UN NETWORKS ಉಳ್ಳಾಲ: ಫಿಝಾ ಗ್ರೂಪ್ನ ಮಾಲೀಕ, ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಅವರ ಪುತ್ರಿ ಫಿಜಾ ಹಾಗೂ ಕೇರಳದ ಉದ್ಯಮಿ ರೋಶನ್ ಅವರ ಅದ್ದೂರಿ ನಿಖಾಹ್ ಸಮಾರಂಭ ಉಳ್ಳಾಲ ಸಮುದ್ರತಟದ ವಿಶಾಲ ಬಂಗ್ಲೆಯ ಕ್ಯಾಂಪಸ್ನಲ್ಲಿ ಶುಕ್ರವಾರ ಸಂಜೆ ನಡೆಯಿತು. ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಗಣ್ಯರು ಪಾಲ್ಗೊಂಡರು. ಫಾರೂಕ್ ಅವರ ಮನೆ ಸೇರಿದಂತೆ ಕ್ಯಾಂಪಸ್ನ್ನು ಕೋಟಿ ಕೋಟಿಗೂ ಅಧಿಕ ವೆಚ್ಚದಲ್ಲಿ ವಿದ್ಯುತ್ ದೀಪ, ಹೂವಿನಿಂದ ಅಲಂಕರಿಸಲಾಗಿತ್ತು. ಫಾರೂಕ್ ಪುತ್ರಿ ವಧುವಿಗೆ ಹಾಗೂ ವರ ರೋಶನ್ಗೆ ನಿಖಾಹ್ ಹಾಗೂ ವಿಶ್ರಾಂತಿಗಾಗಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಮನೆಯ ಮುಂಭಾಗದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಬಳಿಕ ಮನೆಯ ಹಿಂಭಾಗದ ಸಮುದ್ರತಟದ ಕ್ಯಾಂಪಸ್ನಲ್ಲಿ ಭೋಜನ, ಸಂಗೀತ ರಸಿಕರಿಗಾಗಿ ಗಝಲ್ ಎಲ್ಲವೂ ಒಂದಕ್ಕಿಂತ ಒಂದು ಮೇಳೈಸಿತ್ತು. ಸಂಜೆ ವಿಮಾನದಲ್ಲಿ ಬಜ್ಪೆಯಲ್ಲಿ ಬಂದು ಇಳಿದ ಅವರು ನೇರವಾಗಿ ಉಳ್ಳಾಲ ರಾಣಿ ಅಬ್ಬಕ್ಕ ಸರ್ಕಲ್ ಬಳಿಯ ಫಾರೂಕ್ ಅವರ ಬಂಗಲೆಗೆ ಆಗಮಿಸಿದರು. https://www.youtube.com/watch?v=8r9YGLNVAWo&t=446s ಮದುವೆ…
Author: UllalaVani
UN NETWORKS ಉಳ್ಳಾಲ: ವಿವಾಹ ಅಮಂತ್ರಣ ಪತ್ರಿಕೆಯಲ್ಲಿ ಮದುವೆಯ ಕರೆಯೊಂದಿಗೆ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. “ಮೋದಿಗೆ ಮತ ಹಾಕಿದ್ರೆ ಅದೇ ವಧು ವರರಿಗೆ ನೀಡಿ ಉಡುಗೊರೆ ” ಎಂದು ಆಮಂತ್ರಣದಲ್ಲಿ ಮುದ್ರಿಸಿದ್ದಾರೆ. ಈ ರೀತಿಯ ವಿವಾಹ ಆಮಂತ್ರಣವನ್ನು ಮುದ್ರಿಸಿದವರು ಸೋಮೇಶ್ವರ ನಿವಾಸಿಯಾಗಿ ಪ್ರವೀಣ್. ಇವರು ಇದೇ ಮುಂಬರುವ ಡಿ.31 ರಂದು ಕೇದಿಗೆ ನಿವಾಸಿ ಹೇಮಲತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಮದುವೆ ಕಾಗದದಲ್ಲಿ ಪ್ರಧಾನಿ ಮೋದಿ ಮೇಲಿನ ಅಭಿಮಾನವನ್ನು ಮೆರೆದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪರ ಮತ ಚಲಾಯಿಸುವಂತೆ ಮದುವೆ ಕಾಗದಲ್ಲಿ ವಿನಂತಿಸಿದ್ದಾರೆ. ಅಲ್ಲದೆ ಕೇಂದ್ರ ಸರಕಾರ ವಿವಿಧ ಯೋಜನೆಗಳನ್ನು ಮದುವೆ ಕಾಗದಲ್ಲಿ ಮುದ್ರಿಸಿದ್ದಾರೆ. ಇದೀಗ ಇವರ ಮದುವೆ ಕರೆಯೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
