Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ಗುಳಿಗ ದೈವದ ಮುನಿಸು: ಸ್ಮಾರ್ಟ್ ಸಿಟಿ ಗುತ್ತಿಗೆದಾರನಿಗೆ ಅನಾರೋಗ್ಯ, ಆರ್ಕಿಟೆಕ್ಟ್ ಗೆ ಅಪಘಾತ: ಕೊನೆಗೂ ದೈವಕ್ಕೆ ಹರಕೆ ಹೇಳಿದ ಕುಟುಂಬ!

UllalaVaniBy UllalaVaniAugust 27, 2024Updated:August 27, 2024No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ದ ದೈವ ಮುನಿದ ಸ್ಪೋರಿಗೆ ಮತ್ತೊಂದು ತಿರುವು ಸಿಕ್ಕಿದ್ದು, ಕಾಮಗಾರಿ ಗುತ್ತಿಗೆದಾರ ಹಾಗೂ ಆರ್ಕಿಟೆಕ್ಟ್ ಬದುಕಿನಲ್ಲಿ ಅವಘಡದ ಬೆನ್ನಲ್ಲೇ ಅವರ ಕುಟುಂಬ ಎಚ್ಚೆತ್ತುಕೊಂಡಿದೆ.

ಕೊನೆಗೂ ಗುಳಿಗ ದೈವದ ಮೊರೆ ಹೋದ ಗುತ್ತಿಗೆದಾರ ಮತ್ತು ಆರ್ಕಿಟೆಕ್ಟ್ ಕುಟುಂಬ ಗುಳಿಗ ದೈವಕ್ಕೆ ಕೋಲ ಕೊಡುವ ಹರಕೆ ಹೊತ್ತುಕೊಂಡಿದೆ. ಇಬ್ಬರೂ ಗುಣಮುಖರಾಗುವಂತೆ ಪ್ರಾರ್ಥಿಸಿ ಕೋಲದ ಹರಕೆ ಪ್ರಾರ್ಥನೆ ಮಾಡಿದೆ. ದೈವದ ಮಾತು ದಿಕ್ಕರಿಸಿ ಕಾಮಗಾರಿ ಆರಂಭಿಸಿದ್ದ ಗುತ್ತಿಗೆದಾರನಿಗೆ ಅನಾರೋಗ್ಯ ಎದುರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶರವು ಗುಳಿಗೆ ದೈವದ ಅಭಯ ಪಡೆಯದೇ ಕಾಮಗಾರಿ ಆರಂಭಿಸಿದ್ದ ಪರಿಣಾಮ ಕಾಮಗಾರಿಗೆ ವಿಘ್ನ ಎದುರಾಗಿತ್ತು. ಸರಣಿ ಅವಘಡದ ಬೆನ್ನಲ್ಲೇ ಎಚ್ಚೆತ್ತ ಕುಟುಂಬಸ್ಥರಿಂದ ಅ.16ರಂದು ದೈವದ ಮೊರೆ ಹೋಗಿದ್ದಾರೆ. ತಮ್ಮ ಆರೋಗ್ಯ ಶೀಘ್ರ ಚೇತರಿಕೆಗಾಗಿ ಶರವು ಮಹಾಗುಳಿಗ ದೈವಕ್ಕೆ ಮೊರೆ ಹೋಗಿದ್ದಾರೆ. ಸದ್ಯ ಮುಂದಿನ ಕೋಲದಲ್ಲೇ ಅಭಯ ನೀಡುವ ಬಗ್ಗೆ ಕುಟುಂಬಸ್ಥರಿಗೆ ದೈವ ನುಡಿದಿದೆ.

ಸ್ಮಾರ್ಟ್ ಸಿಟಿ ಕಾಮಗಾರಿ ವಿರುದ್ದ ದೈವದ ಮುನಿಸು ಯಾಕೆ?

ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡಿತಾ ಇದೆ. ಆದ್ರೆ ಮಂಗಳೂರಿನ ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣ ಇದ್ದ ಸ್ಥಳದಲ್ಲಿ ಕಳೆದ ಮೂರು ವರ್ಷದಿಂದ ಕಾಮಗಾರಿಯೊಂದು ನೆನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣ ಗುಳಿಗೆ ದೈವದ ಮುನಿಸಂತೆ. ಬಹು ಅಂತಸ್ಥಿನ ಕಾರ್ ಪಾರ್ಕಿಂಗ್ ಕಾಮಗಾರಿಯ ಈಗಿನ ಈ ಸ್ಥಿತಿಗೆ ಕಾರಣ ಇಲ್ಲೇ ಸಮೀಪದಲ್ಲಿ ಇರುವ ಶರವು ಮಹಾ ಗುಳಿಗ ದೈವ ಅನ್ನೋದು ಸದ್ಯ ಚರ್ಚೆಯ ವಿಷಯ. ಇತ್ತೀಚೆಗೆ ಶರವು ಮಹಾಗುಳಿಗನಿಗೆ ನೀಡಲಾದ ಕೋಲದಲ್ಲಿ ಗುಳಿಗ ಇದೇ ಕಾಮಗಾರಿ ವಿಚಾರವಾಗಿ ತನ್ನ ಕೋಪವನ್ನು ಹೊರಹಾಕಿದೆಯಂತೆ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಾತನ ನಿರ್ಲಕ್ಷ್ಯದ ಬಗ್ಗೆ ಶರವು ಮಹಾ ಗುಳಿಗ ಕೋಪದಿಂದಲೋ ಮುಂದೆ ದೊಡ್ಡ ಅನಾಹುತ ನಡೆಯಲಿದೆ ಎಂದು ಎಚ್ಚರಿಸಿದೆಯಂತೆ. ಎಚ್ಚರಿಕೆ ನೀಡಿದ ಬೆನ್ನಲ್ಲೇ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ತಡೆಗೋಡೆಯೊಂದು ಧರಾಶಾಹಿಯಾಗಿದೆ. ಕಾಮಗಾರಿ ಆರಂಭಿಸುವ ಮೊದಲೇ ಇಲ್ಲಿನ ಗುಳಿಗನಿಗೆ ಪೂಜೆ ಸಲ್ಲಿಸಿ ತಿಂಗಳ ಸಂಕ್ರಮಣದಂದು ಅಗೇಲು ನೀಡಲು ಗುತ್ತಿಗೆದಾರ ಕಂಪೆನಿಗೆ ಸಲಹೆ ನೀಡಲಾಗಿತ್ತು. ಆದ್ರೆ ದೈವದ ಬಗ್ಗೆ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರ ರಾಕೇಶ್ ಶೆಟ್ಟಿ ದೈವಕ್ಕೆ ಕೊಡಬೇಕಾದ ಸೇವೆ ಕೊಡಲಿಲ್ಲ ಒಂದೆಡೆಯಾದ್ರೆ ಕನಿಷ್ಟ ದೈವಕ್ಕೆ ಕೈಮುಗಿದು ಕೆಲಸ ಆರಂಭಿಸಿಲ್ಲ. ಇದೇ ಕಾರಣದಿಂದ ಇದೀಗ ಆತನಿಗೆ ಅನಾರೋಗ್ಯ ಕೂಡಾ ಕಾಡಿದೆ ಅನ್ನೋ ವಿಚಾರ ಕೂಡಾ ಚರ್ಚೆಯಲ್ಲಿದೆ. ಇನ್ನೂ ಆತನ ಬದಲಿಗೆ ಗುಳಿಗನ ಕೋಲಕ್ಕೆ ಬಂದ ಆತನ ಮ್ಯಾನೇಜರ್‌ಗೆ ದೈವ ಆತನನ್ನೇ ಕರೆದುಕೊಂಡು ಬಾ ಎಂದು ಹೇಳಿದೆಯಂತೆ. ಈ ಗುಳಿಗನ ಕೋಪದಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಕಾಮಗಾರಿ ಸ್ಥಳದಲ್ಲಿ ಪಿಲ್ಲರ್ ಎದ್ದಿರೋದು ಬಿಟ್ರೆ ಬಹುಅಂತಸ್ತಿನ ಕಾರು ಪಾರ್ಕಿಂಗ್ ಕಟ್ಟಡ ಮೇಳೆ ಏಳೆಲೆ ಇಲ್ಲ.

