ಉಳ್ಳಾಲ: ಕುತ್ತಾರು ಜಂಕ್ಷನ್ ಅಭಿವೃದ್ಧಿಗೆ ನೀಲಿನಕ್ಷೆ ತಯಾರಾಗಿದೆ. ಅಭಿವೃದ್ಧಿ ಸಂದರ್ಭ ರಸ್ತೆ ಬದಿಯ ಮೀನು ಮತ್ತು ತರಕಾರಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕು. ಅವರಿಗಾಗಿ ಮಿನಿ ಮಾರುಕಟ್ಟೆಯನ್ನು ಜಂಕ್ಷನ್ ನಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸರಕಾರದ ಆದ್ಯತೆಯಂತೆ ಅಂಗಡಿಗಳನ್ನು ಪಡೆದುಕೊಳ್ಳಬಹುದು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಕುತ್ತಾರು ಜಂಕ್ಷನ್ನಿನಲ್ಲಿ ಮುನ್ನೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೈಗೊಂಡಿರುವ ಶ್ರಮಾದಾನ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.ಕೋವಿಡ್ -19 ಕಾರ್ಯಾಚರಣೆ ನಡುವೆಯೂ ರಜೆಯ ದಿನವನ್ನು ಉಪಯೋಗಿಸಿಕೊಂಡು ಗ್ರಾ.ಪಂ ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿಕೊಂಡು ಶ್ರಮಾದಾನ ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಈ ಮೂಲಕ ಗಾಂಧೀಜಿಯ ಕನಸನ್ನು ನನಸುಗೊಳಿಸುವ ಕಾರ್ಯವಾಗಿದೆ ಎಂದ ಅವರು ರೂ. 20 ಕೋಟಿ ಅನುದಾನದಲ್ಲಿ ದೇರಳಕಟ್ಟೆಯಿಂದ ಕುತ್ತಾರು ಜಂಕ್ಷನ್ ಚತುಷ್ಪಥ ರಸ್ತೆಗೆ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಈ ಸಂದರ್ಭ ಜನನಿಬಿಡ ಮತ್ತು ಹಲವು ಮಳಿಗೆಗಳ ಕೇಂದ್ರ ಸ್ಥಾನ ಆಗಿರುವ ಕುತ್ತಾರು ಜಂಕ್ಷನ್ ಅಭಿವೃದ್ಧಿಯ ನೀಲಿನಕ್ಷೆಯನ್ನು ತಯಾರಿಸಲಾಗಿದೆ. ಅಭಿವೃದ್ಧಿ…
Author: UllalaVani
ಉಳ್ಳಾಲ: ತೊಕ್ಕೊಟ್ಟು ಮುಖ್ಯರಸ್ತೆಯಿಂದ ಭಟ್ನಗರ, ಚೆಂಬುಗುಡ್ಡೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಮೂರು ವರ್ಷಗಳ ಹಿಂದೆಯೇ ಅನುದಾನ ದೊರೆತರೂ , ಗುತ್ತಿಗೆದಾರರು ಕೆಲಸವನ್ನು ನಿಧಾನವಾಗಿ ಮಾಡಿದ್ದರಿಂದಾಗಿ ವಿಳಂಬವಾಗಿತ್ತು. ಇದೀಗ ಸುಸಜ್ಜಿತ ರಸ್ತೆಯ ನಿರ್ಮಾಣ ಸ್ಥಳೀಯ ಯುವಕರ ಮುತುವರ್ಜಿಯಿಂದ ನಡೆಯುತ್ತಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ತೊಕ್ಕೊಟ್ಟು- ಭಟ್ನಗರ- ಚೆಂಬುಗುಡ್ಡೆ ರಸ್ತೆ ಅಭಿವೃದ್ಧಿ ಕಾರ್ಯವನ್ನು ಭಾನುವಾರ ವೀಕ್ಷಿಸಿ ಮಾತನಾಡಿದರು.