Author: UllalaVani

Kannada News From Coastal Karnataka

ಬಜಾಲ್: ಜೈಹಿಂದ್ ಫ್ರೆಂಡ್ಸ್ ಕಲ್ಲಗುಡ್ಡೆ ಬಜಾಲ್ ಇದರ 25ನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶನಿಪೂಜೆ ಹಾಗೂ ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಜೈಹಿಂದ್ ಫ್ರೆಂಡ್ಸ್ ಕಲ್ಲಗುಡ್ಡೆ ಸ್ಥಾಪಕಾಧ್ಯಕ್ಷರು, ಕೋಟೆಕಾರ್ ಪಟ್ಟಣ ಪಂಚಾಯತ್ ಕೌನ್ಸಿಲರ್ ಹರೀಶ್ ರಾವ್ ಅವರು ಮಾತನಾಡಿ, ಈ ಭಾಗದಲ್ಲಿ ಸಂಸ್ಥೆಯು ಶ್ರದ್ಧಾಭಕ್ತಿಯಿಂದ ಮುನ್ನಡೆಯುತ್ತಿದ್ದು, ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಬೆಳ್ಳಿ ಮಹೋತ್ಸವದ ಹಿನ್ನಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಇವರ ಕಾರ್ಯ ಮುಂದೆಯೂ ಇದೇ ರೀತಿಯಲ್ಲಿ ಸಾಗಲಿ, ಎಂದು ಶುಭಹಾರೈಸಿದರು. ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಜೊತೆಗೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಜೈಹಿಂದ್ ಫ್ರೆಂಡ್ಸ್ ಕಲ್ಲಗುಡ್ಡೆ ಇದರ ಗೌರವಾಧ್ಯಕ್ಷರಾದ ದೇವ್‌ರಾಜ್ ಶೆಟ್ಟಿ ಕಲ್ಲಗುಡ್ಡೆ, ಅಧ್ಯಕ್ಷರಾದ ತಿಲಕ್ ಪೂಜಾರಿ ಕಲ್ಲಗುಡ್ಡೆ, ಉಪಾಧ್ಯಕ್ಷರಾದ ಅನಿಕೇತನ್ ಡಿ ಶೆಟ್ಟಿ ಕಲ್ಲಗುಡ್ಡೆ, ಕಾರ್ಯದರ್ಶಿಯಾದ ಸುಮಿತ್, ನಿಹಾಲ್, ಸದಸ್ಯರಾದ ನವೀನ್‌ರಾಜ್ ಶೆಟ್ಟಿ,…

Read More

ಉಳ್ಳಾಲ: ದೊಡ್ಡ ಕ್ಷೇತ್ರಗಳಿಗೆ ಸರ್ಕಾರದಿಂದ ಅನುದಾನ ಲಭಿಸುತ್ತದೆ, ಆದರೆ ಸಣ್ಣ ಕ್ಷೇತ್ರಗಳು ಸ್ಥಳೀಯ ಜನಪ್ರತಿನಿಧಿಗಳು, ಭಕ್ತರ ಸಹಕಾರದಲ್ಲಿ ನಡೆಯಬೇಕಿದ್ದು ಈ ಹಿನ್ನೆಲೆಯಲ್ಲಿ ಸಹಕಾರ ನೀಡುವ ಅವಶ್ಯತೆ ಇದೆ ಎಂದು ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಹೇಳಿದರು. ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾಯಿನಗರ ನಡಾರ್ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ದಶಮಾನೋತ್ಸವ ಪ್ರಯುಕ್ತ ಅಜ್ಜನ ಕಟ್ಟೆಯ ಅಗೇಲು ಪ್ರಸಾದ ತಯಾರಿಸುವ ಸ್ಥಳಕ್ಕೆ ಕೋಟೆಕಾರ್ ಪಟ್ಟಣ ಪಂಚಾಯತ್ ಅನುದಾನದಲ್ಲಿ ಅಳವಡಿಸಲಾದ ಮೇಲ್ಛಾವಣಿ ಉದ್ಘಾಟಿಸಿ ಮಾತನಾಡಿದರು.ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಹರೀಶ್ ರಾವ್ ಮಾತನಾಡಿ, ಕ್ಷೇತ್ರದ ಸನಿಹದಲ್ಲಿರುವ ಸರ್ಕಾರಿ ತೆರೆದ ಬಾವಿಯಿಂದ ಭಕ್ತರಿಗೆ ತೊಂದರೆ ಆಗಬಾರದೆನ್ನುವ ನೆಲೆಯಲ್ಲಿ ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮತಿ ಸದಸ್ಯನಾಗಿದ್ದ ಸಂದರ್ಭ ೨.೬೫ ಲಕ್ಷ ಅನುದಾನ ಮೀಸಲಿಟ್ಟು ಮುಚ್ಚಳಿಕೆ ಹಾಗೂ ಅಗೇಲು ಸೇವೆ ನಡೆಯುವ ಜಾಗಕ್ಕೆ ಮೇಲ್ಛಾವಣಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಕೋಶಾಧಿಕಾರಿಗಳಾದ ರುಕ್ಮಿಣಿ, ಹರಿಣಾಕ್ಷಿ, ಸಂಘಟನಾ…