ಇದು ಥೇಟ್ ಕಾಂತಾರ ಸಿನಿಮಾ ಹೋಲುವ ದೈವ ಪವಾಡದ ಸ್ಟೋರಿಯಂತಿದ್ದು,’ಇದು ಅವನ ಮತ್ತು ನನ್ನ ಲೆಕ್ಕ’ ಅಂತ ದೈವ ಎಚ್ಚರಿಕೆ ಕೊಟ್ಟಿದೆ. ಕಾಂತಾರದ ‘ಕೋರ್ಟಿಗೆ ಹೋಗ್ತಿ’ ದೃಶ್ಯದ ಮಾದರಿಯಲ್ಲೇ ಗುಳಿಗ ದೈವ ಎಚ್ಚರಿಕೆ ಕೊಟ್ಟಿದೆ. ಇದು ಅವನ ಮತ್ತು ನನ್ನ ಲೆಕ್ಕ, ಅವನು ಬರದಿದ್ರೆ ಲೆಕ್ಕ ನಾನು ನೋಡ್ತೀನಿ’ ಅಂತ ಗುತ್ತಿಗೆದಾರನ ವಿರುದ್ದ ಮುನಿದಿದೆ ದೈವ. ಶರಾವು ಗುಳಿಗೆ ದೈವದ ಅಭಯ ಪಡೆಯದೇ ಕಾಮಗಾರಿ ಆರಂಭಿಸಿದ ಪರಿಣಾಮ ಕಾಮಗಾರಿಗೆ ವಿಘ್ನ ಎದುರಾಗಿದ್ದು, ಮೂರು ವರ್ಷ ಕಳೆದರೂ 10% ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ. ರಿಟೈನಿಂಗ್ ವಾಲ್ ಕುಸಿತ, ಮಣ್ಣು ಕುಸಿತ ಹಾಗೂ ಮಳೆ ನೀರು ತುಂಬಿಕೊಂಡು ಅವಘಡ ಎದುರಾಗಿದೆ.‌ ಇನ್ನು ಕಾಮಗಾರಿ ಅವೈಜ್ಞಾನಿಕವಾಗಿದ್ದು, ಭೂಕುಸಿತವಾಗುವ ಭೀತಿ ಇದ್ದ ಕಾರಣ ಸುತ್ತಮುತ್ತಲ ವ್ಯಾಪಾರಿಗಳು, ಕಟ್ಟಡದ ಮಾಲೀಕರಿಂದಲೂ ದೈವದ ಬಳಿ ದೂರಿಕೊಂಡಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ 70 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಇದಾಗಿದ್ದು, 6 ಅಂತಸ್ತಿನ 800 ವಾಹನ ಪಾರ್ಕ್ ಮಾಡುವ ಸಾಮಾರ್ಥ್ಯವಿರುವ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಇದಾಗಿದೆ. ಕೇವಲ ಪಿಲ್ಲರ್ ಕೆಲಸ ಆಗಿದ್ದು ಬಿಟ್ಟರೆ ಕಾಮಗಾರಿಗೆ ವೇಗ ಸಿಕ್ಕಿಲ್ಲ. ಕಾರ್ ಸ್ಟ್ರಕ್ಚರ್ ಎಂಬ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ವಹಿಸಲಾಗಿದೆ. ಕಾಮಗಾರಿ ಆರಂಭದಲ್ಲೇ ದೈವದ ಅಭಯ ಕೇಳದ ಕಾಮಗಾರಿ ಗುತ್ತಿಗೆದಾರನ ವಿರುದ್ದ ಮುನಿಸಿಕೊಂಡು ಎಚ್ಚರಿಕೆ ಕೊಟ್ಟಿದೆ ದೈವ. ಆದರೂ ಕಳೆದ ಮೂರು ವರ್ಷಗಳಲ್ಲಿ ದೈವ ಸಾನಿಧ್ಯಕ್ಕೆ ಬಾರದ ಗುತ್ತಿಗೆದಾರ ಬರೋವರೆಗೂ ಗಂಡಾಂತರದ ಭವಿಷ್ಯ ನುಡಿದಿತ್ತು.