Author: UllalaVani

Kannada News From Coastal Karnataka

UN NETWORKS ತೊಕ್ಕೊಟ್ಟು: ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ರಸ್ತೆ ಅವ್ಯವಸ್ಥೆಯಿಂದ ಕಳೆದ ಕೆಲವು ದಿನಗಳಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದು ಬುಧವಾರವೂ ಸಂಚಾರದಲ್ಲಿ ವ್ಯತ್ಯ ಕಂಡು ಬಂತು. ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟು ಜಂಕ್ಷನ್‍ವರೆಗೆ ವಾಹನಗಳು ಸರತಿಯಲ್ಲಿ ಸಾಗಿದವು.

Read More

UN NETWORKS ಕೊಣಾಜೆ: ಯುವವಾಹಿನಿ ಕೊಲ್ಯ ಘಟಕ ಇದರ ವತಿಯಿಂದ ಅಭಯ ಆಶ್ರಮದ ಸದಸ್ಯರೊಂದಿಗೆ ಕುಟುಂಬ ಮಿಲನ ಕಾರ್ಯಕ್ರಮ ಕೊಣಾಜೆ ಅಸೈಗೋಳಿಯಲ್ಲಿರುವ ಅಭಯ ಆಶ್ರಮದಲ್ಲಿ ನಡೆಯಿತು. ಆಶ್ರಮದ ಮಕ್ಕಳಿಗೆ ಹಾಗೂ ಹಿರಿಯರಿಗೆ ವಿವಿಧ ಸ್ಪರ್ಧೆ ಹಾಗೂ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇದರ ಕಲಾವಿದರಿಂದ ಮನೊರಂಜನಾ ಕಾರ್ಯಕ್ರಮ, ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಘಟಕದ ಸದಸ್ಯ ದಂಪತಿಗಳಿಗೆ ಆಶ್ರಮದ ಹಿರಿಯರಿಂದ ಶುಭಹಾರೈಕೆ,ಆಶ್ರಮದ ಸದಸ್ಯರೊಂದಿಗೆ ಸಹಭೋಜನ ಹಾಗೂ ಕಾರ್ಯಕ್ರಮದ ಸವಿನೆನಪಿಗೆ ಆಶ್ರಮದ ವಠಾರದಲ್ಲಿ ಘಟಕದ ಸದಸ್ಯರು ಗಿಡ ನೆಡುವುದರೊಂದಿಗೆ ಮುಕ್ತಾಯಗೊಂಡಿತು. ಕುಟುಂಬ ಮಿಲನ ಕಾರ್ಯಕ್ರಮಕ್ಕೆ ಅಭಯ ಆಶ್ರಯದ ಸಂಚಾಲಕ ಶ್ರೀನಾಥ್ ಹೆಗ್ಡೆ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಅರೆಹೊಳೆ ಪ್ರತಿಷ್ಠಾನದ ರಂಗಸಂಚಾಲಕ ಜಯದೇವ್ ಕೊಲ್ಯ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ನಮಿತಾ ಶ್ಯಾಂ, ಬೆಂಗಳೂರು ಬಿಲ್ಲವ ಅಸೋಸಿಯೇಷನ್‍ನ ಸ್ಥಾಪಕ ಸದಸ್ಯ ವೆಂಕಟೇಶ್ ಟಿ., ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಬಂಟ್ವಾಳ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾಜೀವ ಪೂಜಾರಿ, ನಿಕಟಪೂರ್ವ ಅಧ್ಯಕ್ಷ…

