Author: UllalaVani

Kannada News From Coastal Karnataka

ಮಂಗಳೂರು : ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು ಪಾಯಗಳು ಬಂದ್ ಆಗಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕೆಂಪುಕಲ್ಲು ಕೋರೆ ಹಾಗೂ ಲಾರಿ ಮಾಲಕರ ಒಕ್ಕೂಟದ ಸಮಾಲೋಚನಾ ಸಭೆಯು ಬಿ.ಸಿ.ರೋಡಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು.ಜೂ.30ರಂದು ನಡೆಯಲಿರುವ ಕೆಡಿಪಿ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಜು.3ರಂದು ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಅನಿವಾರ್ಯವಾದರೆ ಉಪವಾಸ ಸತ್ಯಾಗ್ರಹ ನಡೆಸುವ ಮತ್ತು ಅಗತ್ಯಬಿದ್ದರೆ ಹೈಕೋರ್ಟ್‌ಗೆ ಮೊರೆ ಹೋಗುವ ಬಗ್ಗೆ ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆಂಪುಕಲ್ಲು ಪಾಯ ಹಾಗೂ ಲಾರಿ ಮಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ ಮಾತನಾಡಿ ಕೇರಳದಲ್ಲಿ ಟನ್ ಕಲ್ಲಿಗೆ ರಾಯಲ್ಟಿ 42 ರೂ.ಇದ್ದಾಗ ಅಲ್ಲಿ ನಡೆದ ಹೋರಾಟದ ಫಲವಾಗಿ 32 ರೂ.ಗೆ ಇಳಿಯಿತು. ಅಲ್ಲದೆ ಜಿಪಿಎಸ್ ವ್ಯವಸ್ಥೆಯನ್ನೂ ರದ್ದುಪಡಿಸಲಾಗಿದೆ. ಆದರೆ ಕರ್ನಾಟಕದಲ್ಲಿ 97 ರೂ. ಇದ್ದ ರಾಯಲ್ಟಿ ಏಕಾಏಕಿ 254 ರೂ.ಗೆ ಏರಿಸಲಾಗಿದ್ದು, ಜಿಪಿಎಸ್ ವ್ಯವಸ್ಥೆ ಯಿಂದಲೂ ಸಂಕಷ್ಟ ಎದುರಾಗಿದೆ. ಕೇರಳದಲ್ಲಿ ಕೆಂಪುಕಲ್ಲು ಕೋರೆಯ ಸಮಸ್ಯೆ…

Read More

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನೆ ವಿಭಾಗದಲ್ಲಿ ಶುಕ್ರವಾರವೂ ಲೋಕಾಯುಕ್ತ ಪೊಲೀಸರು ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಟಿಡಿಆರ್ ನಲ್ಲಿ ಕೆಲವೊಂದು ಅವ್ಯವಹಾರ ನಡೆದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಜೂ.21ರಿಂದ ಲೋಕಾಯುಕ್ತ ಅಧಿಕಾರಿಗಳು ನಗರ ಪಾಲಿಕೆಗೆ ದಾಳಿ ನಡೆಸಿ ವಿವಿಧ ವಿಭಾಗಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಹಲವು ಅವ್ಯವಹಾರ, ಅಧಿಕಾರ ದುರುಪಯೋಗ ನಡೆದಿರುವುದು ಕಂಡು ಬಂದಿದೆ. ದಲ್ಲಾಳಿಯ ಬಳಿ 5 ಲಕ್ಷ ರೂ. ಕೂಡಾ ಪತ್ತೆಯಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸುತ್ತಿರುವುದರಿಂದ ಪಾಲಿಕೆಯ ಅಧಿಕಾರಿಗಳಿಗೆ ನಡುಕ ಉಂಟಾಗಿದೆ ಎನ್ನಲಾಗಿದೆ. ಕಳೆದೊಂದು ವಾರದಿಂದ ಕಂದಾಯ, ಆರೋಗ್ಯ, ಪರಿಸರ ಸಹಿತ ಪ್ರಮುಖ ವಿಭಾಗಗಳ ಕಡತ ಪರಿಶೀಲನೆ ಮುಂದುವರಿದಿದೆ. ಈ ಬಗ್ಗೆ ಲೋಕಾಯುಕ್ತ ಕೇಂದ್ರ ಕಚೇರಿಗೆ ಸಮಗ್ರ ವರದಿ ನೀಡುವುದಾಗಿ ತಿಳಿಸಿದ್ದಾರೆ.

