Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
UllalavaniUllalavani
Home»All News»ಬೇಸಿಗೆ ಶಿಬಿರಗಳು ಮಕ್ಕಳ ಭವಿಷ್ಯಕ್ಕೆ ಪ್ರೇರಣೆಯ ಬೀಜ ಬಿತ್ತುತ್ತವೆ: ನಿವೃತ್ತ ಪ್ರಾಧ್ಯಾಪಕಿ ಉಷಾ
All News

ಬೇಸಿಗೆ ಶಿಬಿರಗಳು ಮಕ್ಕಳ ಭವಿಷ್ಯಕ್ಕೆ ಪ್ರೇರಣೆಯ ಬೀಜ ಬಿತ್ತುತ್ತವೆ: ನಿವೃತ್ತ ಪ್ರಾಧ್ಯಾಪಕಿ ಉಷಾ

UllalaVaniBy UllalaVaniApril 25, 2025No Comments2 Mins Read
Facebook Twitter Pinterest LinkedIn Tumblr Email WhatsApp
Follow Us
Facebook Instagram YouTube WhatsApp
Share
Facebook Twitter LinkedIn Pinterest Email WhatsApp
Share with your Friends
XFacebookLinkedInEmailMessengerPrintTelegramWhatsApp


ಮುನ್ನೂರು: ಬೇಸಿಗೆ ಶಿಬಿರಗಳು ಮಕ್ಕಳ ಭವಿಷ್ಯಕ್ಕೆ ಪ್ರೇರಣೆಯ ಬೀಜ ಬಿತ್ತುತ್ತವೆ. ಮಹಿಳಾ ಸಂಘಟನೆಯ ಕಾರ್ಯವೈಖರಿ ಪ್ರಶಂಸನೀಯವಾಗಿದೆ, ಶಿಬಿರಗಳ ಆಯೋಜನೆಯ ಮೂಲಕ ಅವರು ಮಕ್ಕಳಲ್ಲಿ ಸೃಜನಾತ್ಮಕತೆ, ಶಿಸ್ತು, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕಿ ಉಷಾ ಹೇಳಿದರು.
ಅವರು ಭ್ರಾಮರಿ ಮಹಿಳಾ ಮಂಡಲದ ಪ್ರಥಮ ವಾರ್ಷಿಕೋತ್ಸವ ಹಾಗೂ ಮೂರು ದಿನದ ಚಿಣ್ಣರ ಚಾವಡಿ 2.0 ಬೇಸಿಗೆ ಶಿಬಿರಕ್ಕೆ ಮುನ್ನೂರು ಸುಭಾಷನಗರದ ಸಮುದಾಯ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಶಿಬಿರಗಳು ತಾಂತ್ರಿಕ ಕೌಶಲ್ಯಗಳು, ಕಲೆ, ಆಟೋಟಾಪಗಳ ಮೂಲಕ ಮಕ್ಕಳನ್ನು ಸಮಗ್ರ ವ್ಯಕ್ತಿತ್ವ ವಿಕಸನದತ್ತ ದಾರಿ ಮಾಡಿಸುತ್ತವೆ. ಮಹಿಳಾ ಸಂಘಗಳ ಸಕ್ರಿಯ ಪಾಲ್ಗೊಳ್ಳುವಿಕೆ ಸಮಾಜದ ಬಾಳಿಗೆ ಹೊಸ ಬೆಳಕು ತರುತ್ತಿದೆ. ಇವರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಪುಷ್ಟಿಮಾಡುವ ಕೆಲಸದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಈ ಮೂಲಕ ಇವರು ಮುಂದಿನ ಪೀಳಿಗೆಗೆ ನುರಿತ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ವಕೀಲರಾದ ಮಹಮದ್ ಅಸ್ಗರ್ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಮತ್ತು ಮಹಿಳೆಯರ ಸಾಧನೆಯನ್ನು ಗುರುತಿಸುವುದು ಎರಡೂ ಸಮಾಜವನ್ನು ಬೆಳಗಿಸುವ ದೀಪ. ಮಕ್ಕಳು ನಾಡಿನ ಭವಿಷ್ಯ. ಅವರು ಆರೋಗ್ಯವಾಗಿ, ಸುಖವಾಗಿ, ಭಯವಿಲ್ಲದೆ ಬೆಳೆದಾಗ ಮಾತ್ರ ಸಮಾಜವೂ ನಂಬಿಕೆಯಿAದ ಬೆಳೆಯುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಆರೈಕೆ, ಭದ್ರತೆ ಮತ್ತು ಅಭಿವ್ಯಕ್ತಿಯ ಹಕ್ಕುಗಳನ್ನು ಕಲ್ಪಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರ್ಪಡಿಸಿ ಸಮಾಜಮುಖಿ ಸಾಧನೆ ನಡೆಸಿದ ಅಧ್ಯಾಪಕಿ ಗೀತಾ ಸಲ್ದಾನ್ಹ , ಬ್ಯಾಡ್ಮಿಂಟನ್ನಿನಲ್ಲಿ ಗಿನ್ನೆಸ್ ದಾಖಲೆ ನಡೆಸಿದ ಕಾವ್ಯ, ಮುನ್ನೂರು ಗ್ರಾಮ ಪಂಚಾಯತ್ ನಿಕಟ ಪೂರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾಜ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುನ್ನೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಎಂ, ಅಯ್ಯಪ್ಪ ಭಜನಾ ಮಂದಿರದ ಟ್ರಸ್ಟಿ ಭಾಗ್ಯರಾಜ್, ದುರ್ಗಾ ವಾಹಿನಿ ಮಹಿಳಾ ಮಂಡಲದ ಉಪಾಧ್ಯಕ್ಷರಾದ ಶಾರದಾ ನಾಯರ್, ಸುನೀತಾ ನಾಯಕ್, ಗೌರವಾಧ್ಯಕ್ಷರಾದ ಧನಲಕ್ಷ್ಮೀ ಗಟ್ಟಿ, ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರುತಿ ಮೀನಾಕ್ಷಿ ಉಪಸ್ಥಿತರಿದ್ದರು.
ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ವಂದಿಸಿದರು. ಕಾರ್ಯಕ್ರಮದಲ್ಲಿ 93 ಶಿಬಿರಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.

