Author: UllalaVani

Kannada News From Coastal Karnataka

UN NETWORKS ಮುಡಿಪು: ಸ್ವಚ್ಚತೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದ್ದು ಈ ನಿಟ್ಟಿನಲ್ಲಿ ಯುವ ಸಮುದಾಯ ಸ್ವಚ್ಚತೆಯೊಂದಿಗೆ ಮಾದರಿ ಸಮಾಜ ನಿರ್ಮಿಸಲು ಪಣತೊಡಬೇಕು ಎಂದು ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಅವರು ಹೇಳಿದರು. ಅವರು ಪಜೀರು ಗ್ರಾಮ ಪಂಚಾಯಿತಿ ವತಿಯಿಂದ ಕಂಬ್ಲಪದವು ಬಳಿ ಸ್ವಚ್ಚತೆಗಾಗಿ ನಡೆದ ಕಾಲ್ನಡಿಗೆ ಜಾಥಾವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಇಂದು ದೇಶದೆಲ್ಲೆಡೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ನಾವೆಲ್ಲರೂ ಪ್ರೋತ್ಸಾಹಿಸುವುದರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಪಜೀರು ಪಂಚಾಯಿತಿ ಉಪಾಧ್ಯಕ್ಷರಾದ ಜ್ಯೋತಿ, ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಮಾಜಿ ಸದಸ್ಯರಾದ ಉಮ್ಮರ್ ಪಜೀರು, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಇಂತಿಯಾಝ್, ಪ್ಲೋರಿನ ಡಿಸೋಜ, ನಝೀರ್ ಮೊಯ್ದಿನ್, ಮುಖಂಡರಾದ ಪದ್ಮನಾಭ ನರಿಂಗಾನ, ಸಮೀರ್ ಪಜೀರು, ಸದಸ್ಯರಾದ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ಪಾನೀರ್: ಸಮಾಜದಲ್ಲಿ ಶಾಂತಿ, ಸಮಾಧಾನ, ಸೌಹಾರ್ದತೆ ನೆಲೆ ನಿಲ್ಲುವಂತಾಗಲು ಪ್ರತಿಯೊಬ್ಬರು ಶ್ರಮಿಸಬೇಕಿದೆ, ಇದು ಧಾರ್ಮಿಕ ಹಬ್ಬದ ಸಂದೇಶವೂ ಆಗಿದೆ ಎಂದು ಪಾನೀರ್ ದಯಾಮಾತೆ ಮೆರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರೀಸ್ ಅಭಿಪ್ರಾಯಪಟ್ಟರು. ಮಾತೆ ಮೆರ್ಸಿಯಮ್ಮ ಇಗರ್ಜಿಯ ವಾರ್ಷಿಕ ಉತ್ಸವ ಪ್ರಯುಕ್ತ ಭಾನುವಾರ ದೇರಳಕಟ್ಟೆಯಿಂದ ಚರ್ಚ್‍ವರೆಗೆ ಪವಿತ್ರ ಪ್ರಸಾದದ ಮೆರವಣಿಗೆ ಬಳಿಕ ನಡೆದ ಬಲಿಪೂಜೆಯಲ್ಲಿ ಅವರು ಮಾತನಾಡಿದರು. ಚರ್ಚ್‍ನ ವಾರ್ಷಿ ಹಬ್ಬದ ಬಲಿಪೂಜೆ ಪ್ರಯುಕ್ತ ಶಾಂತಿಯ ಸಂದೇಶ ಸಾರಲು ಮೆರವಣಿಗೆ ನಡೆಸಲಾಗಿದೆ, ಭಾಗವಹಿಸಿರುವ ಪ್ರತಿಯೊಬ್ಬರ ಮೇಲೂ ದೇವನ ಶಾಂತಿ, ಸಂದೇಶ ವರ್ಷಿಸಲಿ ಎಂದು ಹಾರೈಸಿದರು. ಜಪ್ಪು ಸಂತ ಜೋಸೆಫ್ ಸೆಮಿನರಿಯ ರೆಕ್ಟರ್ ಫಾ.ಜೋಸೆಫ್ ಮಾರ್ಟಿಸ್, ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲ ಫಾ.ಮೈಕೆಲ್ ಸಾಂತುಮಾಯರ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೊನ್ಸಾಲೀಸ್, ಮಾಜಿ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಧರ್ಮಭಗಿನಿಯರು ಉಪಸ್ಥಿತರಿದ್ದರು. `ಪಾನೀರ್ ದಯಾಮೇತೆ ಮೆರ್ಸಿಯಮನವರ ಇಗರ್ಜಿ ಪುರಾತನವಾಗಿದ್ದು, ಇತಿಹಾಸವನ್ನೂ ಹೊಂದಿದೆ, ಇದರ ವಾರ್ಷಿಕ ಹಬ್ಬದ ಪೂರ್ವಭಾವಿಯಾಗಿ…

