Author: UllalaVani

Kannada News From Coastal Karnataka

UN networks ಉಳ್ಳಾಲ: ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆಯ 20ನೇ ವರ್ಷದ ಕೋಟಿ ಚೆನ್ನಯ್ಯ ಕ್ರೀಡಾಕೂಟದಲ್ಲಿ ಕೋಟಿ ಚೆನ್ನಯ ಚಾಂಪಿಯನ್ಸ್ ಟ್ರೋಫಿಯನ್ನು ಬಾಳೆಪುಣಿ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಪಡೆದುಕೊಂಡಿತು.ತೊಕ್ಕೊಟ್ಟು ಚೆಂಬುಗುಡ್ಡೆಯ ಮಂಗಳೂರು ಎ-1 ಶಾಲಾ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾರತ ಸರ್ಕಾರದ ಸಣ್ಣ ಕೈಗಾರಿಕಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಉದಯಚಂದ್ರ ಡಿ.ಸುವರ್ಣ ಚಾಂಪಿನ್ಶಿಪ್ ಅನ್ನು ಹಸ್ತಾಂತರಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ ಶಿಲ್ಪಾಶ್ರೀ ಇವರನ್ನು ಅಭಿನಂದಿಸಲಾಯಿತು.ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾಧವ ಮಾವೆ, ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ದಾಸ್ ಪ್ರಮೋಟರ್ಸ್ ನ ಮಾಲಕರಾದ ಅನಿಲ್ ದಾಸ್,ಮೆಸ್ಕಾಂ ನ ಕಿರಿಯ ಅಭಿಯಂತರರಾದ ನಿತೇಶ್ ಎಚ್. ಉದ್ಯಮಿಗಳಾದ ಸದಾನಂದ ಪೂಜಾರಿ, ಗಣೇಶ್ ಕೊಲ್ಯ, ದೀಪ ಕಂಫರ್ಟ್ ನ ಪಾಲುದಾರರಾದ ರಯೀಸ್ ಅಮೀನ್, ವೇದಿಕೆಯ ಗೌರವ ಸಲಹೆಗಾರ ಚಂದ್ರಶೇಖರ ಉಚ್ಚಿಲ್, ಉಪಸ್ಥಿತರಿದ್ದರು. ಇದೇ ಸಂದರ್ಭ ಕೂಟದ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.ಕ್ರೀಡಾಕೂಟದ ಸಂದರ್ಭದಲ್ಲಿ ಕಿಯೋನಿಕ್ಸ್ ನ…

