Author: UllalaVani

Kannada News From Coastal Karnataka

UN networks ಉಳ್ಳಾಲ : ಮಂಗಳೂರು ಕ್ಷೇತ್ರದ 19 ಗ್ರಾ.ಪಂ ಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ನಗರದಲ್ಲಿರುವ ವ್ಯವಸ್ಥೆಯನ್ನು ಗ್ರಾಮೀಣ ಮಟ್ಟಕ್ಕೂ ತಲುಪಿಸಿದ್ದೇವೆ. ರಸ್ತೆ ವ್ಯವಸ್ಥೆ, ಕುಡಿಯುವ ನೀರು, ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭ, ಸಾರಿಗೆ ವ್ಯವಸ್ಥೆ, ನಗರ ಮಟ್ಟದ ಸವಲತ್ತುಗಳು ಎಲ್ಲವನ್ನೂ ಉಳ್ಳಾಲ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಪ್ರತಿ ಮತದಾರ ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾನೆ ಎಂದು ಮಂಗಳೂರು ಕ್ಷೇತ್ರ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ‌. ತೊಕ್ಕೊಟ್ಟು ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ದಿ ಗೋಷ್ಠಿಯ ಲ್ಲಿ ಮಾಹಿತಿ ನೀಡಿದ ಅವರು ಉಳ್ಳಾಲವನ್ನು ತಾಲೂಕಾಗಿ ಮಾರ್ಪಾಡು ಮಾಡಲಾಗಿದೆ. ಪ್ರತಿ ಗ್ರಾಮದಲ್ಲಿ ಸಹೋದರತೆ, ಪ್ರೀತಿ ವಿಶ್ವಾಸ ವಾತಾವರಣ ಸೃಷ್ಟಿಸುವುದು ಕಾಂಗ್ರೆಸ್ ಉದ್ದೇಶ. ಇದನ್ನು ಕಾಂಗ್ರೆಸ್‌ ನಿರ್ಮಿಸಿದೆ. ಬಿಜೆಪಿ ಆಡಳಿತದಲ್ಲಿ ಗ್ರಾಮೀಣ ಮಟ್ಟದಲ್ಲಿ ಜನ ಜೀವಿಸಲು ಯಾವುದೇ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿಲ್ಲ. ರೇಷನ್, ಪೆನ್ಶನ್, ಸಂಧ್ಯಾ ಸುರಕ್ಷೆ ಎಲ್ಲಾ ಸವಲತ್ತುಗಳನ್ನು ನಿಲ್ಲಿಸಿದ್ದಾರೆ. ಪೆಟ್ರೋಲ್ ರೂ.100 ಕ್ಕೆ ಮುಟ್ಟುವ ಹಂತಕ್ಕೆ ತಲುಪಿದೆ.…

Read More

UN networks ಉಳ್ಳಾಲ: ಮಂಗಳೂರು ವಿಧಾನಸಬಾ ಕ್ಷೇತ್ರದ 19 ಗ್ರಾಮ ಪಂಚಾಯತ್‍ಗಳ 332 ಸ್ಥಾನಗಳಲ್ಲಿ 278 ಭಾರತೀಯ ಜನತಾ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 180ಕ್ಕೂ ಹೆಚ್ಚು ಅಭ್ಯರ್ಥಿಗಳು ಜಯಗಳಿಸಲಿದ್ದು, 12ರಿಂದ 15 ಪಂಚಾಯತ್‍ಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತ ಬರಲಿದೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಪಂಡಿತ್‍ಹೌಸ್ ತಿಳಿಸಿದರು. ತೊಕ್ಕೊಟ್ಟು ಕಾಪಿಕಾಡ್‍ನ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು ಈ ಬಾರಿ ನಮಗೆ ಯಾವುದೇ ಆತಂಕವಿಲ್ಲ. ಗ್ರಾಮ ಮಟ್ಟದಲ್ಲಿ ಹೆಚ್ಚಿನ ಅನುದಾನವನ್ನು ನೀಡಿದ್ದೇವೆ. ಕೋವಿಡ್ 19 ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತೀ ಮನೆ ಮನೆಗೆ ತೆರಳಿ ಅವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಅಲ್ಪ ಸಂಖ್ಯಾತರು ಬಿಜೆಪಿಯನ್ನು ಬೆಂಬಲಿಸುತ್ತಿದ್ದು, ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧೆಯಲ್ಲಿದ್ದಾರೆ. ಪಕ್ಷದಿಂದ ಆಭ್ಯರ್ಥಿಗಳಾಗಲು ಹೆಚ್ಚು ಮಂದಿ ಮುಂದೆ ಬಂದಿದ್ದಾರೆ ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‍ನಲ್ಲಿ ಬಿಜೆಪಿ ಮೇಲಗೈ ಸಾ„ಸುವುದು ಸಿದ್ಧ ಎಂದ ಅವರು ಕಳೆದ ಅ„ಕಾರ ಅವ„ಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ 6 ಗ್ರಾಮ ಪಂಚಾಯತ್‍ನಲ್ಲಿ…

Read More

UN networks ತೊಕ್ಕೊಟ್ಟು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನೂತನ ಬ್ಯಾರಿ ಭವನ ನಿರ್ಮಾಣಕ್ಕಾಗಿ ತೊಕ್ಕೊಟ್ಟಿನಲ್ಲಿ 3 ಕೋಟಿ ಮೌಲ್ಯದ 25 ಸೇಂಟ್ಸ್ ಜಮೀನು ಸರಕಾರದಿಂದ ಮಂಜೂರಾಗಿದ್ದು ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.  ನೂತನ ಬ್ಯಾರಿ ಭವನ ನಿರ್ಮಾಣಕ್ಕಾಗಿ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಸ್ಥಳ ನಿಗದಿಪಡಿಸಲಾಗಿದೆ.ಶೀಘ್ರದಲ್ಲೇ ಇದರ ಶಿಲಾನ್ಯಾಸ ಕಾರ್ಯವನ್ನು ಜನಪ್ರತಿನಿಧಿಗಳು ಹಾಗೂ ಬ್ಯಾರಿ ಸಮುದಾಯದ ಪ್ರಮುಖರು ನೆರವೇರಿಸಲಿರುವರು. ಸುಮಾರು 6 ರಿಂದ 12 ತಿಂಗಳ ಒಳಗೆ ಸಾರ್ವಜನಿಕರ ಉಪಯೋಗಕ್ಕೆ ಈ ಭವನ ಲಭ್ಯವಾಗಲಿದೆ.ಬ್ಯಾರಿ ಭವನದಲ್ಲಿ ವಿಶಾಲ ಸಭಾಂಗಣ, ಮಿನಿಹಾಲ್, ಅಕಾಡೆಮಿಯ ಕಚೇರಿ, ಸಾರ್ವಜನಿಕ ಗ್ರಂಥಾಲಯ, ವಸ್ತು ಸಂಗ್ರಹಾಲಯವನ್ನು ಹೊಂದಿರುತ್ತದೆ. ಈ ಭವನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನಕ್ಕೆ ಬರುವುದರಿಂದ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದರು. ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಬ್ಯಾರಿ ಭವನಕ್ಕಾಗಿ ನೀರುಮಾರ್ಗದ ಬೈತುರ್ಲಿ ಗ್ರಾಮದಲ್ಲಿ 0.25 ಸೆಂಟ್ಸ್ ಜಾಗವನ್ನು…

Read More

UN networks ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯಲ್ಲಿ ಅನಾಥ ಸ್ಥಿತಿಯಲ್ಲಿದ್ದ ಸಿಬಿಝೆಡ್ ಬೈಕನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಂಬರ್ ಪ್ಲೇಟ್ ಇಲ್ಲದೆ ಹಲವು ದಿನಗಳಿಂದ ಬೈಕ್ ರಸ್ತೆ ಬದಿಯಲ್ಲೇ ಉಳಿದಿತ್ತು. ತೊಕ್ಕೊಟ್ಟು ಒಳಪೇಟೆಯಲ್ಲಿ ಫ್ಯಾನ್ಸಿ ಅಂಗಡಿ ಮುಂಭಾಗದಲ್ಲಿ ಒಂದು ವಾರದಿಂದ ಸಿಬಿಝೆಡ್ ಬೈಕ್ ನಂಬರ್ ಪ್ಲೇಟ್‌ ಇಲ್ಲದೇ ನಿಲ್ಲಿಸಲಾಗಿತ್ತು. ಗೇರ್ ಲಿವರ್ , ಸೈಡ್ ಸ್ಟ್ಯಾಂಡ್ ಇಲ್ಲದೇ ಬೈಕನ್ನು ಕಳವುಗೈದು ತಂದು ನಿಲ್ಲಿಸಿರುವ ಸಾಧ್ಯತೆ ಇದೆ. ಅಥವಾ ಅಪರಾಧ ಕೃತ್ಯಕ್ಕೆ ಬಳಸಿ ಬಳಿಕ ಇಟ್ಟು ತೆರಳಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ಕ್ಲಿಕ್ ಸಭಾಂಗಣದಲ್ಲಿ ತೊಕ್ಕೊಟ್ಟು ಒಳಪೇಟೆಯ ವರ್ತಕ ಸಂಘದವರು ಪೊಲೀಸ್ ಇನ್ಸ್ ಪೆಕ್ಟರ್ ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ‌.

