ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ವಿಶ್ವವಿದ್ಯಾನಿಲಯಗಳು ಕೇವಲ ಶಿಕ್ಷಣ ಕೊಡುವ ಕ್ಷೇತ್ರಗಳಾಗದೆ, ದೇಶದ ಅಭಿವೃದ್ಧಿಗೆ ಶ್ರಮಿಸುವ ನಿಟ್ಟಿನಲ್ಲಿ ರಾಜ್ಯಗಳ ನಡುವೆ ವಿಭಿನ್ನತೆ ಸೃಷ್ಟಿಸದಂತೆ ಗ್ರಾಮೀಣ ಭಾಷೆ ಅಥವಾ ಆಡು ಭಾಷೆಗಳ ಬಗ್ಗೆ ಎಲ್ಲ ವಿವಿಗಳನ್ನೂ ಒಂದು ಪ್ರತ್ಯೇಕ ಪೀಠ ಅಥವಾ ಅಧ್ಯಯನ ವಿಭಾಗ ಸ್ಥಾಪಿಸುವುದರಿಂದ ಹೊರ ರಾಜ್ಯಗಳಿಂದ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ತಾವು ಹೊರ ರಾಜ್ಯದವರಲ್ಲ ಎಂಬ ಭಾವನೆ ಮೂಡಿಸುವಂತೆ ಮಾಡಬೇಕಿದೆ ಎಂದು ಅಸ್ಸಾಂ ಹಾಗೂ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಅಭಿಪ್ರಾಯಪಟ್ಟರು.






ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಗುರುವಾರ ನಡೆದ ಈಶಾನ್ಯ ರಾಜ್ಯ ಅಧ್ಯಯನ ಕೇಂದ್ರ `ನಮಸ್ತೆ’ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು.
ದೇಶ ಸುತ್ತಿದಲ್ಲಿ ಅರ್ಥೈಸಿಕೊಳ್ಳಬಹುದಾದ ಸತ್ಯವೇನೆಂದರೆ ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ಸಂಸ್ಕ ೃತಿ ಬಹಳ ಶ್ರೀಮಂತವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ನೃತ್ಯವೆಂದರೆ ಕೇವಲ ಮಣಿಪುರ ಮಾತ್ರವಲ್ಲ. ನಾಗಾಲ್ಯಾಂಡ್ನಲ್ಲಿ 16 ಭಿನ್ನ ಸಂಸ್ಕ ೃತಿಯ ಜನಾಂಗಗಳಿವೆ. ದೇಶದ ಪ್ರತಿಯೊಂದು ಭಾಷೆಯೂ ಅವರನ್ನು ಗುರುತಿಸುವ ಮಾಧ್ಯಮವಷ್ಟೆ. ಎಲ್ಲವನ್ನು ಅರ್ಥೈಸಿಕೊಂಡರೆ ಮಾತ್ರ ಇತರ ಭಾಷೆಗಳ ಮಹತ್ವ ಗುರುತಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ದೇಶದ ಎಲ್ಲ ವಿವಿಯಲ್ಲೂ ಗ್ರಾಮೀಣ ಭಾಷೆಗೆ ಆದ್ಯತೆ ನೀಡುವತ್ತ ಗಮನ ಹರಿಸಬೇಕು. ಅದು ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ನಾವು ಹೊರಗಿದ್ದೇವೆ ಎಂಬ ಭಾವನೆ ದೂರವಾಗಲು ಸಾಧ್ಯ. ಭಾರತ ಶ್ರೀಮಂತ ರಾಷ್ಟ್ರ ಆದರೆ ಭಾರತೀಯರು ಬಡವರು, ಭಾರತ e್ಞÁನದ ಕೇಂದ್ರ ಆದರೆ ಭಾರತೀಯರು ಸುಶಿಕ್ಷಿತರಲ್ಲ ಎಂಬ ಭಾವನೆ ನಮ್ಮಲ್ಲಿ ಬೇರೂರಿದ್ದು ಅದಕ್ಕೆ ಮುಕ್ತಿ ಸಿಗುವಂತಹ ಕಾರ್ಯ ನಮ್ಮಿಂದಾಗಬೇಕು. ಹಾಗೆಯೇ ಪದವಿ ಎಂಬುದು ವೃತ್ತಿಜೀವನದ ಆರಂಭವಷ್ಟೆ. ನಮ್ಮ e್ಞÁನ ಸಂಪಾದನೆ ಎಷ್ಟು ಎಂಬ e್ಞÁನ ನಮಗಿರಬೇಕು. ಕೇವಲ ಹಣಗಳಿಸುವುದಕ್ಕೆ ಬದುಕು ಸೀಮಿತಗೊಳಿಸಬಾರದು. ನಮ್ಮ ತಪ್ಪುಗಳು ನಮ್ಮ ತತ್ವಶಾಸ್ತ್ರದ ದಿಕ್ಕನ್ನೇ ಬದಲಿಸಿದೆ ಎಂದರು. ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ 8 ಅಥವಾ 10ರ ಸಾಲಿನಲ್ಲಿ ಭಾರತೀಯರ ಹೆಸರು ಕಾಣಬಹುದಾಗಿದೆ.