ರಸ್ತೆ ಅವ್ಯವಸ್ಥೆ ಕುರಿತು ಸ್ಥಳೀಯ ಯುವಕರು, ಊರಿನವರು, ಗುತ್ತಿಗೆದಾರರನ್ನು ಮತ್ತು ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಅದರಂತೆ ಅವರಿಗೆ ಸ್ಪಷ್ಟೆ ಸೂಚನೆಯನ್ನು ನೀಡಿದ ಪರಿಣಾಮ ಕಾಮಗಾರಿ ಆರಂಭವಾಗಿದೆ. ಅದರ ಗುಣಮಟ್ಟವನ್ನು ಉಳ್ಳಾಲ ನಗರಸಭೆ ಆಡಳಿತ ನೋಡುತ್ತಿದೆ. ಹಿಂದೂ ರುದ್ರಭೂಮಿ, ಜುಮಾ ಮಸೀದಿ ಸಂಪರ್ಕಿಸುವ ಪ್ರಮುಖ ಲಿಂಕ್ ರಸ್ತೆ ಇದಾಗುವುದರಿಂದ ಬಹಳಷ್ಟು ಮಂದಿ ರಸ್ತೆಯನ್ನು ಅವಲಂಬಿತರಾಗಿದ್ದಾರೆ. ಶೀಘ್ರವೇ ಕಾಮಗಾರಿ ಪೂರ್ಣಗೊಂಡು ತೊಕ್ಕೊಟ್ಟುವಿನ ಮಾದರಿ ರಸ್ತೆಯಾಗಲಿ ಎಂದರು.ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಐಯೂಬ್ ಮಂಚಿಲ,…
ಉಳ್ಳಾಲ: ಪ್ರತಿ ತಾಲೂಕು ಆಸ್ಪತ್ರೆಗಳನ್ನು ಬೇರೆ ಬೇರೆ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯವರು ನಿರ್ವಹಿಸಬೇಕು. ಈ ಮೂಲಕ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಬರುವಂತಹ ರೋಗಿಗಳ ಒತ್ತಡವನ್ನು ಕಡಿತಗೊಳಿಸಬೇಕು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೋವಿಡ್-19 ನಿರ್ವಹಣೆಗೆ ಸಜ್ಜುಗೊಳ್ಳುತ್ತಿರುವ ಆಸ್ಪತ್ರೆ ವಠಾರವನ್ನು ವೀಕ್ಷಿಸಿ ಮಾತನಾಡಿದರು.ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರವನ್ನು ತುರ್ತು ಸಂದರ್ಭ ಕೋವಿಡ್ ಕೇರ್ ಆಸ್ಪತ್ರೆಯಾಗಿ ನಿರ್ಮಿಸಲು ಹಂತ ಹಂತದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಲಸಿಕೆ, ಗರ್ಭಿಣಿಯರು ಸಹಿತ ನಿತ್ಯ ಬರುವ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವಿಭಾಗವನ್ನು ಮಾಡಲಾಗುತ್ತಿದೆ.ಹೆರಿಗೆ, ಇಂಜೆಕ್ಷನ್ ಬರುವವರಿಗೆ ಬೇರೆಯೇ ಜಾಗದಲ್ಲಿ ಪ್ರವೇಶ ಮತ್ತು ಚಿಕಿತ್ಸೆ. ಕೋವಿಡ್ ಸಂಬಂಧಿಸಿದ ರೋಗಿಗಳಿಗೆ ಬೇರೆಯದೇ ಆದ ಫಿವರ್ ಕ್ಲಿನಿಕ್, ಪ್ರವೇಶ ಹಾಗೂ ಆಕ್ಸಿಜನ್ ಲೆವೆಲ್ ಕಡಿಮೆ ಆಗಿ ಬಂದವರನ್ನು ತಕ್ಷಣ ಮೇಲಿನ ಮಹಡಿಯಲ್ಲಿ ದಾಖಲುಗೊಳಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.