Read More

UN networks ಅಸೈಗೋಳಿ: ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ 33ನೇ ಶ್ರೀ ಅಯ್ಯಪ್ಪ ಸ್ವಾಮಿ ದೇವರ ವಾರ್ಷಿಕ ಮಹೋತ್ಸವವು ಮಂಜನಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಟಿ.ವೆಂಕಟೇಶ್ ಭಟ್ ಅವರ ಪೌರೋಹಿತ್ಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ನಾರಾಯಣ ರೈ ಕಕ್ಕೆಮಜಲು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಅಧ್ಯಕ್ಷರಾದ ಶ್ರೀ ನಿವಾಸ್ ಶೆಟ್ಟಿ ಪುಲ್ಲು, ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ, ಜೊತೆ ಕಾರ್ಯದರ್ಶಿ ತ್ಯಾಗಂ ಹರೇಕಳ, ಶಿವಪ್ರಸಾದ್, ಪಟ್ಟೋರಿ ನಾಗಬ್ರಹ್ಮ ಭಜನಾ ಮಂಡಳಿಯ ಅಧ್ಯಕ್ಷ ರಾಜೇಶ್ ಕಾನ ಹಾಗೂ ಕೃಷ್ಣಪ್ಪ, ಆನಂದ ಗುರುಸ್ವಾಮಿ, ಜಗನ್ನಾಥ ಗುರುಸ್ವಾಮಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

UN networks ಉಳ್ಳಾಲ: ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಮಾನವೀಯತೆ ತೋರಿಸಿದ್ದೇವೆ. ಇನ್ನು ಮುಂದೆಯೂ ಅಪ್ರಾಪ್ತರು ವಾಹನ ಚಲಾಯಿಸುವುದು ಕಂಡುಬಂದಲ್ಲಿ ಸರಕಾರ ನಿಗದಿಪಡಿಸಿದ ರೂ. 50,000 ದಂಡವನ್ನು ಕಟ್ಟುನಿಟ್ಟಾಗಿ ಪಾವತಿಸಬೇಕಾದೀತು ಎಂದು ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಜಿ ಹೇಳಿದರು. ಅವರು ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಸೋಮವಾರವ ನಡೆದ ಉಳ್ಳಾಲ ಪೊಲೀಸ್ ಠಾಣೆಯ ಅಪರಾಧ ತಡೆ ಮಾಸಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೊರೊನಾ ಸಂಕಷ್ಟ ದಿಂದ ದುಡಿಮೆ ಇಲ್ಲದೆ ಜನ ತೊಂದರೆಗೀಡಾಗಿದ್ದಾರೆ. ಈ ಸಂದರ್ಭ ವಾಹನ ಸಂಚಾರದ ಕಾನೂನಿನಲ್ಲಿ ಮಾನವೀಯತೆ ತೋರಿಸಿದ್ದೇವೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ವಾಹನದ ಆರ್.ಸಿ, ಡಿ.ಎಲ್, ಇನ್ಶುರೆನ್ಸ್ , ಎಮಿಷನ್ ಇಲ್ಲದೇ ಇದ್ದಲ್ಲಿ ಸರಕಾರ ನಿಗದಿ ಮಾಡಿರುವ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಹೆಚ್ಚಾಗಿ ಅಪ್ರಾಪ್ತರು ವಾಹನ ಸಂಚಾರ ನಡೆಸುತ್ತಿರುವುದು ಕಂಡುಬರುತ್ತಿದೆ. ಇದರಿಂದ ಅವರ ಜೀವಕ್ಕೂ ಅಪಾಯ, ಹೊರಗಿನವರಿಗೂ ಅಪಾಯ. ಈ ನಿಟ್ಟಿನಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಸರಕಾರ ನಿಗದಿ ಮಾಡಿದ ರೂ.50,000 ದಂಡವನ್ನು ಹಾಕಲಾಗುವುದು ಎಂದು…