UN NETWORKS ಮುಡಿಪು : ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮುಡಿಪು ನನ್ನ ಕ್ಷೇತ್ರ ವ್ಯಾಪ್ತಿಗೆ ಬಂದ ಬಳಿಕ ಅಭೂತಪೂರ್ವ ಪ್ರಗತಿ ಕಂಡಿದೆ. ಕೆಲವು ವರ್ಷಗಳ ಹಿಂದೆ ಇಲ್ಲಿನ ಕಾಲೇಜು ಕೂಡಾ ಅಭಿವೃದ್ಧಿ ಕಾಣಲಿಲ್ಲ. ಕಾಲೇಜಿನಲ್ಲಿ ಮೂಲ ಸೌಲಭ್ಯಗಳ ಕೊರತೆ ಇರುವುದನ್ನು ಮನಗಂಡು ಈ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಆದ್ಯತೆ ನೀಡಿದೆ. ಹಾಗಾಗಿ ನನ್ನಿಂದಲೇ ಬಹಳಷ್ಟು ಯೋಜನೆ ತರಲು ಸಾಧ್ಯವಾಗಿರುವುದು ನನಗೆ ತುಂಬ ಸಂತೋಷ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು. ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡಿಪಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸಗೈದು ಅವರು ಮಾತನಾಡಿದರು.ಕಡಿಮೆ ಅಂಕ ಗಳಿಸಿದ ಅಥವಾ ಮೂಲ ಸೌಲಭ್ಯ ಕೊರತೆಯ ಕಾರಣದಿಂದ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಇತರ ಕಾಲೇಜಿನಲ್ಲಿ ಕಲಿಯಲು ಡೊನೇಶನ್, ಶುಲ್ಕ ಸೇರಿದಂತೆ ಬಹಳಷ್ಟು ಸಮಸ್ಯೆ ಎದುರಾಗುವುದನ್ನು ಮನಗಂಡು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಇದೇ ಕಾಲೇಜಿನಲ್ಲಿ ಶಿಕ್ಷಣ ಸಿಗಬೇಕು…
UN NETWORKS ಮುಡಿಪು: ಗ್ರಾಮೀಣ ಪ್ರದೇಶದ ಬಡ ಜನರು ನೆಮ್ಮದಿಯುತ ಜೀವನ ನಡೆಸುವುದಕ್ಕಾಗಿ ರಾಜ್ಯ ಸರಕಾರವು ಬಡವರಿಗೆ ಮುಖ್ಯಮಂತ್ರಿ ಉಚಿತ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಎಷ್ಟೋ ಬಡ ಮಹಿಳೆಯರು ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಹೇಳಿದರು. ಅವರು ಮುಡಿಪುವಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ವೌವ್ ವಿತರಣೆ ಹಾಗೂ ಅಡುಗೆ ಅನಿಲ ಬಳಕೆ ಬಗ್ಗೆ ಸುರಕ್ಷಾ ಕ್ರಮಗಳ ಕುರಿತು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಆಹಾರ ಸಚಿವನಾಗಿದ್ದ ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಉಚಿತ ಅನಿಲ ಭಾಗ್ಯ ಯೋಜನೆಯ ಬಗ್ಗೆ ತಿಳಿಸಿದಾಗ ಬಡವರಿಗೆ ಅನುಕೂಲವಾಗುವ ಯೋಜನೆಗೆ ಪ್ರೋತ್ಸಾಹ ನೀಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯೋಜನೆಯನ್ನು ಮುಂದುವರಿಸಿದ್ದಾರೆ. ಈ ಯೋಜನೆಯಲ್ಲಿ ಸಿಲಿಂಡರ್, ಸ್ವೌವ್, ರೆಗ್ಯುಲೇಟರ್ ಜೊತೆಗೆ ಎರಡು ಸಲ ಉಚಿತ ರಿಫಿಲ್ ಕೂಡಾ ಮಾಡಲಾಗುತ್ತಿದೆ.…
UN NETWORKS ಮುಡಿಪು: ಸರ್ಕಾರದ ಸಬ್ಸಿಡಿ, ಸಾಲಮನ್ನಾ ನೇರವಾಗಿ ಫಲಾನುಭವಿಗಳಿಗೇ ಸೇರುವುದರಿಂದ ಸಹಕಾರಿ ಸಂಘಗಳು ಜನಸಾಮಾನ್ಯರ ಬಂಡವಾಳದಿಂದಲೇ ಮುನ್ನಡೆಯುತ್ತಿದೆ, ಆದರೆ ಸರ್ಕಾರದ ಕೆಲಸ ಸಂಘಗಳು ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಂ.ಎನ್.ರಾಜೇದ್ರ ಕುಮಾರ್ ಹೇಳಿದರು. ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಳ, ದ.ಕ.ಜಿಲ್ಲ ಕೇಂದ್ರ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರಿ ಇಲಾಖೆ ಹಾಗೂ ಬಂಟ್ವಾಳ ತಾಲೂಕಿನ ಪತ್ತಿನ ಪ್ರಾಥಮಿಕ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹ-2018ರ ಪ್ರಯುಕ್ತ ಮುಡಿಪುವಿನಲ್ಲಿ ಶುಕ್ರವಾರ ನಡೆದ `ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್ ನಿರ್ಮಾಣ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಎಷ್ಟೇ ದೊಡ್ಡ ಬ್ಯಾಂಕ್ಗಳಿದ್ದರೂ ಕಟ್ಟಕಡೆಯ ರೈತನನ್ನು ತಲುಪುವುದು ಸಹಕಾರಿ ಬ್ಯಾಂಕ್ಗಳು ಮಾತ್ರ, ರೈತರ ಆರ್ಟಿಸಿ ಪಡೆದು ಸಾಲ ನೀಡುವ ರಾಷ್ಟ್ರೀಯ ಬ್ಯಾಂಕ್ಗಳು ಸಾಲಮನ್ನಾಕ್ಕೆ ಹಿಂದೇಟು ಹಾಕುತ್ತಿದ್ದರೂ ಸಹಕಾರಿ ಬ್ಯಾಂಕ್ಗಳು ರೈತರಿಗಾಗಿ ಪ್ರಾಮಾಣಿಕ ನೆಲೆಯಲ್ಲಿ ಕಾರ್ಯ…