Read More

ಪ್ರವೀಣ್ ದಾಸ್ ಬಗಂಬಿಲ ಕುಂಪಲ: ಬಗಂಬಿಲ ಹಿಂದೂ ನಗರ ಇಲ್ಲಿನ ಹಿಂದೂ ಯುವ ಸೇನೆ ಶ್ರೀ ಮಹಾದೇವಿ ಶಾಖೆ ಇದರ 2025-2026ರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.ಉದಯರಾಜ್ ಶೆಟ್ಟಿ ಬಗಂಬಿಲ ಗೌರವಾಧ್ಯಕ್ಷರಾಗಿ , ಅಧ್ಯಕ್ಷರಾಗಿ ಪ್ರವೀಣ್ ದಾಸ್ ಬಗಂಬಿಲ, ಉಪಾದ್ಯಕ್ಷರಾಗಿ ಮಿತ್ರೇಶ್ ಗಾಣಿಗ ಬಗಂಬಿಲ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೀತಮ್ ಕುಲಾಲ್ ,ಜೊತೆ ಕಾರ್ಯದರ್ಶಿಯಾಗಿ ನಿಖಿಲ್ ಬಗಂಬಿಲ, ಕೋಶಾಧಿಕಾರಿಯಾಗಿ ನಿತಿನ್ ಪೂಜಾರಿ, ಜೊತೆ ಕೋಶಾಧಿಕಾರಿಯಾಗಿ ತಿಲಕ್,ಶೆಟ್ಟಿಪ್ರಮುಖ ಸಲಹೆಗಾರ ರಾಜೇಶ್ ಆರ್,ಪೂಜಾರಿ, ಪ್ರಧಾನ ಸಂಚಾಲಕರಾಗಿ ಅಶೋಕ್ ಪೂಜಾರಿ ಬಗಂಬಿಲ, ಸಹ ಸಂಚಾಲಕರಾಗಿ ಪುನೀತ್ ಪೂಜಾರಿ, ಸಂಘಟನಾ ವರದಿಗಾರನಾಗಿ ನಿತೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಸೌರವ್ ಗಾಣಿಗ, ಅಭಿಷೇಕ್, ಕಿರಣ್ ಶೆಟ್ಟಿ, ಸಚಿನ್ ಕುಲಾಲ್, ದೀಕ್ಷಿತ್, ಕೌಶಿಕ್, ದೀಕ್ಷಿತ್(ಗುಂಡ), ಲೋಹಿತ್ ದಾಸ್ ಹಾಗೂಪದಾಧಿಕಾರಿಗಳಾಗಿ ಸುಶಾಂತ್, ಕುಶ್, ಸ್ವಸ್ತಿಕ್, ರಾಜೇಶ್, ಕರಣ್, ಶರಣ್, ಪ್ರಕಾಶ್, ಶಿವಪ್ರಸಾದ್, ಸಂದೀಪ್, ಲತೇಶ್, ಹರಿಪ್ರಸಾದ್ ಬಗಂಬಿಲ ಆಯ್ಕೆಯಾಗಿದ್ದಾರೆ.

