ಉಳ್ಳಾಲ ನ್ಯೂಸ್ ನೆಟ್ವರ್ಕ್ ಕೊಣಾಜೆ: ವಿದೇಶಿ ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿವಿಯ ಕ್ಯಾಂಪಸ್ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ಹಾಸ್ಟೆಲ್ ನಿರ್ಮಾಣವಾಗುತ್ತಿದ್ದು ಅದರಲ್ಲಿ ಸ್ಟುಡಿಯೋ ಅಪಾರ್ಟ್ಮೆಂಟ್ ಮಾದರಿಯಲ್ಲಿ ಅಡುಗೆ ಕೋಣೆ ಸೇರಿದಂತೆ ಸುಸಜ್ಜಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ.ಕೆ. ಭೈರಪ್ಪ ಹೇಳಿದರು. ಮಂಗಳೂರು ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಶನಿವಾರ ನಡೆದ ಮಂಗಳೂರು ವಿವಿಯಲ್ಲಿ ವ್ಯಾಸಂಗಗೈಯುತ್ತಿರುವ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮಂಗಳೂರು ವಿವಿಗೆ ಈಗಾಗಲೇ ಐಸಿಸಿಆರ್ 100ವಿದ್ಯಾರ್ಥಿಗಳನ್ನುಕೊಟ್ಟಿದ್ದು ನೇರವಾಗಿ 40ಆರ್ಜಿಗಳು ಬಂದಿದ್ದು 30ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದಿದ್ದಾರೆ. ಕೆಲವು ವಿದ್ಯಾರ್ಥಿಗಳು ವೀಸಾಕ್ಕೆ ಕಾಯುತ್ತಿದ್ದಾರೆ. ಹಲವು ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳುಳ್ಳ ಖಾಸಗಿ ವಸತಿ ಸಂಕೀರ್ಣದಲ್ಲೂ ವ್ಯವಸ್ಥೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ವಿವಿಧ ದೇಶಗಳ 220ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಸುಮಾರು 500ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಗುರಿ ಹೊಂದಲಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಐಸಿಸಿಆರ್ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ವೇಣುಗೋಪಾಲ್ ಮಾತನಾಡಿ ಪದವಿ ಎಂಬುದು…
Author: UllalaVani
ಉಳ್ಳಾಲ್ನ್ಯೂಸ್ ನೆಟ್ವರ್ಕ್ ಉಳ್ಳಾಲ: ಆಸನಗಳಿಂದ ಜೀವನಕ್ರಮ ಸರಳವಾಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನದ ಪ್ರಾಧ್ಯಾಪಕರಾದ ಡಾ.ಅಜಿತೇಶ್ ಎನ್.ಹೆಚ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಒಳಪೇಟೆಯ ಆಮಂತ್ರಣ ಸಭಾಂಗಣದಲ್ಲಿ ಭಾನುವಾರ ಆರೋಗ್ಯ ಯೋಗ ಕೇಂದ್ರದ ವತಿಯಿಂದ ಆರಂಭಗೊಂಡ ಯೋಗಾಸನ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ದಿನ ಸೇವಿಸುವ ತಿಂಡಿ, ತಿನಿಸುಗಳಿಂದ, ಜೀವನಕ್ರಮದಿಂದಾಗಿ ಆರೋಗ್ಯ ಕ್ರಮಗಳು ಹಾಳಾಗುತ್ತಿವೆ. ರಕ್ತದೊತ್ತಡ , ಮಧುಮೇಹ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಜನ ಆರೋಗ್ಯವನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಇಂತಹ ಸಂದರ್ಭ ತೊಕ್ಕೊಟ್ಟು ಸುತ್ತಮುತ್ತಲ ಜನರ ಆರೋಗ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಉತ್ತಮ ಆರೋಗ್ಯವನ್ನು ಪಡೆಯಬೇಕು ಅನ್ನುವ ದೃಷ್ಟಿಯಿಂದ ಆರೋಗ್ಯ ಯೋಗ್ಯ ಕೇಂದ್ರದ ಮೂಲಕ ಯೋಗ ತರಬೇತಿ ಕೇಂದ್ರದ ಸ್ಥಾಪನೆ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ.ಸುವರ್ಣ ಮಾತನಾಡಿ ಯೋಗಗುರು ಯುವತಿ ಶ್ರಮದಿಂದ ತರಬೇತಿ ಕೇಂದ್ರದ ಉದ್ಘಾಟನೆಯಾಗಿದೆ. ಯೋಗವಿಲ್ಲದ ಜೀವನಕ್ರಮ ಹಿಂದಿನ ಕಾಲದಲ್ಲಿ ಇರಲಿಲ್ಲ. ಇದೀಗ ಪ್ರಧಾನಿ ಮೋದಿಯವರು ಖುದ್ದು ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಾರಿ ತೋರಿಸುವ ಸಂಸ್ಥೆಯ ಕಾರ್ಯವೈಖರಿ ವಿಶಿಷ್ಟವಾಗಿದ್ದು, ಈ ಮೂಲಕ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನಕ್ಕೆ ಕೈಹಾಕಿರುವ ಸಂಸ್ಥೆ ಇತರೆ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಮಂಗಳೂರು ಸ್ಟಾರ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಸಲೀಂ ಮಲಾರ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಹಳೇಕೋಟೆಯಲ್ಲಿರುವ ಮಂಗಳೂರು ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಲಾಜಿಕಲ್ ಸೈನ್ಸ್ (ಎಂಐಟಿಎಸ್ ) ಇದರ ಘಟಿಕೋತ್ಸವ ಹಾಗೂ ಫ್ರೆಶರ್ಸ್ ದಿನಾಚರಣೆಯಲ್ಲಿ , ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು. ಪದವಿ ಪಡೆದ ವಿದ್ಯಾರ್ಥಿಗಳು ಕೆಲಸಕ್ಕೆ ಸೇರಿಕೊಂಡ ನಂತರ ಶ್ರಮ ವಹಿಸಿ ಬದ್ಧತೆಯಿಂದ ದುಡಿದಾಗ ಕಲಿತ ಕಾಲೇಜಿನ ಹೆಸರನ್ನು ಉಳಿಸುವುದರ ಜತೆಗೆ ಜೀವನದಲ್ಲಿಯೂ ಯಶಸ್ಸು ಗಳಿಸಲು ಸಾಧ್ಯ. ಶಿಸ್ತಿನಿಂದ ಕೂಡಿ ಕೆಲಸದಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದ ಅವರು ಕಾಲೇಜು ಸಾಗುತ್ತಿರುವ ಹಾದಿಗೆ ಮುಂದೆ ವಿಟಿಯು ಮಾನ್ಯತೆಯೂ ದೊರೆಯಲಿದೆ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಳೆಕೋಟೆ ಸೈಯ್ಯಿದ್ ಮದನಿ ಉರ್ದು…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಕೊಲ್ಯ:ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಕೊಂಡಿದ್ದ ಮಗನ ಸಾವಿನಿಂದ ಮನನೊಂದ ತಂದೆ ಅದೇ ಜಾಗದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಕೊಂಡಿರುವ ಮನಕಲಕುವ ಘಟನೆ ಮಂಗಳೂರಿನ ಹೊರವಲಯದ ಕೋಟೆಕಾರ್ ಕೊಲ್ಯ ರೈಲ್ವೇ ಟ್ರಾಕ್ ನಲ್ಲಿ ಗುರುವಾರ ನಡೆದಿದೆ. ಲೋಕಯ್ಯ ಪೂಜಾರಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಕೊಂಡವರು. ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈಲಿಗೆ ತಲೆಕೊಟ್ಟು ಪುತ್ರ ನಿಶಾನ್ ಎಂಬವರು ಆತಹತ್ಯೆ ಮಾಡಿಕೊಂಡಿದ್ದರು ಪುತ್ರ ವಿಯೋಗದಿಂದ ಬಳಲುತ್ತಿದ್ದ ತಂದೆ ಇದೀಗ ಮೂರು ತಿಂಗಳ ನಂತರ ಅದೇ ಅದೇ ಸ್ಥಳದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ :ಉಳ್ಳಾಲ ದರ್ಗಾ ಆಡಳಿತ ಸಮಿತಿ ಸದಸ್ಯ, ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಬಾವ ಫಕೀರ್ ಸಾಹೇಬ್(85) ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರಿದ್ದಾರೆ. ಮೂವತ್ತು ವರ್ಷಗಳಿಗಿಂತಲೂ ಸುಧೀರ್ಘ ಅವಧಿಯಲ್ಲಿ ಮೇಲಂಗಡಿ ಮಸೀದಿ ಅಧ್ಯಕ್ಷರಾಗಿ, 60 ವರ್ಷಗಳಿಂತಲೂ ಅಧಿಕ ಕಾಲ ದರ್ಗಾ ಸಮಿತಿ ಹಾಗೂ ಚಾರಿಟೇಬಲ್ ಟ್ರಸ್ಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ದರ್ಗಾ ಅಧೀನದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಸತತ ಪರಿಶ್ರಮ ವಹಿಸಿದ್ದರು. ಅವರ ನಿಧನಕ್ಕೆ ಮೇಲಂಗಡಿ ಮಸೀದಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಸಂತಾಪ ಸೂಚಿಸಿದ್ದಾರೆ.