Read More

UN networksಉಳ್ಳಾಲ : ವಕ್ಫ್ ಮಂಡಳಿಯು ಫೆ.25ರಂದು ಉಳ್ಳಾಲ ಜಮಾಅತ್ ಮತ್ತು ಉಳ್ಳಾಲ ದರ್ಗಾ ಆಡಳಿತ ಸಮಿತಿಗೆ ನಡೆಸುವ ಚುನಾವಣೆ ‘ವಕ್ಫ್ ‘ಕಾಯಿದೆ ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ಸೈಯದ್ ಮದನಿ ಸೇವಾ ಸಮಿತಿ ತಿಳಿಸಿದೆ.ಈ ಮೂಲಕ ಉಳ್ಳಾಲ ಜಮಾಅತ್ ನ ಪರಂಪರೆಗೆ ಚ್ಯುತಿ ತಂದಂತಾಗಿದೆ. ಆದ್ದರಿಂದ ಈ ಕ್ರಮವನ್ನು ಉಳ್ಳಾಲ ದರ್ಗಾ ಸಮಿತಿ ಸಂಬಂಧ ಪಟ್ಟವರ ಗಮನ ಸೆಳೆಯ ಬೇಕು. ಅಕ್ರಮ -ಅನ್ಯಾಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕಿದೆ. ವಕ್ಫ್ ನಿಯಮ ಚಾಪ್ಟರ್ -6 ರಲ್ಲಿ, ಜಮಾಅತ್ ನ ಆಡಳಿತ ಸಮಿತಿಯನ್ನು ರಚನೆ ಮಾಡುವ ಅಧಿಕಾರ ಪ್ರಸ್ತುತದಲ್ಲಿ ರುವ ಆಡಳಿತ ಸಮಿತಿಯದ್ದಾಗಿದೆ ಎಂದು ಹೇಳುತ್ತವೆ. ಈ ಆಯ್ಕೆ ಸೂಚನೆ -ಅನುಮೋದನೆಯ ಮೂಲಕ ನಡೆಸಲು ಅಸಾಧ್ಯ ಎಂದು ಕಂಡು ಬಂದಲ್ಲಿ ಮಾತ್ರ ಚುನಾವಣೆ ನಡೆಸ ಬಹುದು ಎಂದೂ ವಕ್ಫ್ ಕಾಯಿದೆ ಹೇಳುತ್ತದೆ. ಈಗ ವಕ್ಫ್ ಇಲಾಖೆ ನಡೆಸಲು ಉದ್ದೇಶಿಸಿರುವ ಚುನಾವಣೆ ಪ್ರಕ್ರಿಯೆ ವಕ್ಫ್ ಕಾನೂನನ್ನು ಉಲ್ಲಂಘಿಸಿರುವುದನ್ನು ಸಾಬೀತು ಪಡಿಸುತ್ತವೆ. ಪ್ರಸಕ್ತ ಉಳ್ಳಾಲ…

Read More

PostsRoad Secret Away from John Adams Street MagicOnline slots TypesPeople Whom Played This video game Along with Starred:Uk Few Wins ListDo you have Free Casino games No Down load On the Site? Concurrently, the site is fully authorized by Curacao Betting Fee. They offer an excellent 100percent added bonus as much as step one,000 on your own earliest deposit. As well, he’s got a good customer support team which may be called by the email address.

Read More

UN networks ಉಳ್ಳಾಲ: ತಾಲೂಕು ಕೋಟೆಕಾರು ಗ್ರಾಮದ ಸರ್ವೆ ನಂಬ್ರ 301/3 ರಲ್ಲಿನ 2 ಎಕ್ರೆ ಜಮೀನನ್ನು ಕ್ರೀಡಾಂಗಣ, ವಾಕಿಂಗ್ ಟ್ರಾಕ್ ಹಾಗೂ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಹೆಸರಿಗೆ ಕರ್ನಾಟಕ ಭೂಕಂದಾಯ ಕಾಯಿದೆ 1964ರ ಕಲಂ 71 ರನ್ವಯ ಕಾಯ್ದಿರಿಸಿ ಎಂದು ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಆದೇಶಿಸಿದ್ದಾರೆ. ಬಗಂಬಿಲದ ಈ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಮಾರಾಟ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಮಾಧ್ಯಮಗಳಲ್ಲಿ ಸುದ್ಧಿ ಪ್ರಕಟವಾಗಿತ್ತು.2022ರ ಡಿ.9 ರಂದು ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕ್ರೀಡಾ ಇಲಾಖೆಗೆ ಸರಕಾರಿ ಭೂಮಿಯನ್ನು ಕಾಯ್ದಿರಿಸುವಂತೆ ಪತ್ರ ಬರೆದಿದ್ದರು. ಅದರಂತೆ ಜ.1 ಕ್ಕೆ ಆದೇಶವನ್ನು ಜಿಲ್ಲಾಧಿಕಾರಿ ಹೊರಡಿಸಿದ್ದಾರೆ. ಕೊಟ್ಟಿರುವ ಆದೇಶದಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಜಮೀನು ಕಾದಿರಿಸಿದ ಆದೇಶ ಜಮೀನಿನ ಅಂತಿಮ ಸರ್ವೆ ಅಳತೆಗೆ ಒಳಪಟ್ಟಿದೆ, ಜಮೀನನ್ನು ಹೇಳಲಾದ ಉದ್ದೇಶಕ್ಕೆ ಮಾತ್ರ ಉಪಯೋಗಿಸಬೇಕಿದೆ, ಪರಭಾರೆ ಮಾಡಬಾರದು, ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ, ಅತಿಕ್ರಮಣಕ್ಕೆ ಎಡೆಮಾಡಿಕೊಡಬಾರದು,…