Read More

UN NETWORKS ಉಳ್ಳಾಲ: ಇಸ್ಲಾಂ ಧರ್ಮ ನೆಲೆ ನಿಲ್ಲಬೇಕಾದರೆ ಧಾರ್ಮಿಕ ಶಿಕ್ಷಣ ನಿರಂತರ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ತಾಜುಲ್ ಉಲಮಾ ಆರಂಭಿಸಿದ್ದ ಶರೀಅತ್ ಕಾಲೇಜು ಕೆಲವು ಸಮಯ ಬಳಿಕ ಮತ್ತೆ ಆರಂಭಿಸುವಲ್ಲಿ ದರ್ಗಾ ಸಮಿತಿ ಮುತುವರ್ಜಿ ವಹಿಸಿರುವುದು ಉತ್ತಮ ಬೆಳವಣಿಗೆ ಎಂದು ಕರ್ನಾಟಕ ಸಮಸ್ತ ಮುಶಾವರ ಆಧ್ಯಕ್ಷ ಝೈನುಲ್ ಅಬಿದೀನ್ ತಂಙಳ್ ಕುನ್ನುಂಗೈ ಹೇಳಿದರು.ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ಅಧೀನದಲ್ಲಿ ಸಯ್ಯಿದ್ ಮದನಿ ಅರೆಬಿಕ್ (ಶರೀಅತ್) ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳು ಧಾರ್ಮಿಕ ನೆಲೆಯಲ್ಲಿ ಮುನ್ನಡೆಯಬೇಕು ಎನ್ನುವ ನೆಲೆಯಲ್ಲಿ ವಿದ್ಯಾಭ್ಯಾಸ ಬೋರ್ಡ್ ಸ್ಥಾಪಿಸಿ ಮದರಾಗಳ ಮೂಲಕ ಎಳೆ ಮಕ್ಕಳಿಗೆ ನೀಡುತ್ತಾ ಇದೀಗ ಕಂಪ್ಯೂಟರ್ ಸಹಿತ ಲೌಕಿಕ ಶಿಕ್ಷಣವನ್ನೂ ನೀಡಲಾಗುತ್ತಿದೆ ಎಂದರು.ಹತ್ತು ಹದಿನೈದು ಅರೆಬಿಕ್ ಕಾಲೇಜಿನಲ್ಲಿ ಕಲಿತರೂ ಇತರ ಉದ್ಯೋಗ ಮಾಡುವ ಬದಲಯ ಧಾರ್ಮಿಕ ಸೇವೆ ಸಲ್ಲಿಸುವುದು ಮುಖ್ಯ, ಕಲಿಕೆ ಸಂದರ್ಭ, ನಂತರವೂ ತಮಗೆ ವಿದ್ಯೆ ನೀಡಿದ ಗುರುಗಳನ್ನು ನೆನೆಯುವುದು, ಅವರ ಆಶೀರ್ವಾದ ಹೊಂದಿರುವುದು ಅಗತ್ಯ ಎಂದು…

Read More

UN NETWORKS ಉಳ್ಳಾಲ: ಬೆಳ್ಮ ಗ್ರಾಮದಲ್ಲಿ ಅಭಿವೃದ್ಧಿಯಾಗುತ್ತಿದ್ದರೂ ಮಾದಕ ವ್ಯಸನಿಗಳ ಕಾಟವೂ ಹೆಚ್ಚಾಗುತ್ತಿದೆ. ಒಳಪ್ರದೇಶಗಳಲ್ಲಿ ಗುಂಪುಗೂಡಿ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದರಿಂದ ಮಹಿಳೆಯರಿಗೆ, ಮಕ್ಕಳಿಗೆ ನಡೆದಾಡಲು ಕಷ್ಟವಾಗುತ್ತಿದೆ ಎಂದು ಬೆಳ್ಮ ಗ್ರಾಮಸ್ಥರೋರ್ವರು ಆರೋಪಿಸಿದರು. ಬೆಳ್ಮ ಗ್ರಾಮ ಪಂಚಾಯಿತಿನ 2018-19 ನೇ ಸಾಲಿನ ದೇರಳಕಟ್ಟೆಯ ಬೆಳ್ಮ ಗ್ರಾಮಪಂಚಾಯಿತಿ ವಠಾರದಲ್ಲಿ ಜರಗಿದ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೆಳ್ಮ ಗ್ರಾ.ಪಂ. ನ ಒಳಪ್ರದೇಶಗಳ ರಸ್ತೆಗಳಲ್ಲಿ ಅಕ್ರಮ ಕೂಟ ಸೇರಿ ಮಾದಕ ದ್ರವ್ಯ ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಗ್ರಾಮದ ಅಭಿವೃದ್ಧಿಗೆ ಮಾರಕವಾಗುವಂತಹ ವಿಚಾರ. ಪಂ. ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಗ್ರಾಮದಲ್ಲಿ ಕಡಿವಾಣ ಹಾಕುವಂತೆ ಮುತುವರ್ಜಿ ವಹಿಸಬೇಕು ಎಂದು ಒತ್ತಾಯಿಸಿದರು. ಉತ್ತರಿಸಿದ ಕೊಣಾಜೆ ಪೊಲೀಸ್ ಠಾಣಾ ಸಿಬ್ಬಂದಿ ಭಾಸ್ಕರ್ ಇವರು ಗ್ರಾಮಸ್ಥರು ಮಾಹಿತಿ ನೀಡಿದಲ್ಲಿ ಕೂಡಲೇ ತಪ್ಪಿತಸ್ಥರನ್ನು ಹಿಡಿಯಲು ಸಹಕಾರವಾಗುತ್ತದೆ. ಈ ಹಿಂದೆ ರೆಂಜಾಡಿ, ಬೆಳ್ಮ ಭಾಗದಲ್ಲಿ ಗಾಂಜಾ ಸೇವನೆ ನಡೆಸುತ್ತಿದ್ದವರನ್ನು ಬಂಧಿಸಲಾಗಿತ್ತು. ವಿಪರ್ಯಾಸವೆಂದರೆ ಕಾನೂನಿನಡಿ ಸಣ್ಣ…

Read More

UN NETWORKS ಮಂಗಳೂರು : ಪ್ರಾಮಾಣಿಕತೆ, ದಕ್ಷತೆ, ಮತ್ತು ಸಾಮಾಜಿಕ ಚಿಂತನೆಯ ಹಿರಿಯ ಮುತ್ಸದ್ಧಿ, ಮಾಜೀ ಸಚಿವ ಬಿ.ಎ.ಮೊಯ್ದಿನ್ ರ ನಿಧನ ಅಕಾಲಿಕ . ಅಭಿವೃದ್ಧಿ ಪರ ದೂರದೃಷ್ಠಿಯುಳ್ಳ ಅವರ ಮಾರ್ಗದರ್ಶನ ಸಾರ್ವಲಿಕ ಮೌಲ್ಯದಿಂದ ಕೂಡಿತ್ತು ಎಂದು ದ.ಕ.ಜಿಲ್ಲಾ ಕಾಂಗ್ರೇಸ್ ವಕ್ತಾರರಾದ  ಫಾರೂಕ್ ಉಳ್ಳಾಲ್ ವಿಶ್ಲೇಷಿಸಿದ್ದಾರೆ. ಬಿ.ಎ. ಮೊಯ್ದಿನ್ ಸಾಹೇಬರ ಅಗಲಿಕೆ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಿಗೆ ಅಪಾರ ನಷ್ಟವನ್ನುಂಟು ಮಾಡಿವೆ. ಮಾನವೀಯತೆ ಪ್ರಬಲ ಪ್ರತಿಪಾದಕರಾಗಿದ್ದ ಮೊಯ್ದಿನ್ ಸ್ನೇಹ ಜೀವಿಯಾಗಿದ್ದರು, ಕಿರಿಯರಿಗೆ ಸ್ಪೂರ್ತಿಯನ್ನು ತುಂಬುತ್ತಿದ್ದ ಮೊಯ್ದಿನ್ ರಾಜ್ಯಾದ್ಯಂತ ಜಾತ್ಯಾತೀತ ಮನುಸ್ಸುಳ್ಳ ಲಕ್ಷಾಂತರ ಜನರ ಪ್ರೀತಿಗೆ ಪಾತ್ರರಾದವರು. ರಾಜಕೀಯದಲ್ಲಿದ್ದರೂ ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದವರೊಂದಿಗೆ ನಿಕಟ ಸ್ನೇಹವನ್ನಿಟ್ಟು ಕೊಂಡವರು. ಅವರ ಶಿಷ್ಯಂದಿರು ಮತ್ತು ಬೆಂಬಲಿಗರ ಪಾಲಿಗೆ,ಅನುಭವ-ಆದರ್ಶಗಳ ಮಹಾ ಸಾಗರದಂತಿದ್ದ ಬಿ.ಎ.ಮೊಯ್ದಿನ್, ಮಾನವೀಯತೆ ಪ್ರಬಲ ಪ್ರತಿಪಾದಕರಾಗಿದ್ದರು. ಅವರ ಪಾರಮಾರ್ಥಿಕ ಬದುಕು ದೇವ ಸಂಪ್ರೀತಿಯನ್ನು ಗಳಿಸುವಂತಾಗಲಿ. ಅವರ ವಿದಾಯವನ್ನು ಸಹಿಸುವ ಶಕ್ತಿಯನ್ನೂಅವರ ಕುಟುಂಬ ವರ್ಗಕ್ಕೆ ದೇವರು ಅನುಗ್ರಹಿಸಲಿ ಎಂದೂ ಫಾರೂಕ್ ಉಳ್ಳಾಲ್ ಸಂತಾಪ ವ್ಯಕ್ತ…