Read More

ಮಂಗಳೂರು, ಎ.20: ಮುಡಿಪು ಉತ್ಸವ ಸಮಿತಿ, ಕೃಷಿಕ ಸಮಾಜ ಉಳ್ಳಾಲ ತಾಲೂಕು ಹಾಗೂ ಯು.ಟಿ. ಫರೀದ್ ಫೌಂಡೇಶನ್ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೃಹತ್ ಕೃಷಿ ಮೇಳ ಹಾಗೂ ಮುಡಿಪು ಉತ್ಸವ ಎ.24, 25, 26 ರಂದು ಶ್ರೀ ಕೃಷ್ಣ ಧ್ಯಾನ ಮಂದಿರ, ಮುಡಿಪುವಿನಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ. ಅವರು ಸೋಮವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಎ.24ರಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಕೃಷಿ ಸಚಿವ ಚೆಲುವರಾಯ ಸ್ವಾಮಿ ಕೃಷಿ ಮೇಳವನ್ನು ಹಾಗೂ ಸಂಸದ ಬ್ರಿಜೇಶ್ ಚೌಟ ಆಹಾರ ಮೇಳವನ್ನು ಉದ್ಘಾಟಿಸಲಿದ್ದಾರೆ. ಈ ಉತ್ಸವದಲ್ಲಿ ಹಿರಿಯ ಸಮಾಜಸೇವಕ ಡಾ. ಮದನ್ ಮೋಹನ್ ನಾಯ್ಕ ಅವರಿಗೆ ಸೇವಾ ಧುರಂದರ ಪ್ರಶಸ್ತಿ ನೀಡಲಾಗುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ಹಲವು ಗಣ್ಯರಿಗೆ ಗೌರವಾಭಿನಂದನೆ ಸಲ್ಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೃಷಿಯ ಬಗ್ಗೆ ವಸ್ತು ಪ್ರದರ್ಶನ…

Read More

ಮಂಗಳೂರು, ಏ. 20 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರಲೋಕ’ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಚಿಣ್ಣರಲೋಕ ಸೇವಾ ಬಂಧು (ರಿ.) ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕಲೋತ್ಸವ 2026 ತುಳು, ಕೊಂಕಣಿ, ಬ್ಯಾರಿ, ಅರೆ ಭಾಷೆ ಅಕಾಡೆಮಿ ಸಹಯೋಗಯೊಂದಿಗೆ ಬಹುಸಂಸ್ಕೃತಿ ಉತ್ಸವ ಹಾಗೂ ಆಹಾರ ಮೇಳ ಮೇ 4 ರಿಂದ 9 ವರೆಗೆ ಬಿ.ಸಿ ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ. ಇನ್ನು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಂಗಳೂರಿನಲ್ಲಿ ನೆರವೇರಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ದರ್ಶನ್ ಎಚ್ .ವಿ. ಮಂಗಳೂರು ಪೊಲೀಸ್ ಅಯುಕ್ತ ಸುಧೀರ್ ಕುಮಾರ್ ರೆಡ್ಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಸೇರಿದಂತೆ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ವೇಳೆ ಕರಾವಳಿ ಕಲೋತ್ಸವ ಇದರ ಸ್ವಾಗತ ಸಮಿತಿಯ ಅಧ್ಯಕ್ಷ ಕಾಂತಾಡಿ…

