Author: UllalaVani

Kannada News From Coastal Karnataka

ಮಂಗಳೂರು; “ಲಿಂಗ ಸಮಾನತೆ ಮತ್ತು ನ್ಯಾಯ” ಕುರಿತ ಪ್ರೇರಣಾದಾಯಕ ತಂಡ ತರಬೇತಿ ಕಾರ್ಯಕ್ರಮವನ್ನು 2025ರ ನವೆಂಬರ್ 17ರಂದು ಸಿಒಡಿಪಿಯಲ್ಲಿ ಆಯೋಜಿಸಲಾಯಿತು. KROSS ಬೆಂಗಳೂರು ಹಾಗೂ CODP®️ ಮಂಗಳೂರಿನ ಸಹಯೋಗದಲ್ಲಿ ಮಹಿಳಾ ಸದೃಢೀಕರಣ ಯೋಜನೆ ಘಟಕದಡಿ ಈ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ರಾಜಶೇಖರ್, ಸಂಯೋಜಕ – ಮಹಿಳಾ ಸದೃಢೀಕರಣ ಯೋಜನೆ (KROSS, ಬೆಂಗಳೂರು), ಡಾ. ರೋಹನ್ ಎಸ್. ಮೊನಿಸ್, ಮುಖ್ಯ ಆಡಳಿತಾಧಿಕಾರಿ – ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ದೇರಳಕಟ್ಟೆ ಹಾಗೂ CODP ಲಿಂಗ ಸಮಾನತೆ ಮತ್ತು ನ್ಯಾಯ ಬಾಹ್ಯ ತಂಡದ ಮುಖ್ಯಸ್ಥರು ಮತ್ತು ದಕ್ಷಿಣ ಕೆನರಾ ಕ್ಯಾಥೊಲಿಕ್ ಅಸೋಸಿಯೇಶನ್‌ನ ಉಪಾಧ್ಯಕ್ಷರು, ಕು. ಮರ್ಲಿನ್ ಮಾರ್ಟಿಸ್ – ನಿರ್ದೇಶಕಿ, ಡೀಡ್ಸ್ ಸೋಷಿಯಲ್ ಸರ್ವಿಸ್; ಶ್ರೀಮತಿ ಸೀಮಾ – ಕಾರ್ಯದರ್ಶಿ, ಮಾನಿನಿ ರಾಜ್ಯ ಮಹಿಳಾ ಮಹಾಸಂಘ ಹಾಗೂ ರೆ। ವಿನ್ಸೆಂಟ್ ಡಿಸೋಜಾ – ನಿರ್ದೇಶಕರು, CODP ಇವರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.ಸಂಪನ್ಮೂಲ ವ್ಯಕ್ತಿಯಾದ ಮರ್ಲಿನ್ ಮಾರ್ಟಿಸ್ ಅವರು ಲಿಂಗ ಸಮಾನತೆ ಮತ್ತು ನ್ಯಾಯದ ಮಹತ್ವವನ್ನು…