‌ ಇನ್ನು ಗುಳಿಗ ದೈವದ ಮುನಿಸಿನಿಂದ ಗುತ್ತಿಗೆದಾರನಿಗೆ ಅನಾರೋಗ್ಯ ಕಾಡಿದೆಯಂತೆ. ಈ ಬಗ್ಗೆ ಸ್ವತ: ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ಪೋಟಕ ಸತ್ಯ ಬಿಚ್ಚಿಟ್ಟಿದ್ದರು. ಗುತ್ತಿಗೆದಾರನ ಅನಾರೋಗ್ಯದ ಕಾರಣದಿಂದಲೇ ಸ್ಮಾರ್ಟ್ ಸಿಟಿ ಕಾಮಗಾರಿ ಸ್ಥಗಿತವಾಗಿದೆ ಅಂದಿದ್ದರು. ಸ್ಮಾರ್ಟ್ ಸಿಟಿ ವತಿಯಿಂದ ಪಿಪಿಪಿ ಆಧಾರದಲ್ಲಿ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ ಕೆಲಸ ನಡೀತಿದೆ. ಕಾರ್ ಇನ್ಫ್ರಾ ಎಂಬ ರಾಕೇಶ್ ಶೆಟ್ಟಿ ಪಾಲುದಾರಿಕೆಯ ಕಂಪೆನಿ ಅದು. ಈಗಾಗಲೇ ಕೆಲಸ ವಹಿಸಿ ಎರಡು ವರ್ಷವಾದರೂ ಕೆಲಸ ಆಗಿಲ್ಲ.‌ ಅವರು ಮೂರು ವರ್ಷದ ಅವಧಿಯಲ್ಲಿ ಕೆಲಸ ಮುಗಿಸಬೇಕಿತ್ತು. 70 ಕೋಟಿ ಪ್ರಾಜೆಕ್ಟ್ ಅದು, ಅವರು 30 ವರ್ಷದ ಒಪ್ಪಂದ ಮಾಡಿದ್ದಾರೆ. ಅಲ್ಲಿ ಪಾರ್ಕಿಂಗ್ ನಲ್ಲಿ ಬರೋ ಆದಾಯದಲ್ಲಿ ಪ್ರತೀ ವರ್ಷ 3 ಕೋಟಿ ಕಟ್ಟಬೇಕು. ಆದರೆ ಎರಡು ವರ್ಷದಲ್ಲಿ ಕೇವಲ ಹತ್ತು ಶೇ. ಮಾತ್ರ ಕೆಲಸ ಆಗಿದೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಸಭೆಯಲ್ಲೂ ಬಹಳ ಚರ್ಚೆ ಆಗಿದೆ. ಆ ಗುತ್ತಿಗೆದಾರನಿಗೆ ಟರ್ಮಿನೇಷನ್ ಪತ್ರ ಕೊಡಲು ಸ್ಮಾರ್ಟ್ ಸಿಟಿ ಚೇರ್ ಮೆನ್ ಸೂಚಿಸಿದ್ದಾರೆ. ಆದರೆ ಅವರನ್ನ ಮಾತನಾಡಿಸಲು ಯತ್ನಿಸಿದಾಗ ಅವರು ಅನಾರೋಗ್ಯಕ್ಕೀಡಾಗಿರೋದು ಗೊತ್ತಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದಾರೆ. ಹಾಗಾಗಿ ನಾವು ಅವರಿಗೆ ನೋಟೀಸ್ ಕೊಟ್ಟಿದ್ದೇವೆ, ಉತ್ತರ ಬಂದ ಬಳಿಕ ಕ್ರಮ. ಅನಾರೋಗ್ಯದ ಕಾರಣ ಅಲ್ಲಿ ಸಂಪೂರ್ಣ ಕೆಲಸ ಸ್ಥಗಿತ ಆಗಿದೆ. ಹೀಗಾಗಿ ಅವರ ಉಳಿದ ಪಾಲುದಾರರನ್ನ ಕರೆದು ಮಾತನಾಡಲು ಹೇಳಿದ್ದೇನೆ. ಆ ಬಳಿಕ ಹೊಸ ಟೆಂಡರ್ ಕರೆಯೋ ಬಗ್ಗೆ ಚಿಂತಿಸಲಾಗಿದೆ ಎಂದಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ನ್ಯಾಯಾಲಯದಿಂದ ತಪ್ಪಿಸಿಕೊಂಡಿದ್ದ ಮುಕ್ಕಚ್ಚೇರಿ ನಿವಾಸಿ 14 ವರ್ಷಗಳ ಬಳಿಕ  ಸೆರೆ