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಉಳ್ಳಾಲ ಪೆÇಲೀಸ್ ಠಾಣಾ ವ್ಯಾಪ್ತಿಯ ಅಜಾದ್ ನಗರದಲ್ಲಿ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೆÇಲೀಸರು ಯಶಸ್ವಿಯಾಗಿದ್ದಾರೆ. ಉಳ್ಳಾಲ ಮೇಲಂಗಡಿಯ ಜಲಾಲ್ ಯಾನೆ ಜಲಾಲುದ್ದೀನ್(28), ಕುಂಪಲ ಶಾಲೆ ಬಳಿಯ ಅರ್ಫಾನ್ ಯಾನೆ ಅಪ್ಪು (25), ಉಳ್ಳಾಲ ಟಿ.ಸಿ.ರೋಡಿನ ಜಾಫರ್ ಸಾದಿಕ್ (20), ಕೆ.ಸಿ.ರೋಡ್ ತಲಪಾಡಿಯ ಮುಝಂಬಿಲ್ (22) ಬಂಧಿತರು. ಪ್ರಕರಣದ ವಿವರ: ಜು.11ರಂದು ಆಸ್ಟಿಮ್ ನಿತೇಶ್ ಮೊಂತೆರೋ ಎಂಬವರು ಉಳ್ಳಾಲ ಅಜಾದ್ ನಗರದ ಕಿರಿದಾದ ರಸ್ತೆಯಲ್ಲಿ ಅವರ ರಿಕ್ಷಾ ಟೆಂಪೆÇೀವನ್ನು ನಿಲ್ಲಿಸಿ ಟೆಂಪೆÇೀ ರಿಕ್ಷಾದಿಂದ ಮಣ್ಣಿನ ಲೋಡನ್ನು ಖಾಲಿ ಮಾಡುತ್ತಿದ್ದ ಸಮಯ ಅದೇ ರಸ್ತೆಯಿಂದಾಗಿ ಬಂದ ಕಪ್ಪು ಬಣ್ಣದ ಕಾರೊಂದರಲ್ಲಿ 4 ಮಂದಿ ವ್ಯಕ್ತಿಗಳು ಟೆಂಪೆÇೀ ರಿಕ್ಷಾವನ್ನು ರಸ್ತೆಯಿಂದ ತೆಗೆಯುವಂತೆ ಜೋರು ಮಾಡಿದ್ದರು. ನಂತರ ರಿಕ್ಷಾಕ್ಕೆ ಅಡ್ಡ ನಿಂತು ಅವರಿಗೆ ಕೈಯಿಂದ ಹಲ್ಲೆ ನಡೆಸಿರುವುದಲ್ಲದೇ ಅವರ ಕಾರಿನ ಸೀಟಿನಲ್ಲಿದ್ದವನು ಕಾರಿನಿಂದ ಚೂರಿಯೊಂದನ್ನು ತೆಗೆದುಕೊಂಡು ಬಂದು ಅಸ್ಟಿಮ್…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಬೆಳ್ಮ: ನಿರ್ಮಲ ಗ್ರಾಮ ಪುರಸ್ಕಾರ, ಸ್ವಚ್ಛ ಗ್ರಾಮ ಪುರಸ್ಕಾರ ಪಡೆದಿರುವ ಬೆಳ್ಮ ಗ್ರಾಮ ಪಂಚಾಯಿತಿನಲ್ಲೇ ಸ್ವಚ್ಛತೆಯೇ ಇಲ್ಲವಾಗಿದೆ. ದೇರಳಕಟ್ಟೆ ಜಂಕ್ಷನ್ ಸುತ್ತಮುತ್ತ ತ್ಯಾಜ್ಯ ಕಾಣುತ್ತಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ಅನಾರೋಗ್ಯ ಉಂಟಾಗುವ ಭೀತಿಯಿದೆ. ಆರೋಗ್ಯ ಇಲಾಖೆಯೂ ಈ ಕುರಿತು ಮುತುವರ್ಜಿ ವಹಿಸುತ್ತಿಲ್ಲ ಎಂಬ ಆರೋಪ ದೇರಳಕಟ್ಟೆಯ ಬೆಳ್ಮ ಪಂಚಾಯಿತಿ ವಠಾರದದಲ್ಲಿ ಮಂಗಳವಾರ ಜರಗಿದ 2017-18ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಕೇಳಿ ಬಂದಿತು. ಈ ಕುರಿತು ಪ್ರತಿಕ್ರಿಯಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ` ಈ ಹಿಂದೆ ಬಡಕಬೈಲು ಸರ್ವೆ ನಂಬ್ರ 48ರಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ಸ್ಥಾಪನೆಯಾಗಿತ್ತು. ಅಲ್ಲಿಗೆ ತ್ಯಾಜ್ಯವನ್ನು ಕೊಂಡೊಯ್ಯುವ ವ್ಯವಸ್ಥೆಯೂ ಆಗಿತ್ತು, ಸಮರ್ಪಕವಾಗಿ ಘಟಕ ಕಾರ್ಯಾಚರಿಸುತ್ತಿದ್ದು, ಇದರಿಂದಲೇ ಪುರಸ್ಕಾರವೂ ಒದಗಿಬಂದಿತ್ತು. ಆದರೆ ಜಾಗದ ಕುರಿತು ಖಾಸಗಿಯವರು ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಸದ್ಯ ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಜಾಗದ ಪರ ವಾದಿಸಲು ಪಂಚಾಯಿತಿ ಮೂಲಕ ನ್ಯಾಯವಾದಿಗಳನ್ನು ನೇಮಿಸಲಾಗಿದೆ. ಇಂದು…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಮಂಗಳೂರು: ಶರತ್ ಮಡಿವಾಳ ಅಂತಿವi ಯಾತ್ರೆಯ ವೇಳೆ ನಡೆದ ಕಲ್ಲೆಸೆತದ ವಿದ್ಯಮಾನಕ್ಕೆ ದ.ಕ ಜಲ್ಲೆ ಸಂಪೂರ್ಣ ಭಯಪೀಡಿತವಾಗಿದ್ದು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆ ಎಂದು ಕೇಂದ್ರ ಸಚಿವ ಡಿ.ಸದಾನಂದ ಗೌಡ ತಿಳಿಸಿದ್ದಾರೆ. ದ.ಕ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಹಿತಕರ ಘಟನೆಗಳ ಕುರಿತು ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಒಂದೂವರೆ ತಿಂಗಳಿನಿಂದ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ದೇಶಕ್ಕೆ ,ರಾಜ್ಯಕ್ಕೆ ಕಪ್ಪು ಚುಕ್ಕೆ ತಂದು ಕೊಟ್ಟಿದೆ. ಬಂಟ್ವಾಳ, ಉಳ್ಳಾಲ ಎರಡು ಪ್ರದೇಶದಲ್ಲಿ ಬಿಟ್ಟರೆ ಇನ್ನೂ ಯಾವುದೇ ಕಡೆ ಇಲ್ಲದ ಇಂತಹ ವಿದ್ಯಾಮಾನಕ್ಕೆ ಕಂಡು ಬಂದಿಲ್ಲವಾದರೂ ಸುಳ್ಯ,ಪುತ್ತೂರು,ಮಂಗಳೂರು,ಬೆಳ್ತಂಗಡಿ ಇವೆಲ್ಲಾ ತಾಲೂಕಿನಲ್ಲೂ ನಿಷೇಧ ಜಾರಿ ಮಾಡಿ ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸಿದ ತಕ್ಷಣ ನಿಷೇಧವನ್ನು ಹಿಂತೆಗೆದು ನಂತರ ಕೊಲೆಗೀಡಾದ ಶರತ್ ಅವರ ಕೊಲೆಗಡುಕರನ್ನು ಹಿಡಿಯಲು ಒತ್ತಾಯ ಮಾಡುವ ಸಂಘಟನೆಯವರ ಪ್ರತಿಭಟನೆಗೆ ತಡೆಯೊಡ್ಡಿ ನಾಯಕರನ್ನು ಬಂಧನ ಮಾಡುವ ಪ್ರಕ್ರಿಯೆ ನಿಜವಾಗಿಯೂ ದುರಂಕಾರದ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ:ಟೆಂಪೋ ಚಾಲಕನಿಗೆ ಕಾರಿನಲ್ಲಿ ಬಂದ ನಾಲ್ವರು ಆಗಂತುಕರ ತಂಡ ಚೂರಿಯಿಂದ ಇರಿದಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಆಝಾದ್ ನಗರದಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಉಳ್ಳಾಲ ಉಳಿಯ ನಿವಾಸಿ ಲಾರೆನ್ಸ್ ಎಂಬವರ ಪುತ್ರ ಆಸ್ಟಿನ್ (28) ಚೂರಿ ಇರಿತಕ್ಕೊಳಗಾದವರು. ಗೂಡ್ಸ್ ಟೆಂಪೋ ಚಾಲಕರಾಗಿದ್ದ ಇವರು ಟೆಂಪೋದಲ್ಲಿ ಮಣ್ಣು ಹೇರಿಕೊಂಡು ಆಝಾದ್ ನಗರದತ್ತ ಕೊಂಡೊಯ್ದಿದ್ದರು. ಅಲ್ಲಿ ಮಾರ್ಗ ಮಧ್ಯೆ ಟೆಂಪೋದಿಂದ ಮಣ್ಣು ಖಾಲಿ ಮಾಡುವ ಸಂದರ್ಭ , ಕಪ್ಪು ಬಣ್ಣದ ಫಾರ್ಡ್ ಕಾರಿನಲ್ಲಿ ಬಂದ ನಾಲ್ವರು ಟೆಂಪೋವನ್ನು ಬದಿಗೆ ಇಡುವಂತೆ ಹೇಳಿದ್ದರು. ಆದರೆ ಮಣ್ಣು ಖಾಲಿ ಮಾಡುತ್ತಿದ್ದು, ಮುಗಿದ ತಕ್ಷಣ ಹೋಗುವುದಾಗಿ ಆಸ್ಟಿನ್ ಪ್ರತಿಕ್ರಿಯಿಸಿದ್ದರು. ಇದರಿಂದ ರೊಚ್ಚಿಗೆದ್ದ ತಂಡದಲ್ಲಿದ್ದ ಓರ್ವ ಚೂರಿಯಿಂದ ಆಸ್ಟಿನ್ ಅವರ ಕುತ್ತಿಗೆ ಭಾಗಕ್ಕೆ ಇರಿಯಲು ಯತ್ನಿಸಿದ್ದು, ಅದನ್ನು ತಡೆಯಲು ಕೈ ಅಡ್ಡ ಹಿಡಿದಾಗ ಕೈಗೆ ಚುಚ್ಚಿದ್ದಾರೆ. ಬಳಿಕ ಕಾರಿನಲ್ಲಿ ನಾಲ್ವರು ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುವನ್ನು ಉಳ್ಳಾಲದ ಸರೋಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ…
ಉಳ್ಳಾಲ ನ್ಯೂಸ್ ನೆಟ್ವರ್ಕ್ ಉಳ್ಳಾಲ: ಮುಸ್ಲಿಂ ಮತದಾರರೇ ಇರುವ ಉಳ್ಳಾಲ ನಗರಸಭೆಯ ಒಂದನೇ ವಾರ್ಡಿನಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆಗಿಳಿದು ಬಹುಮತಗಳಿಂದ ಚುನಾಯಿತರಾಗಿದ್ದ ಉಳ್ಳಾಲ ಪುರಸಭೆ ಸದಸ್ಯ ಕೋಟೆಪುರ ನಿವಾಸಿ ಮಹಮ್ಮದ್ ಹನೀಫ್ (48) ತೀವ್ರ ರಕ್ತದೊತ್ತಡಕ್ಕೆ ಒಳಗಾಗಿ ಸೋಮವಾರ ಸಂಜೆ ನಿಧನಹೊಂದಿದ್ದಾರೆ. ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹಿಂದೆ ಜೀವನೋಪಾಯಕ್ಕೆ ಒಣಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಅವರು ಸದ್ಯ ನಗರಸಭೆ ಸದಸ್ಯರಾಗಿಯೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರಥಮ ಬಾರಿ ಚುನಾವಣೆಗೆ ನಿಂತಿದ್ದ ಹನೀಫ್ ಅವರು ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದರು. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೇ ಇದ್ದು, ಬಹುಮತಗಳಿಂದ ಚುನಾಯಿತರಾಗಿ 2013 ರಿಂದ 2018ರ ಸಾಲಿನ ಪುರಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