ವೈದ್ಯರ ಸೇವೆ ಹಾಗೂ ಆಸ್ಪತ್ರೆಯ ಸಂಪೂರ್ಣ ನಿರ್ವಹಣೆಯನ್ನು ಯೆನೆಪೋಯ ಸಂಸ್ಥೆ ವಹಿಸಿಕೊಂಡಿದೆ. 20 ನರ್ಸುಗಳು, 12 ವೈದ್ಯರುಗಳು,…
ಉಳ್ಳಾಲ: ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಭಕ್ತಾಧಿಗಳ ದಿಕ್ಕು ತಪ್ಪಿಸುವ ಪ್ರಯತ್ನಗಳನ್ನು ಒಂದು ತಂಡ ಮಾಡುತ್ತಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಆರೋಪಿಸಿದ್ದಾರೆ.ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ ವಠಾರದಲ್ಲಿ ಸೋಮವಾರ ವ್ಯವಸ್ಥಾಪನಾ ಸಮಿತಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಮೇ.23 ರಂದು ವ್ಯವಸ್ಥಾಪನಾ ಸಮಿತಿ ಭಂಡಾರಮನೆಗೆ ಹಾಕಿದ ಬೀಗವನ್ನು ಒಡೆದು ಅಕ್ರಮವಾಗಿ ಪ್ರವೇಶಗೈದ ಮುತ್ತಣ್ಣ ಶೆಟ್ಟಿ ಎಂಬವರು ಪೂಜೆ ನೆರವೇರಿಸಿದ್ದಾರೆ. ಕೊರೊನಾ ಕಾರಣದಿಂದ ನಿಲ್ಲಿಸಲ್ಪಟ್ಟ ಜಾತ್ರೆಗೆ ಬದಲಾಗಿ ಹೋಮ ಮಾಡಲು ಸಿದ್ಧತೆ ಮಾಡಲಾಗಿತ್ತು . ಆದರೆ ಧಾರ್ಮಿಕ ದತ್ತಿ ಇಲಾಖೆ ವ್ಯವಸ್ಥಾಪನಾ ಸಮಿತಿ ಮೂಲಕ ಭಂಡಾರಮನೆಯ ಬಾಗಿಲಿಗೆ ಹಾಕಿಸಿದ್ದ ಬೀಗದ ಮೇಲೆ ಮುತ್ತಣ್ಣ ಶೆಟ್ಟಿ ಎಂಬವರು ಮತ್ತೊಂದು ಬೀಗ ಹಾಕಿದ್ದರು. ಇದರಿಂದ ಹೋಮ ನೆರವೇರಿಸಲು ಅಸಾಧ್ಯವಾಗಿತ್ತು.ಅದಕ್ಕಾಗಿ ಅರ್ಚಕ ಕಾರಂತರ ಉಪಸ್ಥಿತಿಯಲ್ಲಿ ಹೊರಗಿನಿಂದಲೇ ವ್ಯವಸ್ಥಾಪನಾ ಸಮಿತಿ ಪ್ರಾರ್ಥನೆ ನಡೆಸಿ ವಾಪಸ್ಸಾಗಿದ್ದರು. ಮರುದಿನ ಮುತ್ತಣ್ಣ…
ಉಳ್ಳಾಲ: ಜೆಸಿಐ ಮಂಗಳಗಂಗೋತ್ರಿ ವತಿಯಿಂದ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಜರಗಿದ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಸಮಾರಂಭದಲ್ಲಿ 35 ವರ್ಷಗಳ ಕಾಲ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ, ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಐದು ವರ್ಷಗಳಿಂದ ಸೇವೆಗೈದು, ಕೋವಿಡ್ ಎರಡನೇ ಅಲೆಯ ಸಂದರ್ಭ ಎರಡು ತಿಂಗಳುಗಳ ರಜೆಯನ್ನು ಪಡೆಯದೆ ಕರ್ತವ್ಯಕ್ಕೆ ಹಾಜರಾದ ಹಾಗೂ ಮೇ.31 ರಂದು ನಿವೃತ್ತಿ ಹೊಂದಲಿರುವ ಯೋಗಿನಿ ಕೆ.