Author: UllalaVani

Kannada News From Coastal Karnataka

ಮುಡಿಪು: ಮುಡಿಪು ಪ್ರದೇಶದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಶ್ರೀ ಭಾರತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 2026–2027ನೇ ಶೈಕ್ಷಣಿಕ ಸಾಲಿನ Pre-KG ರಿಂದ 10ನೇ ತರಗತಿ ವರೆಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. “ಪ್ರತಿ ಕನಸುಗಾರ ಬಾಲಕನಿಗೂ ಶೈಕ್ಷಣಿಕ, ಕ್ರೀಡಾ ಹಾಗೂ ಸಾಹಸ ಚಟುವಟಿಕೆಗಳ ಸಮನ್ವಯ” ಎಂಬ ಉದ್ದೇಶದೊಂದಿಗೆ ಸಂಸ್ಥೆ ವಿದ್ಯಾರ್ಥಿಗಳ ತಲೆ, ಹೃದಯ ಮತ್ತು ಕೈಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುತ್ತಿದೆ.ಶಾಲೆಯಲ್ಲಿ ಅನುಭವಿ ಮತ್ತು ಉತ್ತಮ ತರಬೇತಿ ಪಡೆದ ಶಿಕ್ಷಕ ವೃಂದ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತಿದೆ. ವಿಶಾಲವಾದ ಆಟದ ಮೈದಾನ, ಸಮೃದ್ಧ ಗ್ರಂಥಾಲಯ ಸೌಲಭ್ಯ, ಸಜ್ಜಿತ ಕಂಪ್ಯೂಟರ್ ಲ್ಯಾಬ್ ಹಾಗೂ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗಳು ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುತ್ತವೆ. ಶಾಲಾ ವಾಹನದ ಸೌಲಭ್ಯವೂ ಲಭ್ಯವಿದ್ದು, ದೂರದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಹ ಅನುಕೂಲವಾಗಿದೆ.ಕ್ರೀಡೆಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದ್ದು, ನಿಧಾನ ಕಲಿಯುವ ಹಾಗೂ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ, ಸಂಗೀತ, ನೃತ್ಯ,…

Read More

ಮುಡಿಪು: ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಪ್ರದೇಶದಲ್ಲಿರುವ ‘ಬ್ರಹ್ಮಶ್ರೀ ನಿಲಯ’ ಮನೆಗೆ ವಿದ್ಯುತ್ ಸಂಪರ್ಕ ಒದಗಿಸುವುದರ ಜೊತೆಗೆ, ಮನೆಗೆ ಕಿಟಕಿ–ಬಾಗಿಲು ಅಳವಡಿಸಲು ಅಗತ್ಯವಾದ ಆರ್ಥಿಕ ಸಹಾಯ ನೀಡಿದ ಸಹೃದಯಿ ದಾನಿಗಳಿಗೆ ಕೃಷ್ಣಮ್ಮ ರಂಗನಾಥ್ ಕುಕ್ಕದಕಟ್ಟೆ ಸೈಟ್ ಅವರು ಹೃದಯಾಂತರಾಳದ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.ಮನೆಯ ಮೂಲಭೂತ ಸೌಕರ್ಯಗಳ ಕೊರತೆಯನ್ನು ಮನಗಂಡು, ಸಮಾಜಮುಖಿ ಚಿಂತನೆಯೊಂದಿಗೆ ದಾನಿಗಳು ಒಗ್ಗೂಡಿ ಸಹಾಯಹಸ್ತ ಚಾಚಿರುವುದು ಶ್ಲಾಘನೀಯವಾಗಿದೆ. ವಿಶೇಷವಾಗಿ ಸರಕಾರಿ ಪ್ರೌಢಶಾಲೆ ಮುಡಿಪು ಕುರ್ನಾಡು ಇದರ 2000–2001ನೇ ಸಾಲಿನ ಹಳೆ ವಿದ್ಯಾರ್ಥಿಗಳು ಒಂದಾಗಿ ಮಾನವೀಯತೆ ಮೆರೆದಿರುವುದು ಗಮನಾರ್ಹವಾಗಿದೆ.ಸಹಾಯ ಮಾಡಿದ ದಾನಿಗಳಲ್ಲಿ ಶಿಲ್ಪಾ ಪೂಜಾರಿ (ತೊಕ್ಕೊಟ್ಟು), ನೃತ್ಯ ಶೆಟ್ಟಿ (ಮುಂಬಯಿ), ಚೈತ್ರಾ ಪೂಜಾರಿ (ದುಬೈ), ಆಸಿಫ್ ಫಜೀರು, ಮಿಲನ್ ಪೂಜಾರಿ (ಬೆಂಗಳೂರು), ಹಂಝ (ದುಬೈ), ಮನೋಜ್ ಶೆಟ್ಟಿ (ಕೆಳಗಿನ ನಾರ್ಯ), ದಿವ್ಯರಾಜ್ ಶೆಟ್ಟಿ (ತೊಕ್ಕೊಟ್ಟು), ರಾಜೀವ ಪೂಜಾರಿ (ದುಬೈ), ಸಿದ್ಧಿಕ್ ಮೂಳೂರು, ವಿದ್ಯಾಧರ ಶೆಟ್ಟಿಗಾರ್ (ತಲೆಕ್ಕಿ), ರಾಜೇಶ್ ದುರ್ಗಾಲಾಪು (ಸೈಟ್), ಗಣೇಶ್ ಸಾಲಿಯಾನ್ಸ್ – ದಿಶಾ ಎಲೆಕ್ಟಿಕಲ್ (ಬೋಳ್ಯಾರು), ಕೆ.ಎಚ್. ಸಿದ್ದಿಕ್ (ಮುಡಿಪು), ಲೋಹಿತ್…