Read More

ಮಂಗಳೂರು; ಮಂಗಳೂರಿನ ಕಥೊಲಿಕ್ ವಾಣಿಜ್ಯ ಮಹಾಮಂಡಳಿ – ರಚನಾದ 26ನೇ ಸಾಮಾನ್ಯ ಸಭೆ ಬೆಂದೂರ್ ಹಾಲ್‌ನಲ್ಲಿ ನಡೆಯಿತು. ಕಥೊಲಿಕ್ ಮುಖಂಡ ಮತ್ತು ಉದ್ಯಮಿ ರೊಯ್ ಕ್ಯಾಸ್ತೆಲಿನೊ ಅವರನ್ನು ಮುಂದಿನ ಎರಡು ವರ್ಷದ ಅವಧಿಗೆ ಏಕಮತದಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸಂಸ್ಥೆಯ ನೇತೃತ್ವದಲ್ಲಿ ಇದು ಒಂದು ಪ್ರಮುಖ ಬದಲಾವಣೆ ಆಗಿದ್ದು, ಕ್ಯಾಥೋಲಿಕ್ ಸಮುದಾಯದ ಉದ್ಯಮಶೀಲತೆ ಮತ್ತು ವೃತ್ತಿ ಅಭಿವೃದ್ಧಿಗೆ ಸಮರ್ಪಿತವಾದ ಈ ಪ್ರಮುಖ ಸಂಘಟನೆಯ ಮುಂದಿನ ದಾರಿಗೆ ಇದು ಮಹತ್ವದ್ದಾಗಿದೆ. ಪ್ರಾದೇಶಿಕ ವಾಣಿಜ್ಯ ವಲಯದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿರುವ ಕ್ಯಾಸ್ತೆಲಿನೊ ಅವರು ತಮ್ಮ ಅಪಾರ ಅನುಭವ ಮತ್ತು ದೃಢ ನಾಯಕತ್ವದ ದಾಖಲೆಯೊಂದಿಗೆ ಹೊಸ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ.ಸಭೆಯಲ್ಲಿ ಇತರ ಹುದ್ದೆಗಾರರನ್ನೂ ಆಯ್ಕೆ ಮಾಡಲಾಯಿತು. ಲೆಸ್ಲಿ ರೇಗೊ ಉಪಾಧ್ಯಕ್ಷರಾಗಿ, ಎಲ್ರೊನ್ ರೊಡ್ರಿಗಸ್ ಕಾರ್ಯದರ್ಶಿಯಾಗಿ, ಜೇಮ್ಸ್ ಜೆ. ಮಾಡ್ತಾ ಸಂಯುಕ್ತ ಕಾರ್ಯದರ್ಶಿಯಾಗಿ ಮತ್ತು ನವೀನ್ ಲೋಬೊ ಖಜಾಂಚಿಯಾಗಿ ಆಯ್ಕೆಯಾದರು. ಇದರಂತೆಯೇ, ಆಡಳಿತ ಮಂಡಳಿಗೆ ಮಾರ್ಸೆಲ್ ಮೊಂತೇರೊ, ರೊನಾಲ್ಡ್ ಗೊಮ್ಸ್, ಸ್ಟ್ಯಾನಿ ಅಲ್ವಾರಿಸ್, ವಿಲಿಯಂ ಡಿಸೋಜಾ, ನೆಲ್ಸನ್ ಮೊಂತೇರೊ ಮತ್ತು…

Read More

ಮಂಗಳೂರು: ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆಯಾದ ಮಾಂಡ್ ಸೊಭಾಣ್ ತನ್ನ ಸಾಹಿತ್ಯದ ಸಹ ಸಂಸ್ಥೆ ಅಕಾಡೆಮಿ ಮಿಟಾಕಣ್ ಮೂಲಕ ಸಾಹಿತ್ಯದ ಬಗ್ಗೆ ಒಲವು ಮೂಡಿಸಲು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ. 2025 ಡಿಸೆಂಬರ್ 07 ರಂದು ಭಾನುವಾರ ಮುಂಜಾನೆ 8.45 ರಿಂದ ಸಂಜೆ 4.00 ಗಂಟೆ ತನಕ ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣ ಮೈದಾನದಲ್ಲಿ ಈ ಸಮ್ಮೇಳನ ನಡೆಯಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೊಕಿಂ ಸ್ಟ್ಯಾನಿ ಆಲ್ವಾರಿಸ್ ಸಮ್ಮೇಳನದ ಮೆರವಣಿಗೆಯನ್ನು ಉದ್ಘಾಟಿಸುವರು. ಸಮ್ಮೇಳನದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಹಿತಿ ವಂ. ಪ್ರಶಾಂತ್ ಮಾಡ್ತಾ ವಹಿಸಲಿರುವರು. 9 ನೇ ತರಗತಿಯ ವಿದ್ಯಾರ್ಥಿನಿ ಸಂಜನಾ ರಿವಾ ಮತಾಯಸ್ ಆಶಯ ಭಾಷಣವನ್ನು ಮಾಡಲಿರುವರು. ʻಮಕ್ಕಳ ಸಾಹಿತ್ಯದ ಭವಿಷ್ಯʼ ಎಂಬ ವಿಷಯದ ಮೇಲೆ ವಿಚಾರ ಗೋಷ್ಟಿ ನಡೆಯಲಿದೆ. ಸಾಹಿತ್ಯದಲ್ಲಿ ಪ್ರಸಿದ್ಧಿ ಪಡೆದ ಶಿಕ್ಷಕತ್ರಯರಾದ ಆಲ್ವಿನ್ ದಾಂತಿ, ಪೆರ್ನಾಲ್, (ಅಧ್ಯಕ್ಷತೆ), ಫೆಲ್ಸಿ ಲೋಬೊ ದೇರೆಬೈಲ್ (ಅಜ್ಜಿಕತೆಗಳು ಹಾಗೂ…

