UN NETWORKS ತೊಕ್ಕೊಟ್ಟು: ಸಂತ ಸೆಬಾಸ್ಟಿಯನ್ ಸಮುದಾಯ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳೇ ಈ ಸಂಸ್ಥೆಯ ಆಧಾರಸ್ತಂಭಗಳಾಗಿದ್ದು, ಶಾಲೆಯ ಅಭಿವೃದ್ಧಿಯಲ್ಲಿ ಹಳೆವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷ ಅತಿ ವಂದನೀಯ ಢಾ| ಪ್ರಾನ್ಸಿಸ್ ಸೆರಾವೋ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಸೆಬೆಸ್ಟಿಯನ್ ಚರ್ಚ್ ವಠಾರದಲ್ಲಿ ಶುಕ್ರವಾರ ನಡೆದ ಧರ್ಮಕೇಂದ್ರದ ಸಮೂಹ ಶಿಕ್ಷಣ ಸಂಸ್ಥೆಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ಸಂಸ್ಥೆ 60 ವರ್ಷ ದಾಟಿದರೆ ಆ ಸಂಸ್ಥೆ ಶಾಶ್ವತವಾಗಿ ಅಭಿವೃದ್ಧಿಯ ಪಥದತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಸಂತ ಸೆಬಾಸ್ಟಿಯನ್ ಚರ್ಚ್ ಮತ್ತು ಅದರ ಶಿಕ್ಷಣ ಸಂಸ್ಥೆಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೆ ಪರರಿಗಾಗಿ ವ್ಯಕ್ತಿಗಳನ್ನು ರೂಪಿಸುವ ಕಾರ್ಯವನ್ನು ಈ ಸಂಸ್ಥೆ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಸಂತ ಸೆಬಾಸ್ಟಿಯನ್ ಧರ್ಮಕೇಂದ್ರದ ಧರ್ಮಗುರು ವಂ| ಡಾ| ಜೆ.ಬಿ.ಸಲ್ದಾನ ಮಾತನಾಡಿ ಶತಮಾನೋತ್ಸವ ಆಚರಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಇದೋಮದು ಅನಂತ…
Author: UllalaVani
UN NETWORKS ಉಳ್ಳಾಲ: ಪೌಷ್ಠಿಕ ಆಹಾರಗಳ ಕುರಿತು ಹೆಚ್ಚಿನ ಅಧ್ಯಯನದ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಿದಲ್ಲಿ ಸ್ವಸ್ಥ ಭಾರತ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ಪೌಷ್ಠಿಕ ತಜ್ಞರ ಪಾತ್ರ ಬಹುಮುಖ್ಯ ಎಂದು ನಿಟ್ಟೆ (ಸ್ವಾಯುತ್ತೆಯಾಗಲಿರುವ ವಿ.ವಿ) ಉಪಕುಲಾಧಿಪತಿ ಡಾ. ಎಂ. ಶಾಂತರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ನಿಟ್ಟೆ ಕ್ಯಾಂಪಸ್ಸಿನ ಕ್ಷೇಮ ಆಡಿಟೋರಿಯಂನಲ್ಲಿ ಶುಕ್ರವಾರ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿ, ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಡಯಾಟಿಕ್ಸ್ ಆಂಡ್ ನ್ಯೂಟ್ರೀಷಿಯನ್ ವಿಭಾಗದ ಆಶ್ರಯದಲ್ಲಿ ಶುಕ್ರವಾರ ನಡೆದ ನ್ಯಾಷನಲ್ ನ್ಯೂಟ್ರೀಷಿಯನ್ ಕಾನ್ಫರೆನ್ಸ್ ` ನ್ಯೂಟ್ರಿಕಾನ್ -2018′ ಚಾಲನೆ ನೀಡಿ ಮಾತನಾಡಿದರು. ದೇಶದಲ್ಲಿ 35 ಮಿಲಿಯ ಜನ ಮಧುಮೇಹ ಮತ್ತು 32 ಮಿಲಿಯ ಜನ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ರೋಗವನ್ನು ಗುಣಪಡಿಸುವ ವಿಧಾನ ಮತ್ತು ರೋಗ ಕಂಡುಹಿಡಿಯುವ ವಿಧಾನಗಳ ಆವಿಷ್ಕಾರದಲ್ಲೇ ಮುಂದುವರಿಯುತ್ತೇವೆ. ಆದರೆ ಎಲ್ಲಿಯೂ ಪೌಷ್ಠಿಕತೆಯಿಲ್ಲದ ಆಹಾರ, ಕಲಬೆರೆಕೆ ಆಹಾರಗಳನ್ನು ಸೇವಿಸದಂತೆ ವೈದ್ಯರು ಸೂಚಿಸುತ್ತಿಲ್ಲ. ಇದರಿಂದ ದೊಡ್ಡ ಪ್ರಮಾಣದಲ್ಲಿ ರೋಗಗಳು…
UN NETWORKS ಮಂಗಳೂರು: ಪ್ರತಿ ವರ್ಷ ನೀಡಲಾಗುವ ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಈ ಬಾರಿ ಸಾಹಿತಿ ಡಾ.ಸಾರಾ ಅಬೂಬಕ್ಕರ್ ಹಾಗೂ ನಟಿ, ನಿರ್ದೇಶಕಿ ವಿನಯಾ ಪ್ರಸಾದ್ ಆಯ್ಕೆಯಾಗಿದ್ದಾರೆ. ಫೆಬ್ರುವರಿ 3 ಮತ್ತು 4ರಂದು ಸೋಮೇಶ್ವರ ಗ್ರಾಮದ ಕೊಲ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು,ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿನ ಕನ್ನಡ ಜಿಲ್ಲಾಡಳಿತ ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಒಟ್ಟಾಗಿ ಉತ್ಸವವನ್ನು ಆಯೋಜಿಸಿದೆ. ವೀರರಾಣಿ ಅಬ್ಬಕ್ಕ ಪ್ರಶಸ್ತಿ ತಲಾ 30 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ. ಫೆ.4ರಂದು ಕೊಲ್ಯದ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
UN NETWORKS ತೊಕ್ಕೊಟ್ಟು: ಇಲ್ಲಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಶತಮಾನೋನ್ಸವ ಸಂಭ್ರಮದ ಪ್ರಥಮ ದಿನವಾದ ಶುಕ್ರವಾರ ಧರ್ಮಕೇಂದ್ರದ ಸಮೂಹ ಶಿಕ್ಷಣ ಸಂಸ್ಥೆಗಳ ದಿನಾಚರಣೆಯ ಅಂಗವಾಗಿ ಕೃತಜ್ಞಾತಾ ಪೂಜೆ ಧರ್ಮಕೇಂದ್ರದಲ್ಲಿ ನಡೆಯಿತು. ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ| ಫ್ರಾನ್ಸಿಸ್ ಸೆರಾವೊ,ಪೂಜೆ ನೆರವೇರಿಸಿ ಶಿಕ್ಷಣ ಸಂಸ್ಥೆಗಳು ಜಾತಿ ಮತ ಭೇದ ಮರೆತು ಇತರರಿಗೆ ಬೆಳಕು ನೀಡುವ ದೀಪವಾಗಬೇಕು ಎಂದರು. ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಧರ್ಮಗುರು ವಂ| ಡಾ| ಜೆ. ಬಿ. ಸಲ್ಡಾನ್ಹಾ , ಕಥೋಲಿಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಂದನೀಯ ಜೆರಾಲ್ಡ್ ಡಿ’ಸೋಜ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಸಹಾಯಕ ಧರ್ಮಗುರುಗಳಾದ ಫಾ| ಸ್ಟ್ಯಾನಿ ಪಿಂಟೊ, ಫಾ| ಲೈಝಿಲ್ ಡಿ’ಸೋಜ, ಸಂತ ಸೆಬೆಸ್ಟಿಯನ್ ಶಿಕ್ಷಣ ಸಂಸ್ಥೆಗಳು ಪ್ರಾಂಶುಪಾಲ ಫಾ| ಎಡ್ವಿನ್ ಮಸ್ಕರೇನಸ್, ವಂ| ಫೆಲಿಕ್ಸ್ ನೊರೊನ್ಹಾ , ಧರ್ಮಭಗಿನಿಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
