Author: UllalaVani

Kannada News From Coastal Karnataka

UN NETWORKS ಪಜೀರು: ವ್ಯಕ್ತಿಗತ ಆರೋಗ್ಯ ಸಂರಕ್ಷಣೆ ಸಾಮಾಜಿಕ ಸ್ವಾಸ್ತ್ಯ ಹಾಗೂ ಸಹಬಾಳ್ವೆಗೆ ಪೂರಕ ಎಂದು ಮಂಗಳಾ ಸೇವಾ ಸಮಿತಿ ಟ್ರಸ್ಟ್‍ನ ಸಂಚಾಲಕ ಡಾ| ಅನಂತಕಷ್ಣ ಭಟ್ ಅಭಿಪ್ರಾಯಪಟ್ಟರು. ಪಜೀರು ಬೀಜಗುರಿಯ ಗೋವನಿತಾಶ್ರಯದ ಸಭಾಂಗಣದಲ್ಲಿ ಮಂಗಳೂರಿನ ಮಂಗಳಾ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ದೇರಳಕಟ್ಟೆ ಕ್ಷೇಮ ಅಸ್ಪತ್ರೆ ಸಹಯೋಗದೊಂದಿಗೆ 215 ಕುಟುಂಬಗಳಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸಿ ಮಾತನಾಡಿದರು. ಕುಟುಂಬದ ಸಮಗ್ರ ನೆಮ್ಮದಿಯ ಬುನಾದಿ ನಮ್ಮ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಪಜೀರಿನ ಗೋವನಿತಾಶ್ರಯದಲ್ಲಿ ಸರ್ವಧರ್ಮದ ಜನರಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಅದರ ಒಂದು ಅಂಗ ಆರೋಗ್ಯ ವಿಮಾ ಕಾರ್ಡ್ ವಿತರಣೆಯಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು . ಈ ಸಂದರ್ಭದಲ್ಲಿ ಟ್ರಸ್ಟಿ ಎಲ್. ಶ್ರೀಧರ್ ಭಟ್, ಲಕ್ಷ್ಮೀಶ ಎಡಿಯಾಳ್, ಉಳ್ಳಾಲ ಪ್ರಖಂಡ ವಿಶ್ವ ಹಿಂದೂ ಪರಿಚತ್ ಕಾರ್ಯದರ್ಶಿ ರವಿ ಅಸೈಗೋಳಿ, ಇನೋಳಿ ದೇವಂದಬೆಟ್ಟ ಶ್ರೀ ಸೋಮನಾಥ ದೇವಸ್ಥಾನದ ಚಂದ್ರಹಾಸ್ ಪೂಂಜಾ ಆಡಳಿತ ಮೊಕ್ತೇಸರ, ಮುಖಂಡರಾದ ಸುಭಾಷ್ ಧರ್ಮನಗರ ಮತ್ತಿತರರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ವೈದ್ಯಕೀಯ ಕ್ಷೇತ್ರವಾಗಿ ಅಭಿವೃದ್ಧಿಯಾಗುತ್ತಿರುವ ಮಂಗಳೂರಿನಲ್ಲಿ ಆರೋಗ್ಯ ಪ್ರವಾಸೋಧ್ಯಮಕ್ಕೆ ವಿಫುಲ ಅವಕಾಶವಿದ್ದು, ಮೊಂಬಾಸ ಕೌಂಟಿ ಸರಕಾರವು ಉನ್ನತ ಚಿಕಿತ್ಸೆಗೆ ಸಂಬಂಧಿಸಿದಂತೆ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಆರೋಗ್ಯ ಸಂಬಂಧಿಸಿದ ಒಡಂಬಡಿಕೆಯನ್ನು ನಡೆಸಲಿದೆ ಎಂದು ಕೇನ್ಯಾ ದೇಶದ ಮೊಂಬಾಸ ರಾಜ್ಯ ಸರಕಾರದ ಆರೋಗ್ಯ ಸೇವಾ ವಿಭಾಗದ ಮುಖ್ಯ ಆರೋಗ್ಯ ಅಧಿಕಾರಿ ಡಾ| ಖದೀಜಾ ಸೂದ್‍ಶಿಕೆಲಿ ಅಭಿಪ್ರಾಯಪಟ್ಟರು. ಇಂಟರ್ ನ್ಯಾಷನಲ್ ಹೆಲ್ತ್ ಟೂರಿಸಂ ಅಡಿಯಲ್ಲಿ ಕೆನ್ಯಾ ದೇಶದ ಎರಡನೆಯ ಅತಿ ದೊಡ್ಡ ರಾಜ್ಯವಾಗಿರುವ ಮೊಂಬಾಸ ಆಡಳಿತಕ್ಕೆ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ರವಿವಾರ ನಾಟೆಕಲ್‍ನ ಕಣಚೂರು ವೈದ್ಯಕೀಯ ಆಸ್ಪತ್ರೆ ಹಾಗೂ ಸಂಶೋಧನೆ ಕೇಂದ್ರಕ್ಕೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥ ಯು.ಕೆ. ಮೋನು ಹಾಗೂ ಆಡಳಿತ ವಿಭಾಗ ಹಾಗೂ ತಜ್ಞರ ಜೊತೆಗೆ ಚರ್ಚಿಸಿದ ಬಳಿಕ ಮಾತನಾಡಿದರು. ಮೊಂಬಾಸ ಕೃಷಿ, ವಾಣಿಜ್ಯ ವ್ಯವಹಾರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಕರಾವಳಿ ಭಾಗದಲ್ಲಿರುವ ಮಂಗಳೂರಿನ ಕಣಚೂರು ಸಂಸ್ಥೆಯ ಜೊತೆಗೆ ಇಂಟರ್ ನ್ಯಾಷನಲ್ ಹೆಲ್ತ್…