Share this:

  • Facebook
  • X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಇಸ್ಲಾಮ್ ಧರ್ಮವು ಒಂದು ಸಂಪೂರ್ಣ ಬದುಕು ಬಾಳುವ ಶಿಸ್ತುಬದ್ಧ ವ್ಯವಸ್ಥೆಯಾಗಿದೆ : ಡಾ. ಹುಸೈನ್ ಸಖಾಫಿ ಚುಳ್ಳಿಕೋಡು

May 8, 2025

ಭಯೋತ್ಪಾದನೆ ವಿರುದ್ಧದ ಹೋರಾಟ ಇನ್ನಷ್ಟು ಪರಿಣಾಮಕಾರಿಯಾಗಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್

May 8, 2025

ದರ್ಗಾಗಳು ಇಸ್ಲಾಮ್ ಧರ್ಮದ ಆಧ್ಯಾತ್ಮಿಕ ಪರಂಪರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಹೊಂದಿವೆ : ಅಹ್ಮದ್ ಸಖಾಫಿ ಕಾಶಿಪಟ್ನ

May 8, 2025

Comments are closed.

ಸಂಪರ್ಕಿಸಿ

ಕಣಚೂರು ಸಮೂಹ ಸಂಸ್ಥೆ ಮತ್ತು ಅಲೋಶಿಯಸ್ ಸಂಸ್ಥೆ ಯಿಂದ ಪರಸ್ಪ ಒಪ್ಪಂದಕ್ಕೆ ಸಹಿ

March 20, 2025

ವಿದ್ಯಾರ್ಥಿಗಳ ಜೀವನಶೈಲಿ ಸುಧಾರಣೆಗೆ ಸಂಸ್ಥೆಗಳು ನೀಡುವ ಸಮಯ ಅಮೂಲ್ಯಯುತವಾದುದು : ಕವಿತಾ ನಾಯ್ಕ

January 15, 2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದ.ಕ ಜಿಲ್ಲಾ ಸಮಿತಿ ನಿರ್ದೇಶಕರುಗಳ ಅವಿರೋಧ ಆಯ್ಕೆ

November 13, 2024

ಅಪಘಾತದ ಬೆನ್ನಲ್ಲೇ ಎಚ್ಚೆತ್ತುಕೊಂಡ ಇಲಾಖೆ ರಾತ್ರೋರಾತ್ರಿ ತೊಕ್ಕೊಟ್ಟು-ಕೊಣಾಜೆ ರಸ್ತೆ ದುರಸ್ತಿ ಆರಂಭ

November 9, 2024
All News

ಇಸ್ಲಾಮ್ ಧರ್ಮವು ಒಂದು ಸಂಪೂರ್ಣ ಬದುಕು ಬಾಳುವ ಶಿಸ್ತುಬದ್ಧ ವ್ಯವಸ್ಥೆಯಾಗಿದೆ : ಡಾ. ಹುಸೈನ್ ಸಖಾಫಿ ಚುಳ್ಳಿಕೋಡು

By UllalaVaniMay 8, 20250

ಉಳ್ಳಾಲ : ಇಸ್ಲಾಮ್ ಧರ್ಮವು ಒಂದು ಸಂಪೂರ್ಣ ಬದುಕು ಬಾಳುವ ಶಿಸ್ತುಬದ್ಧ ವ್ಯವಸ್ಥೆಯಾಗಿದ್ದು, ಅದರ ತತ್ವ ಹಾಗೂ ಮಾರ್ಗದರ್ಶನಗಳು ಮಾನವ…

Share this:

  • Facebook
  • X

Like this:

Like Loading...