UN NETWORKS ಬಾಳೆಪುಣಿ: ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನಾರ್ಯ ಎಂಬಲ್ಲಿ ಎಸ್ಸಿ ಎಸ್ಟಿ ಕಾಲೋನಿಯ ಬಾಳೆಪುಣಿ ಮೂರನೇ ವಾರ್ಡ್ ನಲ್ಲಿ ಇಂದು ಪಂಚಾಯಿತಿಯ ಗೌರವಾನ್ವಿತ ಸದಸ್ಯರಾದ ಭಾಸ್ಕರ್ ಕೋಟ್ಯಾನ್ ಅವರ ನೇತೃತ್ವದಲ್ಲಿ ವಾರ್ಡಿನ ಇತರೆ ಸದಸ್ಯರುಗಳಾದ ಸರಸ್ವತಿ ,ಹರಿಣಾಕ್ಷಿ ,ಲಕ್ಷ್ಮಣ ಗಟ್ಟಿ ಇವರುಗಳ ಹದಿನಾಲ್ಕನೇ ಹಣಕಾಸಿನ ಯೋಜನೆಯ ಅನ್ವಯ 5 ಸೋಲಾರ್ ವಿದ್ಯುತ್ ದೀಪಗಳನ್ನು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಇವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಾಳೆಪುಣಿ ಗ್ರಾಮ ಪಂಚಾಯತ್ ಸದಸ್ಯರಾದ ಲೋಹಿತ್ ವಿ ಗಟ್ಟಿ ,ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೀಲಾವತಿ ಭಾಸ್ಕರ್ ಮಂಗಳೂರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಮುನೀರ್ ಮಾಸ್ಟರ್ ಬಾಳೆಪುಣಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಾದ ಮಹೇಶ್ ಚೌಟ ,ಕಾರ್ಯದರ್ಶಿಗಳಾದ ಯೋಗೀಶ್ ,ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರುಗಳಾದ ಯಶವಂತ ಅಮೀನ್ ,ಸಂಜೀವ ಶೆಟ್ಟಿ ,ಸ್ಥಳೀಯ ಬಿಜೆಪಿ ಪ್ರಮುಖರಾದ ರಾಮಕೃಷ್ಣ ಶಾಸ್ತ್ರಿ ,ಕಮಲಾಕ್ಷ…
UN NETWORKS ತಲಪಾಡಿ : ತಲಪಾಡಿ, ದೇವಿನಗರ ಶ್ರೀ ರಕ್ತೇಶ್ವರೀ ಸೇವಾ ಟ್ರಸ್ಟ್ ಇವರ ವತಿಯಿಂದ ಜ. 19 ರಿಂದ ಜ. 26ರ ವರೆಗೆ ಹರಿಕಥಾ ಸಪ್ತಾಹ ಮತ್ತು ಶ್ರೀ ದೇವಿಗೆ ಹೂವಿನ ಪೂಜೆ ಹಾಗೂ ಯಕ್ಷಗಾನ ಬಯಲಾಟ ತಲಪಾಡಿ ದೇವಿನಗರದ ಗಂಗನಿಲಯದಲ್ಲಿ ನಡೆಯಲಿದೆ. ಜ.19ರಿಂದ 25ರವರೆಗೆ ಕೀರ್ತನಾ ಪ್ರವೀಣ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ಹರಿಕಥಾ ಸಪ್ತಾಹ ನಡೆಯಲಿದೆ. ಜ.26ರಂದು ಶುಕ್ರವಾರ ವೇದಮೂರ್ತಿ ಶ್ರೀ ಪಾವಂಜೆ ಜಯಂತ ಭಟ್ ಇವರ ಪೌರೋಹಿತ್ಯದಲ್ಲಿ ಶ್ರೀ ರಕ್ತೇಶ್ವರಿ ದೇವಿಗೆ ಹೂವಿನ ಪೂಜೆ, ಶ್ರೀ ಮಹಾಗಣಪತಿ ದೇವರಿಗೆ 108 ತೆಂಗಿನಕಾಯಿ ಗಣಯಾಗ ನಡೆಯಲಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಸೇವೆಯಾಟ ನಡೆಯಲಿದೆ. ವೇದಮೂರ್ತಿ ಶ್ರೀ ಬಾಲಕೃಷ್ಣ ಭಟ್ ಪಂಜಾಳ ಅವರ ಉಪಸ್ಥಿತಿಯಲ್ಲಿ ಪ್ರೊ| ಎಂ. ಬಿ. ಪುರಾಣಿಕ್, ಸುನಂದಾ ಎಂಬಿ ಪುರಾಣಿಕ್ ಹರಿಕಥಾ ಸಪ್ತಾಹದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಹರಿಕಥಾ ಸಪ್ತಾಹದಲ್ಲಿ ಭಕ್ತ ಕನಕದಾಸ, ಭಕ್ತ ಪುಂಡರೀಕ,…
UN NETWORKS ಹರೇಕಳ: ಹಲವಾರು ವರ್ಷಗಳ ಹಿಂದೆ ನೆರೆಯಿಂದ ಅಳಿದು ಹೋಗಿರುವ ಹರೇಕಳ ಕುತ್ತಿಮುಗೇರು ಸಮೀಪದ ಸಂಪಿಗೆದಡಿ ಶ್ರೀ ಉಮಾ ಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರ ಪ್ರಯುಕ್ತ ಮೂರು ದಿನಗಳ ಅಷ್ಟಮಂಗಳ ಪ್ರಶ್ನೆ ಗುರುವಾರ ಆರಂಭಗೊಂಡಿತು. ಜ್ಯೋತಿಷಿ ಚೇರಾಡಿ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಶಿಷ್ಯ ಸುಬ್ರಮಣ್ಯ ಕುಮಾರ ಹಾಗೂ ನೀಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಅಷ್ಟಮಂಗಳ ಪ್ರಶ್ನೆ ನಡೆಸಲಾಗುತ್ತಿದೆ. ಹರೇಕಳ,ಪಾವೂರು ಹಾಗೂ ಅಂಬ್ಲಮೊಗರು ಮಾಗಣೆಗೆ ಸಂಬಂಧಪಟ್ಟ ದೇವಸ್ಥಾನ ಇದಾಗಿರುವುದರಿಂದ ಏಳು ಜನರ ಸಮಿತಿ ರಚನೆ ಅಗತ್ಯ. ಶಿವ ಹಾಗೂ ದೇವಿಶಕ್ತಿ ಹೊಂದಿದ್ದು, ಉಪದೇವತೆಗಳ ಸಾನಿಧ್ಯ ಇದಾಗಿದೆ ಎಂದು ಪ್ರಶ್ನೆಯಲ್ಲಿ ತಿಳಿದು ಬಂತು. ಈ ಸಂದರ್ಭ ದೇವಸ್ಥಾನ ಟ್ರಸ್ಟ್ ನ ಪ್ರಮುಖರಾದ ರಾಜೀವ ಆಳ್ವ ಬ್ರಹ್ಮಾವರ, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಮಹಾಬಲ ಹೆಗ್ಡೆ ದೆಬ್ಬೇಲಿ, ಸದಾಶಿವ ಸಾಮಾನಿ, ರಮಾನಾಥ ಭಂಡಾರಿ ಪೆರುವೋಡಿ, ಸೋಮಶೇಖರ್ ಚೌಟ, ಮನೋಹರ್ ಶೆಟ್ಟಿ ನಡಿಕಂಬಳಗುತ್ತು, ಬಾಸ್ಕರ ಶೆಟ್ಟಿ ಸಂಪಿಗೆದಡಿ, ತನಿಯಪ್ಪ ಕೋಟ್ಯಾನ್, ದಾಮೋದರ ಕೋಟ್ಯಾನ್, ವಿವಿಧ ಜಾತಿಯ ಪ್ರಮುಖರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ ಮತ್ತು ಮಂಗಳೂರು ನಗರ ಪೊಲೀಸ್ ಇಕೊನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಯ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳು ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಜ. ಶರೀಫ್ ಇನ್ಸ್ಪೆಕ್ಟರ್, ಇಕೊನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸ್ ಇವರು ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಶಾಂತಿ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಜ. ಅಬ್ದುರ್ ರಹಮಾನ್, ಕಾಲೇಜಿನ ಪ್ರಾಂಶುಪಾಲ ಭಾರತಿ ಎಂ.