ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಪಾರ್ವತಿ ಸಿದ್ದರಾಮಯ್ಯ ಅವರಿಗೆ ಶ್ವಾಸಕೋಶ ಸಂಬಂಧಿತ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಯ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
Author: UllalaVani
ಮಂಗಳೂರು, ನ. 18 : ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ವಾಟ್ಸಾಪ್ ಸಂಖ್ಯೆಯನ್ನು ನವೆಂಬರ್ 17ರ ಮಧ್ಯಾಹ್ನ ಹ್ಯಾಕ್ ಮಾಡಲಾಗಿದೆ. ವಂಚಕರು ಅವರ ಪ್ರೊಫೈಲ್ ಬಳಸಿಕೊಂಡು ಹಲವಾರು ಮಂದಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಾವಾ ಅವರಿಗೆ ಪರಿಚಯವಿರುವ ಪತ್ರಕರ್ತರು, ಪೊಲೀಸ್ ಅಧಿಕಾರಿಗಳು ಮತ್ತು ಇತರರಿಗೆ ಅವರ ಸಂಖ್ಯೆಯಿಂದ ತುರ್ತು ಆರ್ಥಿಕ ಸಹಾಯಕ್ಕಾಗಿ ಸಂದೇಶಗಳನ್ನು ಕಳುಸಲಾಗಿದೆ. ಹ್ಯಾಕರ್ಗಳು “ನನಗೆ ನಿಮ್ಮ ಸಹಾಯ ಬೇಕು” ಎಂಬ ಸಂದೇಶವನ್ನು ಕಳುಹಿಸಿದ್ದಾರೆ.”ಏನಾಯಿತು, ಬಾವಾ?” ಎಂದು ಕೆಲವರು ಪ್ರತಿಕ್ರಿಯಿಸಿದಾಗ, ಹ್ಯಾಕರ್ಗಳು ಇಂಗ್ಲಿಷ್ನಲ್ಲಿ ವಿಸ್ತೃತ ಕಥೆಗಳನ್ನು ಕಳುಹಿಸಿ, ನಂತರ ಬೇರೊಂದು ಯುಪಿಐ ಐಡಿಗೆ ಹಣವನ್ನು ವರ್ಗಾಯಿಸುವಂತೆ ವಿನಂತಿಸಿದ್ದಾರೆ. ಹಣ ಪಾವತಿಸಿದ ನಂತರ ಅದರ ಸ್ಕ್ರೀನ್ಶಾಟ್ ಕಳುಹಿಸುವಂತೆ ಸಹ ಅವರು ಬೇಡಿಕೆ ಇಟ್ಟಿದ್ದಾರೆ.ಬಾವಾ ಅವರ ನಂಬರ್ ನಿಂದ ಸಂದೇಶಗಳನ್ನು ಸ್ವೀಕರಿಸಿದ ಕೆಲವರು ನೇರವಾಗಿ ಬಾವಾ ಅವರಿಗೆ ಕರೆ ಮಾಡಿ ಸತ್ಯವನ್ನು ಪರಿಶೀಲಿಸಿದ್ದಾರೆ. ಈ ವಿಚಾರ ತಿಳಿದು ದಿಗ್ಭ್ರಮೆಗೊಂಡ ಮಾಜಿ ಶಾಸಕರು, ತಮ್ಮ ವಾಟ್ಸಾಪ್ ಸಂಖ್ಯೆ ನಿಜವಾಗಿಯೂ ಹ್ಯಾಕ್ ಆಗಿರುವುದು…