Read More

UN Networks ಉಳ್ಳಾಲ: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಮರ ಮತಗಳನ್ನು ಪಡೆದು ವಿಜಯಿಯಾದ ಸಚಿವ ರಮಾನಾಥ ರೈ ಕಳೆದ ನಾಲ್ಕು ವರ್ಷಗಳಲ್ಲಿ ಮುಸ್ಲಿಮರ ಸಮಸ್ಯೆಗಳಿಗೆ ಸ್ಪಂಧಿಸದೆ ಸಮುದಾಯದ ಕೆಂಗಣ್ಣಿಗೆ ಗುರಿಯಾದ್ದು ಇದನ್ನು ಮುಚ್ಚಿಡಲು ದ.ಕ ಜಿಲ್ಲಾ ಕಾಂಗ್ರೆಸ್ ಸಂಘಟನೆಯ ಮೇಲೆ ನಿರಾಧಾರ ಆರೋಪ ಮಾಡುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಜಿಲ್ಲಾದ್ಯಕ್ಷ ನವಾಝ್ ಉಳ್ಳಾಲ ತಿಳಿಸಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ನನ್ನ ಮತ್ತು ಪ್ರಭಾಕರ್ ಭಟ್ ನಡುವೆ ನೇರ ಸ್ಪರ್ಧೆ ಎಂದು ಹೇಳಿ ಮುಸ್ಲಿಮರ ಮತಗಳನ್ನು ಪಡೆಯಲು ಸಚಿವರು ಯಶಸ್ವಿಯಾಗಿದ್ದರು. ಆದರೆ ಚುನಾವಣೆಯಲ್ಲಿ ವಿಜಯಿಯಾದ ನಂತರ ಪ್ರಭಾಕರ್ ಭಟ್ ನಿರಂತರವಾಗಿ ಮುಸ್ಲಿಮರ ವಿರುದ್ಧ ಕೋಮು ಪ್ರಚೋದನಕಾರಿ ಭಾಷಣ ಮಾಡಿ ಗಲಭೆಗಳಿಗೆ ನೇರ ಕಾರಣವಾಗಿದ್ದರೂ ಕನಿಷ್ಟ ಪಕ್ಷ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಉಸ್ತುವಾರಿ ಸಚಿವರಿಗೆ ಸಾಧ್ಯವಾಗಿಲ್ಲ . ಇದೀಗ ಮುಸ್ಲಿಮರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿ ಮತ್ತೆ ಮೋಸ ಮಾಡಲು ಹೊರಟಿದ್ದಾರೆ. ವರ್ಷಗಳ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕರ್ತ…

