Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ಡೆಸ್ಕ್ ಕೊಣಾಜೆ: ಕೊಣಾಜೆ ಮುಚ್ಚಿಲಕೋಡಿ ಎಂಬಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕುಟುಂಬವೊಂದರ ಐದು ಜನ ಸದಸ್ಯರು ಹಿಂದೂ ಸಂಘಟನೆಯ ಕಾರ್ಯಕರ್ತರ ಸಮ್ಮುಖದೊಂದಿಗೆ ಮರಳಿ ಹಿಂದೂ ಧರ್ಮಕ್ಕೆ ಬುಧವಾರ ಮತಾಂತರಗೊಂಡಿದ್ದಾರುವ ಘಟನೆ ಬೆಳಕಿಗೆ ಬಂದಿದೆ. ಸರಸ್ವತಿ, ರಾಜೇಶ್(೨೨), ರಾಜಿ(೨೫), ರತಿ(೨೩), ರಾಕೇಶ್(೧೮) ಎಂಬವರೇ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡವರಾಗಿದ್ದಾರೆ. ಬುಧವಾರದಂದು ಕೊಣಾಜೆಯ ಮನೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರ ಸಮ್ಮುಖದಲ್ಲಿ ಪೂಜಾ ವಿಧಿ ವಿಧಾನದ ಮೂಲಕ ಕ್ರಿಶ್ಚಿಯನ್ ಕುಟುಂಬದ ಐದು ಜನ ಸದಸ್ಯರೂ ಕೂಡಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಕೇರಳದ ಕೊಲ್ಲಂ ಬಳಿ ವಾಸವಾಗಿದ್ದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ರಾಜು ಎಂಬವರು ತನ್ನ ಮನೆ ಸಮೀಪದ ಹಿಂದು ಧರ್ಮದ ಸರಸ್ವತಿ ಎಂಬವರನ್ನು ಸುಮಾರು ೩೦ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯಾದ ಬಳಿಕ ಹಿಂದೂ ಧರ್ಮಕ್ಕೆ ಸೇರುತ್ತೇನೆ ಎಂದು ಹೇಳಿದ್ದ ರಾಜು ಅವರು ಬಳಿಕ ಪತ್ನಿ ಸರಸ್ವತಿ ಅವರನ್ನು ಕ್ರಿಶ್ಚಿಯನ್ ಸಮುದಾಯಕ್ಕೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಗಾಂಧಿನಗರದ ಡಾ.ಬಿ.ಆರ್. ಅಂಬೇಡ್ಕರ್ ಎಜುಕೇಶನ್ ಟ್ರಸ್ಟ್(ರಿ) ದಲಿತ ಸಂಘರ್ಷ ಸಮಿತಿ ಉಳ್ಳಾಲ ಶಾಖೆ ಹಾಗೂ ಬೀಮ್ ಮಲ್ಟಿಜಿಮ್ ಇದರ ಆಶ್ರಯದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವು ಡಾ. ಸುಜಾತ ಸ್ಮಾರಕ ರಂಗಮಂದಿರದಲ್ಲಿ ಇತ್ತೀಚೆಗೆ ಜರುಗಿತು. ನಗರಸಭೆ ಮುಖ್ಯಾಧಿಕಾರಿ ರೂಪ ಡಿ.ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಸಂ.ಸ.ದ ಜಿಲ್ಲಾ ಸಂಚಾಲಕ ಆನಂದ್ ಬೆಳ್ಳಾರ್ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ದ.ಸಂ.ಸ.