ಕಾಂಗೋ, ನ. 18 : ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಕಾಂಗೋದಲ್ಲಿ ತಾಮ್ರದ ಗಣಿ ಬಳಿ ನಡೆದಿದೆ. ಗಣಿ ಬಳಿ ಗುಂಡಿನ ಸದ್ದು ಕೇಳಿಬಂದಿತ್ತು, ಜನರು ಭಯದಿಂದ ಸೇತುವೆ ಮೇಲೆ ಓಡಿ ಹೋದ ಪರಿಣಾಮ ಸೇತುವೆ ಕುಸಿದು 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿದಿನ ನೂರಾರು ಗಣಿಗಾರರು ಕೆಲಸ ಮಾಡುವ ಲುವಾಲಾಬಾ ಪ್ರಾಂತ್ಯದ ಕಲಾಂಡೋ ಗಣಿಗಾರಿಕೆ ಸ್ಥಳದಲ್ಲಿ ಈ ಅವಘಡ ಸಂಭವಿಸಿದೆ. ಆ ಪ್ರದೇಶವನ್ನು ಕಾವಲು ಕಾಯುತ್ತಿದ್ದ ಮಿಲಿಟರಿ ಸಿಬ್ಬಂದಿ ಗುಂಡು ಹಾರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಹಿಂಸಾಚಾರಕ್ಕೆ ಹೆದರಿ, ಜನರು ಸ್ಥಳದಿಂದ ಹೊರಬರಲು ಸಾಮಾನ್ಯವಾಗಿ ಬಳಸಲಾಗುವ ಕಿರಿದಾದ ಸೇತುವೆಯತ್ತ ಧಾವಿಸಿದರು. ಓಡಿಹೋಗುತ್ತಿದ್ದ ಜನಸಮೂಹದ ಹಠಾತ್ ಒತ್ತಡದಿಂದ ಸೇತುವೆ ಕುಸಿದುಬಿದ್ದಿತ್ತು. 20 ಕ್ಕೂ ಹೆಚ್ಚು ಗಣಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ
ಬೆಂಗಳೂರು ;ಬೆಂಗಳೂರು ನಗರದ 57 ವರ್ಷದ ಮಹಿಳೆಯನ್ನು ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿದ ಸೈಬರ್ ವಂಚಕರು 31.83 ಕೋಟಿ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಈವರೆಗೆ ರಾಜ್ಯದಲ್ಲಿ ವರದಿಯಾದ ಅತ್ಯಧಿಕ ಮೊತ್ತ ಕಳೆದುಕೊಂಡಡಿಜಿಟಲ್ ಅರೆಸ್ಟ್’ ಪ್ರಕರಣ ಇದಾಗಿದೆ. ಇಂದಿರಾನಗರ ನಿವಾಸಿಯಾಗಿರುವ ಸಂತ್ರಸ್ತೆ ನೀಡಿದ ದೂರು ಆಧರಿಸಿ ಪೂರ್ವ ಸೈಬರ್ ಕ್ರೆöÊಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಐ.ಟಿ.ಕ್ಷೇತ್ರದ ಹಿರಿಯ ಉದ್ಯೋಗಿಯಾಗಿರುವ ಸಂತ್ರಸ್ತೆಗೆ 2024ರ ಸೆಪ್ಟೆಂಬರ್ 15ರಮದು ಕರೆ ಮಾಡಿದ ವ್ಯಕ್ತಿ, ತಾನು ಡಿಎಚ್ಎಲ್ ಕೊರಿಯರ್ ಸರ್ವೀಸ್ನಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಉಡುಪಿ, ನ. 18 : ಮಲ್ಪೆ ಹನುಮಾನ್ ನಗರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ಗೆ ಹಂಚಿಕೆ ಮಾಡಿರುವ ಸರ್ಕಾರಿ ಭೂಮಿಯ ಗುತ್ತಿಗೆ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಮನವಿ ಸಲ್ಲಿಸಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಅವರ ಮೂಲಕ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಈ ಮನವಿಯನ್ನು ಸಲ್ಲಿಸಲಾಯಿತು.ಈ ವರ್ಷದ ಏಪ್ರಿಲ್ನಲ್ಲಿ ಕರ್ನಾಟಕ ಜಲಮಾರ್ಗಗಳ ಮಂಡಳಿಯು, ಮಲ್ಪೆಯ ಸೀ ವಾಕ್ ಪ್ರದೇಶ ಮತ್ತು ಹನುಮಾನ್ ಭಜನಾ ಮಂದಿರದ ಬಳಿಯಿರುವ ಸುಮಾರು ೮ ಎಕರೆ ಸರ್ಕಾರಿ ಭೂಮಿಯನ್ನು 15 ವರ್ಷಗಳ ಅವಧಿಗೆ ಮಹಾಮಂಡಳಿಗೆ ಗುತ್ತಿಗೆ ನೀಡಿತ್ತು.ಈ ನೈಸರ್ಗಿಕ ಸೌಂದರ್ಯದಿಂದ ಕೂಡಿದ ಕರಾವಳಿ ಭೂಮಿಯನ್ನು ಮೀನುಗಾರಿಕಾ ಫೆಡರೇಷನ್ಗೆ ಗುತ್ತಿಗೆ ನೀಡುವುದರಿಂದ ಮುಂಬರುವ ದಿನಗಳಲ್ಲಿ ಸ್ಥಳೀಯ ಮೀನುಗಾರರಿಗೆ, ಭಜನಾ ಮಂದಿರದ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಬ್ಲಾಕ್…
ಭಾರತದಲ್ಲಿ 2026 ರ ಮಾರ್ಚ್ ತಿಂಗಳೊಳಗೆ ನಕ್ಸಲ್ ಸಮಸ್ಯೆ ನಿವಾರಣೆ ಮಾಡಬೇಕೆಂಬ ಗುರಿಯನ್ನು ಕೇಂದ್ರ ಗೃಹ ಇಲಾಖೆ ಹಾಕಿಕೊಂಡಿದೆ. ಮತ್ತೊಬ್ಬ ನಕ್ಸಲ್ ಕಮ್ಯಾಂಡರ್ ಮದ್ವಿ ಹಿಡ್ಮಾನನ್ನು ಭದ್ರತಾ ಪಡೆಗಳು ಹತ್ಯೆಗೈದ್ದಿವೆ. ಈತನ ತಲೆಗೆ ಪೊಲೀಸರು 50 ಲಕ್ಷ ಬಹುಮಾನ ಘೋಷಿಸಿದ್ದರು. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್ಕೌಂಟರ್ನಲ್ಲಿ ಮಾವೋವಾದಿ ಕಮ್ಯಾಂಡರ್ ಮದ್ವಿ ಹಿಡ್ಮಾ ನನ್ನು ಗುಂಡಿಕ್ಕಿ ಕೊಂದಿವೆ. ಇಂದು ಆರು ಮಂದಿ ಮಾವೋವಾದಿ ನಕ್ಸಲರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿವೆ. ಇದರಲ್ಲಿ ಮದ್ವಿ ಹಿಡ್ಮಾ ಪತ್ನಿ ಕೂಡ ಸೇರಿದ್ದಾರೆ. ಮದ್ವಿ ಹಿಡ್ಮಾ , ಭಾರತದ ಭದ್ರತಾ ಪಡೆಗಳ ವಿರುದ್ಧ 26 ಸಶಸ್ತ್ರ ದಾಳಿಯನ್ನ ನಡೆಸಿದ್ದ ಉನ್ನತ ಮಾವೋವಾದಿ ನಕ್ಸಲ್ ನಾಯಕನಾಗಿದ್ದ. ಮದ್ವಿ ಹಿಡ್ಮಾ ಬಗ್ಗೆ ಮಾಹಿತಿಗಾಗಿ ಭದ್ರತಾ ಪಡೆಗಳು 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದವು. ಮದ್ವಿ ಹಿಡ್ಮಾ ನೇತೃತ್ವದಲ್ಲಿ ನಕ್ಸಲರು 2010ರ ದಾಂತೇವಾಡ ದಾಳಿ ಮತ್ತು 2013ರ ಜೀರಂ ಕಣಿವೆಯ ದಾಳಿಗಳನ್ನು ನಡೆಸಿದ್ದರು . 2021ರ ಸುಕ್ಮಾ-…
ಮಂಗಳೂರು: ಶಾರದಾ ಅಕಾಡ್ಎಕ್ಸ್ಪೋ 2025ರ ಸ್ಪರ್ಧೆಯಲ್ಲಿ ತಲಪಾಡಿ ಶಾರದಾ ವಿದ್ಯಾನಿಕೇತನÀದ ಹೈಸ್ಕೂಲ್ ವಿದ್ಯಾರ್ಥಿಗಳು ಚಾಂಪಿಯನ್ಶಿಪ್ ಗಳಿಸಿಕೊಂಡಿದ್ದಾರೆ. ನ.15ರಂದು ಕೋಡಿಯಾಲ್ಬೈಲ್ನಲ್ಲಿರುವ ಭುವನರಾಜ ಸಭಾಂಗಣದಲ್ಲಿ ಶಾರದಾ ಪಿಯು ಕಾಲೇಜು ಆಯೋಜಿಸಿದ್ದಹೈಸ್ಕೂಲ್ ವಿದ್ಯಾರ್ಥಿಗಳ ಅಂತರ್ ಶಾಲಾ ಸ್ಪರ್ಧೆಯಾದ ಶಾರದಾ ಅಕಾಡ್ಎಕ್ಸ್ಪೋ 2025ರಲ್ಲಿ ಒಟ್ಟು ಚಾಂಪಿಯನ್ಶಿಪ್ನ್ನು ಪಡೆದುಕೊಳ್ಳುವ ಮೂಲಕ ಶಾರದಾ ವಿದ್ಯಾನಿಕೇತನ ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟಿದ್ದಾರೆ. ಶಾರದಾ ಅಕಾಡ್ಎಕ್ಸ್ಪೋ -2025ರ ಫಲಿತಾಂಶಗಳು ಹೀಗಿವೆ. ಡಂಬ್ ಶೆರೇಡ್ಸ್ ಸ್ಪರ್ಧೆಯಲ್ಲಿ ಸೋಹನ್ ರಾಜ್, ಆರ್ಯನ್, ಧರ್ಮಿಕ್- ಪ್ರಥಮ ಸ್ಥಾನ ಮ್ಯಾಥ್ಸ್ ವಿಸ್ ಸ್ಪರ್ಧೆಯಲ್ಲಿ ವಿಶ್ರುತ್, ಅಕ್ಷಜ್ -ಪ್ರಥಮ ಸ್ಥಾನ ಮ್ಯಾಥ್ಸ್ ವಿಸ್ ಸ್ಪರ್ಧೆಯಲ್ಲಿ ರಿತೇಶ್, ಜೈವಲ್- ದ್ವಿತೀಯ ಸ್ಥಾನ ಸೈನ್ಸ್ ಮಾದರಿ ಸ್ಪರ್ಧೆಯಲ್ಲಿ ದೈವಿಕ್ ಮತ್ತು ಮಹಿತ್- ಪ್ರಥಮ ಸ್ಥಾನ ಕ್ವಿಜ್ ಇಂಟೆಲಿಜೆನ್ಸಿಯಾ ಸ್ಪರ್ಧೆಯಲ್ಲಿ ಶ್ರೀಶರಣ್ ಮತ್ತು ಪ್ರಯಾಗ್ -ದ್ವಿತೀಯ ಸ್ಥಾನ ಗುಂಪು ಗಾನ ಸ್ಪರ್ಧೆಯಲ್ಲಿ ಅಶ್ಲೇಶ್, ಪ್ರಯಾಗ್, ಶ್ರಾವ್ಯ, ಶ್ರೀಧಾ, ಶಾರಣ್ಯ, ಸ್ನೇಹಾ ಭಟ್, ಪಾವನಿ, ನಿವೇದ್ಯ- -ದ್ವಿತೀಯ ಸ್ಥಾನರೀಲ್ ಮೇಕಿಂಗ್ ಸ್ಪರ್ಧೆಯಲ್ಲಿ ಮಣ್ವಿತ್, ಯತಿರಾಜ್ -ದ್ವಿತೀಯ ಸ್ಥಾನ…