Read More

UN Networks ಉಳ್ಳಾಲ: ಎಂಸಿ ಗ್ರೇಡ್ ಇನ್ಫೋಟೆಕ್ ಪ್ರೈ. ಲಿ. ಇವರ `ಏಷಿಯನ್ ಸಾಫ್ಟ್’ ಸಾಫ್ಟ್‍ವೇರ್ ಡೆವಲಪ್ಪಿಂಗ್ ಕಚೇರಿಯನ್ನು ದೇರಳಕಟ್ಟೆ ಪುಂಚಮೆ ಕಾಂಪ್ಲೆಕ್ಸ್‍ನಲ್ಲಿ ಶನಿವಾರ ಸಾರಿಗೆ ಸಚಿವ ಹೆಚ್.ಎಂ ರೇವಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದ ಯುವಕರು ಸ್ವಂತ ಕಂಪೆನಿಗಳನ್ನು ಸ್ಥಾಪಿಸುವ ಮೂಲಕ ಅನೇಕ ಯುವಕರಿಗೆ ಮಾದರಿಯಾಗಲಿ. ಸಂಸ್ಥೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರನ್ನು ಪಡೆಯಲಿ. ಜನರಿಗೆ ಉತ್ತಮ ಸೇವೆಯನ್ನು ಒದಗಿಸುವ ಮುಖೇನ ಗ್ರಾಮೀಣ ಭಾಗದ ಯುವಕರಿಗೆ ಕೆಲಸವನ್ನು ಒದಗಿಸುವ ಕಾರ್ಯವಾಗಿದೆ ಎಂದು ಹಾರೈಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾತನಾಡಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಯುವಕನೋರ್ವ ಸ್ವಂತ ಸಂಸ್ಥೆಯನ್ನು ಕಟ್ಟುವ ಮೂಲಕ ರಾಜ್ಯ ಸರಕಾರದ ಚಿಂತನೆಗಳನ್ನು ಪೂರೈಸಿದಂತಾಗಿದೆ. ಯುವಕರಿಗೆ ಸ್ಟಾರ್ಟ್‍ಅಪ್ ಮತ್ತು ಸ್ಕಿಲ್ ಟ್ರೈನಿಂಗ್‍ಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಸಂಸ್ಥೆ ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸಲಿ ಎಂದು ಶುಭಹಾರೈಸಿದರು. ಮಂಜನಾಡಿ ಯತೀಂ ಖಾನ ಅಧ್ಯಕ್ಷ ಅಬ್ಬಾಸ್ ಉಸ್ತಾದ್ ದುಆ ನೆರವೇರಿಸಿದರು.…

Read More

UN NETWORKS ಕೈರಂಗಳ : ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ 6ನೇ ವರ್ಷದ ಸವಿನೆನಪಿಗಾಗಿ ನರಿಂಗಾನ ಗ್ರಾಮದ ಡಿ.ಜಿ ಕಟ್ಟೆ ಎಂಬಲ್ಲಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣವನ್ನು ತೋಟಾಲ್ ಜುಮಾ ಮಸೀದಿಯ ಖತೀಬ ಮುಹಿಯ್ಯದ್ದೀನ್ ಸ ಅದಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಹಂತ ಹಂತವಾಗಿ ಬೆಳೆದು ಬಂದ ಅಲ್-ಅಮೀನ್ ಸಂಘಟನೆ. ಬಸ್ ತಂಗುದಾನ ನಿರ್ಮಿಸಿ ಊರಿಗೆ ನೆರಳು‌ ನೀಡುವ ಮೂಲಕ ರಾಜ್ಯಕ್ಕೆ ಮಾದರಿ ಸಂಘಟನೆಯಾಗಿದೆ ಅಲ್-ಅಮೀನ್ ಫ್ರೆಂಡ್ಸ್ ಎಂದು ಹೇಳಿದರು. ಕರ್ನಾಟಕ ಬ್ಯಾಂಕ್ ಕೈರಂಗಳ ಬ್ರಾಂಚ್ ಮೆನೇಜರ್ ವಾಸುದೇವ್ ಮಾತನಾಡಿ ಪ್ರಯಾಣಿಕರಿಗೆ ನೆರಳು ನೀಡುವ ಮಹತ್ತರ ಕಾರ್ಯ ಮಾಡಿದ ಅಲ್-ಅಮೀನ್ ಸಂಸ್ಥೆ ಶ್ಲಾಘನೀಯ,ಸಂಸ್ಥೆಯು ಸೌಹಾರ್ದತೆಯ ಪ್ರತೀಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ಮಂಗಳೂರು ವಿಧಾನ ಸಭಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್‌ ಮಾತನಾಡಿ ದೇಶ ಯುವ ಸಮೂಹ ಇಂತಹ ಸಮಾಜಪರ ಕಾರ್ಯದಲ್ಲಿ ತೂಡಗಿಸಿದರೆ. ಭಾರತ ದೇಶ ಶ್ರೇಷ್ಠವಾಗಲು ಸಾಧ್ಯ. ಅಲ್-ಅಮೀನ್ ನಂತಹ ಸಂಘಟನೆಗಳು ಹಳ್ಳಿ ಹಳ್ಳಿಯಲ್ಲಿ ಹುಟ್ಟಿ ಬರಲಿ ಎಂದು…

Read More

UN NETWORKS ಹರೇಕಳ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇದರ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಹರೇಕಳ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಬದ್ರುದ್ದೀನ್ ಫರೀದ್ ನಗರ ಹರೇಕಳರವರನ್ನು ಆಹಾರ ಸಚಿವ ಯು.ಟಿ ಖಾದರ್ ಶಿಫಾರಸ್ಸಿನ ಮೆಲೆಗೆ ಉಳ್ಳಾಲ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಆಯ್ಕೆ ಮಾಡಿದ್ದಾರೆ.

Read More

UN NETWORKS ಕೊಣಾಜೆ: ತುಳು ಸಂಸ್ಕೃತಿ ಉಳಿಯಬೇಕಾದರೆ ತುಳುನಾಡಿನಲ್ಲಿ ಕೃಷಿ ಸಂಸ್ಕೃತಿಯೂ ಉಳಿಯಬೇಕು. ತುಳುನಾಡಿನ ನೆಲ ಜಲ ಸೇರಿದಂತೆ ಇಲ್ಲಿ ಸಂಸ್ಕೃತಿಯು ವಿಭಿನ್ನವಾದುದು. ಆದರೆ ಇಂದು ಕೃಷಿ ಸಂಸ್ಕೃತಿಯು ನಮ್ಮಿಂದ ದೂರವಾಗುತ್ತಿದ್ದು ಈ ನಿಟ್ಟಿನಲ್ಲಿ ಯುವ ಸಮುದಾಯ ಎಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತುಳು ಅಕಾಡೆಮಿಯ ಸದಸ್ಯ ತಾರನಾಥ ಕಾಪಿಕಾಡ್ ಅವರು ಹೇಳಿದರು. ಅವರು ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಹಾಗೂ ತುಳು ಅಕಾಡೆಮಿ ಇದರ ಸಂಯುಕ್ತ ಆಶ್ರಯದಲ್ಲಿ ಕೊಣಾಜೆ ಅಣ್ಣೆರೆಪಾಲುವಿನಲ್ಲಿ ನಡೆದ ಬರವುದ ಜವನೆರ್‍ನ ಬುಲೆತ ಪರ್ಬ-ಗ್ರಾಮ ಸಾಮರಸ್ಯ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ತುಳು ಭಾಷೆ ಅತ್ಯಂತ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ಆದರೆ ಇಂದು ನಮ್ಮ ಮಾತೃ ಭಾಷೆ ತುಳುವಾದರೂ ನಾವು ಅನ್ಯ ಭಾಷೆಗಳಿಗೆ ಮಾರುಹೋಗುತ್ತಿದ್ದೇವೆ. ನಮ್ಮ ಹಿರಿಯರ ಕಾಲದಿಂದ ನಾವು ಮಾತನಾಡಿಕೊಂಡು ಉಳಿಸಿಕೊಂಡು ಬಂದಿರುವ ನಮ್ಮ ತುಳು ಭಾಷೆಯನ್ನು ಮುಂದಿನ ಜನಾಂಗಕ್ಕೂ ಕೊಂಡೊಯ್ಯಬೇಕಾದದು ನಮ್ಮ…