Read More

UN networksಅಂಕದಕಳ-ತೋಟಾಲು ಮಸೀದಿ ರಸ್ತೆಗೆ ಶಿಲನ್ಯಾಸಉಳ್ಳಾಲ: ಮಂಗಳೂರು ಕ್ಷೇತ್ರದುದ್ದಕ್ಕೂ ಅಭಿವೃದ್ಧಿಯ ಪತಾಕೆಯನ್ನು ತೋರಿಸಿದ ಶಾಸಕ ಯು.ಟಿ ಖಾದರ್ ಅವರೇ ಮುಂದಿನ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದ್ದಾರೆ ಎಂದು ಜಿ.ಪಂ ಮಾಜಿ ಸದಸ್ಯೆ ಮಮತಾ ಡಿ .ಯಸ್ ಗಟ್ಟಿ ಹೇಳಿದರು.ಅವರು ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕದಕಳ ತಿರುವು ಹಾಗೂ ತೋಟಾಲು ಮಸೀದಿ ರಸ್ತೆ ನವೀಕರಣದ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.ಗ್ರಾಮದ ಹಲವು ವರ್ಷಗಳ ಬೇಡಿಕೆಯನ್ನು ಮನಗಂಡು ಶಾಸಕರು ಅನುದಾನ ಬಿಡುಗಡೆಗೊಳಿಸಿರುವುದು ಅಭಿನಂದನಾರ್ಹ. ಮಂಗಳೂರು ಕ್ಷೇತ್ರದುದ್ದಕ್ಕೂ ಸರಕಾರಿ ಶಾಲೆಗಳ ಅಭಿವೃದ್ಧಿ , ರಸ್ತೆ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿಕೊಟ್ಟಿದ್ದಾರೆ. ಕ್ಷೇತ್ರದ ಜನತೆ ಭಾಗ್ಯವಂತರು ಶಾಂತಿಯುತವಾಗಿ ಕ್ಷೇತ್ರ ಅಭಿವೃದ್ಧಿಯನ್ನು ಕಾಣುತ್ತಿದೆ. ಮುಂದಿನ ಚುನಾವಣೆಯಲ್ಲೂ ಅವರೇ ಅತ್ಯಧಿಕ ಮತಗಳನ್ನು ಪಡೆದು ಜಯಭೇರಿ ಬಾರಿಸಲಿದ್ದಾರೆ ಎಂದರು.ಈ ಸಂದರ್ಭ ಬಂಟ್ವಾಳ ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ್ ಆರ್ ಕರ್ಕೇರ, ಬಾಳೆಪುಣಿ ಗ್ರಾ.ಪಂ ಅಧ್ಯಕ್ಷ ರಝಿಯಾ, ಬಾಳೆಪುಣಿ ಸದಸ್ಯರುಗಳಾದ ಜನಾರ್ದನ ಗಟ್ಟಿ, ಜನಾರ್ದನ…

