ಉಳ್ಳಾಲ: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮುದಂಗುರುಕಟ್ಟೆ ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತನು ಅಸ್ವಾಭಾವಿಕವಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ತಜ್ಞರ ತಂಡಗಳಾದ ಸೊಕೊ ತಂಡ, ಶ್ವಾನದಳ ಮತ್ತು ಬೆರಳಚ್ಚು ತಂಡಕ್ಕೆ ಮಾಹಿತಿ ನೀಡಿದ್ದು, ಮತ್ತು ಸದರಿ ತಂಡಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಪಾತೂರು ಜುಮಾ ಮಸೀದಿ ಸಮೀಪದ ನಿವಾಸಿ ನಿಯಾಫ್ (28) ಎಂಬವರ ಮೃತದೇಹ ಆಗಿದ್ದು, ಅ.12 ರಂದು ಸಂಜೆ ಮನೆಯಿಂದ ನಾಪತ್ತೆಯಾದವರು ವಾಪಸ್ಸು ಬಾರದೇ ನಾಪತ್ತೆಯಾಗಿದ್ದರು. ನಿಯಾಫ್ ವರ್ಷದ ಹಿಂದೆ ಮಹಿಳೆಯ ಚಿನ್ನದ ಸರ ಕಿತ್ತು ನಾಪತ್ತೆಯಾದ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಿಂದ ಬಿಡುಗಡೆಗೊಂಡಿದ್ದನು. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: UllalaVani
ಮಂಗಳೂರು: ಗುಣಮಟ್ಟದ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾವ್ ಇಂಡಸ್ಟ್ರಿಸ್ ಲಿಮಿಟೆಡ್ ಸಂಸ್ಥೆ, ಗ್ರಾಹಕರ ಆರಾಮವನ್ನು ಕಾಪಾಡುವುದಷ್ಟೇ ಅಲ್ಲ, ಪರಿಸರ ಸಂರಕ್ಷಣೆಯತ್ತವೂ ನಿಷ್ಠಾವಂತ ಹೆಜ್ಜೆ ಇಟ್ಟಿದೆ. ಮಾವ್ ಇಂಡಸ್ಟ್ರಿಸ್ನ ಪುನರುತ್ಪಾದನೆ ಆಧಾರಿತ ತಯಾರಿಕಾ ಕ್ರಮ ಪರಿಸರ ಸ್ನೇಹಿ ಉದ್ಯಮದ ನೂತನ ಮಾದರಿಯಾಗಿದೆ. ಸಂಸ್ಥೆ ಗ್ರಾಹಕರಿಗೂ ಒಂದು ಸಂದೇಶ ನೀಡುತ್ತದೆ — ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಟ್ಟುಬಿಡದೆ, ಹಿಂತಿರುಗಿಸಿ ನೀಡಿ; ನಾವು ಅದನ್ನು ಪುನಃ ಉಪಯೋಗಕ್ಕೆ ತರುತ್ತೇವೆ.ಈ ಕ್ರಮದ ಮೂಲಕ, ಸಂಸ್ಥೆ ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವಷ್ಟೇ ಅಲ್ಲ, ನೈಜ ಅರ್ಥದಲ್ಲಿ ಸ್ಥಿರಾಭಿವೃದ್ಧಿ ದಾರಿಯಲ್ಲೂ ನಡೆಯುತ್ತಿದೆ ಅನ್ನುವ ಸಂದೇಶವನ್ನು ನೀಡಿದೆಪ್ಲಾಸ್ಟಿಕ್ ಮಣ್ಣಿನಲ್ಲಿ ಬೆರೆತರೆ ಅದು ವಿಷಕ್ಕಿಂತಲೂ ಅಪಾಯಕಾರಿ ಎಂಬ ಸಾಮಾಜಿಕ ಪಿಡುಗನ್ನು ದೂರವಾಗಿಸಲು