ದ ರಾಜ್ಯ ಸಮಿತಿ ಸದಸ್ಯ ನಿರ್ಮಲ್ ಕುಮಾರ್ ಅಂಬೇಡ್ಕರ್ ರವರ ವಿಚಾರಧಾರೆ ಹಾಗೂ ಪ್ರಸುತ್ತ ದಲಿತ ಸ್ಥಿತಿಗತಿಗಳ ಕುರಿತು ವಿಮರ್ಶಾತ್ಮಕವಾಗಿ ಮಾತಾನಾಡಿದರು. ಉಳ್ಳಾಲ ಆರಕ್ಷಕ ಠಾಣೆಯ ನಿರೀಕ್ಷಕರಾದ ಸವಿತ್ರ ತೇಜ್ ದ.ಸಂ.ಸ.ದ ಉಳ್ಳಾಲ ಶಾಖೆಯ ನೂತನ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೇರವೆರಸಿದರು. ಮುಖ್ಯ ಅತಿಥಿಗಳಾಗಿ ಅಂಚೆ ಇಲಾಖೆ ನೌಕರ ಮುಖಂಡ ನಾಗೇಶ ಹೆಗ್ಡೆ, ಸಾರಿಗೆ ಉದ್ಯಮಿ ಲಯನ್ ಹರೀಶ್ ರಾವ್, ಉಯಮಿ ಸಂದೀಪ್ ಪಂಪ್ ವೆಲ್, ದ.ಸಂ.ಸ ಉಳ್ಳಾಲ ಶಾಖೆಯ ಸಂಚಾಲಕ ಪ್ರಕಾಶ್ ಎಸ್. ಕಾರ್ಯಕ್ರಮದಲ್ಲಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ :ಬೆಳ್ಮ ಬಂಡಿಯೆಂದು ಖ್ಯಾತಿಯಾಗಿರುವ ಮಂಗಳೂರಿನ ಕೊಣಾಜೆ ಸಮೀಪದ ಬೆಳ್ಮ  ಶ್ರೀ ಅರಸು ಮುಂಡಿತ್ತಾಯ ಹಾಗೂ ಪರಿವಾರ ದೈವಗಳ ಜಾತ್ರೆಯು ಮೇ 2ರಿಂದ ಮೇ6ರವರೆಗೆ ವಿಜೃಂಭಣೆಯಿಂದ ಜರುಗಿತು. ಚಿತ್ರ:  ರಾಕೇಶ್ ಕೊಣಾಜೆ

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ : ಇಲ್ಲಿನ ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಟಿಪ್ಪು ಸುಲ್ತಾನ್ ಕಾಲೇಜು ಇದರ ಆಶ್ರಯದಲ್ಲಿ ಮೇ.೧೩ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದೆ. ೧೦ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದಾದ ಮೇಳದಲ್ಲಿ ಪ್ರಖ್ಯಾತ ೫೦ ಕಂಪೆನಿಗಳು ಭಾಗವಹಿಸಲಿದ್ದು, ಖಾಲಿ ಇರುವ ಸುಮಾರು ೧೦೦೦ ಉದ್ಯೋಗಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕನಿಷ್ಟ ೫ ಸಿ.ವಿಯನ್ನು ಅಭ್ಯರ್ಥಿಗಳು ತರಬೇಕು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಡಿ.ಬಿ. ಮೊದಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಮುಡಿಪು: ಗೋಮಾತೆ, ನದಿಗಳು ಎಲ್ಲವೂ ಪರೋಪಕಾರವನ್ನೇ ಮಾಡುತ್ತಿದೆ. ಹಸು ಕರುವಿಗೆ ಉಣಿಸಬೇಕಾದ ಹಾಲನ್ನು ಯಜಮಾನನಿಗೆ ಕೊಡುತ್ತಾ ಅವನ ಸಂಸಾರ ಸಾಗರಕ್ಕೆ ಸುಖ ಕರುಣಿಸುತ್ತದೆ. ಎಲ್ಲೋ ಹುಟ್ಟಿ ಕಡಲು ಸೇರುವ ನದಿ ಆ ನಡುವೆ ಅದೆಷ್ಟೋ ಜನರ ಬದುಕನ್ನು ಹಸನಾಗಿಸುತ್ತದೆ. ಎಲ್ಲದರ ಹಿಂದೆಯೂ ಪರೋಪಕಾರ ಅಡಗಿದೆ. ಹಾಗಾಗಿ ಈ ಜಗತ್ತಿನಲ್ಲಿ ಕೆಲವೇ ದಿನಗಳ ಬದುಕು ನಡೆಸುವ ಅವಕಾಶ ಪಡೆದಿರುವ ನಾವು ಆ ಬದುಕಿಗೆ ಒಂದು ಅರ್ಥ ಬರಬೇಕಾದರೆ ಸಾರ್ಥಕ್ಯ ಸಿಗಬೇಕಾದರೆ ಏನಾದರೂ ಪರೋಪಕಾರ ಮಾಡುತ್ತಿರಬೇಕು ಎಂದು ಕೈರಂಗಳ ಪುಣ್ಯಕೋಟಿ ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್ ಹೇಳಿದರು. ಅವರು ಮೊಂಟೆಪದವು ಶಾಂತನಗರದ ಶ್ರೀ ವೀರಮಾರುತಿ ಮಂದಿರ ಮತ್ತು ವೀರಮಾರುತಿ ವ್ಯಾಯಾಮ ಶಾಲೆಯ ಒಂಬತ್ತನೆಯ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. ಪ್ರಕೃತಿ ಮಾತೆಯ ಸೃಷ್ಟಿಯನ್ನು ಅಧ್ಯಯನ ಮಾಡುತ್ತಾ ಸಾಗಿದರೆ ಎಷ್ಟೊಂದು ಅದ್ಭುತವಾದ, ವೈeನಿಕ ಸತ್ಯ ಅಡಗಿದೆಯೆಂದರೆ ಹುಲಿಯ ಕರುಳು ೧೫ಮೀ. ಉದ್ದವಿರುವುದರಿಂದ ಅದು…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಅವರು ಪ್ರಧಾನಿ ಮೋದಿಯವರ ಏಜೆಂಟರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಲೇವಡಿಯಾಡಿದರು. ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರದ ಬಿಜೆಪಿ ಸರಕಾರವನ್ನು ಮೂರು ಸಚಿವರು ನಡೆಸುತ್ತಿದ್ದಾರೆ. ಮೋದಿ, ಅಮಿತ್ ಷಾ ಮತ್ತು ಅರುಣ್ ಜೇಟ್ಲಿ ಮಾತ್ರ. ಉಳಿದ ಸಚಿವರು ಮತ್ತು ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿಯವರು ಎಲ್ಲಿದ್ದಾರೆ ಎಂಬುದು ನಿಗೂಢವಾಗಿದೆ. ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರು ಎಲ್ಲಿದ್ದಾರೆ ಎಂದು ಪ್ರಶ್ನಿಸುವ ಮುನ್ನ ತಮ್ಮನ್ನು ಅರಿತುಕೊಳ್ಳಬೇಕಿದೆ. ಪಾರ್ಲಿಮೆಂಟಿನಲ್ಲಿ ಚರ್ಚೆಯನ್ನು ಎದುರಿಸಲಾಗದ ಪ್ರಧಾನಿಯವರು ವಿದೇಶ ಪ್ರವಾಸ ಕೈಗೊಂಡು ಕಾಲಹರಣ ಮಾಡುತ್ತಿದ್ದಾರೆ. ಅದಕ್ಕಾಗಿ ವಿದೇಶ ಮಂತ್ರಿ ಸುಷ್ಮಾ ಸ್ವರಾಜ್ ಅವರು ಮೋದಿ ಭೇಟಿಗೆ ಮುನ್ನ , ವಿದೇಶಕ್ಕೆ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ಗ್ರಾಮೀಣ ಭಾಗದ ಜನರ ಸೇವೆಗೆ ಸಜ್ಜಾಗಿರುವ ಕಣಚೂರು ಸಂಸ್ಥೆ ಎಲ್ಲಾ ರೀತಿಯ ಆರೋಗ್ಯ ಬಗೆಗಿನ ಮಾಹಿತಿ ನೀಡಲು ಆರಂಭಿಸಿದೆ ಎಂದು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡೀನ್ ಪ್ರೊ. ಡಾ. ಖಾಜಾ ನಾಸಿರುದ್ಧೀನ್ ಹೇಳಿದರು. ಅವರು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಇಲ್ಲಿ ಸೋಮವಾರ ನಡೆದ ಆತಂಕ ಮತ್ತು ಖಿನ್ನತೆ ಅರಿವು ಸಪ್ತಾಹ ಇದರ ಪ್ರಯುಕ್ತ ಉಚಿತ ಮನೋರೋಗ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ವೈದ್ಯಕೀಯ ಸೇವೆಯಲ್ಲಿ ತೊಡಗಿರುವ ಕಣಚೂರು ಆಸ್ಪತ್ರೆ ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆರೋಗ್ಯ ಮಾಹಿತಿ ಉಚಿತ ಶಿಬಿರಗಳನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬಹುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಣಚೂರು ಇನ್‌ಸ್ಟಿಟ್ಯೂಷನ್ ಆಫ್ ಮೆಡಿಕಲ್ ಸೈನ್ಸ್‌ನ ಅಧ್ಯಕ್ಷ ಕಣಚೂರು ಮೋನು ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ಕಣಚೂರು ಸಂಸ್ಥೆ ಅಗ್ರಗಣ್ಯ ಸ್ಥಾನ ಪಡೆಯಲು ಸರ್ವತೃ ಪ್ರಯತ್ನ ಎಲ್ಲಾ ಸಿಬ್ಬಂದಿ ವರ್ಗದಿಂದ ನಡೆಯುತ್ತಿದೆ ಎಂದರು. ವೈದ್ಯಕೀಯ…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಬಂಟರ ಸಂಘ ಉಳ್ಳಾಲ ವಲಯ ವತಿಯಿಂದ ಉಳ್ಳಾಲ ವಲಯ ಮಟ್ಟದ ಕ್ರೀಡಾಕೂಟ ‘ಗೊಬ್ಬುದ ಪಂಥ’ ಸೋಮೇಶ್ವರ ಆನಂದಾಶ್ರಮ ಪ್ರೌಢ ಶಾಲಾಮೈದಾನದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಸಮಾಜ ಸದೃಢವಾಗಬೇಕಾದರೆ ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತಲು ಸರ್ವರೂ ಸಹಕರಿಸಬೇಕು ಎಂದರು. ಸಮಾಜದಲ್ಲಿ ಬಹಳಷ್ಟು ಹಿಂದುಳಿದ ಯುವತಿಯರಿದ್ದು ಅವರಿಗೆ ಕಲ್ಯಾಣ ಭಾಗ್ಯಕ್ಕೆ,  ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿರುವ, ವಂಚಿತರಾದ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡುವುದರ ಮೂಲಕ ಬಾಳನಲ್ಲಿ ಬೆಳಕಾಗಬೇಕು ಎಂದು ನುಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ  ಪೂನಾ ಉದ್ಯಮಿ ಪದ್ಮನಾಭ ಶೆಟ್ಟಿ, ಉದ್ಯಮಿ ಶ್ರೀನಾಥ ಕೊಂಡೆ, ತಲಪಾಡಿ ಶಾರದಾ ವಿದ್ಯಾನಿಕೇತನದ ಉಪ ಪ್ರಾಂಶುಪಾಲೆ ಲತಾ ಎಸ್.