Read More

ಮಣಿಪಾಲದ ಈಶ್ವರ ನಗರದಲ್ಲಿರುವ ಕೆಎಂಎಫ್ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಘಟಕದಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದಾಗ ಬೆಳಿಗ್ಗೆ ಸುಮಾರು 11 ಗಂಟೆಗೆ ಈ ಘಟನೆ ಸಂಭವಿಸಿದೆ. ವೆಲ್ಡಿಂಗ್ ಮಾಡುವಾಗ ಬಂದ ಕಿಡಿಗಳು ಹತ್ತಿರದಲ್ಲಿದ್ದ ಎಣ್ಣೆಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಘಟಕದಲ್ಲಿದ್ದ ಬಾಯ್ಲರ್‌ಗೂ ಹರಡಿದೆ ಎಂದು ಹೇಳಲಾಗಿದೆ.ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಒಂದು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಈ ಅಗ್ನಿ ಅವಘಡದಿಂದಾಗಿ ಘಟಕಕ್ಕೆ ಗಣನೀಯ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದುಬಂದಿದೆ.

Read More

ಉಳ್ಳಾಲ: ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ (ರಿ.) ಉಳ್ಳಾಲ ಇದರ ಸುವರ್ಣ ಮಹೋತ್ಸವ -2027 ಅಂಗವಾಗಿ 50ನೇ ವರ್ಷದ ಅಧ್ಯಕ್ಷರಾಗಿ ನವೀನ್ ಭಟ್ನಗರ ಆಯ್ಕೆಯಾಗಿದ್ದಾರೆ. ಎ.19ರಂದು ನಡೆದ ಸಭೆಯಲ್ಲಿ ಅವರನ್ನು ಏಕಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Read More

ಉಳ್ಳಾಲ:ಹೆಚ್ಚಿನ ಪೋಷಕರು ಮತ್ತು ಶಿಕ್ಷಕರು ಪುಸ್ತಕಗಳಲ್ಲಿ ಇರೋ ವಿಚಾರಗಳನ್ನಷ್ಟೆ ಮಕ್ಕಳ ಮನಸ್ಸಿನೊಳಗೆ ತುಂಬಿಸುವುದರಲ್ಲಿ ನಿರತರಾಗಿರುತ್ತಾರೆ.ಬಿಡುವಿಲ್ಲದ ಕಲಿಕೆಯಲ್ಲಿ ಮಕ್ಕಳ ಮನಸ್ಸಿನೊಳಗಿರುವ ವಿಶೇಷ ಪ್ರತಿಭೆಗಳನ್ನ ಹೊರ ತರುವ ಕೆಲಸ ನಡೆಯುತ್ತಿರುವುದು ತೀರಾ ಕಡಿಮೆ.ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನ ಅನಾವರಣಗೊಳಿಸಲು ಬೇಸಿಗೆ ಶಿಬಿರಗಳು ಪರಿಣಾಮಕಾರಿಯಾಗಿವೆಯೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯಕ್ ಅಭಿಪ್ರಾಯಪಟ್ಟರು. ಕುಂಪಲದ ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್,ರೋಟರಿ ಕ್ಲಬ್ ಮಂಗಳೂರು,ರೋಟರಿ ಸಮುದಾಯ ದಳ ಕುಂಪಲ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಪಲ ಇದರ ಸಹಭಾಗಿತ್ವದಲ್ಲಿ ಚಿತ್ತಾರ ಪ್ರತಿಷ್ಟಾನ ಪಿಲಾರು ಇವರ ಸಹಯೋಗದೊಂದಿಗೆ ಆರು ದಿನಗಳ ಕಾಲ ನಡೆದ “ಚಿಗುರು 2026” ಬೇಸಿಗೆ ಶಿಬಿರದ ಪ್ರಯುಕ್ತ ಕುಂಪಲದ ಕೇಸರಿ ಮಿತ್ರವೃಂದ ಸಭಾಭವನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿದಾಗ ಆ ಪ್ರತಿಭೆಗೆ ಸೂಕ್ತ ಸಮಯದಲ್ಲಿ ಅಗತ್ಯ ಪ್ರೋತ್ಸಾಹ,ತರಬೇತಿಗಳು ಲಭಿಸಿದಲ್ಲಿ ವಿದ್ಯಾರ್ಥಿಗಳು ಕಲಿಕೆ ಮಾತ್ರವಲ್ಲದೆ…

