Author: UllalaVani

Kannada News From Coastal Karnataka

ಉಳ್ಳಾಲ ವಲಯ ಬಂಟರ ಸಂಘ ಬೆಳ್ಮ ಗ್ರಾಮದ ನೂತನ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಸಂಘದ ಗೌರವಾಧ್ಯಕ್ಷರಾಗಿ ಅಶೋಕ್ ರೈ ಬರಿಕೆ ಹಾಗೂ ಪ್ರಧಾನ ಕರ‍್ಯರ‍್ಶಿಯಾಗಿ ಅನಿಲ್ ಪ್ರಸಾದ್ ಬೆಳ್ಮ ಹೊಸಮನೆ ಆಯ್ಕೆಯಾಗಿದ್ದಾರೆ.

Read More

ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೀರುಮಾರ್ಗ ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ನೀರುಮಾರ್ಗ ಶಾಖೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಪುಟ್ಟಸ್ವಾಮಿ ಎಚ್, ಸತೀಶ್ ಕಂಪ, ಲಕ್ಷಣ ಪೂಜಾರಿ, ಲವೀನ ಪಿರೇರ ಹಾಗೂ ಶಶಿಪ್ರಭ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಠೇವಣಿ ಸಂಗ್ರಹಣೆಯೊಂದಿಗೆ ಸಾಲ ವಸೂಲಾತಿ ಕ್ರಮವು ಸರಿಯಾದ ಪ್ರಮಾಣದಲ್ಲಿ ಆದಾಗ ಮಾತ್ರ ಸಂಘದ ಬೆಳವಣಿಗೆ ಸಾಧ್ಯ , ಸಿಬ್ಬಂದಿ ವರ್ಗ, ಗ್ರಾಹಕರ ಸಹಕಾರದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಂಘವು ಹೆಚ್ಚಿನ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ. ಅಗತ್ಯ ಸಂದರ್ಭಗಳಲ್ಲಿ ಹಿರಿಯ ನಾಗರಿಕ ಸದಸ್ಯರ ಮನೆಗೆ ಭೇಟಿ ನೀಡಿ ಸೇವೆ ನೀಡುತ್ತಿದ್ದೇವೆ. ಈಗಾಗಲೇ ಸಂಘದ ಸದಸ್ಯರಿಗೆ ಹಬ್ಬದ ಕೊಡುಗೆಯಾಗಿ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10.50…

Read More

ತೊಕೊಟ್ಟು: “Unfolding Minds” ಎಂಬ ಧ್ಯೇಯವಾಕ್ಯದಡಿ ಕಾರ್ಯನಿರ್ವಹಿಸುತ್ತಿರುವ ಪ್ಲೇ ಎನ್ ಲರ್ನ್ ಪ್ರಿ-ಸ್ಕೂಲ್ 2025–26ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಆಟದ ಮೂಲಕ ಕಲಿಕೆಗೆ ಒತ್ತು ನೀಡುವ ಈ ಸಂಸ್ಥೆಯಲ್ಲಿ ನರ್ಸರಿ, ಎಲ್‌ಕೆಜಿ, ಯುಕೆಜಿ ಹಾಗೂ ಪ್ರಥಮ ತರಗತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಾರ್ಯನಿರತ ಪೋಷಕರಿಗಾಗಿ ಡೇ ಕೇರ್ ಸೌಲಭ್ಯವೂ ಲಭ್ಯವಿದೆ.ನಿಯಮಿತ ಪಠ್ಯಕ್ರಮದ ಜೊತೆಗೆ ಅರೇಬಿಕ್ ಹಾಗೂ ಮೌಲ್ಯ ಶಿಕ್ಷಣ ತರಗತಿಗಳೂ ಇಲ್ಲಿ ಕಲಿಸಲಾಗುತ್ತವೆ. ಡಿಜಿಟಲ್ ಪಾಠಶಾಲೆಯ ಭಾಗವಾಗಿ “ ಆನ್‌ಲೈನ್ ಕ್ಲಾಸ್” ಇಲ್ಲಿ ಆರಂಭಿಸಲಾಗಿದೆ.ಈ ಶಾಲೆಯ ಸಾರಿಗೆ ವ್ಯವಸ್ಥೆ ತೊಕ್ಕೊಟ್ಟು, ಕಲ್ಲಾಪು, ಕುತ್ತಾರ್, ದೇರಳಕಟ್ಟೆ, ಉಳ್ಳಾಲ, ಕಾಪಿಕಾಡು, ಕುಂಪಲ ಹಾಗೂ ಕೆ.ಸಿ.ರೋಡ್ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಒಳಗೊಂಡಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 74117 26770 | 98451 75743 ತೊಕ್ಕೊಟ್ಟು, ಗಾರ್ಡನ್ ಸಿಟಿಯ ಗ್ರೌಂಡ್ ಫ್ಲೋರ್ Admissions Open at Play ‘N’ Learn Pre-School for 2025–26 Thokkottu: Play ‘N’ Learn Pre-School, operating under the motto “Unfolding Minds,” has announced that…