Read More

UN networks ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಬಾಳೆಪುಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೈರಂಗಳ ಗ್ರಾಮದ ಮೋಂಟುಗೋಳಿಯಲ್ಲಿ ನೂತನ ಆಟೋ ರಿಕ್ಷಾ ಪಾರ್ಕ್ ಹಾಗೂ ಸಂತೆ ಮಾರುಕಟ್ಟೆಗೆ ಜಿ.ಪಂ. ಮಾಜಿ ಅಧ್ಯಕ್ಷೆ, ನಿಕಟಪೂರ್ವ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಶಿಲಾನ್ಯಾಸಗೈದರು.ಬಳಿಕ ಮಾತನಾಡಿ ಮೋಂಟುಗೋಳಿ ಸೈಟ್ ಪ್ರದೇಶದಲ್ಲಿ ಶಾಸಕರು ಕುಡಿಯುವ ನೀರಿನ ಸಮಸ್ಯೆಗೆ ೫೦ಸಾವಿರ ಲೀ. ಸಾಮರ್ಥ್ಯದ ನೀರಿನ ಟಾಂಕಿ ನಿರ್ಮಿಸಿ ಕೊಟ್ಟಿದ್ದಾರೆ. ಬೋರ್ ವೆಲ್ ಪೈಪ್ ಲೈನ್ ನಿರ್ಮಾಣವೂ ನಡೆದಿದೆ. ನೂತನ ಆಟೋ ರಿಕ್ಣಾ ಪಾರ್ಕ್ ಸಂತೆ ಮಾರುಕಟ್ಟೆ ಅಭಿವೃದ್ಧಿಯ ಸಂಕೇತವಾಗಲಿದೆ ಎಂದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಝಿಯಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೈದರ್ ಕೈರಂಗಳ, ಅರುಣ್ ಡಿಸೋಜ, ಅಹಿಂದ ಜಿಲ್ಲಾಧ್ಯಕ್ಷ ಪದ್ಮನಾಭ ನರಿಂಗಾನ ಹಾಗೂ ಬಾಳೆಪುಣಿ ಗ್ರಾ.ಪಂ. ಸದಸ್ಯರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Read More

UN networks ಉಳ್ಳಾಲ: ದ.ಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಪೂರ್ವಭಾವಿಯಾಗಿ ನೀರು ಪೂರೈಕೆಗೆ ಪರ್ಯಾಯ ತಯಾರಿ ನಡೆಸುವಂತೆ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಜೆ.ಡಿಎಸ್ ದ.ಕ ಜಿಲ್ಲೆ ಮನವಿ ಮಾಡಿದೆ.ಪ್ರಸಕ್ತ ವರ್ಷ ಬೇಸಿಗೆಕಾಲ ಆರಂಭವಾಗುವ ಮುಂಚೆಯೇ ಜನವರಿ ತಿಂಗಳಿನಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಬಾವಿಗಳಲ್ಲಿ ನೀರು ಕೆಳಮಟ್ಟಕ್ಕೆ ಹೋಗಿದೆ. ನಗರಪ್ರದೇಶಗಳಿಗೆ ನೀರು ಪೂರೈಸುವ ನೀರಿನಷ ಶೇಖರಣೆಯಲ್ಲಿಯೂ ಕುಂಠಿತವಾಗಿ ಬವಣೆ ಆರಂಭವಾಗಿದೆ. ಮಾರ್ಚ್, ಎಪ್ರಿಲ್, ಮೇ ತಿಂಗಳಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಬಹುದು, ಜಿಲ್ಲೆಗೆ ನೀರಿನ ಬಹುದೊಡ್ಡ ಸಮಸ್ಯೆಯೂ ಉಂಟಾಗಬಹುದು. ಆದ್ದರಿಂದ ಈಗಿನಿಂದಲೇ ನಗರಪ್ರದೇಶ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಜಿಲ್ಲಾಡಳಿತ ಹಾಗೂ ಗ್ರಾಮ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯಿತಿ ಆಸಕ್ತಿ ವಹಿಸಿ ಪರ್ಯಾಯ ನೀರಿನ ಸಂಪನ್ಮೂಲ ವ್ಯವಸ್ಥೆ ಹಾಗೂ ವಿತರಣೆಯನ್ನು ಸಮರ್ಪಕವಾಗಿ ನಡೆಸಲು ಕಾರ್ಯಯೋಜನೆ ಸಿದ್ಧಪಡಿಸಬೇಕು ಎಂದು ಜಿಲ್ಲಾ ಕಾರ್ಯಾಧ್ಯಕ್ಷ ನಝೀರ್ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

