾಜೆ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More