Read More

UN NETWORKS ಉಳ್ಳಾಲ: ಉಳ್ಳಾಲ ವಿದ್ಯಾರಣ್ಯ ನಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಡಾ| ಸದಾಶಿವ ಪೊಳ್ನಾಯ ಇವರನ್ನು ಆಯ್ಕೆಮಾಡಲಾಯಿತು. ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ಎಮ್.ಜಿ. ಶೆಣೈ, ಉಪಾಧ್ಯಕ್ಷರಾಗಿ ಸಲೀಂ ಮತ್ತು ಯೋಗೀಶ್, ಪ್ರಧಾನ ಕಾರ್ಯದರ್ಶಿಯಾಗಿ ಜಾನಕಿ ಪುತ್ರನ್, ಜತೆ ಕಾರ್ಯದರ್ಶಿಗಳಾಗಿ ಡಾ| ಸುಧೀರ್ ಉಪಾಧ್ಯಾಯ ಮತ್ತು ಇಕ್ಬಾಲ್ ಹಾಗೂ ಕೋಶಾಧಿಕಾರಿಯಾಗಿ ಸುಧೇಶ್ ಮರೋಳಿ ಆಯ್ಕೆಯಾಗಿದ್ದಾರೆ . ಸಭೆಯಲ್ಲಿ ಉದ್ಯಾನವನದ ಅಭಿವೃದ್ಧಿ, ಸಭಾ ಭವನದ ನಿರ್ಮಾಣ, ಕಾಂಕ್ರಿಟ್ ರಸ್ತೆಯ ನಿರ್ಮಾಣದ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಕೌನ್ಸಿಲರ್ ಮುಸ್ತಾಫ ಸಲಹೆ ಸೂಚನೆಗಳನ್ನು ನೀಡಿದರು. ಡಾ| ಸದಾಶಿವ ಪೊಳ್ನಾಯರು ಸ್ವಾಗತಿಸಿ, ಪ್ರಸ್ತಾವನೆಗೈದರು. ಡಾ| ಸುಧೀರ್ ಉಪಾಧ್ಯಾಯರು ವಂದಿಸಿದರು. ಸಂಘದ ಮುನ್ನಡೆಯಲ್ಲಿ ಬಹುಕಾಲದಿಂದ ಶ್ರಮಿಸುತ್ತಿದ್ದ ಎಮ್.ಜಿ. ಶೆಣೈ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಎಂ. ವಾಸುದೇವ ರಾವ್ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ಕುವೈತ್: ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ದಿನಾಂಕ 22/23 ಫೆಬ್ರವರಿ 2018 ರ ದ್ವಿದಿನ ಕೆಸಿಎಫ್ ದಿನಾಚರಣೆಯು ಬರಡಾದ ಮರುಭೂಮಿಯಲ್ಲಿ ಅನಿವಾಸಿ ಕನ್ನಡಿಗರ ಮಧ್ಯೆ ಧಾರ್ಮಿಕತೆಯ ಕಂಪನ್ನು ಬೀರುತ್ತಾ ಹೊಸ ಹುರುಪನ್ನು ಸೃಷ್ಟಿಸುತ್ತಾ ಧಾರ್ಮಿಕ , ಶೈಕ್ಷಣಿಕ , ಸಾಂತ್ವಾನಗಳಿಗೆ ಕೈ ಜೋಡಿಸುತ್ತಾ ರಾತ್ರಿ ಬೆಳಗಾಗುದರೊಳಗೆ ಯುವ ಜನಾಂಗದ ಮನಸ್ಸಿನ ಮನದಾಳದಲ್ಲಿ ಡಿಂಡಿಮವ ಬಾರಿಸುತ್ತಾ ಮುನ್ನುಗ್ಗಿದ ಕೆಸಿಎಫ್ ದಿನಾಚರಣೆಯು ಕುವೈತ್ ನಲ್ಲಿ ಮಾದರಿ ಕಾರ್ಯಕ್ರಮವಾಗಿ ಫೆಬ್ರವರಿ 22 ರಂದು ಇಶಾ ನಮಾಝ್ ನ ನಂತರ ಕೆಸಿಎಫ್ ರಾಷ್ಟ್ರೀಯ ಶೈಕ್ಷಣಿಕ ಕನ್ವೀನರ್ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರ ದುವಾದೊಂದಿಗೆ ಆರಂಭವಾಯಿತು. ಕೆಸಿಎಫ್ ಕುವೈತ್ ಬುರ್ದಾ ತಂಡದಿಂದ ಬುರ್ದಾ ಆಲಾಪನೆ ನಡೆಯಿತು.ಕೆಸಿಎಫ್ ರಾಷ್ಟ್ರೀಯ ಸಂಘಟನಾ ಕನ್ವೀನರ್ ಝಕ್ರಿಯಾ ಆನೆಕಲ್ ಸ್ವಾಗತ ಭಾಷಣ ದಲ್ಲಿ ಕೆಸಿಎಫ್ ಬಗ್ಗೆ ತಿಳಿಸಿದರು.ಸ್ವಲ್ಪ ವಿರಾಮದ ನಂತರ Iಅಈ ಕುವೈತ್ ರಾಷ್ಟ್ರೀಯ ಕಾರ್ಯದರ್ಶಿ ಜನಾಬ್ ಅಬ್ದುಲ್ಲ ವಡಗರ ಅವರಿಂದ ಪ್ರವಾಸಿ ಜೀವನದಲ್ಲಿ ಸಂಘಟನೆಯ ಅವಶ್ಯಕತೆ ಎಂಬ ವಿಷಯದಬಗ್ಗೆ…

Read More

UN NETWORKS ತಲಪಾಡಿ: ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಣ್ಣ ಮೊತ್ತದ ಅನುದಾನ ಬರುವುದರಿಂದ ದೊಡ್ಡ ಮಟ್ಟದ ಕಾಮಗಾರಿ ಅಸಾಧ್ಯ, ಆದರೂ ದೇವಿಪುರಕ್ಕೆ ಕಳೆದ ಎರಡು ವರ್ಷಗಳಲ್ಲಿ 12 ಲಕ್ಷ ಪಂಚಾಯಿತಿ ಅನುದಾನ ಬಳಕೆ ಮಾಡಲಾಗಿದೆ ಎಂದು ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಹೇಳಿದರು. ತಲಪಾಡಿ ಗ್ರಾಮ ಪಂಚಾಯಿತಿಯ ದೇವಿಪುರದಲ್ಲಿ ಏಳುವರೆ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಉದ್ಘಾಟನೆ ಹಾಗೂ ನೂತನ ಕೊಳವೆ ಬಾವಿ ನಿರ್ಮಾಣಕ್ಕೆ ಭಾನುವಾರ ನಡೆದ ಗುದ್ದಲಿಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಿಪುರದಲ್ಲಿ ಸಾವಿರದಷ್ಟು ಜನಸಂಖ್ಯೆಯಿದ್ದು ಮೂವರು ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಪ್ರತೀ ಸದಸ್ಯನಿಗೆ ವಾರ್ಷಿಕ 60 ಸಾವಿರ ಅನುದಾನ ಬರುತ್ತಿದ್ದು ಇದರಿಂದ ನೀರಿನ ಟ್ಯಾಂಕ್ ನಿರ್ಮಾಣ ಅಸಾಧ್ಯ. ಆದರೂ ಸದಸ್ಯರು ಒಗ್ಗಟ್ಟಿನಿಂದ ಅನುದಾನ ನೀಡಿದ್ದರಿಂದ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಅಲ್ಲದೆ ಕೊಳವೆ ಬಾವಿ ನಿರ್ಮಾಣಕ್ಕೆ 75 ಸಾವಿರ ಹಾಗೂ ತೆರೆದ ಬಾವಿ ಪುನಶ್ಚೇತನಕ್ಕೆ ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಪಂಜಾಳ ದೇವಿಪುರ ರಸ್ತೆಯನ್ನೂ…