ಭಯೋತ್ಪಾದನೆ ವಿರುದ್ಧದ ಹೋರಾಟ ಇನ್ನಷ್ಟು ಪರಿಣಾಮಕಾರಿಯಾಗಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್

May 8, 2025

ದರ್ಗಾಗಳು ಇಸ್ಲಾಮ್ ಧರ್ಮದ ಆಧ್ಯಾತ್ಮಿಕ ಪರಂಪರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಹೊಂದಿವೆ : ಅಹ್ಮದ್ ಸಖಾಫಿ ಕಾಶಿಪಟ್ನ

May 8, 2025

ಸವಾಲುಗಳನ್ನು ಧೈರ್ಯದಿಂದ ಮತ್ತು ಜವಾಬ್ದಾರಿಯಿಂದ ಎದುರಿಸುವ ಶಕ್ತಿ ಪ್ರತಿಯೊಬ್ಬನಲ್ಲಿಯೂ ಇರಬೇಕಾಗಿದೆ : ಅಬ್ದುಲ್ ರಶೀದ್ ಮದನಿ

May 8, 2025
1 2 3 … 1,482 Next
Automatic YouTube Gallery

ಜಿಲ್ಲಾಧ್ಯಕ್ಷರ ವಿರುದ್ಧ ವೈಯುಕ್ತಿಕ ತೇಜೋವಧೆ ಸರಿಯಲ್ಲ ಶಾಸಕರು ಖುದ್ದಾಗಿ ಸ್ಪಷ್ಟೀಕರಣ ನೀಡಲಿ - ಮೋಹನ್ ರಾಜ್ ಕೆ.ಆರ್

ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ವೈಯುಕ್ತಿಕ ತೇಜೋವಧೆ ಸರಿಯಲ್ಲ
ಶಾಸಕರು ಖುದ್ದಾಗಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಲಿ : ಮೋಹನ್‌ ರಾಜ್‌ ಕೆ.ಆರ್‌
#Ullalavani #News #BJP #Mohan_Raj_K_R
ಜಿಲ್ಲಾಧ್ಯಕ್ಷರ ವಿರುದ್ಧ ವೈಯುಕ್ತಿಕ ತೇಜೋವಧೆ ಸರಿಯಲ್ಲ ಶಾಸಕರು ಖುದ್ದಾಗಿ ಸ್ಪಷ್ಟೀಕರಣ ನೀಡಲಿ - ಮೋಹನ್ ರಾಜ್ ಕೆ.ಆರ್
Now Playing
ಜಿಲ್ಲಾಧ್ಯಕ್ಷರ ವಿರುದ್ಧ ವೈಯುಕ್ತಿಕ ತೇಜೋವಧೆ ಸರಿಯಲ್ಲ ಶಾಸಕರು ಖುದ್ದಾಗಿ ಸ್ಪಷ್ಟೀಕರಣ ನೀಡಲಿ - ಮೋಹನ್ ರಾಜ್ ಕೆ.ಆರ್
ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ವೈಯುಕ್ತಿಕ ತೇಜೋವಧೆ ಸರಿಯಲ್ಲ ಶಾಸಕರು ಖುದ್ದಾಗಿ ...
ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ವೈಯುಕ್ತಿಕ ತೇಜೋವಧೆ ಸರಿಯಲ್ಲ
ಶಾಸಕರು ಖುದ್ದಾಗಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಲಿ : ಮೋಹನ್‌ ರಾಜ್‌ ಕೆ.ಆರ್‌
#Ullalavani #News #BJP #Mohan_Raj_K_R
7 ವರ್ಷದ ಬಾಲಕಿಗೆ ಥೈರಾಯ್ಡ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ: ಯಶಸ್ವಿ ಗುಣಮುಖ – ಡಾ. ಜಲಾಲುದ್ದೀನ್ ಅಕ್ಬರ್
Now Playing
7 ವರ್ಷದ ಬಾಲಕಿಗೆ ಥೈರಾಯ್ಡ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆ: ಯಶಸ್ವಿ ಗುಣಮುಖ – ಡಾ. ಜಲಾಲುದ್ದೀನ್ ಅಕ್ಬರ್
ಝುಲೇಖಾ ಯೆನೆಪೋಯ ಗ್ರಂಥಿ ಮತ್ತು ಆಂಕೊಲಾಜಿ ಆಸ್ಪತ್ರೆಯಿಂದ 7 ವರ್ಷದ ಬಾಲಕಿಯ ...
ಝುಲೇಖಾ ಯೆನೆಪೋಯ ಗ್ರಂಥಿ ಮತ್ತು ಆಂಕೊಲಾಜಿ ಆಸ್ಪತ್ರೆಯಿಂದ
7 ವರ್ಷದ ಬಾಲಕಿಯ ಥೈರಾಯ್ಡ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಿಂದ ಗುಣಮುಖ : ಡಾ.ಜಲಾಲುದ್ದೀನ್ ಅಕ್ಬರ್
Follow us on Facebook
Follow us on Instagram
Ullalavani