Read More

UN NETWORKS ಉಳ್ಳಾಲ: ಭ್ರಷ್ಟಾಚಾರದಿಂದ ಬಡವರು ಮತ್ತು ಶ್ರೀಮಂತರ ನಡುವೆ ಅಂತರ ಹೆಚ್ಚಿದ್ದು, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗಿದೆ. ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಹಾಗೆಯೇ ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ ಸದಾ ಎಚ್ಚರದಿಂದ ಇರಬೇಕು ಎಂದು ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕೆ.ಎಸ್‌. ಹೆಗ್ಡೆ ಆಡಿಟೋರಿಯಂನಲ್ಲಿ ಸೋಮವಾರ ನಡೆದ ಎ.ಬಿ. ಶೆಟ್ಟಿ ದಂತ ವಿಜ್ಞಾನ ಮಹಾವಿದ್ಯಾಲಯದ ಸ್ಥಾಪಕ ಡೀನ್‌ ಪ್ರೊ| ಡಾ| ಎನ್‌. ಶ್ರೀಧರ್‌ ಶೆಟ್ಟಿ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಡಾ| ಎನ್‌. ಶ್ರೀಧರ್‌ ಶೆಟ್ಟಿ ದತ್ತಿ ಉಪನ್ಯಾಸದಲ್ಲಿ “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಆಡಳಿತ ಹಾಗೂ ಪ್ರಜೆಗಳ ಹಕ್ಕು’ ವಿಷಯದಲ್ಲಿ ಮಾತನಾಡಿದರು. 85ರ ದಶಕದಲ್ಲೇ ಸರಕಾರದ ಯೋಜನೆಗಳಲ್ಲಿ ಶೇ. 15 ಮಾತ್ರ ಜನರಿಗೆ ತಲುಪುತ್ತಿತ್ತು ಎನ್ನುವ ಸತ್ಯವನ್ನು ಅಂದಿನ ಅಧಿಕಾರ ನಡೆಸುತ್ತಿದ್ದವರು ಒಪ್ಪುತ್ತಿದ್ದರು. ಇಂದಿಗೂ ಸ್ಥಿತಿ…