Read More

UN NETWORKS ತೊಕ್ಕೊಟ್ಟು: ಹೆಲ್ಪ್ ಇಂಡಿಯಾ ಫೌಂಡೇಶನ್ ತೊಕ್ಕೊಟ್ಟು ಇದರ ವತಿಯಿಂದ ಉಚಿತ ಕನ್ನಡಕ ವಿತರಣೆ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಭಾನುವಾರ ತೊಕ್ಕೊಟ್ಟುವಿನ ಹೆಲ್ಪ್ ಇಂಡಿಯಾ ಫೌಂಡೇಶನ್ ಕಚೇರಿ ಬಳಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆಹಾರ ಸಚಿವ ಯು.ಟಿ.ಖಾದರ್ ಅವರು, ಸಂಘ ಸಂಸ್ಥೆಗಳು ಸಮಾಜಕ್ಕೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯವಿದೆ. ಹೆಲ್ಪ್ ಇಂಡಿಯಾ ಫೌಂಡೇಶನ್ ಕಳೆದ ಹಲವಾರು ವರ್ಷಗಳಿಂದ ಇಂತಹ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು, ಹೆಲ್ಪ್ ಇಂಡಿಯಾ ಫೌಂಡೇಶನ್ ರಸ್ತೆ ಬದಿಯಲ್ಲಿದ್ದ ನಿರ್ಗತಿಕರನ್ನು, ಮಾನಸಿಕ ಸ್ಥಿಮಿತ ಕಳೆದುಕೊಂಡ ಎಷ್ಟೋ ಜನರನ್ನು ಸಂತೈಸಿ ಆಸ್ಪತ್ರೆಗೆ ದಾಖಲಿಸುವುದರೊಂದಿಗೆ ಮನೆಗೆ ತಲುಪಿಸುವ ಕಾರ್ಯ ಮಾಡಿದೆ. ಇಂತಹ ಆರೈಕೆ ತಾಯಿಯಿಂದ ಮಗನಿಗೆ ಸಿಗಲು…

Read More

UN NETWORKS ಉಳ್ಳಾಲ: ತಾರತಮ್ಯವಿಲ್ಲದೆ ಸಮಾನತೆಯಿಂದ ಗಾಂಧೀಜಿ ಕನಸ್ಸಿನಂತೆ, ಅಂಬೇಡ್ಕರ್ ಸಂವಿಧಾನದ ಆಶಯದಂತೆ ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ಪೂರೈಸಿದ್ದು, ಮುನ್ನೂರು ಪಂಚಾಯಿತಿ ವ್ಯಾಪ್ತಿಯಲ್ಲಿನ ಹೆಚ್ಚಿನ ಒಳರಸ್ತೆ ಕಾಮಗಾರಿಗಳನ್ನು ಸಂಪೂರ್ಣಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಕುತ್ತಾರು ಜಂಕ್ಷನ್ನಿನಲ್ಲಿ ಬುಧವಾರ ನಡೆದ ಮುನ್ನೂರು ಗ್ರಾಮದ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮನೆಗೆ ಗ್ರಾಮದ ಸಮಸ್ಯೆ ಕೇಳಿಕೊಂಡು ಬಂದವರಲ್ಲಿ ಪಕ್ಷ, ಜಾತಿಯನ್ನು ಎಂದಿಗೂ ಕೇಳಿಲ್ಲ. ಅವರ ಇಚ್ಛೆಯಂತೆ ಯಾವುದೇ ಪಕ್ಷ, ಜಾತಿಯವನಾಗಿದ್ದರೂ ಗ್ರಾಮದ ಸಮಸ್ಯೆಗೆ ಪೂರಕವಾಗಿ ಸ್ಪಂಧಿಸಿದ್ದೇನೆ. ಇದು ಮುಖ್ಯಮಂತ್ರಿಗಳು ಹೆಚ್ಚಿನ ಮುತುವರ್ಜಿಯಿಂದ ಪೂರೈಸಿದ ಅನುದಾನದಿಂದ ಎಲ್ಲಾ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ, ಸಮುದಾಯದವರಿಗೆ ವಿಶೇಷ ಅನುದಾನವನ್ನು ಒದಗಿಸಲಾಗಿದೆ. ಮುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 302 ಮಂದಿಗೆ ಹಕ್ಕುಪತ್ರವನ್ನು ಪೂರೈಸಲಾಗಿದ್ದು, ಅದನ್ನು ಪಡೆದುಕೊಂಡವರು ಮನೆಯನ್ನು ಅಡವಿಗಿಟ್ಟು ಲೋನ್ ಪಡೆಯುವುದಾಗಲಿ, ಅದರ ಮೇಲೆ ಸಾಲ ಪಡೆಯುವುದಾಗಲಿ ಮಾಡಿದಲ್ಲಿ ಇದ್ದ ಮನೆಯನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಬಹುದು. ಭವಿಷ್ಯದಲ್ಲಿ ಸರಕಾರ…