Read More

ಮುಡಿಪು : ಮುಡಿಪಿನ ಸಂತ ಜೋಸೆಫ್ ವಾಜ್ ದೇವಾಲಯದ ನೂತನ ಪಾಲನಾ ಪರಿಷತ್ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನೆರವೇರಿತು. ಈ ಸಂದರ್ಭದಲ್ಲಿ ಅರುಣ್ ಡಿಸೋಜ ಉಪಾಧ್ಯಕ್ಷರಾಗಿ, ರೋಶನ್ ಡಿಸೋಜ ಕಾರ್ಯದರ್ಶಿಯಾಗಿ ಹಾಗೂ ಜೋಯಲ್ ಡಿಸೋಜ ಸರ್ವ ಆಯೋಗ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.ನೂತನ ಪದಾಧಿಕಾರಿಗಳಿಗೆ ನಿಕಟಪೂರ್ವ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಕಾರ್ಯಾವಧಿ ಯಶಸ್ವಿಯಾಗಲೆಂದು ಹಾರೈಸಿದರು. ದೇವಾಲಯದ ಅಭಿವೃದ್ಧಿ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ವಿಸ್ತರಣೆಗಾಗಿ ನೂತನ ತಂಡ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು. ಈ ಸಂದರ್ಭ ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ), ಮುಡಿಪು ಘಟಕದ ಪ್ರತಿನಿಧಿಗಳು ಉಪಸ್ಥಿತರಿದ್ದು ಶುಭಾಶಯ ಕೋರಿದರು.ಇಲ್ಲಿನ ಸಂತ ಜೋಸೆಫ್ ವಾಜ್ ದೇವಾಲಯದ ನೂತನ ಪಾಲನಾ ಪರಿಷತ್ತಿಗೆ ಆಯ್ಕೆಯಾಗಿರುವ ಮೂವರು ಪದಾಧಿಕಾರಿಗಳು ತಮ್ಮ ಸರಳತೆ, ಸೇವಾಭಾವ ಮತ್ತು ಸಂಘಟನಾ ನೈಪುಣ್ಯದ ಮೂಲಕ ಈಗಾಗಲೇ ಸಮಾಜದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.ಉಪಾಧ್ಯಕ್ಷರಾಗಿ ಆಯ್ಕೆಯಾದ ಅರುಣ್ ಡಿಸೋಜ ಅವರು ಶಾಂತ ಸ್ವಭಾವ, ಸಮನ್ವಯ ಕೌಶಲ್ಯ ಮತ್ತು ಧಾರ್ಮಿಕ…