Read More

ಕೋಟೆಕಾರು, : ಜಿಲ್ಲೆಯ ಪಶ್ಚಿಮ ಭಾಗದ ಪ್ರಸಿದ್ಧ ದೈವಸ್ಥಾನ ಶ್ರೀ ಕೊಂಡಾಣ ಪಿಲಿಚಾಮುಂಡಿ ಬಂಟ ವೈದ್ಯನಾಥ ದೈವಸ್ಥಾನದಲ್ಲಿ, ಮೇ 22 ಮತ್ತು 23ರಂದು ಆಯೋಜಿತವಾದ ವರ್ಷಾವಧಿ ಕಡೇಯ ಬಂಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ನೂತನ ಆಡಳಿತ ಸಮಿತಿಯ ಮುಂಚೂಣಿಯಲ್ಲಿ ನಡೆದ ಈ ಬಾರಿಯ ಜಾತ್ರೆ, ಭಕ್ತರ ಭರವಸೆಗೂ, ನೂತನ ಸಮಿತಿಯ ನಿರ್ವಹಣಾ ಶೈಲಿಗೂ ಉತ್ತಮ ಮಾದರಿಯಾಯಿತು. ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಹರ್ಷರಾಜ್ ಮುದ್ಯ ಅವರ ನೇತೃತ್ವದಲ್ಲಿ ದೈವದ ಕಾರಣೀಕದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಡೇಯ ಬಂಡಿ ಅದ್ಧೂರಿಯಿಂದ ಜರಗಿತು. ಸಮಿತಿಯ ಸದಸ್ಯರಾದ ರಾಜೇಶ್ ರೈ ಕೋಟೆಕಾರುಗುತ್ತು, ಪ್ರಸಾದ್ ರೈ ಮಡ್ಯಾರ್, ವಿಶ್ವನಾಥ್ ಕುಲಾಲ್ ನಡಾರ್, ನಾರಾಯಣ ಪೂಜಾರಿ ಭೂತಹಿತ್ಲು, ಸುಭಾಷ್ ಶೆಟ್ಟಿ ಕೋಟೆಕಾರು, ಮೀರಾ ಸುಕುಮಾರ್ ಗಟ್ಟಿ ಮಾಡೂರು, ಚಾಂದಿನಿ ಮಾಡೂರು ಹಾಗೂ ಕೃಷ್ಣ ನಡಾರ್ ಅವರೂ ತಮ್ಮ ಕೈಜೋಡಿಸಿ, ಅತ್ಯಂತ ಜವಾಬ್ದಾರಿಯುತವಾಗಿ ಭಕ್ತಾಧಿಗಳನ್ನು ನಿರ್ವಹಿಸಿದರು. ಜಾತ್ರಾ ದಿನಗಳಲ್ಲಿ ಸತತವಾಗಿ ಸುರಿದ ಮಳೆಯ ನಡುವೆಯೂ ಭಕ್ತರ ದಂಡೇ ಆಗಮಿಸಿದ್ದು,…

Read More

ಉಳ್ಳಾಲ ವಲಯ ಬಂಟರ ಸಂಘ ಕೋಟೆಕಾರು ಗ್ರಾಮದ ನೂತನ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಸಂಘದ ಗೌರವಾಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಹಾಗೂಕಾರ್ಯದರ್ಶಿಯಾಗಿ ಪ್ರಕಾಶ್ ಭಂಡಾರಿಯವರು ಆಯ್ಕೆಯಾಗಿದ್ದಾರೆ.