Read More

UN NETWORKS ಮುಡಿಪು: ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸುಮಾರು ನೂರು ಕೋಟಿಗೂ ಮಿಕ್ಕಿ ಅನುದಾನ ಮಂಜೂರು ಮಾಡಿರುವ ಸಚಿವ ಯು.ಟಿ. ಖಾದರ್ ಅವರು ತನ್ನ ಶಾಸಕತ್ವದ ಮೂರು ಅವಧಿಯಲ್ಲಿ ಹಾಗೂ ಸಚಿವರಾಗಿ ಕ್ರಾಂತಿಕಾರಿ ಅಭಿವೃದ್ಧಿ ಕಾರ್ಯ ನಡೆಸಿದ್ದು ಆ ನಿಟ್ಟಿನಲ್ಲಿ ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸರ್ವ ಜನಾಂಗದ ನಾಗರಿಕ ಬಂಧುಗಳಿಂದ ಮಾ. 4ರಂದು ಸಂಜೆ 4.00ಗಂಟೆಗೆ ಸಚಿವ ಖಾದರ್ ಅವರಿಗೆ ಸಾರ್ವಜನಿಕ ಅಭಿನಂದನೆ, ಸನ್ಮಾನ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಹೇಳಿದರು. ಮುಡಿಪು ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಖಾದರ್ ಅವರ ಕೊಡುಗೆ ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಅವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಕ್ಕೂ ಬಹಳಷ್ಟು ಅನುದಾನ ಮಂಜೂರು ಮಾಡಿಸಿದ್ದಾರೆ. ಇಂದಿರಾ ಗಾಂಧಿ ಕ್ಯಾಂಟಿನ್, ಹರೀಶ್ ಸಾಂತ್ವನ ಯೋಜನೆ, 94ಸಿ ಹಾಗೂ 94ಸಿಸಿ ಯಡಿಯಲ್ಲಿ ಹಕ್ಕುಪತ್ರ ಕೊಡಿಸುವ ಮೂಲಕ ಮಂಗಳೂರು ಕ್ಷೇತ್ರಕ್ಕೆ ಬಹುಪಾಲು ಅನುದಾನ…