Read More

ಬೀರಿ : ತಾನು ದುಡಿಯುವ ಸೆಲೂನಿನ ಒಳಗಡೆಯೇ ಮಾಲೀಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟೆಕಾರು ಬೀರಿ ಜಂಕ್ಷನ್ ನಲ್ಲಿ ಇಂದು ಸಂಭವಿಸಿದೆ.ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಉಚ್ಚಿಲ ಲೀಸ್ ಮನೆಯಲ್ಲಿ ಕುಟುಂಬದೊAದಿಗೆ ನೆಲೆಸಿರುವ ಬೇಬೀಶ್ (49) ಆತ್ಮಹತ್ಯೆ ನಡೆಸಿದವರು. ಮನೆಮಂದಿಯ ಮೊಬೈಲ್ ಸ್ವೀಕರಿಸದ ಹಿನ್ನೆಲೆಯಲ್ಲಿ ಪುತ್ರ ಸೆಲೂನ್ ಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಸೆಲೂನಿನ ಕೆಳಗಿನ ಮಹಡಿಯಲ್ಲಿರುವ ಅಂಗಡಿಯಿAದ ಮಧ್ಯಾಹ್ನ ೩.೦೦ರ ಸುಮಾರಿಗೆ ಹೊಸ ಹಗ್ಗ ಖರೀದಿಸಿ ಕೃತ್ಯವೆಸಗಿದ್ದಾರೆ. ಹಲವು ವರ್ಷಗಳ ಕಾಲ ವಿದೇಶದಲ್ಲಿದ್ದ ಬೇಬೀಶ್ ವಿದೇಶದಿಂದ ವಾಪಸ್ಸಾಗಿ ಬೀರಿ ಸಮೀಪ ಸೆಲೂನ್ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಂಜೇಶ್ವರ : ನಿನ್ನೆ ವರ್ಕಾಡಿ ಬಳಿಯ ನಲ್ಲೆಂಗಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಬಂಧಿಸಲ್ಪಟ್ಟ ಆರೋಪಿಯಿಂದ ಮಹತ್ತರವಾದ ಹೇಳಿಕೆಯನ್ನು ಪೊಲೀಸರು ಸಂಗ್ರಹಿಸಿದ್ದಾರೆ. ದಿ. ಲೂಯಿಸ್ ಮೊಂತೇರೋರ ಪತ್ನಿ ಹಿಲ್ಡಾ ಮೊಂತೇರೋ (60) ರವರನ್ನು ಪುತ್ರ ಮೆಲ್ವಿನ್ ಮೊಂತೇರೋ (33) ಕೊಲೆಗೈಯ್ಯಲು ಕಾರಣ ಹಣದ ವಿಚಾರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್ಥಿಕ ಪರಿಸ್ಥಿತಿಯಲ್ಲಿದ್ದ ಪುತ್ರ ಮೆಲ್ವಿನ್ ಮೊಂತೇರೋ ತನ್ನ ತಾಯಿಯಲ್ಲಿ ಜಾಗವನ್ನು ಅಡವಿಟ್ಟು 1 ಲಕ್ಷ ರೂಪಾಯಿ ಸಾಲ ನೀಡುವಂತೆ ಕೋರಿದ್ದ, ಇದಕ್ಕೆ ತಾಯಿಯು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೊಲೆ ಕೃತ್ಯ ನಡೆಯಲು ಕಾರಣವಾಗಿದೆ ಎಂದು ಆರೋಪಿ ಪೊಲೀಸರಲ್ಲಿ ತಿಳಿಸಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯದಲ್ಲಿ ಸಮಗ್ರ ವಿಚಾರಣೆ ನಡೆಯಲಿದೆ. ಕೊಲೆಗೈಯಲ್ಪಟ್ಟ ಹಿಲ್ಡಾ ಮೊಂತೇರೋರವರ ಶವ ಮಹಜರು ಪೆರಿಯಾರಂ ಮೆಡಿಕಲ್ ಕಾಲೇಜ್ ನಲ್ಲಿ ನಡೆಸಲಾಯಿತು. ಬಳಿಕ ಇಂದು ಬೆಳಗ್ಗೆ ಇನ್ನೊರ್ವ ಪುತ್ರ ಅಲ್ವಿನ್ ಮೊಂತೆರೋ ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ ಬಳಿಕ ಇಂದು ಮಧ್ಯಾಹ್ನ 3 ಗಂಟೆಗೆ ಮೃತದೇಹದ ಅಂತ್ಯ ಸಂಸ್ಕಾರ ವರ್ಕಾಡಿ…