Read More

UN networks ಉಳ್ಳಾಲ: ಮಂಜನಾಡಿ ಅಸೈ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹನೀಫ್ ನಿಜಾಮಿ ಎಂಬವರ ಮೇಲೆ ಸುತ್ತಿಗೆಯಿಂದ ಬಡಿದು ಕೊಲೆಗೆ ಯತ್ನ ಸಿದ ಘಟನೆ ಶನಿವಾರ ನಡೆದಿದೆ. ರಾಜ್ಯ ಹಜ್ ಕಮಿಟಿ ಸದಸ್ಯ ಹನೀಫ್ ನಿಜಾಮಿ ಮೇಲೆ ಅಸೈಗೋಳಿ ನಿವಾಸಿ ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಕರೀಂ ಎಂಬಾತನಿಂದ ಕೃತ್ಯ ನಡೆದಿರುವ ಬಗ್ಗೆ ಆರೋಪಿಸಲಾಗಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ ಯಾಗುತ್ತಿದ್ದ ವಾರ್ಡಿನಿಂದ ಸ್ಪರ್ಧಿಸುತ್ತಿರುವ ದ್ವೇಷದಿಂದ ಕೊಲೆಯತ್ನ ನಡೆಸಲಾಗಿದೆ. ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಹಜ್ ಕಮಿಟಿ ಸದಸ್ಯರು ಹಾಗೂ ಧಾರ್ಮಿಕ ಗುರುಗಳ ಗಳಾಗಿದ್ದು ಗಾಯಾಳುವನ್ನು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ‌.

Read More

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಏಳು ಗ್ರಾಮ ಪಂಚಾಯಿತಿಗಳ ಏಳು ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಿನ್ಯ ಗ್ರಾಮ ಪಂಚಾಯತ್ 2 ನೇ ವಾರ್ಡ್‌ನಲ್ಲಿ ಬಾಗಿ, ತಲಪಾಡಿ ಗ್ರಾಮ ಪಂಚಾಯತ್‌ನ 5 ನೇ ವಾರ್ಡ್‌ನಲ್ಲಿ ಗೀತಾನಾಯ್ಕ್, ಮುನ್ನೂರು ಗ್ರಾಮ ಪಂಚಾಯತ್ನ 6ನೇ ವಾರ್ಡ್‌ನಲ್ಲಿ ಪುಷ್ಪ, ಬೆಳ್ಮ ಪಂಚಾಯತ್‌ನ 1ನೇ ವಾರ್ಡ್‌ನಲ್ಲಿ ಸುಂದರಿ, ಪಜೀರ್ ಪಂಚಾಯತ್ನ 2ನೇ ವಾರ್ಡ್‌ನಲ್ಲಿ ವಸಂತಿ, ತುಂಬೆ ಪಂಚಾಯತ್‌ನ 1ನೇ ವಾರ್ಡ್‌ನಲ್ಲಿ ಜಯಂತಿ ಕೇಶವ, ಮೇರಮಜಲ್ ಪಂಚಾಯತ್‌ನ 1ನೇ ವಾರ್ಡ್‌ನಲ್ಲಿ ವಿಮಲನಾಯಕ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

