UN NETWORKS ಉಳ್ಳಾಲ: ಯೆನೆಪೋಯ ವಿಶ್ವವಿದ್ಯಾಲಯ ಉನ್ನತ ವ್ಯಾಸಾಂಗಕ್ಕಾಗಿ ವಿದ್ಯಾರ್ಥಿಗಳನ್ನು ಉತ್ತಮ ನಿರ್ದೇಶನದೊಂದಿಗೆ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆ ಯೆನೆಪೋಯ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಯೆನೆಪೋಯ ಮೊಯ್ದೀನ್ ಕುಂಞ ಮೆಮೋರಿಯಲ್ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ , ಯೆನೆಪೋಯ ಫೌಂಡೇಶನ್ ಹಾಗೂ ಯೆನೆಪೋಯ ವಿ.ವಿ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಶೇ.100 ಫಲಿತಾಂಶ ದಾಖಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜ್ಞಾನ ಸಂಪಾದನೆ ಜೀವನದ ಪ್ರಮುಖ ಆಸ್ತಿಯಾಗಿದೆ. ಜ್ಞಾನದಿಂದ ಪ್ರತಿ ಕ್ಷೇತ್ರಗಳಲ್ಲೂ ಸಾಧಿಸಲು ಸಾಧ್ಯ. ಶಿಕ್ಷಣ ಪಡೆಯುವ ಸಮಯ ಎಲ್ಲವನ್ನೂ ಅರಿಯಲು ಅಸಾಧ್ಯ. ಆದರೆ ವೃತ್ತಿಪರ ಬದುಕಿನಲ್ಲಿ ಹಿರಿಯರ ಮಾರ್ಗದರ್ಶನದಂತೆ ಯಶಸ್ಸಿನ ಹಾದಿಯನ್ನು ಅರಿತು ಮುನ್ನಡೆಯಬೇಕಾಗಿರುವುದು ಜವಾಬ್ದಾರಿ. ಪೊಲೀಸರ ಕುರಿತು ಜನರಲ್ಲಿ ಇರುವಂತಹ ದೃಷ್ಟಿಕೋನ ಬದಲಾಗಬೇಕಿದೆ. ಟಿ.ವಿ…
Author: UllalaVani
UN NETWORKS ಉಳ್ಳಾಲ: ಕಡಲ್ಕೊರೆತದಿಂದ ತೀವ್ರ ಹಾನಿಗೊಳಗಾಗುತ್ತಿರುವ ಸುಭಾಷನಗರ, ಕೈಕೋ, ಹಿಲೆರಿಯಾನಗರ ಪ್ರದೇಶಕ್ಕೆ ಶಾಶ್ವತವಾದ, ನೂತನವಾದ ತಡೆಗೋಡೆ ನಿರ್ಮಾಣಕ್ಕೆ ಎಡಿಬಿಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಉಳ್ಳಾಲ ಕಡಲ್ಕೊರೆತಕ್ಕೆ ಒಳಗಾಗುವ ಕಿಲೆರಿಯಾನಗರ, ಸುಭಾಷನಗರ ಭೇಟಿ ನೀಡಿ ಮಾತನಾಡಿದರು. ಮೊಗವೀರಪಟ್ನ, ಕೋಡಿ, ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ಸಂಭವಿಸುತ್ತಲೇ ಇತ್ತು. ಹಂತಹಂತವಾಗಿ ಶಾಶ್ವತ ತಡೆಗೋಡೆ ಕಾಮಗಾರಿ ಕೈಗೊಂಡ ಪರಿಣಾಮ ಇದೀಗ ಆ ಭಾಗಗಳಲ್ಲಿ ಕಡಲ್ಕೊರೆತ ಕಡಿಮೆಯಾಗಿದೆ. ಆದರೆ ಸುಭಾಷನಗರ, ಕೈಕೋ, ಹಿಲೆರಿಯಾನಗರಗಳಲ್ಲಿ ಕಳೆದ ಎರಡು ಮಳೆಗಾಲದಲ್ಲಿ ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಿ, ವ್ಯಾಪಕ ಹಾನಿ ಸಂಭವಿಸುತ್ತಿದೆ. ಅದಕ್ಕಾಗಿ ನೂತನವಾಗಿರುವ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಎಡಿಬಿ ಅನುದಾನ ಬಿಡುಗಡೆಗೊಳಿಸಿದ್ದರೂ, ಟೆಂಡರ್ ಪ್ರಕ್ರಿಯೆಗೆ ಚುನಾವಣಾ ನೀತಿ ಸಂಹಿತೆಯಿಂದ ಅಡ್ಡಿಯಾಗಿದೆ. ಅದಕ್ಕಾಗಿ ಸ್ಥಳಕ್ಕೆ ತುರ್ತಾಗಿ ಭೇಟಿ ನೀಡಿ, ಜನರ ತೊಂದರೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗೆ ತುರ್ತು ಕ್ರಮಕ್ಕೆ ಆದೇಶಿಸುತ್ತೇನೆ. ಅದಕ್ಕಾಗಿ ವಿಶೇಷ ಅನುದಾನವನ್ನು ಮೀಸಲಿಟ್ಟು, ಬರುವ ಮಳೆಗಾಲದಲ್ಲಿ…
UN NETWORKS ಉಳ್ಳಾಲ : ಸ್ಕೂಟರಿನಲ್ಲಿದ್ದ ವಿವಾಹಿತೆಯನ್ನು ಹಿಂಬಾಲಿಸಿದ ಕಿರಾತಕನೋರ್ವ ತಲಪಾಡಿಯ ಪಿಲಿಕೂರು ಸಮೀಪ ನಿರ್ಜನ ಪ್ರದೇಶದಲ್ಲಿ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದ ಆರೋಪಿಯನ್ನು ಎಸಿಪಿ ನೇತೃತ್ವದ ಪೊಲೀಸರ ತಂಡ ನಿನ್ನೆ ಬಂಧಿಸಿದೆ. ಉಪ್ಪಳ ಮೂಲದ ಜೆಪ್ಪು ಸಮೀಪದ ಫ್ಲಾಟಿನಲ್ಲಿರುವ ಮಹಮ್ಮದ್ ಸಾಹಿಲ್ (25) ಬಂಧಿತ. ಎರಡು ದಿನಗಳ ಹಿಂದೆ ಮಂಗಳೂರಿನಿಂದ ತಲಪಾಡಿ ಕಡೆಗೆ ತನ್ನ ಸ್ಕೂಟರಿನಲ್ಲಿ ವಾಪಸ್ಸಾಗುತ್ತಿದ್ದ ವಿವಾಹಿತ ಮಹಿಳೆಯನ್ನು, ತನ್ನ ಸ್ಕೂಟರಿನಲ್ಲಿ ಸಾಹಿಲ್ ಹಿಂಬಾಲಿಸಲು ಆರಂಭಿಸಿದ್ದ. ದಾರಿಮಧ್ಯೆ ಮಹಿಳೆಯಿದ್ದ ಸ್ಕೂಟರ್ ನಿಧಾನವಾಗುತ್ತಿದ್ದಂತೆ, ಸಾಹಿಲ್ `ಹಾಯ್’ ಅಂದಿದ್ದ. ಇದರಿಂದ ಬೆದರಿದ ಮಹಿಳೆ ವೇಗವಾಗಿ ಸ್ಕೂಟರನ್ನು ಚಲಾಯಿಸಿದ್ದಾರೆ. ಇದೇ ವೇಳೆ ಪತಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದರು. ಆದರೆ ತಲಪಾಡಿಯ ಪಿಲಿಕೂರು ನಿರ್ಜನ ಪ್ರದೇಶಕ್ಕೆ ತಲುಪುತ್ತಿದ್ದಂತೆ ಮಹಿಳೆಗೆ ಆರೋಪಿ ಕಿರುಕುಳ ನೀಡಿದ್ದಾನೆ. ಈ ಕುರಿತು ಮಹಿಳೆ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಎಸಿಪಿ ರಾಮರಾವ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಜೆಪ್ಪುವಿನ ಆತನ ಫ್ಲಾಟಿನಿಂದ…
UN NETWORKS ಕುಂಪಲ : ಕುಂಪಲ ಪ್ರದೇಶಕ್ಕೆ ಖಾಸಗಿ ಬಸ್ಸುಗಳ ಅವ್ಯವಸ್ಥೆ ವಿರುದ್ಧ ಗ್ರಾಮಸ್ಥರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರದೇಶಕ್ಕೆ ಖಾಸಗಿ ಬಸ್ಸು ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ವಲಯ ಅಧ್ಯಕ್ಷರ ನಿಯೋಗ ಭೇಟಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು. ಕುಂಪಲ ಬಾಲಕೃಷ್ಣ ಮಂದಿರದಲ್ಲಿ ನಡೆಸಿದ ಸಭೆಯಲ್ಲಿ , ಮಂಗಳೂರಿನಿಂದ ಕುಂಪಲಕ್ಕೆ ಖಾಸಗಿ ಬಸ್ಸುಗಳ ಆರು ಪರ್ಮಿಟ್ ಇವೆ. ಆದರೆ ಇದರಲ್ಲಿ ಕೇವಲ ಮೂರು ಬಸ್ಸುಗಳು ಮಾತ್ರ ವಾರದ ಆರು ದಿನದಲ್ಲಿ ಸಂಚರಿಸಿದರೆ, ಭಾನುವಾರ ಎರಡು ಬಸ್ಸುಗಳು ಮಾತ್ರ ಸೇವೆ ನೀಡುತ್ತಿದೆ. ಇದರಿಂದ ಈ ಭಾಗದ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಈ ಹಿಂದೆ ಪ್ರದೇಶಕ್ಕೆ ಕೆಎಸ್ ಆರ್ ಟಿಸಿ ಬಸ್ಸು ಹಾಕುವಂತೆ ಒತ್ತಾಯ ಕೇಳಿಬಂದಿದ್ದರೂ, ಪರ್ಮಿಟ್ ಹೊಂದಿರುವ ಮಾಲೀಕರು ತಡೆಯಾಜ್ಞೆ ತಂದಿರುವುದರಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ಪರ್ಮಿಟ್ ಇದ್ದರೂ, ಎರಡು ಗಂಟೆಗೊಮ್ಮೆ ಮೂರು ಬಸ್ಸುಗಳು ಕಾರ್ಯಾಚರಿಸುತ್ತಿರುವುದು ಗ್ರಾಮದ ಜನರಿಗೆ ಬಹಳಷ್ಟು ತೊಂದರೆಯಾಗಿದೆ ಅನ್ನುವ ಆರೋಪ ಕೇಳಿಬಂದಿತು. ಇದಕ್ಕೆ ಪ್ರತಿಕ್ರಿಯಿಸಿದ ದ.ಕ…
UN NETWORKS ಕುಂಪಲ : ಜೀವನದಲ್ಲಿ ಎಲ್ಲವೂ ಗೆಲುವು, ಆಗಬೇಕೆಂದೇನೂ ಇಲ್ಲ, ಕಡಿಮೆ ಅಂಕ ಪಡೆದವರು ಧೈರ್ಯಗುಂದಬೇಕಿಲ್ಲ, ಹೆಚ್ಚು ಅಂಕ ಪಡೆದವರು ಅತಿಯಾಗಿ ಬೀಗದೆ ಕಡಿಮೆ ಅಂಕ ಪಡೆದವರಿಗೆ ಸಲಹೆ, ಸಹಕಾರ ನೀಡಿ ಎಂದು ಬಂಟ್ವಾಳ ತಾಲೂಕು ವಿಶೇಷ ಅಗತ್ಯವುಳ್ಳ ಮಕ್ಕಳ ನೋಡೆಲ್ ಅಧಿಕಾರಿ ಸುರೇಖಾ ಕಿವಿಮಾತು ಹೇಳಿದರು. ಕುಂಪಲ ಸರ್ಕಾರಿ ಪ್ರೌಢಶಾಲೆ (ಅರ್.ಎಂ.ಎಸ್.ಎ)ಯಲ್ಲಿ ಗುರುವಾರ ಶಾಲಾಭಿವೃದ್ಧಿ ಸಮಿತಿಯಿಂದ ನಡೆದ ಎಸ್ಸೆಸ್ಸೆಎಲ್ಸಿ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಎಸ್ಸೆಸ್ಸೆಎಲ್ಸಿಯಾದ ಕೂಡಲೇ ಶಿಕ್ಷಣ ಮುಗಿಯಿತು ಎಂದೇನೂ ಇಲ್ಲ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಸಹಕಾರಿಯಾಗುವಂತಹ ರೀತಿಯ ಉದ್ಯೋಗ ಪಡೆದು ಉತ್ತಮ ಪ್ರಜೆಯಾಗಿ ಜೀವನ ಸಾಗಿಸಿ. ಉಪಕಾರ ಮಾಡಲು ಸಾಧ್ಯವಾಗದಿದ್ದರೆ ತೊಂದರೆಯನ್ನಂತೂ ಮಾಡದೆ ಜೀವನ ಸಾಗಿಸುವುದು ಮುಖ್ಯ ಎಂದು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕುಂಪಲ ಮಾತನಾಡಿ, ಇಂದು ಸರ್ಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಕುಂಪಲ ಶಾಲೆಯೂ ವರ್ಷವೂ ಉತ್ತಮ…