Read More

ಮಂಜನಾಡಿ; ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದಲ್ಲಿ ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಗುಡ್ಡ ಕುಸಿತ ಒಂದು ಕುಟುಂಬವನ್ನೇ ನಾಶ ಮಾಡಿದ ದುರಂತ. ಈ ಘಟನೆಯನ್ನು “ಪ್ರಕೃತಿ ವಿಕೋಪ” ಎಂದು ಕರೆಯುವ ಮೂಲಕ ಆಡಳಿತ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ, ನಿಜವಾದ ಕಾರಣ ಅವೈಜ್ಞಾನಿಕ ರಸ್ತೆ ಕಾಮಗಾರಿ, ನಿಯಮ ಉಲ್ಲಂಘನೆ ಮತ್ತು ತಾಂತ್ರಿಕ ನಿರ್ಲಕ್ಷ್ಯ. ಈ ದುರಂತದಲ್ಲಿ ಆಶ್ವಿಯಾ ಎಂಬ ಯುವ ತಾಯಿಯ ಎದುರು ಆಕೆಯ ಇಬ್ಬರು ಮಕ್ಕಳು ಮತ್ತು ಅತ್ತೆ ಮಣ್ಣಿನೊಳಗೈದು ಸಾವನ್ನಪ್ಪಿದರು. ಆಶ್ವಿಯಾ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಳು. ಮಾವನ ಒಂದು ಕಾಲು ಶಾಶ್ವತವಾಗಿ ಛಿದ್ರಗೊಂಡಿತು. ಒಂದು ಸಂಸಾರ ಕ್ಷಣದಲ್ಲಿ ನಾಶವಾಯಿತು. ಇಷ್ಟೊಂದು ಭೀಕರ ದುರಂತಕ್ಕೂ ಜಿಲ್ಲಾಡಳಿತ ನೀಡಿದ ಪರಿಹಾರ—ಮೂರು ಪ್ರಾಣಗಳಿಗೆ ₹15 ಲಕ್ಷ, ಆಶ್ವಿಯಾ ಅವರ ಎರಡು ಕಾಲುಗಳಿಗೆ ₹2 ಲಕ್ಷ, ಮಾವನ ಒಂದು ಕಾಲಿಗೆ ₹1 ಲಕ್ಷ. ಒಟ್ಟು ₹18 ಲಕ್ಷ.ಮಾನವ ಜೀವಕ್ಕೆ ಮತ್ತು ಬದುಕಿನ ಶಾಶ್ವತ ನಾಶಕ್ಕೆ ಕಟ್ಟಿದ ಈ “ಬೆಲೆ” ಮಾನವೀಯತೆಗೂ ನ್ಯಾಯಕ್ಕೂ ತಕ್ಕದ್ದೇ? ದುರಂತದ ಬಗ್ಗೆ…