ಟಿ ಸುವರ್ಣ ಇವರನ್ನು ಅಭಿನಂದಿಸಲಾಯಿತು.ಈ ಸಂದರ್ಭ ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರು , ರೇಚಲ್ ಸಂಸ್ಥೆಯ ನಿರ್ದೇಶಕಿ ನಿರ್ಮಾ ಡಿಸೋಜ, , ಸ್ಥಾಪಕ ಅಧ್ಯಕ್ಷ ತ್ಯಾಗಂ ಹರೇಕಳ, ಕೊಣಾಜೆ ಮಂಗಳಗಂಗೋತ್ರಿ ಜೆಸಿಐ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ. ಮಿಸ್ರಿಯಾ, ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಜಲೀಲ್ ಇಬ್ರಾಹಿಂ, ಸಿಸ್ಟರ್ ಮರಿಯಮ್ಮ, ಪೆÇಸಕುರಲ್ ಸಂಸ್ಥೆ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಕಾರ್ಯದರ್ಶಿ ಪ್ರತಿಮಾ…
ಉಳ್ಳಾಲ: ಕುತ್ತಾರು ಜಂಕ್ಷನ್ ಅಭಿವೃದ್ಧಿಗೆ ನೀಲಿನಕ್ಷೆ ತಯಾರಾಗಿದೆ. ಅಭಿವೃದ್ಧಿ ಸಂದರ್ಭ ರಸ್ತೆ ಬದಿಯ ಮೀನು ಮತ್ತು ತರಕಾರಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕು. ಅವರಿಗಾಗಿ ಮಿನಿ ಮಾರುಕಟ್ಟೆಯನ್ನು ಜಂಕ್ಷನ್ ನಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸರಕಾರದ ಆದ್ಯತೆಯಂತೆ ಅಂಗಡಿಗಳನ್ನು ಪಡೆದುಕೊಳ್ಳಬಹುದು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಕುತ್ತಾರು ಜಂಕ್ಷನ್ನಿನಲ್ಲಿ ಮುನ್ನೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೈಗೊಂಡಿರುವ ಶ್ರಮಾದಾನ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.ಕೋವಿಡ್ -19 ಕಾರ್ಯಾಚರಣೆ ನಡುವೆಯೂ ರಜೆಯ ದಿನವನ್ನು ಉಪಯೋಗಿಸಿಕೊಂಡು ಗ್ರಾ.ಪಂ ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿಕೊಂಡು ಶ್ರಮಾದಾನ ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಈ ಮೂಲಕ ಗಾಂಧೀಜಿಯ ಕನಸನ್ನು ನನಸುಗೊಳಿಸುವ ಕಾರ್ಯವಾಗಿದೆ ಎಂದ ಅವರು ರೂ. 20 ಕೋಟಿ ಅನುದಾನದಲ್ಲಿ ದೇರಳಕಟ್ಟೆಯಿಂದ ಕುತ್ತಾರು ಜಂಕ್ಷನ್ ಚತುಷ್ಪಥ ರಸ್ತೆಗೆ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಈ ಸಂದರ್ಭ ಜನನಿಬಿಡ ಮತ್ತು ಹಲವು ಮಳಿಗೆಗಳ ಕೇಂದ್ರ ಸ್ಥಾನ ಆಗಿರುವ ಕುತ್ತಾರು ಜಂಕ್ಷನ್ ಅಭಿವೃದ್ಧಿಯ ನೀಲಿನಕ್ಷೆಯನ್ನು ತಯಾರಿಸಲಾಗಿದೆ. ಅಭಿವೃದ್ಧಿ…
