Author: UllalaVani

Kannada News From Coastal Karnataka

ಉಡುಪಿ, ಜ. 28 : ಕೋಡಿಬೆಂಗ್ರೆಯಲ್ಲಿ ಪ್ರವಾಸಿ ದೋಣಿ ಮುಳುಗಿದ ಘಟನೆಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿದೆ. ಮೃತರನ್ನು ಮೈಸೂರು ನಿವಾಸಿ ದಿಶಾ (23) ಎಂದು ಗುರುತಿಸಲಾಗಿದೆ.ಜನವರಿ 26 ರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಮೈಸೂರಿನಿಂದ ಕೋಡಿಬೆಂಗ್ರೆಗೆ ರಜೆಯ ಮೇಲೆ ಬಂದಿದ್ದ ಯುವಕರ ಗುಂಪೊಂದು ಪ್ರಯಾಣಿಸುತ್ತಿದ್ದ ಪ್ರವಾಸಿ ದೋಣಿ ನೀರಿನಲ್ಲಿ ಮುಳುಗಿ ದುರಂತ ಸಂಭವಿಸಿದೆ. ಅದೇ ದಿನ ಇಬ್ಬರು ಸಾವನ್ನಪ್ಪಿದ್ದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು.ಇದೀಗ ಸಾವಿನ ಸಂಖ್ಯೆ ಈಗ ಮೂರಕ್ಕೆ ಏರಿದೆ. ಉಳಿದ ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರೆದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Read More

ಉಳ್ಳಾಲ: ಶಿಕ್ಷಕರು ಮಕ್ಕಳಿಗೆ ಕೇವಲ ಪಾಠವನ್ನಷ್ಟೇ ಅಲ್ಲದೆ, ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಬೆಳೆಸುವ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದ್ದಾರೆ. ಅಂಬ್ಲಮೊಗರು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಮಸ್ತ ಸಿಬ್ಬಂದಿ ಪ್ರಾಮಾಣಿಕತೆ, ನಿಷ್ಠೆ ಮತ್ತು ಸೇವಾಭಾವದಿಂದ ನಿರ್ವಹಿಸುತ್ತಿರುವ ಕಾರ್ಯದಿಂದಾಗಿ, ಈ ಶಾಲೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸ್ಥಾನಕ್ಕೆ ಏರುವುದು ನಿಶ್ಚಿತ ಎಂದು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ . ಆರ್ ಈಶ್ವರ್ ಅಭಿಪ್ರಾಯಪಟ್ಟರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬ್ಲಮೊಗರು ಇಲ್ಲಿ ಜರಗಿದ ಶಾಲಾ ಮಕ್ಕಳ ಪ್ರತಿಭಾ ಸಿಂಚನ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲೆಯ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಕ್ರಿಯಾಶೀಲರಾಗಿ, ಸಂಸ್ಥೆಯ ಪ್ರಗತಿಗಾಗಿ ಏಕಮನಸ್ಸಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ಶಿಕ್ಷಕನಿಗೆ ಆಗುವ ತೊಂದರೆಯನ್ನೂ ಸಹ ನ್ಯಾಯಯುತವಾಗಿ, ಸಮಯಕ್ಕೆ ಸರಿಯಾಗಿ ಪರಿಹರಿಸುವಂತಹ ಮಾನವೀಯ ವ್ಯಕ್ತಿತ್ವದ ಮುಖ್ಯೋಪಾಧ್ಯಾಯರು ಶಾಲೆಗೆ ದಿಕ್ಕು ತೋರಿಸುತ್ತಿದ್ದಾರೆ. ಸ್ಪೀಕರ್‌ ಯು.ಟಿ.ಖಾದರ್‌ ಅವರ ಪ್ರೇರಣಾದಾಯಕ ಮಾತುಗಳನ್ನು ಪ್ರೇರಣೆಯಾಗಿಸಿದ ಅಂಬ್ಲಮೊಗರು ಶಾಲೆಯ ವಿದ್ಯಾರ್ಥಿನಿ ಹನ್ನತ್‌ ಮತ್ತು ಕೊಣಾಜೆ ಶಾಲೆಯ…