Read More

ಮಂಗಳೂರು: ಮಂಗಳೂರು, ರಥಬೀದಿ, ಪುತ್ತುಪ್ರಭುಲೇನ್‌ನ “ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತ ಬಾಲಾಂಜನೇಯ ಜಿಮ್ನಾಶಿಯಂನ 2024-2025 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಜಿಮ್‌ನ ಆವರಣದಲ್ಲಿ ನಡೆಯಿತು. ಮುಂದಿನ 4ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಎ.ಉಮೇಶ್ ಗಟ್ಟಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪರಂದರದಾಸ ಕೂಳೂರು ಮತ್ತು ಎಂ.ಜಯರಾಮ್, ಗೌರವ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಕುದ್ರೋಳಿ, ಜಂಟಿ ಕಾರ್ಯದರ್ಶಿಯಾಗಿ ದೇವದಾಸ ಕೂಳೂರು ಮತ್ತು ಪ್ರದೀಪ್ ಆಚಾರ್ಯ, ಕೋಶಾಧಿಕಾರಿಯಾಗಿ ಮಧುಚಂದ್ರ ಮತ್ತು ವ್ಯವಸ್ಥಾಪಕರಾಗಿ ಮೋಹನರಾಜ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಿ.ಕಮಲಾಕ್ಷ ಅಮೀನ್, ರೋನಾಲ್ಡ್ ಲೋಬೋ, ಮಹಮ್ಮದ್ ಹನೀಫ್ ಕೂಳೂರು, ವೇಣುಗೋಪಾಲ ಕಾಮತ್, ವಿನೋದ್ ರಾಜ್, ತಿಲಕ್ ರಾಜ್, ಸದಾನಂದ ಅಮೀನ್ ಮತ್ತು ವಾಲ್ಟರ್ ಡಿಕೋಸ್ತ ಆಯ್ಕೆಯಾಗಿದ್ದಾರೆ. ಉತ್ಕೃಷ್ಟ ಸಾಧನೆಗಾಗಿ ” ಬಾಲಾಂಜನೇಯ ರತ್ನ” ಪ್ರಶಸ್ತಿಯನ್ನು ಸದಸ್ಯರಾದ ಬಿ.ಜಯಶೆಟ್ಟಿ ಹಾಗೂ “ಬಾಲಾಂಜನೇಯ ವಜ್ರ” ಪ್ರಶಸ್ತಿ ಪ್ರಕಾಶ್ ವಿನ್ಸೆಂಟ್ ಕಾರ್ಲೊ ಇವರಿಗೆ ನೀಡಿ ಗೌರವಿಸಲಾಯಿತು. ಅಧ್ಯಕ್ಷರಾದ ಎ.ಉಮೇಶ್ ಗಟ್ಟಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿಯವರು…

Read More

ಉಡುಪಿ: ಮಂದಾರ್ತಿ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಬಣ್ಣದ ಮನೆಯಲ್ಲೇ ಹೃದಯಾಘಾತದಿಂದ ಕುಸಿದು ನಿಧನ ಹೊಂದಿದ ಘಟನೆ ಬುಧವಾರ( ನ19) ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ನಡೆದಿದೆ. 2ನೇ ಮೇಳದ ಪ್ರತಿಭಾನ್ವಿತ ಕಲಾವಿದ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದರು. ದೇವಿ ಮಾಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ಕುಸಿದಿದ್ದಾರೆ. ಸಹಕಲಾವಿದರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದರು. ಈಶ್ವರ ಗೌಡ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Read More

ಉಳ್ಳಾಲ: ಕುಂಪಲ ಶಿವಪುರದ ಶ್ರೀ ದುರ್ಗಾಪರಮೇಶ್ವರ ಕ್ಷೇತ್ರದಲ್ಲಿ ದೀಪೋತ್ಸವದ ನಂದಾದೀಪ ಪ್ರಜ್ವಲನೆಯನ್ನು AE ಮೆಸ್ಕಾಂ, ಮಂಗಳೂರು ನೀನಾ ಸಂದೇಶ್ ಶೆಟ್ಟಿ , ಸಹಾಯಕ ಇಂಜಿನಿಯರ್ ಮೆಸ್ಕಾಂ, ಉಳ್ಳಾಲ ಕಿಶೋರಿ ನಿತೇಶ್ , ಹೊಸಗದ್ದೆ, ಸುಶ್ಮಿತಾ ಅಖಿಲ್, ಬೀರಿ, ಸುಶ್ಮಿತಾ ನಿತೇಶ್ಅಂ ಬಿಕಾ ನಗರ, ರಮ್ಯಶ್ರೀ ದೇವಿಪ್ರಸಾದ್, ಮಣ್ಣಗುಡ್ಡೆ, ಮಂಗಳೂರು, ವಾಣಿಶ್ರೀ ಪಿ.ಕೆ ರಾಜ,ಕುತ್ತಾರ್, ಹಿತೈಷಿ ಕೌಶಿಕ್,ಅಂಬಿಕಾ ನಗರ, ಗಜೇಂದ್ರ,ಪೂಜಾರಿ,ಮಡಿಲು ಸೇವಾ ತಂಡ,ಪಡೀಲ್ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಮಡಿಲು ಸೇವಾ ತಂಡ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ನಂತರ ಮಹಾಪೂಜೆ,ಪಲ್ಲಕ್ಕಿ ಬಲಿ, ದಿಂಡು ಪೂಜೆ ಅನ್ನದಾನ ಸೇವೆ ನಡೆಯಿತು,ಜಗದೀಶ್ ಆಚಾರ್ಯ ತೋಕ್ಕೊಟ್ಟು ಮತ್ತು ಬಲಗದವರಿಂದ ಭಕ್ತಿಗೀತೆ ರಸಮಂಜರಿ ಕಾರ್ಯಕ್ರಮ ನಡೆಯಿತು.