UN NETWORKS ಉಳ್ಳಾಲ : ಸ್ಟೂಡೆಂಟ್ ಇಸ್ಲಾಮಿಕ್ ಒರ್ಗನೈಸಷನ್ ಒಫ್ ಇಂಡಿಯಾ ಉಳ್ಳಾಲ ಘಟಕದ ವತಿಯಿಂದ ಎರಡು ದಿನದ ಬೇಸಿಗೆ ಶಿಬಿರವನ್ನು ಬಬ್ಬುಕಟ್ಟೆಯ ಹಿರಾ ಇನ್ಸ್ಟಿಟ್ಯೂಷನ್ ಸಭಾಂಗಣದಲ್ಲಿ ಆಯೋಜಿಸಲಾಯಿತು. ಮಕ್ಕಳನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಬೆಳೆಯಲು ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಎಸ್. ಐ. ಒ ಉಳ್ಳಾಲ ಘಟಕವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಎಸ್. ಐ. ಒ ಜಿಲ್ಲಾ ಆಧ್ಯಕ್ಷ ರಿಝ್ವಾನ್ ಅಜ್ಹರಿ ಕಾರ್ಯಕ್ರಮ ಉದ್ಘಾಟಿಸಿದರು. ಜಮಾತೆ ಇಸ್ಲಾಮಿ ಜಿಲ್ಲಾ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್ ಮತ್ತು ಜಮಾತೆ ಇಸ್ಲಾಮಿ ಉಳ್ಳಾಲ ಮಾಜಿ ಘಟಕಾಧ್ಯಕ್ಷ ಎ ಎಚ್ ಮಹಮೂದ್ ಸಾಹೇಬ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮುಖ್ಯಅತಿಥಿಯಾಗಿ ಆಗಮಿಸಿದ ಜಮಾತೆ ಇಸ್ಲಾಮಿ ಉಳ್ಳಾಲ ಘಟಕಾಧ್ಯಕ್ಷ ಅಬ್ದುಲ್ ಕರೀಂ ಸಮಾರೋಪ ಭಾಷಣವನ್ನು ಮಾಡಿದರು. ಸಾಮಾಜಿಕ ಕಾರ್ಯಕರ್ತ ಸಿ ಎಚ್ ಅಬ್ದುಲ್ ಸಲಾಂ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಎಸ್. ಐ. ಒ ಉಳ್ಳಾಲ ಘಟಕಾಧ್ಯಕ್ಷ…
UN NETWORKS ದೇರಳಕಟ್ಟೆ : ಅಮೆಚೂರು ಕಬ್ಬಡಿ ಅಸೋಶಿಯೇಷನ್ ಮತ್ತು ಕಾಸ್ಕ್ ನರಿಂಗಾನ ಆಯೋಜಿಸಿದ ಆರ್ಮಿ ಟ್ರೋಫಿ 2019 ಇದರ ಪ್ರಯುಕ್ತ ಶಮಾ ಗೋಲ್ಡ್, ಸಹದ ಟ್ರೇಡರ್ಸ್ ಮತ್ತು ಸಹರಾ ಸ್ಪೋರ್ಟ್ಸ್ ಪ್ರಾಯೋಜಕತ್ವ ದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಹರಾ ಸ್ಪೋರ್ಟ್ಸ್ ಕ್ಲಬ್ ದೇರಳಕಟ್ಟೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಶಿಬಿರವನ್ನು ಅಶ್ರಫ್ ಮಲಾರ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಕ್ಬಾಲ್ ಶಮಾ ಗೋಲ್ಡ್ ದೇರಳಕಟ್ಟೆ ವಹಿಸಿ ಮಾತನಾಡುತ್ತಾ ಅನ್ನದಾನ ಶ್ರೇಷ್ಟ ದಾನ. ರಕ್ತ ದಾನ ಜೀವ ದಾನ ಎಂದರು. ವೇದಿಕೆಯಲ್ಲಿ ಹಸೈನಾರ್ ಕುಕ್ಕಾಜೆ, ಸಿದ್ದೀಕ್ ಮಂಜೇಶ್ವರ , ನವಾಝ್ ಕಲ್ಲರಕೋಡಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 28 ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿರ್ವಹಕರಾದ ಫಾರೂಕ್ ಬಿಗ್ ಗ್ಯಾರೇಜ್ , ದಾವೂದ್ ಬಜಾಲ್, ಅಲ್ತಾಫ್ ಉಳ್ಳಾಲ, ಫಯಾಝ್…