Read More

UN NETWORKS ಉಳ್ಳಾಲ: ಬೆಳ್ಮ ಗ್ರಾಮ ಎಲ್ಲ ಬಗೆಯಲ್ಲೂ ಏಕತೆಯಲ್ಲಿ ಮುನ್ನಡೆದುಕೊಂಡು ಹೋಗುತ್ತಿರುವ ಗ್ರಾಮವಾಗಿದ್ದು ಗಾಂಧೀಜಿ ಕಂಡ ಗ್ರಾಮದ ಅಭಿವೃದ್ಧಿ ನಿವಾದ ರಾಮರಾಜ್ಯ ಎಂಬ ಮಾತು ಇಲ್ಲಿ ನಿಜವಾಗುತ್ತಿದೆ ಎಂದು ಆಹಾರ ಹಾಗೂ ನಾಗರೀಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು. ಅವರು ಶುಕ್ರವಾರ ದೇರಳಕಟ್ಟೆಯಲ್ಲಿ ಬೆಳ್ಮ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡ, ಗ್ರೀನ್ ಗ್ರೌಂಡ್ ರಸ್ತೆ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ಕಾರ್ಯಕ್ರಮ ಯೋಜನೆ ಅದರಲ್ಲಿ ದೂರದೃಷ್ಟಿ ಇರಲೇಬೇಕು. ತಂದೆ ದಿವಂಗತ ಯು.ಟ. ಫರೀದ್ ಅವರು ಶಾಸಕರಾಗಿದ್ದ ಅವಧಿಯಲ್ಲೂ ಗುಡ್ಡ ಪ್ರದೇಶವಾಗಿದ್ದ ಪಾವೂರಿನಲ್ಲಿ ಪ್ರೌಢಶಾಲೆ, ಕೊಣಾಜೆಯಲ್ಲಿ ಮಂಗಳೂರು ವಿವಿ ನಿರ್ಮಿಸುವಾಗಲೂ ವಿರೋಧ ಇತ್ತು. ಆದರೆ ಈಗ ಅದರ ಅಗತ್ಯತೆ, ಈ ಭಾಗ ಅಭೂತಪೂರ್ವ ಕಂಡಾಗ ಯಾವುದೇ ಯೋಜನೆಯ ಹಿಂದೆ ದೂರದೃಷ್ಟಿ ಇರಬೇಕು ಎಂಬುದಕ್ಕೆ ಸಾಕ್ಷಿಯಾಗಿದ್ದು ಮುಂದಿನ ದಿನಗಳಲ್ಲಿ ಪಂಚಾಯಿತಿ ನೂತನ ಕಟ್ಟಡ ಬೆಳ್ಮ ಗ್ರಾಮದ ಮುಕುಟಕ್ಕೆ ಕಿರೀಟದಂತೆ ಶೋಭಿಸಲಿದೆ . ರಾಜ್ಯ ಸರಕಾರ…

Read More

UN NETWORKS ಉಳ್ಳಾಲ: ಸಿದ್ಧರಾಮಯ್ಯ ನೇತೃತ್ವದ ಸರಕಾರದ ಅಲ್ಪಸಂಖ್ಯಾತ ತುಷ್ಟೀಕರಣ ನೀತಿ, ಯೋಜನೆಯಲ್ಲಿ ಜಾತಿ ತಾರತಮ್ಯ, ಹಿಂದೂ ವಿರೋಧಿ ನೀತಿಗಳು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಜನ ತಿರಸ್ಕರಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರು  ಮಂಗಳೂರು ಮಂಡಲದ , ನವಶಕ್ತಿ ಕಾರ್ಯಕರ್ತರ ಸಮಾವೇಶವನ್ನು ಬೋಳಿಯಾರ್ ಹಾಲ್ ನಲ್ಲಿ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಮಂಗಳೂರು ಮಂಡಲದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸುವುದು ಶತಸಿದ್ಧ. ಆದರೆ ಗೆಲುವು ವ್ಯಕ್ತಿಯದ್ದಲ್ಲ, ಕಮಲದ ಗೆಲುವು. ನವಶಕ್ತಿ ಕಾರ್ಯಕರ್ತರ ಕಾರ್ಯದಿಂದ ಪ್ರತಿ ಮತಗಟ್ಟೆಯಲ್ಲಿ ಗೆಲುವು ಸಾಧಿಸಿ, ಪಕ್ಷ ವಿಜಯದ ಕಡೆಗೆ ಹೆಜ್ಜೆ ಯಿಡಲಿದೆ. ಪ್ರಧಾನಿಯಾಗಿ ನರೇಂದ್ರ ಮೋದಿಯವರ ವ್ಯಕ್ತಿತ್ವ, ಅಭಿವೃದ್ಧಿ ಪರಿಕಲ್ಪನೆ ಮತ್ತು ಅವರ ಸಾಕಾರವನ್ನು ಜನ ಮೆಚ್ಚಿದ್ದಾರೆ. ರಾಜ್ಯದಲ್ಲಿ ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಜನಪರ ಕಾರ್ಯಗಳನ್ನು ಸ್ಮರಿಸಿ ಜನ ಪುರಸ್ಕರಿಸಲಿದ್ದಾರೆ ಎಂದರು. ಸಮಾವೇಶದ ಅಧ್ಯಕ್ಷತೆಯನ್ನು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್,…

Read More