ಅದರಲ್ಲಿ ಮುಂಬೈನಲ್ಲಿ ಬೆಳೆದವರು ಮಾತ್ರ ಶ್ರೀಮಂತರ ಪಟ್ಟಿಯಲ್ಲಿ ದಾಖಲಾಗುತ್ತಿದ್ದಾರೆ. ಆದರೆ ಮುಂಬಿಯಯಂತಹ ನಗರದಲ್ಲಿ 1.25 ಕೋಟಿ ಜನರಿದ್ದರೂ ಮನುಷ್ಯತ್ವನ್ನು ತೋರಿಸುವವರು ಎಷ್ಟು ಜನರಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದ ಅವರು ಸಮಾಜದ ಪ್ರತಿನಿಧಿಗಳಾದ ಹಿನ್ನೆಲೆಯಲ್ಲಿ ಸಮಾಜಕ್ಕೆ ಏನನ್ನಾದರೂ ಮಾಡುವ ಜವಬ್ದಾರಿ ಎಲ್ಲರಿಗೆ ಇದೆ. ಈ ಕಾರಣಕ್ಕಾಗಿ ಇನ್ನೊಬ್ಬರಿಗಾಗಿ ಕೆಲಸ ಸೃಷ್ಟಿಸುವಷ್ಟು ಎಲ್ಲರೂ ಸಮರ್ಥರಾಗಬೇಕು. ಹಾಗಾದಾಗ ಜನ ಸರಕಾರವನ್ನು ಅವಲಂಬಿಸುವ ಪ್ರಶ್ನೆ ಇರುವುದಿಲ್ಲ ಎಂದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿ ಈಶಾನ್ಯ ರಾಜ್ಯಗಳ ಕೆಲವು ರಾಜ್ಯಗಳ ಪೈಕಿ ಅದರಲ್ಲೂ ಅಸ್ಸಾಂ ನಮ್ಮ ಕರಾವಳಿ ಜಿಲ್ಲೆಯನ್ನು ಹೋಲುತ್ತಿದ್ದು ಇಲ್ಲಿನ ಸಂಸ್ಕಾರ, ಸಂಸ್ಕ ೃತಿ, ಹಸಿರು, ಪರಿಸರ ಮೊದಲಾದ ಹಲವು ವೈವಿಧ್ಯತೆಗಳಲ್ಲಿ ಸಾಮತ್ಯೆ ಇದ್ದು ಆಚಾರ್ಯ ಅವರ ನಿಸ್ವಾರ್ಥ ಸೇವೆ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದೆ. ನಿಟ್ಟೆ ವಿವಿಯಲ್ಲಿ ಈಶಾನ್ಯ ರಾಜ್ಯಗಳ ಕುರಿತಾದ ಅಧ್ಯಯನ ಕೇಂದ್ರ ಆರಂಭಿಸುವ ಉದ್ದೇಶ ಆರು ತಿಂಗಳ ಹಿಂದೆಯೇ ಇತ್ತಾದರೂ ಸರಕಾರ ಸಹಕರಿಸಿರಲಿಲ್ಲ. ಆದರೆ ಈಗ ರಾಜ್ಯದ ರಾಜ್ಯಪಾಲರು ನಿರ್ದೇಶಕರೊಬ್ಬರನ್ನು ನೇಮಿಸುವ ಆಶ್ವಾಸನೆ ನೀಡಿದ ಕಾರಣ ಆರಂಭಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕವಿತಾ ಪಿ. ಆಚಾರ್ಯ, ನಿಟ್ಟೆ ವಿವಿಯ ಸಹ ಕುಲಾ„ಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಕುಲಪತಿ ಪ್ರೊ.ಡಾ.ಎಸ್. ರಮನಾಂದ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.
ಕುಲಸಚಿವ ಪ್ರೊ.ಡಾ. ಎಂ.ಎಸ್.ಮೂಡಿತ್ತಾಯ ವಂದಿಸಿದರು.





