Read More

ಉಳ್ಳಾಲ;ಕ್ರೀಡಾ ಭಾರತಿ ಮಂಗಳೂರು ಇದರ ಉಳ್ಳಾಲ ತಾಲೂಕು ಘಟಕ ಜ.23,2026 ರಂದು ರಚನೆಗೊಂಡಿದೆ.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ ಚೌಧರಿಯವರು ನೂತನ ಪದಾಧಿಕಾರಿಗಳನ್ನು ಸಂಘನಿಕೇತನದಲ್ಲಿ ನಡೆದ ಮಂಗಳೂರು ವಿಭಾಗ ಬೈಠಕ್‌ನಲ್ಲಿ ಘೋಷಿಸಿದರು. ಕ್ರೀಡೆಯಿಂದ ಚಾರಿತ್ರ‍್ಯ ನಿರ್ಮಾಣ, ಚಾರಿತ್ರ‍್ಯದಿಂದ ರಾಷ್ಟ್ರ ನಿರ್ಮಾಣದ ಉದ್ದೆ?ಶವನ್ನು ಇಟ್ಟುಕೊಂಡು ರಾಷ್ಟ್ರ ಮಟ್ಟದಲ್ಲಿ ಕ್ರೀಡಾಭಾರತಿಯ ಸಂಘಟನೆಯು ೧೯೯೨ರಲ್ಲಿ ಆರಂಭವಾಗಿದ್ದು, ಮಂಗಳೂರು ಜಿಲ್ಲೆಯಲ್ಲಿ ೨೦೧೪ ರಂದು ಪ್ರಾರಂಭಿಸಲಾಗಿತ್ತು. ಆ ನಂತರ ಜಿಲ್ಲೆಯ ೬ ತಾಲೂಕುಗಳಲ್ಲಿ ಈಗಾಗಲೇ ಕ್ರೀಡಾಭಾರತಿ ಘಟಕಗಳನ್ನು ಆರಂಭಿಸಲಾಗಿದೆ. ಇದೀಗ ಉಳ್ಳಾಲದಲ್ಲಿ ಕ್ರೀಡಾ ಭಾರತಿ ಉಳ್ಳಾಲ ತಾಲೂಕು ಘಟಕ ರಚನೆಯಾಗಿದೆ. ಅಧ್ಯಕ್ಷರಾಗಿ ನವೀನ್ ಆಳ್ವ ದೇವಿನಗರ, ಉಪಾಧ್ಯಕ್ಷರಾಗಿ ದಿನಕರ್ ಬಗಂಬಿಲ, ಮಾಧವ ಕಟ್ಟಜೆ ಹಾಗೂ ಸೂರಜ್ ದೇವಿನಗರ, ಕಾರ್ಯದರ್ಶಿಯಾಗಿ ನಿತಿನ್ ಉಳ್ಳಾಲ್,ಸಹ ಕಾರ್ಯದರ್ಶಿಯಾಗಿ ಪ್ರೀತಮ್ ಬಗಂಬಿಲ ಹಾಗೂ ಅಶ್ವಿತ್ ಪಕಳ, ಖಜಾಂಚಿಯಾಗಿ ರಾಜೇಶ್ ಕುಲಾಲ್, ಮಹಿಳಾ ಪ್ರಮುಖ್ ಡಾ.ಶಿಲ್ಪಾಶ್ರೀ, ಕ್ರೀಡಾ ಕೇಂದ್ರ ಪ್ರಮುಖ್ ಅವಿನಾಶ್ ಆಳ್ವ ಕೊಲ್ಯ ಇವರುಗಳನ್ನು ಘೋಷಿಸಲಾಯಿತು.