Read More

ಉಳ್ಳಾಲ : ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ವಲಯ ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಸತ್ಯನಾರಾಯಣ ಹೂಡೆ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಕ್ಯಾ. ಜಿ.ಎಸ್‌ ಪ್ರಸಾದ್‌, ಕೋಶಾಧಿಕಾರಿಯಾಗಿ ರಾಕೇಶ್‌ ಪಳ್ಳಿಕೆರೆ ಆಯ್ಕೆಗೊಂಡಿದ್ದಾರೆ.

Read More

ತಲಪಾಡಿ: ತಲಪಾಡಿಯ ಕೆ.ಸಿ.ರೋಡ್ ಜಂಕ್ಷನ್, ಕೆ.ಎಂ. ಡೈನ್ ಹೋಟೆಲ್ ಸಮೀಪ, ಮೊದಲ ಮಹಡಿಯಲ್ಲಿರುವ ಮರೋಳಿ ಟೂರ್ಸ್ ಅಂಡ್ ಟ್ರಾವೆಲ್ಸ್ ಸೇವಾ ಕೇಂದ್ರವು ಸಾರ್ವಜನಿಕ ಸೇವೆಗಾಗಿ ಆರಂಭಗೊಂಡಿದೆ.ಇಲ್ಲಿ ಆರ್‌ಟಿಒ ಆನ್‌ಲೈನ್ ಕೆಲಸಗಳು, ಹೊಸ ಪಾಸ್‌ಪೋರ್ಟ್ ಸಹಾಯ, ವಾಹನ ಬ್ಲಾಕ್‌ಲಿಸ್ಟ್ ಕ್ಲಿಯರ್, ವಾಹನ ಎಫ್‌ಸಿ, ಹೊಸ ಹಾಗೂ ನವೀಕರಣ ಲೈಸೆನ್ಸ್ ಸೇವೆಗಳು, ಹಾಗೂ ಆಟೋ ಲಿಂಕ್  ಸೇವಾ ಕಾರ್ಯಗಳು ನಡೆಯಲಿದೆ ಎಂದು ಮಾಲೀಕರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:   9449322407, 7829496006. MAROLI Tours and Travels Service Opens in Talapady Talapady: A new service center, Maroli Tours and Travels, has opened on the 1st Floor near K.M. Dine Hotel at K.C. Road Junction, Talapady (575023). The center offers a wide range of facilities including RTO online services, new passport assistance, vehicle blacklist clearance, fitness certificate…

Read More

ಬೊಗೋಡಿ : ಪಾಣೆ ಮಂಗಳೂರು ಬೊಗೋಡಿ ನೂರುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಹಾಜಿ ಎಸ್. ಮೊಹಮ್ಮದ್ ಆಯ್ಕೆಗೊಂಡಿದ್ದಾರೆ.ನೂರುದ್ದೀನ್ ಜುಮಾ ಮಸೀದಿ ಬೋಗೋಡಿ ಇದರ 2025-26 ನೇ ಮಹಾಸಭೆಯಲ್ಲಿ ಆಯ್ಕೆ ನಡೆಯಿತು.ಉಪಾದ್ಯಕ್ಷರು ಹನೀಫ್ ಎಸ್.ಎಮ್.ಎನ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮೆಲ್ಕಾರ್ ,ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಸಾದಿಕ್, ಅರಾಫತ್, ಖಜಾಂಜಿಯಾಗಿ ಅಬ್ದುಲ್ಲಾ ಜಿ.ಎ, ಲೆಕ್ಕ ಪರಿಶೋಧಕರಾಗಿ ಮುಸ್ತಫಾ ಮೆಲ್ಕಾರ್, ಸಮಿತಿ ಸದಸ್ಯರಾಗಿ ಮಜೀದ್ ದರ್ಖಾಸ್, ಮುಹಮ್ಮದ್ ಷರೀಫ್, ಫಾರೂಖ್ ಎ.ಎಂ, ಮುಹಮ್ಮದ್ ಷರೀಫ್ ಎ ಎಂ, ರಮ್ಲಾನ್, ಮುಹಮ್ಮದ್ ಶಿಹಾಬ್, ಮುಹಮ್ಮದ್ ಬಶೀರ್, ಶರೀಫ್ ಮುಸ್ಲಿಯಾರ್ ಆಯ್ಕೆಗೊಂಡಿದ್ದಾರೆ.

