
ಉಳ್ಳಾಲ: ಮಾನವನ ಬದುಕಿನಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಇಂತಹ ಸವಾಲುಗಳನ್ನು ಧೈರ್ಯದಿಂದ ಮತ್ತು ಜವಾಬ್ದಾರಿಯಿಂದ ಎದುರಿಸುವ ಶಕ್ತಿ ಪ್ರತಿಯೊಬ್ಬನಲ್ಲಿಯೂ ಇರಬೇಕಾಗಿದೆ. ಈ ಶಕ್ತಿಯ ಮೂಲ ಧರ್ಮ, ಆರಾಧನೆ, ಕುಟುಂಬ ಮತ್ತು ಸ್ನೇಹ ಸಂಬಂಧಗಳ ಬಲವಾಗಿದೆ. ಮಾನವೀಯತೆಯ ಮೌಲ್ಯಗಳನ್ನು ಪ್ರಥಮ ಸ್ಥಾನಕ್ಕೆ ತರಬೇಕು ಎಂದು ಅಬ್ದುಲ್ ರಶೀದ್ ಮದನಿ ಹೇಳಿದರು.
ಅವರು ಉಳ್ಳಾಲ ದರ್ಗಾದ 22 ಪಂಚವಾರ್ಷಿಕ ಉರೂಸ್ ಪ್ರಯುಕ್ತ ಬುಧವಾರ ದರ್ಗಾ ವಠಾರದಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಇಸ್ಲಾಮಿನ ತತ್ವಾದರ್ಶಗಳು—ನೀತಿ, ನ್ಯಾಯ, ಸಹಾನುಭೂತಿ ಮತ್ತು ಸಹಬಾಳ್ವೆ—ಜೀವನದ ದಿಕ್ಕು ನಿರ್ಧಾರ ಮಾಡುವ ಪ್ರಮುಖ ಅಂಶಗಳಾಗಿವೆ. ಇವುಗಳ ಪಾಲನೆಯ ಮೂಲಕ ನಾವು ಜೀವನವನ್ನು ಶ್ರೇಯಸ್ಕರಗೊಳಿಸಬಹುದು. ಪರಸ್ಪರ ದ್ವೇಷ, ವೈರ ಮತ್ತು ಅಸಹಿಷ್ಣುತೆ ಎಂಬುದನ್ನು ದೂರವಿಟ್ಟು ಸಹಜತೆ, ಶಾಂತಿ ಮತ್ತು ಸಹೋದರತ್ವದ ಬದುಕನ್ನು ಆಶ್ರಯಿಸಬೇಕಾಗಿದೆ.
ಜೀವನದ ಎಲ್ಲಾ ಹಂತಗಳಲ್ಲೂ ಇಸ್ಲಾಮಿನ ಚೌಕಟ್ಟನ್ನು ಮೀರದೆ, ಅದರ ಮೌಲ್ಯಾಧಾರಿತ ಮಾರ್ಗದರ್ಶನದಲ್ಲಿ ನಡೆಯುವುದು ಅತ್ಯಂತ ಅಗತ್ಯ. ಈ ಮೂಲಕ ನಾವೆಲ್ಲರೂ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ನೈತಿಕತೆಯ ಉದಾತ್ತ ಮಾದರಿಯಾಗಿ ಬೆಳೆದುಬರಬಹುದು ಎಂದರು.
ಸಿ . ಮುಹಮ್ಮದ್ ಫೈಝಿ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಉತ್ತಮ ಕಾರ್ಯ ಆಯೋಜಿಸಬೇಕು. ಮಾನವ ಅಭಿವೃದ್ಧಿಗೆ ಪೂರಕವಾದ ಕಾರ್ಯ ಚಟುವಟಿಕೆ ನಾವು ಮಾಡಬೇಕು. ಅಭಿವೃದ್ಧಿ ನಮ್ಮ ಗುರಿ ಆಗಬೇಕು ಎಂದು ಕರೆ ನೀಡಿದರು. ಬಶೀರ್ ಮದನಿ ನೀಲಗಿರಿ ಧಾರ್ಮಿಕ ಪ್ರವಚನ ನೀಡಿದರು.
ಅಬ್ದುಲ್ ಮಜೀದ್ ಫೈಝಿ ಪೊಯ್ಯತ್ತ ಬೈಲ್ ದುಆ ನೆರವೇರಿಸಿದರು. ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್ಊದ್ ತಂಙಳ್, ಕುಂಪಲ ಜುಮಾ ಮಸೀದಿ ಅಧ್ಯಕ್ಷ ಇಕ್ಬಾಲ್, ಖತೀಬ್ ಅಬ್ದುಲ್ ರಹ್ಮಾನ್ ಅಹ್ಸನಿ, ಚೊಂಬು ಗುಡ್ಡೆ ಜುಮಾ ಮಸೀದಿ ಅಧ್ಯಕ್ಷ ಪಿ.ಸಿ. ಇಮ್ತಿಯಾಝ್ ಖತೀಬ್ ಮುದ್ರಿಕ ಮದನಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಝೈನುದ್ದೀನ್ ಮೇಲಂಗಡಿ, ಅಬ್ದುಲ್ ಖಾದರ್ ಕೋಡಿ, ಇಮ್ತಿಯಾಝ್, ಮೊಯ್ದಿನ್ ಪಟ್ಲ, ಅಬೂಬಕ್ಕರ್ ಹೈದರಲಿ ನಗರ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್ , ಹಝ್ರತ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಸೂಲ್ ಖಾನ್, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಇಮ್ತಿಯಾಝ್ ಪಿ.ಬಿ.,ದೈಹಿಕ ಶಿಕ್ಷಕ ಖಾಲೀದ್, ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.