Read More

UN networks ಉಳ್ಳಾಲ:ಸರ್ವೀಸ್ ಬಸ್ಸಿನ ಮೂಲಕ ಮದುವೆಗೆ ತೆರಳುತ್ತಿದ್ದ ಮದುವೆ ಬಸ್ಸನ್ನು ಟೂರಿಸ್ಟ್ ವಾಹನ ಚಾಲಕ‌ಮಾಲೀಕರು ತಡೆ ಹಿಡಿದು ನಿಲ್ಲಿಸಿದ ಘಟನೆ ಸೋಮವಾರದಂದು ತೊಕ್ಕೊಟು ಜಂಕ್ಷನ್ ನಲ್ಲಿ‌ ನಡೆದಿದೆ. ಲಾಕ್ ಡೌನ್ ನಿಂದಾಗಿ ಈಗಾಗಲೇ ಅಪಾರವಾದ ಸಂಕಷ್ಟವನ್ನು ಟೂರಿಸ್ಟ್ ಬಾಲಕರು ಅನುಭವಿಸುತ್ತಿದ್ದು ಈ ಮಧ್ಯೆ ಅಲ್ಲೋಇಲ್ಲೊ ಸಿಗುವ ಮದುವೆ ಟ್ರಿಪಿಗೂ ಸರ್ವೀಸ್ ಬಸ್ಸಿನವರು ಅಡ್ಡಿಪಡಿಸುತ್ತಿದ್ದಾರೆ.‌ ಹೀಗಾದರೆ ನಾವು ಬದುಕುವುದಾದರೂ ಹೇಗೆ ಎಂಬ ಆಕ್ರೋಶವನ್ನು ಟೂರಿಸ್ಟ್ ವಾಹನ ಚಾಲಕ‌ಮಾಲೀಕರು ವ್ಯಕ್ತಪಡಿಸಿದ್ದಾರೆ. ಸ್ಧಳಕ್ಕೆ ಸಂಚಾರಿ ಹಾಗೂ ಉಳ್ಳಾಲ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದಾರೆ.

Read More

UN networks ಉಳ್ಳಾಲ: ಕುಂಪಲ ಬೈಪಾಸ್ ಬಳಿ ಶುಕ್ರವಾರ ಸಂಜೆ ಕಾರು ಅಪಘಾತಕ್ಕೀಡಾಗಿ ರಸ್ತೆ ದಾಟುತ್ತಿದ್ದ ಕುಂಪಲ ಬೈಪಾಸ್ ನಿವಾಸಿ ಅಯಾನ್ (16) ಇಂದು ನಸುಕಿನ ಜಾವ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮನೆ ಎದುರುಗಡೆಯ ರಾ.ಹೆ.66 ನ್ನು ಒಂದೊಮ್ಮೆ ದಾಟಿದ್ದ ಬಾಲಕ ಮತ್ತೊಮ್ಮೆ ದಾಟಲು ಯತ್ನಿಸುವಾಗಲೇ ಅಪಘಾತ ನಡೆದು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾನೆ. ಬಶೀರ್ ಅಹ್ಮದ್ ,ರಿಯಾನ ದಂಪತಿ ಪುತ್ರನಾಗಿರುವ ಅಯಾನ್, ಜೆಪ್ಪು ಪ್ರೆಸ್ಟೀಜ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ . ಇನ್ನೋರ್ವ ಪುತ್ರಿ ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾಳೆ. ಸಂಜೆ ವೇಳೆ ಮನೆ ಎದುರುಗಡೆಯ ಅಂಗಡಿಗೆ ತೆರಳಿದ್ದ ರಿಯಾನ್ ಹೆದ್ದಾರಿಯನ್ನು ದಾಟಿ ಸಾಮಾಗ್ರಿಗಳೊಂದಿಗೆ ರಸ್ತೆ ದಾಟಿದ್ದರೂ, ಮತ್ತೆ ಏನನ್ನೋ ಮರೆತು ವಾಪಸ್ಸು ರಸ್ತೆ ದಾಟಲು ಯತ್ನಿಸಿದ್ದ ಸಂದರ್ಭ ಬೀರಿ ಕಡೆಯಿಂದ ಮಂಗಳೂರಿನತ್ತ ಧಾವಿಸುತ್ತಿದ್ದ ನಾಲ್ವರು ಯುವಕರಿದ್ದ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಅಯಾನ್ ರಸ್ತೆಗೆಸೆಯಲ್ಪಟ್ಟು ತಲೆ, ಕಾಲು ಮತ್ತು ಕೈಗಳಿಗೆ ಗಂಭೀರ ಗಾಯವಾಗಿತ್ತು. ನಿಯಂತ್ರಣ…

Read More