ಕೇವಲ ಉತ್ಪಾದನೆಯಲ್ಲಿ ಮಾತ್ರ ಸೀಮಿತವಾಗಿಲ್ಲ. ಅದು ಪರಿಸರದ ಮೇಲಿನ ಕಾಳಜಿಯಲ್ಲಿಯೂ ವಿಶಿಷ್ಟವಾಗಿದೆ. ಮುರಿದ ಅಥವಾ ಹಾಳಾದ ಪ್ಲಾಸ್ಟಿಕ್ ಕುರ್ಚಿಗಳನ್ನು ಹಿಂಪಡೆಯುವ ಮೂಲಕ ಹೊಸ ಕುರ್ಚಿಗಳನ್ನು ತಯಾರಿಸುವ ಕ್ರಮಕ್ಕೆ ಮುಂದಾಗಿದೆ. ಹಳೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಣ್ಣಿನಲ್ಲಿ ಅಥವಾ ನೀರಿನಲ್ಲಿ ಬಿಟ್ಟುಬಿಡುವ ಬದಲು, ಮಾವ್ ಇಂಡಸ್ಟ್ರಿಸ್…
ಸೋಮೇಶ್ವರ: ತಮ್ಮ ಬದುಕನ್ನೇ ಸಮಾಜ ಮತ್ತು ವಿದ್ಯಾರ್ಥಿಗಳ ಒಳಿತಿಗಾಗಿ ಮುಡಿಪಾಗಿಟ್ಟ, ನಿಜವಾದ ಶಿಕ್ಷಕರಾದ ಜಲಂಧರ್ ರೈ ಅವರ ಸ್ಮರಣೆ ಇಂದು ಸಹ ಅನೇಕ ಹೃದಯಗಳಲ್ಲಿ ಜೀವಂತವಾಗಿದೆ.ಸೋಮೇಶ್ವರದ ಆನಂದಾಶ್ರಮ ಶಾಲೆಯ ವಿಜ್ಞಾನ ಶಿಕ್ಷಕರಾಗಿದ್ದ ಜಲಂಧರ್ ರೈ ಅವರು ಕೇವಲ ಪಾಠ ಬೋಧನೆಗೆ ಸೀಮಿತರಾಗಿರಲಿಲ್ಲ — ಅವರು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮನೋಭಾವ, ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯತೆ ಬೆಳೆಸಿದ ಶಿಕ್ಷಕರಾಗಿದ್ದರು. ತರಗತಿಯಲ್ಲಿ ಪಾಠ ಬೋಧಿಸುವಾಗಲೂ, ಶಾಲೆಯ ಆವರಣದಲ್ಲಿ ಅಥವಾ ಸಮಾಜದ ನಡುವೆ ಇರಲಿ, ಅವರ ಮಾತುಗಳಲ್ಲಿ ಸದಾ ಪ್ರೇರಣೆಯಿತ್ತು.ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಜಲಂಧರ್ ರೈ ಅವರ ವ್ಯಕ್ತಿತ್ವದಲ್ಲಿ ಶಿಸ್ತು, ಸೌಜನ್ಯ, ಮತ್ತು ಮೃದುಭಾಷೆ ಒಂದೇ ಸಮಯದಲ್ಲಿ ಸಹಜವಾಗಿ ಬೆರೆತುಹೋಗಿದ್ದವು. ಅವರು ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನವನ್ನೇ ನೀಡದೆ, ಜೀವನದ ಪಾಠವನ್ನೂ ಕಲಿಸಿದ್ದರು — “ನೀವು ಎಷ್ಟು ಬುದ್ಧಿವಂತರಾದರೂ, ಮನುಷ್ಯತ್ವ ಕಳೆದುಕೊಳ್ಳಬೇಡಿ” ಎಂಬ ಅವರ ಮಾತು ಅನೇಕ ವಿದ್ಯಾರ್ಥಿಗಳ ಜೀವನದ ದಾರಿದೀಪವಾಗಿದೆ.ಆದರೆ ಈ ಮಾನವೀಯತೆ ಅವರಿಗೇ ಜೀವವನ್ನೇ ಕಳೆಸಿತು. ಒಂದು ದಿನ ದಾರಿಬದಿಯಲ್ಲಿ ನಾಯಿಮರಿ ಕಚ್ಚುತ್ತಿರುವುದನ್ನು…