ಉಳ್ಳಾಲ: ಅಂಬ್ಲಮೊಗರು ಜನತೆಗೆ ನೀರಿನ ಸಮಸ್ಯೆ ಉದ್ಭವವಾದಾಗ ಗ್ರಾ.ಪಂ ಆಡಳಿತ ಮುಂದೆ ನಿಂತು ಕೊಳವೆ ಬಾವಿ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಮೂಲಕ ಕುಡಿಯುವ ನೀರಿಗಾಗಿ ಇಡಲಾದ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಲಾಗಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಅಂಬ್ಲಮೊಗರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಕ ಜಂಕ್ಷನ್ ಸಮೀಪ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಕೊಳವೆ ಬಾವಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.ಉಪಕಾರ ಮಾಡಿದ ಸಂಸ್ಕೃತಿಯನ್ನು ಮರೆಯುವ ಜನರಲ್ಲ ಅಂಬ್ಲಮೊಗರು ಗ್ರಾಮದವರು. ಈ ಭಾಗದ ಮಕ್ಕಳಿಂದ ವಯಸ್ಸಾದವರಿಗೆ ಅಂಬ್ಲಮೊಗರು ಗ್ರಾಮದ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದೆ ಎಂಬುದು ಗೊತ್ತಿದೆ. ಈ ನಿಟ್ಟಿನಲ್ಲಿ ಜನ ಎಂದಿಗೂ ಕಾಂಗ್ರೆಸನ್ನು ಮರೆಯಲು ಅಸಾಧ್ಯ. ಊರಿನ ಹಿರಿಯರಿಂದ ಕಿರಿಯರವರೆಗೆ ತಾಳ್ಮೆಯಿಂದ ಸಹಕರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದೆಯೂ ಹಂತಹಂತವಾಗಿ ಅಭಿವೃದ್ಧಿ ಕಾರ್ಯ ಮುಂದುವರಿಯಲಿದೆ ಎಂದರು.ಈ ವೇಳೆ ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷೆ ಲತಾ, ಉಪಾಧ್ಯಕ್ಷ ಇಕ್ಬಾಲ್, ತಾ.ಪಂ ಮಾಜಿ ಸದಸ್ಯ ಸುದರ್ಶನ್ ಶೆಟ್ಟಿ , ಗ್ರಾ.ಪಂ ಸದಸ್ಯರುಗಳಾದ ಸುಗಂದ್ ಶಟ್ಟಿ, ಸುಭಾಷ್ ಶೆಟ್ಟಿ, ರವಿ ಪೂಜಾರಿ,…