Read More

ತಲಪಾಡಿ:ತಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪುಷ್ಪವತಿ ಶೆಟ್ಟಿ ನಿಧನದ ನಂತರ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸೀತಾ ಭಾಸ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಗೊಂಡ ಸೀತಾ ಭಾಸ್ಕರ್ ಅವರಿಗೆ ಹೂವಿನ ಹಾರ ಹಾಕಿ ಬಿಜೆಪಿ ಮಂಗಳೂರು ಮಂಡಲ ಸಂತಸ ವ್ಯಕ್ತಪಡಿಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಬಿಜೆಪಿ ಮಂಗಳೂರು ಮಂಡಲದ ಪ್ರಭಾರಿ ಮತ್ತು ಜಿಲ್ಲಾ ಉಪಾಧ್ಯಕ್ಷರು ಪೂಜಾ ಪೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ರವೀಂದ್ರ ಶೆಟ್ಟಿ ಉಳಿದೋಟ್ಟು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ, ಬಿಜೆಪಿ ಮಂಗಳೂರು ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ ಆರ್. ದಯಾನಂದ ತೊಕ್ಕೊಟ್ಟು, ಜಿಲ್ಲಾ ಫಲಾನುಭವಿಗಳ ಸಂಪರ್ಕ ಸಹಸಯೋಜಕ ಜಿತೇಂದ್ರ ಶೆಟ್ಟಿ ತಲಪಾಡಿ, ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಸಾಂತ್ಯ, ಮಂಡಲ ಉಪಾಧ್ಯಕ್ಷರು ಮತ್ತು ತಲಪಾಡಿ ಗ್ರಾಮ ಸದಸ್ಯರಾದ ಶೈಲೇಶ್ ಶೆಟ್ಟಿ, ಮಂಡಲ ಕಾರ್ಯದರ್ಶಿ ರಮೇಶ್ ಬೆಂದ್ರೋಳಿಕೆ, ಬಿಜೆಪಿ…

Read More

ಮಂಗಳೂರು: ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಕೆ ಸೂರಜ್ ಶೆಟ್ಟಿ ನಿರ್ದೇಶನದ ನಾನ್ ವೆಜ್ ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ “ನಾನ್‌ವೆಜ್‌” ಒಂದು ಅತ್ಯುತ್ತಮ ಭಿನ್ನ ಕಥಾವಸ್ತುವನ್ನು ಹೊಂದಿದೆ. ಯಾವುದನ್ನು ಮಡಿಮೈಲಿಗೆ, ಅಸಹ್ಯ ಎಂದು ಪರಿಗಣಿಸಿದ್ದೇವೆಯೋ ಅದು ಎಷ್ಟು ಅನಿವಾರ್ಯ ಮತ್ತು ಸಹಜ ಎಂಬುದು ಈ ಚಿತ್ರದ ಒಂದು ಸಂದೇಶವೂ ಆಗಿದೆ. “ಸು ಫ್ರಂ ಸೋ” ಸಿನಿಮಾದಲ್ಲಿ ನಟಿಸಿರುವ ಹೆಚ್ಚಿನ ಕಲಾವಿದರು “ನಾನ್‌ವೆಜ್‌” ಸಿನಿಮಾದಲ್ಲೂ ಇದ್ದಾರೆ. ಪ್ರಕಾಶ್ ತೂಮಿನಾಡು, ಬಂದರೊ ಬಂದರು ಬಾವಾ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳೂರು, ದೀಪಕ್‌ ರೈ ಪಾಣಾಜೆ, ಮೈಮ್‌ ರಾಮದಾಸ್‌, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ಅವರು ನಾನ್‌ವೆಜ್‌ ಸಿನಿಮಾದಲ್ಲೂ ನಟಿಸಿದ್ದಾರೆ. ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ದಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ತಮ್ಮ ಅದ್ಭುತ ನಟನಾ ಕೌಶಲವನ್ನು ಪ್ರದರ್ಶಿಸಿ ದ್ದಾರೆ. ಜತೆಗೆ ಕುಸೇಲ್ದರಸೆ ನವೀನ್‌ ಡಿ. ಪಡೀಲ್‌ ಅವರೂ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ…