UN NETWORKS ಕೊಣಾಜೆ: ಇಂದು ವಿದ್ಯಾರ್ಥಿಗಳಲ್ಲಿ ಓದಿನ ಹಸಿವು ಕಡಿಮೆಯಾಗುತ್ತಿರುವುದನ್ನು ನಾವು ಗಮನಿಸುತ್ತೇವೆ. ಓದಿನ ಹಸಿವಿಲ್ಲದಿದ್ದರೆ ನಾವು ಓದಿಯೂ ಪ್ರಯೋಜನವಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಜ್ಞಾನವಂತರಾಗಿ ಹೊಸ ಜಗತ್ತನ್ನು ಸೃಷ್ಟಿಸುವವರಂತಾಗಬೇಕು ಎಂದು ಖ್ಯಾತ ಸಾಹಿತಿ ವೈದೇಹಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ 2018-19ನೇ ಸಾಲಿನ ಮಂಗಳೂರು ವಿವಿ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಇಂದು ಜಾತಿ, ಮತ, ಧರ್ಮಗಳ ನಡುವೆ ಮನುಷ್ಯ ಕಾಣುತ್ತಿಲ್ಲ. ಶಿಕ್ಷಣವು ನಮ್ಮಲ್ಲಿ ಉತ್ತಮ ಮನಸ್ಸುಗಳನ್ನು, ಮಾನವೀಯ ನೆಲೆಗಳನ್ನು ರೂಪಿಸದೇ ಇದ್ದರೆ ಶಿಕ್ಷಣದ ಅಗತ್ಯವಿದೇಯೇ? ಶ್ರೀಮಂತಿಯನ್ನು ಬೆಳೆಸಲು ಮಾತ್ರ ಶಿಕ್ಷಣವೇ? ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ನಮಗೆ ನೈಜವಾದ ಜ್ಞಾನದ ಶಿಕ್ಷಣದ ಅಗತ್ಯವಿದೆ. ಅದು ನಮ್ಮಲ್ಲಿ ಮಾನವೀಯ ನೆಲೆಯನ್ನು ಒದಗಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಂತಿರಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಈಶ್ವರ್…
UN NETWORKS ಮಂಗಳೂರು: ಡಿಸೆಂಬರ್ 2009ರಲ್ಲಿ ಉಜಿರೆಯಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನ ತುಳುನಾಡ ಐತಿಹಾಸದಲ್ಲೇ ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹಾಸಮ್ಮೇಳನವಾಗಿ ಮೂಡಿತ್ತು. ಪ್ರತೀಯೋರ್ವ ತುಳುವರ ಹಿರಿಮೆಯ ಸಮ್ಮೇಳನವೂ ಆಗಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ತುಳು ಒಕ್ಕೂಟ ಇವುಗಳ ಸಾರಥ್ಯದಲ್ಲಿ ಮಂಗಳೂರು ಅಡ್ಯಾರ್ ನಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನವೂ ಭಿನ್ನವಾಗಿಯೇ ಮೂಡಿತ್ತು. ಇದು ಸಾಗರೋತ್ತರ ದುಬಾಯಿನಲ್ಲಿ ಜರುಗುವ ಸಮ್ಮೇಳನ ಎಲ್ಲಕ್ಕೂ ಮೀರಿ ಮತ್ತೊಂದು ಮೈಲುಗಲ್ಲು ಆಗಿ ಮೂಡಲಿದೆ ಎನ್ನುವ ಆಶಯ ನನಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ವಿಶ್ವ ತುಳುವರೆ ಪರ್ಬ ಸಮಿತಿ ಗೌರವಾಧ್ಯಕ್ಷ, ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಎಂದರು. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವದ ಸಮಸ್ಥ ತುಳುವರ ಬೃಹತ್ ಸಮಾವೇಶ ಆಗಿಸಿ ಇದೇ ನ.23-24ರ ದ್ವಿದಿನಗಳಲ್ಲಿ ದುಬಾಯಿ (ಯುಎಇ) ಅಲ್ಲಿನ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಎನ್ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು…
UN NETWORKS ಉಳ್ಳಾಲ: ಶಿಕ್ಷಣ ಪಡೆದ ವಿದ್ಯಾರ್ಥಿಗಳು , ಶಿಕ್ಷಕರನ್ನು ಗುರುತಿಸಿ ಗೌರವಿಸುವಂತಹ ಕಾರ್ಯ ಶ್ಲಾಘನೀಯ ಎಂದು ಪಿಲಾರು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ್ ಮಾಸ್ತರ್ ಅಭಿಪ್ರಾಯಪಟ್ಟರು. ಪಿಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ 2008ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಗುರುವಾರ ಶಿಕ್ಷಕರಿಗೆ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದ್ಯೆ ಪಡೆದ ವಿದ್ಯಾರ್ಥಿಗಳು ಗುರುತಿಸಿ ಗೌರವಿಸುವ ಕಾರ್ಯ ಸಂತಸ ಕೊಡುತ್ತದೆ. ಪಿಲಾರು ಶಾಲೆಯಲ್ಲಿ ಕಲಿತವರು ವೈದ್ಯರೂ ಆಗಿದ್ದಾರೆ. ಅಪಘಾತ ಪ್ರಕರಣ ಸಂದರ್ಭ ವಿದ್ಯಾರ್ಥಿನಿಯೊಬ್ಬಳು ವೈದ್ಯೆಯಾಗಿ ಸಿಕ್ಕಿದ್ದು, ಹೈಕೋರ್ಟಿನಲ್ಲಿ ವಕೀಲರಾಗಿ ಸಿಕ್ಕಿರುವುದು ವೃತ್ತಿ ಜೀವನದ ಸಾರ್ಥಕತೆಯನ್ನು ಕೊಡುತ್ತದೆ ಎಂದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಕಮಲಾ ಬಾೈ, ಹಿರಿಯ ಶಿಕ್ಷಕರುಗಳಾದ ಕಾತ್ಯಾಯಿನಿ, ಮೇರಿ, ಐಡಾ ಡಿಸೋಜ, ಪ್ರವೀಣಾ, ಪುಷ್ಪಾವತಿ ಉಚ್ಚಿಲ್, ವಿಶಾಲಾಕ್ಷಿ, ನಾಗವೇಣಿ, ಸ್ಮಿತಾ, ಭಾರತಿ, ಪ್ರೇಮಲತಾ, ಗುಲಾಬಿ ಹಾಗೂ ಎಸ್ ಡಿಎಂಸಿ ಅಧ್ಯಕ್ಷ ಆಸೀಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳೇ ವಿದ್ಯಾರ್ಥಿಗಳಾದ ಅನುಷಾ .ಬಿ ಸ್ವಾಗತಿಸಿದರು. ತೇಜೇಶ್ ಮತ್ತು…
UN NETWORKS ಉಳ್ಳಾಲ: ದೇರಳಕಟ್ಟೆ ಕಾನೆಕೆರೆ ಮೂರು ಬಾವಿಗಳಲ್ಲಿ ಪತ್ತೆಯಾದ ತೈಲಾಂಶ ಪ್ರಕರಣ ಇನ್ನಷ್ಟು ಕಗ್ಗಂಟಾಗಿದೆ. ಗುರುವಾರ ಮೂರು ಬಾವಿಗಳ ನೀರನ್ನು ಸಂಪೂರ್ಣ ಹೊರತೆಗೆದರೂ ಮತ್ತೆ ಬಾವಿಯಲ್ಲಿನ ಒರತೆಯಲ್ಲಿ ಅಧಿಕ ಪ್ರಮಾಣದಲ್ಲಿ ತೈಲಾಂಶ (ಪೆಟ್ರೋಲ್ ) ಪತ್ತೆಯಾಗಿದೆ. ಬೆಳ್ಮ ಗ್ರಾಮ ಪಂಚಾಯಿತಿ ವತಿಯಿಂದ ನೀರು ಸಂಪೂರ್ಣ ಹೊರತೆಗೆದು ಗ್ರಾಮಕರಣಿಕರು ಬಾವಿ ನೀರು ಜನ ಉಪಯೋಗಿಸದಂತೆ ಮೊಹರು ಹಾಕಿದ್ದಾರೆ. ನ.13 ರಂದು ಕಾನೆಕೆರೆ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿದ್ದರು. ಬೆಳ್ಮ ಗ್ರಾಮ ಪಂಚಾಯಿತಿಗೆ ಬಾವಿ ನೀರು ಸಂಪೂರ್ಣವಾಗಿ ಖಾಲಿ ಮಾಡಿ , ನೀರಿನ ಸ್ಯಾಂಪಲ್ ಅನ್ನು ಎಂ.ಆರ್ ಪಿಎಲ್ ಮತ್ತು ಎನ್ ಐ ಟಿಕೆ ಮುಖೇನ ಉತ್ತಮ ಸಂಶೋಧನಾ ಏಜೆನ್ಸಿಗೆ ಕಳುಹಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಬಳಿ ಆದೇಶಿಸಿದ್ದರು. ಕಾನೆಕೆರೆಯ ಇಸ್ಮಾಯಿಲ್ .ಕೆ, ಇಸ್ಮಾಯಿಲ್.ಎನ್ ಮತ್ತು ಹುಸೈನ್ ಎಂಬವರಿಗೆ ಸೇರಿದ ಮೂರು ಬಾವಿಗಳಿಂದ ನೀರು ಗುರುವಾರ ಸಂಜೆ ವೇಳೆ ಸಂಪೂರ್ಣ ಹೊರತೆಗೆಯಲಾಯಿತು. ಪಂಪ್ ಮುಖೇನ ನೀರು ಸಿಂಟೆಕ್ಸ್ ಗೆ…
UN NETWORKS ಉಳ್ಳಾಲ : ಇಂದು ಕೆಲವೊಂದು ವಿಷಯದಲ್ಲಿ ಪ್ಲಾಸ್ಟಿಕ್ ಬಳಕೆ ಅನಿವಾರ್ಯವಾಗಿದೆ, ಆದರೂ ಎಲ್ಲೆಂದರಲ್ಲಿ ಎಸೆಯದೆ ಜವಾಬ್ದಾರಿಯಿಂದ ಬಳಸುವುದು ಮುಖ್ಯ ಎಂದು ರೋಶನಿ ನಿಲಯದ ನಿರ್ದೇಶಕ ಕಿಶೋರ್ ಅತ್ತಾವರ ಅಭಿಪ್ರಾಯಪಟ್ಟರು. ಉಳ್ಳಾಲ ನಗರಸಭೆ ವತಿಯಿಂದ ಶಿಕ್ಷಣ ಇಲಾಖೆ, ರೋಶನಿ ನಿಲಯ ಹಾಗೂ ಜನಶಿಕ್ಷಣ ಟ್ರಸ್ಟ್ ಸಹಭಾಗಿತ್ವದಲ್ಲಿ ಗುರುವಾರ ನಗರಸಭೆಯ ಸಭಾಂಗಣದಲ್ಲಿ ನಡೆದ `ಶೂನ್ಯ ತ್ಯಾಜ್ಯ ನಿರ್ವಹಣಾ ಆಂದೋಲನ-2018-19′ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದ್ದು ದಂಡ ಹಾಕಲಾಗುತ್ತದೆ, ಆದರೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ. ಕಸ ಸೃಷ್ಟಿಸುವ ಜನರೇ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಅಧಿಕಾರಿಗಳು, ಸ್ಥಳೀಯಾಡಳಿತ ಮಾಡುವ ಪ್ರಯತ್ನಗಳು ಫಲ ನೀಡದು ಎಂದು ಹೇಳಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ರೋಶನಿ ನಿಲಯದ ಪ್ರಾಂಶುಪಾಲೆ ಪ್ರೊ.ಎವ್ಲಿನ್ ಬೆನ್ನೆಸ್, ನಿವೃತ್ತ ಶಿಕ್ಷಕ ವಾಸುದೇವ ರಾವ್, ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ಸಂಘಟನಾ…