Read More

ಮುಡಿಪು : ಇಲ್ಲಿನ ಕೈರಂಗಳದಲ್ಲಿರುವ ಶ್ರೀಕೃಷ್ಣ ಗೇಮ್ಸ್ ಕ್ಲಬ್ ಅವರ ಆಶ್ರಯದಲ್ಲಿ ಮಾ.4 ರಂದು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಕೈರಂಗಳ ಶಾಲಾ ವಠಾರದಲ್ಲಿ ವಿದ್ಯುದ್ದೀಪಾಲಂಕೃತ ಭವ್ಯ ರಂಗಮಂಟಪದಲ್ಲಿ ಶ್ರೀ ಹನುಮಗಿರಿ ಮೇಳ ತಂಡದಿಂದ “ಸಂಪೂರ್ಣ ಶ್ರೀ ದೇವಿ ಮಹಾತ್ಮೆ” ಎಂಬ ಸುಂದರ ಪೌರಾಣಿಕ ಕಥಾಭಾಗವನ್ನು ಬಯಲಾಟ ರೂಪದಲ್ಲಿ ಪ್ರದರ್ಶಿಸಲಾಗುವುದು.ಹರೀಶ್ ಬಳಂತಿಮೊಗರು ವ್ಯವಸ್ಥಾಪನೆಯಲ್ಲಿ ‌ ಮೇಳ ಕಾರ್ಯನಿರ್ವಹಿಸುತ್ತಿದ್ದು , ಯಕ್ಷಗಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿರುವ ಗುರುರಾಜ್ ಭಟ್ ಅವರು ಕಾರ್ಯಕ್ರಮಕ್ಕೆ ಶುಭಕೋರಿದ್ದು, ಸ್ಥಳೀಯ ಭಕ್ತರು ಹಾಗೂ ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.ಉಳ್ಳಾಲ ತಾಲೂಕಿನ ಕೈರಂಗಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಕೃಷ್ಣ ಗೇಮ್ಸ್ ಕ್ಲಬ್ (ರಿ.) ಗ್ರಾಮೀಣ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಸಮಾಜಮುಖಿ ಹಾಗೂ ಕ್ರೀಡಾ ಸಂಘಟನೆಯಾಗಿದೆ. ಗ್ರಾಮದಲ್ಲಿನ ಯುವಕರನ್ನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸಾಮಾಜಿಕ ಸೇವೆಗಳತ್ತ ಪ್ರೇರೇಪಿಸುವ ಉದ್ದೇಶದಿಂದ ಈ ಕ್ಲಬ್ ಸ್ಥಾಪನೆಯಾಗಿದೆ.ಕಾಲಕಾಲಕ್ಕೆ…