ಮಂಗಳೂರು: ನಗರದಲ್ಲಿನ ಪ್ರಮುಖ ಸಾಹಿತ್ಯ–ಸಾಂಸ್ಕೃತಿಕ ವೇದಿಕೆಯಾದ ರಂಗಚಾವಡಿ ಮಂಗಳೂರು ತನ್ನ ರಜತ ಸಂಭ್ರಮದ 25ನೇ ವರ್ಷದ ವಿಶೇಷ ಕಾರ್ಯಕ್ರಮವನ್ನು ನವೆಂಬರ್ 9, 2025 (ಭಾನುವಾರ) ರಂದು ಆಯೋಜಿಸಿದೆ. ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ (ರಿ), ಸುರತ್ಕಲ್ ಸಹಯೋಗದೊಂದಿಗೆ ಕಾರ್ಯಕ್ರಮ ಅದ್ಧೂರಿಯಾಗಿ ಸುರತ್ಕಲ್ ಬಂಟರ ಭವನದಲ್ಲಿ ಜರಗಲಿದೆ.ಈ ಉತ್ಸವದ ಭಾಗವಾಗಿ ಸುರತ್ಕಲ್ ಬಂಟರ ಭವನದಲ್ಲಿ ಸಂಜೆ 4.30ರಿಂದ “ರಂಗು ರಂಗಿನ ರಂಗೋತ್ಸವ” ನಡೆಯಲಿದ್ದು, ಪ್ರೇಕ್ಷಕರಿಗೆ ನಗುವಿನ ಹಬ್ಬವನ್ನು ನೀಡುವ “Non Stop Comedy – ಗೀತಾ ಗಾಯನ, ಹಾಸ್ಯ ರಸಾಯಣ” ವಿಶೇಷ ಆಕರ್ಷಣೆಯಾಗಿದೆ.ಹಾಸ್ಯ ನಾಟಕ “ಬಂದರೋ ಬಂದರೋ ಬಾವಾ ಬಂದರು…”ನಲ್ಲಿ ಕಲಾವಿದರು ಪುಷ್ಪರಾಜ್ ಬೊಳ್ಳಾರ್, ರವಿ ರಾಮಕುಂಜ, ಮಂಗಳೂರು ಮೀನನಾಥ ಮತ್ತು ರಾಘವೇಂದ್ರ ರೈ ಸೇರಿದಂತೆ ಹಲವರು ಅಭಿನಯಿಸಲಿದ್ದಾರೆ. ನಗೆ–ರಸಿಕರ ಮನರಂಜನೆಗಾಗಿ “ಕಲಿ ವಲಿ ಕಾಮಿಡಿ” ಎಂಬ ತುಳು ಹಾಸ್ಯಪದರನ ಪ್ರದರ್ಶನವೂ ಇರಲಿದೆ.ಸಂಗೀತ ಪ್ರಿಯರಿಗಾಗಿ “ರಾಗ್ ರಂಗ್ ಸಂಗೀತ ರಸಮಂಜರಿ” ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ, ಕನ್ನಡ ಮತ್ತು ತುಳು…
ತೊಕ್ಕೊಟ್ಟು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಉಳ್ಳಾಲ ತಾಲೂಕು ಘಟಕದ ವತಿಯಿಂದ ಸಂಘ ಶತಾಬ್ದಿ ಆಚರಣೆಯ ಅಂಗವಾಗಿ ಪಥಸಂಚಲನ ಕಾರ್ಯಕ್ರಮವು ನಡೆಯಿತು. ತೊಕ್ಕೊಟ್ಟು ಚೆಂಬುಗುಡ್ಡೆಯ ರಾಷ್ಟ್ರೋತ್ಥಾನ ಶಾಲೆಯಿಂದ ಪ್ರಾರಂಭಗೊಂಡ ಈ ಪಥಸಂಚಲನವು ಕಾಪಿಕಾಡು ಮಾರ್ಗವಾಗಿ ತೊಕ್ಕೊಟ್ಟು, ಕೆರೆಬೈಲು ಮಾರ್ಗದ ಮೂಲಕ ವಾಪಸ್ಸು ರಾಷ್ಟ್ರೋತ್ಥಾನದಲ್ಲಿ ಸಮಾಪ್ತಿಗೊಂಡಿತು.ಶಿಸ್ತು, ಸಮನ್ವಯ ಮತ್ತು ದೇಶಭಕ್ತಿಯ ಮೆರಗು ತೋರಿಸಿದ ಈ ಪಥಸಂಚಲನದಲ್ಲಿ ೧,೦೦೦ ಕ್ಕೂ ಹೆಚ್ಚು ಸ್ವಯಂಸೇವಕರು ಶಿಸ್ತುಬದ್ಧವಾಗಿ ಭಾಗವಹಿಸಿ ರಾಷ್ಟ್ರಪ್ರೇಮದ ಸಂದೇಶ ಹರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಘಟಕಗಳ ಕಾರ್ಯಕರ್ತರು, ಹಿರಿಯರು ಹಾಗೂ ಸ್ಥಳೀಯ ನಾಗರಿಕರು ಪಾಲ್ಗೊಂಡರು ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.