UN NETWORKS ಉಳ್ಳಾಲ : ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮಿ ಮತ್ತು ಅಮ್ಮನವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ವೈದಿಕ ನೇತೃತ್ವದಲ್ಲಿ ಕೋಟೆಕಾರು ರಾಮಕ್ಷತ್ರಿಯ ಜನಾಂಗದ ದೇವರ ಅರಮನೆಯ ಮೂರನೆಯ ವಾರ್ಷಿಕ ಪ್ರತಿಷ್ಠಾ ಉತ್ಸವ ನಡೆಯಿತು. ಪೂಜ್ಯ ಸ್ವಾಮಿ ಮತ್ತು ಅಮ್ಮನವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ತಂತ್ರಿಗಳ ನೇತೃತ್ವದಲ್ಲಿ ನಾಗ ಸಾನಿಧ್ಯದಲ್ಲಿ ವಿಶೇಷ ಪೂಜೆ, ಶ್ರೀ ಮಹಾಕಾಲಭೈರವೇಶ್ವರ, ಶ್ರೀ ಶಾಂತಾದುರ್ಗ ಶ್ರೀ ವ್ಯಾಘ್ರಚಾಮುಂಡೇಶ್ವರ ಸನ್ನಿಧಾನದಲ್ಲಿ ಕಲಶಾಭಿಷೇಕ ಸಹಿತ ವಿಶೇಷ ಪೂಜೆ ನೆರವೇರಿತು.
UN NETWORKS ಕೈರಂಗಳ : ಕೈರಂಗಳ ಪುಣ್ಯಕೋಟಿ ನಗರದ ಶಾರದಾಗಣಪತಿ ವಿದ್ಯಾಕೇಂದ್ರದ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೂರು ಶೇ. ಫಲಿತಾಂಶ ದಾಖಲಿಸಿದ್ದಾರೆ. ಪರೀಕ್ಷೆಗೆ ಹಾಜರಾದ 41ವಿದ್ಯಾರ್ಥಿಗಳ ಪೈಕಿ 11 ವಿಶಿಷ್ಠ ಶ್ರೇಣಿ, 24 ಪ್ರಥಮ ದರ್ಜೆ ಹಾಗೂ 5ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
UN NETWORKS ಉಳ್ಳಾಲ: ಮಂಗಳೂರು – ಕುಂಪಲ ನಡುವೆ ಒಟ್ಟು 6 ನಗರ ಸಾರಿಗೆ ಬಸ್ಸುಗಳು ಓಡಾಟ ನಡೆಸುತ್ತಿದ್ದು ಇದೀಗ ಅದರಲ್ಲಿ ಮೂರು ಬಸ್ಸುಗಳು ಓಡಾಟ ನಿಲ್ಲಿಸುದುದರ ಪರಿಣಾಮವಾಗಿ ಕುಂಪಲ ಪರಿಸರದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಕುಂಪಲ ಪರಿಸರದ ಶಾಲಾ,ಕಾಲೇಜು ಮಕ್ಕಳು,ಬಡ ಕೂಲಿ ಕೆಲಸಗಾರರು ನಗರಸಾರಿಗೆ ಬಸ್ಸುಗಳನ್ನೇ ನೆಚ್ಚಿಕೊಂಡಿದ್ದು,ಆದಷ್ಟು ಬೇಗನೆ ಕುಂಪಲ ಪ್ರದೇಶಕ್ಕೆ ನಗರ ಸಾರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ದಿನೇಶ್ ಕುಂಪಲ ಅವರು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗೆ ಮನವಿ ನೀಡಿದರು.