February 4, 2026

ಫೆ. 6ರಂದು ಬಹುನಿರೀಕ್ಷಿತ “ನಾನ್‌ವೆಜ್‌” ತುಳು ಸಿನಿಮಾ ಬಿಡುಗಡೆ

February 3, 2026

Comments are closed.

Advertise
ಸಂಪರ್ಕಿಸಿ

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025

ಕ್ಯಾನ್ಸರ್ ಹಾಗೂ ಸ್ತ್ರೀ ರೋಗ ಜಾಗ್ರತಿ ಅರಿವು

November 11, 2025
suddi

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

By UllalaVaniFebruary 5, 20260

ಉಳ್ಳಾಲ: 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಹೊಂದಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೈಕೋ ರೋಡ್‌ ಸುಭಾಷನಗರ ನಿವಾಸಿ ಅನ್ವರ್…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026

ಫೆ, 8.ಹಿದಾಯತ್ ನಗರ ಹುಸೈನಿಯಾ ದರ್ಸ್ ವಾರ್ಷಿಕ ಮಹ್ಳರತುಲ್ ಬದ್ರಿಯಾ

February 4, 2026

ಪಟ್ಲ ಫೌಂಡೇಶನ್ ಟ್ರಸ್ಟ್: ಕೇಂದ್ರೀಯ ಮಹಿಳಾ ಘಟಕದ ವಾರ್ಷಿಕೋತ್ಸವ

February 4, 2026
1 2 3 … 1,793 Next
Automatic YouTube Gallery

|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ

ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ಚಾಲನೆ

ಆರೋಗ್ಯಭರಿತ `ಕಲ್ಪರಸ' ಇಲ್ಲಿನ ಫೇಮಸ್ ಡ್ರಿಂಕ್
#ullalavani #news #ullala #kalparasa #udupinatural
|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ
Now Playing
|| UDUPI NATURAL KALPARASA|| ಇನ್ನು ಮುಂದೆ `ಉಡುಪಿ ನ್ಯಾಚುರಲ್' ಕಲ್ಪರಸ ಉಳ್ಳಾಲದಲ್ಲಿ ಲಭ್ಯ
ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ...
ಉಳ್ಳಾಲಕ್ಕೆ ಲಗ್ಗೆ ಇಟ್ಟಿದೆ `ಉಡುಪಿ ನ್ಯಾಚುರಲ್'; ನೂತನ ಶಾಪ್‌ಗೆ ದೀಪ ಬೆಳಗಿಸಿ ಚಾಲನೆ

ಆರೋಗ್ಯಭರಿತ `ಕಲ್ಪರಸ' ಇಲ್ಲಿನ ಫೇಮಸ್ ಡ್ರಿಂಕ್
#ullalavani #news #ullala #kalparasa #udupinatural
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
Now Playing
ಉಮಾಮಹೇಶ್ವರಿ ಕ್ಷೇತ್ರದಲ್ಲಿ ನಡೆದ ಸಭಾ ಕಾರ್ಯಕ್ರಮ
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ...
ಕಾಪಿಕಾಡ್ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಲಕಶೋತ್ಸವ;ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಚಾಲನೆ

ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಅಸ್ರಣ್ಣರಿಂದ ಆಶೀವರ್ಚನ
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d