Read More

ಮಂಗಳೂರು ಫೆ. 26: ಮಂಗಳೂರಿನ ಕೃಷಿ ಭೂಮಿಗಳಲ್ಲಿ ಬೃಹತ್ ಸ್ಟೀಲ್ ವಿದ್ಯುತ್ ಪ್ರಸರಣ ಗೋಪುರಗಳು (ಟವರ್) ನಿಧಾನವಾಗಿ ತಲೆಯೆತ್ತುತ್ತಿರುವಂತೆ, ಈ ಯೋಜನೆಯ ಸುತ್ತ ತೀವ್ರ ಹಾಗೂ ಸಂಘರ್ಷಮಯ ಚರ್ಚೆಗಳು ಆರಂಭವಾಗಿವೆ. ಪರಿಹಾರದ ಕುರಿತಾದ ತಾಂತ್ರಿಕ ಸಂವಾದವಾಗಿ ಶುರುವಾಗಿದ್ದ ಈ ವಿಚಾರ, ಕೆಲವು ಪ್ರದೇಶಗಳಲ್ಲಿ ಸಂಘಟಿತ ಪ್ರತಿಭಟನೆಯ ರೂಪ ಪಡೆದುಕೊಂಡಿದೆ. ಈಗ ಆಡಳಿತ ವರ್ಗ ಮತ್ತು ನಾಗರಿಕರ ಮುಂದಿರುವ ಬಹುಮುಖ್ಯ ಪ್ರಶ್ನೆಯೆಂದರೆ, ರೈತರು ನಿಜಕ್ಕೂ ತಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದಾರೆಯೇ ಅಥವಾ ಯಾವುದೋ ದೊಡ್ಡ ರಾಜಕೀಯ ನಾಟಕದ ಭಾಗವಾಗಿ ಅವರನ್ನು ಬಳಸಿಕೊಳ್ಳಲಾಗುತ್ತಿದೆಯೇ?ಬಾಹ್ಯ ಪ್ರಭಾವ ಮತ್ತು ಸಂಘಟನೆಗಳ ಪಾತ್ರರೈತರಿಗೆ ತಮ್ಮ ಭೂಮಿಯ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವ ಸಂಪೂರ್ಣ ಹಕ್ಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪರಿಹಾರದ ವಿವರವಾದ ಲೆಕ್ಕಾಚಾರ, ಜಂಟಿ ಸಮೀಕ್ಷೆಗಳು ಮತ್ತು ಮುಂಗಡ ಪಾವತಿಯ ದಾಖಲೆಗಳು ಅತ್ಯಂತ ಅವಶ್ಯಕ. ಇಂತಹ ಪಾರದರ್ಶಕತೆ ಕೊರತೆಯಾದಾಗ ಮಾತ್ರ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಆದರೆ, ಈ ಪ್ರಕ್ರಿಯೆ ವಿಳಂಬವಾಗುವುದರಿಂದ ಆಗುವ ಆರ್ಥಿಕ ನಷ್ಟ ಕೇವಲ ಒಂದು ಹಳ್ಳಿಗೆ ಮಾತ್ರ…

Read More

ಪಿಲಾರು:ಪಿಲಾರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 135ನೇ ಅಂಗವಾಗಿ ಅಂಬೇಡ್ಕರ್‌ರವರ ಭಾವಚಿತ್ರ ಬಿಡಿಸುವ ಮತ್ತು ಭಾವಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆಯನ್ನು ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್ ಉಳ್ಳಾಲ ತಾಲೂಕು ವತಿಯಿಂದ ಆಯೋಜಿಸಲಾಯಿತು. ಕಾರ್ಯಕ್ರಮದ ವೇದಿಕೆಯನ್ನು ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಉದ್ಘಾಟಿಸಿ ,ಚಿತ್ರಕಲಾ ಸ್ಪರ್ಧೆ ವಿಷಯದ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಟ್ರಸ್ಟ್ ನ ಸ್ಥಾಪಕಧ್ಯಕ್ಷರಾದ ಯಾದವ ಮಾತನಾಡಿದರು. ಈ ಸಂದರ್ಭದಲ್ಲಿ ಗೀತಾ ಡಿ.ಗಟ್ಟಿ, ಶಾಲಾ ಅಭಿವೃದ್ಧಿಯ ಉಪಾಧ್ಯಕ್ಷರಾದ ನಂದಾದೀಪ, ಗ್ರೇಟ್ಟ ಡಿಸೋಜಾ, ಶಾಲಾ ಶಿಕ್ಷಕಿರಾಗಿರುವ ರೇಸಿ ಡಿ’ಸೋಜಾ, ರೇಣುಕಾ, ರಮ್ಯ, ಅಡುಗೆ ಸಹಾಯಕರಾಗಿರುವ ಅರುಣ ಕುಮಾರಿ, ಲಲಿತ ಉಪಸ್ಥಿತರಿದ್ದರು.