Read More

UN NETWORKS ಮಂಗಳೂರು: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ (ರಿ) ಅಯೊಜಿಸುವ ವಿಕಾಶ್ ಕಾಲೇಜು ಅರ್ಪಿಸುವ CPL 2018 ಇದರ ತಂಡ ರಚನೆ ಯ ಆಕ್ಸನ್ ಕಾರ್ಯಕ್ರಮ ಒಕ್ಕೂಟದ ಸಭಾಂಗಣದಲ್ಲಿ ನಡೆಯಿತು ಇದರಲ್ಲಿ 8 ತಂಡಗಳ ರಚನೆಯಾಗಿದ್ದು ಪೆಬ್ರವರಿ 2. 3 ಮತ್ತು 4 ರಂದು ನೆಹರು ಮೈದಾನದಲ್ಲಿ ಹಗಲು ರಾತ್ರಿ ಹೊನಲು ಬೆಳಕಿನ CPL- 2018 ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿ ಗಳಾದ ವಿಕಾಶ್ ಶಿಕ್ಷಣ ಸಂಸ್ಥೆ ಯ ನಿರ್ದೇಶಕರಾದ ಡಾ.ಅನಂತ ಪ್ರಭು ಜಿ ಅವರು ಕಲಾವಿದರಿಗೆ ಶುಭಕೋರಿ ಒಗ್ಗಟ್ಟು ಕೇವಲ ಕ್ರಿಕೆಟ್ ಆಟಕ್ಕೆ ಮಾತ್ರ ಸೀಮಿತವಾಗಿರದೆ ಮುಂದಿನ ದಿನಗಳಲ್ಲಿ ತುಳುಚಿತ್ರರಂಗದ ಏಳಿಗೆ ಗೆ ಪೂರಕವಾಗಬೆಕು ಎಂದರು ಕಾರ್ಯಕ್ರಮದ ಅದ್ಯಕ್ಷತೆಯನ್ನು ಪಮ್ಮಿ ಕೊಡಿಯಲಬೈಲ್ ವಹಿಸಿದ್ದರು ಅಕ್ಸನ್ ಪ್ರಕ್ರಿಯೆಯನ್ನು RJ ಅನುರಾಗ್ ಬಂಗೇರಾ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ CATCAಕ್ರಿಕೆಟ್ ಕೋಚ್ ಪುಷ್ಪರಾಜ್.ಫ್ರದಾನ ಕಾರ್ಯದರ್ಶಿಗಳಾದ ರಾಜೇಶ್ ಸ್ಕೈಲಾರ್ಕ್ ಸಂಘಟನಾ ಕಾರ್ಯದರ್ಶಿ ಅಸ್ಗರ್ ಮುಡಿಪು. ಕ್ರೀಡಾ ಕಾರ್ಯದರ್ಶಿ ಗಳಾದ ಅರುಣ್…