ullalavani

Kadala magal🌊

https://www.youtube.com/embed/vx6FCcsowqsರಾಜ https://www.youtube.com/embed/vx6FCcsowqsರಾಜ್ಯದಾದ್ಯಂತ ಹಮ್ಮಿಕೊಂಡ 97 ದಿನಗಳ ನಂದಿ ರಥಯಾತ್ರೆಯ ಸಮಾರೋಪ ಸಮಾರಂಭ | 5-4-2025 ಶನಿವಾರ ಮಧ್ಯಾಹ್ನ 3.30ಕ್ಕೆಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ ಪುದು ಬಂಟ್ವಾಳ ...
https://www.youtube.com/embed/fyWrBXyvCi4ಚಿತ https://www.youtube.com/embed/fyWrBXyvCi4ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಆತ್ಮಶಕ್ತಿ ಬೆಳೆದು ಬಂದ ರೋಚಕ ಕಥೆ !ಮಹಿಳೆಯರ ಪ್ರಗತಿ ಜೊತೆ ಆತ್ಮಶಕ್ತಿ ಸಹಕಾರಿ ಸಂಘ: 32 ಶಾಖೆಗಳಲ್ಲಿ ...
https://www.youtube.com/embed/tTajgsl9tesರಸ್ https://www.youtube.com/embed/tTajgsl9tesರಸ್ತೆಯುದ್ದ ಆವರಿಸಿದ ಹೊಗೆ ಬಸ್ಸುಗಳೆರಡರ ನಡುವೆ ಮುಖಾಮುಖಿ ಡಿಕ್ಕಿರಸ್ತೆ ಯುದ್ದ ಆವರಿಸಿದ ಹೊಗೆ ಬಸ್ಸುಗಳೆರಡರ ನಡುವೆ ಮುಖಾಮುಖಿ ಡಿಕ್ಕಿ.
ಮಧೂರು ಬ್ರಹ್ಮ ಕಲಶೋತ ಮಧೂರು ಬ್ರಹ್ಮ ಕಲಶೋತ್ಸವದ ಭಾಗವಾಗಿ ಆರ್ಯ ಮರಾಠ ಸಮಾಜದ ದೇವರ ಮನೆಗಳ ಒಕ್ಕೂಟ ಹಾಗೂ ಆರ್ಯ ಯಾನೆ ಮರಾಠ ಸಮಾಜ ಸಂಘ(ರಿ )ಮಂಗಳೂರು -ಕಾಸರಗೋಡು ಮತ್ತು ಆರ್ಯ ಸಮುದಾಯ ಸಂಘ (ರಿ )ಕಾಸರಗೋಡು ವತಿಯಿಂದ ಹೊರೆ ಕಾಣಿಕೆ ಮೆರವಣಿಗೆ ಸಮರ್ಪಸಲಾಯಿತು. ವಿಶಿಷ್ಟ, ವಿಭಿನ್ನ ರೀತಿಯಲ್ಲಿ ಶಿಸ್ತು, ಸಂಯಮ, ಸಂಪ್ರದಾಯ, ಸಂಭ್ರಮ, ಸಡಗರದಿಂದ ಜರಗಿದ ಮೆರವಣಿಗೆಯು ನೆರೆದಿದ್ದ ಅಪಾರ ಜನಸ್ತೋಮದ ಮೆಚ್ಚುಗೆಗೆ ಪಾತ್ರವಾಯಿತು. ಸಾಂಪ್ರದಾಯಿಕ ಉಡುಗೆ ಧರಿಸಿದ ಮಹಿಳೆಯರ ತಂಡದಿಂದ ಲೆಂಜಿಮ್ ತಾಳ ದೊಂದಿಗೆ ಕೇರಳ ಶೈಲಿಯ ಚೆಂಡೆಗೆ ಮಹಾರಾಷ್ಟ್ರ ಶೈಲಿಯ ನೃತ್ಯ, ಕುಂಟಾರು ಮತ್ತು ಮಲ್ಲ ತಂಡಗಳು ನಡೆಸಿಕೊಟ್ಟ ಕುಣಿತ ಭಜನೆಯು ಎಲ್ಲರ ಗಮನ ಸೆಳೆಯಿತು....

https://ullalavani.com/as-part-of-the-madhuru-brahma-kalashotsava-a-hore-kanike-procession-is-organized-by-the-arya-maratha-samaja-devara-manegalu-federation/
https://www.youtube.com/embed/23CU9uet1Kwಸೌಹ https://www.youtube.com/embed/23CU9uet1Kwಸೌಹಾರ್ದತೆ ಬೆಳೆಸುವುದು ಈದ್ ಹಬ್ಬದ ಗುರಿಸ್ಪೀಕರ್ ಯು.ಟಿ ಖಾದರ್ಸೌಹಾರ್ದತೆ ಬೆಳೆಸುವುದು ಈದ್ ಹಬ್ಬದ ಗುರಿ ಸ್ಪೀಕರ್ ಯು.ಟಿ ಖಾದರ್ #ullalavani #news ...
https://www.youtube.com/embed/f_nIftKCHt8ಏಪ್ https://www.youtube.com/embed/f_nIftKCHt8ಏಪ್ರಿಲ್ 4 - 6ರ ವರೆಗೆ ಸಾಂತ್ಯಗುತ್ತುವಿನಲ್ಲಿ, ಕಿನ್ಯ ಬೆಳರಿಂಗೆ ಶ್ರೀ ಮಲರಾಯ, ಧೂಮಾವತಿ-ಬಂಟ ದೈವಗಳಿಗೆ `ಧರ್ಮನೇಮ'ಏಪ್ರಿಲ್ 4 - 6ರ ವರೆಗೆ ಸಾಂತ್ಯಗುತ್ತುವಿನಲ್ಲಿ, ಕಿನ್ಯ ಬೆಳರಿಂಗೆ ಶ್ರೀ ಮಲರಾಯ, ...
https://www.youtube.com/embed/qQBj2NOb4P4ಕೊರ https://www.youtube.com/embed/qQBj2NOb4P4ಕೊರಗಜ್ಜನ ಆರಾಧನೆ ಕತೆಯುಳ್ಳ ಮತ್ತೊಂದು ಚಿತ್ರ ಕೋರಾಎ.18 ಕ್ಕೆ ದೇಶಾದ್ಯಂತ ತೆರೆಕೊರಗಜ್ಜನ ಆರಾಧನೆ ಕತೆಯುಳ್ಳ ಮತ್ತೊಂದು ಚಿತ್ರ ಕೋರಾ ಎ.18 ಕ್ಕೆ ದೇಶಾದ್ಯಂತ ...
https://www.youtube.com/embed/l6JVjW4edFwರಾಷ https://www.youtube.com/embed/l6JVjW4edFwರಾಷ್ಟಿಯ ಹೆದ್ದಾರಿ 66 ತೊಕ್ಕೊಟ್ಟು ಟು ಕಲ್ಲಾಪು ಬ್ಲಾಕ್ಸರತಿ ಸಾಲಿನಲ್ಲಿ ನಿಂತಿರುವ ವಾಹನಗಳು, ವಾಹನ ಸವಾರರ ಪರದಾಟರಾ.ಹೆ.೬೬ ರಲ್ಲಿ ತೊಕ್ಕೊಟ್ಟುವಿನಿಂದ ನೇತ್ರಾವತಿ ಸೇತುವೆ ವರೆಗೆ ವಾಹನಗಳ ...
https://www.youtube.com/embed/1PUSjUhk21wಲಕೋ https://www.youtube.com/embed/1PUSjUhk21wಲಕೋಟೆಯಲ್ಲಿ ಸಂಸ್ಕರಿಸಿದ ಮಾನವ ಅಸ್ಥಿಗಳು ಪತ್ತೆ.ನಡುರಾತ್ರಿಯಲ್ಲಿ ಬೇಸ್ತು ಬಿದ್ದ ಕುಂಪಲ ಪ್ರದೇಶವಾಸಿಗಳು.ಲಕೋಟೆಯಲ್ಲಿ ಸಂಸ್ಕರಿಸಿದ ಮಾನವ ಅಸ್ಥಿಗಳು ಪತ್ತೆ.ನಡುರಾತ್ರಿಯಲ್ಲಿ ಬೇಸ್ತು ...
ಕೊಣಾಜೆ: ನಂಬಿಕೆ ಎಂಬುವುದೇ ನಮಗೆಲ್ಲರಿಗೂ ಶಕ್ತಿ. ನಂಬಿಕೆ ಇದ್ದರೆ ಯಾವುದೇ ಪುಣ್ಯ ಕಾರ್ಯ ಯಶಸ್ವಿಯಾಗಿ ನೆರವೇರಬಲ್ಲುದು. ನಮ್ಮನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದರೆ ಜೀವನದ ಸಾರ್ಥಕತೆಯನ್ನು ಪಡೆಯಲು ಸಾಧ್ಯ. ಊರವರು, ಐದು ಗ್ರಾಮದವರು ಸೇರಿಕೊಂಡು ಶ್ರೀ ಉಳ್ಳಾಲ್ತಿ ಕ್ಷೇತ್ರದ ಅಭಿವೃದ್ಧಿಗಾಗಿ ನಿಸ್ವಾರ್ಥದಿಂದ ದುಡಿದಿದ್ದಾರೆ. ಎಲ್ಲರಿಗೂ ಉಳ್ಳಾಲ್ತಿಯ ಅನುಗ್ರಹ ಖಂಡಿತಾ ಇರುತ್ತದೆ ಎಂದು ಶ್ರೀ ಕ್ಷೇತ್ರ ಕಣಿಯೂರಿನ ಶ್ರೀ ಮಹಾಬಲ ಸ್ವಾಮೀಜಿ ಅವರು ಹೇಳಿದರು. ಅವರು ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು....