Read More

ಸುಳ್ಯ : ಸಂಪಾಜೆ ಸಮೀಪದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ದೇವರಕೊಲ್ಲಿ ಸಮೀಪ ಕಾರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್‌ ನಡುವೆ ಅಪಘಾತ ಸಂಭವಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಕಾರು ಸುಳ್ಯ ಕಡೆಯಿಂದ ಮೈಸೂರು ಕಡೆ ತೆರಳುತ್ತಿದ್ದರೆ ಬಸ್ ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ ಅಪಘಾತದಲ್ಲಿ ಕಾರ್ ಹಾಗೂ ಬಸ್ ಎರಡೂ ವಾಹನಗಳು ಜಖಂಗೊಂಡಿದೆ.

Read More

ಮಂಗಳೂರು: ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಅಭಿವೃದ್ಧಿಯತ್ತ ತನ್ನ ಅಚಲ ಬದ್ಧತೆಯ ಭಾಗವಾಗಿ, ಎಂಸಿಸಿ ಬ್ಯಾಂಕ್ 2025 ಜೂನ್ ತಿಂಗಳಲ್ಲಿ ಮಂಗಳೂರು, ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ್ಯಂತ ವಿವಿಧ ಶಾಲೆಗಳು, ಅನಾಥಾಶ್ರಮಗಳು ಮತ್ತು ಸಂಸ್ಥೆಗಳಿಗೆ ನೋಟ್ ಪುಸ್ತಕ, ಕೊಡೆ ಮತು ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಮತ್ತು ನಿರ್ದೇಶಕರ ಮಂಡಳಿಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳು, ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಲು ಮತ್ತು ಶೈಕ್ಷಣಿಕ ಸಬಲೀಕರಣವನ್ನು ಉತ್ತೇಜಿಸಲು ಬ್ಯಾಂಕಿನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತವೆ. ಪಡುಕೋಣೆಯ ಸೈಂಟ್ ಆಂಟನಿ ಪ್ರಾಥಮಿಕ ಶಾಲೆ, ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ, ಕುಂದಾಪುರದ ಸೈಂಟ್ ಮೇರಿ ಶಾಲೆ, ಕುಂದಾಪುರದ ಸೈಂಟ್ ಜೋಸೆಫ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಬ್ರಹ್ಮಾವರದ ನಿರ್ಮಲಾ ಪ್ರೌಢಶಾಲೆ ಮತ್ತು÷ಕೊಸ್ಮೊಪೊಲಿಟನ್ ಹಿರಿಯ ಪ್ರಾಥಮಿಕ ಶಾಲೆ, ಮಂಗಳೂರಿನ ಕೂಳೂರು ಪ್ರೌಢಶಾಲೆ, ಬಿಜೈಯ ಸೈಂಟ್ ಅಂಜೆಲಾ ಹೋಂ, ಡಿ ಮರ್ಸಿಡ್ ಅನಾಥಾಶ್ರಮ, ಪಾನೀರ್, ಪಾಲಡ್ಕದ ಸೈಂಟ್ ಇಗ್ನೇಷಿಯಸ್ ಲೊಯೊಲಾ…

Read More