Read More

ಉಳ್ಳಾಲ : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮೋಟೆಪದವು ಸಮೀಪ ಮಹಿಳೆಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೇಯಾಗಿದ್ದು,. ಸೊಂಟಕ್ಕೆ ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ಶವ ಸಿಕ್ಕಿರುವುದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ.ಸಕಲೇಶಪುರ ಮೂಲದ ಸುಂದರಿ (35) ಎಂಬವರ ಮೃತದೇಹ ಪತ್ತೆ ಯಾಗಿದೆ. ಕಳೆದ ಒಂದೂವರೇ ವರ್ಷಗಳಿಂದ ಮನೆ ಮನೆ ಕೆಲಸಕಕ್ಕೆ ತೆರಳಿ ಜೀವನ ನಿರ್ವಹಿಸುತ್ತಿದ್ದ ಈಕೆ ಮನೆ ಯಲ್ಲಿ ಒಂಟಿಯಾಗಿದ್ದರು. ಇದೀಗ ಆಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಾರದ ಹಿಂದೆ ಕೊಲೆ ನಡೆಸಿರುವ ಸಾಧ್ಯತೆ ಇದ್ದು,. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೊಂಟಕ್ಕೆ ಕೆಂಪು ಕಲ್ಲನ್ನು ಕಟ್ಟಲಾಗಿದ್ದು ಕಿರುಕುಳ ನೀಡಿ ಕೊಲೆ ನಡೆಸಿರುವ ಸಾಧ್ಯತೆಗಳಿವೆ. ಕೊಣಾಜೆ ಪೋಲೀಸರು ಸ್ಥಳದಲ್ಲಿ ತನಿಖೆ ಆರಂಭಿಸಿದ್ದಾರೆ.

Read More

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಜೂ. 1 ರಂದು ಭಾನುವಾರ ಅಡ್ಯಾರ್ ಗಾರ್ಡನ್ ಯಕ್ಷಧ್ರುವ ಪಟ್ಲ ಸಂಭ್ರಮ -೨೦೨೫ ರಾಷ್ಟ್ರೀಯ ಕಲಾ ಸಮ್ಮೇಳನ ನಡೆಯಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಹೇಳಿದ್ದಾರೆ.ಬೆಳಿಗ್ಗೆ 9.30 ರಿಂದ ರಾತ್ರಿ 11 ರ ವರೆಗೆ ಸಮ್ಮೇಳನ ನಡೆಯಲಿದ್ದು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು ಆಶೀರ್ವವಚನ ನೀಡಲಿದ್ದಾರೆ. ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಶಶಿ ಕೇಟರರ್ಸ್ ಹೊಟೇಲ್ ಕಾಶಿ ಪ್ಯಾಲೇಸ್ ನ ಮಾಲಕ, ಉದ್ಯಮಿ ಶಶಿಧರ ಬಿ ಶೆಟ್ಟಿ ವಹಿಸಲಿದ್ದಾರೆ.ಬೆಳಿಗ್ಗೆ 11 ಗಂಟೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವರವರ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.ಡಾ. ಮೋಹನ್ ಆಳ್ವರವರ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಭಾರತದ 8 ಶಾಸ್ತ್ರೀಯ ಕಲೆಗಳ…