https://ullalavani.com/kootattaje-brahmakalashotsava-religious-gathering/
https://www.youtube.com/embed/_DVfny4n4jUಉಳ್ https://www.youtube.com/embed/_DVfny4n4jUಉಳ್ಳಾಲವಾಣಿ ಧರ್ಮಚಾವಡಿ Part - 2 | ಶ್ರೀ ಗೋಪಾಲಕೃಷ್ಣ ತಂತ್ರಿವರ್ಯರು ಮುನ್ನೂರು ಮನೆ | Ullalavaniಉಳ್ಳಾಲವಾಣಿ ಧರ್ಮಚಾವಡಿ Part - 2 | ಶ್ರೀ ಗೋಪಾಲಕೃಷ್ಣ ತಂತ್ರಿವರ್ಯರು ಮುನ್ನೂರು ...
ಉಳ್ಳಾಲ: ಮಾಡೂರಿನ ಜನತೆಯ ಬಹುಬೇಡಿಕೆಯ ಸರಕಾರಿ ಶಾಲೆಯನ್ನು ಆಂಗ್ಲಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸುವ ಯೋಜನೆಗೆ ಶಾಸಕರು ಹಾಗೂ ವಿಧಾನಸಭಾ ಅಧ್ಯಕ್ಷರು ಯು.ಟಿ.ಖಾದರ್ ಗ್ರೀನ್ ಸಿಗ್ನಲ್ ನೀಡಿದ್ದು, ಸರಕಾರದಿಂದ ಅನುದಾನ ಬರುವವರೆಗೆ ತನ್ನ ವೇತನದಿಂದ ರೂ.1 ಲಕ್ಷ ವನ್ನು ಆಂಗ್ಲಮಾಧ್ಯಮ ಶಾಲೆಯ ಕಾರ‍್ಯಾಚರಣೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಸರಕಾರಿ ಶಾಲೆ ಉನ್ನತೀಕರಣದ ಪ್ರಸ್ತಾವ ಕೇಳಿಬಂದ ಹಿನ್ನೆಲೆಯಲ್ಲಿ ಮಾಡೂರು ಶಾಲೆಯಲ್ಲಿ , ಅಭಿವೃದ್ಧಿ ಸಮಿತಿಯೊಂದಿಗೆ ಎರಡನೇ ಬಾರಿ ಸಭೆ ನಡೆಸಿದ ಅವರು ಶಿಕ್ಷಣಾಧಿಕಾರಿಗಳಿಗೆ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸುವಂತೆ ಸೂಚಿಸಿದ್ದಾರೆ. ಪೂರಕ ದಾಖಲೆಗಳೆಲ್ಲವನ್ನು ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಸಿದ್ಧಪಡಿಸುವುದಾಗಿ ತಿಳಿಸಿದ ಅವರು...

https://ullalavani.com/---/
https://www.youtube.com/embed/GdCXkPq_eWYಉಳ್ https://www.youtube.com/embed/GdCXkPq_eWYಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಭರಣಿ ಮಹೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಭರಣಿ ಮಹೋತ್ಸವದ ಪ್ರಯುಕ್ತ ...
ವರ್ಕಾಡಿಯ ಕೂಟತ್ತಜೆ ವರ್ಕಾಡಿಯ ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ, ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಸಿರು ಹೊರೆಕಾಣಿಕೆ ಮೆರವಣಿಗೆ ಮುಡಿಪಿನ್ನಾರ್ ದೈವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ನಂದಾರಪದವು ಮಾರ್ಗವಾಗಿ ಕ್ಷೇತ್ರಕ್ಕೆ ತಲುಪಿತು.

https://ullalavani.com/the-green-horekanike-procession-of-the-reinstallation-and-brahmakalashotsava-of-shri-ullalthi-ammas-daivasthana-at-varkadiya-kootattaje/
Full video at youtube : https://youtu.be/vIVC15e0N Full video at youtube : https://youtu.be/vIVC15e0NxY?si=IPXwGk1IhaDXOW8a