Read More

ಸೋಮೋಶ್ವರ: ಜೊತೆಗೆ ಟೈಲ್ಸ್ ಕೆಲಸ ಮಾಡುತ್ತಿದ್ದವನೇ ಮನೆಯೊಳಗೆ ನಿಲ್ಲಿಸಿದ್ದ ಸ್ಕೂಟರ್‌ನ್ನು ಎಗರಿಸಿದ ಘಟನೆ ಸೋಮೋಶ್ವರ ದ್ವಾರಕಾನಗರದಲ್ಲಿ ನಡೆದಿದೆ. ಸ್ಕೂಟರ್ ಮಾಲೀಕ ಎಂದಿನ0ತೆ ಸಂಜೆ ಸುಮಾರು 6 ಗಂಟೆ ಅಸುಪಾಸಿನಲ್ಲಿ ವಾಹನವನ್ನು ನಿಲ್ಲಿಸಿದ್ದರು. 7 ಗಂಟೆ ವೇಳೆ ವಾಹನ ನಾಪತ್ತೆಯಾಗಿದೆ. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಜೊತೆಗೆ ಕೆಲಸ ಮಾಡುತ್ತಿದ್ದ ಪರಿಚಿತನಾಗಿರುವ ಮುಕ್ಕಚ್ಚೇರಿ ನಿವಾಸಿ ಶಮೀಮ್ ಯಾನೆ ಶಮ್ಮಿ ಎಂಬಾತ ವಾಹನವನ್ನು ಕದ್ದಿರುವ ಬಗ್ಗೆ ತಿಳಿದುಬಂದಿದೆ. ಅದಲ್ಲದೇ ಇಂದು ವಾಹನವನ್ನು ಕದ್ದು ಕೊಂಡೊಯ್ಯುತ್ತಿದ್ದ ವೇಳೆ ಶಮೀನ್‌ನನ್ನು ಯುವಕರು ಹಿಂಬಾಲಿಸಿ,ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆತ ತಪ್ಪಿಸಿಕೊಂಡು ಹೋಗಿದ್ದಾನೆ.ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆತ ತಪ್ಪಿಸಿಕೊಂಡು ಹೋಗುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

Read More

ಮಂಗಳೂರು, ಜ. 26: ಪೊಲೀಸರು ಹಾಗೂ ಪತ್ರಕರ್ತರು ಸದಾ ಒತ್ತಡದ ಮಧ್ಯೆ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ. ಕ್ರೀಡಾ ಚಟುವಟಿಕೆಗಳಿಗೆ ಸಮಯ ಮೀಸಲಿಡುವುದರಿಂದ ಒತ್ತಡ ನಿವಾರಣೆ ಸಾಧ್ಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕದ್ರಿಯ ಕೆ.ಪಿ.ಟಿ. ಮೈದಾನದಲ್ಲಿ ನಡೆದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪ ರಾಜ್.ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಕೆ.ಪಿ. ಟಿ.ಯ ಪ್ರಾಂಶುಪಾಲ ಹರೀಶ್ ಶೆಟ್ಟಿ ಶುಭ ಹಾರೈಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್.ಕೆ.ಪೂಜಾರಿ, ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ ವಂದಿಸಿದರು. ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ…

Read More

ಉಳ್ಳಾಲ: ಕೋಟೆಕಾರ್ ಬದ್ರಿಯಾ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಮ್ ಮದರಸ ಅಜ್ಜಿನಡ್ಕ ವತಿಯಿಂದ ದೇಶದ 77ನೇ ಗಣ ರಾಜೋತ್ಸವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷರಾದ ಸುಲ್ಯೆಮಾನ್ ಹಾಜಿ ನೆರವೇರಿಸಿದರು. ದಿನದ ಮಹತ್ವದ ಬಗ್ಗೆ ಮಸೀದಿ ಖತೀಬರಾದ ಝುಬೈರ್ ಫ್ಯೆಝಿ,ಮಸೀದಿ ಕಾರ್ಯದರ್ಶಿ ಅಹಮ್ಮದ್ ಅಜ್ಜಿನಡ್ಟ ಮಾತನಾಡಿದರು. ದೇಶದ ಸಂವಿಧಾನದ ಪೀಠಿಕೆಯನ್ನು ಓದಲಾಯಿತು.ಕಾರ್ಯಕ್ರಮದಲ್ಲಿ ಮಸೀದಿ ಉಪಾಧ್ಯಕ್ಷರಾದ ಬಶೀರ್ ಮೊಹಮ್ಮದ್,ಖಾಸಿಂ ಹಿತ್ತಿಲು,ಮಾಜಿ ಅದ್ಯಕ್ಷರಾದ ಕುಂಞ ಅಹಮ್ಮದ್ ಹಾಜಿ,ಕಮಿಟಿ ಸದಸ್ಯರಾದ ಅಬ್ದಲ್ ರಝಕ್,ಅಬ್ದಲ್ಲಾ, ಇಬ್ರಾಹಿಮ್ ಕೋಟೆಕಾರ್ ಗ್ಲೋಬಲ್ ಚಾರಿಟೇಬಲ್ ಟ್ರಸ್ಟಿನ ಸಂಚಾಲಕರಾದ ಇಸ್ಮಾಯಿಲ್ ಸಿ.ಎಚ್ ಮುಂತಾದವರ ಉಪಸ್ಥಿತರಿದ್ದರು. ಮದರಸ ವಿದ್ಯಾರ್ಥಿಗಳಿಗೆ ಮತ್ತು ಸೇರಿದವರಿಗೆ ಗ್ಲೋಬಲ್ ಅದ್ಯಕ್ಷರಾದ ಸಿ.ಎ ಮಹಮ್ಮದ್ ರವರ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