ಉಳ್ಳಾಲ: ಸಮುದ್ರ ತೀರದ ಬಂಡೆಕಲ್ಲುಗಳ ನಡುವೆ ಪತ್ತೆಯಾದ ಕೊಳೆತ ಮೃತದೇಹ ಹಾಗೂ ಬಾವಿಯಲ್ಲಿ ಇರುವ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ ಕಿನ್ಯ ಹಾಗೂ ಉಳ್ಳಾಲ ನಿವಾಸಿಗಳನ್ನು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಹೆಚ್.ವಿರೂಪಾಕ್ಷ ಸ್ವಾಮಿ ನೇತೃತ್ವದಲ್ಲಿ ಅಭಿನಂದಿಸಲಾಯಿತು.ಉಳ್ಳಾಲದ ಕೋಟೆಪುರದಲ್ಲಿ ಪತ್ತೆಯಾದ ಕೊಪ್ಪ ಮೂಲದ ಮೀನುಗಾರನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ಹಾಗೂ ಸಮುದ್ರ ತೀರದ ಬಂಡೆಕಲ್ಲು ಪ್ರದೇಶದೀಂದ ಆಂಬ್ಯುಲೆನ್ಸ್ ವಾಹನದವರೆಗೆ ಹೊತ್ತು ತಂದ ಶೀವಾಜಿ ಜೀವರಕ್ಷಕ ಈಜುಗಾರರ ಸಂಘ ಮೊಗವೀರಪಟ್ನದ ಸದಸ್ಯರುಗಳಾದ ಚಂದ್ರಹಾಸ್ ಸುವರ್ಣ, ಯೋಗೀಶ್ ಅಮೀನ್, ಗೃಹರಕ್ಷಕ ಸಿಬ್ಬಂದಿ ಪ್ರಸಾದ್ ಸುವರ್ಣ ಹಾಗೂ ಕಿನ್ಯಾ ಬಾವಿಯಲ್ಲಿ ಮಿಥುನ್ ಶೆಟ್ಟಿ ಎಂಬವರ ಮೃತದೇಹವನ್ನು ನಿರಂತರ ಎರಡೂವರೆ ತಾಸುಗಳ ಕಾಲ ಶೋಧ ಕಾರ್ಯದಲ್ಲಿ ಸಹಕರಿಸಿದ ಅಶ್ರಫ್ ಕೋಡಿ, ಫಾರುಕ್ ಕೋಟೆಪುರ, ಹಸೈನಾರ್ ಕಿನ್ಯ, ಹೈದರ್ ಕಿನ್ಯ, ಹ್ಯಾರೀಸ್ ಕಿನ್ಯ, ಅನ್ಸಾರ್ ಕಿನ್ಯ ಹಾಗೂ ಗೃಹರಕ್ಷಕ ಸಿಬ್ಬಂದಿ ಪ್ರಸಾದ್ ಸುವರ್ಣ ಇವರನ್ನು ಅಭಿನಂದಿಸಲಾಯಿತು.ಈ ಸಂದರ್ಭ ಉಳ್ಳಾಲ ಪೊಲೀಸ್ ಠಾಣಾ ಉಪನಿರೀಕ್ಷಕರುಗಳಾದ ಸಿದ್ದಪ್ಪ ನರನೂರ್, ಸಂತೋಷ್…
ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ತೋಟಗಾರಿಕಾ ಉತ್ಪನ್ನ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್ ಕಾಮ್ಸ್) ಮಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೆಶಕರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಮಂಗಳೂರು ತಾಲೂಕಿನ ಪ್ರಶಾಂತ್ ಎ ಗಟ್ಟಿ ಮತ್ತು ಉಪಾಧ್ಯಕ್ಷರಾಗಿ ಪುತ್ತೂರು ತಾಲೂಕಿನ ಸಚಿನ್ ಕುಮಾರ್ ಬಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಅಧ್ಯಕ್ಷರು/ಉಪಾಧ್ಯಕ್ಷರ ಆಯ್ಕೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ. ನೆರವೇರಿಸಿಕೊಟ್ಟರು. ಸಭೆಯಲ್ಲಿ ನಿರ್ದೆಶಕರುಗಳಾದ ಜಯಪ್ರಕಾಶ್ ಕೂಜುಗೋಡು, ಜಯಕುಮಾರ್ ಪರ್ಕಳ, ಹರೀಶ್, ಯಶೋಧರ ಶೆಟ್ಟಿ ಬಿ, ಕೆ. ಲಕ್ಷ್ಮೀನಾರಾಯಣ ಉಡುಪ, ಸೀತಾರಾಮ ಗಾಣಿಗ, ರತ್ನರಾಜ್ ಪಿ, ಅನಂತ ಪದ್ಮನಾಭ ಉಡುಪ ಕೆ, ವಿಜಯ ರೈ, ಚೀಂಪ, ಸುಂದರ ನಾಯ್ಕ, ನಿರ್ಮಲ, ಮಮತಾ ಎಂ ಶೆಟ್ಟಿ, ಸುಭದ್ರಾ ರಾವ್ ಉಪಸ್ಥಿತರಿದ್ದರು.ವ್ಯವಸ್ಥಾಪಕ ನಿರ್ದೇಶಕರು ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರಾಗಿರುವ ಕೆ. ಪ್ರವೀಣ ಇವರು ನೂತನವಾಗಿ ಆಯ್ಕೆಯಾದ…