Read More

ಸುರತ್ಕಲ್: ಯುವ ಕಾಂಗ್ರೆಸ್ ಮಂಗಳೂರು ಉತ್ತರ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ‌ ನೇತೃತ್ವದಲ್ಲಿ ದಿಲ್ಲಿಯಲ್ಲಿ ಇತ್ತೀಚಿಗೆ ನಡೆದ ವಿಧ್ವಂಸಕ ಕೃತ್ಯ ಮತ್ತು ʼವೋಟ್ ಚೋರಿʼ ವಿರುದ್ಧ ಬೃಹತ್ ಪಂಜಿನ ಮೆರವಣಿಗೆ ಬುಧವಾರ ಸಂಜೆ ಕೃಷ್ಣಾಪುರ ಕ್ರಾಸ್ ನಿಂದ ಸುರತ್ಕಲ್ ಪೇಟೆಯವರೆಗೆ ನಡೆಯಿತು. ಬಳಿಕ ನಡೆದ ಸಭೆಯಲ್ಲಿ ಮಾತಾಡಿದ ಇನಾಯತ್ ಅಲಿ ಅವರು, “ಬಿಜೆಪಿ ಪಕ್ಷ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಾಮಮಾರ್ಗವನ್ನು ಅನುಸರಿಸುತ್ತಿರುವುದು ಖಂಡನೀಯ. ಮತಗಳ್ಳತನ ಈಗಾಗಲೇ ಬಯಲಾಗಿದ್ದು, ಒಂದೇ ಹೆಸರಲ್ಲಿ ಹತ್ತಾರು ಕಡೆಗಳಲ್ಲಿ ಮತ ಚಲಾಯಿಸಿರುವುದು ಬೆಳಕಿಗೆ ಬಂದಿದೆ. ಹರ್ಯಾಣದಲ್ಲಿ ಬ್ರೆಝಿಲ್ ಮಾಡೆಲ್ ಒಬ್ಬಳ ಫೋಟೋ ಬಳಸಿ 22ಕ್ಕೂ ಹೆಚ್ಚು ಕಡೆಗಳಲ್ಲಿ ಮತದಾನ ಮಾಡಲಾಗಿದೆ. ಬಿಹಾರದಲ್ಲಿ ಅಧಿಕಾರಕ್ಕೇರಲು ಮತಗಳ್ಳತನವೇ ಪ್ರಮುಖ ಕಾರಣವಾಗಿದೆ. ದಿಲ್ಲಿಯಲ್ಲಿ ನಡೆದಿರುವ ವಿಧ್ವಂಸಕ ಕೃತ್ಯಗಳಲ್ಲಿ ಬಿಜೆಪಿ ಸರಕಾರದ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ. ಕೇಂದ್ರ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯಲಿದೆ” ಎಂದರು. ರಾಷ್ಟ್ರೀಯ ಉಸ್ತುವಾರಿ ನಿಗಮ್ ಭಂಡಾರಿ ಮಾತಾಡಿ, “ಬಿಹಾರದಲ್ಲಿ…