Read More

ಉಳ್ಳಾಲ; ಕಳೆದ 35 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಓಂ ಶ್ರೀ ಗಣೇಶ ಯುವಕ ಮಂಡಲ, ಮಹಿಳಾ ಮಂಡಲ ಹಾಗೂ ಭಜನಾ ಮಂಡಳಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಫೆ.27 ಮತ್ತು ಫೆ.28 ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿAದ ನಡೆಯಲಿದೆ ಎಂದು ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ತಿಳಿಸಿದ್ದಾರೆ. ತೊಕ್ಕೊಟ್ಟು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಸಂಘದ ಬೆಳವಣಿಗೆಯ ಬಗ್ಗೆ ವಿವರಿಸಿದರು. ಆರಂಭದಲ್ಲಿ ಕೇವಲ 41 ಸದಸ್ಯರೊಂದಿಗೆ ಕಾರ್ಯಾರಂಭ ಮಾಡಿದ ಈ ಸಂಘದಲ್ಲಿ ಇದೀಗ 75 ಮಂದಿ ಸದಸ್ಯರಿದ್ದಾರೆ. ಬಡವ-ಶ್ರೀಮಂತ ಎಂಬ ಭೇದವಿಲ್ಲದೆ, ಜಾತಿ ಭಿನ್ನತೆ ಎಂಬ ಸಂಘರ್ಷವಿಲ್ಲದೆ ಭಾರತಾಂಬೆ ಅಡಿಯಲ್ಲೆಲ್ಲರೂ ಒಂದೇ ಎಂಬ ಧ್ಯೇಯವಾಕ್ಯದಡಿ ಸಂಘವು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಸಣ್ಣ ಕಟ್ಟಡ ನಿರ್ಮಿಸುವ ಕನಸಿನಿಂದ ಆರಂಭವಾದ ಪ್ರಯತ್ನ ದೇವರ ಆಶೀರ್ವಾದದಿಂದ ಇಂದು ಅದರ ಹತ್ತು ಪಟ್ಟು ದೊಡ್ಡ…

Read More

ಹರೇಕಳ: ಭಾರತದ ಸಂವಿಧಾನ ಬರೆದಿರುವ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರ ಬಿಡಿಸುವ ಮತ್ತು ಭಾವಚಿತ್ರಕ್ಕೆ ಬಣ್ಣ ಹಚ್ಚುವ ಚಿತ್ರಕಲೆಯಲ್ಲಿ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಪಡೆದು ನಾಡಿಗೆ ಕೀರ್ತಿ ತರಬೇಕೆಂಬ ಉದ್ದೇಶ ಇಟ್ಟುಕೊಂಡು 135ನೇ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಹರೇಕಳದಲ್ಲಿ ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್ ಉಳ್ಳಾಲ ತಾಲೂಕು ವತಿಯಿಂದ ಚಿತ್ರಕಲಾ ಸ್ಪರ್ಧೆ ನಡೆಯಿತು. ಪದ್ಮಶ್ರೀ ಪ್ರಶಸ್ತಿ ಪಡೆದ ಹಾಜಬ್ಬ ಇವರು ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ್ ರವರ ಜೀವನ ಚರಿತ್ರೆ, ಶಿಕ್ಷಣದ ಕುರಿತು ವಿದ್ಯಾರ್ಥಿಯವರಿಗೆ ಮಾಹಿತಿ ನೀಡಿದರು. ಅಂಬೇಡ್ಕರ್ ವಿದ್ಯಾನಿಧಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾದ ಯಾದವ ಪ್ರಾಸ್ತವಿಕ ಮಾತುಗಳನ್ನಾಡಿದರು. ಶಾಲಾ ಅಧ್ಯಕ್ಷರಾದ ಮೀನಝ, ಮುಖ್ಯ ಶಿಕ್ಷಕಿಯಾದ ರಾಜೇಶ್ವರಿ,ಶಾಲಾ ಶಿಕ್ಷಕಿ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.