ಅರ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕು. ಆಯಿಶತ್ ಫರಾಶ ಮತ್ತು ಆಯಿಶತ್ತುಲ್ ನಾದಿಯ ಕಿರಾತ್ ಪಠಿಸಿದರು. ಕು. ಮರಿಯಂ ನೂಹ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
UN NETWORKS ಉಳ್ಳಾಲ: ಹಿರಾ ಮಹಿಳಾ ಕಾಲೇಜು, ಬಬ್ಬುಕಟ್ಟೆ ಇದರ ರಾಷ್ಟ್ರಿಯ ಸ್ವಯಂ ಸೇವಾ ಯೋಜನೆಯ ವತಿಯಿಂದ ವಿದ್ಯಾರ್ಥಿನಿಯರಿಗಾಗಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಕಾಲೇಜಿನಲ್ಲಿ ಹಮ್ಮಿಕೊಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಯೇನೆಪೋಯ ಡೆಂಟಲ್ ಕಾಲೇಜಿನ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಪ್ರವೀಣ್ ಇವರ ತಂಡವು ಕಾಲೇಜಿಗೆ ಆಗಮಿಸಿದ್ದು, ವಿದ್ಯಾರ್ಥಿನಿಯರೆಲ್ಲರು ಉಚಿತ ದಂತ ಶಿಬಿರದ ಪ್ರಯೋಜನವನ್ನು ಪಡೆದಿರುತ್ತಾರೆ.
UN NETWORKS ಮಂಗಳೂರು: ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ಬ್ಯಾನರ್ ನಲ್ಲಿ ಕೋಟಿ ಚೆನ್ನಯರ ಫೋಟೋ ಹಾಕಿ ಯಾವುದೇ ಅವಮಾನ ಮಾಡಿಲ್ಲ, ತುಳುನಾಡಿನ ವೀರ ಯೋಧರ ಹುಟ್ಟೂರಿನಲ್ಲಿ ಅವರಿಗೆ ಗೌರವ ಸಲ್ಲಿಸಲಾಗಿದೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು. ಪುತ್ತೂರಿನಲ್ಲಿ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ಕೋಟಿ ಚೆನ್ನಯರ ಫೋಟೋ ಹಾಕಿರುವುದಕ್ಕೆ ಉಸ್ತುವಾರಿ ಸಚಿವ ರಮಾನಾಥ ರೈ ಅವರು ವಿರೋಧ ವ್ಯಕ್ತಪಡಿಸಿದ್ದರು ಮತ್ತು ವೀರ ಯೋಧರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹರಿಕೃಷ್ಣ ಬಂಟ್ವಾಳ, ಬಿಲ್ಲವ ಮುಖಂಡ ಜರ್ನಾದನ ಪೂಜಾರಿ ಅವರನ್ನು ಸಾರ್ವಜನಿಕವಾಗಿ ಅವಮಾನ ಮಾಡಿರುವ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಇದನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬಂಟ್ವಾಳಕ್ಕೆ ಭೇಟಿ ನೀಡಿದ್ದ ವೇಳೆ ಹಲವಾರು ಫ್ಲೆಕ್ಸ್ ಗಳಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಹಾಕಲಾಗಿತ್ತು. ಇದನ್ನು ರಮಾನಾಥ ರೈ…