Read More

ಪುತ್ತೂರು, ನ. 20; ಮಾದಕವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನಿಸುತ್ತಿದ್ದಾತನನ್ನು ಪೋಲೀಸರು ವಶಕ್ಕೆ ಪಡೆದ ಘಟನೆ ಪುತ್ತೂರು ಪೊಲೀಸ್‌ ರಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಪುತ್ತೂರು ಕಬಕ ನಿವಾಸಿ ಮಹಮ್ಮದ್ ಮುಸ್ತಪಾ (36) ಎಂದು ಗುರುತಿಸಲಾಗಿದೆ.ನ.15 ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ, ಮುಕ್ರಂಪಾಡಿ ಕಮ್ಮಾಡಿ ಮರದ ಮಿಲ್‌ ಬಳಿ ವೀಣಾ ಎಂಬವರ ಬಾಬ್ತು ಬಾಡಿಗೆ ಕೋಣೆಯಲ್ಲಿ ಮಹಮ್ಮದ್‌ ಮುಸ್ತಾಫ ಎಂಬಾತನು ಅಕ್ರಮವಾಗಿ ನಿಷೇದಿತ ಮನೋನ್ಮಾದಕ ವಸ್ತು ಎಂಡಿಎಂಎ ನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಲಾಯಿತು.ಪೊಲೀಸ್‌ ಉಪನಿರೀಕ್ಷಕ ಜನಾರ್ಧನ ಕೆ.ಎಂ ನೇತೃತ್ವದಲ್ಲಿ ಪುತ್ತೂರು ನಗರ ಪೊಲೀಸ್‌ ಠಾಣೆ ಸಿಬ್ಬಂದಿಗಳೊಂದಿಗೆ ಸ್ಥಳ ಪರೀಶಿಲಿಸಿದಾಗ, ಬಾಡಿಗೆ ಕೋಣೆಯಲ್ಲಿ ಆರೋಪಿಯು ಅಕ್ರಮವಾಗಿ 14 ಗ್ರಾಂ ನಿಷೇದಿತ ಮಾದಕ ಮನೋನ್ಮಾದಕ ವಸ್ತು ಎಂಡಿಎಂಎ ವನ್ನು ತನ್ನ ಬಳಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.ಈ ಬಗ್ಗೆ ಆರೋಪಿ ಮಹಮ್ಮದ್ ಮುಸ್ತಪಾ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 109/2025 ಕಲಂ;- 8(C),22(b)…

Read More

ಕೊಣಾಜೆ: ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಲವು ಪ್ರಮುಖ ಗ್ರಾಮಗಳು ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿರುತ್ತದೆ. ಈ ವ್ಯಾಪ್ತಿಯಲ್ಲಿ ಪಾವೂರು, ಹರೇಕಳ, ಫಜೀರು, ಕೊಣಾಜೆ, ಬೆಳ್ಮ, ಅಂಬ್ಲಮೊಗರು, ಬಾಳೆಪುಣಿ, ಕುರ್ನಾಡು, ಮಂಜನಾಡಿ, ಬೋಳಿಯಾರ್, ಇರಾ, ಸಜೀಪ ನಡು, ಸಜೀಪ ಪಡು, ನರಿಂಗಾನ ಸೇರಿದಂತೆ 13 ಗ್ರಾಮ ಪಂಚಾಯತ್ ಗಳಿಗೆ ಒಳಪಟ್ಟಿವೆ. ಈ ಎಲ್ಲಾ ಗ್ರಾಮಗಳಲ್ಲಿ ಕಾಲದಿಂದ ಕಾಲಕ್ಕೆ ಜನಸಂಖ್ಯೆ ಹೆಚ್ಚಳಗೊಳಲ್ಳುತ್ತಿದ್ದು ಅಲ್ಲದೆ ಈ ಭಾಗಗಳಲ್ಲಿ ಕಳ್ಳತನ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಂತವುಗಳು ರಾಜಾರೋಷವಾಗಿ ನಡೆಯುತ್ತಿದ್ದು ಇವುಗಳನ್ನೆಲ್ಲಾ ನಿಯಂತ್ರಿಸಬೇಕಾಗಿದ್ದ ಸ್ಥಳೀಯ ಠಾಣೆಗಳಿಗೆ ವಿಪರೀತ ಒತ್ತಡ ಹೆಚ್ಚಾಗಿದೆ. ಇಲ್ಲಿನ ಜನ ಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ, ಪೊಲೀಸರಿಗೆ ಗಸ್ತು ತಿರುಗಲು ಸರಿಯಾದ ವಾಹನದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ನಾವು ಕಂಡಂತೆ ಇಲ್ಲಿ ಕೇವಲ ಒಂದು ವಾಹನವಷ್ಟೇ ಗಸ್ತು ಸಂದರ್ಭದಲ್ಲಿ ತಿರುಗಾಡುವುದು ಬಿಟ್ಟರೆ ಉಳಿದದ್ದು ಬಳಕೆಗೆ ಅಯ್ಯೋಗ್ಯವಾಗಿ ಶಿಥಿಲಾವಸ್ಥೆಯಲ್ಲಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ…

Read More