Read More

UN NETWORKS ಉಳ್ಳಾಲ: ಕಲ್ಲೂರು ಎಜುಕೇಶನ್ ಟ್ರಸ್ಟ್ (ರಿ) ಕಾರವಾರ, ಶ್ರೀ ಸಾಯಿ ಸೇವಾ ಪ್ರತಿಷ್ಠಾನ (ರಿ) ದೈಗೋಳಿ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ವೆನ್ ಲಾಕ್ ಆಸ್ಪತ್ರೆ ಕೆ.ಎಂ.ಸಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವು ದೈಗೋಳಿಯ ಸಾಯಿನಿಕೇತನ ಅಶ್ರಮದಲ್ಲಿ ನಡೆಯಿತು. ಕೊಡ್ಲಮೊಗರು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ತಿರುಮಲೇಶ್ವರ ಭಟ್ ಸಭಾ ಕಾರ್ಯಕ್ರಮವನ್ನು ದ್ವೀಪ ‌ಬೆಳಗಿಸಿ‌ ಉದ್ಘಾಟಿಸಿ‌ ಮಾತನಾಡಿ, ಎಷ್ಟೋ ಜನರು ತನ್ನ ಕಣ್ಣಿನ ದೃಷ್ಟಿ ಕಡಿಮೆ‌ ಇದ್ದು ಅರ್ಥಿಕ ಸಮಸ್ಯೆಯಿಂದ‌ ವೈದ್ಯರನ್ನು ಭೇಟಿಯಾಗಲು ಭಯ ಪಡುವ ಕಾಲದಲ್ಲಿ ಇಂತಹ ನೇತ್ರ ಚಿಕಿತ್ಸಾ ಶಿಬಿರ ಬಡ ರೋಗಿಗಳಿಗೆ ಉಪಯುಕ್ತ ಎಂದು ಹೇಳಿದರು. ಕಲ್ಲೂರು ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಹಾಜಿ ಇಬ್ರಾಹಿಂ ಹಾಜಿ ಕಲ್ಲೂರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಡಿಮೆಯಿಂದ ಬಂದ ಲಾಭದಿಂದ ನಮ್ಮ ಮಕ್ಕಳಿಗೆ ಸಂಪತ್ತು ಕೂಡಿಕರಿಸುದಕ್ಕಿಂತ ನಮ್ಮ‌ ಮಕ್ಕಳನ್ನು ಸಂಪತ್ತಾಗಿ ಬೆಳೆಸಿ. ಉದ್ಯಮ ಲಾಭ ಉಳಿದ ಶೇಕಡವನ್ನು ಸಮಾಜಕ್ಕೆ ನೀಡಿದಾಗ ನಮ್ಮ‌ ಕುಟುಂಬ…

Read More

UN NETWORKS ಉಳ್ಳಾಲ: ಉಪ್ಪಳ ನಯಾಬಜಾರ್‍ನಲ್ಲಿ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಾತಿಮಾ(1ವ.) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದೆ. ಕೇರಳದ ಪಾಲ್ಘಾಟ್‍ನಲ್ಲಿ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ಕೆ.ಸಿರೋಡ್ ಅಜ್ಜಿನಡ್ಕದ ಭೀಪಾತುಮ್ಮ ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟು 13 ಮಂದಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಭೀಫಾತುಮ್ಮ ಅವರ ಪುತ್ರಿ ನಸೀಮಾ ಈ ಅಪಘಾತದಲ್ಲಿ ಮೃತಪಟ್ಟಿದ್ದು, ನಸೀಮಾ ಅವರ ಒಂದು ವರ್ಷದ ಪುತ್ರಿ ಫಾತಿಮಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಡುವ ಮೂಲಕ ಘಟನೆಯಲ್ಲಿ ಮೃತಪಟ್ಟವರ ಸಂಖ್ಯ 6ಕ್ಕೇರಿದಂತಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಲ್ಲಿ ಫವಾಝ್ ಸ್ಥಿತಿ ಗಂಭೀರವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಸೌದಾ, ಮಕ್ಕಳದಾ ಫಾರಿಷ್, ಶಾಹಿದ್ ಚೇತರಿಸುತ್ತಿದ್ದು ಉಳಿದ ಗಾಯಾಳುಗಳು ಅಪಾಯದಿಂದ ಪಾರಾಗಿದ್ದಾರೆ.