Read More

ತುಳುನಾಡಿನ ಸಂಸ್ಕೃತಿಯಲ್ಲಿ ಕೋಲ, ನೇಮ ಎಂಬವು ಕೇವಲ ಆಚರಣೆಗಳಲ್ಲ ಅವು ಜನರ ನಂಬಿಕೆ, ಭಕ್ತಿ ಮತ್ತು ಸಂಪ್ರದಾಯದ ಆತ್ಮ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕಾರಣಿಗಳು ಈ ಪವಿತ್ರ ಆಚರಣೆಗಳನ್ನು ಸಾಮಾಜಿಕ ಜಾಲತಾಣಗಳ ಪ್ರಚಾರ ವೇದಿಕೆಯಾಗಿ ಬಳಸುತ್ತಿರುವುದು ಗಮನಾರ್ಹವಾಗಿದೆ. ಫೇಸ್‌ಬುಕ್‌, ವ್ಯಾಟ್‌ಆಪ್‌, ಇನ್‌ಸ್ಟಾಗ್ರಾಂಗಳಲ್ಲಿ ಕೋಲ-ನೇಮಕ್ಕೆ ಹಾಜರಾಗಿರುವ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುವುದು ತಪ್ಪೇನಲ್ಲ. ಆದರೆ ಅದನ್ನು ಅತಿಯಾಗಿ ಪ್ಲೆಕ್ಸ್‌ ಬ್ಯಾನರ್‌ಗಳೊಂದಿಗೆ, ದೊಡ್ಡ ದೊಡ್ಡ ಕ್ಯಾಪ್ಷನ್‌ಗಳೊಂದಿಗೆ ಪ್ರದರ್ಶಿಸುವುದು“ನಾನೊಬ್ಬ ದೈವಭಕ್ತ” ಎಂಬ ಸಂದೇಶವನ್ನು ಜನರಿಗೆ ತೋರಿಸಲು ಮಾಡುತ್ತಿರುವ ಪ್ರಯತ್ನವೇ? ಅಥವಾ ನಿಜವಾದ ಭಕ್ತಿಯ ಪ್ರತಿಬಿಂಬವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ನೈಜ ಭಕ್ತಿ ಎಂದರೆ ಮೌನದಲ್ಲೇ ವ್ಯಕ್ತವಾಗುವುದು. ಅದು ಕ್ಯಾಮೆರಾ ಮುಂದೆ ತೋರಿಸಬೇಕಾದ ವಿಷಯವಲ್ಲ. ದೈವದ ಮುಂದೆ ಸಮರ್ಪಣೆ, ನಿಷ್ಠೆ, ಮತ್ತು ಜನಸೇವೆಯ ಮೂಲಕ ವ್ಯಕ್ತವಾಗಬೇಕಾದದ್ದು. ಆದರೆ ಇಂದಿನ ರಾಜಕೀಯದಲ್ಲಿ ಭಕ್ತಿ ಕೂಡ ಒಂದು ಇಮೇಜ್‌ ಬಿಲ್ಡಿಂಗ್‌ ಟೂಲ್ ಆಗಿ ಪರಿಣಮಿಸುತ್ತಿರುವುದು ವಿಷಾದನೀಯ. ಜನರು ಕೂಡ ಜಾಗೃತರಾಗಬೇಕು. ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡಿ ಭಕ್ತಿಯ ಅಳತೆಯನ್ನು ಮಾಡಬಾರದು.…