Read More

UN NETWORKS ಮಂಗಳೂರು : ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಎಡಿಜಿಪಿ ಕಮಲ್ ಪಂತ್ ತಿಳಿಸಿದ್ದಾರೆ. ನಗರದ ಕಮಿಷನರ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಕ್ ರಾವ್ ಕೊಲೆ ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಬಂದು ಕೃತ್ಯ ನಡೆಸಿರುವ ಬಗ್ಗೆ ಮಾಹಿತಿಯನ್ನು ನಿಯಂತ್ರಣ ಕೊಠಡಿಯ ಮೂಲಕ ಎಲ್ಲಾ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿತ್ತು. ಪೊಲೀಸರು ಆರೋಪಿಗಳ ಹುಡುಕಾಟ ಮುಂದುವರಿಸಿರುವಂತೆಯೇ ಕಾರು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಂಜೆ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಮುಲ್ಕಿ ಠಾಣಾ ಪಿಎಸ್‌ಐ ಶೀತಲ್ ಅವರ ಎದುರಿನಿಂದ ಹಾದು ಹೋಗುತ್ತಿದ್ದಂತೆ ಶೀತಲ್ ಅವರು ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ, ಕಾರು ನಿಲ್ಲಿಸದೆ ಶೀತಲ್ ಅವರ ಮೇಲೆ ನುಗ್ಗಿಸಲು ಪ್ರಯತ್ನಿಸಿದ್ದು, ಈ ಸಂದರ್ಭ ಅವರ ಬಲಗೈ ಮತ್ತು ಬೆರಳಿಗೆ ಗಾಯ ಉಂಟಾಗಿದೆ. ಬಳಿಕ ತನ್ನ ಆತ್ಮರಕ್ಷಣೆಗಾಗಿ ಕಾರಿನ ಕಡೆಗೆ ಐದು ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಗಳನ್ನು ಬೆನ್ನಟ್ಟಿದ್ದು, ಆರೋಪಿಗಳ ಪೈಕಿ ಕಿನ್ನಿಗೋಳಿ ಮೆನ್ನಬೆಟ್ಟುವಿನ…

Read More

UN NETWORKS ಉಳ್ಳಾಲ: ಬೈಕ್ ಅಪಘಾತಕ್ಕೀಡಾಗಿ ಸಹಸವಾರ ಇನ್ಫೋಸಿಸ್ ಉದ್ಯೋಗಿ ಸಾವನ್ನಪ್ಪಿ, ಸವಾರ ಗಂಭೀರ ಗಾಯಗೊಂಡಿರುವ ಘಟನೆ ದೇರಳಕಟ್ಟೆಯ ಹೆಚ್.ಎನ್ ವಿದ್ಯಾರ್ಥಿನಿ ನಿಲಯ ಎದುರುಗಡೆ ಗುರುವಾರ ನಸುಕಿನ ಜಾವ ಸಂಭವಿಸಿದೆ. ತಮಿಳುನಾಡು ರದ್ದುನಗರ ತಾನ್ ಸೆಲ್ವಂ ಎಂಬವರ ಪುತ್ರ ಷಣ್ಮುಗನಾಥನ್(24) ಮೃತರು. ಸವಾರ ಮಿಲಿಂದ್ (22) ಗಂಭೀರ ಗಾಯಗೊಂಡವರಾಗಿದ್ದಾರೆ. ಮಿಲಿಂದ್ ಬಾಡಿಗೆ ಮನೆ ಪಂಪ್ ವೆಲ್ ನಲ್ಲಿದ್ದು, ಗೆಳೆಯ ಷಣ್ಮುಗನಾಥನ್ ಅವರನ್ನು ಮುಡಿಪುವಿಗೆ ಬಿಡಲು ಬೆಳಿಗ್ಗೆ ನಸುಕಿನ ಜಾವ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಅತಿವೇಗದ ಚಾಲನೆಯಿಂದಾಗಿ ರಸ್ತೆಯಿಂದ ಬಲಭಾಗದಲ್ಲಿರುವ ಹಾಸ್ಟೆಲ್ ಕೆಳಕ್ಕೆ ಹಾರಿದ ಬೈಕ್, ಹಾಸ್ಟೆಲ್ ಕಂಪೌಂಡಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕಿನಿಂದ ಗೋಡೆಗೆ ಎಸೆಯಲ್ಪಟ್ಟ ಷಣ್ಮುಗನಾಥನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುವನ್ನು ವಿದ್ಯಾರ್ಥಿನಿ ನಿಲಯದ ಪ್ರಬಂಧಕರು ಸಮೀಪದ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲಸದ ಕೊನೆಯ ದಿನವಾಗಿತ್ತು : ಐದು ವರ್ಷಗಳಿಂದ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಷನ್ಮುಗನಾಥನ್ ಇವರಿಗೆ ಚೆನ್ನೈ ಇನ್ಫೋಸಿಸ್ ಗೆ…

Read More