Read More

ಕುಂದಾಪುರ, ಫೆ. 26 : ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ಕುಂದಾಪುರ ಮತ್ತು ಗಂಗೊಳ್ಳಿ ನಡುವಿನ ಸಮುದ್ರದಲ್ಲಿ ನೀರು ತುಂಬಿ ಮುಳುಗಡೆಯಾಗಿದೆ. ಈ ಬೋಟ್‌ನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟ್‌ನ ಮೀನುಗಾರರು ರಕ್ಷಿಸಿದ್ದಾರೆ. ಬೋಟ್‌ನಲ್ಲಿದ್ದ ಕುಮಟಾ ಮೂಲದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಮತ್ತು ಶ್ರೀನಿವಾಸ ಎಂಬ ಮೀನುಗಾರರನ್ನು ರಕ್ಷಿಸಲಾಗಿದೆ.ಕೆಮ್ಮಣ್ಣು ನಿವಾಸಿ ನಾಗರಾಜ್ ಪುತ್ರನ್ ಅವರಿಗೆ ಸೇರಿದ ಶ್ರೀ ದುರ್ಗಾಪರಮೇಶ್ವರಿ ಎಂಬ ಹೆಸರಿನ ಬೋಟ್ ಫೆಬ್ರವರಿ 23ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟಿತ್ತು. ಫೆಬ್ರವರಿ 24ರಂದು ಸಮುದ್ರದಲ್ಲಿ ಯಾವುದೋ ವಸ್ತು ಬೋಟ್‌ನ ಕೆಳಭಾಗಕ್ಕೆ ತಾಗಿದ ಪರಿಣಾಮ, ಇಂಜಿನ್ ಅಡಿ ಭಾಗದಲ್ಲಿ ನೀರು ನುಗ್ಗಲು ಆರಂಭಿಸಿದೆ. ಪರಿಣಾಮ ಇಂಜಿನ್ ಸ್ಥಗಿತಗೊಂಡಿದೆ.ಕೂಡಲೇ ಮೀನುಗಾರರು ಬೋಟಿನಿಂದ ನೀರನ್ನು ಖಾಲಿ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣವೇ ಮಲ್ಪೆಯ ಶ್ರೀ ಕೃಷ್ಣ ಬೋಟ್‌ನ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಐವರು ಮೀನುಗಾರರನ್ನು ರಕ್ಷಿಸಿದರು.ಬಳಿಕ ಶ್ರೀ ಕೃಷ್ಣ ಬೋಟ್ ಮೂಲಕ ಮುಳುಗುತ್ತಿದ್ದ…

Read More

ಸುಳ್ಯ, ಫೆ. 26: ಸುಳ್ಯ ತಾಲೂಕಿನಾದ್ಯಂತ ಗುಡುಗು ಸಹಿತ ಗಾಳಿ-ಮಳೆಯಾಗಿದ್ದು, ಸುಳ್ಯ ಸಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಉರುಳಿ ಬಿದ್ದು ಮನೆ ಹಾಗೂ ಕಟ್ಟಡಗಳಿಗೆ ಹಾನಿಯುಂಟಾಗಿದೆ. ಸುಳ್ಯ ನಗರ, ಸಂಪಾಜೆ, ಕಲ್ಲುಗುಂಡಿ, ಅರಂತೋಡು, ಬೆಳ್ಳಾರೆ, ಮಂಡೆಕೋಲು, ಅಜ್ಜಾವರ, ಎಲಿಮಲೆ, ದೊಡ್ಡತೋಟ, ಸೋಣಂಗೇರಿ ಮತ್ತು ಪೆರುವಾಜೆ ಪರಿಸರದಲ್ಲಿ ಭಾರೀ ಗಾಳಿ-ಮಳೆ ಸುರಿದಿದೆ.ಸುಳ್ಯದ ಗುರುಂಪು ನಿವಾಸಿ ಮುನೀರ್ ಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಸಂಪಾಜೆಯ ಪೆಲ್ತಡ್ಕದಲ್ಲಿ ಚಂದ್ರಾವತಿ ಎಂಬುವವರ ಮನೆಗೆ ಹಾಗೂ ಗೂನಡ್ಕದ ರಾಜ ಎಂಬುವವರ ಮನೆಯ ಮೇಲೆ ತೆಂಗಿನ ಮರಗಳು ಬಿದ್ದು ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಎಲಿಮಲೆಯಲ್ಲಿ ತೆಂಗಿನ ಮರವು ಎಲಿಮಲೆ ನೂರುಲ್ ಹುದಾ ಮದ್ರಸ ಕಟ್ಟಡದ ಮೇಲೆ ಬಿದ್ದಿದ್ದು, ಕಟ್ಟಡಕ್ಕೆ ಭಾಗಶಃ ಹಾನಿಯಾಗಿದೆ.ಗಾಳಿಯ ವೇಗಕ್ಕೆ ತಾಲೂಕಿನ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ತೋಟಗಾರಿಕಾ ಬೆಳೆಗಳಿಗೂ ಈ ಅಕಾಲಿಕ ಮಳೆಯಿಂದ ಹಾನಿಯಾಗಿರುವ ಸಾಧ್ಯತೆಯಿದೆ.

Read More