UN networks ಉಳ್ಳಾಲ: ೧೯೯೭ರಲ್ಲಿ ಪ್ರಾರಂಭವಾದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಪ್ರತಿವರ್ಷ ವಿಜೃಂಭಣೆಯಿAದ ವೀರರಾಣಿ ಅಬ್ಬಕ್ಕ ಉತ್ಸವವನ್ನು ಆಚರಿಸುತ್ತಾ ಬಂದಿದ್ದು ಈ ಸಲ ಫೆಬ್ರವರಿ ೪, ೨೦೨೩ರಂದು ನಡೆಯುವ ಉತ್ಸವದಲ್ಲೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಮಾಜಿ ಶಾಸಕ ಹಾಗೂ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಹೇಳಿದರು.ಅವರು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನಡೆಯುವ’೨೦೨೨-೨೩ರ ವೀರರಾಣಿ ಅಬ್ಬಕ್ಕ ಉತ್ಸವ’ದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನಗುರಿಕಾರರಾದ ಮಂಜಪ್ಪಕಾರ್ನವರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ಕಾರ್ಯದರ್ಶಿ ಡಿ.ಎನ್.ರಾಘುವ, ಎಂ.ವಾಸುದೇವರಾವ್, ಸತೀಶ್ ಭಂಡಾರಿ, ಭಾಸ್ಕರ, ರತ್ನಾವತಿ ಜೆ ಬೈಕಾಡಿ, ಶಶಿಕಲಾ ಗಟ್ಟಿ, ಅನುಪಮ ಸಿ, ಹೇಮಾಯು, ವಾಣಿ ಲೋಕಯ್ಯ, ಕ್ಲೇರಾ ಕುವೆಲ್ಲೊ, ಮಾಧವಿ ಉಳ್ಳಾಲ್, ಸತ್ಯವತಿಜೆ.ಕೆ, ದೇವಕಿಯು ಬೋಳಾರ್, ಸುಷ್ಮಾಜನಾರ್ಧನ್, ರಾಜೀವಿ ಕೆಂಪು ಮಣ್ಣು, ಸೇವಂತಿ ಶ್ರೀಯಾನ್,…

Read More

UN networksಉಳ್ಳಾಲ: ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯಿದ್ ಮದನಿ ಪ್ರೌಢಶಾಲೆ ಯಲ್ಲಿ ಬಾರತದ ಸಂವಿಧಾನದ ೭೪ನೇ ವರ್ಷಾಚರಣೆಯನ್ನು ಉಳ್ಳಾಲದ ಸಯ್ಯಿದ್ ಮದನಿ ದರ್ಗಾದ ಪ್ರಧಾನ ಕಾರ್ಯ ದರ್ಶಿ ತ್ವಾಹಾ ಹಾಜಿ ಧ್ವಜಾರೋಹಣಗೈದರು.ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ವರೆಷ ಭೂಷಣ ಧರಿಸಿದ ವಿದ್ಯಾರ್ಥಿಗಳು ಎಲ್ಲರ ಮನ ಗೆದ್ದರು. ಸಮಾರಂಭದಲ್ಲಿ ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಯು.ಎನ್.ಇಬ್ರಾಹಿಂ, ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಸಯ್ಯಿದ್ ಮದನಿ ಅರೆಬಿಕ್ ಟ್ರಸ್ಟನ ಉಪಾಧ್ಯಕ್ಷ ಎಂ.ಹೆಚ್ ಇಬ್ರಾಹಿಂ, ಕಾರ್ಯ ದರ್ಶಿ ಅಲ್ತಾಫ್ ಯು ಹೆಚ್, ಕೋಶಾಧಿಕಾರಿ ಕರೀಂ ಯು. ಹೆಚ್, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಝೈನುದ್ದೀನ್ ಉಪಸ್ಥಿತರಿದ್ದರುಶಾಲಾ ಮುಖ್ಯ ಶಿಕ್ಷಕಾರಾದ ಕೆ.ಎಂ.ಕೆ ಮಂಜನಾಡಿ ಸ್ವಾಗತಿಸಿದರು. ಶಿಕ್ಷಕಿ ಶಕೀಲ ವಂದಿಸಿದರು.