ರೈ, ಮಂಗಳೂರು ಯೆನೆಪೋಯ ಕಾಲೇಜಿನ ಉಪನ್ಯಾಸಕಿ ಸುರೇಖಾ ಪ್ರಭಾಕರ ಅಡಪ, ಮಾಜಿ ಅಧ್ಯಕ್ಷ ಕೆ. ಚಂದ್ರಹಾಸ ಅಡ್ಯಂತಾಯ, ಸಂಘಟನಾ ಕಾರ್ಯದರ್ಶಿ ಮೋಹನ್‌ದಾಸ್ ಶೆಟ್ಟಿ ನೆತ್ತಿಲ, ಕೋಶಾಽಕಾರಿ ಮೋಹನ್‌ದಾಸ್ ಗಾಂಭೀರ,…

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಕೊಣಾಜೆ. ಮೇ ೦೩:ಎಸ್ಕೇಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ವತಿಯಿಂದ ೩ದಿನಗಳ ಧಾರ್ಮಿಕ ಪ್ರವಚನ ಮತ್ತು ದ್ಸಿಕ್ರ್, ದುಆ ಮಜ್ಲಿಸ್ ಮೇ ೮,೯,೧೦ವರಗೆ ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಮದರಸ ವಠಾರ ಮರ್‍ಹೂಂ ಅಮೀರ್ ಅಡ್ಡೂರು ವೇದಿಕೆಯಲ್ಲಿ ಕೇರಳ ಹಾಗೂ ಕರ್ನಾಟಕದ ಉಲಮಾ ಉಮಾರಗಳಿಂದ ಧಾರ್ಮಿಕ ಪ್ರವಚನ ಹಾಗೂ ದುಆ ನಡೆಯಲಿದೆ ಎಂದು ಮನಾರುಲ್ ಹುದಾ ಮದರಸ ಗ್ರೀನ್ ಗ್ರೌಂಡ್ ಅಧ್ಯಕ್ಷ ಸಯ್ಯದ್ ಅಲಿ ಪ್ರಕಟನೆಗೆ ತಿಳಿಸಿದ್ದಾರೆ.

Read More

ಉಳ್ಳಾಲ್ ನ್ಯೂಸ್ ಡೆಸ್ಕ್ ಉಳ್ಳಾಲ: ವಿದ್ಯುತ್ ವಯರ್ ಸ್ಪರ್ಶಿಸಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಉಚ್ಚಿಲ ಬೆಟ್ಟಂಪಾಡಿ ಬಳಿ ಸಂಭವಿಸಿದೆ. ಕುಂಜತ್ತೂರು ನಿವಾಸಿ ಚಂದ್ರ(೨೯) ಮೃತರು. ಉಚ್ಚಿಲ ಬೆಟ್ಟಂಪಾಡಿಯ ಸಮುದ್ರ ತೀರಕ್ಕೆ ಮೀನು ಹಿಡಿಯಲೆಂದು ಬಂದಿದ್ದ ಸಂದರ್ಭ ಘಟನೆ ನಡೆದಿದೆ. ಶನಿವಾರ ಎಂದಿನಂತೆ ಬೆಳಗ್ಗಿನ ಬೇಳೆ ಮೀನು ಹಿಡಿಯಲು ಉಚ್ಚಿಲ ಬೆಟ್ಟಂಪಾಡಿ ಒಳ ಪ್ರದೇಶಕ್ಕೆ ಬಂದಿದ್ದರು. ಶನಿವಾರ ಬಂದವರು ರಾತ್ರಿಯಾದರೂ ಮನೆಗೆ ಹೋಗದೇ ಇದ್ದರಿಂದ ಗಾಬರಿಗೊಂಡ ಮನೆಮಂದಿ ಕಾಣೆಯಾದ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಚಂದ್ರ ಅವರು ಮೀನು ಹಿಡಿಯಲು ಇಳಿದ ಜಾಗದಲ್ಲೇ ವಿದ್ಯುತ್ ವಯರ್ ಕೆಳಭಾಗದಲ್ಲಿದ್ದು, ವಿದ್ಯುತ್ ವಯರ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More