#ullalavani #thokkottu #daivaradane
ಉಳ್ಳಾಲ: ಇಲ್ಲಿನ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಭರಣಿ ಮಹೋತ್ಸವದ ಪ್ರಯುಕ್ತ ಹಸಿರುಹೊರೆಕಾಣಿಕೆ ಶೋಭಾಯಾತ್ರೆ ರ್ಶಈ ಜೈ ವೀರ ಮಾರುತಿ ವ್ಯಾಯಾಮ ಶಾಲೆ ತೊಕ್ಕೊಟ್ಟು ಇಲ್ಲಿಂದ ಶ್ರೀ ಕ್ಷೇತ್ರಕ್ಕೆ ವಿಜೃಂಭಣೆಯಿAದ ಜರಗಿತು.ಕಲ್ಲಡ್ಕ ಗೊಂಬೆ, ಚೆಂಡೆ ಕುಣಿತ, ಬ್ಯಾಂಡ್ , ಹುಲಿವೇಷ, ಕುಣಿತ ಭಜನೆ ಜೊತೆಗೆ ಹೊರೆಕಾಣಿಕೆಗಳು ಹಲವು ವಾಹನಗಳಲ್ಲಿ ಸಾಗಿಬಂತು. ಪರಿಸರ ಪ್ರೇಮಿ ಮಾಧವ್ ಉಳ್ಳಾಲ್ ಇವರು ರುದ್ರಾಕ್ಷ ಗಿಡವನ್ನು ಹೊರೆಕಾಣಿಕೆಯಾಗಿ ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸಿರುವುದು ಹೊರೆಕಾಣಿಕೆಯ ವಿಶೇಷವಾಗಿತ್ತು.ಹಸಿರುವಾಣಿ ಹೊರೆಕಾಣಿಕೆಗೆ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಚಾಲನೆ ನೀಡಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಭಟ್ನಗರ, ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಅಧ್ಯಕ್ಷರಾದ ಚಿದಾನಂದ ಗುರಿಕಾರ ನಂದ್ಯ, ಯಶವಂತ ಉಚ್ಚಿಲ್, ಜಗದೀಶ್ ಉಳ್ಳಾಲ್ ಬೈಲ್, ತೀಯ ಸಮಾಜದ ಮುಖಂಡ ಚಂದ್ರಹಾಸ್ ಉಳ್ಳಾಲ್ , ಮೊಕ್ತೇಸರರುಗಳಾದ ಸದಾಶಿವ ಉಳ್ಳಾಲ್, ವಿಶ್ವನಾಥ ಉಚ್ಚಿಲ್, ರಾಘವ ಕೈಕಂಬ, ಉಮೇಶ್ ಕೊಣಾಜೆ ಉಪಾಧ್ಯಕ್ಷರುಗಳಾದ ದಿನೇಶ್ ಕುಂಪಲ, ದಾಮೋದರ ಪಡ್ಪು, ನಾಗಪ್ಪ ಅಡ್ಯಾರ್, ಜನಾರ್ದನ ಕಾಯರ್ ಪಳಿಕೆ, ಗೆಜ್ಜೆಗಿರಿಕ್ಷೇತ್ರದ ಚಂದ್ರಶೇಖರ್ ಉಚ್ಚಿಲ್ , ಮುರಳೀಧರ್ ಸಾಲ್ಯಾನ್, ಮಹಿಳಾ ವೇದಿಕೆ ಪ್ರಧಾನ ಸಂಚಾಲಕಿ ಮಾಧವಿ ಉಳ್ಳಾಲ್, ಯುವ ವೇದಿಕೆ ಪ್ರಧಾನ ಸಂಚಾಲಕ ಕೇಶವ ತೊಕ್ಕೊಟ್ಟು ಮುಂತಾದವರು ಉಪಸ್ಥಿತರಿದ್ದರು.

https://ullalavani.com/a-grand-green-horekanike-procession-on-the-occasion-of-ullal-bharani-mahotsava/
ಮಾಡೂರು: ಇಲ್ಲಿನ ಕೊಂಡಾಣ ರಸ್ತೆಯಲ್ಲಿರುವ ಸಾಯಿಧಾಮದ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ಮಾಡೂರು ಸಾಯಿಧಾಮ ದಶಮಾನೋತ್ಸವ ಅಂಗವಾಗಿ 108 ಕಾಯಿ ಗಣಯಾಗ, ಮಹಾಚಂಡಿಕಾಯಾಗ, ನವಗೃಹ ಮೃತ್ಯುಂಜಯ ಹೋಮ, ರಾಮನವಮಿ ಉತ್ಸವ ಹಾಗೂ ಶ್ರೀ ರಕ್ತೇಶ್ವರೀ ಹಾಗೂ ಗುಳಿಗ ದೈವದ ನೇಮ ಎ.2 ರಿಂದ ಎ.8 ರವರೆಗೆ ಜರಗಲಿದೆ.ಕಂಕನಾಡಿ ಗರೋಡಿ ಕ್ಷೇತ್ರದ ವೇದಮೂರ್ತಿ ಗಂಗಾಧರ ಶಾಂತಿಯವರ ಪೌರೋಹಿತ್ಯದಲ್ಲಿ ಏಳು ದಿನಗಳ ಕಾಲ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.ಎ.2 ರಂದು ಗಣಪಪತಿ ಹೋಮದಿಂದ ಆರಂಭಗೊಂಡು ಸೂರ್ಯೋಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡದಿಂದ ಭಜನಾ ಸಂಕೀರ್ತನೆ ಮಧ್ಯಾಹ್ನ ಮಹಾಪೂಜೆ, ಸಂಜೆ ಕುಣಿತ ಭಜನೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಾನ ಸಿಂಚನ ಭಕ್ತಿ ಸಂಗೀತ ರಸಮಂಜರಿ ಅಕ್ಷಯ ಕಾವಳ್ಕಟ್ಟೆ ಸಾರಥ್ಯದ ಸ್ವರಾಮೃತ ಮ್ಯೂಸಿಕಲ್ ತಂಡದಿಂದ ನಡೆಯಲಿದೆ....