ಉಳ್ಳಾಲ: ಸಮುದ್ರದ ದಡಕ್ಕೆ ಮೀನುಗಾರಿಕಾ ಬೋಟ್ ಅಪ್ಪಳಿಸಿರುವ ಘಟನೆ ಉಳ್ಳಾಲದ ಕೋಡಿ ಸಮುದ್ರ ತೀರದಲ್ಲಿ ಭಾನುವಾರ ತಡರಾತ್ರಿ 1.30 ಗಂಟೆಗೆ ನಡೆದಿದೆ. ಸಮುದ್ರ ಮಧ್ಯೆ ಮೀನುಗಾರಿಕೆಗೆಂದು (ಕೊಳಾಯಿ )ನಿಲ್ಲಿಸಿದ್ದ ಸಂದರ್ಭ ಹಗ್ಗ ತುಂಡಾಗಿ ದಡಕ್ಕೆ ಅಪ್ಪಳಿಸಿದೆ ಎಂದು ಬೋಟ್ ಮಾಲೀಕರು ತಿಳಿಸಿದ್ದಾರೆ.ತಮಿಳು ಮೂಲದ ಅನೀಸ್, ಸೂಸರಾಜ್, ಸಲೀಂ, ಮೊಯ್ದೀನ್, ರಾಜ್, ಜಾಜ್9 ,ರಾಜೀವ್ ಗಾಂಧಿ, ತಂಗಾರ್, ಬನ್ನಾನ್ ರಕ್ಷಣೆಗೊಳಗಾದವರು.ಬೋಳಾರದ ಫಾರುಕ್ ಮತ್ತು ಉಳ್ಳಾಲ ಮುಕ್ಕಚ್ಚೇರಿಯ ಅಶ್ರಫ್ ಹೆಚ್. ಎಂಬವರಿಗೆ ಸೇರಿದ ‘ಅಝ್ನಾನ್’ ಹೆಸರಿನ ಮೀನುಗಾರಿಕಾ ಬೋಟ್ ದಡಕ್ಕೆ ಅಪ್ಪಳಿಸಿದೆ. ಶನಿವಾರ ರಾತ್ರಿ 10 ಗಂಟೆ ವೇಳೆಗೆ 10 ಜನ ಮೀನುಗಾರರಿದ್ದ ಬೋಟ್ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಸಮುದ್ರದ ಮಧ್ಯೆ ಬೋಟನ್ನು ಕೊಳಾಯಿ ಹಾಕಿ ನಿಲ್ಲಿಸಲಾಗಿತ್ತು. ಈ ವೇಳೆ ಜೋರಾಗಿ ಬೀಸಿದ ಗಾಳಿಗೆ ಹಗ್ಗ ತುಂಡಾಗಿ ಉಳ್ಳಾಲ ಕೋಡಿ ಸಮುದ್ರ ತೀರದತ್ತ ಧಾವಿಸಿದ ಬೋಟ್ ದಡಕ್ಕೆ ಅಪ್ಪಳಿಸಿದೆ. ಸ್ಥಳೀಯ ಮನೆಮಂದಿಗೆ ಸಿಡಿಲು ಬಡಿದಂತಹ ಸದ್ದು ಕೇಳಿ ಹೊರನೋಡಿದಾಗ ಮೀನುಗಾರಿಕಾ ಬೋಟ್ ಕಡಲ್ಕೊರೆತ ತಡೆಗೆ…
ಉಳ್ಳಾಲ: ಕಾರಣಿಕ ಕ್ಷೇತ್ರ ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಡ ಮುಂಡತ್ತಾಯ ದೈವಸ್ಥಾನದ ವಾರ್ಷಿಕ ಜಾತ್ರೆ ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಈ ಬಾರಿಯೂ ರದ್ದುಗೊಳಿಸಲಾಗಿದೆ.ಕಳೆದ ವರ್ಷವೂ ರದ್ದಾಗಿದ್ದು, ಕಳೆದ ವರ್ಷ ಜಾತ್ರೆ ರದ್ದಾದ ಕಾರಣಕ್ಕೆ ಪ್ರಾಯಶ್ಚಿತ್ತ ರೂಪದಲ್ಲಿ ಒಂದು ತಿಂಗಳ ಹಿಂದೆ ಜಾತ್ರೆ ನಡೆಸಲು ಮುಜರಾಯಿ ಇಲಾಖೆ ಅನುಮತಿ ನೀಡಿತ್ತು. ಆದರೆ ಈ ಬಾರಿಯೂ ಕೊರೊನಾ ಮಹಾಮಾರಿ ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊರಡಿಸಿರುವ ಆದೇಶಗಳ ಹಿನ್ನೆಲೆಯಲ್ಲಿ ಜಾತ್ರೆ ರದ್ದಾಗಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಮತ್ತು ಆಡಳಿತ ಮಂಡಳಿ ಹಾಗೂ ಊರ ಹತ್ತು ಸಮಸ್ತರು ಜೊತೆ ಸೇರಿ ದೈವಗಳಲ್ಲಿ ಕ್ಷಮಾಪಣೆ ಬೇಡಿ ಇಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