Read More

ಉಳ್ಳಾಲ : ರೀಚಲ್ ಚಾರಿಟೆಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಉಚಿತವಾಗಿ ಮೂರು ದಿನಗಳ ಬೇಸಗೆ ರಜಾ ಶಿಬಿರ ಮೇ 23ರಿಂದ ಮೇ 25ರವರೆಗೆ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಸಂತ ಸೆಬಾಸ್ಟಿಯನ್ ಬಳಿಯ ರೀಚಲ್ ಸಂಸ್ಥೆಯಲ್ಲಿ ನಡೆಯಲಿದೆ.ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರಗೆ ನಡೆಯಲಿರುವ ಈ ಶಿಬಿರದಲ್ಲಿ ಮಕ್ಕಳಲ್ಲಿ ಶಿಸ್ತು, ಸಾಮಾನ್ಯ ಜ್ಞಾನ, ಜ್ಞಾಪಕ ಶಕ್ತಿ ಹೆಚ್ಚಿಸುವ ಚಟುವಟಿಕೆ ಸೇರಿದಂತೆ ವಿವಿಧ ಕೌಶಲ ವಿಕಸನ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಪರಿಣಿತರು ಮಾಹಿತಿ ಮತ್ತು ಚಟುವಟಿಕೆಯೊಂದಿಗೆ ನಡೆಸಿಕೊಡಲಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಸಿರಿಲ್ ಡಿ’ಸೋಜಾ ಭಟ್ನಗರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಉಳ್ಳಾಲ: ಉಳ್ಳಾಲ ದರ್ಗಾ ಉರೂಸ್ ಸಮಾರಂಭಕ್ಕೆ ಸಹಕಾರ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಹಾಗೂ ಕಾರ್ಯದರ್ಶಿ ಇಸಾಕ್ ಮೇಲಂಗಡಿ ಬೆಂಗಳೂರುನಲ್ಲಿ ಭೇಟಿ ಮಾಡಿ ಅವರಿಗೆ ಹೂ ಗುಚ್ಛ ನೀಡಿ ಕೃತಜ್ಞತೆ ಸಲ್ಲಿಸಿದರು. ಮುಂದೆ ಇದೇ ರೀತಿ ತಮ್ಮ ಸಹಕಾರ ಇರಲಿ ಎಂದು ಇದೇ ಸಂದರ್ಭದಲ್ಲಿ ವಿನಂತಿಸಿದರು

Read More

ಮಂಗಳೂರು: ರಾಜಕೀಯ ದುರುದ್ದೇಶವನ್ನಿಟ್ಟುಕೊಂಡು ವಿಧವೆ ಮಹಿಳೆಯಿಂದ ಸುಳ್ಳು ದೂರು ದಾಖಲಿಸಿ ಇಬ್ಬರ ರಾಜಕೀಯ ಜೀವನವನ್ನೇ ಮುಗಿಸಲು ತಂಡವೊಂದು ಷಡ್ಯಂತ್ರ ನಡೆಸಿದೆ ಎಂದು ಬಂಟ್ವಾಳ ಪುರಸಭಾ ಸದಸ್ಯರುಗಳಾದ ಶರೀಫ್ ಮತ್ತು ಹಸೈನಾರ್ ಆರೋಪ ಮಾಡಿದ್ದಾರೆ.ಬಂಟ್ವಾಳ ಠಾಣಾ ವ್ಯಾಪ್ತಿಯ ಕಾರಾಜೆ ಎಂಬಲ್ಲಿ ವಾಸವಿರುವ ಬಗ್ಗೆ ದೂರಿನಿಂದಲೇ ತಿಳಿದುಬಂದಿದೆ. ಈ ಹಿಂದೆ ಮಹಿಳೆ ದೂರು ನೀಡಲು ಠಾಣೆಗೆ ಬಂದಾಗಲೂ ಪ್ರಾಥಮಿಕ ತನಿಖೆಯಿಂದಲೇ ಸುಳ್ಳು ದೂರು ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದರು. ಅದಕ್ಕಾಗಿ ನ್ಯಾಯಾಲಯದಿಂದ ಆದೇಶ ತಂದು ಪೊಲೀಸ್ ದೂರು ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿ.ಸಿ.ರೋಡ್ ನಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದರ ಮಾಲಕಿಯಾಗಿದ್ದ ಮಹಿಳೆ ಎರಡು ವರ್ಷಗಳ ಹಿಂದೆ ಜಾಗದ ಕಾಗದ ಪತ್ರ ಸರಿಪಡಿಸುವ ವಿಚಾರವಾಗಿ ಪರಿಚಯವಾಗಿದ್ದರು. ಅದರಂತೆ ಜಾಗದ ವಿಚಾರದ ಕುರಿತು ಶೇ.80 ರಷ್ಟು ದಾಖಲೆಗಳನ್ನು ಮುಗಿಸಲಾಗಿತ್ತು. ಅಷ್ಟರಲ್ಲಿ ತಗಾದೆ ತೆಗೆದ ಮಹಿಳೆ ಜಾಗದ ದಾಖಲೆಗಳ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ, ಹಣ ಪಡೆದುಕೊಂಡಿರುವ ವಿಚಾರದಲ್ಲಿ ಆರೋಪ ಮಾಡಲು ಆರಂಭಿಸಿದ್ದರು. ಆರಂಭದಲ್ಲಿ ಜಾಗದ…

Read More