Read More

ಮುಡಿಪು: ಮುಡಿಪುವಿನ ಬಹುಮುಖ ಪ್ರತಿಭೆ, ಏಕಲವ್ಯನಂತೆ ಬದುಕು ಕಟ್ಟಿಕೊಂಡ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಚಿತ್ರಕಲಾವಿದ, ಕೋಬೋರ್ಡ್ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಡಿಪು ಗುಡ್ಡ ಪ್ರದೇಶದ ಪಾಂಡಿಕಟ್ಟ ಎಂಬಲ್ಲಿ ಹೆಂಡತಿ, ಮಗನೊಂದಿಗೆ ವಾಸವಾಗಿದ್ದರು. ತಮ್ಮ ಸ್ವಂತ ಪರಿಶ್ರಮದಿಂದ ಚಿತ್ರಕಲೆ, ಕೀಬೋರ್ಡ್ ಕಲಿತು, ಅನೇಕರಿಗೆ ಕಲೆಯನ್ನು ಧಾರೆ ಎರೆಯುತ್ತಿದ್ದರು. ಯಾವುದೇ ದುಷ್ಚಟಗಳಿಲ್ಲದೇ ಆರಾಮದಾಯಕ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಅದಲ್ಲದೇ ಅನೇಕರ ಕಲಾಜೀವನಕ್ಕೆ ಸ್ಪೂರ್ತಿಯ ಚಿಲುಮೆಯಾಗಿದ್ದ ಸತೀಶ್, ಮುಡಿಪು ಭಾರತಿ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದರು. ಇದೀಗ ಪತ್ನಿ ಹಾಗೂ ಮಗನನ್ನು ಅಗಲಿದ್ದಾರೆ.

Read More

ಉಳ್ಳಾಲ‌: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ‌ ಸ್ಥಳೀಯ ಸಂಸ್ಥೆಯಿಂದ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸ್ಕೌಟ್ ಗೈಡ್ ಮೇಳ ಹಾಗೂ ಕಬ್ ಬುಲ್ ಬುಲ್ ಉತ್ಸವ ಶನಿವಾರ ನಡೆಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ.ಜಿಲ್ಲಾ ಮಾಜಿ ಮುಖ್ಯ ಆಯುಕ್ತ ಡಾ.ಎನ್.ಜಿ.ಮೋಹನ್ ಉದ್ಘಾಟಿಸಿ, ಸ್ಕೌಟ್-ಗೈಡ್ ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಲ್ಲಿ ಜೀವನದುದ್ದಕ್ಕೂ ಶಿಸ್ತು, ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಳಕಳಿ ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಗದೀಶ್ ಶೆಟ್ಟಿ, ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಯನಾ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳಾದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಸ್ವಸ್ತಿಕ್, ವಿದ್ಯಾರತ್ನ ಶಾಲೆಯ ಅನೀಶ್ ಕುಮಾರ್, ಡಾ.ವೈಷ್ಣವಿ ಶೆಟ್ಟಿ, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರತೀಕ್ಷಾ ಇವರನ್ನು ಸನ್ಮಾನಿಸಲಾಯಿತು. ವುಡ್ ಬ್ಯಾಡ್ಜ್ ಪುರಸ್ಕೃತೆ ಪಾನೀರ್ ಅಸ್ಸಿಸಿ ಕೇಂದ್ರೀಯ ಶಾಲೆಯ ಪ್ರಮೀಳಾ ಇವರನ್ನು ಅಭಿನಂದಿಸಲಾಯಿತು.ರೋಪ್ ಕ್ಲೈಮಿಂಗ್, ಬ್ಲೈಂಡ್ ವಾಕ್, ಚಿಮಿಣಿ, ಸ್ವಿಂಗ್, ಕಮಾಂಡೋ ಬ್ರಿಡ್ಜ್,…

Read More