ಉಳ್ಳಾಲ: ಕ್ರೈಸ್ತರು ಬೈಬಲ್ ಓದುತ್ತಾರೆ, ಮುಸ್ಲಿಮರು ಕುರಾನ್ ಓದುತ್ತಾರೆ. ಆದರೆ ನಮ್ಮ ಹಿಂದೂ ಮಕ್ಕಳು ಏನು ಓದಬೇಕು? ಅವರಿಗೆ ಮೌಲ್ಯಾಧಾರಿತ ಜ್ಞಾನ ನೀಡುವುದು ಜವಾಬ್ದಾರಿ. ಅದಕ್ಕಾಗಿ ಮಹಾಸಂಗಮದoತಹ ವೇದಿಕೆಗಳು ಜ್ಞಾನ, ಸಂಸ್ಕೃತಿ ಮತ್ತು ಸಮಾಜೋದ್ಧಾರದ ಸಮ್ಮಿಲನವಾಗಬೇಕು ಎಂದು ಕೇರಳ ತಿರುವನಂತಪುರ ಶಿವಗಿರಿ ಮಠ ವರ್ಕಳದ ಜ್ಞಾನತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಶ್ರೀ ನಾರಾಯಣ ಗುರುಗಳ ಮತ್ತು ಮಹಾತ್ಮ ಗಾಂಧೀಜಿಯವರ 1924ರ ವರ್ತುಲ ಸಂವಾದದ ಶತಮಾನೋತ್ಸವ ಮತ್ತು ಶ್ರೀ ನಾರಾಯಣ ಗುರುಗಳ ಮಹಾ ನಿರ್ವಾಹಣ ಶತಮಾನೋತ್ಸವದ ಅಂಗವಾಗಿ ಡಿ.3 ರಂದು ಕೊಣಾಜೆ ಮೈದಾನದಲ್ಲಿ ಆಯೋಜಿಸಲಾಗಿರುವ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದ ಯಶಸ್ವಿಗೊಳಿಸುವ ಸಲುವಾಗಿ ಕೊಲ್ಯ ಬಿಲ್ಲವ ಸಭಾಭವನದಲ್ಲಿ ಆಯೋಜಿಸಲಾದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠಕ್ಕೆ ಎದ್ದಿರುವ ಕಟ್ಟಡ ಸಮಾಧಾನಕರವಾಗಿಲ್ಲ. ಕನಿಷ್ಠ ಎರಡು ಎಕರೆ ಜಾಗದಲ್ಲಿ ದೊಡ್ಡ ಮಟ್ಟದ, ದೃಷ್ಟಾಂತವಾಗುವAತೆ ಜ್ಞಾನ ಮಂದಿರ. ದೇಗುಲದಂತೆ ಕಾಣುವ ಕಟ್ಟಡ ನಿರ್ಮಾಣವಾಗಬೇಕು. ಈ ಯೋಜನೆಗೆ ಸುಮಾರು 1.4 ಕೋಟಿ ರೂಪಾಯಿ ವೆಚ್ಚ…
ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಯಶಸ್ವಿ ಜೈಸ್ವಾಲ್, ಫುಲ್ ಡಲ್ ಆಗಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಶತಕಗಳಿಸಿದ್ದ ಜೈಸ್ವಾಲ್, ರಾಜಸ್ಥಾನ್ ವಿರುದ್ಧ ರಣಜಿ ಟ್ರೋಫಿಯಲ್ಲೂ ಘರ್ಜಿಸಿದ್ರು. ಟೆಸ್ಟ್ ಕ್ರಿಕೆಟ್ನಲ್ಲಿ ಜೈತ್ರಯಾತ್ರೆ ಮುಂದುವರೆಸುತ್ತಿರುವ 24 ವರ್ಷದ ಯಶಸ್ವಿ ಜೈಸ್ವಾಲ್, ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನೇ ಪುಡಿ ಪುಡಿ ಮಾಡಿದ್ದಾರೆ. ದೇಶ-ವಿದೇಶಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿರುವ ಜೈಸ್ವಾಲ್, ತವರಿನಲ್ಲಿ ರನ್ಗಳಿಸೋಕೆ ಪರದಾಡ್ತಿದ್ದಾರೆ. ಅದ್ರಲ್ಲೂ ಎಡಗೈ ವೇಗಿಗಳ ವಿರುದ್ಧ ಜೈಸ್ವಾಲ್ ಪರದಾಡ್ತಿರೋದು ಟೀಮ್ ಮ್ಯಾನೇಜ್ಮೆಂಟ್ಗೆ ದೊಡ್ಡ ಟೆನ್ಶನ್ ಆಗಿದೆ. ಕೊಲ್ಕತ್ತಾ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಜೈಸ್ವಾಲ್, ಎಡಗೈ ವೇಗಿ ಮಾರ್ಕೊ ಯಾನ್ಸನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ರು. ಎರಡನೇ ಇನ್ನಿಂಗ್ಸ್ನಲ್ಲೂ ಜೈಸ್ವಾಲ್, ಯಾನ್ಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡಿ, ಔಟಾದ್ರು. ಯಾನ್ಸನ್ ಎಸೆದ ಒಂದೊಂದು ಎಸೆತವವೂ, ಜೈಸ್ವಾಲ್ಗೆ ಬೆಂಕಿ ಚೆಂಡಿನಂತಿತ್ತು. ಎಡಗೈ ವೇಗಿಗಳೇ ಜೈಸ್ವಾಲ್ಗೆ ರಿಯಲ್ ವಿಲನ್ಸ್..! ಯಂಗ್ ಯಶಸ್ವಿ ಜೈಸ್ವಾಲ್ ಟೆಸ್ಟ್…
ಮಂಗಳೂರು: ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳ ಮುಖ್ಯಸ್ಥರು ತಮ್ಮ ಸಂಸ್ಥೆಯ ಆವರಣದಲ್ಲಿ ಯಾವುದೇ ಬೀದಿ ನಾಯಿಗಳು ವಾಸವಿದ್ದಲ್ಲಿ ಅದನ್ನು ಪರಿಶೀಲಿಸಿ ಮುಂದಿನ 5 ದಿನಗಳೊಳಗಾಗಿ ಅದರ ಸಂಖ್ಯೆಯನ್ನು ಲೆಕ್ಕ ಮಾಡಿ ತಿಳಿಸಬೇಕು. ಮತ್ತೆ ನಾಯಿಗಳ ವಾಸ ಮಾಡಲು ಅವಕಾಶ ಕೊಟ್ಟಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅವಗಳನ್ನು ಸ್ಥಳಾಂತರಿಸುವ ವೆಚ್ಚವನ್ನು ಆಯಾ ಸಂಸ್ಥೆಯಿAದಲೇ ವಸೂಲಿ ಮಾಡಲಾಗುತ್ತದೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ನ್ಯಾಯಾಲಯದ ಆದೇಶದಂತೆ ಸಂಬAಧಿಸಿದವರ ವಿರುದ್ಧ ಕಾನೂನು ಕ್ರಮ ವಹಿಸಲಾಗುತ್ತದೆ ಎಂದು ಮಂಗಳೂರು ಮಹಾನಗರ-ಪಾಳಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