Read More

UN NETWORKS ರಥಬೀದಿ: ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯದಿಂದ ನೀರು ಕಲುಷಿತಗೊಂಡು ಪರಿಸರ ನಾಶವಾಗಿ ಸಂಕ್ರಾಮಿಕ ರೋಗಗಳು ಸೇರಿದಂತೆ ಅಸ್ತಮಾ, ಕ್ಯಾನ್ಸರ್ ಚರ್ಮರೋಗಗಗಳು ನಮಗರಿವಿಲ್ಲದಂತೆ ಕದತಟ್ಟಿ ಸಾವಿನ ದವಡೆಗೆ ಸಾಗಿಸುತ್ತಿದ್ದು, ಭವಿಷ್ಯದ ದಿನಗಳಲ್ಲಿ ಜಾಗತಿಕ ದುರಂತವಾಗುವುದರ ಮೊದಲು ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತುಮಕೂರಿನ ಡಾ| ಶೈಲ ಬಾದಾಮಿ ಅಭಿಪ್ರಾಯಪಟ್ಟರು. ಮಂಗಳೂರು ರಥಬೀದಿಯ ಡಾ| ಪಿ ದಯಾನಂದ ಪೈ, ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಮತ್ತು ವಿಜ್ಞಾನ ಸಂಘಗಳ ಇದರ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ರಾಸಾಯನಿಕ ಜಗತ್ತು ಮನುಕುಲಕ್ಕೆ ಆಪತ್ತು ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. 50 ವರ್ಷದ ಹಿಂದೆ ಪ್ಲಾಸ್ಟಿಕ್ ಬಳಕೆ ತೀರಾಕಡಿಮೆಯಾಗಿತ್ತು. ನಗರಗಳಿದ್ದರೂ ಯಾವುದೇ ಸಾಂಕ್ರಾಮಿಕ ರೋಗಗಳ ಬಗ್ಗೆ ಭಯ ಇರಲಿಲ್ಲ. ಪ್ರಸ್ತುತ ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗಿದೆ, ಕಸ ವಿಲೇವಾರಿಕಷ್ಟವಾಗಿದೆ, ಪ್ರಾಣಿ ಸಂಕುಲ ನಾಶವಾಗುತ್ತಿದೆ. ಜೀವ ಜಲಚರಗಳು ಪ್ಲಾಸ್ಟಿಕ್‍ನಿಂದಾಗಿ ಒದ್ದಾಡುತ್ತಿವೆ. ದನ, ನಾಯಿ ಪ್ರಾಣಿಗಳಿಗೂ ಕ್ಯಾನ್ಸ್‍ರ್ ಬರುತ್ತಿದೆ.…

Read More

UN NETWORKS ಉಳ್ಳಾಲ: ಪರಿಸರದ ಸಂರಕ್ಷಣೆ ಹಾಗೂ ಪೋಷಣೆ ಕೇವಲ ಅರಣ್ಯ ಇಲಾಖೆಯ ಜವಬ್ದಾರಿ ಅಲ್ಲ ಬದಲಾಗಿ ಪ್ರತಿಯೊಬ್ಬ ನಾಗರಿಕನ ಜವಬ್ದಾರಿ, ಇದಕ್ಕಾಗಿ ಸರಕಾರದ ವತಿಯಿಂದ ಪ್ರೋತ್ಸಾಹ ಧನವನ್ನು ಸಸಿ ನೆಡುವ ಪ್ರತಿಯೊಬ್ಬರಿಗೂ ಕೊಡಲಾಗುವುದು ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ಅಭಿಪ್ರಾಯಪಟ್ಟರು. ಭಾರತೀಯ ಕಥೋಲಿಕ್ ಯುವ ಸಂಚಲನ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರು ಹಾಗೂ ಪೊಸಕುರಲ್ ಬಳಗ, ತೊಕ್ಕೊಟ್ಟು ಇವರು ಹಮ್ಮಿಕೊಂಡಿದ್ದ ತೊಕ್ಕೊಟ್ಟು ಒಳಪೇಟೆಯ ಆಂಬೇಡ್ಕರ್ ಮೈದಾನದಲ್ಲಿ ವನಮಹೋತ್ಸವ-ಉಚಿತ ಸಸಿ ವಿತರಣೆ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತಾನಾಡಿದರು. ಅಧಕ್ಷತೆ ವಹಿಸಿದ್ದ ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರು ಇದರ ಸಹಾಯಕ ಧರ್ಮಗುರುಗಳಾದ ವಂ.ಫಾ| ಸ್ಟ್ಯಾನಿ ಪಿಂಟೊ ಮಾತನಾಡಿ, ಇಂತಹ ಸಾರ್ವಜನಿಕ ವನಮಹೋತ್ಸವ ಆಚರಣೆಯ ಮುಖಾಂತರ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗ್ರತಿ ಮೂಡಿಸುವುದೇ ನಮ್ಮ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಆಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕ ಸ್ಥಾಯಿ…

Read More