https://ullalavani.com/108-108-kaayi-ganayaga-maha-chandikayaga-navagraha-mrityunjaya-homa-rama-navami-utsava-2/
ಕರ್ನಾಟಕ ರಾಜ್ಯ ಗೇರು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿಯವರ ಹಿರಿಯ ಸಹೋದರ, ಕೈರಂಗಳ ಗ್ರಾಮದ ಧರ್ಮಕ್ಕಿ ನಿವಾಸಿ ಸತೀಶ್ ಗಟ್ಟಿ (53) ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.ಕಾಂಗ್ರೆಸ್ ಮುಖಂಡ ದಿ. ಸಂಜೀವ ಗಟ್ಟಿ ಹಾಗೂ ಶಾರದಾ ಗಟ್ಟಿ ದಂಪತಿ ಪುತ್ರರಾಗಿದ್ದು ಬೆಂಗಳೂರಿನಲ್ಲಿ ಯುವ ಉದ್ಯಮಿ ಆಗಿದ್ದ ಸತೀಶ್ ಗಟ್ಟಿ ಕೆಲವು ವರ್ಷ ಬೆಂಗಳೂರಿನಲ್ಲಿದ್ದು ಉದ್ಯಮ ನಡೆದುತ್ತಿದ್ದರು. ಸಮಾಜ ಸೇವೆಯ ಮೂಲಕ ಜನಾನುರಾಗಿಯಾಗಿದ್ದು ಯಕ್ಷಗಾನ, ನಾಟಕ ಹಾಗೂ ಕ್ರೀಡಾಕೂಟಗಳನ್ನು ಅದ್ದೂರಿಯಾಗಿ ಸಂಘಟಿಸುವ ಮೂಲಕ ಕೈರಂಗಳದ ಹೆಸರಿಗೆ ಇನ್ನಷ್ಟು ಮೆರಗು ತಂದಿದ್ದರು. ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ವಿಧಾನ ಸಭೆಯ ಸ್ಪೀಕರ್ ಯು. ಟಿ. ಖಾದರ್, ಪ್ರಶಾಂತ್ ಕಾಜವ, ರಮೇಶ್ ಶೆಟ್ಟಿ ಬೋಳಿಯಾರ್, ಚಂದ್ರಹಾಸ್ ಕರ್ಕೇರ, ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

https://ullalavani.com/108-108-kaayi-ganayaga-maha-chandikayaga-navagraha-mrityunjaya-homa-rama-navami-utsava/
ಸಾರ್ವಜನಿಕ ಅಗೆಲು ಸೇ ಸಾರ್ವಜನಿಕ ಅಗೆಲು ಸೇವೆ ಇಲ್ಲಿ ನೀಡಬಹುದುಉಳ್ಳಾಲ : ಕೋಟೆಕಾರು ನಡಾರು ಸಾಯಿನಗರದ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಶ್ರೀ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ 7ನೇ ವಾರ್ಷಿಕ ಕೋಲ ಎ.19 ಶನಿವಾರ ಮತ್ತು ಎ.20 ಭಾನುವಾರ ಅಗೆಲು ಸೇವೆ ನಡೆಯಲಿದೆ.ಸಾರ್ವಜನಿಕ ಅಗೆಲು ಸೇವೆಯನ್ನು ನೀಡಬಹುದಾಗಿದ್ದು, ಅಗೆಲು ಸೇವೆ ನೀಡ ಬಯಸುವವರು 7019201723, 7337749696, 9481136260

https://ullalavani.com/nadaru-sainagar-7th-annual-kola/
ಉಳ್ಳಾಲ: ಬಗಂಬಿಲದ ಹಿಂದೂನಗರದ ಹಿಂದೂ ಯುವ ಸೇನೆಯ ಶ್ರೀ ಮಹಾದೇವಿ ಶಾಖೆಯ 15 ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮಾ.29 ರಂದು ಬಗಂಬಿಲ ಮೈದಾನದಲ್ಲಿ ಜರಗಲಿದೆ.ರಾತ್ರಿ 8.30ಕ್ಕೆ ಶ್ರೀ ಕ್ಷೇತ್ರ ಒಡಿಯೂರು, ಶ್ರೀ ಗುರುದೇವ ದತ್ತ ಸಂಸ್ಥಾಪನಂ ಇಲ್ಲಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಸಂಜೆ 7.30ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಹಾಗೂ ಸ್ತಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ಊರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10.00 ಕ್ಕೆ ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಪೊರಿಪುದಪ್ಪೆ ಜಲದುರ್ಗೆ ಸಿನಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://ullalavani.com/the-15th-annual-public-shri-shanishchara-pooja-by-hindu-yuva-sena-baggambila-shri-mahadevi-shaakhe/
Load More Follow on Instagram
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

Touch with us
ಸಂಪರ್ಕಿಸಿ
Facebook X (Twitter) Instagram Pinterest
© 2025 ullalavani.com. Designed by wpwebsmartz.com.

Type above and press Enter to search. Press Esc to cancel.

%d