Read More

UN networks ಉಳ್ಳಾಲ: ವಿಶ್ವ ಮಾನ್ಯತೆ ಪಡೆಯುತ್ತಿರುವ ಆಯುರ್ವೇದದಲ್ಲಿ ಪಂಚಕರ್ಮ ಮತ್ತು ಚಾರಸೂತ್ರ ಪದ್ದತಿ ಪ್ರಸಿದ್ಧವಾಗುತ್ತಿದೆ. ಪಿಸ್ತೂಲಕ್ಕಿರುವ ನೋವುರಹಿತ ಚಿಕಿತ್ಸಾ ಪದ್ದತಿ ಆಧುನಿಕ ಚಿಕಿತ್ಸಾ ಪದ್ದತಿಯಲ್ಲೂ ಇಲ್ಲ ಎಂದು ನವದೆಹಲಿಯ ಮೆಡಿಕಲ್ ಅಸ್ಸೆಸ್ಮೆಂಟ್ ಮತ್ತು ರೇಟಿಂಗ್ ಬೋರ್ಡ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಅಧ್ಯಕ್ಷ ರಘುರಾಮ ಭಟ್ಟ ಯು. ಅಭಿಪ್ರಾಯಪಟ್ಟರು.ಯೇನೆಪೊಯ ಪರಿಗಣಿತ ವಿಶ್ವವಿದ್ಯಾಲಯ ಅಧೀನದ ಯೇನೆಪೊಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಶ್ರಯದಲ್ಲಿ ಪಂಡಿತೌಸ್ ನಲ್ಲಿ ಶನಿವಾರ ನೂತನವಾಗಿ ಆರಂಭಗೊಂಡ ‘ನಿಯಾಶ ಆಯುರ್ವೇದ’ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು. ಯೇನೆಪೊಯ ವಿವಿ ಆಶ್ರಯದಲ್ಲಿ ಅಗ್ನಿಕರ್ಮ, ಚಾರಕರ್ಮ ಸಹಿತ ಇನ್ನಿತರ ಪದ್ದತಿಯೊಂದಿಗೆ ಆಯುರ್ವೇದ ಆಸ್ಪತ್ರೆ ಆರಂಭಿಸುತ್ತಿರುವುದು ಶ್ಲಾಘನೀಯ. ಯೇನೆಪೊಯ ವಿವಿಯಲ್ಲಿ ಕಲಿಯುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಾವು ಆರಂಭಿಸಬೇಕಾಗಿರುವ ಆಸ್ಪತ್ರೆ ಬಗ್ಗೆ ಅರಿವು ಮೂಡಿಸಲಿದೆ‌. ನೂತನ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆ ವಿಶ್ವವ್ಯಾಪಿಯಾಗಲಿ ಎಂದು ಹಾರೈಸಿದರು‌.ಸಂಗೀತಾ ನಿರ್ದೇಶಕ ಗುರುಕಿರಣ್ ಮಾತನಾಡಿ, ಅಲೋಪಥಿ ಆಧುನಿಕ ಚಿಕಿತ್ಸಾ ಪದ್ದತಿಯಾಗಿದ್ದರೆ ಆಯುರ್ವೇದ ಪುರಾತನ ಹಾಗೂ ಸುದೀರ್ಘ ಚಿಕಿತ್ಸಾ…

Read More