Read More

ಮನೆ ಎನ್ನುವುದು ಕೇವಲ ಗೋಡೆಗಳ ಗುಂಪಲ್ಲ; ಅದು ನಮ್ಮ ಮನಸ್ಸಿನ ಶಾಂತಿಯ ತಾಣ. ದೇವಾಲಯಕ್ಕೆ ಹೋಗುವುದು ಭಕ್ತಿಯ ಒಂದು ಭಾಗವಾದರೆ, ನಮ್ಮ ಮನೆಯೇ ನಿಜವಾದ ಆರಾಧನೆ ಕೇಂದ್ರವಾಗಬಹುದು. ಮನೆಯಲ್ಲಿ ದೇವರಿದ್ದಾನೆ ಎಂಬ ನಂಬಿಕೆ ನಮ್ಮ ನಡೆ-ನುಡಿಗಳನ್ನು ಸರಿ ದಾರಿಗೆ ತೆಗೆದುಕೊಳ್ಳುತ್ತದೆ. ನಾವು ಪ್ರತಿದಿನ ಮಾಡುವ ಸಣ್ಣ ಸಣ್ಣ ಒಳ್ಳೆಯ ಕಾರ್ಯಗಳು—ಪರಸ್ಪರ ಗೌರವ, ಪ್ರೀತಿ, ಸಹಾನುಭೂತಿ—ಇವೆಲ್ಲವೂ ದೇವರಿಗೆ ಮಾಡುವ ಪೂಜೆಯೇ. ಮನೆಯಲ್ಲಿ ಶುದ್ಧತೆ, ಶಾಂತಿ ಮತ್ತು ಸಕಾರಾತ್ಮಕ ಚಿಂತನೆ ಇದ್ದರೆ, ಅಲ್ಲಿ ದೇವರ ಸಾನ್ನಿಧ್ಯ ಸ್ವತಃ ಉಂಟಾಗುತ್ತದೆ. ಹಾಗಾಗಿ, ದೇವರನ್ನು ಹೊರಗೆ ಹುಡುಕುವುದಕ್ಕಿಂತ ಮೊದಲು, ನಮ್ಮ ಮನಸ್ಸಿನಲ್ಲಿ ಮತ್ತು ಮನೆಯಲ್ಲಿ ಹುಡುಕಬೇಕು. ನಮ್ಮ ಮನೆ ನಮ್ಮ ಆರಾಧನೆ ಕೇಂದ್ರವಾದಾಗ, ಜೀವನವೇ ಒಂದು ಪವಿತ್ರ ಯಾತ್ರೆಯಾಗಿ ಮಾರ್ಪಡುತ್ತದೆ.

Read More

ಉಳ್ಳಾಲ: ಗಾಣಿಗ ಸಮುದಾಯದಲ್ಲಿ ಯುವಜನರ ಸಹಕಾರ ಪಡೆದು ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಅಗತ್ಯವಿದೆ ಎಂದು ಮುಂಬೈ ಸಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಪಲ್ಯ ಅಭಿಪ್ರಾಯಪಟ್ಟರು. ಉಳ್ಳಾಲ ಗಾಣಿಗರ ಸಮುದಾಯ ಭವನದಲ್ಲಿ ಉಳ್ಳಾಲ ಗಾಣಿಗರ ಸಂಘ ಹಾಗೂ ಗಾಣಿಗರ ಸಮುದಾಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಉಳ್ಳಾಲ ತಾಲೂಕಿನ 14 ಗ್ರಾಮಗಳ ಸ್ವಜಾತಿ ಬಾಂಧವರಿಗಾಗಿ ಆಯೋಜಿಸಿದ್ದ “ಗಾಣಿಗರ ಸಂಗಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಕಿರೀಟ ಹೊತ್ತವನಿಗೆ ಕಿರುಕುಳ ತಪ್ಪದು ಎಂಬ ಮಾತಿನಂತೆ, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವವರಿಗೆ ಅಡಚಣೆಗಳು ಸಹಜ. ಸಂಘಟನೆ ಕಟ್ಟುವುದರೊಂದಿಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದು ಬಹಳ ಮುಖ್ಯ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯ,” ಎಂದು ಹೇಳಿದರು. ಸಂಘಟನೆಯ ಚಿಂತನೆ ಬದಲಾಗಬೇಕು. ಕೇವಲ ಸಂಪತ್ತು, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಪದವಿಗೆ ಮಹತ್ವ ನೀಡುವುದರಿಂದ ಯುವಕರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಸಮುದಾಯ ಭವನಗಳನ್ನು ನಿರ್ಮಿಸಿ, ಅದರಿಂದ ಬರುವ ಆದಾಯವನ್ನು ಸಮಾಜದ ಹಾಗೂ ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣಕ್ಕೆ ಬಳಸಬೇಕು ಎಂದು…

Read More