ತಿರುವನಂತಪುರಂ : ರಾಜ್ಯದಲ್ಲಿ ಇಂದು ಸಹ ಸಿಡಿಲು, ಮಿಂಚು ಸಹಿತ ಮಳೆ ಕಾಣಿಸಿಕೊಳ್ಳಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಪತ್ತನಂತಿಟ್ಟ ಇಡುಕ್ಕಿ ಪಾಲಕ್ಕಾಡ್, ಮಲಪ್ಪುರಂ, ವಯನಾಡ್ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜತೆ ಸಿಡಿಲು, ಮಿಂಚು, 30 ರಿಂದ 40 ಕಿ.ಮೀ.ವೇಗದ ಗಾಳಿಯೂ ಕಾಣಿಸಿಕೊಳ್ಳಲಿದೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಮಳೆ ಇರಲಿದೆ.
ಕುಂಬಳೆ : ಸೀತಾಂಗೋಳಿ ಪೇಟೆಯಲ್ಲಿ ಬದಿಯಡ್ಕ ನಿವಾಸಿ ಅನಿಲ್ ಕುಮಾರ್ ಯಾನೆ ಕುಟ್ಟನ ಮೇಲೆ ಮಾರಣಾಂತಿಕವಾಗಿ ಇರಿದ ಪ್ರಕರಣದಲ್ಲಿ 13 ಮಂದಿಯ ವಿರುದ್ದ ನರಹತ್ಯಾ ಪ್ರಕರಣ ದಾಖಲಿಸಿರುವ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬೇಳ ಚೌಕಾರು ನಿವಾಸಿ ಅಕ್ಷಯ್ (34) ಬಂಧಿತ ಆರೋಪಿ. ಈತನನ್ನು ಚೌಕಾರು ಪರಿಸರದಿಂದ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಆದಿತ್ಯವಾರ ರಾತ್ರಿ 12 ಗಂಟೆಯ ವೇಳೆ ಸೀತಾಂಗೋಳಿಯಲ್ಲಿ ಈ ಘಟನೆ ನಡೆದಿತ್ತು. ಹಣಕಾಸು ವಿಷಯದಲ್ಲಿ ತಂಡವೊಂದು ಸೀತಾಂಗೋಳಿಯ ಹೋಟೆಲ್ ಒಂದರಲ್ಲಿ ಬಂದು ನಿರಂತರ ಕಿರುಕುಳ ನೀಡುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಕುಟ್ಟ ಸೀತಾಂಗೋಳಿಗೆ ಹೋಗಿದ್ದರು. ಕುಟ್ಟ ಬರುವುದನ್ನು ಕಾದು ನಿಂತ ತಂಡ ಆತನ ಕುತ್ತಿಗೆಗೆ ಇರಿದಿತ್ತು. ಗಂಭೀರ ಗಾಯಗೊಂಡ ಕುಟ್ಟನಿಗೆ ನಿನ್ನೆ (ಸೋಮವಾರ) ತುರ್ತು ಶಸ್ತ್ರಕ್ರಿಯೆ ನಡೆಸಲಾಗಿತ್ತು.
ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಸಹಾಯಕ ಅಶೋಕ್ ಕುಮಾರ್ ಪಾಲ್ ಬಂಧನ ಮಾಡಲಾಗಿದೆ. ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಸಹಾಯಕ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್ನ ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಪಾಲ್ ಅವರನ್ನು 17,000 ಕೋಟಿ ರೂ. ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

